Skip to main content

Posts

Showing posts with the label LOCKDOWN PERIOD GIVEN US SOME LESSON

ಭಾರತೀಯ ಶಿಕ್ಷಣ ಸುಧಾರಣೆಗೆ ಕೊರಾನ ವೈರಸ್ ಲಾಕ್ ಡೌನ್ ಒಂದು ಕಾರಣ ಆಗಬಹುದಾದ ಸಾಧ್ಯತೆ ಇದೆ, ಒಂದು ಹಂತದವರೆಗೆ ಪರೀಕ್ಷರಹಿತ ಶಿಕ್ಷಣ, ಆನ್ಲೈನ್ ಶಿಕ್ಷಣಗಳ ಬಗ್ಗೆ ಯೋಚಿಸಬಹುದಾಗಿದೆ, ಇದು ಅನಿವಾಯ೯ಕೂಡ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_26 #ದಿನಾ೦ಕ_30_ಏಪ್ರಿಲ್_2020     #ಲಾಕ್_ಡೌನ್_ಭಾರತೀಯ_ಶಿಕ್ಷಣ_ವ್ಯವಸ್ಥೆ_ಸುದಾರಣೆಗೊಳಿಸೀತೆ?      ಸ್ವಾತಂತ್ರ ನಂತರ ಬೃಹತ್ ದೇಶದಲ್ಲಿ ಸವ೯ರಿಗೂ ಶಿಕ್ಷಣ ನೀಡುವ ಗುರಿ ಹೊಂದಿ  ನಡೆಸಿದ ಅನೇಕ ಪ್ರಯತ್ನಗಳಿಂದ ಭಾರತ ಶಿಕ್ಷಣದಲ್ಲಿ ಕ್ರಾ೦ತಿ ಆಗಿದೆ.    ಶಿಕ್ಷಣಕ್ಕಾಗಿ ದೇಶದಲ್ಲಿ ವಿನಿಯೋಗಿಸುವ ಸಂಪನ್ಮೂಲಗಳು ಕಡಿಮೆ ಏನಲ್ಲ, ಒಂದು ಹಂತದ ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ನಮ್ಮ ಸಕಾ೯ರ ಯಶಸ್ವಿ ಆದರೂ ನಂತರದ ಹಂತದ ಶಿಕ್ಷಣದ ಗುಣಮಟ್ಟ ಕಾಪಡಿ ಕೊಳ್ಳಲು ಸಾಧ್ಯವಾಗಿಲ್ಲ.   ಇದರ ಮದ್ಯೆ ಖಾಸಾಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಬಾಷಾ ಮಾಧ್ಯಮಗಳ ವ್ಯಾಜ್ಯ, ನ್ಯಾಯಾಲಯದ ತೀಪು೯, ಶಿಕ್ಷಣ ಇಲಾಖಾ ನೌಕರರ ಸಂಘಗಳ ಬೇಡಿಕೆ, ಶಿಕ್ಷಣಾ ಇಲಾಖಾ ಬ್ರಷ್ಟಾಚಾರಗಳು ಈ ಇಲಾಖೆಯನ್ನ ಸಸೂತ್ರವಾಗಿ ನಡೆಸಲು ಸಾಧ್ಯವಿಲ್ಲದಂತೆ ಮಾಡಿದೆ.   ಭಾರತದಲ್ಲಿ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಸೇವೆ ಮಾಡುವವರೆ ಭಾರತೀಯ ಶಿಕ್ಷಣ ಸರಿ ಇಲ್ಲ ಎನ್ನುತ್ತಾರೆ.   ಪರಿಕ್ಷಾ ಅಕ್ರಮ, ಮೌಲ್ಯಮಾಪನದಲ್ಲಿ ಅಕ್ರಮಗಳು ಶಿಕ್ಷಣಾ ಇಲಾಖೆಗೆ ಸವಾಲಾಗಿತ್ತು.   ಇಂತಹ ಸಂದಭ೯ದಲ್ಲಿಯೆ ಪರಿಕ್ಷಾ ಪೂವ೯ದಲ್ಲಿ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಮಾಡಲೇಬೇಕಾದ್ದರಿಂದ ಶಾಲೆಗಳನ್ನ ಮುಚ್ಚಬೇಕಾಯಿತು ಇದರಿಂ...