ಭಾಗ_9_ಕಾಳುಮೆಣಸಿನ_ರಾಣಿ #ಚೆನ್ನಬೈರಾದೇವಿ_ಸಮಾದಿ_ಸ್ಥಳ_ಇಲ್ಲಿದೆ. ರಾಷ್ಟ್ರೀಯ ಸ್ಮಾರಕ ಮಾಡಿ ಸಂರಕ್ಷಣೆ ಮಾಡ ಬೇಕಾದ ಪುರಾತತ್ವ ಇಲಾಖೆ ಮತ್ತು ಸರ್ಕಾರಿ ಸಂಶೋದಕರ ನಿರಾಸಕ್ತಿಯಿಂದ ಅಮೂಲ್ಯವಾದ ರಾಣಿ ಚೆನ್ನ ಬೈರಾದೇವಿ ಸಮಾಧಿ ಶಾಸನ/ ನಿಶಿಧಿ ಶಾಸನ ಒಡೆದು ಕಿತ್ತು ನಿಶಿದಿ ಮಂಟಪದಿಂದ ಹೊರಕ್ಕೆ ಒಗೆಯಲಾಗಿದೆ. #ಶಿವಮೊಗ್ಗ ಜಿಲ್ಲೆಯ #ಸಾಗರ ತಾಲೂಕಿನ #ಆವಿನಹಳ್ಳಿ ಸಮೀಪದ #ಗೆಣಸಿನಕುಣಿಯ_ಸಿದ್ದೇಶ್ವರ_ದೇವಾಲಯವೇ ಮಹಾ ಮಂಡಲೇಶ್ವರಿ ಚೆನ್ನ ಬೈರಾದೇವಿ ಸಮಾಧಿ ಸ್ಥಳ. ಅನೇಕ ಊರಲ್ಲಿ ಜೈನ ಸಮಾದಿ ಸ್ಥಳ ನಿಶಿದಿ ಮಂಟಪಗಳು ಸಿದ್ದಪ್ಪ - ಸಿದ್ದೇಶ್ವರ ಗುಡಿಗಳಾಗಿದೆ ಅದಕ್ಕೆ ಕಾರಣ ವಿವರಿಸುವ ಹಿಂದಿನ ನನ್ನ ಪೇಸ್ ಬುಕ್ ಲೇಖನ ಸರಣಿಗಳಲ್ಲಿ ನೋಡಿದ್ದೀರಿ. ಗೆಣಸಿನಕುಣಿಯ ಸಿದ್ದೇಶ್ವರ ದೇವಾಲಯದಲ್ಲಿ ಇರುವ ಮೂಲ ರಾಣಿ ಚೆನ್ನ ಬೈರಾದೇವಿ ಸಮಾಧಿ ಪೀಠದ ಮೇಲೆ ಇನ್ನೊಂದು ಶಿವಲಿಂಗದ ಪೀಠ ಇಟ್ಟು ಅದರ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಇಕ್ಕೇರಿ ಕೋಟೆಯಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರ ಬಂದನದಲ್ಲಿದ್ದ ಗೇರುಸೊಪ್ಪೆಯ ಸಾಳ್ವ ವಂಶದ ಪೋರ್ಚುಗೀಸರಿಂದ ಕಾಳು ಮೆಣಸಿನ ಬಿರುದು ಪಡೆದ ರಾಣಿ ಚೆನ್ನ ಬೈರಾದೇವಿ 10 ಅಕ್ಟೋಬರ್ 1608 ರಲ್ಲಿ ಸಲ್ಲೇಖನ ವೃತ ಕೈಗೊಂಡು ಇಹಲೋಕ ತ್ಯಜಿಸಿದರು. ಅವರ ಅಂತ್ಯಕ್ರಿಯೆ ಅವಿನಹಳ್ಳಿ ಸಮೀಪದ ಗೆಣಸಿನಕುಣಿಯಲ್ಲಿ ನೆರವೇರಿಸಿ ಅಲ್ಲಿ ಸಮಾದಿ ಮಾಡಿ ಸ...
ಭಾಗ_8_ಮೂಲ_ಜೈನ_ನಿಶಿದಿಮಂಟಪ_ಕಾಲಾಂತರದಲ್ಲಿ #ಬೇರ_ಧರ್ಮದ_ದೇವಸ್ಥಾನವಾಗಿ_ಪರಿವರ್ತನೆ. ಒಂದು ಮೂಲ ಜೈನ ನಿಶಿದಿ ಮಂಟಪವನ್ನು ಕಾಲಾಂತರದಲ್ಲಿ ಬೇರೆ ಧರ್ಮದ ಅಥವಾ ಸಾಮಾನ್ಯ ದೇವಸ್ಥಾನವನ್ನಾಗಿ ಪರಿವರ್ತಿಸುವ,ಬದಲಾಯಿಸುವಪ್ರಕ್ರಿಯೆಯು ಪ್ರಮುಖವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ. ಇತಿಹಾಸದಲ್ಲಿ ಇಂತಹ ಬದಲಾವಣೆಗಳು ರಾಜಕೀಯ ಬದಲಾವಣೆಗಳು, ಧಾರ್ಮಿಕ ಸ್ಥಿತ್ಯಂತರಗಳು ಅಥವಾ ಸ್ಥಳೀಯ ಜನರ ಅಜ್ಞಾನದ ಕಾರಣದಿಂದ ನಡೆದಿವೆ. ವಾಸ್ತುಶಿಲ್ಪದ ಮತ್ತು ಧಾರ್ಮಿಕ ಆಚರಣೆಗಳ ದೃಷ್ಟಿಯಿಂದ ನಿಶಿದಿ ಮಂಟಪವನ್ನು ದೇವಾಲಯವನ್ನಾಗಿ ಮಾರ್ಪಾಡು ಮಾಡುವ ವಿಧಾನಗಳು ಇಲ್ಲಿವೆ. ಕಟ್ಟಡದ ವಿನ್ಯಾಸದ ಮಾರ್ಪಾಡು,ನಿಶಿದಿ ಮಂಟಪಗಳು ಮೂಲತಃ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಕಂಬಗಳಿರುವ ಸಣ್ಣದಾದ ತೆರೆದ ಮಂಟಪಗಳಾಗಿರುತ್ತವೆ. ಇವುಗಳನ್ನು ದೇವಾಲಯವನ್ನಾಗಿ ಮಾಡಲು ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುತ್ತದೆ. ಗೋಡೆಗಳನ್ನು ಕಟ್ಟುವುದು, ತೆರೆದ ಕಂಬಗಳ ಮಧ್ಯದ ಜಾಗಕ್ಕೆ ಇಟ್ಟಿಗೆ, ಕಲ್ಲು ಅಥವಾ ಗಾರೆಯಿಂದ ಗೋಡೆಗಳನ್ನು ಕಟ್ಟಿ ಅದನ್ನು ನಾಲ್ಕೂ ಕಡೆ ಮುಚ್ಚಿದ ಒಂದು ಗರ್ಭಗುಡಿಯಾಗಿ ಪರಿವರ್ತಿಸಲಾಗುತ್ತದೆ. ಮುಖ್ಯ ದ್ವಾರದ ಜೋಡಣೆ, ಭಕ್ತರು ಒಳಗೆ ಹೋಗದಂತೆ ತಡೆಯಲು ಅಥವಾ ಗರ್ಭಗುಡಿಯ ಪಾವಿತ್ರ್ಯತೆ ಕಾಪಾಡಲು ಒಂದು ಮುಖ್ಯ ಬಾಗಿಲನ್ನು (ದ್ವಾರ) ಇಡಲಾಗುತ್ತದೆ. ಮೇಲ್ಛಾವಣಿ...