Skip to main content

Posts

4033.ನೇರಳೆ ಹಣ್ಣಿನಿಂದ ಜಂಬೂದ್ವೀಪ ಆಯಿತಾ? ...

ನೇರಳೇ_ಹಣ್ಣಿನಿಂದ_ಜಂಬೂದ್ವೀಪ_ಎಂಬ_ಭಾರತ_ದೇಶದ_ಮೂಲ_ಹೆಸರು.   ನಾವು ವಾಸಿಸುತ್ತಿರುವ ಈ ಪವಿತ್ರ ಭೂಮಿಗೆ ಅತ್ಯಂತ ಪ್ರಾಚೀನ ಕಾಲದಲ್ಲಿ ಹೆಸರು ತಂದುಕೊಟ್ಟಿದ್ದು ಇದೇ ನೇರಳೆ ಹಣ್ಣಿನ ಮರಗಳು.   ಇದು ಪ್ರಕೃತಿ ಮತ್ತು ಪರಿಸರಕ್ಕೆ ನಮ್ಮ ಪೂರ್ವಜರು ನೀಡುತ್ತಿದ್ದ ಮಹತ್ವಕ್ಕೆ ಈ ಹೆಸರೇ ಅತಿ ದೊಡ್ಡ ಸಾಕ್ಷಿ. ಪ್ರಾಚೀನ ಭಾರತೀಯ ಇತಿಹಾಸ, ಪುರಾಣ ಮತ್ತು ಭೂಗೋಳ ಶಾಸ್ತ್ರದಲ್ಲಿ ಭಾರತ ಉಪಖಂಡವನ್ನು 'ಜಂಬೂದ್ವೀಪ' ಎಂದು ಕರೆಯಲು ಮುಖ್ಯ ಕಾರಣ ನೇರಳೆ ಮರಗಳು.    ​ಸಂಸ್ಕೃತದಲ್ಲಿ #ಜಂಬೂ ಎಂದರೆ ನೇರಳೆ ಹಣ್ಣು ಮತ್ತು #ದ್ವೀಪ ಎಂದರೆ ನೀರು ಅಥವಾ ಸಮುದ್ರದಿಂದ ಆವೃತವಾದ ಭೂಭಾಗ ಎಂದರ್ಥ.    ಈ ಹೆಸರು ಬರಲು ಪ್ರಮುಖ ಕಾರಣಗಳು ​ಪ್ರಾಚೀನ ಕಾಲದಲ್ಲಿ ಈ ಭೂಪ್ರದೇಶದಲ್ಲಿ ನೇರಳೆ ಮರಗಳು ಅತ್ಯಂತ ವ್ಯಾಪಕವಾಗಿ ಮತ್ತು ದಟ್ಟವಾಗಿ ಬೆಳೆಯುತ್ತಿದ್ದವು.   ಇಲ್ಲಿನ ಪರಿಸರ, ಮಣ್ಣು ಮತ್ತು ಹವಾಮಾನವು ನೇರಳೆ ಮರಗಳ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿತ್ತು.     ಒಂದು ಪ್ರದೇಶದ ಪ್ರಮುಖ ನೈಸರ್ಗಿಕ ವೈಶಿಷ್ಟ್ಯವನ್ನು ಆಧರಿಸಿ ಹೆಸರು ಇಡುವ ಪದ್ಧತಿಯಂತೆ ಈ ಭೂಭಾಗಕ್ಕೆ 'ಜಂಬೂದ್ವೀಪ' (ನೇರಳೆ ಮರಗಳ ಭೂಮಿ) ಎಂಬ ಹೆಸರು ಬಂದಿತು. ​  ವಿಷ್ಣು ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ​ಹಿಂದೂ ಪುರಾಣಗಳ ಪ್ರಕಾರ ಜಂಬೂದ್ವೀಪದ ಮಧ್ಯಭಾಗದಲ್ಲಿ ಇಂದಿನ ಹಿಮಾಲಯ ಅಥವಾ ಮೇರು ಪರ್ವತದ ಪ್ರ...
Recent posts

4032. ಇಡ್ಲಿ ದೋಸಾ ಬ್ಯಾಟರ್ ಉದ್ಯಮದ ಯಶಸ್ಸಿನ ಕಥೆ.

ದಿಡೀರ್_ಇಡ್ಲಿ_ದೋಸೆ_ಹಿಟ್ಟು_ಎಷ್ಟು_ಸಲೀಸು?... #Idli_Dosa_Batter ನಿಮಗೆ ನಿಮ್ಮ ಮನೆಯಲ್ಲಿ ತಯಾರಿಸಿದ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ಅಥವ ಈ ರೆಡಿಮೇಡ್ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ತಿಳಿಸಿ ...  ಬೆಂಗಳೂರಿಗೆ ಬಂದು ನೋಡಿ ....ಮಹಾನಗರಗಳಲ್ಲಿ ಇಡ್ಲಿ- ದೋಸೆ ಎಲ್ಲಾ ಇಲ್ಲಿ ಕಷ್ಟವಿಲ್ಲ ಈಗ.   ನಾವು ಮನೆಗಳಲ್ಲಿ ಇಡ್ಲಿ ದೋಸೆ ಮಾಡಲು ಹಿಂದಿನ ದಿನವೇ ಕೆಲವು ಗಂಟೆ ಕಾಲ ಅಕ್ಕಿ - ಉದ್ದಿನ ಬೇಳೆ ನೆನೆಸಿ ನಂತರ ರುಬ್ಬಿ ಅದು ಹುದುಗಿ ಬರಲು ಮುಚ್ಚಿ ಇಟ್ಟು ಮರು ದಿನ ಇಡ್ಲಿ- ದೋಸೆ ಮಾಡಬೇಕು ಇದು ಹೆಚ್ಚು ಶ್ರಮ ಮತ್ತು ಹೆಚ್ಚು ಸಮಯ ಕೇಳುವ ಕೆಲಸ.    ಆದರೆ ಈಗ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಸಿದ್ಧ ಸಂಸ್ಥೆಗಳು ಆರೋಗ್ಯಕರವಾಗಿ ತಮ್ಮ ಆಹಾರ ಉದ್ಯಮದಲ್ಲಿ ಇಡ್ಲಿ- ದೋಸೆ ಹಿಟ್ಟು  ತಯಾರಿಸಿ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದೆ.   ಇದರಿಂದ ಮಹಾನಗರಗಳಲ್ಲಿ ಬೇಕೆಂದಾಗಲೆಲ್ಲ ಈ ದಿಡೀರ್ ಇಡ್ಲಿ/ದೋಸೆ ಹಿಟ್ಟು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಕೆಲವೇ ನಿಮಿಷದಲ್ಲಿ ಮನೆಗೆ ತಲುಪುತ್ತದೆ ತಕ್ಷಣ ದೋಸೆ / ಇಡ್ಲಿ ತಯಾರಿಸಿ ತಿನ್ನ ಬಹುದು.    ನಿತ್ಯ ಬೆಳಿಗ್ಗೆ ಹಾಲು ತರಕಾರಿ ಮಾರಾಟ ಮಾಡುವ ಬೀದಿ ವ್ಯಾಪಾರಸ್ಥರೂ ಈ ದಿಡೀರ್ ಇಡ್ಲಿ /ದೋಸೆ ಹಿಟ್ಟು ಮಾರಾಟ ಮಾಡುತ್ತಾರೆ ಇದರಿಂದ ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ತಮ್ಮ ಮನೆಯಲ್ಲಿ ಇಡ್ಲಿ/ದೋಸೆ ತಯಾರಿ ಈಗ ಸುಲಭವಾಗಿದೆ. ...

4031. ಧಾರ್ಮಿಕ ಪ್ರವಾಸೋದ್ಯಮದ ಸರ್ಕ್ಯೂಟ್ ಮಾಡಬಹುದು

ಸರ್ಕಾರ_ಈ_ಧಾರ್ಮಿಕ_ಯಾತ್ರೆಯ #ಪ್ರವಾಸೋದ್ಯಮದ_ಸರ್ಕ್ಯೂಟ್_ಮಾಡಬಹುದಾ? ..  ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಈ ಮೂರು ಆಂಜನೇಯರ ಶಕ್ತಿ ಪೀಠಗಳ ದರ್ಶನ ಯಾತ್ರೆ ಅಧಿಕಮಾಸದಲ್ಲಿ ನಡೆಯುತ್ತದೆ ಗೊತ್ತಾ? ....   #ಹಾವೇರಿ_ಜಿಲ್ಲೆಯ #ಹಿರೇಕೆರೂರು ತಾಲೂಕಿನ #ಸಾತೇನಹಳ್ಳಿಯ_ಶಾಂತೇಶ, ಹಾವೇರಿ ಜಿಲ್ಲೆಯ #ಬ್ಯಾಡಗಿ ತಾಲ್ಲೂಕಿನ #ಕದರಮುಂಡಲಗಿಯ_ಕಾಂತೇಶ ಹಾಗೂ #ಶಿವಮೊಗ್ಗಜಿಲ್ಲೆಯ #ಶಿಕಾರಿಪುರದ_ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ದರ್ಶನ ಪಡೆದರೆ #ಕಾಶಿಯಾತ್ರೆಯಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.   ಈ ವರ್ಷ ಇಲ್ಲಿಗೆ ಆಗಮಿಸಿದ ಭಕ್ತರ ಸಂಖ್ಯೆ ಹಿಂದಿನ ಎಲ್ಲಾ ದಾಖಲೆಗಳನ್ನ ಮುರಿದಿದೆ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚಾಗಲಿದೆ ಆದ್ದರಿಂದ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸುಲಭ ದೇವರ ದರ್ಶನದ ವ್ಯವಸ್ಥೆಗೆ ಮುಂದಾಗಬೇಕು.   ಹಿಂದೂ ಪಂಚಾಂಗದಲ್ಲಿ ಅಧಿಕ ಮಾಸ ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರಕ್ಕೆ ಕೊನೆಗೊಳ್ಳುತ್ತದೆ.   ಈ ವರ್ಷದ ಈ ಯಾತ್ರೆ ಮಾಡುವವರಿಗೆ ಮುಂದಿನ ಶನಿವಾರ ದಿನಾಂಕ 13 - ಜೂನ್ -2026 ಈ ಸಾಲಿನ ಅಧಿಕ ಮಾಸದ ಕೊನೆಯ ಪವಿತ್ರ ಶನಿವಾರ ಆಗಿದೆ ಇದು ಸಾಧ್ಯವಾಗದಿದ್ದರೆ #ಮುಂದಿನ_ಅಧಿಕ_ಮಾಸಕ್ಕೆ_ಮೂರು_ವರ್ಷ_ಕಾಯಬೇಕು. ...

4030.ರಾಹುಲ್ ಗಾಂಧಿ ಕುರ್ತಾ ಪೈಜಾಮನಿಂದ ಟೀ ಶರ್ಟ್ ಪ್ಯಾಂಟಿಗೆ ಬದಲಾಗಲು ಕಾರಣ

ರಾಹುಲ್_ಗಾಂಧಿ_ಯಾಕೆ_ಯಾವಾಗಲೂ_ಬಿಳಿ_ಟೀಶರ್ಟ್_ಧರಿಸುತ್ತಾರೆ?...   ಭಾರತೀಯ ರಾಜಕಾರಣಿಗಳ ಡ್ರೆಸ್ ಕೋಡ್ ಬದಲಾಗುವ ಸೂಚನೆಯಾ?...    ರಾಜಕಾರಣಿಗಳ ಡ್ರೆಸ್ ಕುರ್ತಾ ಪೈಜಾಮ ಅವರು ಧರಿಸುವುದಿಲ್ಲ ಏಕೆ?...   ವಿಸುಯಲ್ ಬ್ರಾಂಡಿಂಗ್?.. ಡಿಸಿಷನ್ ಪ್ಯಾಟಿಗೊ?... ಕಾರಣವಾ? ...   ಸಾಮಾನ್ಯವಾಗಿ ಭಾರತೀಯ ರಾಜಕಾರಣಿಗಳ ವೇಷ ಭೂಷಣಗಳು ಖಾದಿಯ ಕುರ್ತಾ ಪೈಜಾಮಗಳು ಆದರೆ ರಾಹುಲ್ ಗಾಂಧಿ ಭಾರತ್- ಜೋಡೋ ಯಾತ್ರೆಯಿಂದ ಬಿಳಿ ಟೀ -ಶರ್ಟ್ ಮತ್ತು ತಿಳಿಬೂದು, ಕಾಕಿ ಅಥವ ಕಪ್ಪು ಫ್ಯಾಂಟ್ ಗೆ ಬದಲಾಗಿದ್ದು ಯಾಕೆ?...   ಇಂತಹ ಪ್ರಶ್ನೆಗಳು ಭಾರತೀಯರಲ್ಲಿ ಮೂಡಿರುವುದು ಸಹಜ ಆದರೆ ಈ ಪ್ರಶ್ನೆಗಳಿಗೆ ನೇರ ಉತ್ತರ ಅವರಿಂದ ಇಲ್ಲವಾದರೂ ಇದಕ್ಕೆ ಕಾರಣ ಏನು ಎನ್ನುವುದಕ್ಕೆ ಉತ್ತರ ಇಲ್ಲಿದೆ ಓದಿ.   ರಾಹುಲ್ ಗಾಂಧಿ ಅವರು ಪ್ರಚಾರದ ಸಮಯದಲ್ಲಿ ವಿಶೇಷವಾಗಿ ತಮ್ಮ ಸುದೀರ್ಘ ಪಾದಯಾತ್ರೆಗಳ ದಿನಗಳಿಂದಲೂ ಒಂದೇ ಬಣ್ಣದ ಬಿಳಿ ಟಿ-ಶರ್ಟ್ ಮತ್ತು ತಿಳಿ ಬೂದು/ಬಿಳಿ ಪ್ಯಾಂಟ್  ಧರಿಸುವುದರ ಹಿಂದೆ ಕೆಲವು ಪ್ರಮುಖ ರಾಜಕೀಯ, ವೈಯಕ್ತಿಕ ಮತ್ತು ಕಾರ್ಯತಂತ್ರದ ಕಾರಣಗಳಿವೆ ಅವುಗಳ ವಿವರ ಇಲ್ಲಿದೆ. ​  ರಾಜಕೀಯ ಸಂದೇಶ ಮತ್ತು ಸರಳತೆಯ ಸಂಕೇತ ಏನೆಂದರೆ... ​ಸಾಮಾನ್ಯ ಜನರೊಂದಿಗೆ ಬೆರೆಯಲು ದುಬಾರಿ ರಾಜಕೀಯ ಉಡುಪುಗಳು ಅಥವಾ ಜರಿ ಕುರ್ತಾಗಳ ಬದಲಿಗೆ ಕೇವಲ ಒಂದು ಸಾಧಾರಣ ಬಿಳಿ ಟಿ-ಶರ್ಟ್ ಧರಿಸುವುದರಿಂದ...

4029. ಕೆಳದಿ ಮತ್ತು ಗೇರುಸೊಪ್ಪೆ ಸಂಸ್ಥಾನ

ಪ್ರಸನ್ನ_ಸಂತೆಕಡೂರು. #ವಿಜ್ಞಾನಿ_ಸಾಹಿತಿ_ಕನ್ನಡಿಗ.  ಗಜಾನನ ಶರ್ಮರು ಬರೆದ ಚೆನ್ನಬೈರಾದೇವಿ ಕಾದಂಬರಿ ಓದಿದ್ದೀರಾ? .... ಈ ರಾಣಿ ಬಗ್ಗೆ ಅವಳ ಜೀವನದ ಬಗ್ಗೆ ಕನ್ನಡಿಗರಿಗೆ ತಿಳಿದದ್ದು ತೀರಾ ಕಡಿಮೆಯೇ. ಈ ಕಾದಂಬರಿಯ ಮೂಲಕ  ರಾಣಿ ಚೆನ್ನಭೈರಾದೇವಿಯ ಹುಟ್ಟು, ಹೋರಾಟ, ಸಲ್ಲೇಖನ ಎಲ್ಲದರ ಬಗ್ಗೆಯೂ ತಿಳಿಯುತ್ತದೆ.   ಚೆನ್ನಭೈರಾದೇವಿ ಸಲ್ಲೇಖನ ಕೈಗೊಂಡು ದೇಹ ತ್ಯಾಗ ಮಾಡಿದ ಮೇಲೂ ಇಕ್ಕೇರಿ ಸಮೀಪದ ಹಿಂದೆ ಅದೇ ಚೆನ್ನಭೈರಾದೇವಿಗೆ ಸೇರಿದ #ಆವಿನಹಳ್ಳಿಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಿಸಿ ಆ ಸಮಾಧಿಯ ಮೇಲೆ #ನಿಶಿಧಿ_ಮಂಟಪವನ್ನು ಸ್ಥಾಪಿಸುತ್ತಾನೆ.   ಚೆನ್ನಬೈರಾದೇವಿ ಕಾದಂಬರಿ ವಿಮರ್ಶೆಯಲ್ಲಿ ಡಾ. ಪ್ರಸನ್ನ  ಸಂತೆಕಡೂರು ನಮ್ಮ ಸೀಮೆಯ ಎರೆಡು ರಾಜಮನೆತನಗಳಾದ #ಕೆಳದಿ ಮತ್ತು #ಗೇರುಸೊಪ್ಪೆ ಇತಿಹಾಸದ ಬಗ್ಗೆ ಇವರಿಗೆ ಇರುವ ಅಪಾರವಾದ  ಜ್ಞಾನ ತಿಳಿದು ಆಶ್ಚರ್ಯ ಆಯಿತು.    ಇವರು #ಗಜಾನನಶರ್ಮಾರು ಬರೆದ  #ಚೆನ್ನಬೈರಾದೇವಿ ಪುಸ್ತಕದ ವಿಮರ್ಶೆ ಒಮ್ಮೆ ನೋಡಿ ಇದನ್ನು ಓದಿದರೆ ಕೆಳದಿ ಮತ್ತು ಗೇರುಸೊಪ್ಟೆ  ಸಂಸ್ಥಾನದ ಈ ವರೆಗೆ ಪ್ರಕಟನೆಗೊಂಡ ಎಲ್ಲಾ ಪುಸ್ತಕಗಳ ಸಾರ ತಿಳಿಯುತ್ತದೆ.   ಪ್ರಸನ್ನಸಂತೆಕಡೂರು ನಮ್ಮ ಶಿವಮೊಗ್ಗ ಜಿಲ್ಲೆಯವರು, ಅಮೇರಿಕಾದಲ್ಲಿ ನೆಲೆಸಿ ಅಲ್ಲಿ ಸೇವೆ ಸಲ್ಲಿಸಿ ಈಗ ಮೈಸೂರಿನ JSS ಮೆಡಿಕಲ್ ಕಾಲೇಜ್ ನಲ್ಲಿ ಬಯೋಕೆಮಿಸ್ಟ್ರಿ ಪ್...

4028. ಆನಂದಪುರಂ ರೈಲ್ವೆ ಸ್ಟೇಷನ್ ವಡೆ ವಾಸಣ್ಣ

ಆನಂದಪುರಂ_ರೈಲ್ವೆಸ್ಟೇಶನ್_ವಡೆ_ವಾಸಣ್ಣ  ಆನಂದಪುರಂ ರೈಲು ನಿಲ್ದಾಣದ ಹೆಸರು ಪ್ರಸಿದ್ದಿಗೆ ಬಂದಿದ್ದೇ ವಾಸಣ್ಣ ತಯಾರಿಸುತ್ತಿದ್ದ ಬಿಸಿ ಬಿಸಿ ಗರಿ ಗರಿ ಉದ್ದಿನ ವಡೆಯಿಂದ.  ಖ್ಯಾತ ಚಲನಚಿತ್ರ ನಟ ಡಾಕ್ಟರ್ #ರಾಜಕುಮಾರ್, ಮುಖ್ಯಮಂತ್ರಿ #ರಾಮಕೃಷ್ಣಹೆಗಡೆ ಕೂಡ ವಾಸಣ್ಣರ ಉದ್ದಿನ ವಡೆ ಸವಿದವರು ಈ ಮಾರ್ಗದಲ್ಲಿ ಆಗಮಿಸುವ ಎಲ್ಲಾ ಸೆಲೆಬ್ರಿಟಿಗಳು -ಜನ ಸಾಮಾನ್ಯರೂ ವಾಸಣ್ಣನ ರೈಲ್ವೆ ಕ್ಯಾಂಟೀನ್ ನ ಉದ್ದಿನ ವಡೆಗೆ ಫಿದಾ ಆಗಿದ್ದರು.    ವಾಸಣ್ಣ ದಂಪತಿಗಳು ಡಬಲ್ ಘೋಡಾ ಬ್ರಾಂಡಿನ ಉತ್ಕೃಷ್ಟ ಉದ್ದಿನ ಬೇಳೆ ನೆನೆಸಿ ನಂತರ ಅದನ್ನು ತಿರುವ ಕಲ್ಲಿನಲ್ಲಿ ಕೈಯಲ್ಲಿ ಅರೆದು ಕಟ್ಟಿಗೆ ಒಲೆಯಲ್ಲಿ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ಕರಿದು ಮುತ್ತುಗದ ಎಲೆಯಲ್ಲಿ ಹಾಕಿ ಜೊತೆಗೆ ಕಾಯಿ ಚಟ್ನಿ ಸುರಿದು ಕೊಡುತ್ತಿದ್ದರು.  ಆ ಕಾಲದಲ್ಲಿ ಗ್ರೈಂಡರ್, LPG ಗ್ಯಾಸ್ ಸ್ಟವ್ ನಮ್ಮ ಊರಿಗೆ ಬಂದಿರಲಿಲ್ಲ.   ಆಗ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಒಂದು ರೈಲು ಇನ್ನೊಂದು ಬೆಂಗಳೂರಿಂದ ತಾಳಗುಪ್ಪಕ್ಕೆ ಒಂದು ರೈಲು ಬರುತ್ತಿತ್ತು ಇದೇ ರೀತಿ ರಾತ್ರಿ ಎರೆಡು ರೈಲು ಇವೆಲ್ಲವೂ ಕಲ್ಲಿದ್ದಲು ಉರಿಸಿ ಉುಗಿಯಿಂದ ಚಲಿಸುತ್ತಿದ್ದ ಉಗಿ ಬಂಡಿಗಳಾದ್ದರಿಂದ ಅದಕ್ಕೆ ಬೇಕಾದ ನೀರು ಆನಂದಪುರ0 ನಿಲ್ದಾಣದಲ್ಲೇ ತುಂಬಿಸಿಕೊಳ್ಳ ಬೇಕಾದ್ದರಿಂದ ಹೆಚ್ಚು ಸಮಯ ರೈಲು ನಿಲ್ಲುತ್ತಿತ್ತು.   ಪ್ರಯಾಣಿಕರು ವಾಸಣ್ಣನ ಕ್ಯಾಂಟೀನ...

4027. ಜೇನಿ ಮಂಜುನಾಥ ಭಟ್ಟರು

ಹೀಗೂ ಉಂಟೇ... ಇಷ್ಟು ಕಡಿಮೆ ಬೆಲೆಯಲ್ಲಿ ಅಡಿಕೆ ಸಸಿ ಸಿಗುತ್ತಾ? ... #ಮಲೆನಾಡಿನಲ್ಲಿ_ಕೇವಲ_20_ರೂಪಾಯಿಗೆ_ಅಡಿಕೆ_ಸಸಿ_ಲಭ್ಯವಿದೆ.   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದಲ್ಲಿ ( ರಿಪ್ಪನಪೇಟೆ ಹೊಸನಗರ ಮುಖ್ಯ ರಸ್ತೆಯಲ್ಲಿ) #ಮಂಜುಶ್ರೀ_ನರ್ಸರಿ ಇದೆ.   ಇದು ನನ್ನ ಆಪ್ತ ಗೆಳೆಯರಾದ ಮಂಜುನಾಥ ಭಟ್ಟರದ್ದು ಇವತ್ತು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅವರಲ್ಲಿ #ಅಡಿಕೆ_ಸಸಿಗಳು_ಲಭ್ಯವಿದೆ_ಬೆಲೆ_20ರೂಪಾಯಿ.    ಇದು ಕೇಳಿದವರು ಆಶ್ಚರ್ಯ ಪಡುತ್ತಾರೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗುತ್ತಿದೆ ಇದರಿಂದ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ ಇದೆ ಆದರೆ ಅಡಿಕೆ ಸಸಿ ಬೆಲೆ ಒಂದಕ್ಕೆ 100 ರಿಂದ 150 ರ ತನಕ ಆಗಿದೆ.     ಹಾಗಂತ ಇವರು ನರ್ಸರಿ ಕ್ಷೇತ್ರಕ್ಕೆ ಹೊಸಬರಲ್ಲ 1985 ರಿಂದ ಇವರು ಈ ಕ್ಷೇತ್ರದಲ್ಲಿದ್ದಾರೆ ಸುಮಾರು 40 ವರ್ಷದ ಅನುಭವ ಇವರದ್ದು ಇವರ ನರ್ಸರಿಯ ಯಾವುದೇ ಸಸಿ ಕೂಡ ಉತ್ಕೃಷ್ಟ ದರ್ಜೆಯದ್ದೇ ಆಗಿದೆ.    #ಜೇನಿಮಂಜುನಾಥಭಟ್ಟರ ಜೀವನ ಶೈಲಿಯೇ ಬೇರೆ ಅವರಿಗೆ ಆಸೆ ಇಲ್ಲವೇ ಇಲ್ಲ ಅಲ್ಲಿ ದುರಾಸೆ ಎಲ್ಲಿ ಬರಬೇಕು? ... ಕಳೆದ ವರ್ಷ ಇವರಲ್ಲಿ ಅಡಿಕೆ ಸಸಿ ಬೆಲೆ ಕೇವಲ 12 ಇತ್ತು.    ಅವರ ಕಂಡೀಷನ್ ಏನೆಂದರೆ ನೇರವಾಗಿ ರೈತರಿಗೆ ಮಾತ್ರ ಅಡಿಕೆ ಸಸಿ ಮಾರಾಟ ಮಾಡುತ್ತಾರೆ ...