Skip to main content

Posts

4129.ಇಸ್ಕಾನ್_ಮುಂಜಾನೆ_ಮಂಗಲ_ಆರತಿ_ಜಪ_ಯಜ್ಞದಲ್ಲಿ ...

ಇಸ್ಕಾನ್_ಮುಂಜಾನೆ_ಮಂಗಲ_ಆರತಿ_ಜಪ_ಯಜ್ಞದಲ್ಲಿ ...   ನಗರ ಸಂಕೀರ್ತನೆಗಾಗಿ ನಮ್ಮ  #ಕೃಷ್ಣಸರಸ_ಕನ್ವೆನ್ಷನ್_ಹಾಲ್ ಕಲ್ಯಾಣ ಮಂಟಪದಲ್ಲಿ ತಂಗಿರುವ ಇಸ್ಕಾನ್ ಸಂಸ್ಥೆಯ ಮುಂಜಾನೆಯ ಮಂಗಲ ಆರತಿ ಮತ್ತು ಜಪ ಯಜ್ಞದಲ್ಲಿ ಭಾಗಿ ಆಗುವ ಅವಕಾಶ ನನ್ನದಾಗಿತ್ತು.  ಹರೇ ಕೃಷ್ಣ ಪಂಥದ (ಇಸ್ಕಾನ್) ಮುಂಜಾನೆಯ ಮಂಗಲ ಆರತಿ ಮತ್ತು ಜಪ ಯಜ್ಞ ಮುಂಜಾನೆ 4:30ರ ಪ್ರಶಾಂತ ವಾತಾವರಣದಲ್ಲಿ ನಡೆಯುತ್ತದೆ.   ಇಸ್ಕಾನ್ (ISKCON) ಹಾಗೂ ಗೌಡೀಯ ವೈಷ್ಣವ ಪಂಥದಲ್ಲಿ ಪ್ರತಿದಿನ ಮುಂಜಾನೆ 4:30 ಕ್ಕೆ ನಡೆಯುವ ಅತ್ಯಂತ ಪವಿತ್ರವಾದ ಮೊದಲ ಪೂಜೆ ಮತ್ತು ಆರತಿಯನ್ನು #ಮಂಗಲ_ಆರತಿ ಎಂದು ಕರೆಯಲಾಗುತ್ತದೆ.    ಪ್ರತಿದಿನ ಮುಂಜಾನೆ 4:30 ಈ ಸಮಯವನ್ನು 'ಬ್ರಹ್ಮ ಮುಹೂರ್ತ' ಎಂದು ಕರೆಯಲಾಗುತ್ತದೆ.  ಭಗವಂತನಿಗೆ ನಿತ್ಯ ಸೇವೆಯನ್ನು ಸಲ್ಲಿಸಲು ಮತ್ತು ದಿನವನ್ನು ಭಕ್ತಿಪೂರ್ವಕವಾಗಿ ಪ್ರಾರಂಭಿಸಲು ಇದು ಅತ್ಯಂತ ಶ್ರೇಷ್ಠ ಸಮಯ. ​ ಆರತಿಯ ಸಮಯದಲ್ಲಿ ಭಕ್ತರೆಲ್ಲರೂ ಸೇರಿ ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕೂರರು ರಚಿಸಿದ "ಸಂಸಾರ ದಾವಾನಲ ಲೀಢ ಲೋಕ..." (ಗುರು ಅಷ್ಟಕ) ಎಂಬ ಪ್ರಸಿದ್ಧ ಪ್ರಾರ್ಥನೆಯನ್ನು ಹಾಡುತ್ತಾರೆ. ​  ಪೂಜಾರಿಯು ಭಗವಂತನಿಗೆ ಧೂಪ, ದೀಪ (ನೆಯ್ಯಿ ದೀಪ), ಜಲ, ವಸ್ತ್ರ, ಪುಷ್ಪ ಮತ್ತು ಚಾಮರವನ್ನು ಅರ್ಪಿಸಿ ಆರತಿ ಬೆಳಗುತ್ತಾರೆ. ​ ಆರತಿಯ ನಂತರ ಭಗವಂತನ ರಕ್ಷಣೆಗಾಗಿ "ನಮಸ್ತೇ ನರಸಿಂಹಾಯ......
Recent posts

4128..ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ. ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ. 196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು.

. ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ.   ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ.   196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು.  ಹೊಸಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯಲ್ಲಿದೆ.   ಮೈಸೂರು ಅರಸರ ಜನವಿರೋದಿ ಭೂಕಂದಾಯ, ಸುಂಕದ ವಿರುದ್ದ ಆನಂದಪುರಂ ಹೋಬಳಿಯಲ್ಲಿ ಬ್ಬಹತ್ ರೈತ ಸಮಾವೇಶ ನಡೆಯಿತು.  ಏಪ್ರಿಲ್ 1830ರಲ್ಲಿ ಕೆಳದಿ ಬಿದನೂರು ಸಂಸ್ಥಾನದ ರಾಜನೆಂದು ಬೂದಿ ಬಸಪ್ಪ ನಾಯಕರು ಘೋಷಣೆ ಮಾಡುತ್ತಾರೆ.  ಇತಿಹಾಸದಲ್ಲಿ ಬೂದಿಬಸಪ್ಪನಾಯಕರನ್ನು ದರೋಡೆಕೋರ ಎಂದು ಬರೆದು ಇತಿಹಾಸಕ್ಕೆ ಅಪಚಾರ ಮಾಡಿದ್ದಾರೆ.   ಬೂದಿ ಬಸಪ್ಪ ನಾಯಕ ಯಾರು?... ಅಂತ ಇತಿಹಾಸದ ದಾಖಲೆಗಳಲ್ಲಿ ಹುಡುಕಿದರೆ ಆತ ಶಿಕ್ಷೆಗೆ ಒಳಗಾದ ದರೋಡೆಕೋರ, ಕೆಳದಿ ಅರಸರ ಹಿತೈಷಿ ಜಂಗಮರ ಹತ್ತಿರದ ರಾಜ ಮುದ್ರೆ ಉಂಗುರ ಕದ್ದು , ತಾನು ಕೆಳದಿ ವಂಶಸ್ಥರವನು ಎಂದು ಹೇಳಿಕೊಂಡವ ಎಂದೆಲ್ಲ ಬರೆದಿದ್ದಾರೆ.   ಆದರೆ ಜನಪದದಲ್ಲಿ ಬೂದಿ ಬಸಪ್ಪನಾಯಕರು ನಿಜ ಹೋರಾಟಗಾರರು, ಅವರು ಮೈಸೂರು ಕೃಷ್ಣರಾಜ ಒಡೆಯರ್ III ರ ವಿಪರೀತ ಭೂಕಂದಾಯ ಮತ್ತು ಸುಂಕದ ವಿರುದ್ಧ ನಡೆಸಿದ ರೈತ ಹೋರಾಟ ಕೆಳದಿಬಿದನೂರು ಪ್ರಾಂತ್ಯ ಮಾತ್ರವಲ್ಲ ದೂರದ ಬೆಂಗಳೂರು, ಚಿತ...

4127.ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?... ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.

ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?...   ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.   ಶಿವಮೊಗ್ಗ ಮಾರ್ಗದಿಂದ ಜೋಗ್ ಫಾಲ್ಸ್ ನೋಡಲು ಬರುವ ಪ್ರವಾಸಿಗಳು ಸಾಗರದ ನಂತರ ತಾಳಗುಪ್ಪಗೆ ಹೋದರೆ ಅಲ್ಲಿಂದ ಜೋಗ್ ಜಲಪಾತಕ್ಕೆ ಎರೆಡು ಮಾರ್ಗಗಳಿದೆ ಒಂದು ಕಾರ್ಗಲ್ ಮೂಲಕ ಇನ್ನೊಂದು ಹೊನ್ನಾವರ ಮಾರ್ಗದಲ್ಲಿ ಸಾಗಿ ನೇರವಾಗಿ ಜೋಗ್ ಫಾಲ್ಸ್ ಗೆ ಹೋಗುವುದು.   ನೀವೇನಾದರು ತಾಳಗುಪ್ಪದಿಂದ ಕಾರ್ಗಲ್ ಮಾರ್ಗವಾಗಿ ಸಾಗಿದರೆ ಈ ಜೈನಾ ಗೇಟ್ ಮೂಲಕವೇ ಹೋಗುತ್ತೀರಿ.   ಪ್ರಾಜೆಕ್ಟ್ ಅಧಿಕೃತ ದಾಖಲೆಯಲ್ಲಿ ಈ ಹೆಸರು ಇಲ್ಲ ಆದರೆ ಜನರ ಬಾಯಲ್ಲಿ ಈ ಪ್ರದೇಶ ಚೈನಾ ಗೇಟ್ ಅಂತಾಗಿದೆ. ಇಲಾಖಾ ಉದ್ಯೋಗಿಗಳ ಪ್ರಕಾರ ಇಲ್ಲಿಂದ ಮಹಾತ್ಮಾಗಾಂಧಿ ಪವರ್ ಪ್ಲಾಂಟಿಗೆ ನೀರನ್ನು ಕಾಲುವೆಗೆ ಬಿಡುವ ಗೇಟ್ ಜೈನ್ ಪುಲ್ಲಿಯಿಂದ ಆಪರೇಟ್ ಆಗುವುದರಿಂದ #ಚೈನ್_ಗೇಟ್ ಎಂಬ ಹೆಸರೇ ಈಗಾ ಚೈನಾ ಗೇಟ್ ಆಗಿದೆ ಅಂತಾರೆ.  ಲಿಂಗನಮಕ್ಕಿ ಮೂಲ ನಿವಾಸಿಗಳ ಪ್ರಕಾರ #ಲಿಂಗನಮಕ್ಕಿ ಪ್ರಾಜೆಕ್ಟ್ ಕಾರ್ಮಿಕರಿಗೆ ಸೈನಸ್ ಗ್ಯಾಸ್ ಚೆಂಬರ್ ಮೂಲಕ ಪ್ರಾಜೆಕ್ಟ್ ಪ್ರದೇಶಕ್ಕೆ ಪ್ರವೇಶ ಇದ್ದಿದ್ದರಿಂದ ಈ ಹೆಸರು ಬಂದಿರಬಹುದು ಅನ್ನುತ್ತಾರೆ.      ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆಗಾಗಿ ಮಡೇನೂರು ಅಥವ ಹಿರೇ ಭಾಸ್ಕರ ಡ್ಯಾಮ್ ನಿರ್ಮಾಣ ಮಾಡಿದಾಗ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್ಗಳನ್ನು ಅಳವಡಿಸಲ...

4126.ಕಾಳುಮೆಣಸಿನರಾಣಿ #ಯುದ್ಧದಲ್ಲಿ_ಸೋತು ಬಂದನಕ್ಕೊಳಗಾದಾಗ ... ನಾನು ಬರೆದಿರುವ ರಾಣಿ ಚೆನ್ನ ಬೈರಾದೇವಿ ಪುಸ್ತಕದ ಒಂದು ಅದ್ಯಾಯ ಇಲ್ಲಿದೆ ಒಮ್ಮೆ ಓದಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.

ಕಾಳುಮೆಣಸಿನರಾಣಿ #ಯುದ್ಧದಲ್ಲಿ_ಸೋತು ಬಂದನಕ್ಕೊಳಗಾದಾಗ ...  ನಾನು ಬರೆದಿರುವ ರಾಣಿ ಚೆನ್ನ ಬೈರಾದೇವಿ ಪುಸ್ತಕದ ಒಂದು ಅದ್ಯಾಯ ಇಲ್ಲಿದೆ ಒಮ್ಮೆ ಓದಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.   ಈ ಪುಸ್ತಕಕ್ಕೆ ಸೂಕ್ತ ಶಿರ್ಷಿಕೆ ಇನ್ನೂ ಇಟ್ಟಿಲ್ಲ ಮುಂದಿನ ವರ್ಷ ಮುದ್ರಿಸಬೇಕು, ಈ ಪುಸ್ತಕದಲ್ಲಿ ಇಂತಹ ಅನೇಕ ವಿಶೇಷ ಘಟನೆಗಳ ದಾಖಲಿಸಿದ್ದೇನೆ ಮುಂದೆ ಓದಿ...   ತನ್ನೆರೆಡು ಕೈಗಗಳನ್ನ ತನ್ನ ಸೊಂಟದ ಮೇಲೆ ದೃಢವಾಗಿ ಇರಿಸಿ ಯುದ್ಧದಲ್ಲಿ ಪರಾಭವಗೊಂಡು ಶರಣಾದ ಮಹಾ ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಚಿತ್ರವೇ ಅಂಕೋಲ ತಾಲ್ಲೂಕಿನ ಬಾವಿಕೆರೆಯ ಸಾನದಮನೆಯಲ್ಲಿ ಅವ್ವಿಯರಸಿ ಪ್ರತಿಮೆ ಆಗಿ ಪೂಜಿಸಲ್ಪಡುತ್ತಿದೆ.    ಯುದ್ಧಾನಂತರ ಚೆನ್ನ ಬೈರಾದೇವಿ ಅವರ ಮೇಲಿನ ಅಭಿಮಾನದಿಂದ ಅವರ ಅಭಿಮಾನಿಗಳು ಚಿಕ್ಕ ಚಿಕ್ಕ ಎರಕದ ಮೂರ್ತಿ ಮಾಡಿ ಗುಪ್ತವಾಗಿ ಹಂಚುತ್ತಿದ್ದರಂತೆ.  ರಾಣಿ ಆಡಳಿತ ಮುಗಿದು ಶತಮಾನಗಳಾದರೂ ಈ ರೀತಿ ಎರಕದಲ್ಲಿ ಮೂರ್ತಿ ತಯಾರಿಸಿ ಜನ ವಸತಿ ಪ್ರದೇಶದಲ್ಲಿ ಯಾರೋ ಗುಪ್ತವಾಗಿ ಹಾಕಿ ಹೋಗುತ್ತಿದ್ದರಂತೆ, ಅದನ್ನು ಪ್ರಜೆಗಳು ಜೋಪಾನವಾಗಿ ಕಾಪಾಡಿಕೊಂಡು ತಮ್ಮ ತಮ್ಮ ಮನೆಯಲ್ಲಿ ಅವ್ವಿಯರಸಿ ಎಂದು ಪೂಜಿಸುತ್ತಿದ್ದರಂತೆ.    ಈ ರೀತಿ ರಾಣಿ ಚೆನ್ನ ಬೈರಾದೇವಿ ವಿಗ್ರಹ ಎರಕದಿಂದ ತಯಾರಿಸುವ ಕೆಲಸ ಮಾಡುವವರು ಸಿಕ್ಕಿ ಬಿದ್ದರೆ ಕೆಳದಿ ಸಂಸ್ಥಾನದಲ್ಲಿ ಅವರಿಗೆ ದೊಡ್ಡ ಶಿಕ್ಷೆ ವಿಧಿಸುತ್ತ...

4125.ನಾನು_ಮೊದಲ_ಬಾರಿಗೆಜೋಗ_ಜಲಪಾತ_ನೋಡಿದ್ದು_1977.

ನಾನು_ಮೊದಲ_ಬಾರಿಗೆ ಜೋಗ_ಜಲಪಾತ_ನೋಡಿದ್ದು_1977.   ಅವತ್ತು ಜೋಗ್ ಫಾಲ್ಸ್ ಎದುರು ಅಗಾದ ಪ್ರಮಾಣದ ನೀರು ರಭಸದಲ್ಲಿ ದುಮ್ಮಿಕ್ಕುವ ಶಬ್ದ -ಕಂಪನ ಭಯ ಉಂಟು ಮಾಡಿದ್ದು ಮರೆಯಲಾರೆ ...    ಆ ವರ್ಷ ಲಿಂಗನಮಕ್ಕಿ ಅಣೆಕಟ್ಟಿನ ಎಲ್ಲಾ ಕ್ರಸ್ಟ್ ಗೇಟ್ ಗಳನ್ನು ತೆರೆದು ಅಗಾಧ ಪ್ರಮಾಣದ ನೀರನ್ನು ಹೊರ ಬಿಡಲಾಗಿತ್ತು. ಸಾಗರದ ಅಂದಿನ ಎಲ್ ಬಿ ಕಾಲೇಜಿನ ಬ್ಯಾಡ್ಮಿಂಟನ್ ತಾರೆ ನಮ್ಮೂರಿನ #ಗಣಪತಿಶೇಟ್ ನಮಗೆ ಜೋಗ್ ಫಾಲ್ಸ್ ತೋರಿಸಿದ ಮಿತ್ರ.    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೇರುಸೊಪ್ಪ ಕೊಳ್ಳದಲ್ಲಿ ಜೋಗ್ ಜಲಪಾತವಾಗಿ ಧಮ್ಮಿಕ್ಕುತ್ತದೆ.   ಸಾಗರ ಮತ್ತು ಸಿದ್ದಾಪುರ ತಾಲೂಕಿನ ಎಲ್ಲರೂ ಜೋಗ ಜಲಪಾತ ನೋಡಿದ್ದಾರೆಂದು ಎಲ್ಲರೂ ಭಾವಿಸುತ್ತಾರೆ ಕಾರಣ ಅಷ್ಟು ಸಮೀಪದ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡದೇ ಇರಲು ಹೇಗೆ ಸಾಧ್ಯ? ಎಂಬುದು ಅವರ ಭಾವನೆ.  ಆದರೆ ಸಮೀಪದವರು ಈ ಜೋಗ ಜಲಪಾತ ನೋಡದೇ ಇರುವವರು ಅನೇಕರಿದ್ದಾರೆ,‌ ನಾನು ನನ್ನ 12ನೇ ವಯಸ್ಸಿನ ತನಕ ಜೋಗ ಜಲಪಾತ ನೋಡಿರಲಿಲ್ಲ.    ನಾನು 8 ನೇ ತರಗತಿಗೆ ಸಾಗರ ಮುನ್ಸಿಪ್ ಹೈಸ್ಕೂಲ್ ಸೇರಿದಾಗ ನಿತ್ಯ ಬೆಳಿಗ್ಗೆ ರೈಲಿನಲ್ಲಿ ಸಾಗರಕ್ಕೆ ಹೋಗಿ ಕ್ಲಾಸ್ ಮುಗಿಸಿ ಸಂಜೆ ರೈಲಿನಲ್ಲಿ ವಾಪಾಸು ಬರುವ ಅನೇಕ ನಮ್ಮ ಊರಿನ ವಿದ್ಯಾರ್ಥಿ ವೃಂದದೊಂದಿಗೆ ನನ್ನ ಪಯಣ. ...

4124.ಭಾಗ_14_ಘಟ್ಟಕ್ಕೆ_ಕರಾವಳಿಗರ_ವಲಸೆ.ಗೊರೂರು_ರಾಮಸ್ವಾಮಿ_ಅಯ್ಯಂಗಾರ್_ಸಾಹಿತ್ಯದಲ್ಲಿ.

ಭಾಗ_14_ಘಟ್ಟಕ್ಕೆ_ಕರಾವಳಿಗರ_ವಲಸೆ. ಗೊರೂರು_ರಾಮಸ್ವಾಮಿ_ಅಯ್ಯಂಗಾರ್_ಸಾಹಿತ್ಯದಲ್ಲಿ.  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಪ್ರಮುಖವಾಗಿ ಹಳೇ ಮೈಸೂರು ಭಾಗದ ಅದರಲ್ಲೂ ಹೇಮಾವತಿ ನದಿತೀರದ #ಗೊರೂರು ಗ್ರಾಮದ ಮುಗ್ಧ ಗ್ರಾಮೀಣ ಬದುಕನ್ನು ಚಿತ್ರಿಸುತ್ತದೆ.  ಕುವೆಂಪು ಅವರ ಮಲೆನಾಡು ಅಥವಾ ಭೈರಪ್ಪನವರ ತಾತ್ವಿಕ ಲೋಕಕ್ಕೆ ಹೋಲಿಸಿದರೆ ಗೊರೂರರ ಕೃತಿಗಳಲ್ಲಿ ಕರಾವಳಿ ವಲಸೆಯ Coastal Migration ನೇರ ಅಥವಾ ಬೃಹತ್ ಚಿತ್ರಣಗಳು ಸಿಗುವುದು ತೀರಾ ವಿರಳ.   ​ಆದರೆ ಅವರ ಹಾಸ್ಯಪ್ರಧಾನ ಪ್ರಬಂಧಗಳು, ರೇಖಾಚಿತ್ರಗಳು ಮತ್ತು 'ಮೇಲೋಗರ', 'ನಮ್ಮ ನಮ್ಮಲ್ಲೇ', 'ಭೂತಯ್ಯನ ಮಗ ಅಯ್ಯು' ನಂತಹ ಕಥಾ ಸಂಕಲನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಳನಾಡಿನ ಹಳ್ಳಿಗಳಿಗೆ ಕರಾವಳಿಯಿಂದ ಆಗಮಿಸುತ್ತಿದ್ದ ಜನರ ಸಣ್ಣಪುಟ್ಟ ಉಲ್ಲೇಖಗಳು ಒಂದು ವಿಶಿಷ್ಟ ಆಯಾಮದಲ್ಲಿ ಮೂಡಿಬಂದಿವೆ. ​ 'ಅಡುಗೆ ಭಟ್ಟರು' ಮತ್ತು 'ಹೋಟೆಲ್' ವಲಸೆ ​ಗೊರೂರರು ಚಿತ್ರಿಸುವ ಹಳೇ ಮೈಸೂರು ಭಾಗದ ಅಗ್ರಹಾರಗಳು ಮತ್ತು ಸಾಂಪ್ರದಾಯಿಕ ಹಳ್ಳಿಗಳಿಗೆ ಕರಾವಳಿ ದಕ್ಷಿಣ ಕನ್ನಡ ಭಾಗದ ಬ್ರಾಹ್ಮಣರು ಅಡುಗೆ ಭಟ್ಟರಾಗಿ ಅಥವಾ ಉಪಾಧ್ಯಾಯರಾಗಿ ವಲಸೆ ಬರುತ್ತಿದ್ದದ್ದನ್ನು ಅವರು ಹಾಸ್ಯದ ಹಿನ್ನೆಲೆಯಲ್ಲಿ ದಾಖಲಿಸಿದ್ದಾರೆ.   ​ಒಳನಾಡಿನ ಮದುವೆ, ಮುಂಜಿ ಅಥವಾ ಧಾರ್ಮಿಕ ಸಮಾರಂಭಗಳಲ್ಲಿ ಕರಾವಳಿ ಶೈಲಿಯ ಅಡುಗೆಯವರ ನುರಿತ ಕೈಚಳಕ ಮ...

4123.ಗೋಕಾಕ್_ಚಳವಳಿಯಲ್ಲಿಆನಂದಪುರ೦ಗೆ_ರಾಜಕುಮಾರ್_ಸಿನಿತಂಡ ಆ_ದಿನ_3_ಜುಲೈ_1982.

ಗೋಕಾಕ್_ಚಳವಳಿಯಲ್ಲಿ ಆನಂದಪುರ೦ಗೆ_ರಾಜಕುಮಾರ್_ಸಿನಿತಂಡ  ಆ_ದಿನ_3_ಜುಲೈ_1982.   44 ವರ್ಷದ ಹಿಂದೆ 3 -ಜುಲೈ-1982ರಂದು ಕನ್ನಡ ಚಲನ ಚಿತ್ರರಂಗದ ದಂತ ಕಥೆಯಾದ ಡಾಕ್ಟರ್ ರಾಜಕುಮಾರ್ ಗೋಕಾಕ್ ಚಳವಳಿಯಲ್ಲಿ ಆನಂದಪುರಂಗೆ ಬಂದ ಸಂದರ್ಭ ಇದು. ಆನಂದಪುರಂನ ಈ ಕಾಯ೯ಕ್ರಮಕ್ಕೆ ಆಗಿನ ರಾಜಕುಮಾರ್ ಆಭಿಮಾನಿ ಸಂಘಕ್ಕೆ ಆದ ವೆಚ್ಚ ಕೇವಲ 43 ರೂಪಾಯಿ!?... ಅವತ್ತು ರಾಜಕುಮಾರರನ್ನು ನೋಡಲು ಸೇರಿದ ಜನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ. ಅವತ್ತು ಶಿವಮೊಗ್ಗ ಜಿಲ್ಲಾ ರಾಜಕುಮಾರ್ ಅಭಿಮಾನಿ ಸಂಘದ ಗೌರವಾಧ್ಯಕ್ಷರು ಶಿವಮೊಗ್ಗದ #ನೆಲ್ಲಿಲಾಡ್ಜ್_ವಿಠಲಮೂರ್ತಿ. ಜಿಲ್ಲಾಧ್ಯಕ್ಷರು ಶಿವಮೊಗ್ಗದ  #ಶ್ರೀನಿದಿ_ಟೆಕ್ಸಟೈಲ್ಸ್_ಶ್ರೀಧರಮೂರ್ತಿ. ಸಾಗರ ತಾಲ್ಲೂಕ್ ಅಧ್ಯಕ್ಷರು ಸಾಗರದ #SRS_ಮಿಲ್_ಮಹೇಶ್_ಮೂರ್ತಿ. #ಆನಂದಪುರಂನ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ನನ್ನ ಅಣ್ಣ #ಕೆ_ನಾಗರಾಜ್.  ಆನ೦ದಪುರಂ ಇತಿಹಾಸ ಪುಸ್ತಕದಲ್ಲಿ ಕನ್ನಡದ ಪ್ರಖ್ಯಾತ ಚಲನಚಿತ್ರ ನಟ ಡಾ.ರಾಜ್ ಕುಮಾರ್ ಎರೆಡು ಬಾರಿ ದಾಖಲಾಗುತ್ತಾರೆ.    ಒಂದು ಗೋಕಾಕ್ ಚಳವಳಿಯ ಭಾಗವಾಗಿ ಇನ್ನೊಂದು ಅವರ ಆಕಸ್ಮಿಕ ಚಲನಚಿತ್ರದ ಚಿತ್ರಿಕರಣದಲ್ಲಿ.  1980 ರ ದಶಕದಲ್ಲಿ ಡಾ.ರಾಜ್ ಕುಮಾರ್ ಕರ್ನಾಟಕದ ಆರಾಧ್ಯ ದೈವವೇ ಈ ಸಂದರ್ಭದಲ್ಲಿ ಅಂದರೆ 5- ಜುಲೈ -1980 ರಲ್ಲಿ ವಿ.ಕೃ.ಗೋಕಾಕರ ಅಧ್ಯಕ್ಷತೆಯಲ್ಲಿ ಕನಾ೯ಟಕ ಸಕಾ೯ರದ ಮುಖ್ಯಮಂತ್ರಿ ಗುಂಡೂರಾಯರು ಶಾ...