Skip to main content

Posts

4028. ಆನಂದಪುರಂ ರೈಲ್ವೆ ಸ್ಟೇಷನ್ ವಡೆ ವಾಸಣ್ಣ

ಆನಂದಪುರಂ_ರೈಲ್ವೆಸ್ಟೇಶನ್_ವಡೆ_ವಾಸಣ್ಣ  ಆನಂದಪುರಂ ರೈಲು ನಿಲ್ದಾಣದ ಹೆಸರು ಪ್ರಸಿದ್ದಿಗೆ ಬಂದಿದ್ದೇ ವಾಸಣ್ಣ ತಯಾರಿಸುತ್ತಿದ್ದ ಬಿಸಿ ಬಿಸಿ ಗರಿ ಗರಿ ಉದ್ದಿನ ವಡೆಯಿಂದ.  ಖ್ಯಾತ ಚಲನಚಿತ್ರ ನಟ ಡಾಕ್ಟರ್ #ರಾಜಕುಮಾರ್, ಮುಖ್ಯಮಂತ್ರಿ #ರಾಮಕೃಷ್ಣಹೆಗಡೆ ಕೂಡ ವಾಸಣ್ಣರ ಉದ್ದಿನ ವಡೆ ಸವಿದವರು ಈ ಮಾರ್ಗದಲ್ಲಿ ಆಗಮಿಸುವ ಎಲ್ಲಾ ಸೆಲೆಬ್ರಿಟಿಗಳು -ಜನ ಸಾಮಾನ್ಯರೂ ವಾಸಣ್ಣನ ರೈಲ್ವೆ ಕ್ಯಾಂಟೀನ್ ನ ಉದ್ದಿನ ವಡೆಗೆ ಫಿದಾ ಆಗಿದ್ದರು.    ವಾಸಣ್ಣ ದಂಪತಿಗಳು ಡಬಲ್ ಘೋಡಾ ಬ್ರಾಂಡಿನ ಉತ್ಕೃಷ್ಟ ಉದ್ದಿನ ಬೇಳೆ ನೆನೆಸಿ ನಂತರ ಅದನ್ನು ತಿರುವ ಕಲ್ಲಿನಲ್ಲಿ ಕೈಯಲ್ಲಿ ಅರೆದು ಕಟ್ಟಿಗೆ ಒಲೆಯಲ್ಲಿ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ಕರಿದು ಮುತ್ತುಗದ ಎಲೆಯಲ್ಲಿ ಹಾಕಿ ಜೊತೆಗೆ ಕಾಯಿ ಚಟ್ನಿ ಸುರಿದು ಕೊಡುತ್ತಿದ್ದರು.  ಆ ಕಾಲದಲ್ಲಿ ಗ್ರೈಂಡರ್, LPG ಗ್ಯಾಸ್ ಸ್ಟವ್ ನಮ್ಮ ಊರಿಗೆ ಬಂದಿರಲಿಲ್ಲ.   ಆಗ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಒಂದು ರೈಲು ಇನ್ನೊಂದು ಬೆಂಗಳೂರಿಂದ ತಾಳಗುಪ್ಪಕ್ಕೆ ಒಂದು ರೈಲು ಬರುತ್ತಿತ್ತು ಇದೇ ರೀತಿ ರಾತ್ರಿ ಎರೆಡು ರೈಲು ಇವೆಲ್ಲವೂ ಕಲ್ಲಿದ್ದಲು ಉರಿಸಿ ಉುಗಿಯಿಂದ ಚಲಿಸುತ್ತಿದ್ದ ಉಗಿ ಬಂಡಿಗಳಾದ್ದರಿಂದ ಅದಕ್ಕೆ ಬೇಕಾದ ನೀರು ಆನಂದಪುರ0 ನಿಲ್ದಾಣದಲ್ಲೇ ತುಂಬಿಸಿಕೊಳ್ಳ ಬೇಕಾದ್ದರಿಂದ ಹೆಚ್ಚು ಸಮಯ ರೈಲು ನಿಲ್ಲುತ್ತಿತ್ತು.   ಪ್ರಯಾಣಿಕರು ವಾಸಣ್ಣನ ಕ್ಯಾಂಟೀನ...
Recent posts

4027. ಜೇನಿ ಮಂಜುನಾಥ ಭಟ್ಟರು

ಹೀಗೂ ಉಂಟೇ... ಇಷ್ಟು ಕಡಿಮೆ ಬೆಲೆಯಲ್ಲಿ ಅಡಿಕೆ ಸಸಿ ಸಿಗುತ್ತಾ? ... #ಮಲೆನಾಡಿನಲ್ಲಿ_ಕೇವಲ_20_ರೂಪಾಯಿಗೆ_ಅಡಿಕೆ_ಸಸಿ_ಲಭ್ಯವಿದೆ.   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದಲ್ಲಿ ( ರಿಪ್ಪನಪೇಟೆ ಹೊಸನಗರ ಮುಖ್ಯ ರಸ್ತೆಯಲ್ಲಿ) #ಮಂಜುಶ್ರೀ_ನರ್ಸರಿ ಇದೆ.   ಇದು ನನ್ನ ಆಪ್ತ ಗೆಳೆಯರಾದ ಮಂಜುನಾಥ ಭಟ್ಟರದ್ದು ಇವತ್ತು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅವರಲ್ಲಿ #ಅಡಿಕೆ_ಸಸಿಗಳು_ಲಭ್ಯವಿದೆ_ಬೆಲೆ_20ರೂಪಾಯಿ.    ಇದು ಕೇಳಿದವರು ಆಶ್ಚರ್ಯ ಪಡುತ್ತಾರೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗುತ್ತಿದೆ ಇದರಿಂದ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ ಇದೆ ಆದರೆ ಅಡಿಕೆ ಸಸಿ ಬೆಲೆ ಒಂದಕ್ಕೆ 100 ರಿಂದ 150 ರ ತನಕ ಆಗಿದೆ.     ಹಾಗಂತ ಇವರು ನರ್ಸರಿ ಕ್ಷೇತ್ರಕ್ಕೆ ಹೊಸಬರಲ್ಲ 1985 ರಿಂದ ಇವರು ಈ ಕ್ಷೇತ್ರದಲ್ಲಿದ್ದಾರೆ ಸುಮಾರು 40 ವರ್ಷದ ಅನುಭವ ಇವರದ್ದು ಇವರ ನರ್ಸರಿಯ ಯಾವುದೇ ಸಸಿ ಕೂಡ ಉತ್ಕೃಷ್ಟ ದರ್ಜೆಯದ್ದೇ ಆಗಿದೆ.    #ಜೇನಿಮಂಜುನಾಥಭಟ್ಟರ ಜೀವನ ಶೈಲಿಯೇ ಬೇರೆ ಅವರಿಗೆ ಆಸೆ ಇಲ್ಲವೇ ಇಲ್ಲ ಅಲ್ಲಿ ದುರಾಸೆ ಎಲ್ಲಿ ಬರಬೇಕು? ... ಕಳೆದ ವರ್ಷ ಇವರಲ್ಲಿ ಅಡಿಕೆ ಸಸಿ ಬೆಲೆ ಕೇವಲ 12 ಇತ್ತು.    ಅವರ ಕಂಡೀಷನ್ ಏನೆಂದರೆ ನೇರವಾಗಿ ರೈತರಿಗೆ ಮಾತ್ರ ಅಡಿಕೆ ಸಸಿ ಮಾರಾಟ ಮಾಡುತ್ತಾರೆ ...

4026. ಹಜ್ ಯಾತ್ರೆ ಭಾಗ-2

ಹಜ್_ಯಾತ್ರೆ_ಭಾಗ_2. ಮುಸ್ಲಿಂ ಧರ್ಮಿಯರ ಹಜ್ ಯಾತ್ರೆ ವಾರ್ಷಿಕ ತೀರ್ಥಯಾತ್ರೆಯಾಗಿದೆ.   ಒಬ್ಬ ಭಾರತೀಯ ಮುಸ್ಲಿಂ ಸಮುದಾಯದ ವ್ಯಕ್ತಿ  ಹಜ್ ಯಾತ್ರೆ ಮಾಡಲು ಹಣ ಎಷ್ಟು ಬೇಕು ?..     ಭಾರತದಿಂದ ಹಜ್ ಯಾತ್ರೆ ಮಾಡಲು ಒಬ್ಬರಿಗೆ ಸರಿಸುಮಾರು ರೂ 3.5 ಲಕ್ಷದಿಂದ ರೂ 10 ಲಕ್ಷದವರೆಗೆ ವೆಚ್ಚವಾಗುತ್ತದೆ.   ಈ ಮೊತ್ತವು ನೀವು ಆಯ್ಕೆ ಮಾಡುವ ಪ್ಯಾಕೇಜ್ (ಸರ್ಕಾರಿ ಅಥವಾ ಖಾಸಗಿ) ಮತ್ತು ಸೌಲಭ್ಯಗಳನ್ನು ಅವಲಂಬಿಸಿರುತ್ತದೆ.   ಹಜ್ ಯಾತ್ರೆಯ ಖರ್ಚುಗಳನ್ನು ಕೆಳಗೆ ವಿವರಿಸಲಾಗಿದೆ.  1.#ಭಾರತೀಯ_ಹಜ್_ಸಮಿತಿ (Haj Committee of India)  ಸರ್ಕಾರಿ ಹಜ್ ಸಮಿತಿಯ ಮೂಲಕ ಪ್ರಯಾಣಿಸಿದರೆ ಒಬ್ಬರಿಗೆ ಸುಮಾರು ರೂ 3.5 ಲಕ್ಷದಿಂದ ರೂ 4.5 ಲಕ್ಷದವರೆಗೆ ಖರ್ಚಾಗುತ್ತದೆ.    ಇದರಲ್ಲಿ ವಿಮಾನ ಪ್ರಯಾಣ, ವಸತಿ, ಸಾರಿಗೆ ಮತ್ತು ಮೂಲಭೂತ ಸೌಕರ್ಯಗಳು ಒಳಗೊಂಡಿರುತ್ತವೆ. 2. #ಖಾಸಗಿ_ಹಜ್_ಟ್ರಾವೆಲ್ ಏಜೆನ್ಸಿಗಳ (Private Tour Operators) ಮೂಲಕ ಖಾಸಗಿ ಆಪರೇಟರ್‌ಗಳು ನೀಡುವ ಐಷಾರಾಮಿ ಸೌಲಭ್ಯಗಳ ಆಧಾರದ ಮೇಲೆ ಒಬ್ಬರಿಗೆ ರೂ 6 ಲಕ್ಷದಿಂದ ರೂ 10 ಲಕ್ಷದವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚವಾಗಬಹುದು.       ಹರಾಮ್ ಮಸೀದಿಯ ಸಮೀಪದ ಹೋಟೆಲ್‌ಗಳು, ಉತ್ತಮ ಊಟದ ವ್ಯವಸ್ಥೆ ಮತ್ತು ವಿಶೇಷ ಮಾರ್ಗದರ್ಶಕರನ್ನು ಇವರು ಒದಗಿಸುತ್ತಾರೆ.  ಇತರ...

4025. ಹಜ್ ಯಾತ್ರೆ ಭಾಗ-3

ಹಜ್_ಯಾತ್ರೆ_ಭಾಗ_3 #ಹಜ್_ಯಾತ್ರೆ_ಹೇಗೆ_ಪ್ರಾರಂಭವಾಯಿತು?... ಹಜ್ ಯಾತ್ರೆಯ ನನ್ನ ಈ ಲೇಖನ ಸರಣಿಯಲ್ಲಿ ಹಜ್ ಯಾತ್ರೆ ಇತಿಹಾಸ - ದುರಂತಗಳು - ಧಾರ್ಮಿಕ ಕ್ರಮಗಳ ವಿವರಗಳು ವಿಶೇಷವಾಗಿ ಮುಸ್ಲೀಮೇತರರು ತಿಳಿಯುವಂತೆ ಬರೆಯಲಾಗುತ್ತದೆ.    ಈ ಲೇಖನ ಸರಣಿ ದೀರ್ಘವಾಗಿರುವುದರಿಂದ ಅದನ್ನು ಕೆಲವು ಭಾಗಗಳಾಗಿ ವಿಂಗಡಿಸಿ ಪ್ರಕಟಿಸಲಾಗುತ್ತದೆ #ಭಾಗ_4 ಮುಂದಿನ ದಿನದಲ್ಲಿ ನಿರೀಕ್ಷಿಸಿ. #ಹಜ್_ಯಾತ್ರೆ_ಮಹತ್ವ_ಮತ್ತು_ಇತಿಹಾಸ ಹಜ್‌ನ ಆಚರಣೆಗಳು ಪ್ರವಾದಿಯವರ ಕಾಲದಲ್ಲಿ ಪ್ರಾರಂಭವಾದರೂ ತೀರ್ಥಯಾತ್ರೆಯ ಮೂಲಗಳು 4,000 ವರ್ಷಗಳಷ್ಟು ಹಿಂದಿನವು.  2000 BC ಯ ಸುಮಾರಿಗೆ ಇಬ್ರಾಹಿಂ ತನ್ನ ಪತ್ನಿ ಹಜೇರಾ (ಹಗೆರ್) ಮತ್ತು ಶಿಶು ಮಗ ಇಷ್ಮಾಯೇಲ್ ಅವರನ್ನು ಮರುಭೂಮಿಯಲ್ಲಿ ಬಿಡಲು ದೇವರು ಆದೇಶಿಸಿದ್ದನೆಂದು ಮುಸ್ಲಿಮರು ನಂಬುತ್ತಾರೆ.  ಇಷ್ಮಾಯೇಲ್ ನಿರ್ಜಲೀಕರಣಗೊಂಡು ತುಂಬಾ ಹಸಿದಿದ್ದರಿಂದ, ಹಜೇರಾ ಸಫಾ ಮತ್ತು ಮಾರ್ವಾ ಬೆಟ್ಟಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಓಡಿ, ವಿಮೋಚನೆಗಾಗಿ ಪ್ರಾರ್ಥಿಸುತ್ತಾರೆ.  ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಆಗ ಒಬ್ಬ ದೇವದೂತ ಕಾಣಿಸಿಕೊಂಡು #ಝಮ್ಜಮ್ ಬಾವಿ ಎಂದು ಕರೆಯಲ್ಪಡುವ ಹೊಸ ನೀರಿನ ಬುಗ್ಗೆಯನ್ನು ಸೃಷ್ಟಿಸುತ್ತಾರೆ.   ಮುಸ್ಲಿಮರು ನಂಬುವಂತೆ ಇಬ್ರಾಹಿಂ ತನ್ನ ಕುಟುಂಬಕ್ಕೆ ಮರಳಿದರು ಮತ್ತು ದೇವರಲ್ಲಿ ತಮ್ಮ ನಂಬಿಕೆಯನ್ನು ಬಲಪಡಿಸಲು ಬಯಸುವವರಿ...

4024. ಪಂಕ್ತಿಯಲ್ಲಿ ಗೌರವದಿಂದ ಅನ್ನ ಬಡಿಸಬಾರದೇಕೆ

ಅನ್ನದಾನದ_ಮುಂದೆ_ಅನ್ಯ_ದಾನವಿಲ್ಲ_ಸರ್ವಜ್ಞ ಹಸಿದವರ ಹೊಟ್ಟೆ ತುಂಬಿಸುವುದೇ ಶ್ರೇಷ್ಠ ಧರ್ಮ ಮತ್ತು ಮಾನವೀಯತೆಯ ಲಕ್ಷಣ,ಆತ್ಮಶುದ್ಧಿಯಿಂದ,ಗೌರವದಿಂದ ಹಸಿದವರಿಗೆ ಅನ್ನ ಬಡಿಸಿದರೆ   ಮಾತ್ರ ತಿಂದವರಿಗೆ ಆತ್ಮತೃಪ್ತಿ ಮತ್ತು ಸಂತೃಪ್ತಿ. #ಅನ್ನ_ಬಡಿಸುವಾಗ ಅನ್ನ ಚೆಲ್ಲುವುದು ಅನ್ನಪೂರ್ಣೇಶ್ವರಿ ದೇವಿಗೆ ಮಾಡುವ ಅಪಮಾನ ಮತ್ತು ದಾರಿದ್ರ್ಯದ ಸಂಕೇತವೆಂದು ಭಾರತೀಯ ಸಂಪ್ರದಾಯದಲ್ಲಿ ನಂಬಲಾಗುತ್ತದೆ.    ಇದು ಮನೆಯಲ್ಲಿ ಆರ್ಥಿಕ ನಷ್ಟ ಅಥವಾ ಆಹಾರದ ಕೊರತೆ ಉಂಟಾಗುವ ಸೂಚನೆ ಎಂದು ಹಿರಿಯರು ಹೇಳುತ್ತಾರೆ.     ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಚೆಲ್ಲಿದ ಅನ್ನವನ್ನು ತೆಗೆದು ಕೈಮುಗಿದು ಕ್ಷಮೆ ಯಾಚಿಸುವುದು ರೂಢಿ.    ಆದರೆ ಈಗಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಮಠಗಳಲ್ಲಿ ಅನ್ನಸಂತರ್ಪಣೆಗಳು ಮಾತ್ರ ಅನೇಕ ರೀತಿಯ ಅವ್ಯವಸ್ಥೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಆಗುತ್ತಿದೆ. #ಅತಿಥಿದೇವೋಭವ' ಎಂದರೆ ಅತಿಥಿಯನ್ನು ದೇವರಿಗೆ ಸಮಾನವಾಗಿ ಕಾಣುವುದು ತೈತ್ತಿರೀಯ ಉಪನಿಷತ್ತಿನಿಂದ ಬಂದ ಈ ಪವಿತ್ರ ಮಂತ್ರವು ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ಸತ್ಕಾರಕ್ಕೆ ನೀಡಲಾಗುವ ಅತ್ಯುನ್ನತ ಗೌರವ ಮತ್ತು ಆದ್ಯತೆಯನ್ನು ಸಾರುತ್ತದೆ. ಈ ತತ್ವದ ಪ್ರಮುಖ ಅಂಶಗಳು ದೈವತ್ವದ ಗೌರವ,ಮನೆಗೆ ಬರುವ ಅತಿಥಿಗಳನ್ನು ಯಾವುದೇ ಭೇದಭಾವವಿಲ್ಲದೆ ದೇವರೆಂದು ಪರಿಗಣಿಸಿ ಉಪಚರಿಸುವುದು.   ಸಾಂಪ್ರದಾಯಿಕ ಮ...

4023. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಗೋಪಾಲಕೃಷ್ಣ ಬೇಳೂರುರವರಿಗೆ ಮಂತ್ರಿ ಸ್ಥಾನ ಸಿಗಲಿ.

ಸಾಗರನ_ವಿಧಾನಸಭಾ_ಕ್ಷೇತ್ರಕ್ಕೆ_ಮಂತ್ರಿ_ಸ್ಥಾನ_ಸಿಗಲಿ.   ಶಾಸಕರಾದ #ಗೋಪಾಲಕೃಷ್ಣಬೇಳೂರು ನೂತನ ಮುಖ್ಯಮಂತ್ರಿ #ಡಿ_ಕೆ_ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಲಿ ಎಂದು ಹಾರೈಸುತ್ತೇನೆ.   ನಮ್ಮ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ದೊರೆತರೆ ಈ ಮೂಲಕ ನಮ್ಮ ಸಾಗರ ವಿಧಾನ ಸಭಾ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ ಆದ್ದರಿಂದ ಯಾವುದೇ ಪಕ್ಷದ ಶಾಸಕರಾಗಿದ್ದರೂ ಅವರ ಪಕ್ಷದ ಸರ್ಕಾರದಲ್ಲಿ ಮಂತ್ರಿ ಆಗಲಿ ಎಂದು ಬಯಸುತ್ತೇನೆ.  ನಮ್ಮ ಸಾಗರ ವಿದಾನ ಸಭಾ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಮಂತ್ರಿ - ಸ್ಪೀಕರ್ ಆಗಿದ್ದರು, ನಮ್ಮ ಆನಂದಪುರಂನವರೇ ಆಗಿದ್ದ ಬದರಿನಾರಾಯಣ ಅಯ್ಯಂಗಾರ್ ಮತ್ತು ನಮ್ಮ ತಾಲ್ಲೂಕಿನವ ರೇ ಆಗಿದ್ದ ಕೆ.ಹೆಚ್. ಶ್ರೀನಿವಾಸರು ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರೂ ಮಂತ್ರಿ ಆಗಿರಲಿಲ್ಲ ಇವರುಗಳು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆದಾಗ ಮಂತ್ರಿ ಆಗಿದ್ದು ಇತಿಹಾಸ. ಶಿವಮೊಗ್ಗ ಜಿಲ್ಲೆಯ ಕಡಿದಾಳು ಮಂಜಪ್ಪ, ಬಂಗಾರಪ್ಪ, ಜೆ. ಹೆಚ್. ಪಟೇಲರು ಮತ್ತು ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು, ಶಿಕಾರಿಪುರದ ಯಂಕಟಪ್ಪ, ಬಸವಣ್ಯಪ್ಪ , ಕಿಮ್ಮನೆರತ್ನಾಕರ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಮತ್ತು ಮಧು ಬಂಗಾರಪ್ಪ ಮಂತ್ರಿಗಳಾಗಿದ್ದವರು.   ನಮ್ಮ ಸಾಗರದ ಮೂವರು ಅಳಿಯಂದಿರು ತಮಕೂರಿನ ನಾಗೇಶ್, ಕಾರ್ಕಳದ ಸುನಿಲ್ ಕುಮಾರ್, ಸಾಗರ ತಾಲೂಕಿನ ಸೊಸೆ ಚಿತ...

4022.ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿದ್ದೆ.

ಶಿವಮೊಗ್ಗ_ಜಿಲ್ಲಾ_ಗ್ರಾಮಾಂತರ_ಸಾರಿಗೆ_ಬಸ್_ಮಾಲಿಕರ_ಸಂಘದ_ಅಧ್ಯಕ್ಷನಾಗಿದ್ದೆ.  1992ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರಿನಂತಹ ಕುಗ್ರಾಮಕ್ಕೆ ಬಸ್ ಸೌಕಯ೯ ನೀಡಬೇಕೆಂಬ ಆಗಿನ ಜಿಲ್ಲಾದಿಕಾರಿಗಳಾದ ವಿಜಯ ಕುಮಾರರ ಸದುದ್ದೇಶಕ್ಕೆ ನಾನು ಕೈಜೋಡಿಸಿದ್ದೆನೆಂಬ ಹೆಮ್ಮೆ ನನ್ನದು.   ಹಾಗಾಗಿ #ಬೆಳ್ಳೂರು ಎಂಬ ಆ ಹಳ್ಳಿ ನನ್ನ ಜೀವಮಾನದಲ್ಲಿ ಮರೆಯಲಾಗದ ಊರು.  ನನ್ನ ಮಾಲಿಕತ್ವದ #ಪ್ರಶಾಂತ್_ಗ್ರಾಮಾಂತರ_ಸಾರಿಗೆ_ಬಸ್ ರಿಪ್ಪನಪೇಟೆಯಿಂದ 14 ಕಿಮಿ ದೂರದ ಬೆಳ್ಳೂರು - ರಿಪ್ಪನ್ ಪೇಟೆ ಆನಂದಪುರಂ- ಸಾಗರ ಮಾಗ೯ದಲ್ಲಿ ಸಂಚಾರಿಸುತ್ತಿತ್ತು. #ಶೆಟ್ಟಿಹಳ್ಳಿ ಅಭಯಾರಣ್ಯದ ಮಧ್ಯೆ ಶರಾವತಿ ಮುಳುಗಡೆ ಸಂತ್ರಸ್ಥರ ಊರು ಈ ಬೆಳ್ಳೂರು. ಈ ಹಳ್ಳಿಗೆ ಬಸ್ ಸೌಕರ್ಯ ನೀಡಿದ ನನ್ನ ಉದ್ಯಮದ ಅನುಭವ. ಇದು ಸಾಧ್ಯವಾಗಿದ್ದು ಆಗಿನ ಉತ್ಸಾಹಿ ಜಿಲ್ಲಾಧಿಕಾರಿ ವಿಜಯಕುಮಾರರ ಗ್ರಾಮಾಂತರ ಸಾರಿಗೆ ಯೋಜನೆ.   ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಸಾರಿಗೆ ಉದ್ಘಾಟನೆ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ಉದ್ಘಾಟಿಸಿದವರು ಆಗಿನ ಮುಖ್ಯಮಂತ್ರಿ ವೀರೆಂದ್ರಪಾಟೀಲರು.    ಆಗಿನ ಸಾರಿಗೆ ಮಂತ್ರಿ ಜಾರ್ಜ್ ಮತ್ತು ಕೃಷಿ ಮಂತ್ರಿ ಬಂಗಾರಪ್ಪರ ಉಪಸ್ಥಿತಿಯ ಉದ್ಘಾಟನೆ ಸಮಾರಂಭದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ನಾನು ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿದ್ದೆ.   ಅವತ್ತು ನಮ್ಮ...