ಶತಮಾನಗಳ_ಹಿಂದಿನ_ಶಾಸನಗಳಲ್ಲಿ_ಅಡಿಕೆ. ಸಾವಿರ ವರ್ಷಗಳ ಹಿಂದೆ ಅಡಿಕೆ ಪ್ರಮುಖ ಬೆಳೆ ಆಗಿತ್ತು ಮತ್ತು ಅಡಿಕೆಗೆ ತೆರಿಗೆ - ಸುಂಕಗಳನ್ನ ವಿದಿಸಲಾಗಿತ್ತೆಂಬ ಶಾಸನಗಳು ಅಡಿಕೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದೆ. ಹತ್ತನೆ ಶತಮಾನದಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿಯ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತು. ಮತ್ತು ಹನ್ನೆರಡನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ ಉಲ್ಲೇಖಗಳ ಸಂಗ್ರಹಿಸಿ ಬರೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್ ಹಿರೇಜಂಬೂರ್. ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ. ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ. ಅವರು 10ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕ...
ಕಲ್ಲುಕುಟುಕಸ್ವಾಮಿ ಸೊಪ್ಪುಗುಡ್ಡೆ - ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ. ನೂರಾ ನಲವತ್ತು ವರ್ಷಗಳ ನಮ್ಮ ಕುಟುಂಬದ ಕಥೆ. ನಮ್ಮ ಕುಟುಂಬದ ಕಲ್ಲುಕುಟಿಕ ಮತ್ತು ವರ್ತೆ ದೈವಸ್ಥಾನ ಮೊನ್ನೆ 2026ರ ಮೇ ತಿಂಗಳ 10ನೇ ತಾರೀಖು ಭಾನುವಾರ #ತೀರ್ಥಹಳ್ಳಿಯ_ಸೊಪ್ಪುಗುಡ್ಡೆಯಲ್ಲಿ ಪುನರ್ ಪ್ರತಿಷ್ಠಾಪನೆ ಆಯಿತು ಇದು ನೂರು ವರ್ಷಗಳಲ್ಲಿ ಮೂರನೆ ಪುನರ್ ಪ್ರತಿಷ್ಠಾಪನೆ ಆಗಿದೆ. ಅಂದಾಜು 1890 ನೇ ಇಸವಿಯಲ್ಲಿ ಉಡುಪಿ ಜಿಲ್ಲೆಯ #ಬೆಣ್ಣೆಕುದುರಿನಿಂದ ಘಟ್ಟಕ್ಕೆ ಬರುವಾಗ ನನ್ನ ಅಜ್ಜಿ ಅಬ್ಬಕ್ಕ ತನ್ನ ಜೊತೆ ತಂದಿದ್ದು ಕಲ್ಲುಕುಟಿಕ ದೇವರನ್ನ. ನನ್ನ ಅಜ್ಜಿ ಕಲ್ಲುಕುಟಿಕ ದೇವರ ಆರಾದಿಸುತ್ತಿದ್ದವರು ಮತ್ತು ಕಲ್ಲುಕುಟಿಕ ದೇವರ ನೇಮ, ರೀತಿ-ನೀತಿಗಳ ಕಟ್ಟುಪಾಡು ಕಡ್ಡಾಯವಾಗಿ ಪಾಲಿಸಿಕೊಂಡು ಬಂದವರು. ಸುಮಾರು ನೂರು ವರ್ಷಗಳ ಹಿಂದೆ ತಾನು ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರನ್ನ ಸರಿಯಾಗಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಹೋಗುವ ಭರವಸೆಯನ್ನು ತನ್ನ ಅಕ್ಕನ ಮಗಳು ಶ್ರೀಮತಿ #ಚಿಕ್ಕಮ್ಮರ ಪತಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ #ರಾಮಣ್ಣಪಾತ್ರಿಗಳಲ್ಲಿ ನೋಡಿ ಅಲ್ಲಿಗೆ ಕಲ್ಲುಕುಟಿಕ ದೇವರನ್ನ ಸ್ಥಳಾಂತರಿಸುತ್ತಾರೆ. ಈ ರೀತಿ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ...