Skip to main content

Posts

Showing posts from March, 2021

ಇಡ್ಲಿ ಆರೋಗ್ಯಕರ ಆಹಾರ,ರುಚಿಕರ ಆಹಾರ ಮತು ಸುಲಭ ತಯಾರಿ.

#ಇಡ್ಲಿ_ನಿನ್ನ_ಮಹಿಮೆ_ಏನು? #ಇವತ್ತು_ವಿಶ್ವ_ಇಡ್ಲಿ_ದಿನ_ಅಂತೆ. ರೆಸ್ಟೋರೆಂಟ್ ಮಾಲಿಕರ ಮತ್ತು ಇಡ್ಲಿ ಪ್ರಿಯರ ಗಮನಕ್ಕಾಗಿ    ಬೆಳಿಗ್ಗೆ ಮನೇನಲ್ಲಿ ಒಂದು ರವೆ ಇಡ್ಲಿ ಮತ್ತು ಸಾದಾ ಇಡ್ಲಿ ಜೊತೆಗೆ ಎಮ್ಮೆ ಹಾಲಿನಿಂದ ಮಾಡಿದ ಬೆಣ್ಣೆ ಮತ್ತು ತೊಗರಿ ಬೇಳೆ ಹುರಿದು ಮಾಡಿದ ಚಟ್ನಿ ತಿಂದು ಚಹಾ ಕುಡಿದು ಪತ್ರಿಕೆ ಓದಲು ಕುಳಿತಾಗ ಗೊತ್ತಾಯಿತು ಇವತ್ತು ವಿಶ್ವ ಇಡ್ಲಿ ದಿನ ಅಂತ.   ಆದರೆ ವಿಶ್ವ ಸಂಸ್ಥೆ,WHO ವಿಶ್ವದ ಜನ ಜಾಗೃತೆಗಾಗಿ ಮಾಡುವ ವಿಶ್ವ ದಿನ ಇದಲ್ಲ ಇದು 2015 ರಿಂದ ಚೆನೈನಲ್ಲಿ ಪ್ರಾರಂಭವಾದ ವಿಶ್ವ ಇಡ್ಲಿ ದಿನ ಬಾರತದಾದ್ಯಂತ ಪ್ರಸಿದ್ಧಿ ಪಡೆದಿದೆ.   ಚೆನೈನ ಮಲ್ಲಿಪು ಇಡ್ಲಿ ಪ್ರಖ್ಯಾತವಾದ ಅನೇಕ ಕಡೆ ನಡೆಯುವ ರೆಸ್ಟೋರಾಂಟ್ ಇದರ ಮಾಲಿಕ ಅನ್ನಿವನ್ನನ್ 2015ರ  ಮಾಚ೯ 30 ರಂದು 1328 ವಿದದ ಇಡ್ಲಿ ಮತ್ತು 44 ಕೆಜಿಯ ಬೃಹತ್ ಇಡ್ಲಿ ತಯಾರಿಸಿ ಪ್ರಸಿದ್ಧ ಜನರಿಂದ ಇಡ್ಲಿ ಕಟ್ ಮಾಡುವ ಮೂಲಕ ಉದ್ಘಾಟಿಸಿದ್ದು ಈಗ ಭಾರತದಲ್ಲಿ ವಿಶ್ವ ಇಡ್ಲಿ ದಿನ ಅಂತ ಆಚರಣೆಗೆ ಕಾರಣ ಆಗಿದೆ.    ದಕ್ಷಿಣ ಬಾರತದಲ್ಲಿ ಅದರಲ್ಲೂ ತಮಿಳುನಾಡು ಮತ್ತು ಕನಾ೯ಟಕದಲಿ ಇಡ್ಲಿ ಯಾವತ್ತೂ ಪೇಮಸ್ಸೇ ಅದೇ ಗೋವಾ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇಡ್ಲಿ ಕ್ರಿಕೆಟ್ ಬಾಲ್ ನಂತೆ ಗಡುಸಾಗಿರುತ್ತದೆ.   ಇಡ್ಲಿ ಯಾವ ರಾಜ್ಯದೆಂದರೆ ಕನಾ೯ಟಕ ಮತ್ತು ತಮಿಳುನಾಡು ಪರಸ್ಪರ ತಮ್ಮದೆಂದೇ ವಾದಿಸಬಹುದಾದರೂ ಇಡ್ಲಿ ಮೂಲ ಇಂಡೋನೇಷಿಯ ಅಲ್ಲಿಂದ ಕ್ರಿ.

ಆದ್ಯಾತ್ಮದ ನ೦ಟಿರುವ ವಾದಿರಾಜ ತೀಥ೯ರಿಗೆ ಶ್ರೀ ಕೃಷ್ಣ ದಯಪಾಲಿಸಿದ ಮಟ್ಟು ಗುಳ್ಳದ ಬೀಜಗಳು.

# ಉಡುಪಿಯ ಮಟ್ಟು ಗುಳ್ಳದ ಮೂಲ ಬಲ್ಲಿರಾ#    ಉಡುಪಿ ಗುಳ್ಳ ಎಂದರೆ ದಂಡನೆಯ ಬದನೆಕಾಯಿ ಅಂತ ಎಲ್ಲರಿಗೂ ಗೊತ್ತು ಆದರೆ ಇಲ್ಲಿನ ಮಟ್ಟು ಗುಳ್ಳಕ್ಕೆ ಬೇರೆಯದೇ ಇತಿಹಾಸ, ಆಧ್ಯಾತ್ಮದ ನಂಟು, ರುಚಿ ಇದೆ.   ಹಾಗಾಗಿಯೆ ಇದಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಇದೆ.   ಉಡುಪಿಯಲ್ಲಿ ಉಡುಪಿ ಗುಳ್ಳ ಅಂತ ಬಕೂ೯ರ್, ಕುಂದಾಪುರದಲ್ಲಿ ಬೆಳೆದ ಗುಳ್ಳಗಳ ಮಾರಾಟ ಜಾಸ್ತಿ ಆದರೆ ಮಟ್ಟು ಗುಳ್ಳ ಮಾತ್ರ ಎಲ್ಲಾ ಕಡೆ ಸಿಗುವುದಿಲ್ಲ.    ಉಡುಪಿಯಿ೦ದ ಮ೦ಗಳೂರು ರಾಷ್ಟ ಹೆದ್ದಾರಿಯಲ್ಲಿ ಕಟಪಾಡಿಯಿ೦ದ ಬಲಕ್ಕೆ ತಿರುಗಿದರೆ ಮಟ್ಟು ಎಂಬ ಹಳ್ಳಿ ಇದೆ ಇಲ್ಲಿ ಉದ್ಯಾವರ ನದಿ ಮತ್ತು ಸ್ವಣ೯ ನದಿ ಹರಿಯುವ ಪ್ರದೇಶದ ಮದ್ಯದ ಸುಮಾರು 500 ಎಕರೆ ಮರಳು ಮಿಶ್ರ ಮಣ್ಣಿನ ಭೂಮಿ ಈ ಗುಳ್ಳ ಬೆಳೆಯುವ ಪ್ರದೇಶ.    ಪ್ರತಿ ಹೆಕ್ಟರ್ ಗೆ ಅಂದಾಜು 40 ಟನ್ ಇಳುವರಿ ಬರುವ ಈ ಬೆಳೆ ಸೆಪ್ಟೆಂಬರ್/ಅಕ್ಟೋಬರ್ ನಲ್ಲಿ ಕೊಯ್ಲಗಿ ಬರುತ್ತೆ, ರಾಸಾಯನಿಕ ಬಳಸದೆ ಹೆಚ್ಚು ಮೀನು ಗೊಬ್ಬರದಲ್ಲಿ ಇದನ್ನ ಬೆಳೆಸುತ್ತಾರೆ, ಯಾವುದೇ ವಿಷದ ಕ್ರಿಮಿನಾಶಕ ಬಳಸುವುದಿಲ್ಲ ಹಾಗಾಗಿ ಈ ಮಟ್ಟು ಗುಳ್ಳ ಸಾವಯವ ತರಕಾರಿ ಮತ್ತು ಇದರ ರುಚಿ ಅತ್ಯಂತ ವಿಭಿನ್ನ .    ಈಗ ಇದನ್ನ ಬೆಳೆಸುವವರ ಸಂಖ್ಯೆ ಕಡಿಮೆ ಆಗಿದೆ, 2011ರಲ್ಲಿ ಇದರ ಪ್ರಾದೇಶಿಕ ವಿಭಿನ್ನತೆ, ಹಿನ್ನೆಲೆಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಹೊಂದಿದ್ದು ಕನಾ೯ಟಕದ ಈ ತರಕಾರಿಗೆ ಹೆಮ್ಮೆಯ ಕಿರೀಟವಾಗಿದೆ.   ಇದ

ಡಯಾಬಿಟೀಸ್ ರೋಗದವರು ಇನ್ಸುಲಿನ್ ಬಳಸಲು ಹಿಂಜರಿಯುವುದೇಕೆ?

ಇನ್ಸುಲಿನ್ ಬಳಸಲು ಡಯಾಬಿಟಿಸ್ ರೋಗಿಗಳಲ್ಲಿ ಹಿಂಜರಿತ ಸರಿ ಅಲ್ಲ.( ಟ್ಟೆಪ್-2)     ಭಾರತದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಅತಿ ಹೆಚ್ಚು, ಸಣ್ಣ ವಯಸ್ಸಿನವರೂ ಹೆಚ್ಚಿದ್ದಾರೆ ಮತ್ತು 40 ವರ್ಷ ದಾಟುತ್ತಿದ್ದಂತೆ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತದೆ.    ವಿಪರೀತ ಬಾಯಾರಿಕೆ, ತೊಡೆಗಳಲ್ಲಿ ವಿಪರೀತ ನೋವು ಮತ್ತು ಪದೇ ಪದೇ ಮೂತ್ರ ವಿಸಜ೯ನೆಯಿಂದ ಈ ಕಾಯಿಲೆ ಪ್ರಾರಂಬಿಕವಾಗಿ ಗೋಚರಿಸಿ ವಿಪರೀತ ತೂಕ ಇಳಿತವೂ ಆದಾಗಲೇ ವೈದ್ಯರ ಹತ್ತಿರ ಹೋಗುತ್ತೇವೆ.   ಸಕ್ಕರೆ ಕಾಯಿಲೆ ಬಂತು ಅಂತ ಬಿಕ್ಕಿ ಬಿಕ್ಕಿ ಅತ್ತವರನ್ನೂ ನೋಡಿದ್ದೇನೆ ಅದಕ್ಕೆ ಕಾರಣ ಕೆಲ ತಪ್ಪು ತಿಳುವಳಿಕೆಗಳು.   ವೈದ್ಯರು ಪ್ರಾರಂಭದಲ್ಲಿ ಗುಳಿಗೆಗಳಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರುತ್ತಾರೆ, ರೋಗಿಗಳು ಆಹಾರ ಕ್ರಮ ನಿಯಂತ್ರಣ ಮತ್ತು ನಿರಂತರ ನಡಿಗೆಗಳಿಂದ ಅದನ್ನು ಮುಂದುವರಿಸಬಹುದಾದರೂ ಅನೇಕರಿಗೆ ಈ ಕಾಯಿಲೆಯ 10 ನೇ ವರ್ಷದ ನಂತರ ನಿಯಂತ್ರಣ ತಪ್ಪುವುದು ಹೆಚ್ಚು.   ಅವಾಗಲೇ ವೈದ್ಯರು ಇನ್ಸುಲಿನ್ ತೆಗೆದುಕೊಳ್ಳಲು ಶಿಪಾರಸ್ಸು ಮಾಡುತ್ತಾರೆ.   ಆದರೆ ಇನ್ಸುಲಿನ್ ಸಕ್ಕರೆ ರೋಗದ ಪ್ರಾರಂಭದಲ್ಲೇ ಬಾರತ ಹೊರತು ಪಡಿಸಿ ಹೆಚ್ಚಿನ ದೇಶಗಳಲ್ಲಿ ಬಳಸಲು ವೈದ್ಯರು ಹೇಳುತ್ತಾರೆ ಇದಕ್ಕೆ ಕಾರಣ ಮಾತ್ರೆ ಮಾತ್ರದಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ನಿಯಂತ್ರಣಕ್ಕೆ ಬರುವುದಿಲ್ಲ ಹಾಗಾದಾಗಲೆಲ್ಲ ದೇಹದಲ್ಲಿನ ಕಿಡ್ನಿ ಹೃದಯ ಮುಂತಾದ ಅವಯುವಗಳು ಹೆಚ್

ನನ್ನ ಕೃಷಿ ಇಲಾಖಾ ಬ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ 7 ಕೃಷಿ ಅಧಿಕಾರಿಗಳು ಜೈಲಿಗೆ ಕಳಿಸಲು ಮುಖ್ಯ ಕಾರಣರಾದ ಆರ್.ಟಿ.ವಿಠಲ ಮೂತಿ೯ .

#ನಾಡಿನ_ಖ್ಯಾತ_ರಾಜಕೀಯ_ಅಂಕಣ_ಬರಹಗಾರ_ಪತ್ರಕತ೯_ನಮ್ಮ_ಸಾಗರ_ತಾಲ್ಲೂಕಿನ_ಕೀತಿ೯_ಪತ್ರಿಕೋದ್ಯಮದಲ್ಲಿ #ರಾಜ್ಯಮಟ್ಟದಲ್ಲಿ_ಪಸರಿಸಿದ_ಆರ್_ಟಿ_ವಿಠಲಮೂತಿ೯ _ಕಳೆದ_ವರ್ಷ_ಅವರ_ಮುಖಪುಟದಲ್ಲಿ_ಬರೆದದ್ದು_ಪುನಃ_ನೆನಪಾಗಿ #ನನ್ನ_ರಾಜಕೀಯವಾದ_ಹೋರಾಟ_ತಾಕಿ೯ಕ_ಅಂತ್ಯ_ಕಾಣಲು_ಕಾರಣರಾದ_ವಿಠಲ್_ಮೂತಿ೯_ತಾಳುಗುಪ್ಪ_ಸಲೀಂ_ಮತ್ತು #ಆಗಿನ_ಕೃಷಿ_ಸಚಿವರಾದ_ಬೈರೇಗೌಡರು_ಅಭಿನ೦ದನಾಹ೯ರು. ಇದೊಂಥರಾ ಆತ್ಮಕಥೆಯ       ಹಿಂದೆ  ಅದೆಷ್ಟು ಕಥೆಗಳ ಸಾಲು? ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಇದೊಂಥರಾ ಆತ್ಮಕಥೆ ಪುಸ್ತಕ ಮನಸ್ಸೆಂಬ ನೆಲಕ್ಕೆ ಸದಾ ತಂಪೆರೆಯುತ್ತಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಪುಸ್ತಕ ಈಗಲೂ ರಾಜ್ಯದ ಜನರ ಒಪ್ಪುಗೆ,ಅಪ್ಪುಗೆಗೆ ಪಾತ್ರ. ಬರಹಗಾರರಿಗೆ ಇದಕ್ಕಿಂತ ದೊಡ್ಡ ಸರ್ಟಿಫಿಕೆಟ್ ಯಾವುದು?ಮೊನ್ನೆ ಅತ್ಯಾಪ್ತರಾದ ಅರುಣ್ ಪ್ರಸಾದ್ ಅವರು ಒಂದು ವಿಡಿಯೋ ಕಳಿಸಿದ್ದರು. ನಮ್ಮೂರು ಸಾಗರ ತಾಲ್ಲೂಕಿನ ಆನಂದಪುರದ ಅರುಣ್ ಪ್ರಸಾದ್ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು.ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಸೆಣಸಿದವರು.ಯುವಕನಾಗಿದ್ದ ದಿನಗಳಲ್ಲಿ ನನ್ನ ಅಚ್ಚರಿಗೆ,ವಿಸ್ಮಯಕ್ಕೆ,ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಪಹಪಿಗೆ ಕಾರಣರಾದವರಲ್ಲಿ ಅರುಣ್ ಪ್ರಸಾದ್ ಕೂಡಾ ಮುಖ್ಯರಾದವರು. ಈಗ ಅನಂದಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಅರುಣ್ ಪ್ರಸಾದ್ ಸದಾ ಕಾಲ ಚಟುವಟಿಕೆಯ ಆಗರ.ತಮ್ಮ ಕೆಲಸಗಳ

ನಿತ್ಯ ವಾಕಿ೦ಗ್ ಮಾಡಲು ಬೇಕಾಗಿರುವುದು ದೃಡ ನಿದಾ೯ರ ಮಾತ್ರ

#ವಾಕಿಂಗ್_ಬಗ್ಗೆ_ಏನೆಲ್ಲ_ಮಿತಿ?   ಕಳೆದ ವಷ೯ ಇದೇ ಲಾಕ್ ಡೌನ್ ಸಂದರ್ಭದಲ್ಲಿ ವಾಕಿಂಗ್ ಶುರು ಮಾಡಿದೆ, 130 ಕೆಜಿ ತೂಕದ ದೇಹ ವಾಕಿಂಗ್ ಗೆ ಸಹಕರಿಸುತ್ತಿರಲಿಲ್ಲ ಆದರೆ ತೂಕ ಇಳಿಸಿಕೊಳ್ಳುವ ದೃಡ ನಿದಾ೯ರ ಮಾಡಿ ಆಗಿತ್ತು.   ನನ್ನ ಸ್ವಂತ ನಿದಾ೯ರದಲ್ಲಿ ನನ್ನ ವಾಕಿಂಗ್ ದಿನಕ್ಕೆ ಒಂದು ಗಂಟೆ ಅವದಿಗೆ ಒಯ್ದು ನಿಲ್ಲಿಸ ಬೇಕಾಗಿತ್ತು ಆಗ ನಾನು ಮಾಡಿದ ತೀಮಾ೯ನ ಮೊದಲ ವಾರ ಪ್ರತಿ ನಿತ್ಯ 5 ನಿಮಿಷ ದಂತೆ ನಡೆಯಲು ಶುರು ಮಾಡಿದೆ ಎರಡನೇ ವಾರ 10 ನಿಮಿಷ, ಮೂರನೇ ವಾರ 15 ನಿಮಿಷದಂತೆ ಹೀಗೆ 12ನೇ ವಾರಕ್ಕೆ ನಿತ್ಯ ಲೀಲಾಜಾಲವಾಗಿ ಒಂದು ಗಂಟೆ ವಾಕಿಂಗ್ ಮಾಡಲು ದೇಹ ಹೊಂದಿ ಕೊಂಡಿದ್ದು ನನಗೆ ನಂಬಲಾಗಲಿಲ್ಲ.   ನಾನು ವಾಕಿಂಗ್ ಗೆ ನಿಗದಿ ಮಾಡಿಕೊಂಡ ಜಾಗ ಮಾತ್ರ ನನ್ನ ಮನೆಯ ಮುಂದಿನ ಪಾಕಿ೯೦ಗ್ ಜಾಗ ಇದು 15 ಅಡಿ ಉದ್ದ ಮತ್ತು ಅಗಲ 10 ಅಡಿ ಮಾತ್ರದ್ದು, ನೇರ ನಡೆದರೆ 10 ಹೆಜ್ಜೆ ಮಾತ್ರ 8 ಆಕಾರದಲ್ಲಿ ನಡೆದರೆ 15 ಹೆಜ್ಜೆ ಆಗುವ ಚಿಕ್ಕ ಜಾಗ ಇದರಲ್ಲಿ ಒ0ದು ಗಂಟೆ ಕಾಲಾವದಿ ವಾಕಿಂಗ್ ನಾನು ಮಾಡುವುದು.   ರಸ್ತೆ ಮೇಲೆ ವಾಕಿಂಗ್ ಹೋದರೆ ಸಿಗುವವರ ಜೊತೆ ಮಾತಿಗೆ ನಿಲ್ಲಬೇಕಾದ ಅನಿವಾಯ೯ತೆಯಿಂದ ವಾಕಿಂಗ್ ನಿರಂತರ ಆಗುವುದಿಲ್ಲ ಮತ್ತು ಇತ್ತೀಚಿನ ದಿನದಲ್ಲಿ ವಿಪರೀತ ವಾಹನಗಳ ಸಂಚಾರ ಮತ್ತು ವೇಗದ ಚಾಲನೆಯಿಂದ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಹೆಚ್ಚು ಅಪಾಯ ಆದ್ದರಿಂದ ನಾನು ಮನೆಯ ಗೇಟಿನ ಒಳಗೆ ವಾಕಿಂಗ್ ನಿಗದಿ ಮಾಡಿದ್ದೇನೆ.   ಶಿವಮೊಗ್

ಮಧ್ಯಪಾನ ಮಾಡಿ ರಥ ಎಳೆಯುವ ಪದ್ದತಿಗೆ ಕಾರಣ ಏನು?

ಕಿಗ್ಗಾ ಶೃಂಗೇಶ್ವರ ಜಾತ್ರೆ ವಿಶೇಷ ಗೊತ್ತಾ ? ಶೂದ್ರರು ಕುಡಿದು ರಥ ಎಳೆಯುವ ಪದ್ಧತಿಗೆ ಕಾರಣ?   ಕಿಗ್ಗಾ ಶೃಂಗೇರಿ ಮತ್ತು ಸಿರಿಮನೆ ಜಲಪಾತದ ಮಧ್ಯದ ಸಣ್ಣ ಊರು, ಶೃಂಗೇರಿಯಿಂದ 9 ಕಿ.ಮಿ. ದೂರದಲ್ಲಿದೆ.   ಕಿಗ್ಗಾದ ಜಾತ್ರೆ ನಂತರ ಮಳೆ ಬಂದೇ ಬರುತ್ತದೆ, ಇಲ್ಲಿ ನರಸಿಂಹ ಪರ್ವತ ಇದೆ, ಇಲ್ಲಿನ ದೇವಾಲಯ 11ನೇ ಶತಮಾನದಲ್ಲಿ ನಿಮಾ೯ಣವಾದ 4 ಅಡಿ ಎತ್ತರದ ಶಿವಲಿಂಗ ಇದೆ.   ಋಷಿ ಶೃಂಗೇಶ್ವರರು ಜಿಂಕೆಯ ಕೊಂಬಿನಿಂದ ಜನಿಸಿದರೆಂಬ ಸ್ಥಳ ಪುರಾಣ ಇದೆ, ರಾಜ್ಯದಲ್ಲಿ ಬರಗಾಲ ಬಂದಾಗೆಲ್ಲ ಇಲ್ಲಿ ಪೂಜೆ ಸಲ್ಲಿಸಿದ ಭರಪೂರ ಮಳೆ ಆಗುತ್ತದೆ.   ಮೂರು ದಿನದ ಹಿಂದೆ ಕಿಗ್ಗಾ ರಥೋತ್ಸವ ಆಯಿತು ಹಗಲಿನ ರಥೋತ್ಸವ ಅರ್ಚಕರು ಮತ್ತು ಬ್ರಾಹ್ಮಣರು ನೆರವೇರಿಸುತ್ತಾರೆ ಸಂಜೆ ಶೂದ್ರರೇ ರಥ ಎಳೆಯುವ ಪದ್ಧತಿ ಇದೆ.   ಇಲ್ಲಿನ ನಂಬಿಕೆ ಒಂದು ಈಗಲೂ ಆಚರಣೆಯಲ್ಲಿದೆ ಅದೇನೆಂದರೆ ಶೂದ್ರ ಭಕ್ತರು ಮದ್ಯಪಾನ ಮಾಡಿಯೇ ರಥ ಎಳೆಯುವುದು!?    ಯಾವುದೋ ಕಾಲದಲ್ಲಿ ಶೂದ್ರರು ಭಕ್ತಿ ಪೂರ್ವಕವಾಗಿ ರಥ ಎಳೆಯಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗದಿದ್ದಾಗ ಕಾಲಜ್ಞಾನಿಯಿಂದ ಮಧ್ಯಪಾನ ಮಾಂಸಹಾರ ಮಾಡಿ ರಥ ಎಳೆಯಲು ತಿಳಿಸಿದಂತೆ ಹೇಳಿಕೆ ಆದಾಗ ರಥ ಚಲಿಸಿದ್ದರಿಂದ ಈಗಲೂ ಈ ಪದ್ದತಿ ಚಾಲ್ತಿಯಲ್ಲಿದೆ.   ಸ್ಥಳಿಯ ಶೂದ್ರರಲ್ಲಿ ಈ ರಥೋತ್ಸವಕ್ಕಾಗಿ ದ್ರಾಕ್ಷಿಯಿಂದ ಮಾಡಿದ ವೈನ್ ಎಲ್ಲರ ಮನೆಯಲ್ಲಿ ಜಾತ್ರೆಗಾಗಿಯೇ ತಯಾರಾಗುತ್ತದೆ, ಮಾಂಸಹಾರದ ಅಡುಗೆ ಕೂಡ ಆದರೂ

ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿಯ ಹೊದಿಗೆರೆಯಲ್ಲಿ (ಈಗ ದಾವಣಗೆರೆ ಜಿಲ್ಲೆ) ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಮತ್ತು ಹೊಸನಗರ ತಾಲ್ಲುಕಿನ ಅರಮನೆ ಕೊಪ್ಪದಲ್ಲಿ ಇವರ ಮಗ ಛತ್ರಪತಿ ರಾಜಾರಾಮ್ ಮಹಾರಾಜ ಕೆಳದಿ ರಾಣಿ ಚೆನ್ನಮ್ಮರ ರಕ್ಷಣೆಯಲ್ಲಿ ಎರೆಡು ವರ್ಷ ತಂಗಿದ್ದ ಅರಮನೆ ಇದೆ.

#ಛತ್ರಪತಿ_ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮ_ಮಹಾರಾಜರನ್ನು_ಕೆಳದಿ_ರಾಣಿ_ಚೆನ್ನಮ್ಮ_ಆಶ್ರಯದಲ್ಲಿದ್ದದ್ದು #ಮರಾಠಿ_ಟೀವಿ_ಎಬಿಪಿ_ಮಾಜಾ_ಡಾಕ್ಯುಮೆಂಟರಿ_ಮಾಡಿ_ಮೊನ್ನೆ_21_ಮಾಚ್೯_2021_ಪ್ರಸಾರ_ಮಾಡಿದೆ. #ಇತಿಹಾಸ_ಆಸಕ್ತರಿಗಾಗಿ_ಮಾಹಿತಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಚೆನ್ನಗಿರಿ ಸಮೀಪದ ಹೊದಿಗೆರೆಯಲ್ಲಿದೆ, ಇವರ ಮಗ ಛತ್ರಪತಿ ರಾಜಾರಾಮ ಮಹಾರಾಜರನ್ನು ಕೆಳದಿ ರಾಣಿ ಚೆನ್ನಮ್ಮ ಆಶ್ರಯ ನೀಡಿ ರಹಸ್ಯವಾಗಿ ಬಚ್ಚಿಟ್ಟ ಮನೆ ಬಿದನೂರು ನಗರದ ಸಮೀಪದ ಅರಮನೆ ಕೊಪ್ಪದಲ್ಲಿದೆ.    ವಿಶೇಷ ಅಂದರೆ ಬಿದನೂರಿನಿಂದ 17 ಕಿಮಿ ದೂರದ ಮತ್ತಿ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ಕೊಪ್ಪ ಎಂಬಲ್ಲಿ (ಕೊಲ್ಲೂರು ಮಾಗ೯ದಲ್ಲಿ) ಹಾಲಿ ಮಂಜುನಾಥ ಭಟ್ಟರ ಸುಪದಿ೯ಯಲ್ಲಿರುವ ಬೃಹತ್ ಮನೆ (ಒಂದು ಕಾಲದಲ್ಲಿ ಅರಮನೆ) ಯಲ್ಲಿ ಸುಮಾರು ಎರೆಡು ವರ್ಷ ಛತ್ರಪತಿ ರಾಜಾರಾಮ ಮಹಾರಾಜರನ್ನ ರಾಣಿ ಚೆನ್ನಮ್ಮ ರಹಸ್ಯವಾಗಿ ರಕ್ಷಿಸಿದ್ದಳು, ಈ ಕಾಲದಲ್ಲಿಯೆ ಛತ್ರಪತಿ ರಾಜಾರಾಮರು ಬಿದನೂರು ನಗರದಲ್ಲಿ ಸುಬ್ರಮಣ್ಯ ಮತ್ತು ಪಾರ್ವತಿ ದೇವಾಲಯ ನಿಮಿ೯ಸುತ್ತಾರೆ.   ಈ ಟೇವಿ ತಂಡವನ್ನು ಈ ಅರಮನೆ ಕೊಪ್ಪಕ್ಕೆ ಕರೆದೊಯ್ದು ಮಾಹಿತಿ ನೀಡಿದವರು ಹಾಲಿ ಬಿದನೂರು ವಾಸಿ ಆಗಿರುವ ಇತಿಹಾಸ ಸಂಶೋದಕರು ಮತ್ತು ಅನೇಕ ಕೆಳದಿ ಇತಿಹಾಸದ ಪುಸ್ತಕ ಪ್ರಕಟಿಸಿರುವ ಅಂಬ್ರಯ್ಯ ಮಠರವರು.   ಅಂಬ್ರಯ್ಯ ಮಠರವರು ಬರೆದು ಪ್ರಕಟಿಸಿರುವ "ಗತರಾಜಧಾನಿಯ ಸುತ್

ದೇಶದಾದ್ಯಂತ ಕಳೆದ ವರ್ಷ ಕೊರಾನಾ ಪ್ರಾರಂಭ ಆದಾಗ ದಿಡೀರ್ ಲಾಕ್ ಡೌನ್ ನಿಂದ ಕಾಮಿ೯ಕರು ಊರು ಸೇರಲು ಪಟ್ಟಿರುವ ಕಷ್ಟ ಈಗ ಕೋವಿಡ್ ಎರಡನೇ ಅಲೆ ಸಂದಭ೯ದಲ್ಲಿ ನೆನಪು

#ಶಿವಮೊಗ್ಗದಿಂದ_ರಾಜಸ್ಥಾನದ_ಗಂಗಾನಗರ_ಜಿಲ್ಲೆ_ತನಕ #ಒಂದೂವರೆ_ಸಾವಿರ_ಕೀಲೋ_ಮೀಟರ್_ಟಾಪ೯ಲ್ #ಮುಚ್ಚಿದ_ಲಾರಿಯಲ್ಲಿ_ಕಳೆದ_ವರ್ಷ_ಕೊರೋನೊ #ಬೀತಿಯಿಂದ_ಕಷ್ಟಪಟ್ಟು_ಊರು_ಸೇರಿದವರ_ನಿಜಕಥೆ   ಇವರೆಲ್ಲ ನಮ್ಮ ಲಾಡ್ಜ್ ಕಟ್ಟಡದಲ್ಲಿ ಗ್ರಾನೈಟ್ ಕೆಲಸ ಮಾಡಲು ಬಂದವರು, ಈ ಕೆಲಸದ ಗುತ್ತಿಗೆ ಹಿಡಿದ ಮೊಹರ್ ಸಿಂಗ್ ಮಾರ್ಚ್ ನಲ್ಲಿ ಲಾಕ್ ಡೌನ್ ಆದಾಗ ಭಯ ಪಟ್ಟಾಗ ನಾನು ದೈಯ೯ ಹೇಳಿದ್ದೆ, ಹುಷಾರಾಗಿರಿ ಆರೋಗ್ಯ ಕಾಪಾಡಿಕೊಳ್ಳಿ ಅಂತ.   ಆದರೆ ಇವರ ಊರುಗಳಿಂದ ಹೇಗಾದರೂ ಮಾಡಿ ಊರು ತಲುಪಿ ಅಂತ ರೋದಿಸುತ್ತಿದ್ದ ಕುಟುಂಬದವರ ಒತ್ತಾಯದಿಂದ ಕೆಲವರು ಲಾರಿಗಳಲ್ಲಿ ಹೋಗಿ ಅರ್ಧ ದಾರಿಯಲ್ಲಿ ಸಿಕ್ಕು ಬಿದ್ದು ಕೊರಾ೦ಟೈಯಿನ್ ಆಗಿದ್ದ ಉದಾಹರಣೆ ಇತ್ತು.   ಕಳೆದ ವರ್ಷ ಏಪ್ರಿಲ್ 6ಕ್ಕೆ ಮೊಹಾರ್ ಸಿಂಗ್ ತನ್ನ ಕೆಲಸದ ಲೆಖ್ಖ ಮಾಡಿಸಿ ಬಾಕಿ 20 ಸಾವಿರ ಅವತ್ತೇ ಬೇಕು ಅಂತ ಅವಸರಿಸಿದ ಯಾಕೆಂದು ಕೇಳಿದಾಗ ಕೆಲಸದ ಹುಡುಗರು ಇವತ್ತು ಊರಿಗೆ ಹೋಗುತ್ತಾರೆಂದು ಗುಟ್ಟಾಗಿ ಹೇಳಿದ! ಅರೆ ಈಗ ರೈಲಿಲ್ಲ ಬಸ್ಸು ಇಲ್ಲ ಹೇಗೆ ಸಾಧ್ಯ? ಅಂದೆ ಅದಕ್ಕೆ ತಮ್ಮ ಊರಿನ ಲಾರಿ ಒಂದು ಶಿವಮೊಗ್ಗದಿಂದ ರಾತ್ರಿ ಹೊರಡುತ್ತೆ ತಲಾ ನಾಲ್ಕು ಸಾವಿರದಂತೆ ಪಾವತಿ ಮಾಡಿದ ಸುಮಾರು 80 ಜನ ಹೋಗುತ್ತಾರೆ ಅಂದ, ನಾನು ಹಣ ನೀಡಿ "ನೀನು ಮಾತ್ರ ಹೋಗಬೇಡ " ಅಂದೆ ಇಲ್ಲ ತಾನು ಹೋಗುವುದಿಲ್ಲ ಉಳಿದ ಕೆಲಸ ಮುಗಿಸಿಯೇ ಹೋಗುತ್ತೇನೆ ಅಂದಿದ್ದ.   ನಂತರ 1

ಸ್ಥೂಲ ಕಾಯ ನಿವಾರಣೆಗೆ ನನ್ನ ಒಂದು ವರ್ಷದ ಪ್ರಯೋಗ

#ತೂಕ_ಇಳಿಸು_ಕೊಳ್ಳುವ_ನನ್ನ_ಅನುಭವಕ್ಕೆ_ಅನೇಕರು_ವಿವರಣೆ_ಕೇಳಿದ್ದಾರೆ.   ರಾತ್ರಿ ಊಟ ಬಿಟ್ಟು 200 ML ರಾಗಿ ಗಂಜಿ ಮಲಗುವಾಗ ಸೇವಿಸುವುದು ತೂಕ ಇಳಿಕೆಗೆ ಮುಖ್ಯ ಕಾರಣ ಅಂತ ನನ್ನ ಅನುಭವ.)   #ರಾಗಿ_ಗಂಜಿ_ತಯಾರಿಸುವ_ವಿಧಾನ 250 ML ನೀರು ಕುದಿಯಲಿಟ್ಟು ಎರೆಡು ಟೇಬಲ್ ಚಮಚ ರಾಗಿ ಹಿಟ್ಟು ಬೇರೆ ನೀರಲ್ಲಿ ಕದಡಿ ಇದಕ್ಕೆ ಬೆರೆಸಿ ನಿಧಾನ ಕರಡಬೇಕು, ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸುತ್ತ ರುಚಿಗೆ ತಕ್ಕ ಉಪ್ಪು ಬೆರೆಸಿ, ತಣ್ಣಗಾದ ನಂತರ ಕುಡಿಯುವ ಸಮಯದಲ್ಲಿ ಸಣ್ಣಗೆ ಕೊಚ್ಚಿದ ನೀರುಳ್ಳಿ, ಹಸಿ ಮೆಣಸು, ಕೊತ್ತುಂಬರಿ ಸೊಪ್ಪು, ಜೀರಿಗೆ ಪುಡಿ ಕಾಲು ಟೀ ಸ್ಪೂನ್ ಮತ್ತು ಕಡಿದ ಮಜ್ಜಿಗೆ ಬೆರೆಸಿ ಕುಡಿಯುವುದು. (ಈ ರೀತಿ ರಾಗಿ ಅಂಬಲಿ ರುಚಿ ಮತ್ತು ಸುವಾಸನೆಯಿಂದ ಕೂಡಿರುವುದರಿಂದ ಕುಡಿಯಲು ಇಷ್ಟವಾಗುತ್ತದೆ.   #ನಿಶ್ಯಕ್ತಿ_ಇದ್ದರೆ.  ಚ್ಯುವನ ಪ್ರಾಶ ಒ0ದು ಚಮಚ (ಡಯಾಬಿಟಿಕ್ ಇದ್ದರೆ ಶುಗರ್ ಪ್ರೀ ಚ್ಯುವನ ಪ್ರಾಶ ಬಳಸಬೇಕು) ಮತ್ತು ಒಂದು ಲೋಟ ಹಾಲು ಬಳಸಬಹುದು.   #ನಿತ್ಯ_ವಾಕಿಂಗ್. ನಿತ್ಯ ಒಂದು ಗಂಟೆ ಕಡ್ಡಾಯ ವಾಕಿಂಗ್ ಮಾಡ ಬೇಕು, ಮೊದಲ ದಿನ 5 ನಿಮಿಷದಂತೆ ಪ್ರತಿ 10 ದಿನಕ್ಕೆ 5 ನಿಮಿಷ ಹೆಚ್ಚಿಸುತ್ತಾ ನಂತರ ಒಂದು ಗಂಟೆಗೆ ತಲುಪಿಸಿದರೆ ನಿಮಗೆ ಗೊತ್ತಾಗದಂತೆ ನೀವು ಒಂದು ಗಂಟೆ ವಾಕಿಂಗ್ ಮಾಡಲು ಪಿಟ್ ಆಗಿರುತ್ತೀರಿ.   #ಪಥ್ಯ_ಬೇಕಾಗಿಲ್ಲ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ನಿಮಗೆ ಏನಿಷ್ಟ ಅದನ್ನು (ಸಿಹಿ ತ

ಪಿಳ್ಳೆ ಎ೦ಬ ಹಳ್ಳಿ ವಿಜ್ಞಾನಿ

#ಪಿಳ್ಳೆ_ಯಾನೆ_ಆಚಾಪುರದ_ಮ೦ಜಪ್ಪ #ಒಂದು_ಕಾಲದ_ಭೂಮಾಲಿಕರಾದ_ಬಸವನಕೊಪ್ಪದ_ಚನ್ನವೀರಪ್ಪಗೌಡರ_ಶಿಷ್ಯ  #ಕಡಿದಾಳು_ಶಾಮಣ್ಣರ_ಪ್ರೇರಣೆಯ_ಶೌಚಾಲಯದ_ಮೊದಲ_ಪಲಾನುಭವಿ.  ಪಿಳ್ಳೆ ಅಂದರೆ ಮಾತ್ರ ಜನ ಗುರುತಿಸುವ ಆಚಾಪುರದದ ಮಂಜಪ್ಪ ಕಾಡಿನ ಎಲ್ಲಾ ಮಾಹಿತಿ ಇರುವ ನಮ್ಮ ಹಳ್ಳಿ ವಿಜ್ಞಾನಿ, ಒಂದು ಕಾಲದಲ್ಲಿ ಅಂದರೆ 1970 ರ ದಶಕದಲ್ಲಿ ನಮ್ಮ ಭಾಗದ ಪ್ರಸಿದ್ಧ ಭೂಮಾಲಿಕರಾಗಿದ್ದ ಅನ್ನದಾನಿ ಬಸವನಕೊಪ್ಪದ ಚನ್ನವೀರಪ್ಪ ಗೌಡರ ಪಟ್ಟದ ಶಿಷ್ಯ ಆಗಿದ್ದಾತ.   ಅವರ ಕೊಟ್ಟಿಗೆಯಲ್ಲಿನ ನೂರಾರು ದನ, ಎಮ್ಮೆಗಳು ಕಾಯುವ ಗೋಪಾಲ ವೃತ್ತಿ ಪಿಳ್ಳೆಯದು.    ಕಾಡಿನ ನ್ಯಾಯ ಮತ್ತು ಪರಿಸರ ವಿಜ್ಞಾನ ರಕ್ತಗತವಾಗಿ ಸಂಪೂಣ೯ವಾಗಿ ಪಿಳ್ಳೆಗೆ ಬಾಲ್ಯದಲ್ಲೇ ಕರತಲಾಮಲಕ ಆಗಿದೆ, ಗಿಡಗಂಟಿ ಯಿಂದ ದೊಡ್ಡ ಅರಣ್ಯದ ಮರ ಮಟ್ಟುಗಳ ಅಪಾರ ಜ್ಞಾನ ಪಿಳ್ಳೆಗೆ ಇದೆ ಆದರೆ ಅದು ಅವರಿಗೆ ವಿಶೇಷ ಅನ್ನಿಸಿಲ್ಲ.   ಮೊನ್ನೆ ಪಿಳ್ಳೆ ಸಿಕ್ಕಿದಾಗ ವಯಸ್ಸು ಎಷ್ಟಾಯಿತೆಂದರೆ 50 ಅಂದರು, ದೊಡ್ಡ ಮಗಳು ಮದುವೆ ಆಗಿದೆ, ಮಗ ಬಸ್ ಡ್ರೈವರ್ ಆಗಿದ್ದಾನೆ, ಸಣ್ಣ ಮಗಳು ನಸ್೯ ಆಗಿದ್ದ ಬಗ್ಗೆ ತಿಳಿಸಿದರು ಆದರೆ ನನಗಿ೦ತ ಪಿಳ್ಳೆ ದೊಡ್ಡವರು ಈಗ ನನಗೇ 56 ವರ್ಷ.    1995 ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಕಡಿದಾಳು ಶಾಮಣ್ಣರಿಂದ ಪ್ರೇರೇಪಿತನಾಗಿ ಅವರ ಘೋಷಣೆ "ಮೊದಲು ಶೌಚಾಲಯ ಅಮೇಲೆ ದೇವಾಲಯ" ದಂತೆ (ಆಗ ಶೌಚಾಲಯಕ್ಕೆ ಅನುದಾನ ಇರಲಿಲ್ಲ) ಪಿಳ್ಳೆ ಕಾಲೋನಿಯಲ್ಲಿ ಎಲ್ಲ

ಶಿವಮೊಗ್ಗ ಜಿಲ್ಲೆಯಲ್ಲಿ ಲಂಕೇಶರ ಸ್ಮಾರಕ ನಿರ್ಮಾಣಕ್ಕೆ ಲಂಕೇಶರ ಅಭಿಮಾನಿಗಳು ಮುಂದೆ ಬರಲಿ.

#ನಮ್ಮ_ಜಿಲ್ಲೆಯ_ಕವಿ_ಬರಹಗಾರ_ಚಲನಚಿತ್ರ_ನಿರ್ದೇಶಕ_ಪತ್ರಕತ೯_ಲಂಕೇಶರ_ಸ್ಮಾರಕ_ಯಾಕೆ_ಇಲ್ಲ !?   ಶಿವಮೊಗ್ಗ ಜಿಲ್ಲೆ ವಿಭಜನೆ ನಂತರ (1998 ರ ನಂತರ) ಲಂಕೇಶರ ಹುಟ್ಟೂರು ದಾವಣಗೆರೆಗೆ ಸೇರಿದ್ದರೂ ಲಂಕೇಶರು ಶಿವಮೊಗ್ಗ ಜಿಲ್ಲೆಯವರೇ ಅನ್ನುವ ಭಾವನೆ ಹಾಗೇ ಉಳಿದಿದೆ.   ಲಂಕೇಶರ ಸ್ಮರಣೆಗಾಗಿ ಅವರ ಅಪಾರ ಅಭಿಮಾನಿ ಬಳಗ ಅವರ ಹುಟ್ಟೂರಿನಲ್ಲಿ ಅಥವ ಶಿವಮೊಗ್ಗದಲ್ಲಿ ಸ್ಮಾರಕ ನಿಮಿ೯ಸಲು ಪ್ರಯತ್ನಿಸಬಾರದೇಕೆ ? ಅವರ ಪುಸ್ತಕ, ಲಂಕೇಶ್ ಪತ್ರಿಕೆಯ ಹಿಂದಿನ ಪ್ರತಿಗಳು, ಅವರ ಪೋಟೋ ಗ್ಯಾಲರಿ, ಅವರ ಚಲನಚಿತ್ರ, ಅವರು ಬರೆದ ಚಲನಚಿತ್ರಗೀತೆಗಳು, ಜಿಲ್ಲೆಯಲ್ಲಿ ಪ್ರಾರಂಭ ಆದ ಸಮಾಜವಾದಿ ಪಕ್ಷ, ರೈತ ಸಂಘದ ಒಡನಾಟ ವಿವರಿಸುವ ದಾಖಲೆಗಳು ಮುಂದಿನ ತಲೆಮಾರಿಗೆ ತಲುಪಿಸ ಬಹುದಲ್ಲವೆ?   ಮೊನ್ನೆ ಲಂಕೇಶರ ಹುಟ್ಟೂರಿನ ಮನೆ ಹಿತ್ತಲಿನ ಬೃಹತ್ ಹುಡೇವು ಚಿತ್ರ ಪೋಸ್ಟ್ ಮಾಡಿ ಈ ಬಗ್ಗೆ ಲಂಕೇಶರು ಎಲ್ಲಾದರೂ ಉಲ್ಲೇಖಿಸಿದ್ದಾರ? ಎಂಬ ಪ್ರಶ್ನೆಗೆ ಪತ್ರಕತ೯ರಾದ #ಶಶಿ_ಸಂಪಳ್ಳಿ ಲಂಕೇಶರ ಹುಳಿ ಮಾವಿನ ಮರ ಪುಸ್ತಕದಲ್ಲಿ ಬರೆದ ಬಗ್ಗೆ ಮತ್ತು ಒಮ್ಮೆ ಅವರ ಮನೆಗೆ ಹೋದಾಗ ಶಶಿ ಸಂಪಳ್ಳಿ ಈ ಹುಡೇವು ನೋಡಿ ಬಂದ ಬಗ್ಗೆ ನೆನಪಿಸಿದ್ದರು.   ಇನ್ನೊಬ್ಬ ಗೆಳೆಯರಾದ #ಸುಬ್ರಮಣ್ಯ_ಕಲ್ಮನೆ ಹುಳಿ ಮಾವಿನ ಮರದಲ್ಲಿ ಈ ಹುಡೇವು ಬಗ್ಗೆ ಬರೆದ ಪುಟ ನನಗೆ ಕಳಿಸಿದ್ದರು ಅದರಲ್ಲಿ ಲಂಕೇಶರು ಬರೆದದ್ದು...    ಇನ್ನೊಂದು ಹಿತ್ತಿಲ

ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷ ಸಂಘಟನೆ ಉತ್ತುಂಗಕ್ಕೆ ತಲುಪಿಸಿದ ಎಂ.ಶ್ರೀಕಾಂತ್ ಗೆ ವಿದಾನ ಪರಿಷತ್ ಗೆ ನಾಮಕರಣ ಮಾಡಬೇಕೆಂಬ ಒತ್ತಾಯ ಈಡೇರಲು ವಿಳಂಬಕ್ಕೆ ಕಾರಣ ಏನು?

#ಶಿವಮೊಗ್ಗ_ಜಿಲ್ಲೆಯಲ್ಲಿ_ಸ್ವಂತ_ಶ್ರಮದಿಂದ_ನಿರಂತರ_ರಾಜಕಾರಣ_ಮಾಡುತ್ತಿರುವ_ಶ್ರೀಕಾಂತ್    ನಿನ್ನೆ ಸಿಗಂದೂರು ದೇವಾಲಯಕ್ಕೆ ಹೋಗಿ ಬರುವಾಗ ಶ್ರೀಕಾಂತ್ ನನ್ನ ಕಚೇರಿಗೆ ಬಂದಿದ್ದರು.   ನಾನು ಇಷ್ಟ ಪಡುವ ರಾಜಕಾರಣಿಗಳಲ್ಲಿ ಶ್ರೀಕಾಂತ್ ಗೆ ಅಗ್ರಸ್ಥಾನ ಯಾಕೆಂದರೆ ಅವರಲ್ಲಿರುವ ತಾಳ್ಮೆ, ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ ಶ್ರಮ ಇವರದ್ದು ಒ0ದು ಹಂತದಲ್ಲಿ ಮೂವರು ಶಾಸಕರು, ಜಿಲ್ಲಾ ಪಂಚಾಯತ್, ನಗರಸಭೆ ವಿವಿದ ತಾಲ್ಲೂಕ್ ಪಂಚಾಯತ್ಗಳಲ್ಲಿ ಅಧಿಕಾರ ಹೊಂದಿತ್ತು.   ನಂತರ ಇವರನ್ನು ಬದಿಗೆ ಉದ್ದೇಶ ಪೂರ್ವಕವಾಗಿ ಬದಿಗೆ ಸರಿಸಿದರು ಇದಕ್ಕೂ ಇವರು ಬೇಸರಿಸದೆ ದೇವೇಗೌಡರ ಮತ್ತು ಕುಮಾರ ಸ್ವಾಮಿಗೆ ನಿಷ್ಟಾವಂತರಾಗಿ ಸುಮ್ಮನೆ ಉಳಿದರು.   ಜೆಡಿಎಸ್ ಸಕಾ೯ರ ಇದ್ದಾಗ ಇವರನ್ನ ವಿದಾನ ಪರಿಷತ್ ಗೆ ನಾಮಕರಣ ಮಾಡಿದ್ದರೆ ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ತುಂಬಾ ಸಹಾಯ ಆಗುತ್ತಿತ್ತು ಆದರೆ ಕುಮಾರಸ್ವಾಮಿಯವರು ಈ ಬಗ್ಗೆ ಯೋಚಿಸದೇ ಇದ್ದದ್ದು ವಿಷಾದನೀಯ.   2010ರಲ್ಲಿ ನಾನು ಮತ್ತು ಸಾಗರದ ಕೆ.ಎಲ್.ಮಂಜುನಾಥ್ ದೇವೇಗೌಡರು ಶಿವಮೊಗ್ಗದಲ್ಲಿ ಶ್ರೀಕಾಂತರ ಮನೇಲಿ ತಂಗಿದ್ದಾಗ ಶ್ರೀಕಾಂತರ ಸಂಘಟನಾ ಶಕ್ತಿ ಬಗ್ಗೆ ಮತ್ತು ಇವರನ್ನು ವಿದಾನ ಪರಿಷತ್ ಗೆ ನಾಮಕರಣ ಮಾಡಿದರೆ ಇನ್ನೂ ಹೆಚ್ಚಿನ ಶಕ್ತಿ ಜಿಲ್ಲೆಗೆ ಕೊಟ್ಟಂತಾಗುತ್ತದೆ ನಾವು ಮನವಿ ಮಾಡಿದ್ದೆವು ಆಗ ದೊಡ್ಡ ಗೌಡರು ಶ್ರೀಕಾಂತ್ ಗ

ಕಡು ಬೇಸಿಗೆಯಲ್ಲಿ ಕೆರಳುವ ಕಾಡು ಜೇನು, ಅಪಾಯದಿಂದ ಪಾರಾದ ಗೆಳೆಯ ಜಫ್ರುಲ್ಲಾ

#ಬೇಸಿಗೆಯಲ್ಲಿ_ಜೇನುಗಳೇಕೆ_ಉಗ್ರವಾಗುವುದು? #ಅಪಾಯದಿಂದ_ಪಾರಾದ_ಜನಾನುರಾಗಿ_ಮಾಪೀರ್    ಮೊನ್ನೆ ರಿಪ್ಪನ್ ಪೇಟೆ ಸಮೀಪದಲ್ಲಿ ಶಾಲೆಗೆ ಸೈಕಲ್ನಲ್ಲಿ ಬರುತ್ತಿದ್ದ ವಿದ್ಯಾಥಿ೯ಗೆ ಜೇನು ಕಚ್ಚಿದ ಬಗ್ಗೆ ಮತ್ತು ಅವನನ್ನು ರಕ್ಷಿಸಲು ಹೋದವರಿಗೂ ಜೇನು ಕಚ್ಚಿ ಆಸ್ಪತ್ರೆ ಸೇರಿಸಿದ ವರದಿ ಪತ್ರಿಕೆಯಲ್ಲಿ ಓದುತ್ತಿರುವಾಗಲೇ ನಮ್ಮ ಗೆಳೆಯ ಜಪ್ರುಲ್ಲಾ ಯಾನೆ ಮಾಪೀರ್ ಸಾಹೇಬರಿಗೆ ಆನಂದಪುರದ ರೈಲ್ವೆ ನಿಲ್ದಾಣದ ರಸ್ತೆಯ ಮರದಲ್ಲಿದ್ದ ಜೇನುಗಳು ಕಚ್ಚಿ ಸಾಗರ ಆಸ್ಪತ್ರೆಗೆ ಒಯ್ದರೆಂದು ಸುದ್ದಿ ಬಂದಾಗ ಬೇಸರ ಆಯಿತು ಮತ್ತು ಆತಂಕ.   ನನ್ನ ಸಹೋದರ ಸಾಗರ ಆಸ್ಪತ್ರೆಗೆ ಹೋಗಿ ನೋಡಿ ಪೋನ್ ಮಾಡಿ ಆತಂಕ ಪಡುವ ಪ್ರಸಂಗ ಇಲ್ಲ ಅಂದಾಗ ನೆಮ್ಮದಿ ಆಯಿತು.   ಇವರ ಹೆಸರು ಜಪರುಲ್ಲಾ ಮನೇನಲ್ಲಿ ಅನೇಕ ದೇವರ ಹರಕೆಯಿಂದ ಹುಟ್ಟಿದ ಗಂಡು ಮಗನಾದ್ದರಿಂದ ಮುಸ್ಲಿಂ ಸಂತರೋವ೯ರ ಮಾಪೀರ್ ಎಂಬ ಹೆಸರೆ ಈಗ ಊರಲ್ಲಿ ಚಾಲ್ತಿ, ಜನಾನುರಾಗಿ, ಕನ್ನಡ ಅಭಿಮಾನಿ, ಸವ೯ದಮ೯ದವರೂ ಇಷ್ಟ ಪಡುವ ಮಾಪೀರ್ ಸಾಹೇಬರು ತಮ್ಮ ಮಕ್ಕಳನ್ನು ಸಕಾ೯ರಿ ಕನ್ನಡ ಶಾಲೆಯಲ್ಲೇ ಓದಿಸುತ್ತಾರಾದ್ದರಿಂದ ನಮ್ಮ ಊರಿನ ಸರ್ಕಾರಿ ಶಾಲಾಭಿವೃದ್ಧಿ ಸಮಿತಿಗೆ ಅವಿರೋದ ಅಧ್ಯಕ್ಷರು ಕೂಡ ಇವರು ನಮ್ಮ ಊರ ಶಾಲೆಗೆ 25 ನೇ ವರ್ಷದ ಆಚರಣೆಯ ಬೆಳ್ಳಿಹಬ್ಬ ಸ್ಪಂತ ಹಣದಿಂದ ಅಮೋಘವಾಗಿ ನಡೆಸಿದ್ದು ದಾಖಲೆ, ಶಾಲಾ ಪ್ರಾರಂಭದಿಂದ ಸಹಕರಿಸಿದ ಜನಪ್ರತಿನಿದಿ, ಶಿಕ್ಷಕರನ್ನು, ಹಳೇ ವಿದ್ಯ

ಮದ್ಯ ವಯಸ್ಸಿನಲ್ಲಿ ತೂಕ ಇಳಿಸುವುದು ಸುಲಭವಲ್ಲ ನನ್ನ ಅನುಭವ

#ಶಿವರಾತ್ರಿಯಿಂದ_ಶಿವರಾತ್ರಿವರೆಗೆ #ಇಪ್ಪತ್ತು_ಕೇಜಿ_ತೂಕ_ಇಳಿಸಿಕೊಂಡಿದ್ದು #ಸ್ಥೂಲಕಾಯದವರಿಗೆ_ಸುಲಭ_ಉಪಾಯ    ಕಳೆದ ವರ್ಷ ಫೆಬ್ರುವರಿ 23ಕ್ಕೆ ಇರಬೇಕು ಶಿವರಾತ್ರಿ ಅವತ್ತೇ ತೀಮಾ೯ನ ಮಾಡಿದ್ದೆ ಮುಂದಿನ ವರ್ಷದ ಶಿವರಾತ್ರಿ ತನಕ ರಾತ್ರಿ ಊಟ ಬಿಡುವುದಂತ.    ನಮ್ಮ ತಂದೆ ಕೂಡ ರಾತ್ರಿ ಊಟ ಮಾಡುತ್ತಿರಲಿಲ್ಲ ಮಲಗುವಾಗ ಒಂದು ಲೋಟ ರಾಗಿ ಅಂಬಲಿ ಹಾಲು ಮಾತ್ರ ಅವರ ಪದ್ಧತಿ ಆಗಿತ್ತು.   ಕಳೆದ ವರ್ಷ ಜನವರಿಯಲ್ಲಿ ಶಿವಮೊಗ್ಗದ ಡಾಕ್ಟರ್ ಪ್ರೀತಂ (ನಮ್ಮ ಕುಟುಂಬ ವೈದ್ಯರು) ತಪಾಸಣೆಗೆ ಹೋದಾಗ ನನ್ನ ತೂಕ 133 - 135 ರ ಆಸುಪಾಸಿನಲ್ಲಿತ್ತು, ಡಯಾಬಿಟೀಸ್ ಖಾಲಿ ಹೊಟ್ಟೆಯಲ್ಲಿ 240 ಊಟದ ನಂತರ 300 ರ ಸಮೀಪ ಇರುತ್ತಿತ್ತು, ಹೊಟ್ಟೆ ಗುಡಾಣ ಆಗಿತ್ತು ಅದರ ಮಧ್ಯೆ ಹೊಕ್ಕುಳ ಹತ್ತಿರ ಹನಿ೯ಯಾ ಬೇರೆ.   ಹತ್ತಿಪ್ಪತ್ತು ಹೆಜ್ಜೆ ನಡೆಯಲು ಆಯಾಸ ಇದು ನನ್ನ ದೇಹದ ಒಳಗಿನ  ಬಯಾಲಾಜಿಕಲ್ ಕ್ಲಾಕ್ ಅಲಾರಂ ಮಾಡುತ್ತಿತ್ತು "ನಿನ್ನ ಆರೋಗ್ಯ ಹದಗೆಟ್ಟಿದೆ ಎಚ್ಚರ " ಅಂತ.   1995 ರ ತನಕ ನನ್ನ 35 ವರ್ಷದ ತನಕ ನನಗೆ ತೂಕದ ಸಮಸ್ಯೆ ಇರಲಿಲ್ಲ ನಂತರವೇ ಪ್ರಾರಂಭ ಆದ ತೂಕದ ಏರುಗತಿ 2001ರಲ್ಲಿ 120 ದಾಟಿ ಅಲ್ಲೇ ನಿಂತಿದ್ದು 2020ಕ್ಕೆ ಪುನಃ ತನ್ನ ಏರುಗತಿ ಪ್ರಾರಂಬಿಸಿತ್ತು.   ಪ್ರತಿ 3 ತಿಂಗಳಿಗೆ ತೊಡುವ ಬಟ್ಟೆ ಅಳತೆ ಬದಲಾಗಿ ಹೊಸ ಬಟ್ಟೆ ಬೇಕಾಗಿತ್ತು, ಬೇರಿಯಾಟ್ರಿಕ್ ಸಜ೯ರಿ ಮಾಡಿಸಿಕೊಳ್ಳುವ ಮನಸ್ಸೂ ಮಾಡಿದ್ದೆ ನಮ್ಮಲ್ಲಿಗೆ ಬೇಟಿ

2015 ರ ಬಾರಾಪಂತ್ ಯಾತ್ರೆಯಲ್ಲಿನ ಪಾತ್ರಾದೇವತೆಯ ವಿಶೇಷ ಪೂಜಾ ಪ್ರಸಾದ ಮುಂದಿನ 12 ವರ್ಷದ ವರೆಗೆ ಸಂರಕ್ಷಿಸಿಡಲು ನನಗೆ ನೀಡಿದ ಸಂತರು, ಅವರು ಅಕಸ್ಮಿಕವಾಗಿ ನಮ್ಮಲ್ಲಿಗೆ ಬರಲು ಕಾರಣ ಒಂದು ಪವಾಡವೇ?

ನಾಸಿಕ್ ಕುಂಭಮೇಳ ಸಂಪನ್ನವಾದ ಮರುದಿನ (2015 ರಲ್ಲಿ) ನಾಸಿಕ್ ನಿಂದ ಪಶ್ಚಿಮ ಘಟ್ಟ ತಪ್ಪಲಲ್ಲೇ ನೂರಾರು (2015 ರಲ್ಲಿ ಸುಮಾರು 600) ಸಂತರು ನಡೆದು ಬಂದು ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ತಲುಪುವ ಬಾರಾಪಂತ್ ಯಾತ್ರೆ ಬಗ್ಗೆ ಈಗೆಲ್ಲ ಕನಾ೯ಟಕ ರಾಜ್ಯದಲ್ಲಿ ಹೆಚ್ಚಿನ ಮಾಹಿತಿ ಇದೆ.  ಬಾರಾಪಂತ್ಯ ಯಾತ್ರೆ ಸಮಾರೋಪಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಕ್ ಪುರದ ಮಹಾಂತರಾದ ಜೋಗಿ ಆದಿತ್ಯನಾಥರು ಕೂಡ ಭಾಗವಹಿಸಿದ್ದರು.    ಈ ಯಾತ್ರೆ ಮುಗಿದ ನಂತರ ಭಾಗವಹಿಸಿದ ಅನೇಕ ಸಂತರು ಮಂಗಳೂರಿ೦ದ ವಾಪಾಸ್ ಹೋಗುತ್ತಾರೆ.   ಈ ರೀತಿ ಒಂದು ತಂಡ ಮಂಗಳೂರಿಂದ ತಾವು ನಡೆದು ಬಂದ ದಾರಿಯಲ್ಲೇ ಹಾವೇರಿ ಜಿಲ್ಲೆಯ ಲೋಕಿ ಮಠಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಅವರ ಮೂಲ ಸ್ಥಳಗಳಿಗೆ ಹೋಗುವ ಉದ್ದೇಶದಿಂದ ಭಕ್ತರು ವ್ಯವಸ್ಥೆ ಮಾಡಿದ 3 ಕಾರುಗಳಲ್ಲಿ ಹೊರಟಿದ್ದರು, ದಾರಿ ತಪ್ಪಿ ನನ್ನ ಮಲ್ಲಿಕಾ ವೆಜ್ ರೆಸ್ಟಾರಂಟ್ ತಲುಪಿದ್ದರು.   ಹೋಟೆಲ್ ನವರಿಗೆ ಕುಚಿ೯ ತಂದು ಹೊರಗೆ ಹಾಕು ನಾವು ಹೋಟೆಲ್ ಒಳಗೆ ಬರುವುದಿಲ್ಲ ಅಂತ ಅದೇಶ ಮಾಡಿದಾಗ ಸಿಬ್ಬಂದಿಗಳು ಗಾಭರಿ ಆಗಿದ್ದರು ಆಗ ನನ್ನ ಅಣ್ಣನ ಮಗ ನನ್ನ ಜೊತೆ ಬಾರಾಪಂತ್ ಯಾತ್ರೆ ಹೋಗುವಾಗ ನೋಡಿದ್ದರಿಂದ ಮತ್ತು ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿಯಲ್ಲಿ ನಡೆದ ಸತ್ಸಂಗ ಪೂಜೆಯಲ್ಲಿ ಭಾಗವಹಿಸಿದ್ದರಿಂದ ತಕ್ಷಣ ಅವರಿಗೆ ಹೋಟೆಲ್ ಹೊರಭಾಗದಲ್ಲಿ ಆಸನ ವ್ಯವಸ್ಥೆ