Skip to main content

Posts

4132.ಅಡಿಕೆ_ಕ್ಯಾನ್ಸರ್_ಕಾರಕ_ಎಂದು_ವಿಶ್ವ_ಆರೋಗ್ಯ_ಸಂಸ್ಥೆ_ಘೋಷಿಸಲು_ಕಾರಣ?.

ಅಡಿಕೆ_ಕ್ಯಾನ್ಸರ್_ಕಾರಕ_ಎಂದು_ವಿಶ್ವ_ಆರೋಗ್ಯ_ಸಂಸ್ಥೆ_ಘೋಷಿಸಲು_ಕಾರಣ?. “WHOಗೆ ಸೇರಿದ IARC ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಲು ಕಾರಣವೇನು?” ಮುಖ್ಯ ಕಾರಣ ಅಡಿಕೆ ಸೇವನೆಯಿಂದ ಕ್ಯಾನ್ಸರ್ ಅಪಾಯವಿದೆ ಎಂಬ ವೈಜ್ಞಾನಿಕ ಸಾಕ್ಷ್ಯಗಳು.  ಆದರೆ ಒಂದು ಪ್ರಮುಖ ಸ್ಪಷ್ಟೀಕರಣ WHO ಸ್ವತಃ “ಅಡಿಕೆ ಕ್ಯಾನ್ಸರ್ ಕಾರಕ” ಎಂದು ಸ್ವತಂತ್ರವಾಗಿ ಘೋಷಿಸಿಲ್ಲ.  WHOಗೆ ಸೇರಿದ International Agency for Research on Cancer (IARC) ಅಡಿಕೆಯನ್ನು Group 1 carcinogen — ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂದು ವರ್ಗೀಕರಿಸಿದೆ.  ಈ ನಿರ್ಣಯಕ್ಕೆ ಅಡಿಕೆ ಜಗಿಯುವ ಜನರಲ್ಲಿ ಕಂಡುಬಂದ ಬಾಯಿಯ ಕ್ಯಾನ್ಸರ್, ಬಾಯಿಯ ಒಳಪದರದ ಬದಲಾವಣೆಗಳು ಮತ್ತು oral submucous fibrosis ಕುರಿತ ಸಾಕ್ಷ್ಯಗಳು ಪ್ರಮುಖ ಕಾರಣ.  ತಂಬಾಕು ಇಲ್ಲದ ಅಡಿಕೆಯನ್ನೂ IARC ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಿದೆ; ತಂಬಾಕು ಸೇರಿಸಿದರೆ ಅಪಾಯ ಇನ್ನಷ್ಟು ಹೆಚ್ಚಾಗಬಹುದು.   ಅಡಿಕೆಯಲ್ಲಿಯೇ ಸ್ವತಃ ಕ್ಯಾನ್ಸರ್ ತರಬಲ್ಲ 'ಆರೆಕೋಲಿನ್' ನಂತಹ ವಿಷಕಾರಿ ರಾಸಾಯನಿಕಗಳು ಇರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.   ವೈಜ್ಞಾನಿಕ ಅಧ್ಯಯನಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (WHO) ಶೋಧನೆಗಳ ಪ್ರಕಾರ ತಂಬಾಕು ರಹಿತವಾಗಿ (ಕೇವಲ ಅಡಿಕೆ ಒಂದನ್ನೇ) ಜಗಿಯುವುದರಿಂದಲೂ ಕ್ಯಾನ್ಸರ್ ಉಂಟಾಗುತ್ತದೆ ಎಂಬುದು ಸಾಬೀ...
Recent posts

4131.ಭಾಗ_2ಜೈನ_ಗುಣಗ_ಸಮೂದಾಯ_ಸಂಪೂರ್ಣ_ಸಸ್ಯಹಾರಿಗಳು ...ಕೇವಲ_5_6_ಸಾವಿರ_ಜನಸಂಖ್ಯೆಯಇವರ_ಬಗ್ಗೆ_ನಿಮಗೆ_ಗೊತ್ತಾ? .

ಭಾಗ_2 ಜೈನ_ಗುಣಗ_ಸಮೂದಾಯ_ಸಂಪೂರ್ಣ_ಸಸ್ಯಹಾರಿಗಳು ... ಕೇವಲ_5_6_ಸಾವಿರ_ಜನಸಂಖ್ಯೆಯ ಇವರ_ಬಗ್ಗೆ_ನಿಮಗೆ_ಗೊತ್ತಾ? .  ನನ್ನ ಲೇಖನ #ಜೈನ_ಗುಣಗರ ಬಗ್ಗೆ ಮಾತ್ರ ಸೀಮಿತವಾಗಿದೆ, ಈ ಬಾಗದಲ್ಲಿ ಜೈನ ಗುಣಗರಲ್ಲದೆ ಬೇರೆ ಗುಣಗರೂ ಇದ್ದಾರೆ.   ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಣಗಾ/ಗುನಗಾ ಎಂಬುದರಲ್ಲಿ ಜೈನ ಗುಣಗಾ, ಕುಂಬಾರ ಗುಣಗಾ ಮತ್ತು ಉಪನಾಮ ಮಾತ್ರ ಗುಣಗ ಎಂಬುವ ಬೇರೆ ಬೇರೆ ಸಮೂದಾಯವಿದೆ.   ನಾನು ಬರೆದಿರುವ ಇನ್ನೂ ಪ್ರಕಟ ಆಗದಿರುವ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿಯ ದಾಖಲಾಗದ ಇತಿಹಾಸ ಎಂಬ ಪುಸ್ತಕದಲ್ಲಿ ಗುಣಗ ಸಮುದಾಯದ ಬಗ್ಗೆ ಕೆಲವು ಪುಟಗಳಿದೆ.    #ವಿಷ್ಣು_ದಾಸ_ಗುಣಗಾ ಅನ್ನುವವರು ನನ್ನ ಹಿಂದಿನ ರಾಣಿ ಚೆನ್ನ ಬೈರಾದೇವಿ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಗುಣಗಾ ಸಮುದಾಯದ ಬಗ್ಗೆ ಮಾಹಿತಿ ಕೇಳಿದ್ದರಿಂದ ನನ್ನ ಪುಸ್ತಕದ ಪೂರ್ಣ ಬರಹ ಎರೆಡು ಭಾಗವಾಗಿ ಇಲ್ಲಿ ಪೋಸ್ಟ್ ಮಾಡಿದ್ದೇನೆ.   ಬ್ರಾಹ್ಮಣ - ಜೈನ ಮತ್ತು ಲಿಂಗಾಯಿತರು ಸಸ್ಯಹಾರಿಗಳು ಅಂತ ನಮಗೆಲ್ಲಾ ಗೊತ್ತು ಆದರೆ ಕುಮಟಾ-ಅಂಕೋಲ ಭಾಗದಲ್ಲಿನ ಗುಣಗ ಎಂಬ ಸಣ್ಣ ಸಮೂದಾಯ ಸಂಪೂರ್ಣ ಸಸ್ಯಹಾರಿಗಳು ಇವರು ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದಾರೆ. #ಮುಂದುವರಿದ_ಭಾಗ.... ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಚೆನ್ನಭೈರಾದೇವಿಯ ಸುದೀರ್ಘ ಆಡಳಿತದ ಅವಧಿಯ 16ನೇ ಶತಮಾನದಲ್ಲಿ ಗುಣಗ ಸಮುದಾಯದ ಕೊಡುಗೆಯನ್ನು ಮುಖ್ಯವ...

4130.ಗುಣಗಾ_ಸಮಾಜದ_ನನ್ನ_ಲೇಖನನಕ್ಕೆಪ್ರತಿಕ್ರಿಯಿಸಿ_ಗೆಳೆಯರಾದ_ವಿಷ್ಣುದಾಸಗುಣಿಗಾ.

ಗುಣಗಾ_ಸಮಾಜದ_ನನ್ನ_ಲೇಖನನಕ್ಕೆ ಪ್ರತಿಕ್ರಿಯಿಸಿ_ಗೆಳೆಯರಾದ_ವಿಷ್ಣುದಾಸಗುಣಿಗಾ.   ಈವರೆಗಿನ ಯಾವ ಮಾಧ್ಯಮದಿಂದಲೂ ಆಗದ ಮ್ಯಾಜಿಕ್ ಸಾಮಾಜಿಕ ಜಾಲತಾಣದಿಂದ ಸಾಧ್ಯವಾಗುವುದು ನೋಡಿದರೆ ವಿಚಿತ್ರ ಅನ್ನಿಸುತ್ತೆ ಇದಕ್ಕೆ ಉದಾಹರಣೆ ನನ್ನ ಗುಣಗಾ ಸಮಾಜದ ಲೇಖನ ಆ ಸಮಾಜದ ಬರಹಗಾರರ ಜೊತೆ ಸಂಪರ್ಕ ಕಲ್ಪಿಸಿದೆ.    ಗೇರುಸೊಪ್ಪೆಯ ರಾಣಿ ಚೆನ್ನ ಬೈರಾದೇವಿ ಬಗ್ಗೆ ನಾನು ಬರೆದಿರುವ ಪುಸ್ತಕ ಇನ್ನೂ ಮುದ್ರಣಕ್ಕೆ ಕೊಟ್ಟಿಲ್ಲ ಆದರೆ ಆಗಾಗ್ಗೆ ಒಂದೊಂದು ಲೇಖನ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತೇನೆ.    ಈ ರೀತಿ ನನ್ನ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿ ಗೆಳೆಯರಾದವರು ಕುಮಟಾದ #ವಿಷ್ಣು_ದಾಸ್_ಗುಣಗಾ ಇವರು ನಿವೃತ್ತ ಸರ್ಕಾರಿ ನೌಕರರು ಇವರು ತಮ್ಮದೇ ಗುಣಗಾ ಸಮಾಜದ ಬಗ್ಗೆ ಪುಸ್ತಕ ಒಂದನ್ನ ಬರೆದಿದ್ದಾರೆ ಅದನ್ನು ಸದ್ಯದಲ್ಲೇ ಪ್ರಕಟಿಸಲಿದ್ದಾರೆ ಬಹುಶಃ ಇದು ಗುಣಗಾ ಸಮಾಜದ ಮೊದಲ ಪುಸ್ತಕ ಆಗಲಿದೆ.    ಗೇರುಸೊಪ್ಪೆಯ ಜೈನ  ಸಾಳ್ವ ರಾಜರ ಆಪ್ತವಲಯದ ಒಂದು ಸಣ್ಣ ಸಂಖ್ಯೆಯ ಸಮುದಾಯ ಜೈನ ಸಮಾಜದ ಅರ್ಚಕ ವೃತ್ತಿಯಲ್ಲಿ ಸಹಾಯಕರಾಗಿ ತೊಡಗಿ ನಂತರ ಜೈನರ ಆಚಾರ ವಿಚಾರಗಳನ್ನೆ ಪರಿಪಾಲಿಸಿಕೊಂಡು ಜೈನರೇ ಆದರೂ ಅವರಿಗೆ ಆಗಿನ ಕಾಲದ ಜೈನ ಸಮಾಜ ತನ್ನ ಧರ್ಮದಲ್ಲಿ ಯಾಕೆ ಸೇರಿಸಿಕೊಂಡಿಲ್ಲ ಎಂಬುದು ಸೋಜಿಗದ ವಿಷಯ ಆಗಿದೆ.   ರಾಜ್ಯವೇ ಸೋತು ಅಲ್ಲಿನ ರಾಣಿ ಚೆನ್ನ ಬೈರಾದೇವಿ ಕೆಳದಿ ರಾಜ ವೆಂಕಟಪ್ಪ ನ...

4129.ಇಸ್ಕಾನ್_ಮುಂಜಾನೆ_ಮಂಗಲ_ಆರತಿ_ಜಪ_ಯಜ್ಞದಲ್ಲಿ ...

ಇಸ್ಕಾನ್_ಮುಂಜಾನೆ_ಮಂಗಲ_ಆರತಿ_ಜಪ_ಯಜ್ಞದಲ್ಲಿ ...   ನಗರ ಸಂಕೀರ್ತನೆಗಾಗಿ ನಮ್ಮ  #ಕೃಷ್ಣಸರಸ_ಕನ್ವೆನ್ಷನ್_ಹಾಲ್ ಕಲ್ಯಾಣ ಮಂಟಪದಲ್ಲಿ ತಂಗಿರುವ ಇಸ್ಕಾನ್ ಸಂಸ್ಥೆಯ ಮುಂಜಾನೆಯ ಮಂಗಲ ಆರತಿ ಮತ್ತು ಜಪ ಯಜ್ಞದಲ್ಲಿ ಭಾಗಿ ಆಗುವ ಅವಕಾಶ ನನ್ನದಾಗಿತ್ತು.  ಹರೇ ಕೃಷ್ಣ ಪಂಥದ (ಇಸ್ಕಾನ್) ಮುಂಜಾನೆಯ ಮಂಗಲ ಆರತಿ ಮತ್ತು ಜಪ ಯಜ್ಞ ಮುಂಜಾನೆ 4:30ರ ಪ್ರಶಾಂತ ವಾತಾವರಣದಲ್ಲಿ ನಡೆಯುತ್ತದೆ.   ಇಸ್ಕಾನ್ (ISKCON) ಹಾಗೂ ಗೌಡೀಯ ವೈಷ್ಣವ ಪಂಥದಲ್ಲಿ ಪ್ರತಿದಿನ ಮುಂಜಾನೆ 4:30 ಕ್ಕೆ ನಡೆಯುವ ಅತ್ಯಂತ ಪವಿತ್ರವಾದ ಮೊದಲ ಪೂಜೆ ಮತ್ತು ಆರತಿಯನ್ನು #ಮಂಗಲ_ಆರತಿ ಎಂದು ಕರೆಯಲಾಗುತ್ತದೆ.    ಪ್ರತಿದಿನ ಮುಂಜಾನೆ 4:30 ಈ ಸಮಯವನ್ನು 'ಬ್ರಹ್ಮ ಮುಹೂರ್ತ' ಎಂದು ಕರೆಯಲಾಗುತ್ತದೆ.  ಭಗವಂತನಿಗೆ ನಿತ್ಯ ಸೇವೆಯನ್ನು ಸಲ್ಲಿಸಲು ಮತ್ತು ದಿನವನ್ನು ಭಕ್ತಿಪೂರ್ವಕವಾಗಿ ಪ್ರಾರಂಭಿಸಲು ಇದು ಅತ್ಯಂತ ಶ್ರೇಷ್ಠ ಸಮಯ. ​ ಆರತಿಯ ಸಮಯದಲ್ಲಿ ಭಕ್ತರೆಲ್ಲರೂ ಸೇರಿ ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕೂರರು ರಚಿಸಿದ "ಸಂಸಾರ ದಾವಾನಲ ಲೀಢ ಲೋಕ..." (ಗುರು ಅಷ್ಟಕ) ಎಂಬ ಪ್ರಸಿದ್ಧ ಪ್ರಾರ್ಥನೆಯನ್ನು ಹಾಡುತ್ತಾರೆ. ​  ಪೂಜಾರಿಯು ಭಗವಂತನಿಗೆ ಧೂಪ, ದೀಪ (ನೆಯ್ಯಿ ದೀಪ), ಜಲ, ವಸ್ತ್ರ, ಪುಷ್ಪ ಮತ್ತು ಚಾಮರವನ್ನು ಅರ್ಪಿಸಿ ಆರತಿ ಬೆಳಗುತ್ತಾರೆ. ​ ಆರತಿಯ ನಂತರ ಭಗವಂತನ ರಕ್ಷಣೆಗಾಗಿ "ನಮಸ್ತೇ ನರಸಿಂಹಾಯ......

4128..ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ. ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ. 196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು.

. ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ.   ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ.   196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು.  ಹೊಸಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯಲ್ಲಿದೆ.   ಮೈಸೂರು ಅರಸರ ಜನವಿರೋದಿ ಭೂಕಂದಾಯ, ಸುಂಕದ ವಿರುದ್ದ ಆನಂದಪುರಂ ಹೋಬಳಿಯಲ್ಲಿ ಬ್ಬಹತ್ ರೈತ ಸಮಾವೇಶ ನಡೆಯಿತು.  ಏಪ್ರಿಲ್ 1830ರಲ್ಲಿ ಕೆಳದಿ ಬಿದನೂರು ಸಂಸ್ಥಾನದ ರಾಜನೆಂದು ಬೂದಿ ಬಸಪ್ಪ ನಾಯಕರು ಘೋಷಣೆ ಮಾಡುತ್ತಾರೆ.  ಇತಿಹಾಸದಲ್ಲಿ ಬೂದಿಬಸಪ್ಪನಾಯಕರನ್ನು ದರೋಡೆಕೋರ ಎಂದು ಬರೆದು ಇತಿಹಾಸಕ್ಕೆ ಅಪಚಾರ ಮಾಡಿದ್ದಾರೆ.   ಬೂದಿ ಬಸಪ್ಪ ನಾಯಕ ಯಾರು?... ಅಂತ ಇತಿಹಾಸದ ದಾಖಲೆಗಳಲ್ಲಿ ಹುಡುಕಿದರೆ ಆತ ಶಿಕ್ಷೆಗೆ ಒಳಗಾದ ದರೋಡೆಕೋರ, ಕೆಳದಿ ಅರಸರ ಹಿತೈಷಿ ಜಂಗಮರ ಹತ್ತಿರದ ರಾಜ ಮುದ್ರೆ ಉಂಗುರ ಕದ್ದು , ತಾನು ಕೆಳದಿ ವಂಶಸ್ಥರವನು ಎಂದು ಹೇಳಿಕೊಂಡವ ಎಂದೆಲ್ಲ ಬರೆದಿದ್ದಾರೆ.   ಆದರೆ ಜನಪದದಲ್ಲಿ ಬೂದಿ ಬಸಪ್ಪನಾಯಕರು ನಿಜ ಹೋರಾಟಗಾರರು, ಅವರು ಮೈಸೂರು ಕೃಷ್ಣರಾಜ ಒಡೆಯರ್ III ರ ವಿಪರೀತ ಭೂಕಂದಾಯ ಮತ್ತು ಸುಂಕದ ವಿರುದ್ಧ ನಡೆಸಿದ ರೈತ ಹೋರಾಟ ಕೆಳದಿಬಿದನೂರು ಪ್ರಾಂತ್ಯ ಮಾತ್ರವಲ್ಲ ದೂರದ ಬೆಂಗಳೂರು, ಚಿತ...

4127.ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?... ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.

ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?...   ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.   ಶಿವಮೊಗ್ಗ ಮಾರ್ಗದಿಂದ ಜೋಗ್ ಫಾಲ್ಸ್ ನೋಡಲು ಬರುವ ಪ್ರವಾಸಿಗಳು ಸಾಗರದ ನಂತರ ತಾಳಗುಪ್ಪಗೆ ಹೋದರೆ ಅಲ್ಲಿಂದ ಜೋಗ್ ಜಲಪಾತಕ್ಕೆ ಎರೆಡು ಮಾರ್ಗಗಳಿದೆ ಒಂದು ಕಾರ್ಗಲ್ ಮೂಲಕ ಇನ್ನೊಂದು ಹೊನ್ನಾವರ ಮಾರ್ಗದಲ್ಲಿ ಸಾಗಿ ನೇರವಾಗಿ ಜೋಗ್ ಫಾಲ್ಸ್ ಗೆ ಹೋಗುವುದು.   ನೀವೇನಾದರು ತಾಳಗುಪ್ಪದಿಂದ ಕಾರ್ಗಲ್ ಮಾರ್ಗವಾಗಿ ಸಾಗಿದರೆ ಈ ಜೈನಾ ಗೇಟ್ ಮೂಲಕವೇ ಹೋಗುತ್ತೀರಿ.   ಪ್ರಾಜೆಕ್ಟ್ ಅಧಿಕೃತ ದಾಖಲೆಯಲ್ಲಿ ಈ ಹೆಸರು ಇಲ್ಲ ಆದರೆ ಜನರ ಬಾಯಲ್ಲಿ ಈ ಪ್ರದೇಶ ಚೈನಾ ಗೇಟ್ ಅಂತಾಗಿದೆ. ಇಲಾಖಾ ಉದ್ಯೋಗಿಗಳ ಪ್ರಕಾರ ಇಲ್ಲಿಂದ ಮಹಾತ್ಮಾಗಾಂಧಿ ಪವರ್ ಪ್ಲಾಂಟಿಗೆ ನೀರನ್ನು ಕಾಲುವೆಗೆ ಬಿಡುವ ಗೇಟ್ ಜೈನ್ ಪುಲ್ಲಿಯಿಂದ ಆಪರೇಟ್ ಆಗುವುದರಿಂದ #ಚೈನ್_ಗೇಟ್ ಎಂಬ ಹೆಸರೇ ಈಗಾ ಚೈನಾ ಗೇಟ್ ಆಗಿದೆ ಅಂತಾರೆ.  ಲಿಂಗನಮಕ್ಕಿ ಮೂಲ ನಿವಾಸಿಗಳ ಪ್ರಕಾರ #ಲಿಂಗನಮಕ್ಕಿ ಪ್ರಾಜೆಕ್ಟ್ ಕಾರ್ಮಿಕರಿಗೆ ಸೈನಸ್ ಗ್ಯಾಸ್ ಚೆಂಬರ್ ಮೂಲಕ ಪ್ರಾಜೆಕ್ಟ್ ಪ್ರದೇಶಕ್ಕೆ ಪ್ರವೇಶ ಇದ್ದಿದ್ದರಿಂದ ಈ ಹೆಸರು ಬಂದಿರಬಹುದು ಅನ್ನುತ್ತಾರೆ.      ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆಗಾಗಿ ಮಡೇನೂರು ಅಥವ ಹಿರೇ ಭಾಸ್ಕರ ಡ್ಯಾಮ್ ನಿರ್ಮಾಣ ಮಾಡಿದಾಗ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್ಗಳನ್ನು ಅಳವಡಿಸಲ...

4126.ಕಾಳುಮೆಣಸಿನರಾಣಿ #ಯುದ್ಧದಲ್ಲಿ_ಸೋತು ಬಂದನಕ್ಕೊಳಗಾದಾಗ ... ನಾನು ಬರೆದಿರುವ ರಾಣಿ ಚೆನ್ನ ಬೈರಾದೇವಿ ಪುಸ್ತಕದ ಒಂದು ಅದ್ಯಾಯ ಇಲ್ಲಿದೆ ಒಮ್ಮೆ ಓದಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.

ಕಾಳುಮೆಣಸಿನರಾಣಿ #ಯುದ್ಧದಲ್ಲಿ_ಸೋತು ಬಂದನಕ್ಕೊಳಗಾದಾಗ ...  ನಾನು ಬರೆದಿರುವ ರಾಣಿ ಚೆನ್ನ ಬೈರಾದೇವಿ ಪುಸ್ತಕದ ಒಂದು ಅದ್ಯಾಯ ಇಲ್ಲಿದೆ ಒಮ್ಮೆ ಓದಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.   ಈ ಪುಸ್ತಕಕ್ಕೆ ಸೂಕ್ತ ಶಿರ್ಷಿಕೆ ಇನ್ನೂ ಇಟ್ಟಿಲ್ಲ ಮುಂದಿನ ವರ್ಷ ಮುದ್ರಿಸಬೇಕು, ಈ ಪುಸ್ತಕದಲ್ಲಿ ಇಂತಹ ಅನೇಕ ವಿಶೇಷ ಘಟನೆಗಳ ದಾಖಲಿಸಿದ್ದೇನೆ ಮುಂದೆ ಓದಿ...   ತನ್ನೆರೆಡು ಕೈಗಗಳನ್ನ ತನ್ನ ಸೊಂಟದ ಮೇಲೆ ದೃಢವಾಗಿ ಇರಿಸಿ ಯುದ್ಧದಲ್ಲಿ ಪರಾಭವಗೊಂಡು ಶರಣಾದ ಮಹಾ ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಚಿತ್ರವೇ ಅಂಕೋಲ ತಾಲ್ಲೂಕಿನ ಬಾವಿಕೆರೆಯ ಸಾನದಮನೆಯಲ್ಲಿ ಅವ್ವಿಯರಸಿ ಪ್ರತಿಮೆ ಆಗಿ ಪೂಜಿಸಲ್ಪಡುತ್ತಿದೆ.    ಯುದ್ಧಾನಂತರ ಚೆನ್ನ ಬೈರಾದೇವಿ ಅವರ ಮೇಲಿನ ಅಭಿಮಾನದಿಂದ ಅವರ ಅಭಿಮಾನಿಗಳು ಚಿಕ್ಕ ಚಿಕ್ಕ ಎರಕದ ಮೂರ್ತಿ ಮಾಡಿ ಗುಪ್ತವಾಗಿ ಹಂಚುತ್ತಿದ್ದರಂತೆ.  ರಾಣಿ ಆಡಳಿತ ಮುಗಿದು ಶತಮಾನಗಳಾದರೂ ಈ ರೀತಿ ಎರಕದಲ್ಲಿ ಮೂರ್ತಿ ತಯಾರಿಸಿ ಜನ ವಸತಿ ಪ್ರದೇಶದಲ್ಲಿ ಯಾರೋ ಗುಪ್ತವಾಗಿ ಹಾಕಿ ಹೋಗುತ್ತಿದ್ದರಂತೆ, ಅದನ್ನು ಪ್ರಜೆಗಳು ಜೋಪಾನವಾಗಿ ಕಾಪಾಡಿಕೊಂಡು ತಮ್ಮ ತಮ್ಮ ಮನೆಯಲ್ಲಿ ಅವ್ವಿಯರಸಿ ಎಂದು ಪೂಜಿಸುತ್ತಿದ್ದರಂತೆ.    ಈ ರೀತಿ ರಾಣಿ ಚೆನ್ನ ಬೈರಾದೇವಿ ವಿಗ್ರಹ ಎರಕದಿಂದ ತಯಾರಿಸುವ ಕೆಲಸ ಮಾಡುವವರು ಸಿಕ್ಕಿ ಬಿದ್ದರೆ ಕೆಳದಿ ಸಂಸ್ಥಾನದಲ್ಲಿ ಅವರಿಗೆ ದೊಡ್ಡ ಶಿಕ್ಷೆ ವಿಧಿಸುತ್ತ...