ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು. ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು ಇವರು ಇಸ್ಲಾಂನ ಪ್ರವಚನ ಕನ್ನಡಕ್ಕೆ ಅನುವಾದಿಸಿದವರು ಮತ್ತು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದವರರು. #ಹಿರೇಹಾಳ_ಇಬ್ರಾಹಿಂ ಸಾಹೇಬರಿಗೆ ಮರಣೋತ್ತರ ಡಾಕ್ಟರೇಟ್ ಪದವಿ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ 13 ಜುಲೈ 2023 ರಂದು ತನ್ನ 11ನೇ ಘಟಿಕೋತ್ಸವದಲ್ಲಿ ನೀಡಿತು. ಆದರೆ ಹಿರೇಹಾಳ ಇಬ್ರಾಹಿಂ ಸಾಹೇಬರ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಸ್ಮರಿಸುವ ಕಾರ್ಯಕ್ರಮಗಳು ನಡೆಯಲೇ ಇಲ್ಲ. ಹಿರೇಹಾಳ ಇಬ್ರಾಹಿಂ ಸಾಹೇಬರ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿನ ಎಲ್ಲಾ ಹಿರಿಯ ಸಾಹಿತಿಗಳಲ್ಲಿ ಅತ್ಯಂತ ಗೌರವಾಭಿಮಾನ ಕಾರಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪೋಷಕ ಸ್ಥಾನ. ನಾಡಿನ ಸಾಹಿತಿಗಳಿಗೆ ಶಿವಮೊಗ್ಗಕ್ಕೇ ಆಹ್ವಾನಿಸಿ ಆಧರಿಸಿ ಗೌರವಿಸುತ್ತಿದ್ದ ರೀತಿ ಹಿರೇಹಾಳ ಇಬ್ರಾಹಿಂ ಸಾಹೇಬರ ಬಿಟ್ಟರೆ ಇನ್ನೊಬ್ಬರಿಲ್ಲ. ಆ ಕಾಲದಲ್ಲಿ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ #ಹಯವದನ ನಾಟಕ ಪ್ರದರ್ಶನದ ಪ್ರಾಯೋಜಕತ್ವ ಮಾಡುವ ದೈರ್ಯ ಮಾಡಿದ್ದು ಹಿರೇಹಾಳ ಇಬ್ರಾಹಿಂ ಸಾಹೇಬರು, ನಂತರ ಹಯವದನ ನಾಟಕ ಯಶಸ್ವಿಯಾಗಿ ನಡೆಯಿತು. ಇಬ್ರಾಹಿಂ ಸಾಹೇಬರು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದರು, ರಾಜ್ಯ ಸರ್ಕ...
ಭಾಗ_13_ಬೈರಪ್ಪರ_ಸಾಹಿತ್ಯದಲ್ಲಿ_ಘಟ್ಟಕ್ಕೆ ಕರಾವಳಿಗರ_ವಲಸೆ ಕರಾವಳಿಯಿಂದ ಘಟ್ಟಕ್ಕೆ ಕೇವಲ ಶ್ರಮಜೀವಿಗಳು ಹಿಂದುಳಿದ ವರ್ಗಗಳ ಜನರು ಮಾತ್ರ ವಲಸೆ ಬಂದಿದ್ದಲ್ಲ ಅಲ್ಲಿಂದ ಮೇಲು ಜಾತಿಯ ಬ್ರಾಹ್ಮಣರೂ ವಲಸೆ ಬಂದಿದ್ದಾರೆ. ಹೋಟೆಲ್, ವ್ಯಾಪಾರ ಮತ್ತು ಪುರೋಹಿತ್ಯಕ್ಕಾಗಿ ಬಂದವರು ಇಲ್ಲೇ ನೆಲೆಸಿದ್ದಾರೆ. ನನ್ನ ಕರಾವಳಿ ವಲಸಿಗರ ಲೇಖನ ಓದದ ಅನೇಕರು ಅವರ ಕುಟುಂಬಗಳೂ ಕೂಡ ಕರಾವಳಿಯಿಂದ ವಲಸೆ ಬಂದ ಕುಟುಂಬವಾಗಿದೆ ಆದರೆ ಕೃಷಿ ಕೆಲಸಕ್ಕೆ ಬರಲಿಲ್ಲ ಹೋಟೆಲ್ ಕೆಲಸಕ್ಕೆ ಬಂದವರು ಅಂತ ಇನ್ನು ಕೆಲವರು ಪುರೋಹಿತ್ಯ ಮಾಡಲು ಘಟ್ಟದ ದೇವಸ್ಥಾನಕ್ಕೆ ಬಂದವರು ಎಂದು ತಿಳಿಸಿದ್ದಾರೆ. ಕರಾವಳಿ ಜನರ ಜಾಗತಿಕ ವಲಸೆಯ ಇತಿಹಾಸದಲ್ಲಿ #ಉಡುಪಿ_ಹೋಟೆಲ್ ಉದ್ಯಮಕ್ಕೆ ದೊಡ್ಡ ಹೆಸರಿದೆ. #ಕುವೆಂಪು ಅವರ ಸಾಹಿತ್ಯವು ಮಲೆನಾಡಿನ ಹಿನ್ನೆಲೆಯಲ್ಲಿ ಕರಾವಳಿ ವಲಸೆಯನ್ನು ಚಿತ್ರಿಸಿದರೆ, ಕನ್ನಡದ ಮತ್ತೊಬ್ಬ ದಿಗ್ಗಜ ಕಾದಂಬರಿಕಾರರಾದ ಡಾ. #ಎಸ್_ಎಲ್_ಭೈರಪ್ಪ ಅವರ ಸಾಹಿತ್ಯದಲ್ಲಿ ಕರಾವಳಿ ಮತ್ತು ಅಲ್ಲಿನ ಜನರ ವಲಸೆಯ ಚಿತ್ರಣ ಸಂಪೂರ್ಣ ಭಿನ್ನವಾದ ತಾರ್ಕಿಕ, ತಾತ್ವಿಕ ಮತ್ತು ಸಾಮಾಜಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಭೈರಪ್ಪನವರ ಕಾದಂಬರಿಗಳಲ್ಲಿ ಕರಾವಳಿ ವಲಸಿಗರು ಕೇವಲ ದೈಹಿಕ ಶ್ರಮದ ಕೂಲಿಯಾಳುಗಳಾಗಿ ಬರುವುದಿಲ್ಲ ಬದಲಿಗೆ ಅವರು ಬುದ್ಧಿಜೀವಿಗಳಾಗಿ, ಭಟ್ಟರಾಗಿ, ಉದ್ಯಮಿಗಳಾಗಿ...