Skip to main content

ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪರ ಮಾಸ್ಕ್ ವಿರೋದ ಚಳವಳಿ

#ರಿಪ್ಪನಪೇಟೆ_ಟಿ_ಆರ್_ಕೃಷ್ಣಪ್ಪರ_ಮಾಸ್ಕ್_ವಿರೋದಿ_ಹೋರಾಟ_ಬಂದನ
  ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ವಾಸಿ ಟಿ.ಆರ್.ಕೃಷ್ಣಪ್ಪ ಜನಪರ ಹೋರಾಟಗಾರರು ಯಾವುದೇ ಪಕ್ಷ ಅಥವ ನಾಯಕರ ನಿಯಂತ್ರಣದಲ್ಲಿ ಇರದ ಏಕಾಂಗಿ ಹೋರಾಟ ಇವರದ್ದು.
 ಸುಮಾರು ಹತ್ತಿರ ಹತ್ತಿರ 65 ವರ್ಷದ ವೃದ್ದಾಪ್ಯದ ಹೊಸ್ತಿಲಲ್ಲಿದ್ದರೂ ಇವರ ಉತ್ಸಾಹ ಮತ್ತು ಪಿಟ್ ನೆಸ್ 20 ರಿಂದ 30 ವರ್ಷದ ಯುವಕರೂ ನಾಚುವಂತಹದ್ದು ಇವರ ಪೆವರಿಟ್ ವಾಹನ ಸ್ಯೆಕಲ್, ಇವರ ಖಾಯಂ ಡ್ರೆಸ್ ಬಾಬಾ ಅಮ್ಟೆಯವರಂತೆ ಕಾಕಿ ಚೆಡ್ಡಿ ಮತ್ತು ಅರ್ದ ತೋಳಿನ ಅಂಗಿ.
  ಜನ ಸಾಮಾನ್ಯರ, ಅತ್ಯಂತ ಬಡವರಲ್ಲಿ ಇವರ ಬಗ್ಗೆ ತುಂಬಾ ದೊಡ್ಡ ಅಭಿಮಾನ ಇದೆ, ಅವರ ಕೆಲಸ ಮಾಡಿಸಿ ಕೊಡದೆ ವಿರಮಿಸಿದ ಕೃಷ್ಣಣ್ಣ ಅಂತ ತುಂಬು ಬಾಯಿಯಿಂದ ಹರಿಸುತ್ತಾರೆ ಇದು ಸತ್ಯ ಕೂಡ.
   ಇವರ ಪ್ರತಿಭಟನೆ ಚಳವಳಿ ಮಾರ್ಗ ಕೂಡ ವಿಶಿಷ್ಟ.
  ಕಳೆದ ವಷ೯ ಕೊರಾನಾ ಮೊದಲ ಅಲೆಯ ಲಾಕ್ ಡೌನ್ ನಲ್ಲಿ ಇವರು ಸಾಗರದಿಂದ ಬರುವಾಗ ಆನಂದಪುರಂ ನಲ್ಲಿ ಇವರನ್ನು ಪೋಲಿಸರು ತಡೆದು ಮಾಸ್ಕ್ ಹಾಕದ ಬಗ್ಗೆ ತಕರಾರು ಮಾಡಿದಾಗ ಇವರು ಸದಾ ಜೇಬಲ್ಲಿ ಇಟ್ಟುಕೊಂಡಿರುವ ಪತ್ರಿಕಾ ತುಣುಕು ತೆಗೆದು ತೋರಿಸಿ ಮಾಸ್ಕ ಕಡ್ಡಾಯ ಅಲ್ಲ ಅಂತ ವಾದಿಸಲು ಶುರು ಮಾಡಿದಾಗ ಪೋಲಿಸರು ತಮ್ಮ ಕೆಲಸಕ್ಕೆ ವಿನಾಃ ಕಾರಣ ತೊಂದರೆ ಅಂತ ಇವರನ್ನು ಬಿಟ್ಟು ಕಳಿಸಿದ್ದರು.
  ಇವತ್ತು ರಿಪ್ಪನ್ ಪೇಟಿ ವೃತ್ತದಲ್ಲಿ ಮಾಸ್ಕ್ ಧರಿಸದ ಬಗ್ಗೆ ಟಿ.ಆರ್.ಕೃಷ್ಣಪ್ಪ ಮತ್ತು ಅಧಿಕಾರಿಗಳಿಗೆ ಜಟಾಪಟಿ ಆದ ಸುದ್ದಿ ಬಂದಿದೆ, ಸ್ಥಳದಲ್ಲೇ ಶಿರ್ಷಾಸನ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ ಪೋಟೋ ಇಲ್ಲಿ ಹಾಕಿದೆ, ಅಧಿಕಾರಿಗಳಿಗೆ ಮಾಸ್ಕ ದರಿಸಿಲ್ಲ ಅಂತ ಕೇಸ್ ಹಾಕಲು ಸಾಧ್ಯವಿಲ್ಲ ಆದರೆ ಮಾಸ್ಕ ವಿಚಾರದ ಜಟಾಪಟಿಯಲ್ಲಿ ಕರ್ತವ್ಯಕ್ಕೆ ತಡೆ ನೀಡಿದ ಕಾರಣ ನೀಡಿ ದೂರು ದಾಖಲಿಸಿ ಬಂದಿಸಿದ್ದಾರೆ.
  ಈ ವಿಚಾರದಲ್ಲಿ ಕೊರಾನ ಗಂಡಾಂತರದ ಸಂದರ್ಭದಲ್ಲಿ ಪೋಲಿಸರು ಬುದ್ದಿ ಹೇಳಿ ಕಳಿಸುತ್ತಾರೋ ಅಥವ ನ್ಯಾಯಾದೀಶರ ಎದರು ಹಾಜರು ಪಡಿಸುತ್ತಾರೋ ಗೊತ್ತಿಲ್ಲ ಆದರೆ ಪೋಲಿಸು ಜೈಲು ಯಾವುದಕ್ಕೂ ಅಂಜದ ಟಿ.ಆರ್.ಕೃಷ್ಣಪ್ಪರಿಗೆ ಮಾಸ್ಕ್ ಬಗ್ಗೆ, ಗಂಡಾಂತರಕಾರಿ ಕೊರಾನಾ ಕಾಯಿಲೆ ಬಗ್ಗೆ ತಿಳಿ ಹೇಳುವುದು ಕಷ್ಟವಾಗಿದೆ.
  #ಅಧಿಕಾರಿಗಳು_ಈ_ಜನಪರ_ಹೋರಾಟಗಾರ_ಮಾಸ್ಕ್_ದರಿಸದ_ವಿಚಾರದಲ್ಲಿ_ಕಠಿಣ_ಕ್ರಮ_ಜರುಗಿಸಬಾರದಾಗಿ_ನಾನು_ವಿನಂತಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...