Skip to main content

Posts

Showing posts from May, 2021

ಭಾಗ - 28, ಬ್ರಿಟೀಷರ ಮೋಜು ಮಸ್ತಿ ಮತ್ತು ವಿಶ್ರಾಂತಿಗೆ ನಿರ್ಮಿಸಿದ್ದ ಒಂದು ಕಾಲದ ಐಶಾರಾಮಿ ಬಂಗಲೆ.ಮೂರು ಶತಮಾನಕ್ಕೂ ನಂಟಿರುವ ಹಾಲಿ ಯಡೇಹಳ್ಳಿಯ ಹೊಸನಗರ ರಸ್ತೆಯ ಆನಂದಪುರಂನ ಈಗಿನ ಪ್ರವಾಸಿ ಮಂದಿರ, ಆನಂದಪುರಂ ತಾಲ್ಲೂಕ್ ಕೇಂದ್ರ ಆಗಿದ್ದಾಗ ತಾಲ್ಲೂಕ್ ಕಚೇರಿ, ಸಾಗರ ತಾಲ್ಲೂಕಿನ ಮೊದಲ ನ್ಯಾಯಾಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಕೂಡ ಆಗಿತ್ತು.

#ಭಾಗ_28 #ಬ್ರಿಟೀಷರ_ಆಡಳಿತದ_ಪಳಿಯುಳಿಕೆಯಂತೆ_ಉಳಿದಿರುವ_ಆನಂದಪುರಂನ_ಪ್ರವಾಸಿ_ಮಂದಿರ. #ಸುಮಾರು_ಮೂರು_ಶತಮಾನಕ್ಕೂ_ನಂಟು_ಇದೆ. #ಆನಂದಪುರಂ_ತಾಲ್ಲೂಕ್_ಆಗಿದ್ದಾಗ_ಇದು_ತಾಲ್ಲೂಕ್_ಕಚೇರಿ. #ಸಾಗರ_ತಾಲ್ಲೂಕಿನ_ಮೊದಲ_ನ್ಯಾಯಾಲಯ_ಕಚೇರಿ_ಇದಾಗಿತ್ತು. #ಆನಂದಪುರಂ_ಸ್ಟೇಟ್_ಬ್ಯಾಂಕ್_ಆಫ್_ಮೈಸೂರು_ಮೊದಲ_ಬ್ರಾಂಚ್_ಇದೇ_ಕಟ್ಟಡ_ಆಗಿತ್ತು. #ಇಲ್ಲಿ_ತಂಗಿದ್ದ_ಮಹನೀಯರು_ಅನೇಕರು.   ಬ್ರಿಟಿಷರು ಯಡೇಹಳ್ಳಿಯ ದಟ್ಟ ಅರಣ್ಯದ ಮಧ್ಯೆ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಕಟ್ಟಿದ ಈ ಸುಸಜ್ಜಿತವಾದ ಬಂಗ್ಲೆ ಆ ಕಾಲದಲ್ಲಿ A ಗ್ರೇಡಿನದ್ದಂತೆ.   ಪೂರ್ವದ ಎಡಗಡೆ ತಾವರೆಕೆರೆ ಬಲ ಬಾಗದಲ್ಲಿ ಶಿವಮೊಗ್ಗ ಕೊಲ್ಲೂರು ಹೆದ್ದಾರಿ ಇದೆ, ಕಾಡುಪ್ರಾಣಿಗಳು ನೀರು ಕುಡಿಯಲು ಬಂದಾಗ ಬ್ರಿಟೀಷ್ ದೊರೆಗಳು ಶಿಕಾರಿ ಮಾಡಲು ಅನುಕೂಲ ಇತ್ತು.   ಸುಮಾರು 5 ಎಕರೆ ಪ್ರದೇಶದ ಮಧ್ಯದಲ್ಲಿ ಅತ್ಯುತ್ತಮ ಎರೆಡು ಬೆಡ್ ರೂಂನ (ಅಟ್ಯಾಚ್ ಟಾಯಲೆಟ್ ಇರುವ) ಸೂರ್ಯೋದಯ ಮತ್ತು ಸೂಯಾ೯ಸ್ಥಗಳ ವೀಕ್ಷಣೆಗೆ ವರಾಂಡಗಳಿರುವ, ಸುಸಜ್ಜಿತ ಅಡುಗೆ ಮನೆ ಮತ್ತು ಹಾವು ಇತ್ಯಾಧಿ ಸರಿಸೃಪಗಳಿಂದ ರಕ್ಷಣೆಗಾಗಿ ಸುಮಾರು 4 ಅಡಿ ಎತ್ತರದ ಅಡಿಪಾಯದ ವಿಷಾಲವಾದ ಮೆಟ್ಟಿಲುಗಳ ಈ ಸುಸಜ್ಜಿತ ಕಟ್ಟಡದ ಉತ್ತರಕ್ಕೆ ತೆರೆದ ಬಾವಿ ಅದರ ಸಮೀಪ ಬಂಗ್ಲೆ ಕಾವಲುಗಾರನ ಮನೆ ನಿರ್ಮಿಸಿದ್ದಾರೆ.   ಇಲ್ಲಿ ತಂಗಿ ವಿಹರಿಸಲು ಬ್ರಿಟಿಷರಿಗೆ ಇದು ಸೊಗಸಾದ ಸುಸಜ್ಜಿತವಾದ ತಂಗುದಾಣವಾಗಿ ನೂರಾ

ಕೊರಾನಾ ಎರಡನೆ ಅಲೆ ಇನ್ನೆಷ್ಟು ದಿನ, ಇನ್ನೆಷ್ಟು ಬಲಿ? ಕಿರಿಯ ಮಿತ್ರ ಷಪಿಯುಲ್ಲಾಗೆ ಶ್ರದ್ದಾಂಜಲಿಗಳು.

#ಶ್ರದ್ಧಾಂಜಲಿಗಳು_ಕಿರಿಯ_ಗೆಳೆಯ_ಷಫಿಯುಲ್ಲಾ_ಹಾದೀಬೀಸು. #ನಮ್ಮ_ಕುಟುಂಬದ_ಆರೋಗ್ಯ_ಕವಚ_ನಾವೇ_ನಿರ್ಮಿಸೋಣ #ಮೈ_ಮರೆಯಬೇಡಿ_ಕೊರಾನಾ_ಸುಳ್ಳು_ಎನ್ನುವವರನ್ನು_ನಂಬಬೇಡಿ.    ನಮ್ಮ ಊರಿನ ಹಾದೀಬೀಸು ಇಬ್ರಾಹಿಂ ಸಾಹೇಬರ ಪುತ್ರ ಮೆಕ್ಯಾನಿಕ್ ಗಲ್ಫ್ ನಿಂದ ಬಂದ ನಂತರ ರಿಕ್ಷಾ ನಡೆಸುತ್ತಿದ್ದರು ಇವರು ಮದುವೆ ಆಗಿದ್ದು ಆನಂದಪುರಂ ಪದವಿ ಪೂರ್ವ ಕಾಲೇಜಲ್ಲಿ ಉದ್ಯೋಗಿ ಆಗಿದ್ದ ಶ್ರೀಮತಿ ಮಮ್ತಾಜ್ ಪುತ್ರಿಯನ್ನು.   ಇವತ್ತು ಬೆಳಿಗ್ಗೆ ಮರಣವಾರ್ತೆ ಬಂದಿದೆ, ಊರಲ್ಲಿ ಮತ್ತು ಇವರ ಗೆಳೆಯರಲ್ಲಿ ವಿಷಾದ ಮಡುಗಟ್ಟಿದೆ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಮಂಗಳೂರಿನ ಎನ್ನಾಪೋಯಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಹೋದರೂ ಬದುಕಿಸಲಾಗಲಿಲ್ಲ.  ಮಂಗಳೂರಿಂದ ಬರಲಿರುವ ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಅವರ ಅಂದು ಬಂದುಗಳು ತಯಾರಿ ನಡೆಸಿದ್ದಾರೆ.   ಕೊರಾನಾ ಎರಡನೆ ಅಲೆ ಯಾವತ್ತು ಕೊನೆ ಆಗುತ್ತೋ? ಇನ್ನು ಎಷ್ಟು ಬಲಿ ಪಡೆಯುತ್ತೋ ? ಮೂರನೆ ಅಲೆ ಹೇಗೋ? ಯಾರಿಗೂ ಗೊತ್ತಿಲ್ಲ.   ಇವರ ಅಜ್ಜ ಹಾದೀಬೀಸು ಮೈದೀನ್ ಸಾಹೇಬರು (ನಗರದಿಂದ ಬಂದಿದ್ದರಿಂದ ನಗರದ ಮೈದೀನ್ ಸಾಹೇಬರು ಅಂತಲೂ ಕರೆಯುತ್ತಿದ್ದರು) ಆ ಕಾಲದಲ್ಲಿ ಇವರು, ದಂಡಿಗೆಸರ ಪುಟ್ಟ ಸೇರೆಗಾರರು ಗಳಸ್ಯ ಕಂಠಸ್ಯ ಗೆಳೆಯರು, ಊರಿಗೆ ಯಕ್ಷಗಾನ ಬಂದಾಗ ಇವರಿಬ್ಬರೂ ತಪ್ಪಿಸುತ್ತಿರಲಿಲ್ಲ, ಬೆಳ್ಳಂಬೆಳಗೆ ಯುಕ್ಷಗಾನ ನೋಡಿ ಬಂದವರು ನಮ್ಮ ಹಳೆಯ ಮನೆಯ ಕಟಾಂಜನದಲ್ಲಿ ಕುಳಿತು ಅವತ್ತಿನ ಪ್ರಸಂ

ಭಾಗ - 27, ಮಾದರಿ ಆನಂದಪುರಂ ಕಟ್ಟುವಲ್ಲಿ ದೈಹಿಕ ಶಿಕ್ಷಕರಾದ S.R. ಕೃಷ್ಣಪ್ಪರ ಶ್ರಮವಿದೆ, ಇವರ ದೂರದೃಷ್ಟಿಯ ಯೋಜನೆಗಳನ್ನು ಅಯ್ಯಂಗಾರ್ ಕುಟುಂಬ ಬಳಸಿಕೊಂಡಿತು, ಇಡೀ ಆನಂದಪುರಂ ಇವರ ಹಿಂದೆ ಸಾಗಿದ್ದು ಒಂದು ಇತಿಹಾಸ.

#ಭಾಗ_27. #ಆನಂದಪುರಂ_ಮಾದರಿ_ಊರಾಗಲು_ದೈಹಿಕ_ಶಿಕ್ಷಕರಾದ_ಎಸ್_ಆರ್_ಕೃಷ್ಣಪ್ಪರ_ಸೇವೆ_ಮತ್ತು_ಸಲಹೆ_ಮರೆಯಲಾಗದ್ದು, #ಆನಂದಪುರಂಗೆ_ಬ್ಯಾಂಕ್_ಹಾಸ್ಟೆಲ್_ಅರುಣೋದಯ_ಕಲಾವೃಂದ_ರೋಟರಿಕ್ಷಬ್_ತಂದವರು #ಶಿಸ್ತಿನ_ಸೇವಾದಳದ_ಪ್ರಮುಖರು. #ಜಾತ್ಯಾತೀತರು_ದೈವ_ಭಕ್ತರು_ಮತ್ತು_ದೂರ_ದೃಷ್ಠಿಯವರು. #ಬದರಿನಾರಾಯಣ_ಅಯ್ಯಂಗಾರರು_ವೆಂಕಟಾಚಲಾಯ್ಯಂಗಾರರು_ಇಡೀ_ವಿಲೇಜ್_ಪಂಚಾಯತ್_ಇವರ_ಮಾತು_ಮೀರುತ್ತಿರಲಿಲ್ಲ.       ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರಾಮಪ್ಪರ ಪುತ್ರ S.R. ಕೃಷ್ಣಪ್ಪರವರು 1961ರಲ್ಲಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನುಗ್ಗೇಹಳ್ಳಿ ಪ್ರೌಡ ಶಾಲೆಯಿಂದ ವರ್ಗವಾಗಿ ಆನಂದಪುರಂನ ಜಿಲ್ಲಾ ಬೋರ್ಡ್ ಪ್ರೌಡ ಶಾಲೆಗೆ ದೈಹಿಕ ಶಿಕ್ಷಕರಾಗಿ ವರ್ಗವಾಗಿ ಬಂದವರು ಸುಮಾರು 15 ವರ್ಷ ಆನಂದಪುರಂನಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸ್ವಂತ ಊರಾದ ಶಿಕಾರಿಪುರಕ್ಕೆ ಹೋಗಿ ನೆಲೆಸುತ್ತಾರೆ.   ಇವರನ್ನು ಆನಂದಪುರಂನಿಂದ ಕಳಿಸಲು ಇಡೀ ಊರೇ ವಿರೋದಿಸಿತ್ತು, ಹಳಿಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳು ಅವರ ಪೋಷಕರು, ಸುತ್ತಮುತ್ತಲಿನ ಶಾಲಾ ಶಿಕ್ಷಕರು, ವಿಲೇಜ್ ಪಂಚಾಯತ್ ಅಧ್ಯಕ್ಷರು ಸದಸ್ಯರು, ಬದರಿನಾರಾಯಣ ಆಯ್ಯಂಗಾರರು ಅವರ ಅಣ್ಣ ವೆಂಕಟಚಲ ಆಯ್ಯಂಗಾರರು ಹೀಗೆ ಇಡೀ ಊರೇ ಇವರು ವರ್ಗಾಯಿಸಿಕೊಂಡು ಹೋಗಲು ಬಿಡಲಿಲ್ಲ.   ಒಂದು ಹಂತದಲ್ಲಿ ಅಯ್ಯಂಗಾರ್ ಕುಟುಂಬದವರು ಇವರು ಬಾಡಿಗೆಗೆ ಇದ್ದ ಮನೆ ಅಲ್ಲದೆ ಪಕ್ಕದ ಇನ್ನೊ

ಭಾಗ - 26, ಆನಂದಪುರಂ ವೆಂಕಟಾಚಲ ಆಯ್ಯ೦ಗಾರರಿಗೆ ಭ್ರಮನಿರಸನ ಮಾಡಿದ ವಿಲೇಜ್ ಪಂಚಾಯತ್ ಛೇರ್ಮನ್ ಸ್ಥಾನ.

#ಭಾಗ_26. #ವೆ೦ಕಟಾಚಲ_ಅಯ್ಯಂಗಾರರನ್ನು_ಆನಂದಪುರಂ_ವಿಲೇಜ್_ಪಂಚಾಯತ್_ಅಧ್ಯಕ್ಷ_ಗಾದಿ_ತಪ್ಪಿಸಿದ_ಘಟನೆ. #ಸಹೋದರ_ಬದರಿನಾರಾಯಣ_ಅಯ್ಯಂಗಾರನ್ನು_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ತಲುಪಿಸಿದಾಗಲೇ_ನಡೆದ_ಘಟನೆ.   #ಬಂಡಾಯದ_ಗುಂಪಿನ_ಬೆಂಬಲ_ಪಡೆದ_ಆ_ಕಾಲದ_ಚಾಣಕ್ಷ_ರಾಜಕಾರಣಿ_ಭಾಲಗಂಗಾದರಪ್ಪಗೌಡರು . #ವೆಂಕಟಾಚಲ_ಅಯ್ಯಂಗಾರ_ಅಧಿಕಾರದಿಂದ_ಬದಿಗೆ_ಸರಿಸಿದ_ಯಡೇಹಳ್ಳಿಜಲೀಲ್_ಸಾಬ್_ಮತ್ತು_ಮಲಂದೂರಿನ_ವಸಂತಪ್ಪ_ಜೋಡಿ  1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಇವರ ತಮ್ಮ ಬದರಿನಾರಾಯಣ ಆಯ್ಯಂಗಾರರು ಕಾಗೋಡು ಭೂಹೋರಾಟದ ಪ್ರಭಾವದಿಂದ ಸಾಗರ - ಹೊಸನಗರ- ತೀರ್ಥಳ್ಳಿ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರ ಎದುರು ಪರಾಜಿತರಾದದ್ದು ಅವರ ತಂದೆ ಜಮೀನ್ದಾರ್ ಕೊಡುಗೈ ದಾನಿ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಈ ಪಲಿತಾಂಶದಿಂದ ಹೃದಯಾಘಾತದಿಂದ ಮೃತರಾದ ನಂತರ ಕುಟುಂಬದ ಜವಾಬ್ದಾರಿ ಜೊತೆಗೆ ತಮ್ಮನನ್ನು ವಿಧಾನಸಭೆಗೆ ಕಳಿಸಲೇ ಬೇಕೆಂದು ಎಲ್ಲಾ ರೀತಿಯ ಸಂಘಟನೆ ಮಾಡಿ 1957 ರ ಚುನಾವಣೆಯಲ್ಲಿ ತಮ್ಮ ಗುರಿ ಸಾದಿಸುವ ವೆಂಕಟಾಚಲ ಅಯ್ಯಂಗಾರ್ ಕೂಡ ಸತತವಾಗಿ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆರಿಸಿ ಬರುತ್ತಾರೆ ಮತ್ತು ನಿರಂತರವಾಗಿ ಚೇಮ೯ನ್ ಆಗಿ ಅವಿರೋದವಾಗಿ ಆಯ್ಕೆ ಆಗಿ ಆಡಳಿತ ನಡೆಸುತ್ತಾ ಬರುತ್ತಾರೆ.   ವೆಂಕಟಾಚಲ ಆಯ್ಯಂಗಾರರ ಮಾತಿಗೆ ಜಿಲ್ಲಾ ಆಡಳಿತ ಬೆಲೆ ನೀಡ

ಮಂಗಳೂರಿನ ರೈತ ಸ್ನೇಹಿ ಮೋಣು ಇಕ್ಬಾಲ್ ಸಾಹೇಬರು ಸರಬರಾಜು ಮಾಡುವ ಮೀನು, ಕೋಳಿ ಗೊಬ್ಬರ, ಮೂಳೆ ಪುಡಿ, ಎರೆಹುಳ, ಹರಳೆ ಗೊಬ್ಬರ ಮತ್ತು ಬೇವಿನ ಹಿಂಡಿ ಮಿಶ್ರಣ ಶುಂಠಿ, ಅಡಿಕೆ, ತೆಂಗು ಮತ್ತು ರಬ್ಬರ್ ಗೆ ಸೂಪರ್ ಗೊಬ್ಬರ.

#ಮೀನಿನಪುಡಿ_ಮೂಳೆಪುಡಿ_ಬೇವಿನಹಿಂಡಿ_ಕೋಳಿಗೊಬ್ಬರದ_ಈ_ಮಿಶ್ರಗೊಬ್ಬರದ_ಪಲಿತಾಂಶ_ಅದ್ಬುತ #ಮಂಗಳೂರಿನ_ಮೋನು_ಇಕ್ಬಾಲ್_ಎಂಬ_ರೈತ_ಸ್ನೇಹಿ_ಗೊಬ್ಬರ_ಸರಬರಾಜುದಾರ #ಶುಂಠಿ_ಅಡಿಕೆ_ತೆಂಗು_ಮತ್ತು_ರಬ್ಬರ್_ಬೆಳೆಯಲ್ಲಿ_ಹೆಚ್ಚು_ಇಳುವರಿ_ಸಾಧ್ಯ. #ರಬ್ಬರ್_ಬೇಸಾಯದಲ್ಲಿ_ನನ್ನ_ಸ್ವಂತ_ಅನುಭವ.   ಕೆಲ ವರ್ಷದ ಹಿಂದೆ ನಮ್ಮ ಊರ ಸಮೀಪದ ಗೌಡರು ಅಡಿಕೆ ತೋಟಕ್ಕೆ ಮೀನಿನ ಗೊಬ್ಬರ ಹಾಕಿಸಿದರು ಅನ್ನುವುದೇ ದೊಡ್ಡ ಸುದ್ದಿ ಯಾಕೆಂದರೆ ಮಾಂಸಹಾರಿಗಳು ಅಲ್ಲದವರು ಮೀನು ಗೊಬ್ಬರ ಹಾಕಲು ಒಪ್ಪುವುದು ಕಷ್ಟಸಾಧ್ಯ.   ಒಂದೆರೆಡು ವರ್ಷದಲ್ಲಿ ಅವರ ಅಡಿಕೆ ಇಳುವರಿ ಹೆಚ್ಚು ಇದೆ, ಮಿಡಿ ಅಡಿಕೆ ಉದುರುವುದು ಕಡಿಮೆ, ಅಡಿಕೆ ತೋಟ ಹಸಿರಾಗಿದೆ ಅಂತೆಲ್ಲ ಸುದ್ದಿಯೂ ಬಂತು ಆದರೆ ಈ ಗೊಬ್ಬರ ಯಾರಲ್ಲಿ ಸಿಗುತ್ತೆ, ಎಲ್ಲಿ ಸಿಗುತ್ತೆ ಅಂತ ಮಾಹಿತಿ ಇರಲಿಲ್ಲ.   ನನ್ನ ರಬ್ಬರ್ ಕೃಷಿಗೆ ಸಲಹೆ ಸಹಕಾರ ನೀಡುವ ನಾಗೇಶ್ ಗೌಡರು ಮಂಗಳೂರು ಕೇರಳದಲ್ಲಿ ಮೂಳೆ ಪುಡಿ ಮೀನು ಗೊಬ್ಬರ ಸಿಗುತ್ತೆ ತಂದು ನಿಮ್ಮ ರಬ್ಬರ್ ಗೆ ಹಾಕಿ ರಬ್ಬರ್ ಹಾಲು ಜಾಸ್ತಿ ಬರುತ್ತೆ ಅಂತಲೇ ಇದ್ದರು.    ಈ ಗೊಬ್ಬರ ಮಾರಾಟಗಾರರು ಅಂತ ಕೆಲವರಲ್ಲಿ ಸಂಪರ್ಕಿಸಿದೆ ಆದರೆ ಅವರು ಮಾರುವ ಗೊಬ್ಬರ ಗುಣಮಟ್ಟ ಇರಲಿಲ್ಲ, ಹೀಗಿರುವಾಗಲೇ ಒಂದು ದಿನ ಮೋನು ಇಕ್ಬಾಲ್ ಅಂತ ಮಂಗಳೂರಿಂದ ಬಂದು ನಮ್ಮ ಲಾಡ್ಜ್ ನಲ್ಲಿ ಉಳಿದರು ಅವರೇ ನಮ್ಮ ಊರಿನ ಗೌಡರಿಗೆ ಮೀನು ಗೊಬ್ಬರ ಪ್ರತಿ ವರ್ಷ ಸ

ಭಾಗ - 25, ಆನಂದಪುರಂನ ಪುರಾತನ ಬ್ರಹ್ಮಪುರಿ ಆಂಜನೇಯ ದೇವರ ಪರಿವಾರದ ಎ.ಎಸ್. ಆನಂದ್ ರಾಜ್ಯ ಸರ್ಕಾರದ ಸಾವಯವ ಕೃಷಿ ಮಿಷನ್ ಅಧ್ಯಕ್ಷರು

#ಭಾಗ_25. #ರಾಜ್ಯಸರ್ಕಾರದ_ಈಗಿನ_ಸಾವಯುವ_ಕೃಷಿ_ಮಿಷನ್_ಅಧ್ಯಕ್ಷರ_ಪೂರ್ತಿ_ಹೆಸರು #ಆನಂದಪುರಂ_ಶ್ರೀಪಾದಆಚಾರ್_ಆನಂದ್. #ಇವರು_ಆನಂದಪುರಂಗೆ_ಬ್ರಹ್ಮಪುರಿ_ಆಂಜನೇಯ_ತಂದ_ಕುಟುಂಬದವರು #ಈಗ_ಸಾಗರ_ಸಮೀಪದ_ಲಿಂಗದಳ್ಳಿಯಲ್ಲಿ_ಸಾವಯುವ_ಕೃಷಿ_ಪ್ರಯೋಗಶಾಲೆ_ಮಾಡಿದ್ದಾರೆ.   ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದಾಗೆಲ್ಲ ಎ.ಎಸ್ ಆನಂದ್ ರನ್ನು ಸಾವಯವ, ಜೀವ ವೈವಿಧ್ಯ, ಪಶ್ಚಿಮ ಘಟ್ಟ ಅಭಿವೃದ್ಧಿಯ ಬಗ್ಗೆಯ ನಿಗಮದ ಅಧ್ಯಕ್ಷರನ್ನಾಗಿ ಮಾಡಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುತ್ತಾರೆ, ಅವರಿಗೆ ನೀಡಿದ ಜವಾಬ್ದಾರಿಯನ್ನು ಅಷ್ಟೆ ಮುತುವಜಿ೯ಯಿಂದ ನಿರ್ವಹಿಸುತ್ತಾರೆ.   ಪ್ರಚಾರ ಪ್ರಿಯರಲ್ಲದ ಇವರು ಸಭೆ ಸಮಾರಂಭದಿಂದ ದೂರವಿರುತ್ತಾರೆ ಆದರೆ ಸಾವಯವ ಕೃಷಿ ಪರವಾರದ ಸದಸ್ಯರಲ್ಲಿ ತುಂಬಾ ಹತ್ತಿರ ಇರುತ್ತಾರೆ.    2004ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರನ್ನ ರಾಜ್ಯಕ್ಕೆ ಕರೆ ತರುವ ಮಹತ್ತರ ಕಾರ್ಯಕ್ರಮದಲ್ಲಿ ಇವರು ಮುಂಚೂಣಿಯಲ್ಲಿದ್ದರು.   ಈಗ ಸಾಗರದ ಲಿಂಗದಳ್ಳಿ (ಎಲ್.ಟಿ.ಹೆಗ್ಗಡೆಯವರ ಊರು)ಯಲ್ಲಿ ಸಾವಯವ ಕೃಷಿ, ಗೋಶಾಲೆ, ಸಾವಯವ ಕೃಷಿ ಸಂಶೋಧನೆ ಮಾಡುತ್ತಿದ್ದಾರೆ.    ಆನಂದಪುರಂನ ಪ್ರಾಣೇಶ್ ಆಚಾರ್ ತಂದೆ ಶಿಕ್ಷಕರಾಗಿದ್ದ ಶೇಷಾಚಾರ್ ರ ದಾಯಾದಿ ಆನಂದಪುರಂ ಶ್ರೀನಿವಾಸಾಚಾರ್ ಗೆ 1966 ರಲ್ಲಿ ಸಾಗರದಲ್ಲಿ ಪೋಲಿಸ್ ಇಲಾಖೆಯಲ್ಲಿ DySP ಆಗಿದ್ದ ಮಗ ರಾ

ಸಾಗರದ ಮೆಸ್ಕಾಂ ವಿದ್ಯತ್ ಗುತ್ತಿಗೆದಾರ ಶ್ರೀಕಾಂತ್ ಕಾಮತ್ ಮತ್ತು ಅವರ ಇಬ್ಬರು ಗೆಳೆಯರು ಇಹ ಲೋಕ ತ್ಯಜಿಸಿದವರ ಶರೀರ ಮುಕ್ತಿಗೆ ಸಹಕರಿಸುವ ನಿರಂತರ ಕಾಯ೯ ಅಭಿನಂದನೀಯ.

#ಇಹದಲ್ಲಿ_ಉಳಿದವರು_ಇಹಯಾತ್ರೆ_ಮುಗಿಸಿದವರ_ಶರೀರ_ಮುಕ್ತಿಗೆ_ಸಹಕರಿಸಬೇಕು. #ಸಾಗರದ_ವಿದ್ಯುತ್_ಗುತ್ತಿಗೆದಾರ_ಶ್ರೀಕಾಂತ್_ಕಾಮತ್_ಮತ್ತು_ಸಂಗಡಿಗರ_ಅಂತಿಮ_ಯಾತ್ರೆಗೆ_ಸಹಕರಿಸುವ_ಪರಿ   ನಿನ್ನೆ ಗೆಳೆಯರಾದ ನಾಗೇಂದ್ರ ಸಾಗರ್ ಅವರ ಪೋಸ್ಟ್ ನಲ್ಲಿ ಅವರ ಗೆಳೆಯ ಕಮಲಾಕ್ಷ ಪಡಿಯಾರ್ ( ಹಾಲಿ ಯಡಜಿಗಳೆಮನೆಯಲ್ಲಿ ಪ್ರಾವಿಜನ್ ಸ್ಟೋರ್) ತಾಯಿ ಮೃತರಾದ ಬಗ್ಗೆ, ಅವರು ಅಲ್ಲಿಗೆ ಹೋದಾಗ ಸಾಗರದ ಶ್ರೀಕಾಂತ್ ಕಾಮತ್ ಮತ್ತು ಗೆಳೆಯರು ಕಮಲಾಕ್ಷರಿಗೆ ಅವರ ತಾಯಿಯ ಅಂತ್ಯ ಸಂಸ್ಕಾರದ ಬಗ್ಗೆ ಸಹಕರಿಸಿದ ಬಗ್ಗೆ ಬರೆದಿದ್ದರು.   ಕಮಲಾಕ್ಷ ಪಡಿಯಾರ್ ನನ್ನ ಶಾಲಾ ಸಹಪಾಟಿ ಕೂಡ, ಪ್ರಾಕ್ಟಿಕಲ್ ಮನುಷ್ಯ, ಮನುಷ್ಯತ್ವಕ್ಕೆ ಗೌರವಿಸುವ ವ್ಯಕ್ತಿತ್ವದ ಗೆಳೆಯ.    2012ರಿಂದ ನಮ್ಮ ಸಂಸ್ಥೆಯ ವಿದ್ಯುತ್ ಸಂಬಂದ ಪಟ್ಟ ಎಲ್ಲಾ ಕಛೇರಿ ಕೆಲಸ ಸಾಗರದ ವಿದ್ಯುತ್ ಗುತ್ತಿಗೆದಾರರಾದ ಶ್ರೀಕಾಂತ್ ಕಾಮತ್ ರದ್ದೆ, ನಾನು ವಿಶೇಷವಾಗಿ ಇವರನ್ನು ಇಷ್ಟ ಪಡಲು ಕಾರಣ ಇವರು ಮೆಸ್ಕಾಂ ನ ಎಲ್ಲಾ ಕಾನೂನು ಕಾಯ್ದೆ ಆಯಾ ಕಾಲಕ್ಕೆ ಅನುಗುಣವಾಗಿ ಓದಿರುತ್ತಾರೆ, ವಿದ್ಯುತ್ ಬಳಕೆದಾರರ ಹಕ್ಕುಗಳ ಬಗ್ಗೆ ವಿವರಿಸುತ್ತಾರೆ, ತಪ್ಪು ಮಾಹಿತಿ ಯಾವ ಕಾರಣಕ್ಕೂ ನೀಡುವುದಿಲ್ಲ, ಹಣದ ಬಗ್ಗೆ ದುರಾಸೆ ಇಲ್ಲ.   ನಮ್ಮ ಊರ ದೇವಾಲಯ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಕೆಲ ಗುತ್ತಿ

ಭಾಗ - 24,ಸುಮಾರು 400 ವರ್ಷದ ಹಿಂದೆ ದೂರದ ಗುಲ್ಬರ್ಗಾ ಜಿಲ್ಲೆಯ ಬ್ರಹ್ಮಪುರಿಯಿಂದ ಬಹುಮನಿ ಸುಲ್ತಾನರ ಅಕ್ರಮಣದಿಂದ ಕೆಳದಿ ರಾಜಾಶ್ರಯ ಬಯಸಿ ಆನಂದಪುರಕ್ಕೆ ಬ್ರಹ್ಮಪುರಿ ಆಂಜನೇಯನೊಂದಿಗೆ ಬಂದು ನೆಲೆಸಿದ ಮಾದ್ವ ಕುಟುಂಬದ ಇತಿಹಾಸದ ನಿಜ ಕಥೆ. (ರಂಗನಾಥ ಸ್ವಾಮಿ ದೇವಾಲಯದ ಸಮೀಪದ ಬ್ರಹ್ಮಪುರಿ ಆಂಜನೇಯ ಮೂಲ ವಿಗ್ರಹ ಈಗ ಪುನರ್ ಪ್ರತಿಷ್ಟಾಪನೆ ಆಗಿದೆ)

#ಭಾಗ_24. #ಆನಂದಪುರಂ_ಶೇಷಾಚಾರ್_ಪ್ರಾಣೇಶಾಚಾರ್_ಕುಟುಂಬ #ದೂರದ_ಗುಲ್ಬರ್ಗದ_ಬ್ರಹ್ಮಪುರಿಯಿಂದ_ಆನಂದಪುರಕ್ಕೆ_ಬಂದ_ಆಂಜನೇಯ_ಆರಾದಕರು #ಬಹುಮನಿಸುಲ್ತಾನರ_ಕಿರುಕುಳದಿಂದ_ಕೆಳದಿ_ಅರಸರ_ಆಶ್ರಯ_ಕೇಳಿ_ಬಂದ_ಮಾಧ್ವ_ಬ್ರಾಹ್ಮಣ_ಕುಟುಂಬ #ಕೆಳದಿ_ರಾಜಾಶ್ರಯ_ಪಡೆದಿದ್ದ_ಆನಂದಪುರ೦ನ_ರಂಗನಾಥ_ದೇವಸ್ಥಾನದ_ಎದುರಲ್ಲಿರುವ_ಬ್ರಹ್ಮಪುರಿ_ಆಂಜನೇಯ #ಆನಂದಪುರಂನ_ಅಗ್ರಹಾರದಿಂದ_ಚಂಪಕಸರಸ್ಸು_ತನಕ_ಕೆಳದಿ_ಅರಸರು_ಜಾಗೀರು_ನೀಡಿದ್ದರು #ಈ_ವಂಶದ_ಭಾಗೀರಥಿಬಾಯಿಯವರ_ಬಾಣಂತನದಲ್ಲಿ_ಶ್ರೀಕೃಷ್ಣನ_ದ್ವಾರಕೆ_ಸಂಶೋಧನೆ_ಮಾಡಿದ_ಎಸ್_ಆರ್_ರಾವ್ #ಆನಂದಪುರಂ_ಶೇಷಾಚಾರ್_ವಿದ್ಯಾಮಂತ್ರಿಗಳಾಗಿದ್ದ_ಬದರಿನಾರಾಯಣರು_ವ್ಯಾಸಂಗ_ಮಾಡಿದ_ಶಾಲೆಯಲ್ಲಿ_ಶಿಕ್ಷಕ_ವೃತ್ತಿ_ಮಾಡಿದವರು     ಈ ಕುಟುಂಬದಲ್ಲಿ ಆನಂದಪುರಂನ ಅಗ್ರಹಾರದ ತಮ್ಮ ಮೂಲ ಮನೆಯಲ್ಲಿ ವಾಸ ಇರುವವರು ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ (A.S.ಪ್ರಾಣೇಶ್ ಆಚಾರ್ )  ಇವರ ಕುಟುಂಬ ಮಾತ್ರ, ಹಾಲಿ ಸಂತೋಷ್ ರೈಸ್ ಮಿಲ್ ನ ವ್ಯವಸ್ಥಾಪಕರಾಗಿದ್ದಾರೆ ಪತ್ನಿ ಗಾಯಿತ್ರಿ ಶಿಕ್ಷಕಿ ಪುತ್ರ ಶ್ರೀನಿಧಿ ಆಚಾರ್ ಸಿಂಗಾಪುರದಲ್ಲಿ ಮರ್ಚೆಂಟ್ ನೇವಿ ಇಂಜಿನಿಯರ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.     ಪ್ರಾಣೇಶ್ ಆಚಾರ್ ಇತ್ತೀಚೆಗೆ ನಾಲ್ಕು ವರ್ಷದ ಹಿಂದೆ ಈ ಕುಟುಂಬದ ಎಲ್ಲರನ್ನು ಸೇರಿಸಿ ತಮ್ಮ ಕುಟುಂಬದ ಮೂಲದ ಇತಿಹಾಸದಲ್ಲಿ ದಾಖಲಾಗಿರುವ ಕೆಳದಿ ಅರಸರ ರಾಜಾ