ಕರ್ನಾಟಕದಲ್ಲಿ_ಖಾತೆ_ಕಾನು ಅದರ_ವಿಸ್ತೀರ್ಣ_ಎಷ್ಟು?... ಅದರ_ಸಂರಕ್ಷಣೆ_ಹೇಗಿದೆ? ... #ಪಶ್ಚಿಮ_ಘಟ್ಟ_ಸಂರಕ್ಷಣಾ_ಕಾರ್ಯಪಡೆಯಂತ ಸಮಿತಿಗಳು ಈ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರ ಸಹಕಾರ ಪಡೆದು ಕಾಡು ಸಂರಕ್ಷಣೆ ಮಾಡ ಬಾರದೇಕೆ?... #ಶಿವಮೊಗ್ಗ_ಜಿಲ್ಲೆಯಲ್ಲಿ ಈ ರೀತಿಯ ಹತ್ತು ಸಾವಿರ ಎಕರೆಗಿಂತ ಹೆಚ್ಚಿನ ದಟ್ಟ ಕಾಡು ಇರುವ ಖಾತೆ ಕಾನುಗಳು ಒತ್ತುವರಿ ಮತ್ತು ಅಕ್ರಮ ಮರ ಕಡಿತಲೆ ಆಗುತ್ತಲೇ ಇದೆ. #ಕಸ್ತೂರಿರಂಗನ್ ವರದಿ ಜಾರಿ ಆದರೆ ಮಾತ್ರ ಪಶ್ಚಿಮ ಘಟ್ಟದ ಕಾಡು ಉಳಿದೀತು ಎನ್ನುವ ಮೊದಲು ಈ ಬಗ್ಗೆ ಒಮ್ಮೆ ದೃಷ್ಟಿ ಹಾಕಿ... ಶಿವಮೊಗ್ಗ ಜಿಲ್ಲೆಯ ಸುಮಾರು ಹತ್ತು ಸಾವಿರ ಎಕರೆಗೂ ಹೆಚ್ಚಿನ ದಟ್ಟ ಕಾಡು ಅರಣ್ಯ ಇಲಾಖೆಗೆ ಸೇರಿದೆ ಮತ್ತು ಇಲಾಖಾ ಕಡತದಲ್ಲಿ ಅದು ಸುರಕ್ಷಿತವಾಗಿದೆ ಆದರೆ ನೀವು ಸ್ಥಳ ಪರಿಶೀಲನೆ ಮಾಡಿದರೆ ಅಲ್ಲಿ ಈ ಅರಣ್ಯಗಳಲ್ಲಿ ಒತ್ತುವರಿ ಮತ್ತು ಅಕ್ರಮ ಮರಕಡಿತಲೆ ನಿರಂತರವಾಗಿ ನಡೆಯುತ್ತಲೇ ಇದೆ. ಪಶ್ಚಿಮ ಘಟ್ಟಗಳ ಮಲೆನಾಡು ಭಾಗದಲ್ಲಿ ವಿಶೇಷವಾಗಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಮುಂತಾದ ಕಡೆ ಕಂದಾಯ ಮತ್ತು ಅರಣ್ಯ ಇಲಾಖೆಗಳ ಗೊಂದಲದಿಂದ ಖಾಸಗಿಯವರ ಹೆಸರಿನಲ್ಲಿರುವ ಅಥವಾ ಖಾಸಗಿ ಹಿಡುವಳಿ ರೂಪದಲ್ಲಿ ದಾಖಲಾಗಿರುವ ಕಾನು ಅರಣ್ಯ ಭೂಮಿಗಳು ಸರಿಯಾಗಿ ಸಂರಕ್ಷಣೆ ಮಾಡದೆ ಒತ್ತುವರಿ ಮತ್ತು ಅಕ್ರಮ ಮರ ಕಡಿತಲೆ ನಿರಂತರವಾಗಿ ನಡೆಯುತ್ತಿದೆ. ಶಿವಮೊಗ್ಗ ...
ಮಂಜುನಾಥ_ಗೌಡರು_ಅಧ್ಯಕ್ಷರು ಮಲೆನಾಡು_ಪ್ರದೇಶಾಭಿವೃದ್ಧಿ_ಮಂಡಳಿ Malnad_Area_Development_Board_MADB. ನಮ್ಮ ಜಿಲ್ಲೆಯವರೇ ಆದ ಆರ್. ಎಂ. ಮಂಜುನಾಥ ಗೌಡರು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾರೆ ಇದು ಕ್ಯಾಬಿನೆಟ್ ಸಚಿವ ಸ್ಥಾನಮಾನದ ಹುದ್ದೆ. ಇವರು ಕಸ್ತೂರಿ ರಂಗನ್ ವರದಿ ಮಾರ್ಪಾಡಿಗೆ ರಾಜ್ಯ ಸರ್ಕಾರ ಮತ್ತು ಮಲೆನಾಡಿನ ಜನರ ಮಧ್ಯೆ ಕೊಂಡಿ ಆಗಿ ಕೀ ರೋಲ್ ಕೆಲಸ ಮಾಡಬಹುದಾಗಿದೆ. ಇವರ ಅಧಿಕಾರ ವ್ಯಾಪ್ತಿ ರಾಜ್ಯದ 13 ಜಿಲ್ಲೆಗಳು ಮತ್ತು 66 ವಿಧಾನಸಭಾ ಕ್ಷೇತ್ರಗಳು ಬರುತ್ತದೆ ಇದು ಸಣ್ಣ ಕ್ಷೇತ್ರವಲ್ಲ, ರಾಜ್ಯದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟದ ಪೂರ್ತಿ ಪ್ರದೇಶ ಇವರ ವ್ಯಾಪ್ತಿಯಿಲ್ಲಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (Malnad Area Development Board - MADB) ಮಲೆನಾಡಿನ 13 ಜಿಲ್ಲೆಗಳ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಶಾಸನಬದ್ಧ ಸಂಸ್ಥೆಯಾಗಿದೆ. ಕಸ್ತೂರಿ ರಂಗನ್ ವರದಿಯಂತಹ ಸೂಕ್ಷ್ಮ ಹಾಗೂ ಗಂಭೀರ ವಿಷಯದಲ್ಲಿ ಮಂಡಳಿಯು ಕೇವಲ ರಸ್ತೆ-ಸೇತುವೆ ನಿರ್ಮಾಣಕ್ಕೆ ಸೀಮಿತವಾಗದೆ ಸರ್ಕಾರ ಮತ್ತು ಜನರ ನಡುವೆ ಪ್ರಮುಖ ಕೊಂಡಿಯಾಗಿ ಈ ಕೆಳಗಿನ ಜವಾಬ್ದಾರಿಗಳನ್ನು ವಹಿಸಬಹುದಾಗಿದೆ. ಮಂಡಳಿ ವಹಿಸಬಹುದಾದ ಪ್ರಮುಖ ಜವಾಬ್ದಾರಿಗಳು ವಾಸ್ತವಾಂಶದ ಸಮೀಕ್ಷೆ, ಉಪಗ್ರಹ ಆಧಾರಿತ ಸಮ...