ಭಾಗ_2_ಜೈನ_ನಿಶಿದಿಗಳನ್ನು_ಸಿದ್ದಪ್ಪನ_ದೇವಾಲಯಗಳನ್ನಾಗಿ_ಮಾಡುವುದಕ್ಕೆ_ಆಗಮ_ಶಾಸ್ತ್ರದಲ್ಲಿ_ಒಪ್ಪಿಗೆ_ಇದೆಯೇ?... ಶಾಸ್ತ್ರಗಳು ಏನು ಹೇಳುತ್ತವೆ?... ನಿಮ್ಮೂರ ಹಳೆಯ ದೇವಸ್ಥಾನದ ಕಂಬಗಳನ್ನು ನೋಡಿದ್ದೀರಾ . ಇತಿಹಾಸ ವರ್ಸಸ್ ಆಗಮ ಶಾಸ್ತ್ರ 'ಪರಧರ್ಮ ಕ್ಷೇತ್ರ ಪರಿವರ್ತನೆ' ಮಹಾದೋಷ ಎನ್ನುತ್ತದೆ ವಾಸ್ತುಶಾಸ್ತ್ರ!. ಸಿದ್ದಪ್ಪನ ಗುಡಿಗಳ ಹಿಂದಿನ ಶಾಸ್ತ್ರೀಯ ಸತ್ಯ ಏನು?, ಮತಾಂತರಗೊಂಡ ಸ್ಮಾರಕಗಳ ಬಗ್ಗೆ ಧರ್ಮಶಾಸ್ತ್ರದ ನಿಲುವೇನು? ... ಕಳೆದ ಲೇಖನದಲ್ಲಿ ನಾವು ಜೈನ ಧರ್ಮದ "ನಿಶಿದಿ ಮಂಟಪಗಳು" ಸಲ್ಲೇಖನ ಸ್ಮಾರಕಗಳು ಕಾಲಾಂತರದಲ್ಲಿ ಹೇಗೆ ಸಿದ್ದಪ್ಪನ ಗುಡಿಗಳಾಗಿ ಬದಲಾದವು ಎಂಬ ಇತಿಹಾಸವನ್ನು ತಿಳಿದುಕೊಂಡಿದ್ದೆವು. ಆದರೆ ಇಲ್ಲಿ ಕಾಡುವ ಒಂದು ದೊಡ್ಡ ಪ್ರಶ್ನೆ ಎಂದರೆ ಹೀಗೆ ಒಂದು ಧರ್ಮದ ಪವಿತ್ರ ಸ್ಮಾರಕವನ್ನು ಮತ್ತೊಂದು ಧರ್ಮದ ಆರಾಧನಾ ಕೇಂದ್ರವನ್ನಾಗಿ ಮಾಡಲು ಹಿಂದೂ ಧರ್ಮಶಾಸ್ತ್ರ ಮತ್ತು ಆಗಮ ಶಾಸ್ತ್ರಗಳಲ್ಲಿ ಒಪ್ಪಿಗೆ ಇದೆಯೇ?.. ಇದಕ್ಕೆ ನೇರವಾದ ಉತ್ತರ ಖಂಡಿತವಾಗಿಯೂ ಇಲ್ಲ!, ಹಿಂದೂ ಧರ್ಮದ ಪ್ರಮುಖ ವಾಸ್ತು ಗ್ರಂಥಗಳಾದ ಮಯಮತ, ಮಾನಸಾರ ಹಾಗೂ ಶೈವ-ವೈಷ್ಣವ ಆಗಮ ಶಾಸ್ತ್ರಗಳು ಇಂತಹ ಪರಿವರ್ತನೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ. ಶಾಸ್ತ್ರಗಳ ಪ್ರಕಾರ ಇದು ಏಕೆ ತಪ್ಪು ಎಂಬುದಕ್ಕೆ ಮೂರು ಪ್ರಮುಖ ಕಾರಣಗಳು ಇಲ್ಲಿವೆ. ನಿಶಿದಿ ...
ಭಾಗ_1_ಜೈನ_ನಿಶಿದಿ_ಮಂಟಪಗಳು #ಸಿದ್ದಪ್ಪನ_ಗುಡಿಗಳಾದಕಥೆ!... ಇತಿಹಾಸದ ಮರೆಯಲ್ಲಿ ಕಳೆದುಹೋದ ಸತ್ಯ ಗರ್ಭಗುಡಿಯ ಕಂಬಗಳು ಹೇಳುವ ಕಥೆ ಜೈನ ಸಲ್ಲೇಖನ ಸ್ಮಾರಕಗಳು ಹಿಂದೂ ದೇವಾಲಯಗಳಾಗಿ ಬದಲಾಗಿದ್ದು ಹೇಗೆ?... ನಮ್ಮ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸುತ್ತಾಡುವಾಗ ಹಾದಿಬೀದಿಯಲ್ಲಿ, ಹೊಲದ ಬದುಗಳಲ್ಲಿ ಸಣ್ಣ ಸಣ್ಣ "ಸಿದ್ದಪ್ಪನ ಗುಡಿ", "ಸಿದ್ಧರ ಮಂಟಪ" ಅಥವಾ "ಸಿದ್ಧೇಶ್ವರ ದೇವಸ್ಥಾನಗಳನ್ನು" ನೀವು ನೋಡಿರುತ್ತೀರಿ. ಆದರೆ ಈ ದೇವಾಲಯಗಳ ಗೋಡೆಗಳ ಒಳಗೆ ಶತಮಾನಗಳ ಹಿಂದಿನ ಒಂದು ಅಪ್ರತಿಮ ತ್ಯಾಗದ ಇತಿಹಾಸ ಅಡಗಿದೆ ಎಂಬುದು ನಿಮಗೆ ಗೊತ್ತೇ?... ಹೌದು ಇಂದು ನಾವು ಪೂಜಿಸುತ್ತಿರುವ ಹಲವು ಸಣ್ಣ ಪುಟ್ಟ ಈಶ್ವರ ಅಥವಾ ಸಿದ್ದಪ್ಪನ ಗುಡಿಗಳು ಮೂಲತಃ ಜೈನ ಧರ್ಮದ "ನಿಶಿದಿ ಮಂಟಪಗಳು", ಸಲ್ಲೇಖನ ಸ್ಮಾರಕಗಳು!... #ಏನಿದು_ನಿಶಿದಿ_ಮಂಟಪ? ಜೈನ ಧರ್ಮದಲ್ಲಿ ಅತ್ಯಂತ ಕಠಿಣವಾದ, ಆಹಾರ-ನೀರನ್ನು ತ್ಯಜಿಸಿ ದೇಹ ಬಿಡುವ 'ಸಲ್ಲೇಖನ ವ್ರತ' ಅಂದರೆ ಸಮಾಧಿ ಮರಣ ಆಚರಿಸಿದ ಮಹಾನ್ ಮುನಿಗಳು ಕೊನೆಯುಸಿರೆಳೆದ ಪವಿತ್ರ ಜಾಗದಲ್ಲಿ ಅವರ ನೆನಪಿಗಾಗಿ ಕಂಬಗಳಿರುವ ಸಣ್ಣ ತೆರೆದ ಮಂಟಪಗಳನ್ನು ಕಟ್ಟಲಾಗುತ್ತಿತ್ತು. ಇದನ್ನೇ 'ನಿಷಿಧಿ' ಅಥವಾ ನಿಶಿದಿ ಮಂಟಪ ಎನ್ನಲಾಗುತ್ತದೆ ಇಲ್ಲಿ ಯಾವುದೇ ದೇವರ ವಿಗ್ರಹ ಇರದೆ ಕೇವಲ ಮುನಿಗಳ ಜೋಡಿ ಪಾದಗಳನ್ನು (ಪಾದುಕೆ) ಕೆತ್ತಲಾಗಿ...