ಈ_ಸಾವು_ನ್ಯಾಯವೇ? ನಮ್ಮೂರ ಯುವ ಉದ್ಯಮಿ ಜಾವೀದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬೇಸರ ತರಿಸಿತು. ಸಾಗರ ತಾಲೂಕಿನ ಆನಂದಪುರಂನ #ವಾಜೀದ್_ಸಾಹೇಬರು ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷರಾಗಿದ್ದವರು ಅವರು ಆನಂದಪುರಂನ ಅಭಿವೃದ್ಧಿಗೆ ಶ್ರಮಿಸಿದವರು ಮತ್ತು ಪ್ರಸಿದ್ಧ ವ್ಯಕ್ತಿ ಆದವರು. ಇವರ ಪುತ್ರರಾದ #ಜಾವೀದ್ ಆನಂದಪುರಂನಲ್ಲಿ ಹಾರ್ಡವೇರ್ ಮತ್ತು ಪೈಂಟ್ ಗಳ ದೊಡ್ದ ವ್ಯಾಪಾರಸ್ಥರಾಗಿದ್ದವರು. ಮೊನ್ನೆ ಶಿಕಾರಿಪುರದಲ್ಲಿ ಜಾಗದ ರಿಜಿಸ್ಟ್ರೇಶನ್ ಗೆ ಹೋದವರು ವಾಪಾಸು ಬರುವಾಗ ಬೈಕಿನಿಂದ ಬಿದ್ದು ತಲೆಗೆ ಪೆಟ್ಟಾಗಿ ನಂತರ ಶಿವಮೊಗ್ಗ ಮತ್ತು ಬೆಂಗಳೂರಿಗೆ ಒಯ್ದರೂ ಫಲಕಾರಿ ಆಗಲಿಲ್ಲ. ಇವರದ್ದೇ ಕಾರು ಇದ್ದರೂ ಇವರು ಬೈಕಲ್ಲಿ ಪ್ರಯಾಣಿಸಿದ್ದಾರೆ. ಈಗಿನ ಯುವ ಜನಾಂಗ ಬೈಕ್ ಸವಾರಿ ಮಾಡುವುದು ಬಿಡುವುದೇ ಒಳಿತು, ಮಾಡಿದರೂ ಸರಿಯಾದ ಹೆಲ್ಮೆಟ್ ಸರಿಯಾಗಿ ಹೆಲ್ಮೆಟ್ ಬೆಲ್ಟ್ ಹಾಕಿ ಧರಿಸಬೇಕು. ಇವತ್ತು ಖ್ಯಾತ ತಜ್ಞ ಈಜು ತರಬೇತಿದಾರರಾದ ಸಾಗರದ #ಹರೀಶ್_ನವಾತೆ ಪೋನ್ ಮಾಡಿ ಯುವ ಉದ್ಯಮಿ ಜಾವೀದ್ ಅಪಘಾತದಿಂದ ಮೃತರಾದ ಸುದ್ದಿ ಕೇಳಿ ಫೋನಾಯಿಸಿದ್ದರು, ಅವರು ಆನಂದಪುರಂನ #ಚಂಪಕ_ಸರಸ್ಸುವಿನಲ್ಲಿ ನಮ್ಮೂರ ಯುವಕರಿಗೆ ಈಜು ತರಬೇತಿ ನೀಡುವಾಗ ಉದ್ಯಮಿ ಜಾವೇದ್ ನೀಡಿದ ಸಹಕಾರ ಸ್ಮರಿಸಿದ್ದರು. ಈಜು ತರಬೇತಿದಾರರಿಗೆ ಸುರಕ್ಷಸಾಮಗ್ರಿ ತಯಾರಿಸಲು...
ಅಷ್ಟಮಂಗಲ_ಪ್ರಶ್ನೆ ವಿಶೇಷ_ಜೋತಿಷ್ಯ. ಅಷ್ಟಮಂಗಲ ಪ್ರಶ್ನೆ ಎಂಬ ವಿಶೇಷ ಜೋತಿಷ್ಯ ಪದ್ಧತಿ ಪರಶುರಾಮ ಸೃಷ್ಟಿಯ ಕರಾವಳಿ ತೀರ ಪ್ರದೇಶದ ವಿಶಿಷ್ಟ ಸಾಂಸ್ಕೃತಿಕ ಮತ್ತು ಜ್ಯೋತಿಷ್ಯ ಪರಂಪರೆಯಾಗಿಯೇ ಉಳಿದುಕೊಂಡಿದೆ. ಈಗ ಅಷ್ಟಮಂಗಲ ಪ್ರಶ್ನೆ ಕೇರಳ ಮತ್ತು ಕರಾವಳಿ ದಾಟಿ ವಿಸ್ತರಿಸಿದೆ, ಎಲ್ಲಾ ಕಡೆ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಿಸಿ ಅದರ ಮಾಹಿತಿಯನ್ವಯ ದೇವಾಲಯದ ಅಭಿವೃದ್ಧಿ ಕೈಗೊಳ್ಳುತ್ತಾರೆ. ನಾನು ಒಮ್ಮೆ ಕುಂದಾಪುರ ಸಮೀಪದ ಹಟ್ಟಿಯಂಗಡಿಯ ಮಾರಲ ದೇವಿ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ನೋಡಲು ಹೋಗಿದ್ದೆ ಅದನ್ನು ನೆರವೇರಿಸಿದವರು ಕೇರಳದ ನಂಬೂದರಿಗಳು. ಅಷ್ಟಮಂಗಲ ಪ್ರಶ್ನೆಯು ಕೇರಳ ಮತ್ತು ಕರಾವಳಿ ಕರ್ನಾಟಕದ ತುಳುನಾಡಿನಿ ಜ್ಯೋತಿಷ್ಯ ಪದ್ಧತಿಯಲ್ಲಿ ಅತ್ಯಂತ ಪ್ರಸಿದ್ಧವಾದ, ನಿಖರವಾದ ಫಲಜ್ಯೋತಿಷ್ಯ ವಿಧಾನವಾಗಿದೆ. ದೇವಾಲಯಗಳ ಜೀರ್ಣೋದ್ಧಾರ, ದೈವಸ್ಥಾನಗಳ ಸಮಸ್ಯೆಗಳು, ಕುಟುಂಬದ ಪಿತೃದೋಷ ಅಥವಾ ಗಂಭೀರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಈ ಪ್ರಶ್ನಾವಳಿಯನ್ನು ಇರಿಸಲಾಗುತ್ತದೆ. ಅಷ್ಟಮಂಗಲದ ಎಂಟು ಮಂಗಲ ದ್ರವ್ಯಗಳು ಪ್ರಶ್ನಾಚಿಂತನೆಯ ಸಮಯದಲ್ಲಿ ಈ ಕೆಳಗಿನ ಎಂಟು ಪವಿತ್ರ ವಸ್ತುಗಳನ್ನು ಮಂಡಲದಲ್ಲಿ ಇಡಲಾಗುತ್ತದೆ. ದರ್ಪಣ (ಕನ್ನಡಿ), ಪೂರ್ಣಕುಂಭ (ನೀರು ತುಂಬಿದ ಕಳಶ), ದೀಪ, ಚಿನ್ನ (ಬಂಗಾರ),ಅಕ್ಷತೆ, ತಾಂಬೂಲ (ವೀಳ್ಯದೆಲೆ ಮತ್ತು ಅಡಿಕೆ),...