Skip to main content

ಭಾಗ - 15, ಆನಂದಪುರಂ ಭಾಗದ ಕೊನೆಯ ಅವಧಿಯ ಪಟೇಲರು ಮತ್ತು ಶ್ಯಾನುಬೋಗರುಗಳು

#ಭಾಗ_15

#ಸ್ವಾತಂತ್ರ್ಯಪೂರ್ವದ_ಆನಂದಪುರಂನ_ಕೊನೆಯ_ಪಟೇಲರು_ಶಾನುಬೋಗರು

#ಆನಂದಪುರದ_ಪಟೇಲರಾಗಿದ್ದ_ಪೋಸ್ಟ್_ಈರಣ್ಣರ_ತಂದೆ_ವೀರಭದ್ರಶೆಟ್ಟರು

#ಯಡೇಹಳ್ಳಿ_ಪಟೇಲರಾಗಿದ್ದ_ಸೋಮಶೇಖರಗೌಡರು

#ಆಚಾಪುರ_ಪಟೇಲರಾಗಿದ್ದ_ಮುರುಗೆಪ್ಪಗೌಡರು

#ಮಲಂದೂರಿನ_ಪಟೇಲರಾಗಿದ್ದ_ಚೆನ್ನಪ್ಪಗೌಡರು

#ಹೊಸೂರಿನ_ಪಟೇಲರಾಗಿದ್ದ_ಉಳ್ಳೂರು_ಶ್ರೀಕಂಠಯ್ಯ

#ಶ್ಯಾನುಬೋಗರಾದ_ವಿಜೇಂದ್ರರಾಯರು_ಮತ್ತು_ಗುಂಡಾಜೋಯಿಸರು.

    1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬ್ರಿಟೀಷ್ ಆಡಳಿತದ ಪಟೇಲ್ ಗಿರಿ ಮತ್ತು ಶ್ಯಾನುಬೋಗಿಕೆ ಅಂತ್ಯ ಕಂಡಿತು ಆಗ ಆನಂದಪುರದಲ್ಲಿ ಪಟೇಲರಾಗಿದ್ದವರು ವೀರಭದ್ರ ಶೆಟ್ಟರು ಇವರು ಪೋಸ್ಟ ಈರಣ್ಣರ ತಂದೆ, ಪೋಸ್ಟ್ ಈರಣ್ಣರ ಮಗ ಚಂದ್ರು ಈಗ ಆನಂದಪುರದ ಬಸವನ ಬೀದಿ ಮನೇನಲ್ಲಿ ವಾಸ ಇದ್ದಾರೆ.
  ವೀರಭದ್ರ ಶೆಟ್ಟರು ಶ್ರೀಮಂತರು ಆಗಿದ್ದರು ಆ ಕಾಲದಲ್ಲಿ ಆನಂದಪುರಂಗೆ ಮೊದಲ ಲಾರಿ ಖರೀದಿಸಿ ತಂದಿದ್ದವರು ಇವರಿಗೆ ಶ್ಯಾನುಬೋಗರು ಹುಲಿಮರಡಿ ಗುಂಡಾ ಜೋಯಿಸರೆಂದೇ ಕರೆಯುವ ಕೃಷ್ಣಸ್ವಾಮಿ ಜೋಯಿಸರು.
  ಕೃಷ್ಣಸ್ವಾಮಿ ಜೋಯಿಸರು ತೀರ್ಥಹಳ್ಳಿ ತಾಲ್ಲೂಕಿನ ಆರಗ ಮೂಲದವರು ಇವರ ತಂದೆ ಹುಚ್ಚರಾಯಸ್ವಾಮಿಗೆ ಮೂವರು ಮಕ್ಕಳು. ದೊಡ್ಡವರು ಕೃಷ್ಣ ಸ್ವಾಮಿ ಜೋಯಿಸರು, ಎರಡನೆಯವರು ಸೂಯ೯ನಾರಾಯಣ ಜೋಯಿಸರು ಮತ್ತು ಮೂರನೆಯವರು ನಾಗರಾಜ ಜೋಯಿಸರು.
   ಕೃಷ್ಣಸ್ವಾಮಿ ಜೋಯಿಸರು ಆನಂದಪುರಂ ಪಟೇಲರಾದ ವೀರಭದ್ರ ಶೆಟ್ಟರ, ಯಡೇಹಳ್ಳಿ ಪಟೇಲರಾದ ಸೋಮಶೇಖರಪ್ಪ ಗೌಡರ, ಆಚಾಪುರದ ಪಟೇಲರಾದ ಮುರುಗಪ್ಪ ಗೌಡರಿಗೆ ಶ್ಯಾನುಬೋಗರಾಗಿ ಕೆಲವು ದಶಕಗಳ ಕಾಲ ಕಾರ್ಯನಿರ್ವಹಿಸಿದ ಆಡಳಿತ ಚತುರತೆ ಹೊಂದಿದ ಅತ್ಯಂತ ಬುದ್ದಿವಂತ, ಶಿಸ್ತುಬದ್ದ ವ್ಯಕ್ತಿತ್ವ ಹೊಂದಿದವರೆಂಬ ಹೆಸರು ಪಡೆದಿದ್ದರು ಈಗ ಇವರ ದೊಡ್ಡ ಮಗ ಶ್ರೀದರ್ ಗ್ರಾಮ ಪಂಚಾಯತ್ ಪಿ.ಡಿ.ಓ ಆಗಿ ನಿವೃತ್ತರಾಗಿ ಆನಂದಪುರಂ ಸಮೀಪದ ತಾವರೇಹಳ್ಳಿ ಗ್ರಾಮದ ಹುಲಿಮರಡಿಯಲ್ಲಿ ಜಮೀನು ತೋಟ ನೋಡಿಕೊಂಡಿದ್ದಾರೆ, ಶ್ಯಾ೦ ಸುಂದರ ಮತ್ತು ಮೋಹನ ಬೇರೆ ಕಡೆ ನೆಲೆಸಿದ್ದಾರೆ.
  ಇವರ ತಮ್ಮ ಸೂರ್ಯನಾರಾಯಣ ಜೋಯಿಸರು ಮಾದರಿ ಶಿಕ್ಷಕರಾಗಿ ಆನಂದಪುರಂ ಅಗ್ರಹಾರದಲ್ಲಿ ನೆಲೆಸಿದ್ದರು ಇವರ ಪುತ್ರ ಚಿದಂಬರ ಜೋಯಿಸರೂ ಶಿಕ್ಷಕರಾಗಿ ವೃತ್ತಿ ಮಾಡುತ್ತಿದ್ದಾರೆ.
   ನಾಗರಾಜ ಜೋಯಿಸರು ಕೆಲ ಕಾಲ ಆನಂದಪುರಂ ನ ದೊಡ್ಡ ಪ್ರಮಾಣದ ಸಹಕಾರಿ ಸಂಘದ ಕಾರ್ಯದರ್ಶಿಗಳಾಗಿ  ದ್ಧರು ಇವರ ಮಗ ವಾಸು ಜೋಯಿಸ್ ಸಂತೋಷ್ ರೈಸ್ ಮಿಲ್ ಉದ್ಯೋಗಿ ಆಗಿದ್ದರು, ರಮೇಶ್ ಜೊಯಿಸ್ ಅಂಚೆ ಉದ್ಯೋಗಿ ಆಗಿದ್ದಾರೆ, ಸಣ್ಣವರು ಶಿವಾನಂದ ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದಲ್ಲಿ ಪುರೋಹಿತರಾಗಿದ್ದಾರೆ.
  ವಾಸು ಜೋಯಿಸರ ಮಗ ಗುರುಪ್ರಸಾದ್ ಆನಂದಪುರಂ ನಲ್ಲಿ ಸೈಬರ್ ಕೇಂದ್ರ, ಪ್ರೊಪೆಶನಲ್ ಕೊರಿಯರ್ ಇತ್ಯಾದಿ ನಡೆಸುತ್ತಾ ಊರಿನ ಅಭಿವೃದ್ಧಿಗಾಗಿ ಆನಂದಪುರಂ ಇತಿಹಾಸ ಪರಂಪರೆ ಉಳಿಸಿ ಅಭಿಯಾನದ ಸಂಘಟನೆಗಳಲ್ಲಿ ಮುಂದಾಳಾಗಿ ಜನರ ಅಭಿಮಾನಗಳಿಸಿದ್ದಾರೆ.
   ಆಗ ಮಲಂದೂರಿನ ಪಟೇಲರಾಗಿದ್ದವರು ಚೆನ್ನಪ್ಪ ಗೌಡರು ಆಗ ಆನಂದಪುರದಲ್ಲಿ ಇವರ ಬಟ್ಟೆ ಅಂಗಡಿ ಪ್ರಸಿದ್ಧವಾಗಿತ್ತು ಇವರ ಮಗ ನಿಂಗಪ್ಪ ಗೌಡರು ಅತ್ಯುತ್ತಮ ಕಬ್ಬಡಿ ಆಟಗಾರರು ಮತ್ತು ಬೀಮನಕೋಣೆ ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಇನ್ನೊಬ್ಬ ಪುತ್ರ ರವೀಂದ್ರ ಪತ್ನಿ ಶ್ರೀಮತಿ ನವೀನ ರವೀಂದ್ರ ಹಾಲಿ ಆನಂದಪುರಂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗಿದ್ದಾರೆ.
   ಇವರಿಗೆ ಶ್ಯಾನುಬೋಗರಾಗಿದ್ದವರು ವಿಜೇಂದ್ರ ರಾಯರು, ವಿಜೇಂದ್ರ ರಾಯರ ಮೂಲ ಆಯನೂರಿನ ಕೋಟೆ ಎಂಬ ಊರಿನವರು ಅವರ ಅಕ್ಕ ಬಾವ ಆನಂದಪುರ೦ನಲ್ಲಿನ ಅಗ್ರಹಾರವಾಸಿಗಳಾಗಿದ್ದು ದೊಡ್ಡ ಜಮೀನ್ದಾರರಾಗಿದ್ದರು ಇವರಿಗೆ ಪುತ್ರ ಸಂತಾನ ಇಲ್ಲದ್ದರಿಂದ ಇವರ ದತ್ತು ಪುತ್ರನಾಗಿ ಇವರನ್ನು ಸ್ವೀಕರಿಸುತ್ತಾರೆ.
  ಹೊಸೂರು ಭಾಗದ ಪಟೇಲರಾಗಿದ್ದ ಉಳ್ಳೂರು ಶ್ರೀಕಂಠಯ್ಯನವರಿಗೂ ವಿಜೇಂದ್ರ ರಾಯರು ಶ್ಯಾನುಬೋಗರಾಗಿದ್ದರು.
   ಆಚಾಪುರದ ಪಟೇಲರಾಗಿದ್ದ ಮುರುಗೆಪ್ಪ ಗೌಡರ ಪತ್ನಿ ಲಲಿತಮ್ಮ ಇವರ ಪುತ್ರ ಚೆನ್ನಪ್ಪರ ಮಗ ಶಶಿ ಪಾಟೀಲರ ಕುಟುಂಬ ಆಚಾಪುರದಲ್ಲಿ ನೆಲೆಸಿದ್ದಾರೆ.
  ಪಟೇಲ್ ಮುರಿಗೆಪ್ಪ ಗೌಡರ ಮೂಲ ಮನೆಯಲ್ಲಿ ಮೊಮ್ಮಗಳು ಮತ್ತು ಅಳಿಯ ಜನಾನುರಾಗಿ ಯುವಕ ಶಿವರಾಮ್ ಪಟೇಲ್ ವಾಸ ಇದ್ದಾರೆ
  ಯಡೇಹಳ್ಳಿ ಪಟೇಲರಾದ ಸೋಮಶೇಖರಪ್ಪ ಗೌಡರ ಪುತ್ರ ಭಾಲಗಂಗಾದರಪ್ಪ ಗೌಡರು ಆನಂದಪುರದ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿ ಹೆಸರುವಾಸಿ ಆಗಿದ್ದರು.
  ಸ್ವಾತಂತ್ರ್ಯ ನಂತರ ಈ ಹುದ್ದೆಗಳು ರದ್ದಾಗಿ ತಹಸೀಲ್ದಾರ್, ಉಪತಹಸೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ವಿಲೇಜ್ ಅಕೌಂಟೆಂಟ್ ವ್ಯವಸ್ಥೆ ಜಾರಿಯಲ್ಲಿದೆ ಆಡಳಿತ ವ್ಯವಸ್ಥೆಯ ವರ್ಗಾವಣೆ ಇತ್ಯಾದಿ ಕಾರಣದಿಂದ ಸ್ಥಳಿಯ ರೈತ ಕುಟುಂಬದೊಂದಿಗೆ ಆಗಿನ ಕಾಲದ ಖಾಯಂ ದೀರ್ಘ ಆಡಳಿತ ನಡೆಸುತ್ತಿದ್ದ ಪಟೇಲರ ಶ್ಯಾನುಬೋಗರಂತ ಆತ್ಮೀಯತೆ ಸಂಬಂದಗಳು ಈಗಿಲ್ಲ.
(ನಾಳೆ ಭಾಗ- 16 )

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ