Skip to main content

Posts

4148.ಮಿಲೇನಿಯಲ್ಸ್_Millennials ಜೆನ್_ಎಕ್ಸ್_Gen_X

ಮಿಲೇನಿಯಲ್ಸ್_Millennials  ಜೆನ್_ಎಕ್ಸ್_Gen_X   ನನ್ನ ಹಿಂದಿನ ಲೇಖನ ಜೆನ್-ಜಿ ಓದಿದ್ದೀರಿ ಈಗ ಇವರಿಗಿಂತ ಹಿಂದಿನ ಎರೆಡು ತಲೆಮಾರುಗಳಾದ ಮಿಲೇನಿಯಲ್ಸ್ ಮತ್ತು ಜೆನ್-ಎಕ್ಸ್ ಬಗ್ಗೆ ಓದಿ ಇದು 1965 ರಿಂದ ನಂತರದ 1996 ರ ಅವಧಿಯಲ್ಲಿ ಜನಿಸಿದ ಜನರ ಎರೆಡು ತಲೆಮಾರು.   ಈ ಲೇಖನ ನಿಮಗೆ ಇಷ್ಟ ಆದರೆ ನಿಮ್ಮ ಸಮಕಾಲಿನವರಿಗೆ ಶೇರ್ ಮಾಡಿ ಅವರಿಗೆ ಈ ಮಾಹಿತಿ ಹಂಚಿ.   #ಮಿಲೇನಿಯಲ್ಸ್ ಎಂದರೆ ಸಾಮಾನ್ಯವಾಗಿ 1981 ರಿಂದ 1996ರ ಅವಧಿಯಲ್ಲಿ ಜನಿಸಿದ ಜನರ ತಲೆಮಾರು.     ಈಗಿನ 30 ರಿಂದ 47 ವರ್ಷದ ಒಳಗಿನ ವಯೋಮಾನದವರು ಈ ಗುಂಪಿನಲ್ಲಿ ಬರುತ್ತಾರೆ.   ಇವರು #ಜೆನ್_ಎಕ್ಸ್' (Gen X) ನಂತರ ಮತ್ತು '#ಜೆನ್_ಜಿ' (Gen Z) ಗಿಂತ ಮುಂಚಿನ ತಲೆಮಾರಿನವರಾಗಿದ್ದಾರೆ.   ಇವರ ​ಮುಖ್ಯ ಲಕ್ಷಣಗಳು ಮತ್ತು ಹಿನ್ನೆಲೆ,​ಡಿಜಿಟಲ್ ಬದಲಾವಣೆಯ ಸಾಕ್ಷಿ ಕಾಲದವರು ಈ ತಲೆಮಾರಿನವರು.   ಇಂಟರ್ನೆಟ್ ಇಲ್ಲದ ಅನಲಾಗ್ ಜಗತ್ತನ್ನು ಲ್ಯಾಂಡ್‌ಲೈನ್, ರೇಡಿಯೋ, ಟಿವಿ ಮತ್ತು ಡಿಜಿಟಲ್ ಕ್ರಾಂತಿಯ ಆರಂಭವನ್ನು (ಡಯಲ್-ಅಪ್ ಇಂಟರ್ನೆಟ್, ಕಂಪ್ಯೂಟರ್, ಮೊಬೈಲ್ ಫೋನ್, Facebook/Orkut) ಕಣ್ಣಾರೆ ಕಂಡ ಏಕೈಕ ತಲೆಮಾರು.      ​ ಇವರು ಆರ್ಥಿಕ ಸವಾಲುಗಳನ್ನ, 2008ರ ಜಾಗತಿಕ ಆರ್ಥಿಕ ಹಿಂಜರಿತ (Great Recession) ಮತ್ತು ಕೋವಿಡ್ ಬಿಕ್ಕಟ್ಟನ್ನು ವೃತ್ತಿಜೀವನದ ಆರಂಭ ಅಥವಾ ಬ...
Recent posts

4147.ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ

ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ.   #ಹಿಂದೂ ಧರ್ಮದಲ್ಲಿ ಬ್ರಾಹ್ಮೀ ಮುಹೂರ್ತಸೂರ್ಯೋದಯಕ್ಕೆ 96 ನಿಮಿಷ ಮುನ್ನ.   #ಸಿಖ್ ಧರ್ಮದಲ್ಲಿ ಅಮೃತ್ ವೇಳಾ ಮುಂಜಾನೆ 3 – 6 ನಾಮ ಜಪ, ಪವಿತ್ರ ಗ್ರಂಥ ಪಠಣ. #ಇಸ್ಲಾಂ ಧರ್ಮದಲ್ಲಿ ತಹಜ್ಜುದ್ / ಫಜ್ರ್ರಾತ್ರಿಯ ಕೊನೆಯ ಭಾಗ / ಮುಂಜಾನೆ ಏಕಾಂತದ ಪ್ರಾರ್ಥನೆ -ನಮಾಜ್.  #ಕ್ರಿಶ್ಚಿಯನ್ ಧರ್ಮದಲ್ಲಿ  ಮು0ಜಾನೆ 4 -5.30 ಏಕಾಂತ ಪ್ರಾರ್ಥನೆ, ಕೀರ್ತನೆಗಳ ಪಠಣ. #ಬೌದ್ಧ ಧರ್ಮದಲ್ಲಿ ಮುಂಜಾನೆಯ ಝೆನ್ ಧ್ಯಾನಮುಂಜಾನೆ 4– 5 ಚಿತ್ತಶುದ್ಧಿ, ವಿಪಸ್ಸನಾ ಸಾಧನೆ. #ಜೈನ ಧರ್ಮದಲ್ಲಿ ಮುಂಜಾನೆ ಣ ಮೋಕಾರ ಪಠಣ ಪ್ರಾರಂಬಿಸುತ್ತಾರೆ.   ಹೆಸರು ಮತ್ತು ವಿದಿ ವಿದಾನಗಳು ಬೇರೆಯಾಗಿದ್ದರೂ ಸೂಯೊ೯ದಯಕ್ಕೆ ಮುನ್ನ ವಾತಾವರಣದಲ್ಲಿರುವ ಪ್ರಶಾಂತತೆ, ಪರಿಶುದ್ಧತೆ ಮತ್ತು ಸಾತ್ವಿಕ ಶಕ್ತಿಯನ್ನು ಆಧ್ಯಾತ್ಮಿಕ ಉನ್ನತಿಗಾಗಿ ಬಳಸಿಕೊಳ್ಳಬೇಕೆಂಬುದು ವಿಶ್ವದ ಬಹುತೇಕ ಎಲ್ಲಾ ಧರ್ಮಗಳ ಸಮಾನ ಸಿದ್ಧಾಂತವಾಗಿದೆ. #ಸಿಖ್_ಧರ್ಮದಲ್ಲಿ. ಸೂರ್ಯೋದಯಕ್ಕೂ ಮುನ್ನ ಮಾಡುವ ಪ್ರಾರ್ಥನೆ ಮತ್ತು ಧ್ಯಾನವನ್ನು ಅಮೃತ ವೇಳೆಯ ನಿತ್‌ನೇಮ್ ಎಂದು ಕರೆಯಲಾಗುತ್ತದೆ. ​ಅಮೃತ ವೇಳೆ ಸೂರ್ಯೋದಯಕ್ಕೂ ಮುನ್ನ ಸುಮಾರು 3:00 ರಿಂದ 6:00 ಗಂಟೆಯವರೆಗಿನ (ಬ್ರಾಹ್ಮೀ ಮುಹೂರ್ತ) ಸಮಯವನ್ನು 'ಅಮೃತ ವೇಳೆ' ಎನ್ನುತ್ತಾರೆ.   ​ನಾಮ ಸಿಮ್ರನ್ ಮುಂಜಾನೆ ಎದ್ದು ಸ್ನಾನದ ನಂತರ ಭಗವಂತನ ಹೆಸರನ್ನ...

4146.ಕೇವಲ_ನಡಿಗೆಯಲ್ಲಇದು_ದೇಹದ_ಸಮತೋಲನದ_ಕಲೆ.ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.

ಕೇವಲ_ನಡಿಗೆಯಲ್ಲ ಇದು_ದೇಹದ_ಸಮತೋಲನದ_ಕಲೆ. ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.   2020ರ ಕೊರಾನಾ ಲಾಕ್ ಡೌನ್ ಮೊದಲ ದಿನದಿಂದ ಪ್ರಾರಂಭಿಸಿದ ನನ್ನ ವಾಕಿಂಗ್ ಗೆ ಇವತ್ತಿಗೆ ಆರು ವರ್ಷ ದಾಟಿದೆ.      ಪ್ರಾರಂಭಿಸುವಾಗ ನನ್ನ ವಯಸ್ಸು 55 ಈಗ 61 ಇದರ ಮಧ್ಯೆ ನನ್ನ ನಡಿಗೆ ಶೈಲಿ ಬದಲಾಗಿ ಬಿಟ್ಟಿತ್ತು, ನನ್ನ ಬೆನ್ನು ಬಾಗಿದೆ ಅಂತ ಮಕ್ಕಳು ಗುರುತಿಸಿದ್ದರು ಆದರೆ ಇದು ವಯೋ ಸಹಜ ಅಂತ ಸುಮ್ಮನಾಗಿದ್ದೆ.    ಮೊನ್ನೆ ಭಾರತಿ ಬಿ.ವಿ ಎಂಬುವರು ಬರೆದ ಪೇಸ್ ಬುಕ್ ಪೋಸ್ಟ್ ನೋಡಿದೆ ಅವರದ್ದು ನನ್ನದೇ ರೀತಿ ಸಮಸ್ಯೆ ಅವರು ಅದನ್ನು ಕೋರ್ ವಾಕಿಂಗ್ ಮೂಲಕ ಸರಿ ಪಡಿಸಿಕೊಂಡಿದ್ದು ವಿಡಿಯೋ ಸಹಿತ ಪೋಸ್ಟ್ ಮಾಡಿದ್ದರು ಅವರ ಪೋಸ್ಟ್ ಗೆ ನ #ಬಾ_ನಲ್ಲೆ_ಮದು_ಚಂದ್ರಕೆ ಕಥೆ ಬರೆದ ಸಾಹಿತಿ ಮತ್ತು ಪೋಲಿಸ್ ಅಧಿಕಾರಿ ಜೇಬರ್ ಅವರು ಪ್ರತಿ ನಿತ್ಯ ವಾಕಿಂಗ್ ನಲ್ಲಿ ಮಾರ್ಚ್ ಪಾಸ್ಟ್ ಶೈಲಿ ಅಳವಡಿಸಿಕೊಳ್ಳವಂತೆ ಪ್ರತಿಕ್ರಿಯೆ ನೀಡಿದ್ದರು ಅದರ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.   ನಾನು ಇವರಿಬ್ಬರ ಸಲಹೆಯಿಂದ ಪ್ರೇರಿತನಾಗಿ ಪ್ರತಿ ದಿನದ ನನ್ನ ಒಂದು ಗಂಟೆ ವಾಕಿಂಗ್ ನಲ್ಲಿ ಕೆಲವು ನಿಮಿಷ ಕೋರ್ ವಾಕಿಂಗ್ ಮತ್ತು ಮಾರ್ಚ್ ಫಾಸ್ಟ್ ಎರೆಡೂ ಪ್ರಾರಂಬಿಸಿದ್ದೇನೆ.   ಕೋರ್ ಮಸಲ್ಸ್ ಅಂದರೆ ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳು.   ನಡೆಯುವಾಗ ಕೋರ್ ಮಸಲ್ಸ್‌ಗಳನ್ನು (ಹೊಟ್ಟೆ ಮತ್ತು ಬೆನ್ನಿನ ಸ...

4145.ಬ್ರಾಹ್ಮೀ_ಮುಹೂರ್ತ_ಎಂದರೇನು

ಬ್ರಾಹ್ಮೀ_ಮುಹೂರ್ತ_ಎಂದರೇನು?... "Early to bed and early to rise, makes a man healthy, wealthy, and wise."   ನೀವು ಈ ನುಡಿ ಮುತ್ತು ಕೇಳಿರುತ್ತೀರಿ ಈ ರೀತಿ ನಿಮ್ಮ ಜೀವನ ಶೈಲಿ ಇದ್ದರೆ ನಿಮ್ಮ ಅನುಭವ ಶೇರ್ ಮಾಡಲು ವಿನಂತಿ.  ಬ್ರಾಹ್ಮೀ ಮುಹೂರ್ತ ಎಂದರೆ ಸೂರ್ಯೋದಯಕ್ಕಿಂತ ಮುಂಚಿನ ಅತ್ಯಂತ ಪವಿತ್ರ ಮತ್ತು ಪ್ರಶಾಂತವಾದ ಸಮಯ.  ಪ್ರಾಚೀನ ವೈದಿಕ ಹಾಗೂ ಆಯುರ್ವೇದ ಪರಂಪರೆಯಲ್ಲಿ ಈ ಸಮಯಕ್ಕೆ ವಿಶೇಷ ಮಹತ್ವವಿದೆ.  ಸೂರ್ಯೋದಯಕ್ಕೆ 1 ಗಂಟೆ 36 ನಿಮಿಷಗಳ ಮೊದಲು ಈ ಮುಹೂರ್ತ ಆರಂಭವಾಗಿ, ಸೂರ್ಯೋದಯಕ್ಕೆ 48 ನಿಮಿಷಗಳ ಮುಂಚೆ ಕೊನೆಗೊಳ್ಳುತ್ತದೆ.  ಅಂದರೆ ಇದರ ಒಟ್ಟು ಅವಧಿ 48 ನಿಮಿಷಗಳು / 2 ಘಳಿಗೆಗಳು. ಸಾಮಾನ್ಯವಾಗಿ ಇದು ಮುಂಜಾನೆ 4:00 ರಿಂದ 5:30 ರ ನಡುವೆ ಬರುತ್ತದೆ.  ಬ್ರಹ್ಮಜ್ಞಾನದ ಸಮಯ: 'ಬ್ರಹ್ಮ' ಎಂದರೆ ಪರಮ ಸತ್ಯ ಅಥವಾ ಜ್ಞಾನ. 'ಬ್ರಾಹ್ಮೀ' ಎಂದರೆ ಬ್ರಹ್ಮನಿಗೆ ಅಥವಾ ಜ್ಞಾನಾರ್ಜನೆಗೆ ಸಂಬಂಧಿಸಿದ್ದು. ಈ ಸಮಯದಲ್ಲಿ ಪ್ರಕೃತಿಯು ಅತ್ಯಂತ ಪ್ರಶಾಂತವಾಗಿದ್ದು, ಪರಮಾತ್ಮನ ಚಿಂತನೆ, ಆತ್ಮಜ್ಞಾನ (ಬ್ರಹ್ಮಜ್ಞಾನ) ಮತ್ತು ವೇದಾಧ್ಯಯನಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಇದಕ್ಕೆ 'ಬ್ರಾಹ್ಮೀ ಮುಹೂರ್ತ' ಎಂಬ ಹೆಸರು ಬಂತು.   ರಾತ್ರಿಯ ಕೊನೆಯ ಮುಹೂರ್ತವಾದ 14ನೇ ಮುಹೂರ್ತಕ್ಕೆ ಸೃಷ್ಟಿಕರ್ತನಾದ ಬ್ರಹ್ಮದೇವನೇ ಅಧಿಪತಿ. ಆದ್ದರಿಂದ ಆ ಕಾಲಾವಧಿಗೆ ...

4144.ಈದ್_ಮಿಲಾದ್ವಿಶ್ವದಾದ್ಯಂತ_ಸಂಭ್ರಮಾಚರಣೆ.

ಈದ್_ಮಿಲಾದ್ ವಿಶ್ವದಾದ್ಯಂತ_ಸಂಭ್ರಮಾಚರಣೆ.  ಈದ್-ಎ-ಮಿಲಾದ್-ಉನ್-ನಬಿ ಅಥವಾ ಮಿಲಾದ್-ಉನ್-ನಬಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಪವಿತ್ರ ಹಬ್ಬ.  ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ 'ರಬಿ-ಉಲ್-ಅವ್ವಲ್' 12ನೇ ದಿನದಂದು ಇದನ್ನು ವಿಶ್ವಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ.  ಮಸೀದಿಗಳಲ್ಲಿ ಮತ್ತು ಮನೆಗಳಲ್ಲಿ ವಿಶೇಷ ನಮಾಜ್ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.   ಪ್ರವಾದಿಯವರ ಬೋಧನೆಗಳು, ತ್ಯಾಗ ಮತ್ತು ಮಾನವೀಯ ಸಂದೇಶಗಳನ್ನು ಸ್ಮರಿಸಲಾಗುತ್ತದೆ. ​ ಅನೇಕ ಕಡೆ ಜನರು ಧಾರ್ಮಿಕ ಧ್ವಜಗಳನ್ನು ಹಿಡಿದು, ಪ್ರವಾದಿಯವರ ಸ್ತುತಿ ಗೀತೆಗಳನ್ನು (ನಾತ್) ಹಾಡುತ್ತಾ ಶಾಂತಿಯುತ ಮೆರವಣಿಗೆ (ಜಲೂಸ್)ನಡೆಸುತ್ತಾರೆ. ​  ಬಡವರಿಗೆ, ನಿರ್ಗತಿಕರಿಗೆ ಆಹಾರ, ಬಟ್ಟೆ ಮತ್ತು ಹಣವನ್ನು ದಾನ ಮಾಡುವುದು ಈ ದಿನದ ಪ್ರಮುಖ ಆಚರಣೆಯಾಗಿದೆ. ​  ಮಸೀದಿಗಳು, ದರ್ಗಾಗಳು ಮತ್ತು ಪ್ರಮುಖ ಬೀದಿಗಳನ್ನು ದೀಪಗಳಿಂದ ಮತ್ತು ಹಸಿರು ಬಣ್ಣದ ತೋರಣಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ​  ಪ್ರವಾದಿಯವರ ಜೀವನ ಚರಿತ್ರೆ, ಶಾಂತಿ, ಕರುಣೆ ಮತ್ತು ಸೌಹಾರ್ದತೆಯ ಸಂದೇಶಗಳನ್ನು ಸಾರುವ ಧಾರ್ಮಿಕ ಸಭೆಗಳು ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ. ​ ಕುಟುಂಬಸ್ಥರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಸಿಹಿತಿಂಡಿ ಹಾಗ...

4143.ರೆಸ್ಟೋರೆಂಟ್__ಒಪನ್_ಕಿಚನ್_ಆಗಿದ್ದರೆ .... ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ 2012 ರಲ್ಲಿ ಪ್ರಾರಂಬಿಸುವಾಗಲೇ ಓಪನ್ ಕಿಚನ್ ಮಾಡಿದ್ದೆವು.

ರೆಸ್ಟೋರೆಂಟ್__ಒಪನ್_ಕಿಚನ್_ಆಗಿದ್ದರೆ ....  ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ 2012 ರಲ್ಲಿ ಪ್ರಾರಂಬಿಸುವಾಗಲೇ ಓಪನ್ ಕಿಚನ್ ಮಾಡಿದ್ದೆವು.  ಇದರಿಂದ ಗ್ರಾಹಕರು ತಾವು ತಿನ್ನುವ ಊಟ ಉಪಹಾರ ಎಷ್ಟು ಆರೋಗ್ಯಕರ ವಾತಾವರಣದಲ್ಲಿ ತಯಾರಿಸುತ್ತಿದ್ದಾರೆಂದು ನೋಡಿ ಖಾತ್ರಿ ಮಾಡಿಕೊಳ್ಳುತ್ತಾರೆ.  ನಿತ್ಯ ಸಂಜೆ ಮಲ್ಲಿಕಾ ವೆಜ್ ನಲ್ಲಿ ನೀರುಳ್ಳಿ ದೋಸೆ ಪೇಮಸ್ ಆಗಿದೆ, ಬಿಸಿ ಬಿಸಿಯಾದ ಘಮ ಘಮಿಸುವ ಗರಿ ಗರಿಯಾದ ನೀರುಳ್ಳಿ ದೋಸೆಯನ್ನು ಆಲೂ ಪಲ್ಯ ಮತ್ತು ಕಾಯಿ ಚಟ್ನಿ ಜೊತೆ ಸವಿಯ ಬಹುದು. ಮಲ್ಲಿಕಾ ವೆಜ್ ರೆಸ್ಟೋರೆಂಟ್ ವಿಳಾಸ NH 69, ಯಡೇಹಳ್ಳಿ ವೃತ್ತ - ಆನಂದಪುರಂ ಅಂಚೆ ಸಾಗರ ತಾಲ್ಲೂಕು - ಶಿವಮೊಗ್ಗ ಜಿಲ್ಲೆ - ಕರ್ನಾಟಕ #oniondosa #vegitarianrecipes #restoran  #mallikaveg #anandapuram #shivamogga  #lodge #hombujaresidency

4142.ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!...ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ.

ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!... ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ.    ಅನೇಕ ಗೆಳೆಯರು ಈ ವರ್ಷದ ಶ್ರಾವಣ ಮಾಸದ ನಿಮ್ಮ ಹೊಸ ಪ್ರಯೋಗ ಏನು? ಅಂತ ಕೇಳುತ್ತಿದ್ದಾರೆ.    ಈ ವರ್ಷ ಶ್ರಾವಣ ಮಾಸ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭ ಆಯಿತು ಈ ವರ್ಷ ನನ್ನ ಹೊಸ ಪ್ರಯೋಗ #ಬ್ರಾಹ್ಮಿ_ಮಹೂರ್ತದ_ಸಮಯದ ಸದುಪಯೋಗದ ದ ಕೆಲಸ ಪ್ರಾರಂಬಿಸಿ ಇವತ್ತಿಗೆ 25 ಆಗಸ್ಟ್ ಗೆ 13 ದಿನ ಆಯಿತು.   ಬೆಳಿಗ್ಗೆ 3.30 ಕ್ಕೆ ಏಳುವುದು, ಸ್ನಾನ ಮುಗಿಸಿ ಪೂಜೆ - ಮಂಗಲಾರತಿ ನಂತರ ಸಿದ್ದ ಸಮಾದಿಯೋಗದ ವಿಭಾಗಿಯಾ ಪ್ರಾಣಯಾಮ,ಮುದ್ರಾ ಪ್ರಾಣ ಯಾಮ_ನಾಡಿಶೋಧನಾ / ಸುಖ ಪ್ರಾಣಯಾಮ - ಕಪಾಲಭಾತಿ - 15 ನಿಮಿಷದ ಧ್ಯಾನ ನಂತರ ಓದು ಬರಹ, ಶಂಭೂ ರಾಮನ ಜೊತೆ ಒಂದು ಗಂಟೆ ವಾಕಿಂಗ್.    ಒಂದು ಮುಷ್ಟಿ ಮೆಂತೆ -ಹೆಸರುಕಾಳಿನ ಮೊಳಕೆ, 8-10 ಒಣ ಖರ್ಜೂರ ಮತ್ತು ಒಂದು ಕಪ್ ಹಾರ್ಲಿಕ್ಸ್ ಕುಡಿಯುತ್ತೇನೆ ಯಾಕೆಂದರೆ ಕಾಫಿ ಟೀ ಈ ತಿಂಗಳು ಕುಡಿಯುವುದಿಲ್ಲ.    ವಾರದಲ್ಲಿ ಸೋಮವಾರ ಮತ್ತು ಗುರುವಾರ ಉಪವಾಸ, ರಾತ್ರಿ ಊಟ ತ್ಯಜಿಸಿ ಅನೇಕ ವರ್ಷ ಆಯಿತು ಅದು ಮುಂದುವರಿದಿದೆ.    ಬೆಳಿಗ್ಗೆ ಒಂದು ಇಡ್ಲಿ + ಒಂದು ಸಣ್ಣ ಕಪ್ ಪಲಾವ್, ಮಧ್ಯಾಹ್ನ 3 ರಿಂದ 4 ರ ಒಳಗೆ ಅನ್ನ ತರಕಾರಿ ಸಾಂಬಾರ್ ಪಲ್ಯ ಸೇವಿಸುತ್ತೇನೆ ಇದು ಅನೇಕ ವರ್ಷದ ಅಭ್ಯಾಸ ಆಗಿದೆ. ...