ಈ_ವರ್ಷ_ಲಿಂಗನಮಕ್ಕಿ_ಡ್ಯಾಮು_ತುಂಬುತ್ತಾ? ... #ಏನಿದು_ಎಲ್_ನೀನೋ_ಎಪೆಕ್ಟ್.... #ಏನಿದು_ಲಾ_ನೀನೋ_ಎಪೆಕ್ಟ್ ... ಇದಕ್ಕೂ ಭಾರತದ ಹವಾಮಾನಕ್ಕೂ ಒಂದೊಂಕ್ಕೊಂದು ಸಂಬಂಧ ಇದೆ. 2026 ಜೂನ್ 16 ಬಂದರೂ ಬಿರು ಬಿಸಿಲಿನ ದಗೆ ಇದೆ ಯಾಕೆ?... ಎಂಬ ಪ್ರಶ್ನೆಗೆ ಇದು ಎಲ್ ನೀನೋ ಎಪೆಕ್ಟ್ ಆದ್ದರಿಂದ ಈ ವರ್ಷ ಮುಂಗಾರು ಕಡಿಮೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿನ ಶರಾವತಿ ಕ್ಯಾಚ್ಮೆಂಟ್ ಏರಿಯಾ ಮತ್ತು ಈ ನದಿ ಹರಿದು ಅರಬ್ಬಿ ಸಮುದ್ರ ಸೇರುವ ಹೊನ್ನಾವರ ಭಾಗದ ಜನರು ಮುಂಗಾರು ಕೇರಳ ತಲುಪಿತು ಎಂಬ ಸುದ್ದಿ ಕೇಳಿದಾಗಲೇ ಅವರವರೇ ಪರಸ್ಪರ ಎದುರಾದಾಗ ಪ್ರಶ್ನಿಸಿಕೊಳ್ಳುವುದೇನೆಂದರೆ ಈ ವರ್ಷ ಲಿಂಗನಮಕ್ಕಿ ಆಣೆ ಕಟ್ಟು ತುಂಬುತ್ತದಾ? ಎಂದೇ ಮಾತು - ಕುಶಲೋಪರಿ ಪ್ರಾರಂಭ ಮಾಡುತ್ತಾರೆ. #ಎಲ್_ನಿನೊ (El Niño) ಎಂಬುದು ಪೆಸಿಫಿಕ್ (ಶಾಂತ) ಮಹಾಸಾಗರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ಒಂದು ಜಾಗತಿಕ ಹವಾಮಾನ ವಿದ್ಯಮಾನವಾಗಿದೆ. ಇದು ಪ್ರಪಂಚದಾದ್ಯಂತದ ಹವಾಮಾನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಭಾರತದಲ್ಲಿ ಮುಖ್ಯವಾಗಿ ಬರಗಾಲ ಹಾಗೂ ಮುಂಗಾರು ಮಳೆಯ ಕೊರತೆಗೆ ಕಾರಣವಾಗುತ್ತದೆ. ಸ್ಪ್ಯಾನಿಷ್ ಭಾಷೆಯಲ್ಲಿ 'ಎಲ್ ನಿನೊ' ಎಂದರೆ "ಸಣ್ಣ ಹುಡುಗ" ಅಥವಾ "ಬಾಲ ಯೇಸು" ಎಂದರ್ಥ. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ (ಡಿಸೆಂಬರ್ ...
ಭಾಗ_4_ಘಟ್ಟಕ್ಕೆ_ಕರಾವಳಿಗರ_ವಲಸೆ. ಕುವೆಂಪು ಸಾಹಿತ್ಯದಲ್ಲಿ ಕರಾವಳಿ ವಲಸಿಗರ ಪಾತ್ರಗಳು ಅದರಲ್ಲಿ ಬ್ಯಾರಿ ಮುಸ್ಲಿಂ ಮತ್ತು ತುಳುವ ಕೃಷಿ ಕಾರ್ಮಿಕರ ಉಲ್ಲೇಖಗಳು. ಕರಾವಳಿಯಿಂದ ಘಟ್ಟಕ್ಕೆ ನಡೆಯುತ್ತಿದ್ದ ಈ ವಲಸೆ ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅಧ್ಯಾಯವಾಗಿದೆ. ನಿಮ್ಮ ಪೂರ್ವಿಕರು ಈ ರೀತಿ ವಲಸೆ ಮಾಡಿದ್ದರಾ?....ಹಾಗಿದ್ದರೆ ನೀವು ಈ ಕರಾವಳಿ ಜನರ ವಲಸೆಯ ಸರಣಿ ಲೇಖನಗಳನ್ನು ನಿಮ್ಮ ಕುಟುಂಬದಲ್ಲಿ ಶೇರ್ ಮಾಡಿ ಈ ಮೂಲಕ ಅವರಿಗೆ ನಿಮ್ಮ ಪೂರ್ವಿಕರ ಆ ದಿನಗಳ ಕಷ್ಟದ ದಿನಗಳನ್ನ ನೆನಪು ಮಾಡಿ ಕೊಡಿ ಅದು ದಾಖಲಾಗಿ ಉಳಿಯಲಿ. ತೀರ್ಥಹಳ್ಳಿಯ ಹಳೆಯ ಆಗುಂಬೆ ಸ್ಟಾಂಡ್ ಚಿತ್ರ ಈ ಲೇಖನದ ಜೊತೆ ಲಗತ್ತಿಸಿದೆ,ಕುವೆಂಪು ಅವರೂ ಕೆಳಗೆ ಆಗುಂಬೆ ಮೂಲಕ ಘಟ್ಟ ಇಳಿಯುವ ರಸ್ತೆಯನ್ನ #ಘಟ್ಟದ_ಕೆಳಗಿನ_ರಸ್ತೆ ಅಂತ ಸಾಹಿತ್ಯದಲ್ಲಿ ಬರೆದಿದ್ದಾರೆ. #ಕುವೆಂಪು,ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಸಾಹಿತ್ಯವು ಪ್ರಮುಖವಾಗಿ ಮಲೆನಾಡಿನ ಜನಜೀವನ, ಸಂಸ್ಕೃತಿ ಮತ್ತು ಅಲ್ಲಿನ ಪರಿಸರವನ್ನು ಚಿತ್ರಿಸುತ್ತದೆ ಆದರೆ ಅವರ ಕಾದಂಬರಿಗಳಾದ #ಕಾನೂರು_ಹೆಗ್ಗಡಿತಿ ಮತ್ತು #ಮಲೆಗಳಲ್ಲಿ_ಮದುಮಗಳು ಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಕರಾವಳಿ ವಲಸೆಯ ಅತ್ಯಂತ ಮಹತ್ವದ ಉಲ್ಲೇಖಗಳು ಮತ್ತು ಚಿತ್ರಣಗಳು ಸಿಗುತ್ತವೆ. ...