Skip to main content

Posts

4192.ಕರ್ನಾಟಕದಲ್ಲಿ_ಖಾತೆ_ಕಾನು ಅದರ_ವಿಸ್ತೀರ್ಣ_ಎಷ್ಟು?...ಅದರ_ಸಂರಕ್ಷಣೆ_ಹೇಗಿದೆ? ...

ಕರ್ನಾಟಕದಲ್ಲಿ_ಖಾತೆ_ಕಾನು ಅದರ_ವಿಸ್ತೀರ್ಣ_ಎಷ್ಟು?... ಅದರ_ಸಂರಕ್ಷಣೆ_ಹೇಗಿದೆ? ... #ಪಶ್ಚಿಮ_ಘಟ್ಟ_ಸಂರಕ್ಷಣಾ_ಕಾರ್ಯಪಡೆಯಂತ ಸಮಿತಿಗಳು ಈ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರ ಸಹಕಾರ ಪಡೆದು ಕಾಡು ಸಂರಕ್ಷಣೆ ಮಾಡ ಬಾರದೇಕೆ?...  #ಶಿವಮೊಗ್ಗ_ಜಿಲ್ಲೆಯಲ್ಲಿ ಈ ರೀತಿಯ ಹತ್ತು ಸಾವಿರ ಎಕರೆಗಿಂತ ಹೆಚ್ಚಿನ ದಟ್ಟ ಕಾಡು ಇರುವ ಖಾತೆ ಕಾನುಗಳು ಒತ್ತುವರಿ ಮತ್ತು ಅಕ್ರಮ ಮರ ಕಡಿತಲೆ ಆಗುತ್ತಲೇ ಇದೆ.    #ಕಸ್ತೂರಿರಂಗನ್ ವರದಿ ಜಾರಿ ಆದರೆ ಮಾತ್ರ ಪಶ್ಚಿಮ ಘಟ್ಟದ ಕಾಡು ಉಳಿದೀತು ಎನ್ನುವ ಮೊದಲು ಈ ಬಗ್ಗೆ ಒಮ್ಮೆ ದೃಷ್ಟಿ ಹಾಕಿ...    ಶಿವಮೊಗ್ಗ ಜಿಲ್ಲೆಯ ಸುಮಾರು ಹತ್ತು ಸಾವಿರ ಎಕರೆಗೂ ಹೆಚ್ಚಿನ ದಟ್ಟ ಕಾಡು ಅರಣ್ಯ ಇಲಾಖೆಗೆ ಸೇರಿದೆ ಮತ್ತು ಇಲಾಖಾ ಕಡತದಲ್ಲಿ ಅದು ಸುರಕ್ಷಿತವಾಗಿದೆ ಆದರೆ ನೀವು ಸ್ಥಳ ಪರಿಶೀಲನೆ ಮಾಡಿದರೆ ಅಲ್ಲಿ ಈ ಅರಣ್ಯಗಳಲ್ಲಿ ಒತ್ತುವರಿ ಮತ್ತು ಅಕ್ರಮ ಮರಕಡಿತಲೆ ನಿರಂತರವಾಗಿ ನಡೆಯುತ್ತಲೇ ಇದೆ.  ಪಶ್ಚಿಮ ಘಟ್ಟಗಳ ಮಲೆನಾಡು ಭಾಗದಲ್ಲಿ ವಿಶೇಷವಾಗಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಮುಂತಾದ ಕಡೆ ಕಂದಾಯ ಮತ್ತು ಅರಣ್ಯ ಇಲಾಖೆಗಳ ಗೊಂದಲದಿಂದ ಖಾಸಗಿಯವರ ಹೆಸರಿನಲ್ಲಿರುವ ಅಥವಾ ಖಾಸಗಿ ಹಿಡುವಳಿ ರೂಪದಲ್ಲಿ ದಾಖಲಾಗಿರುವ ಕಾನು ಅರಣ್ಯ ಭೂಮಿಗಳು ಸರಿಯಾಗಿ ಸಂರಕ್ಷಣೆ ಮಾಡದೆ ಒತ್ತುವರಿ ಮತ್ತು ಅಕ್ರಮ ಮರ ಕಡಿತಲೆ ನಿರಂತರವಾಗಿ ನಡೆಯುತ್ತಿದೆ.   ​ಶಿವಮೊಗ್ಗ ...
Recent posts

4191.ಮಂಜುನಾಥ_ಗೌಡರು_ಅಧ್ಯಕ್ಷರು ಮಲೆನಾಡು_ಪ್ರದೇಶಾಭಿವೃದ್ಧಿ_ಮಂಡಳಿ Malnad_Area_Development_Board_MADB

ಮಂಜುನಾಥ_ಗೌಡರು_ಅಧ್ಯಕ್ಷರು ಮಲೆನಾಡು_ಪ್ರದೇಶಾಭಿವೃದ್ಧಿ_ಮಂಡಳಿ  Malnad_Area_Development_Board_MADB.   ನಮ್ಮ ಜಿಲ್ಲೆಯವರೇ ಆದ ಆರ್. ಎಂ. ಮಂಜುನಾಥ ಗೌಡರು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾರೆ ಇದು ಕ್ಯಾಬಿನೆಟ್ ಸಚಿವ ಸ್ಥಾನಮಾನದ ಹುದ್ದೆ.   ಇವರು ಕಸ್ತೂರಿ ರಂಗನ್ ವರದಿ ಮಾರ್ಪಾಡಿಗೆ ರಾಜ್ಯ ಸರ್ಕಾರ ಮತ್ತು ಮಲೆನಾಡಿನ ಜನರ ಮಧ್ಯೆ ಕೊಂಡಿ ಆಗಿ ಕೀ ರೋಲ್ ಕೆಲಸ ಮಾಡಬಹುದಾಗಿದೆ.    ಇವರ ಅಧಿಕಾರ ವ್ಯಾಪ್ತಿ ರಾಜ್ಯದ 13 ಜಿಲ್ಲೆಗಳು ಮತ್ತು 66 ವಿಧಾನಸಭಾ ಕ್ಷೇತ್ರಗಳು ಬರುತ್ತದೆ ಇದು ಸಣ್ಣ ಕ್ಷೇತ್ರವಲ್ಲ, ರಾಜ್ಯದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟದ ಪೂರ್ತಿ ಪ್ರದೇಶ ಇವರ ವ್ಯಾಪ್ತಿಯಿಲ್ಲಿದೆ.    ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (Malnad Area Development Board - MADB) ಮಲೆನಾಡಿನ 13 ಜಿಲ್ಲೆಗಳ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಶಾಸನಬದ್ಧ ಸಂಸ್ಥೆಯಾಗಿದೆ.    ಕಸ್ತೂರಿ ರಂಗನ್ ವರದಿಯಂತಹ ಸೂಕ್ಷ್ಮ ಹಾಗೂ ಗಂಭೀರ ವಿಷಯದಲ್ಲಿ ಮಂಡಳಿಯು ಕೇವಲ ರಸ್ತೆ-ಸೇತುವೆ ನಿರ್ಮಾಣಕ್ಕೆ ಸೀಮಿತವಾಗದೆ ಸರ್ಕಾರ ಮತ್ತು ಜನರ ನಡುವೆ ಪ್ರಮುಖ ಕೊಂಡಿಯಾಗಿ ಈ ಕೆಳಗಿನ ಜವಾಬ್ದಾರಿಗಳನ್ನು ವಹಿಸಬಹುದಾಗಿದೆ. ​ಮಂಡಳಿ ವಹಿಸಬಹುದಾದ ಪ್ರಮುಖ ಜವಾಬ್ದಾರಿಗಳು   ​ವಾಸ್ತವಾಂಶದ ಸಮೀಕ್ಷೆ, ಉಪಗ್ರಹ ಆಧಾರಿತ ಸಮ...

4190.ಜನೌಷದಿಜನರಿಕ್_ಔಷದಿ_ಅಂತ_ಮೂಗು_ಮುರಿಯಬೇಡಿ.

ಜನೌಷದಿ ಜನರಿಕ್_ಔಷದಿ_ಅಂತ_ಮೂಗು_ಮುರಿಯಬೇಡಿ.  ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಆಗಿದೆ.   ಬ್ರಾಂಡೆಡ್ ಔಷಧಗಳಲ್ಲಿ ಔಷಧದ ಮೂಲ ಬೆಲೆಗಿಂತ ಕಂಪನಿಯ ಮಾರ್ಕೆಟಿಂಗ್, ಜಾಹೀರಾತು ಮತ್ತು ಕಮಿಷನ್‌ಗಳ ಪಾಲೇ ಶೇ. 70-80 ರಷ್ಟಿರುತ್ತದೆ ಎಂಬ ಸತ್ಯ ಸಾಮಾನ್ಯ ಜನರಿಗೆ ತಿಳಿದಿಲ್ಲ.   ಜನರಿಕ್ ಔಷಧಿ ವಿಶ್ವದಾದ್ಯಂತ ಮುಂದುವರಿದ ದೇಶಗಳಲ್ಲೂ ಲಭ್ಯವಿದೆ ಇದು ನಮ್ಮ ಪಾಕೆಟ್ ಫ್ರೆಂಡ್ಲಿ ಔಷದಿ ನೀವು ಖರೀದಿಸುವ ಈ ಔಷಧಿ ಬಿಲ್ಲಿನಲ್ಲಿ ಜಾಹಿರಾತಿಗೆ ಮತ್ತು ಮಧ್ಯವರ್ತಿ ವೈದ್ಯರಿಗೆ ಕಮಿಷನ್ ಹೋಗುವುದಿಲ್ಲ ಆದ್ದರಿಂದ ಅತಿ ಕಡಿಮೆ ಬೆಲೆಗೆ ಲಭ್ಯ.   ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಕೊಟ್ಯಾಂತರ ಬಡವರಿಗೆ ವರದಾನ ಆಗಿದೆ.   #ಆದರೆ ....  ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಬ್ರಾಂಡೆಡ್ ಚೀಲದಲ್ಲಿ ಹಾಕಿ ಮಾರಿ ಜನರಿಂದ ದುಬಾರಿ ಬೆಲೆ ಪಡೆಯುವಂತೆ ಔಷಧ ಮಾರುಕಟ್ಟೆಯಲ್ಲೂ ಇದೇ ಮಾನಸಿಕತೆ ಕೆಲಸ ಮಾಡುತ್ತಿದೆ.   ​ಜನರು ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಕಡೆಗಣಿಸಲು ಪ್ರಮುಖ ಕಾರಣಗಳು ​ಬೆಲೆ ಮತ್ತು ಗುಣಮಟ್ಟದ ಭ್ರಮೆ.    ​ಸಮಾಜದಲ್ಲಿ "ಹೆಚ್ಚು ಬೆಲೆ ಇದ್ದರೆ ಒಳ್ಳೆಯ ಗುಣಮಟ್ಟ, ಕಡಿಮೆ ಬೆಲೆ ಇದ್ದರೆ ಕಳಪೆ" ಎಂಬ ಗಟ್ಟಿಯಾದ ಪೂರ್ವಾಗ್ರಹವಿದೆ.    ​ಬಟ್ಟೆ, ಮೊಬೈಲ್ ಅಥವಾ ದಿನಸಿ ವಿಷಯದಲ್ಲಿ ಈ ಯೋಚನೆ ಕೆಲವೊಮ್ಮೆ ನಿಜವಿರಬಹುದು ಆದರೆ...

4189.ಈ_ಸಾವು_ನ್ಯಾಯವೇ?ನಮ್ಮೂರ ಯುವ ಉದ್ಯಮಿ ಜಾವೀದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬೇಸರ ತರಿಸಿತು.

ಈ_ಸಾವು_ನ್ಯಾಯವೇ? ನಮ್ಮೂರ ಯುವ ಉದ್ಯಮಿ ಜಾವೀದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬೇಸರ ತರಿಸಿತು.    ಸಾಗರ ತಾಲೂಕಿನ ಆನಂದಪುರಂನ #ವಾಜೀದ್_ಸಾಹೇಬರು ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷರಾಗಿದ್ದವರು ಅವರು ಆನಂದಪುರಂನ ಅಭಿವೃದ್ಧಿಗೆ ಶ್ರಮಿಸಿದವರು ಮತ್ತು ಪ್ರಸಿದ್ಧ ವ್ಯಕ್ತಿ ಆದವರು.    ಇವರ ಪುತ್ರರಾದ #ಜಾವೀದ್ ಆನಂದಪುರಂನಲ್ಲಿ ಹಾರ್ಡವೇರ್ ಮತ್ತು ಪೈಂಟ್ ಗಳ ದೊಡ್ದ ವ್ಯಾಪಾರಸ್ಥರಾಗಿದ್ದವರು.    ಮೊನ್ನೆ ಶಿಕಾರಿಪುರದಲ್ಲಿ ಜಾಗದ ರಿಜಿಸ್ಟ್ರೇಶನ್ ಗೆ ಹೋದವರು ವಾಪಾಸು ಬರುವಾಗ ಬೈಕಿನಿಂದ ಬಿದ್ದು ತಲೆಗೆ ಪೆಟ್ಟಾಗಿ ನಂತರ ಶಿವಮೊಗ್ಗ ಮತ್ತು ಬೆಂಗಳೂರಿಗೆ ಒಯ್ದರೂ ಫಲಕಾರಿ ಆಗಲಿಲ್ಲ.   ಇವರದ್ದೇ ಕಾರು ಇದ್ದರೂ ಇವರು ಬೈಕಲ್ಲಿ ಪ್ರಯಾಣಿಸಿದ್ದಾರೆ.   ಈಗಿನ ಯುವ ಜನಾಂಗ ಬೈಕ್ ಸವಾರಿ ಮಾಡುವುದು ಬಿಡುವುದೇ ಒಳಿತು, ಮಾಡಿದರೂ ಸರಿಯಾದ ಹೆಲ್ಮೆಟ್ ಸರಿಯಾಗಿ ಹೆಲ್ಮೆಟ್ ಬೆಲ್ಟ್ ಹಾಕಿ ಧರಿಸಬೇಕು.    ಇವತ್ತು ಖ್ಯಾತ ತಜ್ಞ ಈಜು ತರಬೇತಿದಾರರಾದ ಸಾಗರದ #ಹರೀಶ್_ನವಾತೆ ಪೋನ್ ಮಾಡಿ ಯುವ ಉದ್ಯಮಿ ಜಾವೀದ್ ಅಪಘಾತದಿಂದ ಮೃತರಾದ ಸುದ್ದಿ ಕೇಳಿ ಫೋನಾಯಿಸಿದ್ದರು, ಅವರು ಆನಂದಪುರಂನ #ಚಂಪಕ_ಸರಸ್ಸುವಿನಲ್ಲಿ ನಮ್ಮೂರ ಯುವಕರಿಗೆ ಈಜು ತರಬೇತಿ ನೀಡುವಾಗ ಉದ್ಯಮಿ ಜಾವೇದ್ ನೀಡಿದ ಸಹಕಾರ ಸ್ಮರಿಸಿದ್ದರು.     ಈಜು ತರಬೇತಿದಾರರಿಗೆ ಸುರಕ್ಷಸಾಮಗ್ರಿ ತಯಾರಿಸಲು...

4188.ಅಷ್ಟಮಂಗಲ_ಪ್ರಶ್ನೆವಿಶೇಷ_ಜೋತಿಷ್ಯ.

ಅಷ್ಟಮಂಗಲ_ಪ್ರಶ್ನೆ ವಿಶೇಷ_ಜೋತಿಷ್ಯ.  ಅಷ್ಟಮಂಗಲ ಪ್ರಶ್ನೆ ಎಂಬ ವಿಶೇಷ ಜೋತಿಷ್ಯ ಪದ್ಧತಿ ಪರಶುರಾಮ ಸೃಷ್ಟಿಯ ಕರಾವಳಿ ತೀರ ಪ್ರದೇಶದ ವಿಶಿಷ್ಟ ಸಾಂಸ್ಕೃತಿಕ ಮತ್ತು ಜ್ಯೋತಿಷ್ಯ ಪರಂಪರೆಯಾಗಿಯೇ ಉಳಿದುಕೊಂಡಿದೆ.   ಈಗ ಅಷ್ಟಮಂಗಲ ಪ್ರಶ್ನೆ ಕೇರಳ ಮತ್ತು ಕರಾವಳಿ ದಾಟಿ ವಿಸ್ತರಿಸಿದೆ, ಎಲ್ಲಾ ಕಡೆ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಿಸಿ ಅದರ ಮಾಹಿತಿಯನ್ವಯ ದೇವಾಲಯದ ಅಭಿವೃದ್ಧಿ ಕೈಗೊಳ್ಳುತ್ತಾರೆ.   ನಾನು ಒಮ್ಮೆ ಕುಂದಾಪುರ ಸಮೀಪದ ಹಟ್ಟಿಯಂಗಡಿಯ ಮಾರಲ ದೇವಿ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ನೋಡಲು ಹೋಗಿದ್ದೆ ಅದನ್ನು ನೆರವೇರಿಸಿದವರು ಕೇರಳದ ನಂಬೂದರಿಗಳು.   ಅಷ್ಟಮಂಗಲ ಪ್ರಶ್ನೆಯು ಕೇರಳ ಮತ್ತು ಕರಾವಳಿ ಕರ್ನಾಟಕದ ತುಳುನಾಡಿನಿ ಜ್ಯೋತಿಷ್ಯ ಪದ್ಧತಿಯಲ್ಲಿ ಅತ್ಯಂತ ಪ್ರಸಿದ್ಧವಾದ, ನಿಖರವಾದ ಫಲಜ್ಯೋತಿಷ್ಯ ವಿಧಾನವಾಗಿದೆ.   ದೇವಾಲಯಗಳ ಜೀರ್ಣೋದ್ಧಾರ, ದೈವಸ್ಥಾನಗಳ ಸಮಸ್ಯೆಗಳು, ಕುಟುಂಬದ ಪಿತೃದೋಷ ಅಥವಾ ಗಂಭೀರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಈ ಪ್ರಶ್ನಾವಳಿಯನ್ನು ಇರಿಸಲಾಗುತ್ತದೆ.  ​ಅಷ್ಟಮಂಗಲದ ಎಂಟು ಮಂಗಲ ದ್ರವ್ಯಗಳು ​ಪ್ರಶ್ನಾಚಿಂತನೆಯ ಸಮಯದಲ್ಲಿ ಈ ಕೆಳಗಿನ ಎಂಟು ಪವಿತ್ರ ವಸ್ತುಗಳನ್ನು ಮಂಡಲದಲ್ಲಿ ಇಡಲಾಗುತ್ತದೆ.   ​ದರ್ಪಣ (ಕನ್ನಡಿ), ​ಪೂರ್ಣಕುಂಭ (ನೀರು ತುಂಬಿದ ಕಳಶ), ​ದೀಪ, ​ಚಿನ್ನ (ಬಂಗಾರ),​ಅಕ್ಷತೆ, ​ತಾಂಬೂಲ (ವೀಳ್ಯದೆಲೆ ಮತ್ತು ಅಡಿಕೆ),​...

4187.ಶಿವಮೊಗ್ಗದಲ್ಲೇ_ತಯಾರಿಸಿ_ಮಾರಾಟ_ಮಾಡುತ್ತಿದ್ದಾರೆಕಟ್ಟಿಗೆ_ಸ್ಟವ್_LPG_ಸ್ಟವ್_ಕಾರ್ಯಕ್ಷಮತೆಯಲ್ಲಿ

ಶಿವಮೊಗ್ಗದಲ್ಲೇ_ತಯಾರಿಸಿ_ಮಾರಾಟ_ಮಾಡುತ್ತಿದ್ದಾರೆ ಕಟ್ಟಿಗೆ_ಸ್ಟವ್_LPG_ಸ್ಟವ್_ಕಾರ್ಯಕ್ಷಮತೆಯಲ್ಲಿ   ದೂರದ ಜಿಲ್ಲೆಗಳಲ್ಲಿ ಮಾತ್ರ ಕಟ್ಟಿಗೆ ಒಲೆ ಸ್ಟವ್ ತಯಾರಾಗುತ್ತಿತ್ತು ಮುಂಗಡ ಅಡ್ವಾನ್ಸ್ ನೀಡಿ ಡೆಲಿವರಿಗೆ ಕಾಯಬೇಕಾಗಿತ್ತು.   ಇರಾನ್ ಅಮೇರಿಕಾ ಯುದ್ಧದಿಂದ LPG ವಿತರಣೆ ವ್ಯತ್ಯಾಸ ಆದಾಗ ಅನೇಕ ರೆಸ್ಟೋರೆಂಟ್ ಬಾಗಿಲು ಹಾಕಬೇಕಾದ ಪರಿಸ್ಥಿತಿ ಉಂಟಾಗಿತ್ತು.    ಈಗ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ಯುವ ಉದ್ಯಮಿ ಮನ್ಸೂರ್ ತಮ್ಮ ನ್ಯಾಷನಲ್ ಸ್ಟೀಲ್ ಪರ್ನಿಚರ್ ಮತ್ತು ವೆಲ್ಡಿಂಗ್ ವರ್ಕ್ ಸಂಸ್ಥೆಯಲ್ಲಿ 3 ಸಾವಿರದಿಂದ 40 ಸಾವಿರ ತನಕದ ತರಹಾವಾರಿ ಕಟ್ಟಿಗೆ ಸ್ಟವ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.   ಜಿಲ್ಲೆಯಾದ್ಯಂತ ಮನೆಗಳಿಗೆ, ಹೋಟೆಲ್ ಗಳಿಗೆಗೆ ಮತ್ತು ಕಲ್ಯಾಣ ಮಂಟಪಗಳಿಗೆ ಇವರು ಕಟ್ಟಿಗೆ ಸ್ಟವ್ ತಯಾರಿಸಿ ನೀಡಿದ್ದಾರೆ.   ಈ ಸ್ಟವ್ ಹೊಗೆ ಇಲ್ಲದೆ ಕೆಲಸ ಮಾಡುವ ಮುಖ್ಯ ತಂತ್ರ ಇದರಲ್ಲಿರುವ ಅತ್ಯಂತ ಚಿಕ್ಕದಾದ ಬ್ಯಾಟರಿ ಚಾಲಿತ ಪ್ಯಾನ್ ಇದು ಹಾಳಾದರೆ ಇವರೆ ಬದಲಿಸಿಕೊಡುತ್ತಾರೆ ಆದ್ದರಿಂದ ಇವರ ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡ್ ಜಾಸ್ತಿ.   ನಮ್ಮ ಕಲ್ಯಾಣ ಮಂಟಪಕ್ಕೆ ಮತ್ತು ರೆಸ್ಟೋರೆಂಟ್ ಗೆ ಇವರ ಕಟ್ಟಿಗೆ ಒಲೆ ಖರೀದಿಸುವ ಆಲೋಚನೆ ಇದೆ ಆದ್ದರಿಂದ ಇವರ ಬೇಟಿ ಆಯಿತು, ಆ ದಿನ ಅವರು ಸಾಗರಕ್ಕೆ ಕೆಲವು ಕಟ್ಟಿಗೆ ಓಲೆ ಡಿಲವರಿ ಕೊಟ್ಟು ಬರುವಾಗ ನನ್ನ ಆಫೀಸಿನಲ್ಲಿ ಅವರ ...

4186.ಕುಂದಾಪುರದ_ಸಿರಿ_ಮಹಾಕಾವ್ಯ

ಕುಂದಾಪುರದ_ಸಿರಿ_ಮಹಾಕಾವ್ಯ.   ಸುಮಾರು ಶತಮಾನದ ಕಾಲದಿಂದ ಬಾಯಿಂದ ಬಾಯಿಗೆ ಪಾಡ್ದಾನವಾಗಿ ಹರಿದು ಬಂದ ಸಿರಿ ಮಹಾ ಕಾವ್ಯ ಅಕ್ಷರ ರೂಪಕ್ಕೆ ತಂಡವರು ಫಿನ್‌ಲ್ಯಾಂಡಿನ ಪ್ರಸಿದ್ಧ ಜಾನಪದ ವಿದ್ವಾಂಸ #ಲಾರಿ_ಹೊಂಕೋ ಅವರು ಕರಾವಳಿಯ ಜನಪದ ಗಾಯಕ ಗೋಪಾಲ ನಾಯ್ಕರ ಮೂಲಕ ಹಾಡಿಸಿ, ಇದನ್ನು ಲಿಪ್ಯಂತರಿಸಿ ಇಂಗ್ಲಿಷ್‌ಗೆ ಭಾಷಾಂತರಿಸುವ ಮೂಲಕ ವಿಶ್ವಮಟ್ಟದಲ್ಲಿ ದಾಖಲಿಸಿದ್ದಾರೆ.      ಇದೇ ರೀತಿ #ಕುಣುಬಿ ಜನಾಂಗದವರ #ಕೊಡಚಾದ್ರಿಯ ಕಾವ್ಯ ಒಂದು ಇದೆ, ಅವರು ನಿರಂತರ 30 ರಿಂದ 40 ಗಂಟೆ ಶಿವರಾತ್ರಿ ಸಂದರ್ಭದಲ್ಲಿ ಹಾಡುತ್ತಾರೆ ಆದರೆ ಅದಿನ್ನೂ ಅಕ್ಷರ ರೂಪಕ್ಕೆ ಬಂದಿಲ್ಲ ಯಾರಾದರು ಆಸಕ್ತ ಇತಿಹಾಸ ಸಂಶೋಧಕರು ಈ ಮಹಾನ್ ಕಾರ್ಯ ಮಾಡಬಹುದಾಗಿದೆ.   ಸಿರಿ ಮಹಾಕಾವ್ಯವನ್ನು ಯಾವುದೇ ಒಬ್ಬ ನಿರ್ದಿಷ್ಟ ಲೇಖಕರು ಬರೆದಿದ್ದಲ್ಲ,ಇದು ಕರಾವಳಿಯ ತುಳು-ಕುಂದಾಪುರ ಜನಪದರಲ್ಲಿ ಶತಮಾನಗಳಿಂದ ಬಾಯಿಂದ ಬಾಯಿಗೆ ಹರಿದುಬಂದ ಮೌಖಿಕ ಜನಪದ ಮಹಾಕಾವ್ಯ.   ​ಕರಾವಳಿಯ ಜನಪದ ಗಾಯಕರು ಮತ್ತು ಮಹಿಳೆಯರು ಇದನ್ನು 'ಪಾಡ್ಡನ' (ಪಾಡ್ದನ) ರೂಪದಲ್ಲಿ ತಲೆಮಾರುಗಳಿಂದ ಹಾಡುತ್ತಾ ಜೀವಂತವಾಗಿ ಉಳಿಸಿಕೊಂಡು ಬಂದಿದ್ದಾರೆ.  ​ಆದರೆ ಈ ಮೌಖಿಕ ಕಾವ್ಯವನ್ನು ಲಿಖಿತ ರೂಪಕ್ಕೆ ತಂದು ಜಗತ್ತಿಗೆ ಪರಿಚಯಿಸಿದ ಕೀರ್ತಿ ಈ ಕೆಳಗಿನವರಿಗೆ ಸಲ್ಲುತ್ತದೆ,ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಾಚಾರು ಗ್ರಾಮದ ಜನಪದ ಕೃಷಿಕ ಮತ್ತು...