Skip to main content

2015 ರ ಬಾರಾಪಂತ್ ಯಾತ್ರೆಯಲ್ಲಿನ ಪಾತ್ರಾದೇವತೆಯ ವಿಶೇಷ ಪೂಜಾ ಪ್ರಸಾದ ಮುಂದಿನ 12 ವರ್ಷದ ವರೆಗೆ ಸಂರಕ್ಷಿಸಿಡಲು ನನಗೆ ನೀಡಿದ ಸಂತರು, ಅವರು ಅಕಸ್ಮಿಕವಾಗಿ ನಮ್ಮಲ್ಲಿಗೆ ಬರಲು ಕಾರಣ ಒಂದು ಪವಾಡವೇ?

ನಾಸಿಕ್ ಕುಂಭಮೇಳ ಸಂಪನ್ನವಾದ ಮರುದಿನ (2015 ರಲ್ಲಿ) ನಾಸಿಕ್ ನಿಂದ ಪಶ್ಚಿಮ ಘಟ್ಟ ತಪ್ಪಲಲ್ಲೇ ನೂರಾರು (2015 ರಲ್ಲಿ ಸುಮಾರು 600) ಸಂತರು ನಡೆದು ಬಂದು ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ತಲುಪುವ ಬಾರಾಪಂತ್ ಯಾತ್ರೆ ಬಗ್ಗೆ ಈಗೆಲ್ಲ ಕನಾ೯ಟಕ ರಾಜ್ಯದಲ್ಲಿ ಹೆಚ್ಚಿನ ಮಾಹಿತಿ ಇದೆ. ಬಾರಾಪಂತ್ಯ ಯಾತ್ರೆ ಸಮಾರೋಪಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಕ್ ಪುರದ ಮಹಾಂತರಾದ ಜೋಗಿ ಆದಿತ್ಯನಾಥರು ಕೂಡ ಭಾಗವಹಿಸಿದ್ದರು.
   ಈ ಯಾತ್ರೆ ಮುಗಿದ ನಂತರ ಭಾಗವಹಿಸಿದ ಅನೇಕ ಸಂತರು ಮಂಗಳೂರಿ೦ದ ವಾಪಾಸ್ ಹೋಗುತ್ತಾರೆ.
  ಈ ರೀತಿ ಒಂದು ತಂಡ ಮಂಗಳೂರಿಂದ ತಾವು ನಡೆದು ಬಂದ ದಾರಿಯಲ್ಲೇ ಹಾವೇರಿ ಜಿಲ್ಲೆಯ ಲೋಕಿ ಮಠಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಅವರ ಮೂಲ ಸ್ಥಳಗಳಿಗೆ ಹೋಗುವ ಉದ್ದೇಶದಿಂದ ಭಕ್ತರು ವ್ಯವಸ್ಥೆ ಮಾಡಿದ 3 ಕಾರುಗಳಲ್ಲಿ ಹೊರಟಿದ್ದರು, ದಾರಿ ತಪ್ಪಿ ನನ್ನ ಮಲ್ಲಿಕಾ ವೆಜ್ ರೆಸ್ಟಾರಂಟ್ ತಲುಪಿದ್ದರು.
  ಹೋಟೆಲ್ ನವರಿಗೆ ಕುಚಿ೯ ತಂದು ಹೊರಗೆ ಹಾಕು ನಾವು ಹೋಟೆಲ್ ಒಳಗೆ ಬರುವುದಿಲ್ಲ ಅಂತ ಅದೇಶ ಮಾಡಿದಾಗ ಸಿಬ್ಬಂದಿಗಳು ಗಾಭರಿ ಆಗಿದ್ದರು ಆಗ ನನ್ನ ಅಣ್ಣನ ಮಗ ನನ್ನ ಜೊತೆ ಬಾರಾಪಂತ್ ಯಾತ್ರೆ ಹೋಗುವಾಗ ನೋಡಿದ್ದರಿಂದ ಮತ್ತು ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿಯಲ್ಲಿ ನಡೆದ ಸತ್ಸಂಗ ಪೂಜೆಯಲ್ಲಿ ಭಾಗವಹಿಸಿದ್ದರಿಂದ ತಕ್ಷಣ ಅವರಿಗೆ ಹೋಟೆಲ್ ಹೊರಭಾಗದಲ್ಲಿ ಆಸನ ವ್ಯವಸ್ಥೆ ಮಾಡಿ ಅವರ ಒಪ್ಪಿಗೆ ಪಡೆದು ಚಹ ನೀಡಿದ್ದ.
  ನನ್ನ ಜೊತೆ ಸತ್ಸ೦ಗಕ್ಕೆ ಬಂದಿದ್ದ ನಮ್ಮ ಕೆಲಸಗಾರ ಕೃಷ್ಣಪ್ಪ " ಸಾರ್ ಬಾರಾಪಂತದ ಸನ್ಯಾಸಿಗಳು ಹೋಟೆಲ್ ಗೆ ಬಂದಿದ್ದಾರೆ" ಅಂತ ಸುದ್ದಿ ಮುಟ್ಟಿಸಿದಾಗ ಅವರ್ಯಾಕೆ ಹೋಟಿಲ್ ಗೆ ಬಂದರು? ಏನೇ ಆಗಲಿ ಅವರಿಗೇನು ಬೇಕು ಕೊಡಿ, ಅವರನ್ನು ಯಾವುದೇ ತೊಂದರೆ ಇಲ್ಲದೆ ಕಳಿಸಿ ಅಂತ ಹೇಳಿ ನಮ್ಮ ಮನೆಯ ಗೇಟಿನ ಹೊರಗಡೆ ಬಂದು ಇಣುಕಿದೆ.
  ನನ್ನ ನೋಡಿದವರೇ ಈ ಗುಂಪಿನ ಮುಖಂಡರು ಕೈ ಸನ್ನೆ ಮಾಡಿ ಕರೆದರು! ಹೋಗಿ ಅವರಿಗೆ ವಂದಿಸಿ ನಿಂತೆ, ಕುಳಿತುಕೊಳ್ಳಲು ಹೇಳಿದರು, ಅವರು ಹೋಗ ಬೇಕಾದ ಸ್ಥಳದ ಮಾಗ೯ ಡ್ರೈವರ್ ಗೆ ತಿಳಿಸಲು ಹೇಳಿದರು, ನಂತರ ಇನ್ನೊಂದು ಸುತ್ತಿನ ಚಹಾ ಕೇಳಿದರು.
  ಅವರ ಚೆಲುಮೆಗಳಲ್ಲಿ ಬೆಂಕಿಯ ಕಿಡಿ ಜ್ವಲಿಸಿತು, ದೂಮ ಆವರಿಸಿತು ಆಗಷ್ಟೇ ಸಂಜೆ ಕತ್ತಲಾಗುತ್ತಿತ್ತು  ನನಗೂ ಅದನ್ನು ಬಳಸುವ ಮನಸ್ಸಾಯಿತು, ವಿಶೇಷ ಜ್ಞಾನದಿಂದ ಅವರಿಗೆ ಗೊತ್ತಾಯಿತು ಎಂಬಂತೆ ಬೇರೆ ಬಟ್ಟಿ ಚಿಲುಮೆ ಕೆಳಬಾಗದಲ್ಲಿ ಸುತ್ತಿ ನನಗೆ ನೀಡಿದರು ನಾನೂ ಯಾವುದೇ ಅಂಜಿಕೆ ಇಲ್ಲದೇ ಅವತ್ತು ಸಾವ೯ಜನಿಕವಾಗಿ ಸಂತರ ಜೊತೆ ಚಿಲುಮೆ ಸೇದಿದೆ.
  ನಂತರ ನನ್ನ ಜೊತೆ ನನ್ನ ಕಲ್ಯಾಣ ಮಂಟಪದ ಬೋಡ್೯ ನಲ್ಲಿ ಬರೆದ ಬಗ್ಗೆ ಕೇಳಿದರು ನನ್ನ ತಂದೆ ತಾಯಿ ಸ್ಮಾರಕವಾಗಿ ಅವರ ಹೆಸರಲ್ಲಿ ನಿಮಿ೯ಸಿದ್ದು ತಿಳಿದು ತುಂಬಾ ಸಂತೋಷ ಪಟ್ಟರು, ನನ್ನ ಕಛೇರಿಯ ಒಳಗೆ ಕರೆದೊಯ್ದು ಗೌರವಿಸಿದೆ.
  ಆಗ ಅವರು ಹೇಳಿದ್ದು "ನಾವು ಮಾಗ೯ದಲ್ಲಿ ಯಾವುದೇ ಹೋಟೆಲ್ ಗೆ ಹೋಗುವುದಿಲ್ಲ ಆದರೆ ಇವತ್ತು ದಾರಿ ತಪ್ಪಿ ಇಲ್ಲಿಗೆ ಬರುವಂತಾಯಿತು, ಇದಕ್ಕೆ ಬೇರೇನೋ ಕಾರಣ ಇರಬಹುದು ನಮಗೂ ಗೊತ್ತಿಲ್ಲ" ಅಂದಾಗ ನಾನು ಇವರ ಯಾತ್ರೆಯಲ್ಲಿ 36 ವರ್ಷದ ಹಿಂದೆ ಬಂದು ಕುಂದಾಪುರ ತಾಲ್ಲೂಕಿನ ಕಮಲಶಿಲೆ ಸಮೀಪದ ಹಲವಾರಿ ಮಠದ ಸ್ವಾಮಿಗಳಾಗಿ ನೇಮಕವಾಗಿದ್ದ ಗ್ವಾಲೀಯರ್ ಮೂಲದ ಪೀರ್ ಸೋಮನಾಥ ಬಾವಾಜಿ ಮತ್ತು ನನ್ನ ಸಂಪಕ೯, ಅವರು ನನ್ನ ಅಭಿವೃದ್ದಿಗಾಗಿ ನನ್ನ ಕಷ್ಟದ ದಿನದಲ್ಲಿ ನನ್ನ ಮನೆಯ ದೇವರ ಮನೆಯಲ್ಲಿ ಪೂಜೆ ಮಾಡಿದ್ದು, ನಂತರ ನಮ್ಮ ಊರ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವದಲ್ಲಿ ಭಾಗವಹಿಸಿದ್ದು ನಂತರ ಅವರು ಈ ಬಾರಿಯ ಬಾರಾಪಂಥ್ ಯಾತ್ರೆಗೆ ಹೆಚ್ಚಿನ ಪ್ರಚಾರ ನೀಡಲು ಆದೇಶ ಮಾಡಿದ್ದು ನೆನಪಿಸಿದೆ.
  ಅವತ್ತಿನ ಪ್ರಖ್ಯಾತ ಪತ್ರಿಕೆ ಹಾಯ್ ಬೆಂಗಳೂರಿನಲ್ಲಿ ಶ್ರಂಗೇಶ್ ರು ಮಾಡಿದ ವರದಿ ಪರಿಣಾಮ ಎಲ್ಲಾ ಸುದ್ದಿ ಸಂಸ್ಥೆಗಳು, ದೂರದರ್ಶನಗಳು ಅತಿ ಹೆಚ್ಚು ಸುದ್ದಿ ಸಂದರ್ಶನ ಪ್ರಕಟಿಸಿ ಸೋಮನಾಥ ಗುರೂಜಿ ಅವರ ಉದ್ದೇಶ ಈಡೇರಿದ್ದನ್ನು ಸ್ಮರಿಸಿದಾಗ ಅವರೆಲ್ಲರೂ "ಇದೇ ಕಾರಣವೇ ನಮ್ಮ ನಿಮ್ಮ ಬೇಟಿ " ಅಂದರು ಮತ್ತು ಈ ಅಕಸ್ಮಿಕ ಬೇಟಿಯ ನೆನಪಿಗಾಗಿ ಆರು ತಿಂಗಳ ನಾಸಿಕ್ ನಿಂದ ತಲೆಯ ಮೇಲೆ ಹೊತ್ತು ತರುವ ಪಾತ್ರಾ ದೇವತೆಯನ್ನು ಮಂಗಳೂರಿಗೆ ತಲುಪಿಸಿದ ನಂತರ ಮಾಡುವ ವಿಶೇಷ ಪೂಜೆಯ ಪ್ರಸಾದ ನನಗೆ ನೀಡಿ ಮುಂದಿನ ಬಾರಾಪಂತ್ ಯಾತ್ರೆ ( 12ವರ್ಷದ ನಂತರ) ವರೆಗೆ ಸಂರಕ್ಷಿಸಿಡಲು ನೀಡಿದ್ದು ನನ್ನ ಪುಣ್ಯ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ