Skip to main content

Posts

3591 ಡಾ ಸಿರಾಜ್ ಅಹಮದ್ ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲರು

#ಡಾಕ್ಟರ್_ಸಿರಾಜ್_ಅಹಮದ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು.  ಲಂಕೇಶ್, DSS ಕೃಷ್ಣಪ್ಪ, ರಹಮತ್ ತರೀಕೆರೆ ಅಂತಹ ಅನೇಕರು ವ್ಯಾಸಂಗ ಮಾಡಿ ನಂತರ ಅಲ್ಲೇ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಕಾಲೇಜು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು.    ಕವಿ ನಿಸಾರ್ ಅಹಮದ್ ರು ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ #ಜೋಗದ_ಸಿರಿ_ಬೆಳಕಿನ ಕವಿತೆ ರಚಿಸಿದ ಸ್ಥಳವಿದು.    1984-85 ರಲ್ಲಿ ನಮ್ಮೂರ ರೈತ ಬಂದು ಗ್ರಾಮೋದ್ಯೋಗದ ನಾಲ್ಕು ಕಾರ್ಮಿಕರ ಕೊಲೆ ತನಿಖೆಗೆ ಒತ್ತಾಯಿಸಿ ನಾವು ನೂರಕ್ಕೂ ಹೆಚ್ಚು ಸೈಕಲ್ ಗಳಲ್ಲಿ ಶಿವಮೊಗ್ಗ ಜಿಲ್ಲಾದಿಕಾರಿ ಕಛೇರಿ ಎದುರು ಧರಣಿ ಮಾಡಲು ಸೈಕಲ್ ಯಾತ್ರೆ ಮಾಡಿದ್ದೆವು.   ಆಗ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪ ನಮ್ಮ ಮಾರ್ಗದರ್ಶಕರು ಅವರು ಅವತ್ತು ಸಂಜೆ ನಮಗೆಲ್ಲ ಸಹ್ಯಾದ್ರಿ ಕಾಲೇಜು ಪಕ್ಕದ ಹಾಸ್ಟೆಲ್ ನಲ್ಲಿ ಅನ್ನ ತಿಳಿಸಾರು ಮತ್ತು ಉಪ್ಪಿನ ಕಾಯಿ ಊಟದ ವ್ಯವಸ್ಥೆ ಮಾಡಿದ್ದರು.   ಅದರ ಜವಾಬ್ದಾರಿ ಆಗಿನ ವಿದ್ಯಾರ್ಥಿ ಮುಖಂಡ #ಲೋಕೇಶ್_ಈಸೂರು ಮತ್ತು ಉಪನ್ಯಾಸಕರಾಗಿದ್ದ #ಕುಂಸಿ_ನಾಗರಾಜ್ ಅವರದ್ದಾಗಿತ್ತು.    ಅವತ್ತೇ ಅಲ್ಲಿಂದ ಆ ಬೃಹತ್ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ನೋಡಿ ರೋಮಾಂಚಿತನಾಗಿದ್ದೆ ಅಲ್ಲಿ ನಾನು ವ್ಯಾಸಂಗ ಮಾಡಲು ಸಾಧ್ಯವಾದರೆ ... ಎಂದು ಯೋಚಿಸಿದ...
Recent posts

Blog 3590. ಕೊಡಚಾದ್ರಿ ಶಿವರಾತ್ರಿ

#ಕೊಡಚಾದ್ರಿಯ_ಶಿವರಾತ್ರಿಯ_ಮೂರು_ಕೊಳಗದ_ದೀಪಾರಾದನೆ #ಕಬ್ಬನಾಡು_ಹನ್ನಾರ_ಸೌಳುನಾಡು_ಸೀಮೆಯಿಂದ_ತರುವ_ದೀಪದ_ಎಣ್ಣೆ #ಬುಡಕಟ್ಟು_ಕುಣುಬಿ_ಜನರು_ಎಣ್ಣೆ_ಸoಗ್ರಹಿಸಿ_ತಂದು_ಬೆಳಗುವ_ಪದ್ದತಿ #ಈ_ಆಚರಣೆಗೆ_ಇದೆ_ಸಾವಿರಾರು_ವರ್ಷದ_ಇತಿಹಾಸ. ಪ್ರತಿ ವರ್ಷ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಪರ್ವತದ ತುತ್ತ ತುದಿಯಲ್ಲಿ ನಡೆಯುವ ವಿಶಿಷ್ಟವಾದ ಕೊಳಗದ ದೀಪಾರಾದನೆ.   ಪ್ರತಿ ವರ್ಷ  ಶಿವರಾತ್ರಿಯಂದು ಕೊಡಚಾದ್ರಿ ಪರ್ವತದ ತುತ್ತ ತುದಿಯ ಸರ್ವಜ್ಞ ಮಂಟಪದ ಸ್ಥಳದಲ್ಲಿ ಮೂರು ಸೀಮೆಯ ಭಕ್ತರ ಮನೆಗಳಿಂದ ಸಂಗ್ರಹಿಸಿ ತಂದ ದೀಪದ ಎಣ್ಣೆಯನ್ನ ಆಯಾ ಸೀಮೆಗೆ ಮೀಸಲಿಡುವ ಕೊಳಗಕ್ಕೆ ಸುರಿದು ಬತ್ತಿಯನ್ನ ಹಚ್ಚಿ ದೀಪ ಬೆಳಗುವ ಪುರಾತನ ಪದ್ಧತಿ ಈಗಲೂ ಮುಂದುವರಿದಿದೆ.    ಇದೇನು ಪದ್ದತಿ? ಇದಕ್ಕೆ ಕಾರಣ ಏನು? ಎಂಬ ಮಾಹಿತಿ ಇಲ್ಲಿದೆ. #kodachadri #sarvajnamantapa #jogi #kunubi #mulamukambika #sowparnika #shivaratri    ಪ್ರತಿ ವರ್ಷ ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದ ಮೇಲಿರುವ ಮೂಲ ಮೂಕಾಂಬಿಕಾ ದೇವಿಯ ಉತ್ಸವ -ಜಾತ್ರೆ ಅದ್ದೂರಿಯಾಗಿ ಭಕ್ತಿಪೂರ್ವಕವಾಗಿ ನೆರವೇರುತ್ತದೆ.   ಇದಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ, ಈ ಮೂಲ ಮೂಕಾಂಬಿಕಾ ದೇವಿಯ ಪೂಜೆ ಮಾಡಿಕೊಂಡು ಬರುವ ಬಳೆಗಾರ ಜೋಗಿ ಕುಟುಂಬದವರಾದ ನಿಟ್ಟೂರುವಾಸಿ ನಾಗೇಶ ಜೋಗಿ ಪ್ರಧಾನ ಅರ್ಚಕರಾಗಿದ್ದಾರೆ, ಇವರ ಸ...

Blog 3589.ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ ಮಾಜಿ ಶಾಸಕರು ತೀಥ೯ ಹಳ್ಳಿ, ಗೋವು ಪಾಲಕ  ಹಳ್ಳಿ ಹುಡುಗನ ಯಶೋಗಾಥೆ      ನಾನು ಆಗ ಶಿವಮೊಗ್ಗ ಜಿ.ಪಂ.ಸದಸ್ಯ ನಮ್ಮ ಊರಿನ ವಾಹನ ಒಂದು ಆರಗದಲ್ಲಿನ ಶಾಲಾ ವಿದ್ಯಾಥಿ೯ನಿಗೆ ಡಿಕ್ಕಿ ಹೊಡೆದು ಆಕೆ ತೀಥ೯ಳ್ಳಿ ಆಸ್ಪತ್ರೆ ಸೇರಿಸಲಾಗಿತ್ತು, ಆಗ ಆರಗ ಜ್ಞಾನೇ೦ದ್ರ ಶಾಸಕರು ಬಿ.ಜೆ.ಪಿ. ಪಕ್ಷದಿಂದ.   ನಮ್ಮ ಊರಿನ ವಾಹನ ಮಾಲಿಕರು ಮುಸ್ಲಿಂ, ಚಾಲಕರು ಮುಸ್ಲಿಂ ಅವರಿಗೆಲ್ಲ ಅವತ್ತು ಜೀವ ಭಯ.    ಬೆಳಿಗ್ಗೆ ನನ್ನ ಕರೆದುಕೊಂಡು ಆರಗದ ಶಾಸಕರ ಮನೆಗೆ ಕರೆದೊಯ್ದರು, ಅಲ್ಲಿ ಶಾಸಕರಾದ ಜ್ಞಾನೇಂದ್ರ ಬೆಳಿಗ್ಗಿನ ಉಪಹಾರಕ್ಕೆ ನಮ್ಮನ್ನ ಕರೆದರು.              ಮುಸ್ಲಿಂ ವಾಹನ ಮಾಲಿಕರಿಗೆ ತೊಂದರೆ ಆಗದಂತೆ ತಮ್ಮ ಊರಿನ ಬಡ ವಿದ್ಯಾಥಿ೯ನಿಗೆ ಅನುಕೂಲವನ್ನೂ ಮಾಡಿದರು, ಇವತ್ತಿಗೂ ಆ ವಾಹನ ಮಾಲಿಕರು ಮತ್ತು ಚಾಲಕರು ಇವರನ್ನ ನೆನಪಿಸಿ ಕೊಳ್ಳುತ್ತಾರೆ.     ಇದೇ ಸಂದಭ೯ದಲ್ಲಿ ಸಂದಶ೯ನವಲ್ಲದ ಆದರೆ ಸಂದಶ೯ನದಂತೆ ನಮ್ಮಿಬ್ಬರ ನಡುವೆ ನಡೆದ ಸಂಬಾಷಣೆ ಬಹಳ ವಷ೯ದ ಹಿಂದೆ, ಶಿವಮೊಗ್ಗದ ಜನ ಹೋರಾಟ ಪತ್ರಿಕೆಯ ಕಾಲಂನಲ್ಲಿ ಬರೆದದ್ದು ಇಲ್ಲಿ ಪ್ರನ: ಉಲ್ಲೇಖಿಸಿದ್ದೇನೆ.    ಇವರ ಬಾಲ್ಯದಲ್ಲಿ ಇವರ ಜೀವನ ಅತ್ಯಂತ ಬಡತನದ್ದು, 7ನೇ ತರಗತಿಯಲ್ಲಿ ಅತ್ಯುತ್ತಮ ದಜೆ೯ಯಲ್ಲಿ ಉತ್ತೀಣ೯ ರಾಗುತ್ತಾರೆ ಆದರೆ ಬಡತನ ಮುಂದಿನ ವಿದ್ಯ...

Blog 3587. 61 ವರ್ಷ

#ನಿನ್ನೆಗೆ_ನನ್ನ_ಜೀವಮಾನದ_61_ವರ್ಷ_ಪೂರ್ಣವಾಯಿತು. #ನಾನು_ಹುಟ್ಟಿದ್ದು_9_ಫೆಬ್ರುವರಿ_1965ರಂದು #ತಡವಾಗಿ_ನೆನಪಾಯಿತು_ಹುಟ್ಟಿದ_ಹಬ್ಬದ_ಆಚರಣೆ_ನಾನು_ಆಚರಿಸಿಕೊಳ್ಳುವುದಿಲ್ಲ. #ಕಾಲ_ಯಾರಿಗೂ_ಕಾಯುವುದಿಲ್ಲ #ಪ್ರಕೃತಿ_ಎಲ್ಲ_ಜೀವಿ_ಸಸ್ಯಗಳನ್ನು_ನಾಶಮಾಡಲು_ಹೊಸದನ್ನು_ಸೃಷ್ಟಿಸಲು_ನಿರತವಾಗಿರುತ್ತದೆ.   #ಇವತ್ತಿನಿಂದ_62ನೇ_ವಯಸ್ಸು_ಪೂರ್ಣ_ಮಾಡುವ_ಕಡೆಗೆ_ನಡಿಗೆ. #Birthday #wishes #Arunprasad #Hombujaresidency #yadehalli #Anandapuram #longwalk     ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳವುದಿಲ್ಲ, ಉಡುಗೊರೆ ಸ್ವೀಕರಿಸುವುದಿಲ್ಲ ಆದ್ದರಿಂದ ಪ್ರತಿ ವರ್ಷ ನಾನು ಹುಟ್ಟಿದ ದಿನವಾದ #ಫೆಬ್ರುವರಿ_9 ಈ ಅರಿವು ಇಲ್ಲದೆ ಕಳೆದು ಹೋಗಿ ಬಿಡುತ್ತದೆ.    ಹಾಗೆಯೇ ನನ್ನ 61ನೇ ವರ್ಷ ಪೂರೈಸಿದ ದಿನ ಮರೆತು ಹೋಗಿತ್ತು ಅದು ನೆನಪಾಗಿದ್ದು ತಡವಾಗಿ.     ಆನಂದಪುರಂ ಬಿಜೆಪಿ ಶಕ್ತಿಕೇಂದ್ರದ #ನಾಡವಳ್ಳಿ_ನಾಗರಾಜ್ ಶುಭಾಷಯ ವಾಟ್ಸಪ್ ಮಾಡಿದ ಮೇಲೆ ನೆನಪಾಯಿತು.     61 ವರ್ಷ ಕಳೆದಾಯಿತು ಇನ್ನೇನಿದ್ದರು 62ನೇ ವಯಸ್ಸಿನ ಉಳಿದ 364 ದಿನಗಳ ಪೂರೈಸುವುದು.     50 ವರ್ಷ ತಲುಪುವ ತನಕ ಆಯಸ್ಸಿನ ವಾಸ್ತವ ಅರ್ಥವೇ ಆಗುವುದಿಲ್ಲ ಅದು 60 ಕ್ಕೆ ತಲುಪಿತು ಎಂದಾಗಲೇ ಎಚ್ಟರಿಕೆ ಆಗುತ್ತದೆ, ಭೂಮಿ ಮೇಲೆ ಇರುವ ದಿನಗಳು ಕಡಿಮೆ ಎಂದು ಆಗಲೇ ಅರಿವಾಗುವುದು.   ...

Blog 3588. ಅಲಂಕಾರ ಪ್ರವೀಣ ಸೂರಜ್ ಭಟ್

#ಇಡಗುಂಜಿ_ಮಹಾಗಣಪತಿ #ರಂಗೋಲಿಯಲ್ಲಿ_ಮೂಡಿಸಿದ #ಸೂರಜ್_ಕೊಡೂರು #ದೇವರ_ವಿಗ್ರಹಗಳಿಗೆ_ಬೆಣ್ಣೆ_ಅಲಂಕಾರ_ಪ್ರವೀಣರು. #Varasiddivinayaka #Siddivinayakatemple #yadehalli #Bennealankara #Rangoli #Rathotsava #Jatre #Idagunji #Mahaganapathi    ನಮ್ಮೂರ ಪುರ ದೈವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರ 20 ನೇ ವರ್ಷದ ಬ್ರಹ್ಮರಥೋತ್ಸವ ಕಳೆದ ಜನವರಿ ತಿಂಗಳ 22ನೇ ತಾರೀಖು ನೆರವೇರಿತು.    ಈ ಸಂದರ್ಭದಲ್ಲಿ ದೇವಾಲಯದಲ್ಲಿ #ಇಡಗುಂಜಿ_ಮಹಾಗಣಪತಿಯನ್ನ ರಂಗೋಲಿಯಲ್ಲಿ ಮೂಡಿಸಿದವರು ಅಪ್ರತಿಮ ಕಲಾವಿದರಾದ ಸೂರಜ್ ಅವರು.     ಇವರನ್ನ ನಮಗೆ ಪರಿಚಯಿಸಿ ಪ್ರೋತ್ಸಾಹಿಸಿದವರು ನಮ್ಮ ದೇವಾಲಯದ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರು ಮತ್ತು ಶಿವಮೊಗ್ಗದ ಸಿರಿ ಸೌಹಾರ್ದ ಬ್ಯಾಂಕಿನ ಉಪಾದ್ಯಕ್ಷರಾದ ಎಂ. ಜಿ. ಪ್ರಕಾಶ್ ಭಟ್ಟರು.    ಸೂರಜ್ ಭಟ್ಟರು ಪ್ರತಿ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ದೇವಾಲಯದಲ್ಲಿ, ಹೋಮದ ಮಂಟಪದಲ್ಲಿ ವಿದಿ ವಿಧಾನದ ರೀತಿ ರಂಗೋಲೆಯಲ್ಲಿ ಮಂಡಲ, ಗಣಪತಿ ಮತ್ತು ಶ್ರೀಚಕ್ರಗಳ ಚಿತ್ರಿಸುತ್ತಾರೆ.    ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ.     ಹೋಮ ಹವನದಲ್ಲಿ, ಮದುವೆಯ ಹಸೆಮಣೆಯಲ್ಲಿ, ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ.    ನಿ...

Blog 3586. ವಿಂಗ್ ಕಮಾಂಡರ್ ಮಂಜುನಾಥ್

#ಮೊದಲ_ವರ್ಷದ_ಸ್ಮರಣೆ #ವಾಯುದಳದಲ್ಲಿ_ತರಬೇತಿ_ನೀಡುವಾಗ #ಪ್ಯಾರಾಚೂಟ್_ತೆರೆಯದ_ದುರಂತದಲ್ಲಿ_ವೀರಮರಣ_ಹೊಂದಿದ. #ನಮ್ಮ_ಹೆಮ್ಮೆಯ_ಇಂಡಿಯನ್_ಏರ್ಫೋರ್ಸ್_ತರಬೇತಿದಾರ_ಮಂಜುನಾಥ್ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಪಟಗುಪ್ಪ_ಸಮೀಪದ_ಸಂಕೂರಿನವರು #ಈ_ದಂಪತಿಗಳ_ವಿವಾಹ_2019ರಲ್ಲಿ_ನಮ್ಮ_ಕಲ್ಯಾಣ_ಮಂಟಪದಲ್ಲೇ_ನೆರವೇರಿತ್ತು. #Airforce #India #Manjunath #Shivamogga #Hosanagara #sankuru #Assam #agraairforce #juniorwarrantofficer #indianairforce #shivamogga #hosanagara #manjunathgs #parachutes      ಭಾರತೀಯ ವಾಯುದಳದ ತರಬೇತಿ ಅಧಿಕಾರಿ ಆಗಿದ್ದ #ಮಂಜುನಾಥ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪೆ ಎಂಬ ಊರಿನ ಸಮೀಪದ ಸಂಕೂರು ಎಂಬ ಹಳ್ಳಿಯವರು.    ಇವರ ಪರಿಚಯ ನನಗೆ 2019ರ ಪ್ರಾರಂಭದಲ್ಲಿ ಆಯಿತು ಆಗ ಅವರು ತಮ್ಮ ಜೊತೆ ಏರ್ಪೋರ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಅಸ್ಸಾಂ ಮೂಲದ #ಕಲ್ಪಿತಾ ಎಂಬ ಯುವತಿ ಜೊತೆ ಪ್ರೇಮ ವಿವಾಹದ ತಯಾರಿ ನಡೆಸಿದ್ದರು.    ಇವರ ಪತ್ನಿ ಶ್ರೀಮತಿ ಕಲ್ಪಿತಾ ಕೂಡ ಭಾರತೀಯ ಏರ್ಪೋರ್ಸ್ ಟ್ರೈನಿಂಗ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.    ಇವರ ಬಾವಿ ಪತ್ನಿ ತಂದೆ ತಾಯಿಯನ್ನ ಇವರ ಕುಟುಂಬದ ಪರಿಚಯ ಮಾಡಿಸಲು ಮತ್ತು ವಿವಾಹದ ಮಾತುಕಥೆಗಾಗಿ ಕರೆತಂದಿದ್ದಾಗ ಕೆಲವು ದಿನ ನಮ್ಮ ...

Blog 3585. ಸಾಗರ ಮಾರಿಕಾಂಬಾ ಭಾಗ -11

#ಭಾಗ_11_ಸಾಗರ_ಮಾರಿಕಾಂಭಾ_ಚರಿತ್ರೆ #ಶಿವರಾಮ_ಕಾರಂತರ_ಚೋಮನ_ದುಡಿ_ಕಾದಂಬರಿ #ಸಿನಿಮಾವಾದಾಗ_ಅದರಲ್ಲಿ_ನಟಿಸಿ_ರಾಷ್ಟ್ರ_ಪ್ರಶಸ್ತಿಗೆ_ಬಾಜನರಾದ #ಸಾಗರದವರೇ_ಆದ_ಪದ್ಮಾಕುಮುಟಾ_2017ರ_ಸಾಗರದ #ಮಾರಿಕಾಂಬಾ_ಜಾತ್ರೆಗೆ_ಬಂದಿದ್ದು_ನೆನಪು_ಮಾತ್ರ #Sagara #Padmakumuta #Chomanadudi #Shivaramakaranth #Marikambhajatre    ಈ ಬಾರಿಯ ಸಾಗರದ ಮಾರಿಕಾಂಬಾ ಜಾತ್ರೆಗೆ ಮೂರು ಜಾತ್ರೆಯ ಹಿಂದೆ ಅಂದರೆ 9 ವರ್ಷದ ಹಿಂದೆ.   17 ಪೆಬ್ರವರಿ 2017ರ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಜಾತ್ರಾ ಸಮಿತಿ ಸಾಗರದವರೇ ಆದ   ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತೆ ಚೋಮನ ದುಡಿ ಸಿನಿಮಾ ಖ್ಯಾತಿಯ #ಪದ್ಮಾಕುಮುಟಾರನ್ನ ಸನ್ಮಾನಿಸಿತ್ತು.     ಪದ್ಮಾಕುಮುಟಾ ಖ್ಯಾತ ಸಮಾಜವಾದಿ ಹೋರಾಟಗಾರರಾದ #ಎಸ್_ಎಸ್_ಕುಮುಟಾರ ಪುತ್ರಿ.    ಎಸ್. ಎಸ್. ಕುಮುಟಾ #ಶಾಂತವೇರಿ_ಗೋಪಾಲಗೌಡರ ಸಹವರ್ತಿಗಳು.     #ಕಾಗೋಡು_ಸತ್ಯಾಗ್ರಹದ ಹೋರಾಟದಲ್ಲಿ #ರಾಮಮನೋಹರ_ಲೋಹಿಯಾ ಮತ್ತಿತರ ನಾಯಕರ ಹಿಂದಿ ಬಾಷಣ ಲೀಲಾಜಾಲವಾಗಿ ಅನುವಾದ ಮಾಡುತ್ತಿದ್ದವರು.   ಪ್ರಖ್ಯಾತ ಕನ್ನಡದ ಸಾಹಿತಿ #ಶಿವರಾಂಕಾರಂತರ #ಚೋಮನ_ದುಡಿ ಕಾದಂಬರಿ ಆಧಾರಿತ ಸಿನಿಮಾದ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಗರದ ರಾಜಕಾರಣದ ಗುರು S. S. ಕುಮುಟಾರ ಪುತ್ರಿ ಪದ್ಮಾ ಕುಮುಟಾ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ದೇವಿ ದಶ೯...