ದೇವನೂರು_ಮಹಾದೇವರ ಎದೆಗೆ_ಬಿದ್ದ_ಅಕ್ಷರ_ಪುಸ್ತಕ. ನನ್ನ ಓದಿನ ಅನಿಸಿಕೆಗಳು. ನಾನು ಈ ಪುಸ್ತಕ ಶಿಕಾರಿಪುರದ #ಸುಪ್ರ_ಪ್ರಕಾಶನದವರಿಂದ ತರಿಸಿದ್ದೆ, ಯಾವುದೇ ಪುಸ್ತಕ ಬೇಕಾದರೂ ಅವರಿಗೆ ವಾಟ್ಸಪ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಅತ್ಯುತ್ತಮ ಪುಸ್ತಕ ಮಾರಾಟ ಸಂಸ್ಥೆಯ ಫೋನ್ ನಂಬರ್ ಕಾಮೆಂಟ್ ಬಾಕ್ಸ್ ನಲ್ಲಿ ಇದೆ. ಈ ಪುಸ್ತಕದಲ್ಲಿ #ದಲಿತ_ನೌಕರರ_ಜೊತೆ_ಪಿಸುಮಾತು ಪುಟ ಸಂಖ್ಯೆ 257 ರಲ್ಲಿ ದೇವನೂರು ಮಹಾದೇವರು ಹೀಗೆ ಬರೆದಿದ್ದಾರೆ... ದಲಿತ ನೌಕರರ ಬಗ್ಗೆ ಪ್ರಚಲಿತದಲ್ಲಿರುವ ಒಂದು ಮಾತು ಹೀಗಿದೆ..."ತನಗೆ ಏನಾದರೂ ಅನ್ಯಾಯ ಕಷ್ಟ ಬಂದಾಗ ದಲಿತ ನೌಕರ ಅದನ್ನು ಇಡೀ ತನ್ನ ಜನಾಂಗಕ್ಕೆ ಆದ ಅನ್ಯಾಯ ಎಂಬಂತೆ ಗೋಳಾಡುತ್ತಾನೆ ಇಲ್ಲದಿದ್ದರೆ ಸುಮ್ಮನಿರುತ್ತಾನೆ" ಅಂತ. ಇದೇ ರೀತಿ ಬ್ರಾಹ್ಮಣ ಅರ್ಚಕರು ತಮಗೆ ಏನಾದರು ಅನ್ಯಾಯ ಅವಮಾನ ಆದರೆ ಅದನ್ನು ಇಡೀ ತನ್ನ ಬ್ರಾಹ್ಮಣ ಜನಾಂಗಕ್ಕೆ ಆದ ಅವಮಾನ ಎಂಬಂತೆ ಸುದ್ದಿ ಮಾಡುತ್ತಾನೆ ಅಂತ ಹೇಳಿದವರು ಖ್ಯಾತ ವಿಮರ್ಶಕ ಅರವಿಂದ ಚೊಕ್ಕಾಡಿ ನನ್ನ ಅತಿಥಿ ಆಗಿ ಬಂದಾಗ ಮಾತಾಡುವಾಗ ಹೇಳಿದ್ದು. ಇದು ಇಬ್ಬರು ಬೇರೆ ಬೇರೆ ಸಂದರ್ಭದ ಮಾತು ಇದು ಏನು ಹೇಳುತ್ತದೆ ಅಂದರೆ ಕಣ್ಣಿದ್ದು ಕುರುಡಾಗಿ ತಮ್ಮ ಜಾತಿಯ ಜನರ ತಪ್ಪು ಸಮರ್ಥಿಸಿಕೊಳ್ಳದ ಇಬ್ಬರು ಜ್ಞಾನಿಗಳು ಸಮಾಜವನ್ನ ತಮ್ಮ ಸಮತೋಲನದ ಬುದ್ದಿಯಿಂದ ಅವಲೋಕಿಸಿದ ರೀತಿ. ...
ಭಾಗ_6_ಘಟ್ಟಕ್ಕೆ_ಕರಾವಳಿ_ಭಾಗದವರ_ವಲಸೆ #ಹಾಳೆಟೊಪ್ಪಿ_ಮಂಡೆಹಾಳೆ_ಮುಟ್ಟಾಳೆ_ಅಡಿಕೆಹಾಳೆಟೊಪ್ಪಿ ಹಾಳೆ ಟೊಪ್ಪಿ ಎನ್ನುವುದು ಕರಾವಳಿ ಮತ್ತು ಮಲೆನಾಡಿನ ಜನರ ಅತಿ ದೊಡ್ಡ ಗ್ರಾಮೀಣ ಆವಿಷ್ಕಾರ!... ಮಳೆಯಿಂದ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಅಂದಿನ ಕಾಲದಲ್ಲಿ ಘಟ್ಟಕ್ಕೆ ಬರುತ್ತಿದ್ದ ಕರಾವಳಿ ವಲಸಿಗರು ಹಾಗೂ ಕೃಷಿಕರು ಬಳಸುತ್ತಿದ್ದ ಅತ್ಯಂತ ಸುಲಭ, ಉಚಿತ ಮತ್ತು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಹೆಲ್ಮೆಟ್ ಇದು. ಇದಕ್ಕೆ ಮುಟ್ಟಾಳೆ-ಮಂಡೆಹಾಳೆ_ ಹಾಳೆಟೊಪ್ಪಿ_ಅಡಿಕೆ ಹಾಳೆ ಟೊಪ್ಪಿ ಎಂತಲೂ ಇದನ್ನ ಕರೆಯುತ್ತಾರೆ, ದಿನಗಟ್ಟಲೆ ಬಿಸಿಲು - ಮಳೆಯಲ್ಲಿ ನಡೆದು ಬರುತ್ತಿದ್ದ ಆ ಕಾಲದ ವಲಸೆಯ ಹಾದಿಯಲ್ಲಿ ಮತ್ತು ತೋಟದ ಕೆಲಸಗಳಲ್ಲಿ ಈ ಹಾಳೆ ಟೊಪ್ಪಿಗೆಗೆ ಮಹತ್ವದ ಸ್ಥಾನವಿದೆ. ತೋಟದ ಕೆಲಸದ ಮಧ್ಯೆ ಬರುವ ಬಿಸಿ ಬಿಸಿ ಟೀ ಚಹಾ ಅಥವಾ ಕಾಡಿನ ಹಾದಿಯಲ್ಲಿ ಸಿಗುತ್ತಿದ್ದ ತಾಜಾ ಶೇಂದಿ -ಕಳ್ಳು ಕುಡಿಯಲು ಇದನ್ನು ಬಳಸುವುದು ಅಂದಿನ ಒಂದು ವಿಶಿಷ್ಟ ಸಂಸ್ಕೃತಿಯಾಗಿತ್ತು. ತನಗಿಂತ ಕೆಳಜಾತಿಯವನ ಲೋಟದ ಎಂಜಲು ತನಗೆ ತಗುಲುತ್ತದೆ ಎಂಬ ಭಯ ಮೇಲ್ಜಾತಿಯ ಕಾರ್ಮಿಕರಿಗೂ ಇರುತ್ತಿತ್ತು. ಹಾಳೆ ಟೊಪ್ಪಿಯಲ್ಲಿ ಟೀ ಅಥವಾ ಶೇಂದಿ ಕುಡಿಯುವ ಈ ಪದ್ಧತಿಯ ಹಿಂದೆ ಕೂಡ ಅಂದಿನ ಕಠಿಣ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಕಟು ವಾಸ್ತವ ಅಡಗಿತ್ತು ಇದನ್ನು ಕೇವಲ ಅನುಕೂಲಕ್ಕಾಗಿ ಮಾಡಿದ ವ್ಯವ...