Skip to main content

Posts

4189.ಈ_ಸಾವು_ನ್ಯಾಯವೇ?ನಮ್ಮೂರ ಯುವ ಉದ್ಯಮಿ ಜಾವೀದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬೇಸರ ತರಿಸಿತು.

ಈ_ಸಾವು_ನ್ಯಾಯವೇ? ನಮ್ಮೂರ ಯುವ ಉದ್ಯಮಿ ಜಾವೀದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬೇಸರ ತರಿಸಿತು.    ಸಾಗರ ತಾಲೂಕಿನ ಆನಂದಪುರಂನ #ವಾಜೀದ್_ಸಾಹೇಬರು ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷರಾಗಿದ್ದವರು ಅವರು ಆನಂದಪುರಂನ ಅಭಿವೃದ್ಧಿಗೆ ಶ್ರಮಿಸಿದವರು ಮತ್ತು ಪ್ರಸಿದ್ಧ ವ್ಯಕ್ತಿ ಆದವರು.    ಇವರ ಪುತ್ರರಾದ #ಜಾವೀದ್ ಆನಂದಪುರಂನಲ್ಲಿ ಹಾರ್ಡವೇರ್ ಮತ್ತು ಪೈಂಟ್ ಗಳ ದೊಡ್ದ ವ್ಯಾಪಾರಸ್ಥರಾಗಿದ್ದವರು.    ಮೊನ್ನೆ ಶಿಕಾರಿಪುರದಲ್ಲಿ ಜಾಗದ ರಿಜಿಸ್ಟ್ರೇಶನ್ ಗೆ ಹೋದವರು ವಾಪಾಸು ಬರುವಾಗ ಬೈಕಿನಿಂದ ಬಿದ್ದು ತಲೆಗೆ ಪೆಟ್ಟಾಗಿ ನಂತರ ಶಿವಮೊಗ್ಗ ಮತ್ತು ಬೆಂಗಳೂರಿಗೆ ಒಯ್ದರೂ ಫಲಕಾರಿ ಆಗಲಿಲ್ಲ.   ಇವರದ್ದೇ ಕಾರು ಇದ್ದರೂ ಇವರು ಬೈಕಲ್ಲಿ ಪ್ರಯಾಣಿಸಿದ್ದಾರೆ.   ಈಗಿನ ಯುವ ಜನಾಂಗ ಬೈಕ್ ಸವಾರಿ ಮಾಡುವುದು ಬಿಡುವುದೇ ಒಳಿತು, ಮಾಡಿದರೂ ಸರಿಯಾದ ಹೆಲ್ಮೆಟ್ ಸರಿಯಾಗಿ ಹೆಲ್ಮೆಟ್ ಬೆಲ್ಟ್ ಹಾಕಿ ಧರಿಸಬೇಕು.    ಇವತ್ತು ಖ್ಯಾತ ತಜ್ಞ ಈಜು ತರಬೇತಿದಾರರಾದ ಸಾಗರದ #ಹರೀಶ್_ನವಾತೆ ಪೋನ್ ಮಾಡಿ ಯುವ ಉದ್ಯಮಿ ಜಾವೀದ್ ಅಪಘಾತದಿಂದ ಮೃತರಾದ ಸುದ್ದಿ ಕೇಳಿ ಫೋನಾಯಿಸಿದ್ದರು, ಅವರು ಆನಂದಪುರಂನ #ಚಂಪಕ_ಸರಸ್ಸುವಿನಲ್ಲಿ ನಮ್ಮೂರ ಯುವಕರಿಗೆ ಈಜು ತರಬೇತಿ ನೀಡುವಾಗ ಉದ್ಯಮಿ ಜಾವೇದ್ ನೀಡಿದ ಸಹಕಾರ ಸ್ಮರಿಸಿದ್ದರು.     ಈಜು ತರಬೇತಿದಾರರಿಗೆ ಸುರಕ್ಷಸಾಮಗ್ರಿ ತಯಾರಿಸಲು...
Recent posts

4188.ಅಷ್ಟಮಂಗಲ_ಪ್ರಶ್ನೆವಿಶೇಷ_ಜೋತಿಷ್ಯ.

ಅಷ್ಟಮಂಗಲ_ಪ್ರಶ್ನೆ ವಿಶೇಷ_ಜೋತಿಷ್ಯ.  ಅಷ್ಟಮಂಗಲ ಪ್ರಶ್ನೆ ಎಂಬ ವಿಶೇಷ ಜೋತಿಷ್ಯ ಪದ್ಧತಿ ಪರಶುರಾಮ ಸೃಷ್ಟಿಯ ಕರಾವಳಿ ತೀರ ಪ್ರದೇಶದ ವಿಶಿಷ್ಟ ಸಾಂಸ್ಕೃತಿಕ ಮತ್ತು ಜ್ಯೋತಿಷ್ಯ ಪರಂಪರೆಯಾಗಿಯೇ ಉಳಿದುಕೊಂಡಿದೆ.   ಈಗ ಅಷ್ಟಮಂಗಲ ಪ್ರಶ್ನೆ ಕೇರಳ ಮತ್ತು ಕರಾವಳಿ ದಾಟಿ ವಿಸ್ತರಿಸಿದೆ, ಎಲ್ಲಾ ಕಡೆ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಿಸಿ ಅದರ ಮಾಹಿತಿಯನ್ವಯ ದೇವಾಲಯದ ಅಭಿವೃದ್ಧಿ ಕೈಗೊಳ್ಳುತ್ತಾರೆ.   ನಾನು ಒಮ್ಮೆ ಕುಂದಾಪುರ ಸಮೀಪದ ಹಟ್ಟಿಯಂಗಡಿಯ ಮಾರಲ ದೇವಿ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ನೋಡಲು ಹೋಗಿದ್ದೆ ಅದನ್ನು ನೆರವೇರಿಸಿದವರು ಕೇರಳದ ನಂಬೂದರಿಗಳು.   ಅಷ್ಟಮಂಗಲ ಪ್ರಶ್ನೆಯು ಕೇರಳ ಮತ್ತು ಕರಾವಳಿ ಕರ್ನಾಟಕದ ತುಳುನಾಡಿನಿ ಜ್ಯೋತಿಷ್ಯ ಪದ್ಧತಿಯಲ್ಲಿ ಅತ್ಯಂತ ಪ್ರಸಿದ್ಧವಾದ, ನಿಖರವಾದ ಫಲಜ್ಯೋತಿಷ್ಯ ವಿಧಾನವಾಗಿದೆ.   ದೇವಾಲಯಗಳ ಜೀರ್ಣೋದ್ಧಾರ, ದೈವಸ್ಥಾನಗಳ ಸಮಸ್ಯೆಗಳು, ಕುಟುಂಬದ ಪಿತೃದೋಷ ಅಥವಾ ಗಂಭೀರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಈ ಪ್ರಶ್ನಾವಳಿಯನ್ನು ಇರಿಸಲಾಗುತ್ತದೆ.  ​ಅಷ್ಟಮಂಗಲದ ಎಂಟು ಮಂಗಲ ದ್ರವ್ಯಗಳು ​ಪ್ರಶ್ನಾಚಿಂತನೆಯ ಸಮಯದಲ್ಲಿ ಈ ಕೆಳಗಿನ ಎಂಟು ಪವಿತ್ರ ವಸ್ತುಗಳನ್ನು ಮಂಡಲದಲ್ಲಿ ಇಡಲಾಗುತ್ತದೆ.   ​ದರ್ಪಣ (ಕನ್ನಡಿ), ​ಪೂರ್ಣಕುಂಭ (ನೀರು ತುಂಬಿದ ಕಳಶ), ​ದೀಪ, ​ಚಿನ್ನ (ಬಂಗಾರ),​ಅಕ್ಷತೆ, ​ತಾಂಬೂಲ (ವೀಳ್ಯದೆಲೆ ಮತ್ತು ಅಡಿಕೆ),​...

4187.ಶಿವಮೊಗ್ಗದಲ್ಲೇ_ತಯಾರಿಸಿ_ಮಾರಾಟ_ಮಾಡುತ್ತಿದ್ದಾರೆಕಟ್ಟಿಗೆ_ಸ್ಟವ್_LPG_ಸ್ಟವ್_ಕಾರ್ಯಕ್ಷಮತೆಯಲ್ಲಿ

ಶಿವಮೊಗ್ಗದಲ್ಲೇ_ತಯಾರಿಸಿ_ಮಾರಾಟ_ಮಾಡುತ್ತಿದ್ದಾರೆ ಕಟ್ಟಿಗೆ_ಸ್ಟವ್_LPG_ಸ್ಟವ್_ಕಾರ್ಯಕ್ಷಮತೆಯಲ್ಲಿ   ದೂರದ ಜಿಲ್ಲೆಗಳಲ್ಲಿ ಮಾತ್ರ ಕಟ್ಟಿಗೆ ಒಲೆ ಸ್ಟವ್ ತಯಾರಾಗುತ್ತಿತ್ತು ಮುಂಗಡ ಅಡ್ವಾನ್ಸ್ ನೀಡಿ ಡೆಲಿವರಿಗೆ ಕಾಯಬೇಕಾಗಿತ್ತು.   ಇರಾನ್ ಅಮೇರಿಕಾ ಯುದ್ಧದಿಂದ LPG ವಿತರಣೆ ವ್ಯತ್ಯಾಸ ಆದಾಗ ಅನೇಕ ರೆಸ್ಟೋರೆಂಟ್ ಬಾಗಿಲು ಹಾಕಬೇಕಾದ ಪರಿಸ್ಥಿತಿ ಉಂಟಾಗಿತ್ತು.    ಈಗ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ಯುವ ಉದ್ಯಮಿ ಮನ್ಸೂರ್ ತಮ್ಮ ನ್ಯಾಷನಲ್ ಸ್ಟೀಲ್ ಪರ್ನಿಚರ್ ಮತ್ತು ವೆಲ್ಡಿಂಗ್ ವರ್ಕ್ ಸಂಸ್ಥೆಯಲ್ಲಿ 3 ಸಾವಿರದಿಂದ 40 ಸಾವಿರ ತನಕದ ತರಹಾವಾರಿ ಕಟ್ಟಿಗೆ ಸ್ಟವ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.   ಜಿಲ್ಲೆಯಾದ್ಯಂತ ಮನೆಗಳಿಗೆ, ಹೋಟೆಲ್ ಗಳಿಗೆಗೆ ಮತ್ತು ಕಲ್ಯಾಣ ಮಂಟಪಗಳಿಗೆ ಇವರು ಕಟ್ಟಿಗೆ ಸ್ಟವ್ ತಯಾರಿಸಿ ನೀಡಿದ್ದಾರೆ.   ಈ ಸ್ಟವ್ ಹೊಗೆ ಇಲ್ಲದೆ ಕೆಲಸ ಮಾಡುವ ಮುಖ್ಯ ತಂತ್ರ ಇದರಲ್ಲಿರುವ ಅತ್ಯಂತ ಚಿಕ್ಕದಾದ ಬ್ಯಾಟರಿ ಚಾಲಿತ ಪ್ಯಾನ್ ಇದು ಹಾಳಾದರೆ ಇವರೆ ಬದಲಿಸಿಕೊಡುತ್ತಾರೆ ಆದ್ದರಿಂದ ಇವರ ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡ್ ಜಾಸ್ತಿ.   ನಮ್ಮ ಕಲ್ಯಾಣ ಮಂಟಪಕ್ಕೆ ಮತ್ತು ರೆಸ್ಟೋರೆಂಟ್ ಗೆ ಇವರ ಕಟ್ಟಿಗೆ ಒಲೆ ಖರೀದಿಸುವ ಆಲೋಚನೆ ಇದೆ ಆದ್ದರಿಂದ ಇವರ ಬೇಟಿ ಆಯಿತು, ಆ ದಿನ ಅವರು ಸಾಗರಕ್ಕೆ ಕೆಲವು ಕಟ್ಟಿಗೆ ಓಲೆ ಡಿಲವರಿ ಕೊಟ್ಟು ಬರುವಾಗ ನನ್ನ ಆಫೀಸಿನಲ್ಲಿ ಅವರ ...

4186.ಕುಂದಾಪುರದ_ಸಿರಿ_ಮಹಾಕಾವ್ಯ

ಕುಂದಾಪುರದ_ಸಿರಿ_ಮಹಾಕಾವ್ಯ.   ಸುಮಾರು ಶತಮಾನದ ಕಾಲದಿಂದ ಬಾಯಿಂದ ಬಾಯಿಗೆ ಪಾಡ್ದಾನವಾಗಿ ಹರಿದು ಬಂದ ಸಿರಿ ಮಹಾ ಕಾವ್ಯ ಅಕ್ಷರ ರೂಪಕ್ಕೆ ತಂಡವರು ಫಿನ್‌ಲ್ಯಾಂಡಿನ ಪ್ರಸಿದ್ಧ ಜಾನಪದ ವಿದ್ವಾಂಸ #ಲಾರಿ_ಹೊಂಕೋ ಅವರು ಕರಾವಳಿಯ ಜನಪದ ಗಾಯಕ ಗೋಪಾಲ ನಾಯ್ಕರ ಮೂಲಕ ಹಾಡಿಸಿ, ಇದನ್ನು ಲಿಪ್ಯಂತರಿಸಿ ಇಂಗ್ಲಿಷ್‌ಗೆ ಭಾಷಾಂತರಿಸುವ ಮೂಲಕ ವಿಶ್ವಮಟ್ಟದಲ್ಲಿ ದಾಖಲಿಸಿದ್ದಾರೆ.      ಇದೇ ರೀತಿ #ಕುಣುಬಿ ಜನಾಂಗದವರ #ಕೊಡಚಾದ್ರಿಯ ಕಾವ್ಯ ಒಂದು ಇದೆ, ಅವರು ನಿರಂತರ 30 ರಿಂದ 40 ಗಂಟೆ ಶಿವರಾತ್ರಿ ಸಂದರ್ಭದಲ್ಲಿ ಹಾಡುತ್ತಾರೆ ಆದರೆ ಅದಿನ್ನೂ ಅಕ್ಷರ ರೂಪಕ್ಕೆ ಬಂದಿಲ್ಲ ಯಾರಾದರು ಆಸಕ್ತ ಇತಿಹಾಸ ಸಂಶೋಧಕರು ಈ ಮಹಾನ್ ಕಾರ್ಯ ಮಾಡಬಹುದಾಗಿದೆ.   ಸಿರಿ ಮಹಾಕಾವ್ಯವನ್ನು ಯಾವುದೇ ಒಬ್ಬ ನಿರ್ದಿಷ್ಟ ಲೇಖಕರು ಬರೆದಿದ್ದಲ್ಲ,ಇದು ಕರಾವಳಿಯ ತುಳು-ಕುಂದಾಪುರ ಜನಪದರಲ್ಲಿ ಶತಮಾನಗಳಿಂದ ಬಾಯಿಂದ ಬಾಯಿಗೆ ಹರಿದುಬಂದ ಮೌಖಿಕ ಜನಪದ ಮಹಾಕಾವ್ಯ.   ​ಕರಾವಳಿಯ ಜನಪದ ಗಾಯಕರು ಮತ್ತು ಮಹಿಳೆಯರು ಇದನ್ನು 'ಪಾಡ್ಡನ' (ಪಾಡ್ದನ) ರೂಪದಲ್ಲಿ ತಲೆಮಾರುಗಳಿಂದ ಹಾಡುತ್ತಾ ಜೀವಂತವಾಗಿ ಉಳಿಸಿಕೊಂಡು ಬಂದಿದ್ದಾರೆ.  ​ಆದರೆ ಈ ಮೌಖಿಕ ಕಾವ್ಯವನ್ನು ಲಿಖಿತ ರೂಪಕ್ಕೆ ತಂದು ಜಗತ್ತಿಗೆ ಪರಿಚಯಿಸಿದ ಕೀರ್ತಿ ಈ ಕೆಳಗಿನವರಿಗೆ ಸಲ್ಲುತ್ತದೆ,ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಾಚಾರು ಗ್ರಾಮದ ಜನಪದ ಕೃಷಿಕ ಮತ್ತು...

4185.ಡಾ_ಶ್ರೀಕಂಠಕೂಡಿಗೆ_ಅವರ_79ನೇ_ಹುಟ್ಟು_ಹಬ್ಬದ_ಶುಭಾಶಯಗಳು

ಡಾ_ಶ್ರೀಕಂಠಕೂಡಿಗೆ_ಅವರ_79ನೇ_ಹುಟ್ಟು_ಹಬ್ಬದ_ಶುಭಾಶಯಗಳು.    ಶ್ರೀಕಂಠ ಕೂಡಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೂಡಿಗೆ ಊರಿನವರು, ಶಿಕ್ಷಣ -ಸಾಹಿತ್ಯ ಮತ್ತು ಜನಪದ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ,ಇವರ ಜನ್ಮ ದಿನಾಂಕ -5-ಸೆಪ್ಟೆಂಬರ್-1947 ಇವತ್ತು ಅವರ 79 ನೇ ಹುಟ್ಟುಹಬ್ಬ.    ಪದವಿ ವಿದ್ಯಾರ್ಥಿಗಳಿಗೆ ಕೂಡಿಗೆ ಅವರು ಬರೆದ ಪಾಠಗಳಿತ್ತು, ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ತರುವಲ್ಲಿ ಇವರ ಶ್ರಮವೂ ಇದೆ.  ಆದರೆ ಅದೇ ಕುವೆಂಪು ವಿವಿ ಕುಲಪತಿ ಆಗುವ ಆರ್ಹತೆ ಇವರಿಗೆ ಇದ್ದರೂ ಶಿವಮೊಗ್ಗದವರೇ ಉನ್ನತ ಶಿಕ್ಷಣ ಸಚಿವರಾದರೂ ಇವರನ್ನು ಕುಲಪತಿ ಮಾಡಲಿಲ್ಲ.  ಈ ವಾಮನವತಾರಿಯ ಹಿನ್ನೆಲೆ ನೋಡಿ ಇದು ಒಂದು ರೀತಿ ಪ್ರತಿಭೆಯ ವಿಶ್ವದರ್ಶನ ಆಗಿದೆ ಅದರಲ್ಲೂ ಇವರ ಕನ್ನಡ ಕೈ ಬರಹ ಮಾತ್ರ ಅತ್ಯಂತ ಸುಂದರ.    ಇವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ, ಪಿ ಹೆಚ್ ಡಿ ಪದವೀದರರು, ಚಿನ್ನದ ಪದಕ ವಿಜೇತರರು ಶ್ರೀಯುತರು ಉತ್ತಮ ಪ್ರಾಧ್ಯಾಪಕರು, ಸೃಜನಶೀಲ ಲೇಖಕರು ಮತ್ತು ಪ್ರಸಿದ್ಧ ಜನಪದ ತಜ್ಞರು.   ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ತರಲು ಇವರ ವಿಶೇಷ ಪ್ರಯತ್ನವಿದೆ ನಂತರ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಆಗೇ ಬಿಟ್ಟರು ಎಂಬ ಸುದ್ದಿ ಇತ್ತು ಆದರೆ ಜೆಲ್ಲೆಯ ರಾಜಕಾರಣಿಗಳು ಈ ಹುದ್ದೆಯನ್ನೆ ಮಾರಿಕೊಂಡರು.     ಈ ವಿಚಾರದ...

4184.ಕಸ್ತೂರಿರಂಗನ್_ವರದಿ_ವಿರೋದ_ಅಥವ_ಮಾರ್ಪಾಡುರಾಜ್ಯ_ಸರ್ಕಾರ_ಮತ್ತು_ಹೋರಾಟದ_ಮಿತಿಗಳು ....

ಕಸ್ತೂರಿರಂಗನ್_ವರದಿ_ವಿರೋದ_ಅಥವ_ಮಾರ್ಪಾಡು ರಾಜ್ಯ_ಸರ್ಕಾರ_ಮತ್ತು_ಹೋರಾಟದ_ಮಿತಿಗಳು .... #ಜನರ_ನಿಜವಾದ_ಆತಂಕವೇನು? ... ​ಉಪಗ್ರಹ ಸರ್ವೆ ಆಧಾರದಲ್ಲಿ ಜನವಸತಿ ಪ್ರದೇಶಗಳು ಹಾಗೂ ತೋಟಗಳನ್ನೂ 'ಸೂಕ್ಷ್ಮ ವಲಯ'ಕ್ಕೆ ಸೇರಿಸಿರುವುದರಿಂದ ಭವಿಷ್ಯದಲ್ಲಿ ಅರಣ್ಯ ಇಲಾಖೆಯ ಹಸ್ತಕ್ಷೇಪ ಹೆಚ್ಚಾಗಬಹುದು, ಕಂದಾಯ ಭೂಮಿಯ ಹಕ್ಕುಗಳು ಮೊಟಕುಗೊಳ್ಳಬಹುದು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಅಧಿಕಾರಿಗಳ ಅನುಮತಿಗಾಗಿ ಅಲೆಯಬೇಕಾಗುತ್ತದೆ ಎಂಬುದು ಮಲೆನಾಡಿಗರ ಮುಖ್ಯ ಆತಂಕವಾಗಿದೆ.   ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಅಥವಾ ಸಾರ್ವಜನಿಕರು ರಾಜಕೀಯವಾಗಿ ಸಂಪೂರ್ಣವಾಗಿ ವಿರೋಧಿಸಬಹುದಾದರೂ ...  ಕಾನೂನಾತ್ಮಕವಾಗಿ ಹಾಗೂ ಪ್ರಾಯೋಗಿಕವಾಗಿ ಅದನ್ನು ಶೇಕಡಾ 100ರಷ್ಟು ಸಂಪೂರ್ಣವಾಗಿ ಕೈಬಿಡುವುದು ಅಥವ ನಿರಾಕರಿಸುವುದು ಅಷ್ಟು ಸುಲಭವಲ್ಲ.  ​ಇದರ ಹಿಂದಿರುವ ಪ್ರಮುಖ ಕಾರಣಗಳು ಮತ್ತು ವಾಸ್ತವಾಂಶಗಳು ಏನೆಂದು ನೋಡಿ .... ​1. #ಕೇಂದ್ರ_ಸರ್ಕಾರದ_ಪರಮಾಧಿಕಾರ      (ಪರಿಸರ ಸಂರಕ್ಷಣಾ ಕಾಯ್ದೆ, 1986) ​ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪರಿಸರ ವಲಯಗಳನ್ನು (ESA - Ecologically Sensitive Area) ಘೋಷಿಸುವ ಅಧಿಕಾರ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (MoEFCC) ಮಾತ್ರ ಇರುತ್ತದೆ.   ​ರಾಜ್ಯ ಸರ್ಕಾರಗಳು ಕೇವಲ ತಮ್ಮ ಅಭಿಪ್ರಾಯ, ಆಕ್ಷೇಪಣೆ ಹಾಗೂ ಶಿಫಾರಸುಗಳನ್ನು ಸಲ್ಲ...

4183.ಕರ್ಮಯೋಗಿ_ಶ್ರೀಕೃಷ್ಣನ_ಜನ್ಮದಿನ.ಬದುಕಿಗೆ_ಬೆಳಕಾಗಲಿ_ಗೀತೆಯ_ಸಂದೇಶ.​

ಕರ್ಮಯೋಗಿ_ಶ್ರೀಕೃಷ್ಣನ_ಜನ್ಮದಿನ. ಬದುಕಿಗೆ_ಬೆಳಕಾಗಲಿ_ಗೀತೆಯ_ಸಂದೇಶ. ​   ​ದ್ವಾಪರಯುಗದಲ್ಲಿ ಅಧರ್ಮ ಅಳಿಸಿ, ಧರ್ಮವನ್ನು ರಕ್ಷಿಸಲು ಕಾರಾಗೃಹದಲ್ಲಿ ಜನಿಸಿದ ದೇವಕಿನಂದನ, ಯಶೋದೆಯ ಮುದ್ದು ಕಂದ ಶ್ರೀಕೃಷ್ಣನ ಜನ್ಮದಿನವೇ ಈ ಪವಿತ್ರ 'ಕೃಷ್ಣ ಜನ್ಮಾಷ್ಟಮಿ.   ಜ್ಯೋತಿಷ್ಯ ಹಾಗೂ ಪೌರಾಣಿಕ ಕಾಲಗಣನೆಯ ಪ್ರಕಾರ ಶ್ರೀಕೃಷ್ಣನ ಜನನ ಕ್ರಿ.ಪೂ. 3228 ಎಂದು ಪರಿಗಣಿಸಿದರೆ 2026ನೇ ಇಸವಿಯಲ್ಲಿ ಇವತ್ತು ಆಚರಿಸಲಾಗುತ್ತಿರುವುದು ಶ್ರೀಕೃಷ್ಣನ 5253ನೇ ಜನ್ಮಾಷ್ಟಮಿ.  ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ 12:00 ಗಂಟೆಗೆ (ನಿಶೀಥ ಕಾಲದಲ್ಲಿ) ಮಥುರೆಯ ಕಾರಾಗೃಹದಲ್ಲಿ ಜನಿಸಿದನು. ​​  ಜ್ಯೋತಿಷ್ಯ ಲೆಕ್ಕಾಚಾರಗಳು ಮತ್ತು ಪೌರಾಣಿಕ ದಾಖಲೆಗಳನ್ನು ಆಧರಿಸಿ ಸಂಶೋಧಕರು ಹಾಗೂ ವಿದ್ವಾಂಸರು ಶ್ರೀಕೃಷ್ಣನ ನಿಖರ ಜನನ ದಿನಾಂಕವನ್ನು ಕ್ರಿ.ಪೂ. 3228 ಜುಲೈ 18 ಅಥವಾ ಜುಲೈ 21 ಎಂದು ಗುರುತಿಸಿದ್ದಾರೆ.    ​ಹಿಂದೂ ಪಂಚಾಂಗದ ದಿನಾಂಕ ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮಿ ತಿಥಿ (ರೋಹಿಣಿ ನಕ್ಷತ್ರ) ​ಆಚರಣೆ,ಈ ದಿನವನ್ನೇ ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲಾಗುತ್ತದೆ.  ​ ತುಂಟಾಟದ ಬಾಲಗೋಪಾಲನಾಗಿ ಗೋಪಿಯರ ಮನಗೆದ್ದವನು, ಕೊಳಲನೂದಿ ಗೋವುಗಳ ಕಾಯ್ದವನು, ಕಾಳಿಂಗ ...