Skip to main content

Posts

4017. ನೊಣವಿನಕೆರೆ ಅಜ್ಜಯ್ಯ ಡಿಕೆ ಶಿವಕುಮಾರ್

ನೊಣವಿನಕೆರೆ_ಅಜ್ಜಯ್ಯ #ಮುಖ್ಯಮಂತ್ರಿ_ಡಿಕೆ_ಶಿವಕುಮಾರ್.    ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣಕ್ಕೆ 12 ಕಿಲೋ ಮೀಟರ್ ದೂರದಲ್ಲಿರುವ #ನೊಣವಿನಕೆರೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗುವುದು ನಿಶ್ಚಿತ.       ನೊಣವಿನಕೆರೆಯಲ್ಲಿ ಜೀವಂತ ಸಮಾಧಿಯಾದ ಪ್ರಸಿದ್ಧ ಸಂತರೆಂದರೆ #ಶ್ರೀಕಾಡುಸಿದ್ಧೇಶ್ವರಸ್ವಾಮಿಗಳು ಅವರ ಪೂರ್ಣ ಹೆಸರು ಶ್ರೀ ಕರಿಸಿದ್ದೇಶ್ವರ ಸ್ವಾಮಿಗಳು.     ಇದು ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದ್ದು ಇಲ್ಲಿನ ಶ್ರೀ ಕಾಡುಸಿದ್ಧೇಶ್ವರ ಮಠ/ಕರಡಾಳು ಮಠ ಅತ್ಯಂತ ಮಹತ್ವದ್ದಾಗಿದೆ.    ಇಲ್ಲಿನ ಮೂಲ ಗುರುಗಳಾದ ಶ್ರೀಕಾಡುಸಿದ್ಧೇಶ್ವರ ಸ್ವಾಮಿಗಳು ಪವಾಡ ಪುರುಷರಾಗಿದ್ದು, ಲೋಕಕಲ್ಯಾಣಕ್ಕಾಗಿ ನೊಣವಿನಕೆರೆಯ ಗವಿಮಠದ ಆವರಣದಲ್ಲಿ ಜೀವಂತ ಸಮಾಧಿಯಾದರು ಎಂಬ ಇತಿಹಾಸವಿದೆ.   ಈ ಮಠಕ್ಕೆ ಶತಶತಮಾನಗಳ ಇತಿಹಾಸವಿದ್ದು ವೀರಶೈವ ಲಿಂಗಾಯತ ಧರ್ಮದ ಶೂನ್ಯಸಿಂಹಾಸನ ಪರಂಪರೆಯನ್ನು ಹೊಂದಿದೆ.   ಇಲ್ಲಿನ ಸ್ವಾಮಿಗಳು ತಪಸ್ಸು ಮತ್ತು ಜನಸೇವೆಯ ಮೂಲಕ ಈ ಭಾಗದಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ್ದರು.    ​ಇಂದು ಈ ಸ್ಥಳವು ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು ಪ್ರತಿವರ್ಷ ಇಲ್ಲಿ ವಿಶೇಷ ಪೂಜೆ, ಜಾತ್ರೆ ಮತ್ತು ಆರಾಧನಾ ಮಹೋತ್ಸವಗಳು ಜರುಗುತ್ತವೆ.  ...
Recent posts

4016. ಕುಂದಾಪುರದ ಪ್ರಸಿದ್ಧ ಮಾನಸಿಕ ತಜ್ಞರು

ಶ್ರೀಮಾತಾ_ಆಸ್ಪತ್ರೆ_ಕುಂದಾಪುರ #ಪ್ರಸಿದ್ಧ_ಮಾನಸಿಕ_ಆಸ್ಪತ್ರೆ #ಡಾ_ಪ್ರಕಾಶ್_ತೋಳಾರ್_ಮುಖ್ಯ_ವೈದ್ಯಾದಿಕಾರಿ_ನೇತೃತ್ವದಲ್ಲಿ #ಕರಾವಳಿಯಿಂದ_ಮಲೆನಾಡಿನವರೆಗೆ_ಪ್ರಸಿದ್ಧಿ_ಪಡೆದಿದೆ  #Famouspsychologist #srimathahospital #kundapura #Drprakashtolar     ಇವತ್ತು ನಮ್ಮ ದೇವರ ಮಗ ನಾರಾಯಣ ಪ್ರದಾನ್ ನನ್ನು ಕುಂದಾಪುರದ ಪ್ರಸಿದ್ಧ ಶ್ರೀ ಮಾತಾ ಆಸ್ಪತ್ರೆಯ ಮುಖ್ಯ ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್ ಹತ್ತಿರ ರೋಟಿನ್ ಚೆಕ್ ಅಪ್ ಗೆ ನಮ್ಮ ಅಣ್ಣ ಕರೆದೊಯ್ದಿದ್ದರು.   ಕಳೆದ ನಾಲ್ಕು ವರ್ಷಗಳಿಂದ ನಾರಾಯಣ ಪ್ರಧಾನ್ ಚಿಕಿತ್ಸೆ ಕುಂದಾಪುರದ ಶ್ರೀಮಾತಾ ಆಸ್ಪತ್ರೆಯಲ್ಲೇ ನಡೆಯುತ್ತಿದೆ.    ನಾರಾಯಣ ಈ ರೀತಿ ಗುಣ ಆಗುತ್ತಾನೆಂಬ ಭರವಸೆ ನನಗಿರಲಿಲ್ಲ ಆದರೆ ಡಾ.ಪ್ರಕಾಶ್ ತೋಳಾರ್ ಗುಣ ಪಡಿಸಿದ್ದಾರೆ ಅವರಿಗೆ ನಾನು ಅಭಾರಿ.    ನಾರಾಯಣ ಪ್ರಧಾನ್ ಹದಿನಾಲ್ಕು ವರ್ಷಗಳ ಹಿಂದೆ ದಾರಿಯಲ್ಲಿ ಸಿಕ್ಕಿದ ಅನಾಥ ಹುಡುಗ ಆದ್ದರಿಂದ ವೈದ್ಯರು ಚಿಕಿತ್ಸೆಗೆ ಹಣ ಪಡೆಯುವುದಿಲ್ಲ.     ಮನೋವೈದ್ಯರಾದ #ಡಾ_ಪ್ರಕಾಶ್_ತೋಳಾರ್ ಅವರ ಮಾನವೀಯತೆಗೆ ಇದು ಸಾಕ್ಷಿ.       ಕಾರವಾರದಿಂದ ಕೇರಳದ ಕಾಸರಗೋಡಿನ ತನಕ ಇವರು ಪ್ರಸಿದ್ದರಾಗಿದ್ದವರು ಕಳೆದ ಹತ್ತು ವರ್ಷಗಳಿಂದ ಘಟ್ಟದ ಮೇಲಿನ ಮಲೆನಾಡಿನಾದ್ಯಂತ ಇವರ ಚಿಕಿತ್ಸೆ ಬಗ್ಗೆ ಒಳ್ಳೆಯ ಹೆಸರಿಂದ ಜನಪ್ರಿಯರಾ...

4015. ಮಟಕಾ ಕಲ್ಯಾಣ್ ಜಿ ಭಗತ್ ವರ್ಲಿ ಮಟಕಾ

ಕಲ್ಯಾಣ್_ಜೀ_ ಭಗತ್ ಪ್ರಾರಂಬಿಸಿದ ಮೊದಲ ವರ್ಲಿ ಮಟಕಾ.  ಇದಕ್ಕೆ ಕಲ್ಯಾಣಿ ಮಾರ್ಕೆಟ್ ಎಂತಲೂ ಜನ ಕರೆಯುತ್ತಾರೆ.   ನನ್ನ ಹಿಂದಿನ ರತನ್ ಖತ್ರಿ ಲೇಖನ ಓದಿದವರು ಕಲ್ಯಾಣ್ ಜಿ ಮಟಕಾ ಮಾರ್ಕೆಟ್ ಬಗ್ಗೆ ಕೂಡ ಬರೆಯುಂತೆ ವಿನಂತಿಸಿದ್ದರಿಂದ ಈ ಲೇಖನ ಓದಿ...   #ರತನ್_ಲಾಲ್_ಖತ್ರಿಗಿಂತ ಮೊದಲಿಗರು ಕಲ್ಯಾಣ್ ಜಿ ಭಗತ್ ಇವರೇ ಭಾರತದ ಮೊದಲ ಮಟ್ಕಾ / ಓಸಿ ಜುಗಾರಿಯ ಪ್ರವರ್ತಕರು.    ಆದರೆ ಮಟ್ಕಾ ಕಿಂಗ್ ಬಿರುದು ಜನಪ್ರಿಯತೆ ಮಾತ್ರ ರತನ್ ಲಾಲ್ ಖತ್ರಿಗೆ ಸೀಮಿತವಾಯಿತು.    ಭಾರತದ ಮೊದಲ ಮಟಕಾ ಪ್ರವರ್ತಕರಾದ ಕಲ್ಯಾಣ್ ಜಿ ಭಗತ್ ಇವರ ಓಸಿ ಮಾರ್ಕೆಟ್ ಹೆಸರು #ವರ್ಲಿ_ಮಟಕಾ.  ಕಲ್ಯಾಣ್ ಜಿ  ಭಗತ್ 1962 ರಲ್ಲಿ ವರ್ಲಿ ಮಟಕಾ ಆರಂಭಿಸಿದರು.    ನಂತರ #ರತನ್_ಖತ್ರಿ #ರತನ್_ಮಟ್ಕಾ ಅಥವಾ 'ಮೇನ್ ಬಜಾರ್' ಆರಂಭಿಸಿದರು ಅವರು ಇಸ್ಪೀಟ್ ಎಲೆಗಳನ್ನು ಬಳಸಿ ನಂಬರ್ ಡ್ರಾ ಮಾಡುವುದರಿಂದ ಮಟಕಾ ಹೆಚ್ಚು ಪಾರದರ್ಶಕಗೊಳಿಸಿದರು.   ಈಗಿನ ಸ್ಕಿಲ್ ಗೇಮ್, ಆನ್ ಲೈನ್, ಜಂಗಲಿ ರಮ್ಮಿ ಇತ್ಯಾದಿಗಳಷ್ಟು ಮಟಕಾ ಮಾರಕವಲ್ಲ ಎನ್ನುತ್ತಾರೆ.   ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಇದನ್ನು #ಅಂಕದ_ಜುಗರ್' ಎಂದು ಕರೆಯಲಾಗುತ್ತಿತ್ತು.    1960ರ ದಶಕದಲ್ಲಿ ನ್ಯೂಯಾರ್ಕ್ ಕಾಟನ್ ಎಕ್ಸ್‌ಚೇಂಜ್ ದರ ರದ್ದಾದ ನಂತರ ಮಣ್ಣಿನ ಮಡಕೆಯಿಂದ  ಚೀಟಿ ಎತ್ತುವ ಪದ್ಧತಿ ಜಾ...

4014. ಹತ್ತನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ

ಶತಮಾನಗಳ_ಹಿಂದಿನ_ಶಾಸನಗಳಲ್ಲಿ_ಅಡಿಕೆ.    ಸಾವಿರ ವರ್ಷಗಳ ಹಿಂದೆ ಅಡಿಕೆ ಪ್ರಮುಖ ಬೆಳೆ ಆಗಿತ್ತು ಮತ್ತು ಅಡಿಕೆಗೆ ತೆರಿಗೆ - ಸುಂಕಗಳನ್ನ ವಿದಿಸಲಾಗಿತ್ತೆಂಬ ಶಾಸನಗಳು ಅಡಿಕೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದೆ.   ಹತ್ತನೆ ಶತಮಾನದಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿಯ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತು.  ಮತ್ತು ಹನ್ನೆರಡನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ ಉಲ್ಲೇಖಗಳ ಸಂಗ್ರಹಿಸಿ ಬರೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್ ಹಿರೇಜಂಬೂರ್.   ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ  ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ.    ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.     ಅವರು 10ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕ...

4013. ನಮ್ಮ ಕಲ್ಲುಕುಟಿಕ ದೈವ

ಕಲ್ಲುಕುಟುಕಸ್ವಾಮಿ  ಸೊಪ್ಪುಗುಡ್ಡೆ - ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ.   ನೂರಾ ನಲವತ್ತು ವರ್ಷಗಳ ನಮ್ಮ ಕುಟುಂಬದ ಕಥೆ.   ನಮ್ಮ ಕುಟುಂಬದ ಕಲ್ಲುಕುಟಿಕ ಮತ್ತು ವರ್ತೆ ದೈವಸ್ಥಾನ ಮೊನ್ನೆ 2026ರ ಮೇ ತಿಂಗಳ 10ನೇ ತಾರೀಖು ಭಾನುವಾರ    #ತೀರ್ಥಹಳ್ಳಿಯ_ಸೊಪ್ಪುಗುಡ್ಡೆಯಲ್ಲಿ ಪುನರ್ ಪ್ರತಿಷ್ಠಾಪನೆ ಆಯಿತು ಇದು ನೂರು ವರ್ಷಗಳಲ್ಲಿ ಮೂರನೆ ಪುನರ್ ಪ್ರತಿಷ್ಠಾಪನೆ ಆಗಿದೆ.      ಅಂದಾಜು 1890 ನೇ ಇಸವಿಯಲ್ಲಿ  ಉಡುಪಿ ಜಿಲ್ಲೆಯ #ಬೆಣ್ಣೆಕುದುರಿನಿಂದ ಘಟ್ಟಕ್ಕೆ ಬರುವಾಗ ನನ್ನ ಅಜ್ಜಿ ಅಬ್ಬಕ್ಕ ತನ್ನ ಜೊತೆ ತಂದಿದ್ದು ಕಲ್ಲುಕುಟಿಕ ದೇವರನ್ನ.        ನನ್ನ ಅಜ್ಜಿ ಕಲ್ಲುಕುಟಿಕ ದೇವರ ಆರಾದಿಸುತ್ತಿದ್ದವರು ಮತ್ತು  ಕಲ್ಲುಕುಟಿಕ ದೇವರ ನೇಮ, ರೀತಿ-ನೀತಿಗಳ ಕಟ್ಟುಪಾಡು ಕಡ್ಡಾಯವಾಗಿ ಪಾಲಿಸಿಕೊಂಡು ಬಂದವರು.      ಸುಮಾರು ನೂರು ವರ್ಷಗಳ ಹಿಂದೆ ತಾನು ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರನ್ನ ಸರಿಯಾಗಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಹೋಗುವ ಭರವಸೆಯನ್ನು ತನ್ನ ಅಕ್ಕನ ಮಗಳು ಶ್ರೀಮತಿ #ಚಿಕ್ಕಮ್ಮರ ಪತಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ  #ರಾಮಣ್ಣಪಾತ್ರಿಗಳಲ್ಲಿ ನೋಡಿ ಅಲ್ಲಿಗೆ ಕಲ್ಲುಕುಟಿಕ ದೇವರನ್ನ ಸ್ಥಳಾಂತರಿಸುತ್ತಾರೆ.     ಈ ರೀತಿ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ...

4012. ನನ್ನ 4000 ಬ್ಲಾಗ್ ಲೇಖನಗಳು

ನಾಲ್ಕು_ಸಾವಿರ_ನನ್ನ_ಬ್ಲಾಗ್_ಲೇಖನ   ನಾಲ್ಕು ಸಾವಿರ ಲೇಖನಗಳು,ನನ್ನ ಬ್ಲಾಗ್ ನಲ್ಲಿ ನಾನು ಬರೆದ ಲೇಖನಗಳ ಸಂಖ್ಯೆ 4000 ತಲುಪಿದೆ.    ಇದನ್ನೆಲ್ಲ ಪುಟಗಳಾಗಿ ಪರಿವರ್ತಿಸಿದರೆ 50 ಸಾವಿರಕ್ಕಿಂತ ಹೆಚ್ಚು ಪುಟಗಳಾಗಿ ಮಿಕ್ಕಲಿದೆ,ನನಗೇ ಆಶ್ಚರ್ಯಇದೆಲ್ಲ ನನ್ನಿಂದ ಸಾಧ್ಯವಾಯಿತಾ? ಅಂತ.    ಆ ಲೆಕ್ಕದಲ್ಲಿ ನಾನು ಪೇಸ್ ಬುಕ್ ನಲ್ಲಿ ಬರೆದದ್ದೆಲ್ಲವನ್ನೂ  ಬ್ಲಾಗ್ ನಲ್ಲಿ ದಾಖಲಿಸಿದ್ದರೆ ಲೇಖನ 10 ಸಾವಿರ ಆಗುತ್ತಿತ್ತು ಮತ್ತು ನನ್ನ ವಿಡಿಯೋಗಳು ಸೇರಿದರೆ ಇನ್ನೊಂದಿಷ್ಟು ಸಾವಿರ ಆದರೆ ನಾನು ನಾನು ಬರೆದ ಲೇಖನದಲ್ಲಿ ನನಗೆ ಇಷ್ಟವಾಗಿ ಅದನ್ನು ದಾಖಲೆಯಾಗಿ ಕಾಪಿಟ್ಟುಕೊಳ್ಳಬೇಕೆಂದೆನ್ನಿಸಿದ ಲೇಖನ ಮಾತ್ರ ದಾಖಲಿಸಿದ್ದೇನೆ.     Youtube ನಲ್ಲಿ ಸಾವಿರಾರು ಪ್ರತ್ಯೇಕ ವಿಡಿಯೊಗಳು ದಾಖಲಾಗಿದೆ,ಇದೆಲ್ಲ ಬೇಕಾ? ... ಇದರಿಂದ ಲಾಭ ಏನು? ...ಎಂದರೆ ಬೇಕಾಗಿಲ್ಲ -ಲಾಭ ಇಲ್ಲ ಅಂತನೇ ಹೇಳುತ್ತೇನೆ ಆದರೆ ಈ ಖಯಾಲಿಗಳು ಕೊಡುವ ಸಂತೋಷ ಇದೆಯಲ್ಲ ಅದರ ಲೆವೆಲ್ಲೇ ಬೇರೆ ಅದು ನಮ್ಮ ಜೀವಿತ ಅವದಿಯ ಒಂದು ರೀತಿ ಸ್ವರ್ಗ ಸುಖ.       ಶಿವಮೊಗ್ಗ ಜಿಲ್ಲೆಯ ವಿಶ್ವಕೋಶ ನಿಮ್ಮ ಬ್ಲಾಗ್, ನಿಮ್ಮ ಕ್ರಿಯಾಶೀಲತೆ  ನಮಗೂ ಪ್ರೇರಣೆ ಅಂತ ಪ್ರಖ್ಯಾತ ಸಾಹಿತಿ #ಕುಂ_ವೀರಭದ್ರಪ್ಪನವರು ಹೇಳಿದ್ದಾರೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಏನಿದೆ ಹೇಳಿ.    ನಾನು ಬರೆದ ಲೇಖ...

4011. ಮಟಕಾ ಕಿಂಗ್

ರತನ್_ಲಾಲ್_ಖತ್ರಿ ಜುಗಾರಿ ಕ್ಷೇತ್ರದಲ್ಲಿನ ದಂತಕಥೆ. ಭಾರತದ ಪ್ರಸಿದ್ಧ / ಕುಪ್ರಸಿದ್ದ ಮಟ್ಕಾ ಕಿಂಗ್ ಏನಿದು ಓಪನ್ ಮತ್ತು ಕ್ಲೋಸ್ ನ ಸಂಕ್ಷಿಪ್ತ OC?... ಸಣ್ಣ ಸಣ್ಣ ಹಳ್ಳಿಗಳಿಗೂ ತಲುಪಿರುವ ಜುಗಾರಿ ಜಾಲ      ಮಟಕಾ ಕಿಂಗ್ ರತನ್ ಲಾಲ್ ಖತ್ರಿಯವರ ಜೀವನವು ಧರ್ಮಾತ್ಮ (1975) ಸೇರಿದಂತೆ ಜನಪ್ರಿಯ ಮಾಧ್ಯಮಗಳಲ್ಲಿ ಹಲವಾರು ಚಿತ್ರಣಗಳಿಗೆ ಸ್ಫೂರ್ತಿ ನೀಡಿದೆ ಎಂದರೆ ಅವರೆಷ್ಟು ಪ್ರಸಿದ್ದರೆಂದು ಗೊತ್ತಾಗುತ್ತದೆ.   2024 ರಲ್ಲಿ ತೆರೆಕಂಡ ವರುಣ್ ತೇಜ್ ನಟಿಸಿದ ಮಟ್ಕಾ ಎಂಬ ತೆಲುಗು ಚಿತ್ರ  ಮತ್ತು 2026 ರಲ್ಲಿ ತೆರೆಕಂಡ ವಿಜಯ್ ವರ್ಮಾ ನಟಿಸಿದ "ಮಟ್ಕಾ ಕಿಂಗ್" ಎಂಬ ಹಿಂದಿ ಜೀವನ ಚರಿತ್ರೆಯ ಸರಣಿಗಳು ಅವರ ಜೀವನ ಮತ್ತು ಕಾಲದಿಂದ ಪ್ರೇರಿತವಾಗಿವೆ.     ರಾಯ್ ಕಪೂರ್ ಫಿಲಂ ಮತ್ತು ಆತ್ ಪತ್ ಪ್ರೊಡಕ್ಷನ್ಸ್ ಭಾರತದಲ್ಲಿ "ಮಟ್ಕಾ ಕಿಂಗ್" ಆಗಿ ಖತ್ರಿ ಅವರ ಉದಯ ಮತ್ತು ಸ್ವಾತಂತ್ರ್ಯದ ನಂತರ ಭಾರತೀಯ ಸಮಾಜದ ಮೇಲೆ ಮಟ್ಕಾ ಜೂಜಾಟದ ಪ್ರಭಾವವನ್ನು ಎತ್ತಿ ತೋರಿಸುತ್ತವೆ.   ಬ್ರಿಟಿಷ್ ಭಾರತದ (ಈಗ ಪಾಕಿಸ್ತಾನ ) ಕರಾಚಿಯಲ್ಲಿ ಜನಿಸಿದ ಖತ್ರಿ 1947 ರ ವಿಭಜನೆಯ ಸಮಯದಲ್ಲಿ ಮುಂಬೈಗೆ ವಲಸೆ ಬಂದರು.   1960 ರ ದಶಕದ ಆರಂಭದಿಂದ 1990 ರ ದಶಕದ ಮಧ್ಯಭಾಗದವರೆಗೆ ಮೂಲ ಮಟ್ಕಾ ರಾಜ ಎಂದು ಕರೆಯಲ್ಪಡುವ ರತನ್ ಖತ್ರಿ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ರಾಷ್ಟ್ರವ್ಯ...