Skip to main content

Posts

4153.ಜೋಗ್_ಪಾಲ್ಸ್_ನಲ್ಲಿದೆರಾಜಾ_ಕಲ್ಲುಮಡಿಕೇರಿ_ರಾಜಾಸೀಟ್_ನಂತೆ

ಜೋಗ್_ಪಾಲ್ಸ್_ನಲ್ಲಿದೆ ರಾಜಾ_ಕಲ್ಲು ಮಡಿಕೇರಿ_ರಾಜಾಸೀಟ್_ನಂತೆ     ಜೋಗ್ ಫಾಲ್ಸ್ ನ ರಾಜಾ ಕಲ್ಲು ಮತ್ತು ಮಡಿಕೆರೆಯ ರಾಜಾ ಸೀಟ್ ಗೆ ರಾಜರುಗಳ ನಂಟಿದೆ,ಸಾಮ್ಯತೆ ಇದೆ.   ನೀವು ಜೋಗ್ ಫಾಲ್ಸ್ ಗೆ ಹೋದಾಗ ರಾಜಾ ಕಲ್ಲು ಪ್ರದೇಶಕ್ಕೆ ಬೇಟಿ ನೀಡಿದ್ದಿರಾ? ನಿಮಗೆ ಈ ಸ್ಥಳದ ಬಗ್ಗೆ ಮಾಹಿತಿ ಗೊತ್ತಿತ್ತಾ? ...   ಆದರೆ ಜೋಗ್ ಫಾಲ್ಸ್ ಅಬ್ಬರದಲ್ಲಿ ಇದು ಪ್ರವಾಸಿಗರಿಗೆ ಗೊತ್ತೇ ಇಲ್ಲ.    ರಾಜಾಸೀಟ್  ಕೊಡಗು  ಜಿಲ್ಲೆಯ ಮಡಿಕೇರಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ​ ಕೊಡಗನ್ನು ಆಳಿದ ಕೆಳದಿ ವಂಶಸ್ಥರಾದ #ಹಾಲೇರಿ_ರಾಜರು ತಮ್ಮ ರಾಣಿಯರೊಂದಿಗೆ ಸಂಜೆಯ ವೇಳೆ ವಿಶ್ರಾಂತಿ ಪಡೆಯಲು ಹಾಗೂ ಸೂರ್ಯಾಸ್ತದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಬರುತ್ತಿದ್ದರು.    ಆದ್ದರಿಂದ ಅದಕ್ಕೆ ‘ರಾಜಾಸೀಟ್’ (ರಾಜನ ಆಸನ) ಎಂಬ ಹೆಸರು ಬಂದಿದೆ.    ಇದೇ ರೀತಿ ಇತಿಹಾಸ ಇರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ​ಜೋಗ ಜಲಪಾತದ ಸಮೀಪವಿರುವ #ರಾಜಾ'ಕಲ್ಲು ಒಂದು ಸುಂದರ ಹಾಗೂ ಐತಿಹಾಸಿಕ ವೀಕ್ಷಣಾ ತಾಣವಾಗಿದೆ.  ​ಈ ಸ್ಥಳವು ಮೈಸೂರಿನ ಮಹಾರಾಜರಾದ #ನಾಲ್ವಡಿ_ಕೃಷ್ಣರಾಜ_ಒಡೆಯರ್ ಅವರ ನೆಚ್ಚಿನ ವೀಕ್ಷಣಾ ತಾಣವಾಗಿತ್ತು.   1939 ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶರಾವತಿ ಕಣಿವೆಯ...
Recent posts

4152.ಶಿವಮೊಗ್ಗ_ಮ್ಯಾಮ್_ಕೋಸ್_ಚರಿತ್ರೆMAMCOS.

ಶಿವಮೊಗ್ಗ_ಮ್ಯಾಮ್_ಕೋಸ್_ಚರಿತ್ರೆ MAMCOS.    ಶಿವಮೊಗ್ಗ ಜಿಲ್ಲೆಯ #ತೀರ್ಥಹಳ್ಳಿಯ ಆ ಕಾಲದ 1930ರ ದಶಕದ ಪ್ರಮುಖ ನಾಯಕರು ಮತ್ತು ವಿದ್ಯಾಭ್ಯಾಸ ಹೊಂದಿದ್ದ ತೀರ್ಥಹಳ್ಳಿ ಅಡಿಕೆ ಕೃಷಿಕರು ಸಹಕಾರ ತತ್ವದ ಅಗತ್ಯವನ್ನು ಮೊದಲು ಮನಗಂಡು ಪ್ರಾರಂಬಿಸಿದ ಈ ಸಂಸ್ಥೆ 87 ವರ್ಷದಲ್ಲಿ ಬೆಳೆದ ಪರಿ ಸಾಮಾನ್ಯದ್ದಲ್ಲ.  #ಪ್ರಾರಂಭ_ಕೇವಲ_ನಾಲ್ಕು_ಸಾವಿರ_ರೂಪಾಯಿಯಿಂದ ಇಂದು ಮ್ಯಾಮ್‌ಕೋಸ್ 30,000ಕ್ಕೂ ಹೆಚ್ಚು ಸದಸ್ಯ ರೈತರನ್ನು ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಬಲಿಷ್ಠ ಸಹಕಾರಿ ಸಂಸ್ಥೆಯಾಗಿ ಬೆಳೆದುನಿಂತಿದೆ.   ಮಲೆನಾಡು ಅರೇಕಾ ಮಾರ್ಕೆಟಿಂಗ್ ಕೋ ಆಪರೇಟೀವ್ ಸೊಸೈಟಿ ಲಿಮಿಟೆಡ್ ಈಗ ದೊಡ್ಡ ಕಾರ್ಪೊರೇಟ್ ಕಂಪನಿ ಆಗಿದೆ ಶತಮಾನದ ಹೊಸ್ತಿಲಲ್ಲಿದೆ, ಇದರ ಪ್ರಾರಂಭದ ಇತಿಹಾಸ ಇಲ್ಲಿದೆ ಓದಿ.   ನೀವು ಅಡಿಕೆ ಬೆಳೆಗಾರರಾಗಿದ್ದರೆ, ಈ ಸಂಸ್ಥೆಯ ಶೇರುದಾರರಾಗಿದ್ದರೆ ಇದನ್ನು ಹೆಚ್ಚು ಶೇರ್ ಮಾಡಿ.   1930ರ ದಶಕದಲ್ಲಿ #ಮಲೆನಾಡು ಭಾಗದ ಅಡಿಕೆ ಬೆಳೆಗಾರರು ಎದುರಿಸುತ್ತಿದ್ದ ತೀವ್ರ ಶೋಷಣೆ ಮತ್ತು ಆರ್ಥಿಕ ಸಂಕಷ್ಟವೇ ಮ್ಯಾಮ್‌ಕೋಸ್ (MAMCOS) ಸ್ಥಾಪನೆಗೆ ಮುಖ್ಯ ಕಾರಣ.    ಅಂದಿನ ಕಾಲದಲ್ಲಿ ಅಡಿಕೆ ವ್ಯಾಪಾರ ಸಂಪೂರ್ಣವಾಗಿ ಖಾಸಗಿ ವರ್ತಕರು ಮತ್ತು ದಲ್ಲಾಳಿಗಳ ಹಿಡಿತದಲ್ಲಿತ್ತು.   ಅವರು ತೂಕದಲ್ಲಿ ಮೋಸ ಮಾಡುವುದು, ಅಡಿಕೆಗೆ ಅತಿ ಕಡಿಮೆ ಬೆಲೆ ನೀಡುವುದು ಮತ...

4151.ಗಾಯತ್ರಿ_ಮಂತ್ರಮಹರ್ಷಿ_ವಿಶ್ವಾಮಿತ್ರರುಭಾಗ_2.

ಗಾಯತ್ರಿ_ಮಂತ್ರ ಮಹರ್ಷಿ_ವಿಶ್ವಾಮಿತ್ರರು ಭಾಗ_2.  ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ.  ನಿಮಗೆ ಗಾಯಿತ್ರಿ ಮಂತ್ರದ ಬಗ್ಗೆ ಆಸಕ್ತಿ ಇದ್ದರೆ ಈ ಲೇಖನ ಪೂರ್ಣ ಓದಿ ನಿಮ್ಮ ಆತ್ಮೀಯರಿಗೆ ಗಾಯಿತ್ರಿ ಮಂತ್ರದ ಈ ಪೋಸ್ಟ್ ಶೇರ್ ಮಾಡಿ.  ಬ್ರಹ್ಮರ್ಷಿ ವಿಶ್ವಾಮಿತ್ರರು ಪ್ರಾಚೀನ ಭಾರತೀಯ ಇತಿಹಾಸ ಮತ್ತು ಪುರಾಣಗಳಲ್ಲಿ ಅತ್ಯಂತ ಪ್ರಭಾವಶಾಲಿ ಋಷಿಗಳಲ್ಲಿ ಒಬ್ಬರು.     ಹುಟ್ಟಿನಿಂದ ರಾಜನಾಗಿದ್ದರೂ ಕಠಿಣ ತಪಸ್ಸಿನ ಮೂಲಕ ಬ್ರಹ್ಮರ್ಷಿ ಪದವಿ ಪಡೆದ ಅಸಾಧಾರಣ ವ್ಯಕ್ತಿತ್ವ ಇವರದು.   ​ಮೂಲ ಹೆಸರು ಕೌಶಿಕ (ಕುಶಿಕ ವಂಶದ ರಾಜ) ಕನ್ಯಾಕುಬ್ಜದ ಇಂದಿನ ಕನೌಜ್ ಪ್ರಬಲ ಅರಸನಾಗಿದ್ದ ವಿಶ್ವಾಮಿತ್ರರು, ವಸಿಷ್ಠ ಮಹರ್ಷಿಗಳ ಬಳಿಯಿದ್ದ ಕಾಮಧೇನುವನ್ನು ಪಡೆಯಲು ಹೋಗಿ ಪರಾಭವಗೊಂಡರು. ​  ರಾಜಬಲಕ್ಕಿಂತ (ಕ್ಷಾತ್ರ ತೇಜಸ್ಸು) ಆತ್ಮಬಲ ಮತ್ತು ತಪೋಬಲವೇ (ಬ್ರಹ್ಮ ತೇಜಸ್ಸು) ಶ್ರೇಷ್ಠವೆಂದು ಅರಿತು, ರಾಜ್ಯ ತೊರೆದು ಕಠಿಣ ತಪಸ್ಸಿಗೆ ತೆರಳಿದರು.   ಋಗ್ವೇದದ ಅತ್ಯಂತ ಪವಿತ್ರವಾದ 'ಗಾಯತ್ರಿ ಮಂತ್ರ'  ವಿಶ್ವಾಮಿತ್ರರಿಗೆ ತಪಸ್ಸಿನಲ್ಲಿ ದರ್ಶನವಾಯಿತು. ​ ಸಶರೀರವಾಗಿ ಸ್ವರ್ಗಕ್ಕೆ ಹೋಗಬಯಸಿದ ತ್ರಿಶಂಕು ರಾಜನಿಗೆ ಇಂದ್ರ ಪ್ರವೇಶ ನಿರಾಕರಿಸಿದಾಗ ತನ್ನ ತಪೋಶಕ್...

4150.ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?..ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ...ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...

ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?.. ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ... ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...   ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ದುರಂತದ ದೃಶ್ಯಗಳು ಎಂತವರನ್ನು ಅಧೀರನಾಗಿಸುತ್ತದೆ.    ಈ ಮಾಹಿತಿ ಪೂರ್ಣ ಲೇಖನ ಪೂರ್ತಿ ಓದಿ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ.    26 ಆಗಸ್ಟ್ 2026 ರಂದು ಟಿಬೆಟ್–ನೇಪಾಳ ಗಡಿ ಭಾಗದಲ್ಲಿ ಭೋಟೆ ಕೋಶಿ ನದಿ  ಪಾತ್ರದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ #ಈಶಾ_ಫೌಂಡೇಶನ್‌ನ 80 ಯಾತ್ರಿಕರ ತಂಡ ನಾಪತ್ತೆ ಆಗಿದೆ.    ಸದ್ಗುರು ಅವರ ಈಶಾ ಫೌಂಡೇಶನ್ ವತಿಯಿಂದ ಪ್ರತಿವರ್ಷ ಆಯೋಜಿಸುವ 'ಈಶಾ ಸೇಕ್ರೆಡ್ ವಾಕ್ಸ್' ಅಡಿಯಲ್ಲಿ ಯಾತ್ರಿಕರು ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು.     ಈಶಾ ಫೌಂಡೇಶನ್ ಆಯೋಜಿಸುವ '#ಈಶಾ_ಸೇಕ್ರೆಡ್_ವಾಕ್ಸ್'  ಕೈಲಾಶ ಮಾನಸ ಸರೋವರ ಯಾತ್ರೆಯ ಶುಲ್ಕವು ​ಸಾಮಾನ್ಯ (ಭೂಮಾರ್ಗ) ಪ್ಯಾಕೇಜ್ ತಲಾ ಸುಮಾರು ₹3.5 ಲಕ್ಷದಿಂದ ₹4.5 ಲಕ್ಷ ಭಾರತೀಯ ನಾಗರಿಕರಿಗೆ. ​ಹೆಲಿಕಾಪ್ಟರ್ ಮಾರ್ಗ / ಪ್ರೀಮಿಯಂ ಪ್ಯಾಕೇಜ್ ತಲಾ ಸುಮಾರು ₹5 ಲಕ್ಷದಿಂದ ₹6.5 ಲಕ್ಷ.   ​ವಿದೇಶಿ ಪೌರತ್ವ ಹೊಂದಿದವರಿಗೆ (NRI / Foreigners) ಸುಮಾರು $5,000 ದಿಂದ $6,500 ಡಾಲರ್,ಭಾರತೀಯ ರೂಪಾಯಿಗಳಲ್ಲಿ ಸುಮಾರು ₹4.2 ಲಕ್ಷದಿಂದ ₹5.5 ಲಕ್ಷಕ್ಕೂ ಹೆಚ್ಚು.  ​...

4149.ಗಾಯತ್ರಿ_ಮಂತ್ರಭಾಗ_1.

ಗಾಯತ್ರಿ_ಮಂತ್ರ ಭಾಗ_1.   ಮಹರ್ಷಿ ವಿಶ್ವಾಮಿತ್ರರಿಂದ ಬಂದ ಗಾಯಿತ್ರಿ ಮಂತ್ರದ ಅರ್ಥ ಮತ್ತು ಮೂಲ ಗೊತ್ತಾ? ... ಇದನ್ನು ಗಂಡು- ಹೆಣ್ಣು-ತೃತೀಯ ಲಿಂಗಿ- ಶೂದ್ರ ಮತ್ತು ದಲಿತರೂ ಪಠಿಸಬಹುದು, ಉಪನಯನವಾದವರು,ಜನಿವಾರ ಧರಿಸುವವರು ಮಾತ್ರ ನಿತ್ಯ ತಪ್ಪದೆ ಪಠಣ ಮಾಡಲೇ ಬೇಕು.  ಅನೇಕರು ಗಾಯಿತ್ರಿ ಮಂತ್ರ ನಿತ್ಯ ಪಠಿಸುತ್ತಾರೆ ಆದರೆ ಅದರ ಅರ್ಥ,ಅದನ್ನು ರಚಿಸಿದ ಕಾಲ ಮತ್ತು ರಚನೆಕಾರರ ಬಗ್ಗೆ ಸೂಕ್ತ ಮಾಹಿತಿ ಪಡೆದಿರುವವರು ಕಡಿಮೆ ಅಂತವರಿಗಾಗಿ ಈ ಗಾಯಿತ್ರಿ ಮಂತ್ರದ ಸರಣಿ ಲೇಖನದ ಮೊದಲ ಭಾಗ ಇದು.   ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ. ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ. #ಗಾಯಿತ್ರಿ_ಮಂತ್ರ. ​ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ॥ #ಪ್ರತಿಯೊಂದು_ಪದದ_ಅರ್ಥ: ​ಓಂ: ಪರಬ್ರಹ್ಮ ಪರಮಾತ್ಮನ ಪ್ರಣವ ನಾದ ​ಭೂಃ: ಭೂಲೋಕ (ಭೌತಿಕ ಜಗತ್ತು) ​ಭುವಃ: ಭುವರ್ಲೋಕ (ಅಂತರಿಕ್ಷ) ​ಸುವಃ (ಸ್ವಃ): ಸ್ವರ್ಗಲೋಕ (ಆಧ್ಯಾತ್ಮಿಕ ಲೋಕ) ​ತತ್: ಆ ಪರಮಾತ್ಮನ ​ಸವಿತುಃ: ಸೂರ್ಯದೇವನ / ಸೃಷ್ಟಿಕರ್ತನ ​ವರೇಣ್ಯಂ: ಶ್ರೇಷ್ಠವಾದ / ಪೂಜ್ಯವಾದ ​ಭರ್ಗಃ: ದಿವ್ಯ ತೇಜಸ್ಸು / ಜ್ಞಾನದ ಪ್ರಕಾಶ ​ದೇವಸ್ಯ: ದೈವಿಕ ಶ...

4148.ಮಿಲೇನಿಯಲ್ಸ್_Millennials ಜೆನ್_ಎಕ್ಸ್_Gen_X

ಮಿಲೇನಿಯಲ್ಸ್_Millennials  ಜೆನ್_ಎಕ್ಸ್_Gen_X   ನನ್ನ ಹಿಂದಿನ ಲೇಖನ ಜೆನ್-ಜಿ ಓದಿದ್ದೀರಿ ಈಗ ಇವರಿಗಿಂತ ಹಿಂದಿನ ಎರೆಡು ತಲೆಮಾರುಗಳಾದ ಮಿಲೇನಿಯಲ್ಸ್ ಮತ್ತು ಜೆನ್-ಎಕ್ಸ್ ಬಗ್ಗೆ ಓದಿ ಇದು 1965 ರಿಂದ ನಂತರದ 1996 ರ ಅವಧಿಯಲ್ಲಿ ಜನಿಸಿದ ಜನರ ಎರೆಡು ತಲೆಮಾರು.   ಈ ಲೇಖನ ನಿಮಗೆ ಇಷ್ಟ ಆದರೆ ನಿಮ್ಮ ಸಮಕಾಲಿನವರಿಗೆ ಶೇರ್ ಮಾಡಿ ಅವರಿಗೆ ಈ ಮಾಹಿತಿ ಹಂಚಿ.   #ಮಿಲೇನಿಯಲ್ಸ್ ಎಂದರೆ ಸಾಮಾನ್ಯವಾಗಿ 1981 ರಿಂದ 1996ರ ಅವಧಿಯಲ್ಲಿ ಜನಿಸಿದ ಜನರ ತಲೆಮಾರು.     ಈಗಿನ 30 ರಿಂದ 47 ವರ್ಷದ ಒಳಗಿನ ವಯೋಮಾನದವರು ಈ ಗುಂಪಿನಲ್ಲಿ ಬರುತ್ತಾರೆ.   ಇವರು #ಜೆನ್_ಎಕ್ಸ್' (Gen X) ನಂತರ ಮತ್ತು '#ಜೆನ್_ಜಿ' (Gen Z) ಗಿಂತ ಮುಂಚಿನ ತಲೆಮಾರಿನವರಾಗಿದ್ದಾರೆ.   ಇವರ ​ಮುಖ್ಯ ಲಕ್ಷಣಗಳು ಮತ್ತು ಹಿನ್ನೆಲೆ,​ಡಿಜಿಟಲ್ ಬದಲಾವಣೆಯ ಸಾಕ್ಷಿ ಕಾಲದವರು ಈ ತಲೆಮಾರಿನವರು.   ಇಂಟರ್ನೆಟ್ ಇಲ್ಲದ ಅನಲಾಗ್ ಜಗತ್ತನ್ನು ಲ್ಯಾಂಡ್‌ಲೈನ್, ರೇಡಿಯೋ, ಟಿವಿ ಮತ್ತು ಡಿಜಿಟಲ್ ಕ್ರಾಂತಿಯ ಆರಂಭವನ್ನು (ಡಯಲ್-ಅಪ್ ಇಂಟರ್ನೆಟ್, ಕಂಪ್ಯೂಟರ್, ಮೊಬೈಲ್ ಫೋನ್, Facebook/Orkut) ಕಣ್ಣಾರೆ ಕಂಡ ಏಕೈಕ ತಲೆಮಾರು.      ​ ಇವರು ಆರ್ಥಿಕ ಸವಾಲುಗಳನ್ನ, 2008ರ ಜಾಗತಿಕ ಆರ್ಥಿಕ ಹಿಂಜರಿತ (Great Recession) ಮತ್ತು ಕೋವಿಡ್ ಬಿಕ್ಕಟ್ಟನ್ನು ವೃತ್ತಿಜೀವನದ ಆರಂಭ ಅಥವಾ ಬ...

4147.ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ

ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ.   #ಹಿಂದೂ ಧರ್ಮದಲ್ಲಿ ಬ್ರಾಹ್ಮೀ ಮುಹೂರ್ತಸೂರ್ಯೋದಯಕ್ಕೆ 96 ನಿಮಿಷ ಮುನ್ನ.   #ಸಿಖ್ ಧರ್ಮದಲ್ಲಿ ಅಮೃತ್ ವೇಳಾ ಮುಂಜಾನೆ 3 – 6 ನಾಮ ಜಪ, ಪವಿತ್ರ ಗ್ರಂಥ ಪಠಣ. #ಇಸ್ಲಾಂ ಧರ್ಮದಲ್ಲಿ ತಹಜ್ಜುದ್ / ಫಜ್ರ್ರಾತ್ರಿಯ ಕೊನೆಯ ಭಾಗ / ಮುಂಜಾನೆ ಏಕಾಂತದ ಪ್ರಾರ್ಥನೆ -ನಮಾಜ್.  #ಕ್ರಿಶ್ಚಿಯನ್ ಧರ್ಮದಲ್ಲಿ  ಮು0ಜಾನೆ 4 -5.30 ಏಕಾಂತ ಪ್ರಾರ್ಥನೆ, ಕೀರ್ತನೆಗಳ ಪಠಣ. #ಬೌದ್ಧ ಧರ್ಮದಲ್ಲಿ ಮುಂಜಾನೆಯ ಝೆನ್ ಧ್ಯಾನಮುಂಜಾನೆ 4– 5 ಚಿತ್ತಶುದ್ಧಿ, ವಿಪಸ್ಸನಾ ಸಾಧನೆ. #ಜೈನ ಧರ್ಮದಲ್ಲಿ ಮುಂಜಾನೆ ಣ ಮೋಕಾರ ಪಠಣ ಪ್ರಾರಂಬಿಸುತ್ತಾರೆ.   ಹೆಸರು ಮತ್ತು ವಿದಿ ವಿದಾನಗಳು ಬೇರೆಯಾಗಿದ್ದರೂ ಸೂಯೊ೯ದಯಕ್ಕೆ ಮುನ್ನ ವಾತಾವರಣದಲ್ಲಿರುವ ಪ್ರಶಾಂತತೆ, ಪರಿಶುದ್ಧತೆ ಮತ್ತು ಸಾತ್ವಿಕ ಶಕ್ತಿಯನ್ನು ಆಧ್ಯಾತ್ಮಿಕ ಉನ್ನತಿಗಾಗಿ ಬಳಸಿಕೊಳ್ಳಬೇಕೆಂಬುದು ವಿಶ್ವದ ಬಹುತೇಕ ಎಲ್ಲಾ ಧರ್ಮಗಳ ಸಮಾನ ಸಿದ್ಧಾಂತವಾಗಿದೆ. #ಸಿಖ್_ಧರ್ಮದಲ್ಲಿ. ಸೂರ್ಯೋದಯಕ್ಕೂ ಮುನ್ನ ಮಾಡುವ ಪ್ರಾರ್ಥನೆ ಮತ್ತು ಧ್ಯಾನವನ್ನು ಅಮೃತ ವೇಳೆಯ ನಿತ್‌ನೇಮ್ ಎಂದು ಕರೆಯಲಾಗುತ್ತದೆ. ​ಅಮೃತ ವೇಳೆ ಸೂರ್ಯೋದಯಕ್ಕೂ ಮುನ್ನ ಸುಮಾರು 3:00 ರಿಂದ 6:00 ಗಂಟೆಯವರೆಗಿನ (ಬ್ರಾಹ್ಮೀ ಮುಹೂರ್ತ) ಸಮಯವನ್ನು 'ಅಮೃತ ವೇಳೆ' ಎನ್ನುತ್ತಾರೆ.   ​ನಾಮ ಸಿಮ್ರನ್ ಮುಂಜಾನೆ ಎದ್ದು ಸ್ನಾನದ ನಂತರ ಭಗವಂತನ ಹೆಸರನ್ನ...