ನೇರಳೇ_ಹಣ್ಣಿನಿಂದ_ಜಂಬೂದ್ವೀಪ_ಎಂಬ_ಭಾರತ_ದೇಶದ_ಮೂಲ_ಹೆಸರು. ನಾವು ವಾಸಿಸುತ್ತಿರುವ ಈ ಪವಿತ್ರ ಭೂಮಿಗೆ ಅತ್ಯಂತ ಪ್ರಾಚೀನ ಕಾಲದಲ್ಲಿ ಹೆಸರು ತಂದುಕೊಟ್ಟಿದ್ದು ಇದೇ ನೇರಳೆ ಹಣ್ಣಿನ ಮರಗಳು. ಇದು ಪ್ರಕೃತಿ ಮತ್ತು ಪರಿಸರಕ್ಕೆ ನಮ್ಮ ಪೂರ್ವಜರು ನೀಡುತ್ತಿದ್ದ ಮಹತ್ವಕ್ಕೆ ಈ ಹೆಸರೇ ಅತಿ ದೊಡ್ಡ ಸಾಕ್ಷಿ. ಪ್ರಾಚೀನ ಭಾರತೀಯ ಇತಿಹಾಸ, ಪುರಾಣ ಮತ್ತು ಭೂಗೋಳ ಶಾಸ್ತ್ರದಲ್ಲಿ ಭಾರತ ಉಪಖಂಡವನ್ನು 'ಜಂಬೂದ್ವೀಪ' ಎಂದು ಕರೆಯಲು ಮುಖ್ಯ ಕಾರಣ ನೇರಳೆ ಮರಗಳು. ಸಂಸ್ಕೃತದಲ್ಲಿ #ಜಂಬೂ ಎಂದರೆ ನೇರಳೆ ಹಣ್ಣು ಮತ್ತು #ದ್ವೀಪ ಎಂದರೆ ನೀರು ಅಥವಾ ಸಮುದ್ರದಿಂದ ಆವೃತವಾದ ಭೂಭಾಗ ಎಂದರ್ಥ. ಈ ಹೆಸರು ಬರಲು ಪ್ರಮುಖ ಕಾರಣಗಳು ಪ್ರಾಚೀನ ಕಾಲದಲ್ಲಿ ಈ ಭೂಪ್ರದೇಶದಲ್ಲಿ ನೇರಳೆ ಮರಗಳು ಅತ್ಯಂತ ವ್ಯಾಪಕವಾಗಿ ಮತ್ತು ದಟ್ಟವಾಗಿ ಬೆಳೆಯುತ್ತಿದ್ದವು. ಇಲ್ಲಿನ ಪರಿಸರ, ಮಣ್ಣು ಮತ್ತು ಹವಾಮಾನವು ನೇರಳೆ ಮರಗಳ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿತ್ತು. ಒಂದು ಪ್ರದೇಶದ ಪ್ರಮುಖ ನೈಸರ್ಗಿಕ ವೈಶಿಷ್ಟ್ಯವನ್ನು ಆಧರಿಸಿ ಹೆಸರು ಇಡುವ ಪದ್ಧತಿಯಂತೆ ಈ ಭೂಭಾಗಕ್ಕೆ 'ಜಂಬೂದ್ವೀಪ' (ನೇರಳೆ ಮರಗಳ ಭೂಮಿ) ಎಂಬ ಹೆಸರು ಬಂದಿತು. ವಿಷ್ಣು ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ಹಿಂದೂ ಪುರಾಣಗಳ ಪ್ರಕಾರ ಜಂಬೂದ್ವೀಪದ ಮಧ್ಯಭಾಗದಲ್ಲಿ ಇಂದಿನ ಹಿಮಾಲಯ ಅಥವಾ ಮೇರು ಪರ್ವತದ ಪ್ರ...
ದಿಡೀರ್_ಇಡ್ಲಿ_ದೋಸೆ_ಹಿಟ್ಟು_ಎಷ್ಟು_ಸಲೀಸು?... #Idli_Dosa_Batter ನಿಮಗೆ ನಿಮ್ಮ ಮನೆಯಲ್ಲಿ ತಯಾರಿಸಿದ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ಅಥವ ಈ ರೆಡಿಮೇಡ್ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ತಿಳಿಸಿ ... ಬೆಂಗಳೂರಿಗೆ ಬಂದು ನೋಡಿ ....ಮಹಾನಗರಗಳಲ್ಲಿ ಇಡ್ಲಿ- ದೋಸೆ ಎಲ್ಲಾ ಇಲ್ಲಿ ಕಷ್ಟವಿಲ್ಲ ಈಗ. ನಾವು ಮನೆಗಳಲ್ಲಿ ಇಡ್ಲಿ ದೋಸೆ ಮಾಡಲು ಹಿಂದಿನ ದಿನವೇ ಕೆಲವು ಗಂಟೆ ಕಾಲ ಅಕ್ಕಿ - ಉದ್ದಿನ ಬೇಳೆ ನೆನೆಸಿ ನಂತರ ರುಬ್ಬಿ ಅದು ಹುದುಗಿ ಬರಲು ಮುಚ್ಚಿ ಇಟ್ಟು ಮರು ದಿನ ಇಡ್ಲಿ- ದೋಸೆ ಮಾಡಬೇಕು ಇದು ಹೆಚ್ಚು ಶ್ರಮ ಮತ್ತು ಹೆಚ್ಚು ಸಮಯ ಕೇಳುವ ಕೆಲಸ. ಆದರೆ ಈಗ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಸಿದ್ಧ ಸಂಸ್ಥೆಗಳು ಆರೋಗ್ಯಕರವಾಗಿ ತಮ್ಮ ಆಹಾರ ಉದ್ಯಮದಲ್ಲಿ ಇಡ್ಲಿ- ದೋಸೆ ಹಿಟ್ಟು ತಯಾರಿಸಿ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಮಹಾನಗರಗಳಲ್ಲಿ ಬೇಕೆಂದಾಗಲೆಲ್ಲ ಈ ದಿಡೀರ್ ಇಡ್ಲಿ/ದೋಸೆ ಹಿಟ್ಟು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಕೆಲವೇ ನಿಮಿಷದಲ್ಲಿ ಮನೆಗೆ ತಲುಪುತ್ತದೆ ತಕ್ಷಣ ದೋಸೆ / ಇಡ್ಲಿ ತಯಾರಿಸಿ ತಿನ್ನ ಬಹುದು. ನಿತ್ಯ ಬೆಳಿಗ್ಗೆ ಹಾಲು ತರಕಾರಿ ಮಾರಾಟ ಮಾಡುವ ಬೀದಿ ವ್ಯಾಪಾರಸ್ಥರೂ ಈ ದಿಡೀರ್ ಇಡ್ಲಿ /ದೋಸೆ ಹಿಟ್ಟು ಮಾರಾಟ ಮಾಡುತ್ತಾರೆ ಇದರಿಂದ ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ತಮ್ಮ ಮನೆಯಲ್ಲಿ ಇಡ್ಲಿ/ದೋಸೆ ತಯಾರಿ ಈಗ ಸುಲಭವಾಗಿದೆ. ...