ಶಂಕರಾಚಾರ್ಯರು_ಬರೆದ_ಸೌಂದರ್ಯ_ಲಹರಿ ಅಕ್ಷೇಪ_ಮತ್ತು_ಸಮರ್ಥನೆಗಳು. ಸೌಂದಯ೯ ಲಹರಿ ಕೃತಿಯ ಆರಂಭಿಕ ಶ್ಲೋಕವೇ "ಶಕ್ತಿಯಿಲ್ಲದೆ ಶಿವನೂ ಚಲಿಸಲಾರ" ಎಂಬ ಅದ್ವೈತ ಮತ್ತು ಶಾಕ್ತ ಸಿದ್ಧಾಂತದ ಸಮನ್ವಯವನ್ನು ಸಾರುತ್ತದೆ. ಇದರಲ್ಲಿರುವ ಪ್ರತಿಯೊಂದು ಶ್ಲೋಕಕ್ಕೂ ಒಂದು ನಿರ್ದಿಷ್ಟ ಯಂತ್ರ, ಬೀಜಾಕ್ಷರ ಮತ್ತು ಸಾಧನಾ ಫಲವಿದೆ ಎಂದು ತಂತ್ರಶಾಸ್ತ್ರದಲ್ಲಿ ನಂಬಲಾಗುತ್ತದೆ. ಶಿಖರಿಣೀ ವೃತ್ತದಲ್ಲಿ ರಚಿತವಾಗಿರುವ ಈ ಕೃತಿಯು ಉಪಮೆ, ರೂಪಕ ಹಾಗೂ ಶೃಂಗಾರ-ಭಕ್ತಿ ರಸಗಳಿಂದ ಕೂಡಿದ ಅತ್ಯುನ್ನತ ಸಂಸ್ಕೃತ ಕಾವ್ಯವಾಗಿದೆ. ಸೌಂದರ್ಯ ಲಹರಿಯು ದೇವಿಯ ಅಂತರಂಗದ ಶಕ್ತಿ (ಕುಂಡಲಿನಿ ಯೋಗ) ಮತ್ತು ಬಹಿರಂಗದ ದೈವಿಕ ಸೌಂದರ್ಯವನ್ನು ಏಕಕಾಲದಲ್ಲಿ ಅನಾವರಣಗೊಳಿಸುವ ಆಧ್ಯಾತ್ಮಿಕ ಮಹಾಕಾವ್ಯ. ಕೆಲವು ಶತಮಾನಗಳ ಹಿಂದಿನ ಈ ಗ್ರಂಥಗಳನ್ನ ಉಲ್ಲೇಖಿಸಿ ಈಗಲೂ ತಮ್ಮ ತಮ್ಮ ಸಿದ್ಧಾಂತ ಶ್ರೇಷ್ಠ ಎಂದು ನಿರೂಪಿಸಲು ಇವರೆಲ್ಲ ಖಂಡನೆ ಮಂಡನೆ ಮಾಡುತ್ತಲೇ ಇದ್ದಾರೆ ಅದನ್ನ ಎಲ್ಲರೂ ತಿಳಿಯಲು ಪ್ರಕಟಿಸಲಾಗಿದೆ. ನನ್ನ ಹಿಂದಿನ ಲೇಖನ ಶ್ರೀಶಂಕರಾಚಾರ್ಯರು ರಚಿಸಿದ #ಮನೀಷಾ_ಪಂಚಕಂ ನಂತರ ಶ್ರೀಮಧ್ವಾಚಾರ್ಯರ ಶಿಷ್ಯರಾದ ನಾರಾಯಣ ಪಂಡಿತಾಚಾರ್ಯರು ರಚಿಸಿದ ಈ #ಮಣಿಮಂಜರಿ ಬಗ್ಗೆ ಬರೆದದ್ದು ತಾವು ಓದಿದ್ದೀರಿ. ಈಗ ಶ್ರೀ ಶಂಕರಾಚಾರ್ಯರ ಸೌಂದಯ೯ ಲಹರಿ ಬಗ್ಗೆ ಇಲ್ಲಿ ಪ್ರಕಟ ಮಾಡಿದ್ದೇನೆ ಓದಿ. ಸೌಂದರ...
ಜೆನ್_ಜಿ Gen_Z Generation_Z. ಜೆನ್ ಜಿ ಎಂದರೆ #ಯಾರು?.... ಸಾಮಾನ್ಯವಾಗಿ 1997 ರಿಂದ 2012ರ ಅವಧಿಯಲ್ಲಿ ಜನಿಸಿದ ಜನರ ತಲೆಮಾರನ್ನು ಸೂಚಿಸುತ್ತದೆ. ಈಗ ಎಲ್ಲಿ ನೋಡಿದರೂ ಇವರದ್ದೇ ಸುದ್ದಿ, ಪರ ವಿರೋಧಗಳ ಹೇಳಿಕೆ, ಇವರೆಲ್ಲ ಸೇರಿ ನೀಟ್ ಪರೀಕ್ಷೆ ಪತ್ರಿಕೆ ಲೀಕ್ ಆದ ನಂತರ ದೆಹಲಿ #ಜಂತರ_ಮಂತರ್ ಹೋರಾಟದಿಂದ ಕೇಂದ್ರ ವಿದ್ಯಾ ಮಂತ್ರಿ ರಾಜಿನಾಮೆ ಹೀಗೆ ಸಾಲು ಸಾಲು... ಎಲ್ಲಾ ರಾಜಕೀಯ ಪಕ್ಷಗಳಿಗೂ ಇವರ ಬಗ್ಗೆ ಭಯ, ಸರ್ವೊಚ್ಚ ನ್ಯಾಯಾಲಯ ಇವರನ್ನ ಕಾಕ್ರೋಚ್ (ಜಿರಳೆ) ಅಂದಿದ್ದಕ್ಕೆ #ಕಾಕ್ರೋಚ್_ಜನತಾ_ಪಾರ್ಟಿಯೇ ಹುಟ್ಟಿಕೊಂಡಿದೆ. ರಾಜಕೀಯ ಪಕ್ಷಗಳು ಕೂಲಿ ಕೊಟ್ಟು ಪ್ರೇಕ್ಷಕರನ್ನ ಕರೆ ತಂದರೆ ಇವರೆಲ್ಲ ತಮ್ಮ ಬೆರಳ ತುದಿಯಿಂದ ಸಾಮಾಜಿಕ ಜಾಲ ತಾಣಗಳಲ್ಲಿ ನೀಡಿದ ಕರೆಗೆ ಲಕ್ಷಾಂತರ ಜನ ದೆಹಲಿ ಜಂತರ್ ಮಂತರ್ ನಲ್ಲಿ ಸೇರಿದರು, ಸರ್ಕಾರದ ಲಾಟಿ ಗೀಟಿಗೆ ಹೆದರಿ ಓಡದೆ ಬೆನ್ನು ಕೊಟ್ಟು ನಿಂತರು ಕೇಂದ್ರ ಮಂತ್ರಿ ರಾಜಿನಾಮೆ ನೀಡಿದರೂ ಇವರ ಮೇಲೆ ಹಾಕಿದ ಮೊಕದ್ದಮೆ ಹಿಂಪಡೆದ ಮೇಲೆ ತಮ್ಮ ಚಳವಳಿ ವಾಪಾಸು ಪಡೆದರು, ಇಡೀ ಜಂತರ್ ಮಂತರ್ ಪ್ರದೇಶದ ಕಸ ಆರಿಸಿ ವಿಲೇವಾರಿ ಮಾಡಿ ತಮ್ಮ ಊರಿಗೆ ಮನೆಗೆ ತೆರಳಿದರು. #ಜೆನ್_ಜಿ_ಅಂದರೆ_ಬೇರೆ_ಲೋಕದವರಲ್ಲ ನಮ್ಮ ಮುಂದಿನ ತಲೆ ಮಾರಿನ ಯುವ ಜನಾಂಗ, ನಮ್ಮ ಮನೆಯಲ್ಲಿ ನಮ್ಮ ಸುತ್ತ ಮುತ್ತಲೂ ಇದ್...