ಮುಹೂರ್ತ_ಮೀರಿದ_ಮದುವೆ_37_ವಸಂತಗಳ ಸುಂದರ_ಪಯಣ. ಅಂದು ಶಿವಮೊಗ್ಗದ ಕೋಟೆ ಆಂಜನೇಯನ ಸನ್ನಿಧಿಯಲ್ಲಿ ನಡೆದ ಆ ರೋಚಕ ಕಥೆ!.. ಜೀವನದಲ್ಲಿ ಕೆಲವು ನೆನಪುಗಳು ಕಾಲ ಸರಿದಂತೆ ಮಾಸುವುದಿಲ್ಲ ಬದಲಿಗೆ ಇನ್ನಷ್ಟು ಹಸನಾಗುತ್ತವೆ. ಇಂದು ನಮ್ಮ ದಾಂಪತ್ಯ ಜೀವನಕ್ಕೆ ಭರ್ತಿ 37 ವರ್ಷ, ನಮ್ಮದು ಅಂತರ್ಜಾತಿ ಪ್ರೇಮ ವಿವಾಹ. ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುಟ್ಟಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೆವು,ಎರಡು ವರ್ಷಗಳ ಕಾಲ ಕಾದ ನಂತರ ಕೊನೆಗೂ ನಮ್ಮ ತಂದೆಯವರನ್ನು ಒಪ್ಪಿಸಿ 1989ರ ಆಗಸ್ಟ್ 23ರಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಅಧಿಕೃತವಾಗಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ದಿನ ನಿಗದಿಯಾಗಿತ್ತು. ಆದರೆ ಅಂದು ನಡೆದ ಘಟನೆಗಳು ಯಾವುದೋ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಿಂತ ಕಡಿಮೆಯಿರಲಿಲ್ಲ! ಅವತ್ತು ನಮ್ಮೂರಲ್ಲಿ ಧಾರಾಕಾರ ಮಳೆ,ಇನ್ನೇನು ದೇವಸ್ಥಾನಕ್ಕೆ ಹೊರಡಬೇಕು ಅನ್ನುವಾಗಲೇ ನಮ್ಮ ತಂದೆಯವರು "ನಾನು ಮದುವೆಗೆ ಬರುವುದಿಲ್ಲ" ಎಂದು ಹಠ ಹಿಡಿದುಬಿಟ್ಟರು. ಪರಿಸ್ಥಿತಿ ತೀರಾ ಗಂಭೀರವಾಗಿ ಕೊನೆ ಗಳಿಗೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಒಪ್ಪಿಸುವಷ್ಟರಲ್ಲಿ ಸಮಯ ಮೀರಿಹೋಗಿತ್ತು. ಸುರಿಯುವ ಮಳೆಯಲ್ಲೇ ಹೇಗೋ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಿದೆವು. ಆದರೆ ಅಷ್ಟರಲ್ಲಾಗಲೇ ವಿವಾ...
ಭಾಗ_4_ಕುಂದಾಪುರದ_ಕನ್ನಡಿಗ_ಅನಿಲ್_ಪ್ರಸಾದ್_ಹೆಗ್ಡೆ. ಜೇನು ಮತ್ತು ಆನೆಗಳ ಮೇಲೆ ಕುಲಾಂತರಿ ಬೀಜಗಳ ಪರಿಣಾಮ ರಾಜ್ಯಸಭೆಯಲ್ಲಿ ಅವರು ಮಂಡಿಸಿದ ಕುಲಾಂತರಿ ಬೀಜಗಳ ದುಷ್ಟರಿಣಾಮದ ವಿಷಯ. ಕುಂದಾಪುರದ ಕನ್ನಡಿಗ ಅನಿಲ್ ಪ್ರಸಾದ್ ಹೆಗ್ಡೆ ಜಾರ್ಜ್ ಪರ್ನಾಂಡಿಸರ ಜೊತೆಯಾಗಿ ದೇಸಿ ಬೀಜ ಸಂರಕ್ಷಣೆಗಾಗಿ ಹೋರಾಡುತ್ತಲೇ ಬಂದವರು. ಕುಲಾಂತರಿ ಬೀಜಗಳಿಂದ ಜೇನಿನಿಂದ ಆನೆ ತನಕ ಆಗುವ ಅನಾಹುತದ ಬಗ್ಗೆ ಅವರು ಸಂಸತ್ ನಲ್ಲಿ ಮಂಡಿಸಿದ ವಿಚಾರದ ಬಗ್ಗೆ ಈ ವಿಡಿಯೋ ಸಂದರ್ಶನದಲ್ಲಿ ಮಾತಾಡಿದ್ದಾರೆ. ಜೇನು ಸಾಕಾಣಿಕೆದಾರರು ಮತ್ತು ದೇಸಿ ಬೀಜ ಸಂರಕ್ಷರು ತಪ್ಪದೇ ಈ ಸಂದರ್ಶನ ನೋಡಿ ಮತ್ತು ಆಸಕ್ತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ. ಕುಲಾಂತರಿ (Genetically Modified / GM) ಬೆಳೆಗಳ ವಿಸ್ತರಣೆ ಮತ್ತು ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ಅಧಿಕ ರಾಸಾಯನಿಕ ಹಾಗೂ ಕೀಟನಾಶಕ ಬಳಕೆ ಪರಿಸರ ವ್ಯವಸ್ಥೆಯ ಎರಡು ಪ್ರಮುಖ ಜೀವಿಗಳಾದ ಜೇನುನೊಣಗಳು ಮತ್ತು ಆನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಬಹುತೇಕ ಕುಲಾಂತರಿ ಬೆಳೆಗಳು (ಉದಾಹರಣೆಗೆ ಗ್ಲೈಫೋಸೇಟ್-ನಿರೋಧಕ ಬೆಳೆಗಳು) ಕಳೆನಾಶಕಗಳನ್ನು ತಡೆದುಕೊಳ್ಳುವಂತೆ ರೂಪಿತವಾಗಿರುತ್ತವೆ. ಇದರಿಂದಾಗಿ ಹೊಲಗಳಲ್ಲಿ ಸಿಂಪರಣೆಯಾಗುವ ರಾಸಾಯನಿಕಗಳ ಪ್ರಮಾಣ ಅಧಿಕವಾಗುತ್ತದೆ. ಹೊಲದಂಚಿನ ನೈಸರ್ಗಿಕ ಹೂಬಿಡುವ ಕಳೆ ಗಿಡಗಳು ಸಂಪೂರ್ಣವಾಗಿ ನಾಶ...