Skip to main content

Posts

4139.ಮುಹೂರ್ತ_ಮೀರಿದ_ಮದುವೆ_37_ವಸಂತಗಳಸುಂದರ_ಪಯಣ.

ಮುಹೂರ್ತ_ಮೀರಿದ_ಮದುವೆ_37_ವಸಂತಗಳ ಸುಂದರ_ಪಯಣ.   ಅಂದು ಶಿವಮೊಗ್ಗದ ಕೋಟೆ ಆಂಜನೇಯನ ಸನ್ನಿಧಿಯಲ್ಲಿ ನಡೆದ ಆ ರೋಚಕ ಕಥೆ!.. ​ಜೀವನದಲ್ಲಿ ಕೆಲವು ನೆನಪುಗಳು ಕಾಲ ಸರಿದಂತೆ ಮಾಸುವುದಿಲ್ಲ ಬದಲಿಗೆ ಇನ್ನಷ್ಟು ಹಸನಾಗುತ್ತವೆ.   ಇಂದು ನಮ್ಮ ದಾಂಪತ್ಯ ಜೀವನಕ್ಕೆ ಭರ್ತಿ 37 ವರ್ಷ, ​ನಮ್ಮದು ಅಂತರ್ಜಾತಿ ಪ್ರೇಮ ವಿವಾಹ.    ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುಟ್ಟಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೆವು,ಎರಡು ವರ್ಷಗಳ ಕಾಲ ಕಾದ ನಂತರ ಕೊನೆಗೂ ನಮ್ಮ ತಂದೆಯವರನ್ನು ಒಪ್ಪಿಸಿ 1989ರ ಆಗಸ್ಟ್ 23ರಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಅಧಿಕೃತವಾಗಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ದಿನ ನಿಗದಿಯಾಗಿತ್ತು.  ​ಆದರೆ ಅಂದು ನಡೆದ ಘಟನೆಗಳು ಯಾವುದೋ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಿಂತ ಕಡಿಮೆಯಿರಲಿಲ್ಲ! ​ಅವತ್ತು ನಮ್ಮೂರಲ್ಲಿ ಧಾರಾಕಾರ ಮಳೆ,ಇನ್ನೇನು ದೇವಸ್ಥಾನಕ್ಕೆ ಹೊರಡಬೇಕು ಅನ್ನುವಾಗಲೇ ನಮ್ಮ ತಂದೆಯವರು "ನಾನು ಮದುವೆಗೆ ಬರುವುದಿಲ್ಲ" ಎಂದು ಹಠ ಹಿಡಿದುಬಿಟ್ಟರು.   ಪರಿಸ್ಥಿತಿ ತೀರಾ ಗಂಭೀರವಾಗಿ ಕೊನೆ ಗಳಿಗೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಒಪ್ಪಿಸುವಷ್ಟರಲ್ಲಿ ಸಮಯ ಮೀರಿಹೋಗಿತ್ತು.    ಸುರಿಯುವ ಮಳೆಯಲ್ಲೇ ಹೇಗೋ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಿದೆವು.   ಆದರೆ ಅಷ್ಟರಲ್ಲಾಗಲೇ ವಿವಾ...
Recent posts

4138.ಭಾಗ_4_ಕುಂದಾಪುರದ_ಕನ್ನಡಿಗ_ಅನಿಲ್_ಪ್ರಸಾದ್_ಹೆಗ್ಡೆ

ಭಾಗ_4_ಕುಂದಾಪುರದ_ಕನ್ನಡಿಗ_ಅನಿಲ್_ಪ್ರಸಾದ್_ಹೆಗ್ಡೆ.   ಜೇನು ಮತ್ತು ಆನೆಗಳ ಮೇಲೆ ಕುಲಾಂತರಿ ಬೀಜಗಳ ಪರಿಣಾಮ ರಾಜ್ಯಸಭೆಯಲ್ಲಿ ಅವರು ಮಂಡಿಸಿದ ಕುಲಾಂತರಿ ಬೀಜಗಳ ದುಷ್ಟರಿಣಾಮದ ವಿಷಯ.   ಕುಂದಾಪುರದ ಕನ್ನಡಿಗ ಅನಿಲ್ ಪ್ರಸಾದ್ ಹೆಗ್ಡೆ ಜಾರ್ಜ್ ಪರ್ನಾಂಡಿಸರ ಜೊತೆಯಾಗಿ ದೇಸಿ ಬೀಜ ಸಂರಕ್ಷಣೆಗಾಗಿ ಹೋರಾಡುತ್ತಲೇ ಬಂದವರು.    ಕುಲಾಂತರಿ ಬೀಜಗಳಿಂದ ಜೇನಿನಿಂದ ಆನೆ ತನಕ ಆಗುವ ಅನಾಹುತದ ಬಗ್ಗೆ ಅವರು ಸಂಸತ್ ನಲ್ಲಿ ಮಂಡಿಸಿದ ವಿಚಾರದ ಬಗ್ಗೆ ಈ ವಿಡಿಯೋ ಸಂದರ್ಶನದಲ್ಲಿ ಮಾತಾಡಿದ್ದಾರೆ.   ಜೇನು ಸಾಕಾಣಿಕೆದಾರರು ಮತ್ತು ದೇಸಿ ಬೀಜ ಸಂರಕ್ಷರು ತಪ್ಪದೇ ಈ ಸಂದರ್ಶನ ನೋಡಿ ಮತ್ತು ಆಸಕ್ತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.  ಕುಲಾಂತರಿ (Genetically Modified / GM) ಬೆಳೆಗಳ ವಿಸ್ತರಣೆ ಮತ್ತು ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ಅಧಿಕ ರಾಸಾಯನಿಕ ಹಾಗೂ ಕೀಟನಾಶಕ ಬಳಕೆ ಪರಿಸರ ವ್ಯವಸ್ಥೆಯ ಎರಡು ಪ್ರಮುಖ ಜೀವಿಗಳಾದ ಜೇನುನೊಣಗಳು ಮತ್ತು ಆನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.   ಬಹುತೇಕ ಕುಲಾಂತರಿ ಬೆಳೆಗಳು (ಉದಾಹರಣೆಗೆ ಗ್ಲೈಫೋಸೇಟ್-ನಿರೋಧಕ ಬೆಳೆಗಳು) ಕಳೆನಾಶಕಗಳನ್ನು ತಡೆದುಕೊಳ್ಳುವಂತೆ ರೂಪಿತವಾಗಿರುತ್ತವೆ.   ಇದರಿಂದಾಗಿ ಹೊಲಗಳಲ್ಲಿ ಸಿಂಪರಣೆಯಾಗುವ ರಾಸಾಯನಿಕಗಳ ಪ್ರಮಾಣ ಅಧಿಕವಾಗುತ್ತದೆ. ​ ಹೊಲದಂಚಿನ ನೈಸರ್ಗಿಕ ಹೂಬಿಡುವ ಕಳೆ ಗಿಡಗಳು ಸಂಪೂರ್ಣವಾಗಿ ನಾಶ...

4137.ಅಡಿಕೆ_ವಿಶ್ವ_ಆರೋಗ್ಯ_ಸಂಸ್ಥೆಯ_ಕ್ಯಾನ್ಸರ್_ಕಾರಕ_ಪಟ್ಟಿಯಿಂದ_ಹೊರಬಂದರೆ

ಅಡಿಕೆ_ವಿಶ್ವ_ಆರೋಗ್ಯ_ಸಂಸ್ಥೆಯ_ಕ್ಯಾನ್ಸರ್_ಕಾರಕ_ಪಟ್ಟಿಯಿಂದ_ಹೊರಬಂದರೆ ...  ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಗಸಂಸ್ಥೆಯಾದ IARC (International Agency for Research on Cancer) ಅಡಿಕೆಯನ್ನು ಕ "ಕ್ಯಾನ್ಸರ್ ಕಾರಕ" (Group 1 Carcinogen) ಪಟ್ಟಿಯಿಂದ ತೆಗೆದುಹಾಕಿದರೆ ಅಥವಾ ಅದರ ಶ್ರೇಣಿಯನ್ನು ಬದಲಾಯಿಸಿದರೆ ಅಡಿಕೆ ಬೆಳೆಗಾರರಿಗೆ ಮತ್ತು ಈ ಕ್ಷೇತ್ರಕ್ಕೆ ಹಲವಾರು ಪ್ರಮುಖ ಲಾಭಗಳು ದೊರೆಯಲಿವೆ. ​ ಮಾರುಕಟ್ಟೆ ಮತ್ತು ಬೆಲೆಯಲ್ಲಿ ಸ್ಥಿರತೆ,​ನಿರಂತರ ಬೇಡಿಕೆ ಬರಲಿದೆ.    'ಕ್ಯಾನ್ಸರ್ ಕಾರಕ' ಎಂಬ ಪಟ್ಟಿಯಿಂದಾಗಿ ಗ್ರಾಹಕರಲ್ಲಿ ಉಂಟಾಗಿದ್ದ ಭಯ ನಿವಾರಣೆಯಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗುತ್ತದೆ.   ​  ಪ್ರಸ್ತುತ ಬೆಲೆಯಲ್ಲಿ ಪದೇ ಪದೇ ಆಗುವ ಏರಿಳಿತಗಳು ಕಡಿಮೆಯಾಗಿ, ರೈತರಿಗೆ ತಮ್ಮ ಬೆಲೆಗೆ ನ್ಯಾಯಯುತ ಹಾಗೂ ಸ್ಥಿರವಾದ ಧಾರಣೆ ಸಿಗುತ್ತದೆ.    ಸರ್ಕಾರಗಳು ಅಡಿಕೆ ಬಳಕೆ, ಸಾಗಾಣಿಕೆ ಅಥವಾ ಮಾರಾಟದ ಮೇಲೆ ಹೇರಬಹುದಾದ ನಿಷೇಧದ  ಆತಂಕ ನಿವಾರಣೆಯಾಗುತ್ತದೆ.   ​  ಅಡಿಕೆಯನ್ನು ಹಾನಿಕಾರಕ ವಸ್ತುವೆಂದು ಪರಿಗಣಿಸಿ ವಿಧಿಸಲಾಗುವ ಹೆಚ್ಚಿನ ಜಿಎಸ್‌ಟಿ (GST) ಅಥವಾ ಇತರೆ ತೆರಿಗೆಗಳನ್ನು ಕಡಿತಗೊಳಿಸಲು ಹಾದಿ ಸುಗಮವಾಗುತ್ತದೆ.   ​ ಹೊಸ ಉಪ-ಉತ್ಪನ್ನಗಳು ಮತ್ತು ಮೌಲ...

4136.ವ್ಯಾಟಿಕನ್_ಟು_ಸಾಗರಜೋಸ್_ಪಾದರ್_ಕನ್ನಡಾಭಿಮಾನಕನ್ನಡ_ಕಲಿತ_ಪಾದ್ರಿಗಳು

ವ್ಯಾಟಿಕನ್_ಟು_ಸಾಗರ ಜೋಸ್_ಪಾದರ್_ಕನ್ನಡಾಭಿಮಾನ ಕನ್ನಡ_ಕಲಿತ_ಪಾದ್ರಿಗಳು   ಡಾಕ್ಟರ್ ಪಿ.ವಿ. ಜೋಸೆಪ್ ಅವರನ್ನ ಇಲ್ಲಿಯವರು ಕರೆಯುವುದು ಜೋಸ್ ಪಾದರ್ ಅಂತ ಈಗ ಕೇರಳದಲ್ಲಿ ನಿವೃತ್ತ ಜೀವನ ಸವೆಸುತ್ತಿದ್ದಾರೆ, ಇವರು ವಿಶೇಷ ವ್ಯಕ್ತಿ ಇವರ ಸಾಧನೆ ಅಮೋಘ,ಯಾವುದೇ ಪ್ರಸಿದ್ಧಿಗಾಗಿ, ಪ್ರಶಸ್ತಿ ಸನ್ಮಾನಗಳಿಗಾಗಿ ಸೇವೆ ಮಾಡಿದವರಲ್ಲ ಅದರಿಂದ ಇವರು ಬಲು ದೂರ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದ ಮುಂಬಾಳಿಗೆ ಬಂದು ಗೋಕುಲ್ ಪಾರಂ ಸ್ಥಾಪಿಸಿ ಸಾಗರ ತಾಲೂಕಿನಲ್ಲಿ ಇವರು ಮಾಡಿದ ದೂರದೃಷ್ಟಿಯ social economical development program ಬಗ್ಗೆ ಎಷ್ಟು ಹೇಳಿದರೂ ಕಡಿಮೆ.   ಇವರು ಜನಿಸಿದ್ದು ಕೇರಳದಲ್ಲಿ ಮಾತೃ ಭಾಷೆ ಮಲೆಯಾಳಂ, ಇವರ ವಿದ್ಯಾಭ್ಯಾಸ ಕ್ರೈಸ್ತರ ಪರಮೊಚ್ಚ ಧರ್ಮಗುರು ಪೋಪ್ ಇರುವ ವ್ಯಾಟಿಕನ್ ನಲ್ಲಿ.    ಕೃಷಿ ಮತ್ತು ಮಹಾತ್ಮಾ ಗಾಂಧಿ ಇವರ ಉನ್ನತ ಶಿಕ್ಷಣದ ವಿಷಯಗಳು, ಇವರು ಕರ್ನಾಟಕಕ್ಕೆ ಬಂದು ನಂಜನಗೂಡಿನಲ್ಲಿ ಆರಾಧ್ಯ ಎಂಬುವವರಿಂದ ಕನ್ನಡ ಬಾಷೆಯ ಅಕ್ಷರಾಭ್ಯಾಸ ಮಾಡಿ ನಂತರ ಒಂದನೆ ತರಗತಿ, ಎರಡನೆ ತರಗತಿ ಮಕ್ಕಳ ಜೊತೆ ಕುಳಿತು ಪಾಠ ಕಲಿತು ನಂತರ ಕನ್ನಡ ಬರೆಯಲು ಮತ್ತು ಓದಲು ಕಲಿತ ದಿನಗಳ ನೆನಪು ಮಾಡಿಕೊಂಡಿದ್ದಾರೆ ಈ ಸಂದರ್ಶನದಲ್ಲಿ.     ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದರೂ ನನ್ನ ಮಕ್ಕಳನ್ನ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಿಸಿದ್ದೆ ಆಗಲೇ...

4135.ಇಂದ್ರಾಯಣಿ_ಅಕ್ಕಿ_ನಿಮಗೆ_ಗೊತ್ತಾ..

ಇಂದ್ರಾಯಣಿ_ಅಕ್ಕಿ_ನಿಮಗೆ_ಗೊತ್ತಾ..  Indrayani Rice - ಇಂದ್ರಾಯಿಣಿ ಅಕ್ಕಿ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ (ಮುಖ್ಯವಾಗಿ ಪುಣೆ, ಮಾವಳ್ ಪ್ರದೇಶದಲ್ಲಿ) ವ್ಯಾಪಕವಾಗಿ ಬೆಳೆಯಲಾಗುವ ಅತ್ಯಂತ ಜನಪ್ರಿಯ ಸುಗಂಧಿತ ಅಕ್ಕಿ ತಳಿ ಇದು ನಮ್ಮ ರಾಜ್ಯದ ಗಂಧ ಸಾಲೆ / ಗಮ್ ಗಾಳಿ ಅಕ್ಕಿಯ ರೀತಿಯೇ ಕೊಂಚ ಬೇರೆ ತರ ಇದೆ.  ಇಂದ್ರಾಯಣಿ ನದಿಯು #ನಾಥ_ಪಂಥದ ಸಂತ # ಜ್ಞಾನೇಶ್ವರನಾಥ್ ರ ಸಮಾಧಿ ಇರುವ ಆಳಂದಿ ಮತ್ತು #ಸಂತ_ತುಕಾರಾಮರ ಜನ್ಮಸ್ಥಳವಾದ #ದೇಹೂ ಮುಂತಾದ ಧಾರ್ಮಿಕ ಕ್ಷೇತ್ರಗಳ ಮೂಲಕ ಹರಿಯುವ ಪವಿತ್ರ ನದಿಯಾಗಿದ್ದು ಈ ಅಕ್ಕಿಗೆ ಇದೇ ಹೆಸರು ಬಂದಿರುವುದು ಈ ಅಕ್ಕಿಗೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.   ಇದು ಅಂಬೇಮೊಹರ್  ತಳಿಯಂತೆಯೇ ಅತ್ಯುತ್ತಮ ನೈಸರ್ಗಿಕ ಸುವಾಸನೆ ಹಾಗೂ ಮೃದುವಾದ ರುಚಿಯನ್ನು ಹೊಂದಿರುತ್ತದೆ. ​ ಬೇಯಿಸಿದ ನಂತರ ಈ ಅನ್ನವು ಬಹಳ ಮೃದುವಾಗುತ್ತದೆ ಮತ್ತು ಸ್ವಲ್ಪ ಜಿಗುಟಾದ (sticky) ಗುಣವನ್ನು ಪಡೆಯುತ್ತದೆ. ​ಮಧ್ಯಮ ಗಾತ್ರದ ಕಾಳುಗಳನ್ನು ಹೊಂದಿರುತ್ತದೆ,​ದಿನನಿತ್ಯದ ಸಾಂಬಾರ್-ಅನ್ನ, ರಸಂ-ಅನ್ನಕ್ಕೆ ಸೂಕ್ತ.   ​ಮೃದುವಾಗಿರುವುದರಿಂದ ಕಿಚಡಿ, ಪುಲಾವ್, ಪಾಯಸ (ಖೀರ್) ಮತ್ತು ಮೊಸರನ್ನಕ್ಕೆ ಇದು ಅತ್ಯುತ್ತಮ ಆಯ್ಕೆ.   ​ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ಆಹಾರ ತಯಾರಿಸಲು ಇದು ಸೂಕ್ತ.  ​ಅಡುಗೆ ಮಾಡುವಾಗ ಗಮನಿಸಬೇಕಾದ ಅಂಶ ...

4134.ಅಡಿಕೆ_ಗ್ರೂಪ್_1_ಕಾರ್ಸಿನೋಜೆನ್_ಪಟ್ಟಿಯಲ್ಲಿ_ಸೇರಿದ್ದರಿಂದ_ಆಗಿರುವ_ಪರಿಣಾಮ

ಅಡಿಕೆ_ಗ್ರೂಪ್_1_ಕಾರ್ಸಿನೋಜೆನ್_ಪಟ್ಟಿಯಲ್ಲಿ_ಸೇರಿದ್ದರಿಂದ_ಆಗಿರುವ_ಪರಿಣಾಮ.  ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಗಸಂಸ್ಥೆಯಾದ IARC (International Agency for Research on Cancer) 2004ರಲ್ಲಿ ಅಡಿಕೆಯನ್ನು Group 1 Carcinogen (ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡುವ ನಿಶ್ಚಿತ ಕಾರಕ) ಎಂದು ವರ್ಗೀಕರಿಸಿದ್ದರಿಂದ ಅಡಿಕೆ ವಲಯ, ಬೆಳೆಗಾರರು ಮತ್ತು ಮಾರುಕಟ್ಟೆಯ ಮೇಲೆ ಹಲವಾರು ಗಂಭೀರ ಹಾಗೂ ನಕಾರಾತ್ಮಕ ಪರಿಣಾಮಗಳು ಉಂಟಾಗಿವೆ.   ಭಾರತದಲ್ಲಿ ಅನೇಕ ರಾಜ್ಯ ಸರ್ಕಾರಗಳು ಅಡಿಕೆ ಮಿಶ್ರಿತ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಮೇಲೆ ನಿಷೇಧ ಹೇರಿದವು. ​ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳಲ್ಲಿ ಅಡಿಕೆ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೋರಿ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (PIL) ಸಲ್ಲಿಕೆಯಾದವು.    ಇದು ಅಡಿಕೆ ವಲಯಕ್ಕೆ ನಿರಂತರ ಆತಂಕದ ಸ್ಥಿತಿಯನ್ನು ನಿರ್ಮಿಸಿತು. ​  ಅಡಿಕೆಯನ್ನು WHO ಕ್ಯಾನ್ಸರ್ ಪಟ್ಟಿಗೆ ಸೇರಿಸಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಭೀತಿ ಸೃಷ್ಟಿಯಾಗಿ ಅಡಿಕೆ ಧಾರಣೆಯಲ್ಲಿ ತೀವ್ರ ಏರಿಳಿತಗಳು  ಕಂಡುಬಂದವು. ​ "ನಾಳೆ ಸರ್ಕಾರ ಅಡಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ನಮ್ಮ ಗತಿಯೇನು?" ಎಂಬ ನಿರಂತರ ಆತಂಕದಲ್ಲಿಯೇ ಲಕ್ಷಾಂತರ ಸಣ್ಣ ಮತ್ತು ಅಂಚಿನ ರೈತರು ಅಡಿಕೆ ಕೃಷಿ ಮಾಡುವಂತಾಯಿತು. ​  ವಿಶ್ವದ ಅನೇ...

4133.ನೀವು ಜೋಗ್ ಫಾಲ್ಸ್ ಟೂರ್ ಹೋಗ್ತಾ ಇದೀರಾ... ಸ್ವಲ್ಪ ನಿಲ್ಲಿ ಈ ಹಾಡಿನ ಬಗ್ಗೆ ನಿಮಗೆ ಇಲ್ಲಿದೆ ಪೂರ್ತಿ ಮಾಹಿತಿ ದಯವಿಟ್ಟು ಓದಿ ಮತ್ತು ನಿಮ್ಮ ಸಂಗಡಿಗರಿಗೆ ಶೇರ್ ಮಾಡಿ.

  ಸಾಯೋದರಲ್ಲಿ_ಒಮ್ಮೆ_ನೋಡು_ಜೋಗಾದ_ಗುಂಡಿ  ನೀವು ಜೋಗ್ ಫಾಲ್ಸ್ ಟೂರ್ ಹೋಗ್ತಾ ಇದೀರಾ... ಸ್ವಲ್ಪ ನಿಲ್ಲಿ ಈ ಹಾಡಿನ ಬಗ್ಗೆ ನಿಮಗೆ ಇಲ್ಲಿದೆ ಪೂರ್ತಿ ಮಾಹಿತಿ ದಯವಿಟ್ಟು ಓದಿ ಮತ್ತು ನಿಮ್ಮ ಸಂಗಡಿಗರಿಗೆ ಶೇರ್ ಮಾಡಿ.    #ಮೂಗೂರು_ಮಲ್ಲಪ್ಪನವರು ಬರೆದ ಜೋಗದ ಗುಂಡಿ ಲಾವಣಿ ನಟ ಸಾರ್ವಬೌಮ #ಡಾಕ್ಟರ್_ರಾಜಕುಮಾರ್ ತಮ್ಮ ಜೀವನ ಜೈತ್ರ ಸಿನಿಮಾದಲ್ಲಿ ಅಳವಡಿಸಿ ಅವರೇ ಸ್ವತಃ ಹಾಡಿದ್ದರಿಂದ ಜಗತ್ ಪ್ರಸಿದ್ದಿ ಪಡೆದಿದೆ.   ನಮ್ಮ ಸಾಗರ ತಾಲೂಕಿನ ಜೋಗ್ ಜಲಪಾತ ಈ ಮೂಲಕ ಚಲನ ಚಿತ್ರಗೀತೆಯಾಗಿ ನಾಡಿನಾದ್ಯಂತ ಹರಿಯುತ್ತಿರುವುದು ಹೆಮ್ಮೆಯ ಸಂಗತಿ.   ಈಗ ಜೋಗ್ ಫಾಲ್ಸ್ ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಪ್ರವಾಸಿಗರು ತಂಡೋಪ ತಂಡವಾಗಿ ಬರುತ್ತಿದ್ದಾರೆ ಈ ಹಾಡು ಎಲ್ಲರ ಬಾಯಲ್ಲೂ ಗುಣುಗುತ್ತಿದೆ.   ನಮ್ಮ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಗೇರುಸೊಪ್ಪೆ ಕಣಿವೆಯಲ್ಲಿ ಜೋಗ್ ಜಲಪಾತ ಆಗಿ ದುಮ್ಮಿಕ್ಕುತ್ತದೆ.      ಜೋಗ್ ಜಲಪಾತದ ಬಗ್ಗೆ ಪ್ರಸಿದ್ಧ ಲಾವಣಿ ಬರೆದವರು ಮೂಗೂರು ಮಲ್ಲಪ್ಪನವರು.    ಅದನ್ನು ಖ್ಯಾತ ನಟ ರಾಜ್ ಕುಮಾರ್ ತಮ್ಮ ಸಿನಿಮಾದಲ್ಲಿ ಹಾಡಿದ್ದರಿಂದ ಅದು ಇನ್ನೂ ಹೆಚ್ಚು ಪ್ರಖ್ಯಾತಿ ಆಯಿತು.   ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದರಲ್ಲಿ ಒಮ್ಮೆ ನೋಡು ಜೋಗಾದ ಗುಂಡಿ. ...