Skip to main content

ಭಾಗ - 14 ಪುರಾಣದಲ್ಲಿ ಶ್ರೀಕೃಷ್ಣನ ಮುಳುಗಿದ ದ್ವಾರಕೆ ನಗರಿ ಸಂಶೋದಿಸಿದ ಡಾಕ್ಟರ್ ಎಸ್.ಆರ್.ರಾವ್ ಜನಿಸಿದ್ದು ಆನಂದಪುರಂನಲ್ಲಿ, ಅವರಿಗೆ ಪುರ ದೈವ ರಂಗನಾಥ ಎಂದು ನಾಮಕಾರಣಕ್ಕೆ ಕಾರಣವಾದ ಆ ಘಟನೆ.

#ಭಾಗ_14.

#ಅಂತರಾಷ್ಟ್ರಿಯ_ಪ್ರಖ್ಯಾತಿ_ಪಡೆದ_ಆಕಿ೯ಯಾಲಾಜಿಸ್ಟ್.
#ಡಾಕ್ಟರ್_ಶಿಕಾರಿಪುರ_ರಂಗನಾಥರಾವ್_ಹುಟ್ಟಿದ್ದು_ಆನಂದಪುರದಲ್ಲಿ.

#ಶ್ರೀಕೃಷ್ಣನ_ಮುಳುಗಿದ_ದ್ವಾರಕಾ_ನಗರಿ
#ಇಂಡಸ್_ನಾಗರಿಕತೆಯ_ಹರಪ್ಪ_ಮಹೆಂಜೊದಾರ್_ಉತ್ಕನನ
#ಇಂಡಸ್_ಕಾಲದ_ಬಂದರು_ಲೋಥಲ್_ಹೀಗೆ_ಅನೇಕ_ಸಂಶೋದನೆ_ಉತ್ಕನದ_ನೇತೃತ್ವ_ಇವರದ್ದು.

#ಭಾರತದ_ಮಹಾಭಾರತದ_ಶ್ರೀಕೃಷ್ಣ_ಕಾಲ್ಪನಿಕ_ಅಲ್ಲ_ಸತ್ಯ_ಎಂದು_ಸಾಬೀತು_ಮಾಡಿದ_ಸಂಶೋದನೆ.

      ಇವರ ತಂದೆ ಕೃಷ್ಣ ಪ್ರಸಾದರು ಆನಂದಪುರದಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಶೇಖ್ದಾರರು,ಇವರು ಶಿಕಾರಿಪುರ ಮೂಲದ ಮಾದ್ವ ಬ್ರಾಹ್ಮಣರು,ಆನಂದಪುರಂ ನಲ್ಲಿ ಉದ್ಯೋಗಕ್ಕೆ ಬಂದಾಗ ಆನಂದಪುರದ ರಂಗನಾಥ ಸ್ವಾಮಿ ದೇವಾಲಯದ ಅಗ್ರಹಾರದ ವೇದನಾನಾರಾಯಣ ಭಟ್ಟರ ಕುಟುಂಬಕ್ಕೆ (ರಂಗನಾಥ ಭಟ್ಟರ ತಂದೆ) ಸೇರಿದ ಮನೆಯಲ್ಲಿ ವಾಸವಾಗಿರುತ್ತಾರೆ, ಈ ಮನೆ ಎದುರೇ ಮಾಧ್ವ ಬ್ರಾಹಣರಾದ ಶಿಕ್ಷಕರಾಗಿದ್ದ ಶೇಷಾಚಾರ್ (ಪ್ರಾಣೇಶ್ ಆಚಾರ್ ತಂದೆ) ಮನೆ, ಈಗ ಇವರಿದ್ದ ಮನೆ ಜಾಗದಲ್ಲಿ ರಂಗನಾಥ ಭಟ್ಟರ  ಸಹೋದರ ಸುಂದರೇಶ್ ಮನೆ ಇದೆ.
    ಒಂದು ವಿಶೇಷ ಘಟನೆ ಇಲ್ಲಿ ನಮೂದಿಸಬೇಕು, ಎಸ್ ರಾವ್. ತಾಯಿ ಹೊಟ್ಟೆಯಲ್ಲಿದ್ದಾಗ ನಡೆದದ್ದು, ತಾಯಿಗೆ ಹೆರಿಗೆ ದಿನ ಸಮೀಪಿಸುವಾಗ ಅವರ ಸಂಪ್ರದಾಯದಂತೆ ನೀರು ಎರೆಸಿಕೊಳ್ಳಲು ತಯಾರಾಗಿ ತಮ್ಮ ಆಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಭದ್ರಪಡಿಸಿಡುತ್ತಾರೆ.ಪ್ರಾಣೇಶ್ ಆಚಾರ ರ ಅಜ್ಜಿ ಆ ಕಾಲದಲ್ಲಿ ಪ್ರಸಿದ್ಧ ಪ್ರಸೂತಿ ತಜ್ಞರಂತೆ ಹೆಸರುವಾಸಿ ಆಗಿದ್ದ ಭಾಗಿರಥೀ  ಬಾಯಿ ನೇತೃತ್ವದಲ್ಲಿ ನೀರು ಎರೆಯುತ್ತಾರೆ.
  ಅವತ್ತೆ ತಮ್ಮ ಉದ್ಯೋಗ ನಿಮಿತ್ತ ಬೇರೆ ಊರಿಗೆ ಹೋಗಿದ್ದ  ಪತಿ ಕೃಷ್ಣ ಪ್ರಸಾದರಿಗೆ ರಾತ್ರಿ ಮನೆಗೆ ವಾಪಾಸ್ ಬರಲಾಗುವುದಿಲ್ಲ, ಆದರೆ ಅವರಿಗೆ ಕನಸೊಂದು ಬೀಳುತ್ತದೆ ಕಳ್ಳ ಇವರ ಮನೆಗೆ ನುಗ್ಗಿ ಬಂಗಾರದ ಪೆಟ್ಟಿಗೆ ಕದ್ದೊಯ್ದು, ಆನಂದಪುರಂ ಮುರುಘಾ ಮಠಕ್ಕೆ ಹೋಗುವ ಗುಂಡಿಬೈಲು ಜಮೀನು ಮಧ್ಯದ ಹೆದ್ದಾರಿಯ ಮಟ್ಟಿ ಒಂದರಲ್ಲಿ ಅಡಗಿಸುವ೦ತ ಕನಸು ಅದಾಗಿರುತ್ತದೆ.
  ಬೆಳಿಗ್ಗೆ ಮನೆಗೆ ಬಂದಾಗ ಕನಸಿನಲ್ಲಿ ಕಂಡಂತೆ ಕಳ್ಳತನ ಆಗಿರುತ್ತದೆ,ವಿಷಯ ತಿಳಿದು ಬಂದಿದ್ದ ಅಮಾಲ್ದಾರರಿಗೆ ಕನಸಲ್ಲಿ ಕಂಡ ವಿಚಾರ ತಿಳಿಸಿದಾಗ ಎಲ್ಲರೂ ಸೇರಿ ಹೆದ್ದಾರಿಗೆ ಹೋಗಿ ಹುಡುಕಿದಾಗ,ಕನಸಲ್ಲಿ ಕಂಡಂತೆ ಆಭರಣದ ಪೆಟ್ಟಿಗೆ ಸಿಗುವುದು ಸೋಜಿಗದ ವಿಚಾರ ಅಗುತ್ತೆ. ಇದರಿಂದ ಇಡೀ ಕುಟುಂಬ ಊರ ದೈವ ರಂಗನಾಥನೇ ತಮ್ಮನ್ನು ಕಾಪಾಡಿದನೆಂದು ಭಾವಿಸುತ್ತಾರೆ ಮತ್ತು ಹುಟ್ಟುವ ಮಗು ಗಂಡಾದರೆ ರಂಗನಾಥ ಎಂದು ನಾಮಕರಣ ಮಾಡುವುದಾಗಿ ಹರಕೆ ಹೊರುತ್ತಾರೆ.
   ಹೀಗೆ ದಿನಾಂಕ 1- ಜುಲೈ -1922ರಂದು ಜನಿಸಿದ ಮಗುವೇ ಈ ಮನೆತನದ ಶಿಕಾರಿಪುರ ಹೆಸರಿನ ಜೊತೆ ಆನಂದಪುರ ದೈವ ರಂಗನಾಥ ಸೇರಿಸಿ ಶಿಕಾರಿಪುರ ರಂಗನಾಥ (S.R.Rao) ಎಂದೇ ವಿಶ್ವ ವಿಖ್ಯಾತರಾಗುತ್ತಾರೆ.
  ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆಯುತ್ತಾರೆ, ಜವಹರಲಾಲ್ ಪೆಲೋಶಿಪ್ ಪಡೆಯುತ್ತಾರೆ, ಭಾರತೀಯ ಅಕಿ೯ಯಾಲಾಜಿ ಇಲಾಖೆ ಮುಖ್ಯಸ್ಥರಾಗುತ್ತಾರೆ, ಮೆರಿನ್ ಆಕಾ೯ಲಾಜಿ ಸಂಶೋದನಾ ಸಂಸ್ಥೆ ಸ್ಥಾಪಕರಾಗುತ್ತಾರೆ 1980ರಲ್ಲಿ ನಿವೃತ್ತರಾದರು ಕೇಂದ್ರ ಸರ್ಕಾರ ಇವರ ಅದ್ವಿತಿಯ ಸಾಧನೆಗಳಿಂದ ಇವರನ್ನು ಪುನಃ ವಿಶೇಷವಾಗಿ ASI ನಿರ್ದೇಶಕರಾಗಿ ನೇಮಿಸುತ್ತದೆ.
  ಕ್ರಿಸ್ತ ಪೂರ್ವದ ಒಂದು ಸಾವಿರ ವರ್ಷ ಭಾರತದ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾಗಿತ್ತು , ಶ್ರೀಕೃಷ್ಣನ ದ್ವಾರಕೆ ಮುಳುಗಿದ್ದು ಅಧಿಕೃತ ಎಂಬುದಿರಲಿಲ್ಲ ಆದರೆ ಹಿಂದೂ ಪವಿತ್ರ ಗ್ರಂಥ ಮಹಾಭಾರತದಲ್ಲಿ ಮಾತ್ರ ಇದು ಉಲ್ಲೇಖ ಆಗಿದ್ದರು ಇದೊಂದು ನೀತಿ ಕಥೆಯಾಗಿರಬೇಕೆಂಬ ತರ್ಕಗಳು ಇತ್ತು.
   ಡಾ. S.R. ರಾವ್ ರ ನೇತೃತ್ವದ ತಂಡ ಮುಳುಗಿದ ದ್ವಾರಕಾ ನಗರ ಸಂಶೋದನೆ ಮಾಡುತ್ತದೆ,ಕ್ರಿ.ಪೂ. 1528 ರಲ್ಲಿ ಈ ಸುಸಜ್ಜಿತ ನಗರ ಪುರಾಣದ ಉಲ್ಲೇಖದ ದ್ವಾರಕಾ ನಗರ ಎಂದು ಪ್ರಪಂಚಕ್ಕೆ ತಿಳಿಯುತ್ತದೆ.
    ಇವರ ಅನೇಕ ಸಂಶೋದನೆಗಳಲ್ಲಿ ಮುಖ್ಯವಾಗಿರುವ ಇಂಡಸ್ ವ್ಯಾಲಿ ನಾಗರೀಕತೆಯ ಹರಪ್ಪೊ ಸಂಶೋದನೆ ಸಿಪ್ರಸ್, ಸಿರಿಯಾದ ತಾಮ್ರಯುಗಕ್ಕಿಂತ ಪುರಾತನ ನಾಗರೀಕತೆ ಭಾರತದ್ದು ಎಂದು ಸಾಬೀತು ಪಡಿಸಿತು.
   ಪುರಾತನ ಲೋಥಲ್ ಬಂದರು ಉತ್ಕನನ ಸಂಶೋಧನೆ, ರಂಗಪುರ್, ಅಮರಲಿ, ಭಾಗತ್ರವ್, ಹನೂರು, ಐಹೊಳೆ, ಕಾವೇರಿಪಟ್ಟಣಂ ಉತ್ಕನನಗಳು, ತಾಜ್ ಮಹಲ್ ನಂತ ರಾಷ್ಟ್ರೀಯ ಸ್ಮಾರಕಗಳ ಸುರಕ್ಷಣೆ ಹೀಗೆ ಸಾಗುತ್ತದೆ ಇವರ ಮಹತ್ತರವಾದ ಕಾರ್ಯಗಳು .
  3 ಜನವರಿ 2013ರಲ್ಲಿ ಇಹಲೋಕ ತ್ಯಜಿಸಿದ ಮಹಾನ್ ವ್ಯಕ್ತಿ ಆನಂದಪುರದಲ್ಲಿ ಜನಿಸಿದರು, ಇವರ ತಂದೆ ಆನಂದಪುರದಲ್ಲಿ ಶೇಖ್ದಾರರಾಗಿದ್ದರು, ಇವರ ಹೆರಿಗೆ ಮಾಡಿಸಿದ ಬಾಗಿರಥೀ ಬಾಯಿ ಆನಂದಪುರಂ ನ ಪ್ರಖ್ಯಾತರಾಗಿದ್ದ ಶಿಕ್ಷಕರಾದ ಶೇಷಾಚಾರ್ ತಾಯಿ, ಇವರು ವಾಸ ಇದ್ದ ಮನೆ ಆನಂದಪುರಂನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದ ವೇದನಾರಾಯಣ ಭಟ್ಟರದ್ದು, ಆನಂದಪುರಂನ ಪುರ ದೇವರಾದ ಶ್ರೀರಂಗನಾಥನ ಕೃಪೆಯಿಂದ ಕಳ್ಳ ಕದ್ದಿದ್ದ ಆಭರಣ ಸಿಕ್ಕಿದ್ದು ಈ ಕಾರಣದಿಂದ ಜನಿಸಿದ ಮಗುವಿಗೆ ರಂಗನಾಥನೆಂದೇ ನಾಮಕಾರಣ ಮಾಡಿದ್ದು ಎಲ್ಲಾ ಆನಂದಪುರಂನ ಇತಿಹಾಸಕ್ಕೆ ಮುಕುಟವಾದ ಘಟನೆಗಳು.  
   ಮುಂದೆ ಅವರು ವಿಶ್ವ ವಿಖ್ಯಾತರಾಗಿ #ಡಾಕ್ಟರ್_SR_ರಾವ್ ಎಂದೇ ಖ್ಯಾತಿ ಪಡೆಯುತ್ತಾರೆ.
  ತಾನು ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿ ಜನಿಸಿದ್ದೆಂದು ಎಲ್ಲಾ ಕಡೆ ಹೇಳುತ್ತಿದ್ದರು ಇದು ಅವರಿಗೆ ಅವರ ಹುಟ್ಟಿದ ಊರಾದ ಆನಂದಪುರಂ ಬಗ್ಗೆ ಇದ್ದ ಅಭಿಮಾನ ತೋರಿಸುತ್ತದೆ.

(ನಾಳೆ ಭಾಗ - 15)

https://youtu.be/Zc2dWngyZH4

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ