ವಿಶ್ವ_ಜೇನುನೊಣ_ದಿನ_ಮೇ_20. ಭಾಗ_5_ಕುಂದಾಪುರ_ಕನ್ನಡಿಗ_ರಾಜ್ಯಸಭಾ_ಸದಸ್ಯರಾಗಿದ್ದ ಅನಿಲ್_ಪ್ರಸಾದ್_ಹೆಗ್ಡೆ_ಸಂದರ್ಶನ. ದೇಶಿ ಬೀಜ - ಜೇನು ಸಂರಕ್ಷಣೆ ಬಗ್ಗೆ ವಿಶ್ವ ಮಟ್ಟದಲ್ಲಿ ಭಾರತ ದೇಶದ ಗಟ್ಟಿ ಧ್ವನಿಯಾಗಿರುವ ಜಾರ್ಜ್ ಪರ್ನಾಂಡಿಸರ ಶಿಷ್ಯ ಹೋರಾಟಗಾರ ಕುಂದಾಪುರದ ಕನ್ನಡಿಗ, ಬಿಹಾರದಿಂದ ರಾಜ್ಯ ಸಭಾ ಸದಸ್ಯರಾಗಿದ್ದ ಅನಿಲ್ ಪ್ರಸಾದ್ ಹೆಗ್ಡೆ ಸಂದರ್ಶನ ನೋಡಿ. ಈ ವರ್ಷ ಸ್ಲೋವೇನಿಯಾದಲ್ಲಿ ನಡೆದ ಜೇನು ಕೃಷಿಯ ಪಯೋನೀರ್ #ಆ0ಟೆನ್_ಜೊನ್ಸಾ ಅವರ 292ನೇ ಹುಟ್ಟು ಹಬ್ಬದಲ್ಲಿ ಅನಿಲ್ ಹೆಗ್ಡೆ ಬಾಗಿಯಾಗಿದ್ದರು. ಈ ಪೋಸ್ಟ್ ನಿಮ್ಮ ಪರಿಚಿತ ಜೇನು ಕೃಷಿಕರಿಗೆ ತಲುಪಿಸಲು ಶೇರ್ ಮಾಡಬೇಕಾಗಿ ವಿನಂತಿ. ಆಂಟನ್ ಜಾನ್ಸಾ ಅವರ 292ನೇ #ಜನ್ಮದಿನ ಹಾಗೂ ವಿಶ್ವ ಜೇನು ದಿನದ ಪ್ರಮುಖ ಕಾರ್ಯಕ್ರಮಗಳು ಸ್ಲೋವೇನಿಯಾದಲ್ಲಿ ನಡೆದವು. ಸ್ಲೋವೇನಿಯಾ ಸರ್ಕಾರದ ಕೃಷಿ ಸಚಿವಾಲಯ, ವಿಶ್ವಸಂಸ್ಥೆಯ ಎಫ್ಎಒ (FAO) ಮತ್ತು ಅಪಿಯಾಮಾಂಡಿಯಾ (APIMONDIA) ಸಂಯುಕ್ತವಾಗಿ ಆಯೋಜಿಸಿದ್ದ "3ನೇ ಸುಸ್ಥಿರ ಜೇನುಸಾಕಣೆ ಮತ್ತು ಪರಾಗಸ್ಪರ್ಶ ಅಂತರರಾಷ್ಟ್ರೀಯ ವೇದಿಕೆ" (3rd International Forum) ಮೇ 20–21, 2026 ರಂದು ಸ್ಲೋವೇನಿಯಾದ ಮಾರಿಬೋರ್ ನಗರದಲ್ಲಿ ನಡೆಯಿತು. ಆಂಟನ್ ಜಾನ್ಸಾ ಅವರ ಜನ್ಮಸ್ಥಳವಾದ ಬ್ರೆಜ್ನಿಕಾದಲ್ಲಿರುವ ಐತಿಹಾಸಿಕ ಜೇನುಗೂಡಿನ ತಾಣದಲ್ಲಿ ಸಾಂ...
ನೇಪಾಳದ_ಕಾಳಿಗಂಡಿಕೆ_ನದಿಯಲ್ಲಿನ ಸಾಲಿಗ್ರಾಮದ_ಬೃಹತ್_ಪ್ರತಿಕೃತಿ. ಪ್ರವಾಹ ಬರುವ ಹಲವು ತಿಂಗಳುಗಳ ಹಿಂದೆಯೇ ಇದು ಯಾತ್ರಿಕರ ಪ್ರಮುಖ ಫೋಟೋ ಸ್ಪಾಟ್ ಆಗಿತ್ತು ಆದರೆ ಸಾಮಾಜಿಕ ಜಾಲತಾಣದಲ್ಲಿ 26- ಆಗಸ್ಟ್ -2026ರಂದು ನೇಪಾಳದಲ್ಲಿ ಸಂಭವಿದ ಮಹಾ ದುರಂತ ಬೋಟಿ ಕೋಶಿ ನದಿಯಲ್ಲಿ ತೇಲಿ ಬಂದ ಬೃಹತ್ ಸಾಲಿಗ್ರಾಮದ ಶಿಲೆ ಎಂದು ಹರಿದಾಡುತ್ತಿದೆ ಆದರೆ ಇದು ತಪ್ಪು ಮಾಹಿತಿ. ನಾನು ಸಾಲಿಗ್ರಾಮದ ಮೇಲೆ ಒಂದು ಪುಸ್ತಕ ಪ್ರಕಟ ಮಾಡಲಿದ್ದೇನೆ ಆದ್ದರಿಂದ ವಿಶ್ವದ ಸಾಲಿಗ್ರಾಮದ ಬಗ್ಗೆ ಅನೇಕ ಮಾಹಿತಿ ಸಂಗ್ರಹಿಸಿ ಬರೆದಿದ್ದೇನೆ ಆದ್ದರಿಂದ ಈ ಸಾಮಾಜಿಕ ಜಾಲತಾಣದ ಈ ತಪ್ಪು ಸಂದೇಶಕ್ಕೆ ಸರಿಯಾದ ಮಾಹಿತಿ ನೀಡಲು ಈ ಲೇಖನ ಬರೆದಿದ್ದೇನೆ, ನನ್ನ ಪುಸ್ತಕದ ಒಂದೆರೆಡು ಅದ್ಯಾಯ ಕೂಡ ಮುಂದಿನ ದಿನಗಳಲ್ಲಿ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತೇನೆ .... ಈ ಬೃಹತ್ ಸಾಲಿಗ್ರಾಮದ ಪ್ರತಿಕೃತಿ ಇರುವುದು #ನೇಪಾಳದ_ಮುಸ್ತಾಂಗ್_ಜಿಲ್ಲೆಯ_ಕಾಳಿಗಂಡಕಿ_ನದಿಯ_ತೀರದಲ್ಲಿರುವ_ಜೋಮ್ಸೋಮ್ ಪ್ರದೇಶದಲ್ಲಿದೆ. ನೇಪಾಳ ರಾಜ್ಯದ ಮುಸ್ತಾಂಗ್ ಜಿಲ್ಲೆಯ ಕಾಳಿಗಂಡಕಿ ನದಿಯ ಜೋಮ್ಸಮ್ ಪ್ರದೇಶದಲ್ಲಿ 2026ರ ಏಪ್ರಿಲ್ 20 ರಿಂದ ಮೇ 4ರವರೆಗೆ ನಡೆದ #ನೇಪಾಳ_ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಾರ್ಯಾಗಾರದಲ್ಲಿ ನದಿ ದಂಡೆಯ ಬೃಹತ್ ಬಂಡೆ ಕೆತ್ತಿ ರಚಿಸಿದ ಸಾಲಿಗ್ರಾಮದ ಪ್ರತಿ ಕೃತಿ ಇದು,ಅಲ್ಲಿ ಇದೊಂದೆ ಅಲ್ಲ ಇಂತಹ ಸುಮಾರು 18 ಶಿಲ...