Skip to main content

Posts

4105.ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು.ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು

ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು. ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು    ಇವರು ಇಸ್ಲಾಂನ ಪ್ರವಚನ ಕನ್ನಡಕ್ಕೆ ಅನುವಾದಿಸಿದವರು ಮತ್ತು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದವರರು.     #ಹಿರೇಹಾಳ_ಇಬ್ರಾಹಿಂ ಸಾಹೇಬರಿಗೆ ಮರಣೋತ್ತರ ಡಾಕ್ಟರೇಟ್ ಪದವಿ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ 13 ಜುಲೈ 2023 ರಂದು ತನ್ನ 11ನೇ ಘಟಿಕೋತ್ಸವದಲ್ಲಿ ನೀಡಿತು.   ಆದರೆ ಹಿರೇಹಾಳ ಇಬ್ರಾಹಿಂ ಸಾಹೇಬರ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಸ್ಮರಿಸುವ ಕಾರ್ಯಕ್ರಮಗಳು ನಡೆಯಲೇ ಇಲ್ಲ.   ಹಿರೇಹಾಳ ಇಬ್ರಾಹಿಂ ಸಾಹೇಬರ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿನ ಎಲ್ಲಾ ಹಿರಿಯ ಸಾಹಿತಿಗಳಲ್ಲಿ ಅತ್ಯಂತ ಗೌರವಾಭಿಮಾನ ಕಾರಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪೋಷಕ ಸ್ಥಾನ.    ನಾಡಿನ ಸಾಹಿತಿಗಳಿಗೆ ಶಿವಮೊಗ್ಗಕ್ಕೇ ಆಹ್ವಾನಿಸಿ ಆಧರಿಸಿ ಗೌರವಿಸುತ್ತಿದ್ದ ರೀತಿ ಹಿರೇಹಾಳ ಇಬ್ರಾಹಿಂ ಸಾಹೇಬರ ಬಿಟ್ಟರೆ ಇನ್ನೊಬ್ಬರಿಲ್ಲ.   ಆ ಕಾಲದಲ್ಲಿ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ #ಹಯವದನ ನಾಟಕ ಪ್ರದರ್ಶನದ ಪ್ರಾಯೋಜಕತ್ವ ಮಾಡುವ ದೈರ್ಯ ಮಾಡಿದ್ದು ಹಿರೇಹಾಳ ಇಬ್ರಾಹಿಂ ಸಾಹೇಬರು, ನಂತರ ಹಯವದನ ನಾಟಕ ಯಶಸ್ವಿಯಾಗಿ ನಡೆಯಿತು.   ಇಬ್ರಾಹಿಂ ಸಾಹೇಬರು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದರು, ರಾಜ್ಯ ಸರ್ಕ...
Recent posts

4104.ಭಾಗ_13_ಬೈರಪ್ಪರ_ಸಾಹಿತ್ಯದಲ್ಲಿ_ಘಟ್ಟಕ್ಕೆಕರಾವಳಿಗರ_ವಲಸೆ

ಭಾಗ_13_ಬೈರಪ್ಪರ_ಸಾಹಿತ್ಯದಲ್ಲಿ_ಘಟ್ಟಕ್ಕೆ ಕರಾವಳಿಗರ_ವಲಸೆ   ಕರಾವಳಿಯಿಂದ ಘಟ್ಟಕ್ಕೆ ಕೇವಲ ಶ್ರಮಜೀವಿಗಳು ಹಿಂದುಳಿದ ವರ್ಗಗಳ ಜನರು ಮಾತ್ರ ವಲಸೆ ಬಂದಿದ್ದಲ್ಲ ಅಲ್ಲಿಂದ ಮೇಲು ಜಾತಿಯ ಬ್ರಾಹ್ಮಣರೂ ವಲಸೆ ಬಂದಿದ್ದಾರೆ.   ಹೋಟೆಲ್, ವ್ಯಾಪಾರ ಮತ್ತು ಪುರೋಹಿತ್ಯಕ್ಕಾಗಿ ಬಂದವರು ಇಲ್ಲೇ ನೆಲೆಸಿದ್ದಾರೆ.     ನನ್ನ ಕರಾವಳಿ ವಲಸಿಗರ ಲೇಖನ ಓದದ ಅನೇಕರು ಅವರ ಕುಟುಂಬಗಳೂ ಕೂಡ ಕರಾವಳಿಯಿಂದ ವಲಸೆ ಬಂದ ಕುಟುಂಬವಾಗಿದೆ ಆದರೆ ಕೃಷಿ ಕೆಲಸಕ್ಕೆ ಬರಲಿಲ್ಲ ಹೋಟೆಲ್ ಕೆಲಸಕ್ಕೆ ಬಂದವರು ಅಂತ ಇನ್ನು ಕೆಲವರು ಪುರೋಹಿತ್ಯ ಮಾಡಲು  ಘಟ್ಟದ ದೇವಸ್ಥಾನಕ್ಕೆ ಬಂದವರು ಎಂದು ತಿಳಿಸಿದ್ದಾರೆ.   ಕರಾವಳಿ ಜನರ ಜಾಗತಿಕ ವಲಸೆಯ ಇತಿಹಾಸದಲ್ಲಿ #ಉಡುಪಿ_ಹೋಟೆಲ್ ಉದ್ಯಮಕ್ಕೆ ದೊಡ್ಡ ಹೆಸರಿದೆ.    #ಕುವೆಂಪು ಅವರ ಸಾಹಿತ್ಯವು ಮಲೆನಾಡಿನ ಹಿನ್ನೆಲೆಯಲ್ಲಿ ಕರಾವಳಿ ವಲಸೆಯನ್ನು ಚಿತ್ರಿಸಿದರೆ, ಕನ್ನಡದ ಮತ್ತೊಬ್ಬ ದಿಗ್ಗಜ ಕಾದಂಬರಿಕಾರರಾದ ಡಾ. #ಎಸ್_ಎಲ್_ಭೈರಪ್ಪ ಅವರ ಸಾಹಿತ್ಯದಲ್ಲಿ ಕರಾವಳಿ ಮತ್ತು ಅಲ್ಲಿನ ಜನರ ವಲಸೆಯ ಚಿತ್ರಣ ಸಂಪೂರ್ಣ ಭಿನ್ನವಾದ ತಾರ್ಕಿಕ, ತಾತ್ವಿಕ ಮತ್ತು ಸಾಮಾಜಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ.   ​ಭೈರಪ್ಪನವರ ಕಾದಂಬರಿಗಳಲ್ಲಿ ಕರಾವಳಿ ವಲಸಿಗರು ಕೇವಲ ದೈಹಿಕ ಶ್ರಮದ ಕೂಲಿಯಾಳುಗಳಾಗಿ ಬರುವುದಿಲ್ಲ ಬದಲಿಗೆ ಅವರು ಬುದ್ಧಿಜೀವಿಗಳಾಗಿ, ಭಟ್ಟರಾಗಿ, ಉದ್ಯಮಿಗಳಾಗಿ...

4103. ಇದು ನಾನು ಬರೆದ #ನಾಥಪಂಥದ_ಬಾರಾ_ಪಂಥ್_ಯಾತ್ರೆ ಪುಸ್ತಕದ್ದು, ಈ ಪುಸ್ತಕ ಮುದ್ರಣವಾಗಿ 2027 ರ ಶಿವರಾತ್ರಿಗೆ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಯೋಚನೆ.

ಲೇಖಕನ_ಮಾತು ...  ಇದು ನಾನು ಬರೆದ #ನಾಥಪಂಥದ_ಬಾರಾ_ಪಂಥ್_ಯಾತ್ರೆ ಪುಸ್ತಕದ್ದು, ಈ ಪುಸ್ತಕ ಮುದ್ರಣವಾಗಿ 2027 ರ ಶಿವರಾತ್ರಿಗೆ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಯೋಚನೆ.   ಈ ಪುಸ್ತಕ ನಾನು ಸಮರ್ಪಣೆ ಮಾಡಿದ #ಶ್ರೀ_ಫೀರ್_ಯೋಗಿ _ಸೋಮನಾಥ_ಜೀ ಜೊತೆ ನನ್ನ ಸತ್ಸಂಗದ ನೆನಪುಗಳು.    ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಗೋರಕ್ ಪುರದ ನಾಥಪಂತದ ಕೇಂದ್ರದ ಅಧ್ಯಕ್ಷರು.     ಅದರ ಒಂದು ಉಪಶಾಖಾ ಮಠವೇ ಶ್ರೀಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವರಿ ಮಠ, ಇದು ಕರ್ನಾಟಕದ ಕೊಡಚಾದ್ರಿ ಶೃಂಗ ಶ್ರೇಣಿಯ ಕರಾವಳಿ ಭಾಗದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ  ಕಮಲಶಿಲೆ ಸಮೀಪದ ಯಡಮೊಗೆ ಎಂಬ ಹಳ್ಳಿಯಲ್ಲಿದೆ.   ದೀರ್ಘ ಕಾಲ ಇಲ್ಲಿನ ಪೀಠದಲ್ಲಿದ್ದವರು ಶ್ರೀ ಫೀರ್ ಯೋಗಿ ಸೋಮನಾಥ  ಬಾವೋಜಿ .   ಶ್ರೀ ಪೀರ್ ಯೋಗಿ ಸೋಮನಾಥ ಜೀ ಮೂಲ ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್ ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥ ಮಠದಲ್ಲಿ ಮಠಾದೀಶರಾಗಿದ್ದರು.   ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಉತ್ತರ ಪ್ರದೇಶದ ಗೋರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.     ಪ್ರತಿ 12 ವಷ೯ಕ್ಕೆ ಒಮ್...

4102.ಪರಿಸರ_ಸೂಕ್ಷ್ಮ_ಪ್ರದೇಶ_ಘೋಷಣೆESA_Ecologically_Sensitive_Areaಏಳನೆ_ಕರಡು_ಅಧಿಸೂಚನೆ_ಯಾಕೆ?..

ಪರಿಸರ_ಸೂಕ್ಷ್ಮ_ಪ್ರದೇಶ_ಘೋಷಣೆ ESA_Ecologically_Sensitive_Area ಏಳನೆ_ಕರಡು_ಅಧಿಸೂಚನೆ_ಯಾಕೆ?...   ​ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ಈ ಹಿಂದಿನ ಕರಡು ಅಧಿಸೂಚನೆಯ ಅವಧಿ ಮುಗಿದಿದ್ದರಿಂದ 7ನೇ ಕರಡು ಅಧಿಸೂಚನೆಯನ್ನು ಮರುಹೊರಡಿಸಿದೆ.    ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಯು ತಕ್ಷಣಕ್ಕೆ ಪ್ರಸ್ತುತ ಇರುವ ರೂಪದಲ್ಲೇ ಜಾರಿಗೆ ಬರುವ ಸಾಧ್ಯತೆ ತೀರ ಕಡಿಮೆ.   ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಯ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಈ ಕೆಳಗಿನ ಪ್ರಮುಖ ಅಂಶಗಳ ಮೂಲಕ ಅರ್ಥಮಾಡಿಕೊಳ್ಳಬಹುದು.  ಈ ಕರಡಿನ ಕುರಿತು ಸಾರ್ವಜನಿಕರು ಹಾಗೂ ರಾಜ್ಯ ಸರ್ಕಾರಗಳು ತಮ್ಮ ಆಕ್ಷೇಪಣೆಗಳು/ಸಲಹೆಗಳನ್ನು ಸಲ್ಲಿಸಲು ಸಮಯ ನೀಡಲಾಗಿದೆ.    ​  ಪ್ರಸ್ತುತ ಹೊರಡಿಸಿರುವ ಹೊಸ ಕರಡಿನಲ್ಲೂ ಕರ್ನಾಟಕದ 20,668 ಚ.ಕಿ.ಮೀ ಸೇರಿದಂತೆ ಒಟ್ಟು 56,825.7 ಚ.ಕಿ.ಮೀ ಪ್ರದೇಶವನ್ನೇ ESA ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ.    ​  ಕರ್ನಾಟಕ ಸರ್ಕಾರ ಮತ್ತು ಮಲೆನಾಡು ಭಾಗದ ಜನಪ್ರತಿನಿಧಿಗಳು ಈ ವರದಿಯನ್ನು ಪ್ರಸ್ತುತ ರೂಪದಲ್ಲಿ ಜಾರಿಗೆ ತರುವುದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.   ​ಉಪಗ್ರಹ ಚಿತ್ರಣದ ಆಧಾರದ ಮೇಲೆ ಹಳ್ಳಿಗಳನ್ನು ಗುರ್...

4101.ಕನ್ವರ್_ಯಾತ್ರೆ_Kanwar_Yatra. ಇದು ಶಿವನಿಗಾಗಿ ಆಚರಿಸುವ ವಿಶೇಷ ಯಾತ್ರೆ ದಕ್ಷಿಣ ಭಾರತಿಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಕನ್ವರ್_ಯಾತ್ರೆ_Kanwar_Yatra.   ಇದು ಶಿವನಿಗಾಗಿ ಆಚರಿಸುವ ವಿಶೇಷ ಯಾತ್ರೆ ದಕ್ಷಿಣ ಭಾರತಿಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.   ಯಾವುದೇ ಮಧ್ಯವರ್ತಿಗಳಿಲ್ಲದೆ ಭಕ್ತ ಮತ್ತು ದೇವರ ನಡುವೆ ನೇರ ಸಂಪರ್ಕ ಕಲ್ಪಿಸುವ ವಿಶಿಷ್ಟ ಸಂಪ್ರದಾಯ ಕನ್ವರ್ ಯಾತ್ರೆಯಲ್ಲಿದೆ.    ಗಂಗಾ ನದಿಯಿಂದ ಗಂಗಾ ಜಲ ಸಂಗ್ರಹಿಸಿ ಕಾವಡಿಯಲ್ಲಿಟ್ಟು ಎಲ್ಲೂ ನೆಲಕ್ಕೆ ಸ್ಪರ್ಷಿಸದೆ ಶ್ರಾವಣ ಮಾಸದಲ್ಲಿ ಶಿವಮಂದಿರಕ್ಕೆ ತಲುಪಿ ಶಿವನಿಗೆ ಅಭಿಷೇಕ ಮಾಡುವ ಈ ಯಾತ್ರೆ ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ ಪ್ರತಿ ವರ್ಷ 4 ರಿಂದ 5 ಕೋಟಿ ಜನ ಭಾಗವಹಿಸುತ್ತಾರೆ.   ಹೆಚ್ಚಿನ ಕನ್ವರಿಯರು ತಮ್ಮ ತಮ್ಮ ಊರುಗಳಿಗೆ (ಉತ್ತರ ಪ್ರದೇಶ, ದೆಹಲಿ, ಹರಿಯಾಣ, ರಾಜಸ್ಥಾನ ಇತ್ಯಾದಿ) ಹರಿದ್ವಾರ ಅಥವಾ ಗಂಗೋತ್ರಿಯಿಂದ ಗಂಗಾಜಲವನ್ನು ಕಾಲ್ನಡಿಗೆಯಲ್ಲಿ ಕೊಂಡೊಯ್ಯುತ್ತಾರೆ.   ​ಸಾಮಾನ್ಯವಾಗಿ ನಡೆದು ಕ್ರಮಿಸುವ ದೂರ: 100 ಕಿ.ಮೀ ನಿಂದ 300 ಕಿ.ಮೀ, ಕನ್ವರ್ ಯಾತ್ರೆಯಲ್ಲಿ ಭಕ್ತರ ನಂಬಿಕೆ ಮತ್ತು ಸಂಕಲ್ಪಕ್ಕೆ ಅನುಗುಣವಾಗಿ ಕೆಲವರು 'ಡಾಕ್ ಕನ್ವರ್' (ನಿಲ್ಲದೆ ಓಡುವುದು/ನಡೆಯುವುದು) ಅಥವಾ 'ಖಡಿ ಕನ್ವರ್' (ಕನ್ವರ್ ಅನ್ನು ನೆಲದ ಮೇಲೆ ಇಡದೆ ಕಷ್ಟಕರ ರೀತಿಯಲ್ಲಿ ಸಾಗುವುದು) ಮೂಲಕವೂ ನೂರಾರು ಕಿಲೋಮೀಟರ್ ದೂರ ಕ್ರಮಿಸುತ್ತಾರೆ.   ಕನ್ವರ್ ಯಾತ್ರೆ ಎಂಬುದು ಉತ್ತರ ಭಾರತದಲ್ಲಿ ಶ್ರಾವಣ ಮಾಸದಲ್ಲಿ (ಆಷಾಢ-ಶ್ರಾವಣ / ಜು...

4100. ಆಷಾಢ_ಮುಗಿದು_ಶ್ರಾವಣ_ಬಂತು!ಏನಿದು_ಗಟಾರಿ_ಅಮಾವಾಸ್ಯೆ

ಆಷಾಢ_ಮುಗಿದು_ಶ್ರಾವಣ_ಬಂತು! ಏನಿದು_ಗಟಾರಿ_ಅಮಾವಾಸ್ಯೆ  ಇಲ್ಲಿದೆ ಕುತೂಹಲಕಾರಿ ಮಾಹಿತಿ! ಓದಿ...     ​ಆಷಾಢ ಮಾಸದ ಕೊನೆಯ ದಿನ ಅಂದರೆ ಅಮಾವಾಸ್ಯೆಯಂದು ಕರ್ನಾಟಕದಲ್ಲಿ 'ಭೀಮನ ಅಮಾವಾಸ್ಯೆ'ಯನ್ನು ಸಾಂಪ್ರದಾಯಿಕವಾಗಿ ಆಚರಿಸಿದರೆ ನೆರೆಯ ಮಹಾರಾಷ್ಟ್ರ ಹಾಗೂ ಗಡಿ ಭಾಗಗಳಲ್ಲಿ ಗಟಾರಿ ಅಮಾವಾಸ್ಯೆ ಎಂದು ವಿಶಿಷ್ಟವಾಗಿ ಸಂಭ್ರಮಿಸಲಾಗುತ್ತದೆ.    ಈ ವರ್ಷದ ಭೀಮನ ಅಮಾವಾಸ್ಯೆ ದಿನಾಂಕ 12 - ಆಗಸ್ಟ್-2026 ಬುಧವಾರ ಬಂದಿದೆ.    ದಿನಾಂಕ 13 - ಆಗಸ್ಟ್-2026 ಗುರುವಾರದಿಂದ ಶ್ರಾವಣ ಮಾಸ ಪ್ರಾರಂಭವಾಗುತ್ತದೆ.   #ಶ್ರಾವಣ_ಮಾಸ ಎಂಬ ಹೆಸರು ಬರಲು ಮುಖ್ಯವಾಗಿ ಖಗೋಳಶಾಸ್ತ್ರ (ನಕ್ಷತ್ರ) ಮತ್ತು ವೇದ-ಸಂಸ್ಕೃತಿಯ ಪ್ರಭಾವವಿದೆ. ​  ಹಿಂದೂ ಪಂಚಾಂಗದ ಪ್ರಕಾರ ತಿಂಗಳಿಗೆ ಹೆಸರು ಇಡುವುದು ಆ ತಿಂಗಳ ಹುಣ್ಣಿಮೆಯ ದಿನದಂದು ಚಂದ್ರನು ಯಾವ ನಕ್ಷತ್ರದ ಬಳಿ ಇರುತ್ತಾನೋ ಆ ಆಧಾರದ ಮೇಲೆ, ಶ್ರಾವಣ ಮಾಸದ ಹುಣ್ಣಿಮೆಯಂದು ಚಂದ್ರನು 'ಶ್ರವಣ' ನಕ್ಷತ್ರದ ನಿಕಟವಾಗಿ ಇರುತ್ತಾನೆ ಹೀಗಾಗಿ ಈ ಮಾಸಕ್ಕೆ ಶ್ರಾವಣ ಎಂದು ಹೆಸರು ಬಂದಿದೆ.     ​ ಸಂಸ್ಕೃತದಲ್ಲಿ 'ಶ್ರವಣ' ಎಂದರೆ ಕೇಳುವುದು ಅಥವಾ ಆಲಿಸುವುದು ಎಂದರ್ಥ ಈ ಮಾಸದಲ್ಲಿ ವೇದಗಳು, ಪುರಾಣಗಳು, ಶಿವಕಥೆ ಹಾಗೂ ಧಾರ್ಮಿಕ ಪ್ರವಚನಗಳನ್ನು ಕಿವಿಯಾರೆ ಆಲಿಸುವುದು ಅತ್ಯಂತ ಶ್ರೇಷ್ಠ ಎಂಬ ನಂಬಿಕೆ ಇದೆ. ​ ಈ ಮಾಸದಲ್ಲಿ ಗುರುಕುಲಗಳ...

4099 . ಜನ ಸಾಮಾನ್ಯರ ಧ್ವನಿ ಸಾಮಾಜಿಕ ಮಾಧ್ಯಮ

ಸಾಮಾಜಿಕ_ಮಾಧ್ಯಮ ಜನಸಾಮಾನ್ಯರ_ಧ್ವನಿ  ಒಂದು ಕಾಲದಲ್ಲಿ ಜನ ಸಾಮಾನ್ಯರ ಧ್ವನಿ ಆಗಿದ್ದ ಮುಖ್ಯವಾಹಿನಿ ಮಾಧ್ಯಮಗಳು ಈಗ TRP ಮತ್ತು ಕಾರ್ಪೋರೆಟ್ ಹಿತಾಸಕ್ತಿಯಿಂದ ಮೂಲೆಗುಂಪಾಗಿದೆ.   ಹೀಗೆ ಬರೆದವರು 90 ರ ದಶಕದಲ್ಲಿ ಕನ್ನಡದ ಉದಯ TV ಬ್ಯೂರೋ ಚೀಪ್ ಆಗಿದ್ದ #ರುದ್ರಪ್ಪನವರು ಇದು ಸತ್ಯ ಕೂಡ.   ಅವರು ಬರೆದದ್ದು ... Yes, mainstream news media was once proactive. It regularly took up issues of public interest on its own. That role has now shifted to social media. #Mainstream_media has become largely reactive — it begins reporting only after an issue has already gained momentum. Today, the real hero of the masses, the downtrodden, women and children is #social_media.   ಅವರ ಪೇಸ್ ಬುಕ್ ಲೇಖನದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಹಿಂದೆ ಸಮಾಜದ ಧ್ವನಿಯಾಗಿ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ತಾವಾಗಿಯೇ ಮುನ್ನೆಲೆಗೆ ತರುತ್ತಿದ್ದವು.    ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಮುಖ್ಯವಾಹಿನಿ ಮಾಧ್ಯಮಗಳು ಕೇವಲ 'ಪ್ರತಿಕ್ರಿಯಾತ್ಮಕ' (Reactive) ಆಗಿ ಉಳಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯವೊಂದು ವೈರಲ್ ಆದ ನಂತರವಷ್ಟೇ ಜಾಗೃತಗೊಳ್ಳುತ್ತಿವೆ.   ​ಸಾಮಾಜಿಕ ಮಾಧ್ಯಮ ಇಂದಿನ ನಿಜವಾದ ...