ಅಡಿಕೆ_ಕ್ಯಾನ್ಸರ್_ಕಾರಕ_ಎಂದು_ವಿಶ್ವ_ಆರೋಗ್ಯ_ಸಂಸ್ಥೆ_ಘೋಷಿಸಲು_ಕಾರಣ?. “WHOಗೆ ಸೇರಿದ IARC ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಲು ಕಾರಣವೇನು?” ಮುಖ್ಯ ಕಾರಣ ಅಡಿಕೆ ಸೇವನೆಯಿಂದ ಕ್ಯಾನ್ಸರ್ ಅಪಾಯವಿದೆ ಎಂಬ ವೈಜ್ಞಾನಿಕ ಸಾಕ್ಷ್ಯಗಳು. ಆದರೆ ಒಂದು ಪ್ರಮುಖ ಸ್ಪಷ್ಟೀಕರಣ WHO ಸ್ವತಃ “ಅಡಿಕೆ ಕ್ಯಾನ್ಸರ್ ಕಾರಕ” ಎಂದು ಸ್ವತಂತ್ರವಾಗಿ ಘೋಷಿಸಿಲ್ಲ. WHOಗೆ ಸೇರಿದ International Agency for Research on Cancer (IARC) ಅಡಿಕೆಯನ್ನು Group 1 carcinogen — ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂದು ವರ್ಗೀಕರಿಸಿದೆ. ಈ ನಿರ್ಣಯಕ್ಕೆ ಅಡಿಕೆ ಜಗಿಯುವ ಜನರಲ್ಲಿ ಕಂಡುಬಂದ ಬಾಯಿಯ ಕ್ಯಾನ್ಸರ್, ಬಾಯಿಯ ಒಳಪದರದ ಬದಲಾವಣೆಗಳು ಮತ್ತು oral submucous fibrosis ಕುರಿತ ಸಾಕ್ಷ್ಯಗಳು ಪ್ರಮುಖ ಕಾರಣ. ತಂಬಾಕು ಇಲ್ಲದ ಅಡಿಕೆಯನ್ನೂ IARC ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಿದೆ; ತಂಬಾಕು ಸೇರಿಸಿದರೆ ಅಪಾಯ ಇನ್ನಷ್ಟು ಹೆಚ್ಚಾಗಬಹುದು. ಅಡಿಕೆಯಲ್ಲಿಯೇ ಸ್ವತಃ ಕ್ಯಾನ್ಸರ್ ತರಬಲ್ಲ 'ಆರೆಕೋಲಿನ್' ನಂತಹ ವಿಷಕಾರಿ ರಾಸಾಯನಿಕಗಳು ಇರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ವೈಜ್ಞಾನಿಕ ಅಧ್ಯಯನಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (WHO) ಶೋಧನೆಗಳ ಪ್ರಕಾರ ತಂಬಾಕು ರಹಿತವಾಗಿ (ಕೇವಲ ಅಡಿಕೆ ಒಂದನ್ನೇ) ಜಗಿಯುವುದರಿಂದಲೂ ಕ್ಯಾನ್ಸರ್ ಉಂಟಾಗುತ್ತದೆ ಎಂಬುದು ಸಾಬೀ...
ಭಾಗ_2 ಜೈನ_ಗುಣಗ_ಸಮೂದಾಯ_ಸಂಪೂರ್ಣ_ಸಸ್ಯಹಾರಿಗಳು ... ಕೇವಲ_5_6_ಸಾವಿರ_ಜನಸಂಖ್ಯೆಯ ಇವರ_ಬಗ್ಗೆ_ನಿಮಗೆ_ಗೊತ್ತಾ? . ನನ್ನ ಲೇಖನ #ಜೈನ_ಗುಣಗರ ಬಗ್ಗೆ ಮಾತ್ರ ಸೀಮಿತವಾಗಿದೆ, ಈ ಬಾಗದಲ್ಲಿ ಜೈನ ಗುಣಗರಲ್ಲದೆ ಬೇರೆ ಗುಣಗರೂ ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಣಗಾ/ಗುನಗಾ ಎಂಬುದರಲ್ಲಿ ಜೈನ ಗುಣಗಾ, ಕುಂಬಾರ ಗುಣಗಾ ಮತ್ತು ಉಪನಾಮ ಮಾತ್ರ ಗುಣಗ ಎಂಬುವ ಬೇರೆ ಬೇರೆ ಸಮೂದಾಯವಿದೆ. ನಾನು ಬರೆದಿರುವ ಇನ್ನೂ ಪ್ರಕಟ ಆಗದಿರುವ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿಯ ದಾಖಲಾಗದ ಇತಿಹಾಸ ಎಂಬ ಪುಸ್ತಕದಲ್ಲಿ ಗುಣಗ ಸಮುದಾಯದ ಬಗ್ಗೆ ಕೆಲವು ಪುಟಗಳಿದೆ. #ವಿಷ್ಣು_ದಾಸ_ಗುಣಗಾ ಅನ್ನುವವರು ನನ್ನ ಹಿಂದಿನ ರಾಣಿ ಚೆನ್ನ ಬೈರಾದೇವಿ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಗುಣಗಾ ಸಮುದಾಯದ ಬಗ್ಗೆ ಮಾಹಿತಿ ಕೇಳಿದ್ದರಿಂದ ನನ್ನ ಪುಸ್ತಕದ ಪೂರ್ಣ ಬರಹ ಎರೆಡು ಭಾಗವಾಗಿ ಇಲ್ಲಿ ಪೋಸ್ಟ್ ಮಾಡಿದ್ದೇನೆ. ಬ್ರಾಹ್ಮಣ - ಜೈನ ಮತ್ತು ಲಿಂಗಾಯಿತರು ಸಸ್ಯಹಾರಿಗಳು ಅಂತ ನಮಗೆಲ್ಲಾ ಗೊತ್ತು ಆದರೆ ಕುಮಟಾ-ಅಂಕೋಲ ಭಾಗದಲ್ಲಿನ ಗುಣಗ ಎಂಬ ಸಣ್ಣ ಸಮೂದಾಯ ಸಂಪೂರ್ಣ ಸಸ್ಯಹಾರಿಗಳು ಇವರು ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದಾರೆ. #ಮುಂದುವರಿದ_ಭಾಗ.... ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಚೆನ್ನಭೈರಾದೇವಿಯ ಸುದೀರ್ಘ ಆಡಳಿತದ ಅವಧಿಯ 16ನೇ ಶತಮಾನದಲ್ಲಿ ಗುಣಗ ಸಮುದಾಯದ ಕೊಡುಗೆಯನ್ನು ಮುಖ್ಯವ...