#ನಿನ್ನೆಗೆ_ನನ್ನ_ಜೀವಮಾನದ_61_ವರ್ಷ_ಪೂರ್ಣವಾಯಿತು. #ನಾನು_ಹುಟ್ಟಿದ್ದು_9_ಫೆಬ್ರುವರಿ_1965ರಂದು #ತಡವಾಗಿ_ನೆನಪಾಯಿತು_ಹುಟ್ಟಿದ_ಹಬ್ಬದ_ಆಚರಣೆ_ನಾನು_ಆಚರಿಸಿಕೊಳ್ಳುವುದಿಲ್ಲ. #ಕಾಲ_ಯಾರಿಗೂ_ಕಾಯುವುದಿಲ್ಲ #ಪ್ರಕೃತಿ_ಎಲ್ಲ_ಜೀವಿ_ಸಸ್ಯಗಳನ್ನು_ನಾಶಮಾಡಲು_ಹೊಸದನ್ನು_ಸೃಷ್ಟಿಸಲು_ನಿರತವಾಗಿರುತ್ತದೆ. #ಇವತ್ತಿನಿಂದ_62ನೇ_ವಯಸ್ಸು_ಪೂರ್ಣ_ಮಾಡುವ_ಕಡೆಗೆ_ನಡಿಗೆ. #Birthday #wishes #Arunprasad #Hombujaresidency #yadehalli #Anandapuram #longwalk ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳವುದಿಲ್ಲ, ಉಡುಗೊರೆ ಸ್ವೀಕರಿಸುವುದಿಲ್ಲ ಆದ್ದರಿಂದ ಪ್ರತಿ ವರ್ಷ ನಾನು ಹುಟ್ಟಿದ ದಿನವಾದ #ಫೆಬ್ರುವರಿ_9 ಈ ಅರಿವು ಇಲ್ಲದೆ ಕಳೆದು ಹೋಗಿ ಬಿಡುತ್ತದೆ. ಹಾಗೆಯೇ ನನ್ನ 61ನೇ ವರ್ಷ ಪೂರೈಸಿದ ದಿನ ಮರೆತು ಹೋಗಿತ್ತು ಅದು ನೆನಪಾಗಿದ್ದು ತಡವಾಗಿ. ಆನಂದಪುರಂ ಬಿಜೆಪಿ ಶಕ್ತಿಕೇಂದ್ರದ #ನಾಡವಳ್ಳಿ_ನಾಗರಾಜ್ ಶುಭಾಷಯ ವಾಟ್ಸಪ್ ಮಾಡಿದ ಮೇಲೆ ನೆನಪಾಯಿತು. 61 ವರ್ಷ ಕಳೆದಾಯಿತು ಇನ್ನೇನಿದ್ದರು 62ನೇ ವಯಸ್ಸಿನ ಉಳಿದ 364 ದಿನಗಳ ಪೂರೈಸುವುದು. 50 ವರ್ಷ ತಲುಪುವ ತನಕ ಆಯಸ್ಸಿನ ವಾಸ್ತವ ಅರ್ಥವೇ ಆಗುವುದಿಲ್ಲ ಅದು 60 ಕ್ಕೆ ತಲುಪಿತು ಎಂದಾಗಲೇ ಎಚ್ಟರಿಕೆ ಆಗುತ್ತದೆ, ಭೂಮಿ ಮೇಲೆ ಇರುವ ದಿನಗಳು ಕಡಿಮೆ ಎಂದು ಆಗಲೇ ಅರಿವಾಗುವುದು. ...
#ಇಡಗುಂಜಿ_ಮಹಾಗಣಪತಿ #ರಂಗೋಲಿಯಲ್ಲಿ_ಮೂಡಿಸಿದ #ಸೂರಜ್_ಕೊಡೂರು #ದೇವರ_ವಿಗ್ರಹಗಳಿಗೆ_ಬೆಣ್ಣೆ_ಅಲಂಕಾರ_ಪ್ರವೀಣರು. #Varasiddivinayaka #Siddivinayakatemple #yadehalli #Bennealankara #Rangoli #Rathotsava #Jatre #Idagunji #Mahaganapathi ನಮ್ಮೂರ ಪುರ ದೈವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರ 20 ನೇ ವರ್ಷದ ಬ್ರಹ್ಮರಥೋತ್ಸವ ಕಳೆದ ಜನವರಿ ತಿಂಗಳ 22ನೇ ತಾರೀಖು ನೆರವೇರಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ #ಇಡಗುಂಜಿ_ಮಹಾಗಣಪತಿಯನ್ನ ರಂಗೋಲಿಯಲ್ಲಿ ಮೂಡಿಸಿದವರು ಅಪ್ರತಿಮ ಕಲಾವಿದರಾದ ಸೂರಜ್ ಅವರು. ಇವರನ್ನ ನಮಗೆ ಪರಿಚಯಿಸಿ ಪ್ರೋತ್ಸಾಹಿಸಿದವರು ನಮ್ಮ ದೇವಾಲಯದ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರು ಮತ್ತು ಶಿವಮೊಗ್ಗದ ಸಿರಿ ಸೌಹಾರ್ದ ಬ್ಯಾಂಕಿನ ಉಪಾದ್ಯಕ್ಷರಾದ ಎಂ. ಜಿ. ಪ್ರಕಾಶ್ ಭಟ್ಟರು. ಸೂರಜ್ ಭಟ್ಟರು ಪ್ರತಿ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ದೇವಾಲಯದಲ್ಲಿ, ಹೋಮದ ಮಂಟಪದಲ್ಲಿ ವಿದಿ ವಿಧಾನದ ರೀತಿ ರಂಗೋಲೆಯಲ್ಲಿ ಮಂಡಲ, ಗಣಪತಿ ಮತ್ತು ಶ್ರೀಚಕ್ರಗಳ ಚಿತ್ರಿಸುತ್ತಾರೆ. ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ. ಹೋಮ ಹವನದಲ್ಲಿ, ಮದುವೆಯ ಹಸೆಮಣೆಯಲ್ಲಿ, ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ. ನಿ...