Skip to main content

Posts

Blog 3587. 61 ವರ್ಷ

#ನಿನ್ನೆಗೆ_ನನ್ನ_ಜೀವಮಾನದ_61_ವರ್ಷ_ಪೂರ್ಣವಾಯಿತು. #ನಾನು_ಹುಟ್ಟಿದ್ದು_9_ಫೆಬ್ರುವರಿ_1965ರಂದು #ತಡವಾಗಿ_ನೆನಪಾಯಿತು_ಹುಟ್ಟಿದ_ಹಬ್ಬದ_ಆಚರಣೆ_ನಾನು_ಆಚರಿಸಿಕೊಳ್ಳುವುದಿಲ್ಲ. #ಕಾಲ_ಯಾರಿಗೂ_ಕಾಯುವುದಿಲ್ಲ #ಪ್ರಕೃತಿ_ಎಲ್ಲ_ಜೀವಿ_ಸಸ್ಯಗಳನ್ನು_ನಾಶಮಾಡಲು_ಹೊಸದನ್ನು_ಸೃಷ್ಟಿಸಲು_ನಿರತವಾಗಿರುತ್ತದೆ.   #ಇವತ್ತಿನಿಂದ_62ನೇ_ವಯಸ್ಸು_ಪೂರ್ಣ_ಮಾಡುವ_ಕಡೆಗೆ_ನಡಿಗೆ. #Birthday #wishes #Arunprasad #Hombujaresidency #yadehalli #Anandapuram #longwalk     ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳವುದಿಲ್ಲ, ಉಡುಗೊರೆ ಸ್ವೀಕರಿಸುವುದಿಲ್ಲ ಆದ್ದರಿಂದ ಪ್ರತಿ ವರ್ಷ ನಾನು ಹುಟ್ಟಿದ ದಿನವಾದ #ಫೆಬ್ರುವರಿ_9 ಈ ಅರಿವು ಇಲ್ಲದೆ ಕಳೆದು ಹೋಗಿ ಬಿಡುತ್ತದೆ.    ಹಾಗೆಯೇ ನನ್ನ 61ನೇ ವರ್ಷ ಪೂರೈಸಿದ ದಿನ ಮರೆತು ಹೋಗಿತ್ತು ಅದು ನೆನಪಾಗಿದ್ದು ತಡವಾಗಿ.     ಆನಂದಪುರಂ ಬಿಜೆಪಿ ಶಕ್ತಿಕೇಂದ್ರದ #ನಾಡವಳ್ಳಿ_ನಾಗರಾಜ್ ಶುಭಾಷಯ ವಾಟ್ಸಪ್ ಮಾಡಿದ ಮೇಲೆ ನೆನಪಾಯಿತು.     61 ವರ್ಷ ಕಳೆದಾಯಿತು ಇನ್ನೇನಿದ್ದರು 62ನೇ ವಯಸ್ಸಿನ ಉಳಿದ 364 ದಿನಗಳ ಪೂರೈಸುವುದು.     50 ವರ್ಷ ತಲುಪುವ ತನಕ ಆಯಸ್ಸಿನ ವಾಸ್ತವ ಅರ್ಥವೇ ಆಗುವುದಿಲ್ಲ ಅದು 60 ಕ್ಕೆ ತಲುಪಿತು ಎಂದಾಗಲೇ ಎಚ್ಟರಿಕೆ ಆಗುತ್ತದೆ, ಭೂಮಿ ಮೇಲೆ ಇರುವ ದಿನಗಳು ಕಡಿಮೆ ಎಂದು ಆಗಲೇ ಅರಿವಾಗುವುದು.   ...
Recent posts

Blog 3588. ಅಲಂಕಾರ ಪ್ರವೀಣ ಸೂರಜ್ ಭಟ್

#ಇಡಗುಂಜಿ_ಮಹಾಗಣಪತಿ #ರಂಗೋಲಿಯಲ್ಲಿ_ಮೂಡಿಸಿದ #ಸೂರಜ್_ಕೊಡೂರು #ದೇವರ_ವಿಗ್ರಹಗಳಿಗೆ_ಬೆಣ್ಣೆ_ಅಲಂಕಾರ_ಪ್ರವೀಣರು. #Varasiddivinayaka #Siddivinayakatemple #yadehalli #Bennealankara #Rangoli #Rathotsava #Jatre #Idagunji #Mahaganapathi    ನಮ್ಮೂರ ಪುರ ದೈವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರ 20 ನೇ ವರ್ಷದ ಬ್ರಹ್ಮರಥೋತ್ಸವ ಕಳೆದ ಜನವರಿ ತಿಂಗಳ 22ನೇ ತಾರೀಖು ನೆರವೇರಿತು.    ಈ ಸಂದರ್ಭದಲ್ಲಿ ದೇವಾಲಯದಲ್ಲಿ #ಇಡಗುಂಜಿ_ಮಹಾಗಣಪತಿಯನ್ನ ರಂಗೋಲಿಯಲ್ಲಿ ಮೂಡಿಸಿದವರು ಅಪ್ರತಿಮ ಕಲಾವಿದರಾದ ಸೂರಜ್ ಅವರು.     ಇವರನ್ನ ನಮಗೆ ಪರಿಚಯಿಸಿ ಪ್ರೋತ್ಸಾಹಿಸಿದವರು ನಮ್ಮ ದೇವಾಲಯದ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರು ಮತ್ತು ಶಿವಮೊಗ್ಗದ ಸಿರಿ ಸೌಹಾರ್ದ ಬ್ಯಾಂಕಿನ ಉಪಾದ್ಯಕ್ಷರಾದ ಎಂ. ಜಿ. ಪ್ರಕಾಶ್ ಭಟ್ಟರು.    ಸೂರಜ್ ಭಟ್ಟರು ಪ್ರತಿ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ದೇವಾಲಯದಲ್ಲಿ, ಹೋಮದ ಮಂಟಪದಲ್ಲಿ ವಿದಿ ವಿಧಾನದ ರೀತಿ ರಂಗೋಲೆಯಲ್ಲಿ ಮಂಡಲ, ಗಣಪತಿ ಮತ್ತು ಶ್ರೀಚಕ್ರಗಳ ಚಿತ್ರಿಸುತ್ತಾರೆ.    ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ.     ಹೋಮ ಹವನದಲ್ಲಿ, ಮದುವೆಯ ಹಸೆಮಣೆಯಲ್ಲಿ, ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ.    ನಿ...

Blog 3586. ವಿಂಗ್ ಕಮಾಂಡರ್ ಮಂಜುನಾಥ್

#ಮೊದಲ_ವರ್ಷದ_ಸ್ಮರಣೆ #ವಾಯುದಳದಲ್ಲಿ_ತರಬೇತಿ_ನೀಡುವಾಗ #ಪ್ಯಾರಾಚೂಟ್_ತೆರೆಯದ_ದುರಂತದಲ್ಲಿ_ವೀರಮರಣ_ಹೊಂದಿದ. #ನಮ್ಮ_ಹೆಮ್ಮೆಯ_ಇಂಡಿಯನ್_ಏರ್ಫೋರ್ಸ್_ತರಬೇತಿದಾರ_ಮಂಜುನಾಥ್ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಪಟಗುಪ್ಪ_ಸಮೀಪದ_ಸಂಕೂರಿನವರು #ಈ_ದಂಪತಿಗಳ_ವಿವಾಹ_2019ರಲ್ಲಿ_ನಮ್ಮ_ಕಲ್ಯಾಣ_ಮಂಟಪದಲ್ಲೇ_ನೆರವೇರಿತ್ತು. #Airforce #India #Manjunath #Shivamogga #Hosanagara #sankuru #Assam #agraairforce #juniorwarrantofficer #indianairforce #shivamogga #hosanagara #manjunathgs #parachutes      ಭಾರತೀಯ ವಾಯುದಳದ ತರಬೇತಿ ಅಧಿಕಾರಿ ಆಗಿದ್ದ #ಮಂಜುನಾಥ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪೆ ಎಂಬ ಊರಿನ ಸಮೀಪದ ಸಂಕೂರು ಎಂಬ ಹಳ್ಳಿಯವರು.    ಇವರ ಪರಿಚಯ ನನಗೆ 2019ರ ಪ್ರಾರಂಭದಲ್ಲಿ ಆಯಿತು ಆಗ ಅವರು ತಮ್ಮ ಜೊತೆ ಏರ್ಪೋರ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಅಸ್ಸಾಂ ಮೂಲದ #ಕಲ್ಪಿತಾ ಎಂಬ ಯುವತಿ ಜೊತೆ ಪ್ರೇಮ ವಿವಾಹದ ತಯಾರಿ ನಡೆಸಿದ್ದರು.    ಇವರ ಪತ್ನಿ ಶ್ರೀಮತಿ ಕಲ್ಪಿತಾ ಕೂಡ ಭಾರತೀಯ ಏರ್ಪೋರ್ಸ್ ಟ್ರೈನಿಂಗ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.    ಇವರ ಬಾವಿ ಪತ್ನಿ ತಂದೆ ತಾಯಿಯನ್ನ ಇವರ ಕುಟುಂಬದ ಪರಿಚಯ ಮಾಡಿಸಲು ಮತ್ತು ವಿವಾಹದ ಮಾತುಕಥೆಗಾಗಿ ಕರೆತಂದಿದ್ದಾಗ ಕೆಲವು ದಿನ ನಮ್ಮ ...

Blog 3585. ಸಾಗರ ಮಾರಿಕಾಂಬಾ ಭಾಗ -11

#ಭಾಗ_11_ಸಾಗರ_ಮಾರಿಕಾಂಭಾ_ಚರಿತ್ರೆ #ಶಿವರಾಮ_ಕಾರಂತರ_ಚೋಮನ_ದುಡಿ_ಕಾದಂಬರಿ #ಸಿನಿಮಾವಾದಾಗ_ಅದರಲ್ಲಿ_ನಟಿಸಿ_ರಾಷ್ಟ್ರ_ಪ್ರಶಸ್ತಿಗೆ_ಬಾಜನರಾದ #ಸಾಗರದವರೇ_ಆದ_ಪದ್ಮಾಕುಮುಟಾ_2017ರ_ಸಾಗರದ #ಮಾರಿಕಾಂಬಾ_ಜಾತ್ರೆಗೆ_ಬಂದಿದ್ದು_ನೆನಪು_ಮಾತ್ರ #Sagara #Padmakumuta #Chomanadudi #Shivaramakaranth #Marikambhajatre    ಈ ಬಾರಿಯ ಸಾಗರದ ಮಾರಿಕಾಂಬಾ ಜಾತ್ರೆಗೆ ಮೂರು ಜಾತ್ರೆಯ ಹಿಂದೆ ಅಂದರೆ 9 ವರ್ಷದ ಹಿಂದೆ.   17 ಪೆಬ್ರವರಿ 2017ರ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಜಾತ್ರಾ ಸಮಿತಿ ಸಾಗರದವರೇ ಆದ   ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತೆ ಚೋಮನ ದುಡಿ ಸಿನಿಮಾ ಖ್ಯಾತಿಯ #ಪದ್ಮಾಕುಮುಟಾರನ್ನ ಸನ್ಮಾನಿಸಿತ್ತು.     ಪದ್ಮಾಕುಮುಟಾ ಖ್ಯಾತ ಸಮಾಜವಾದಿ ಹೋರಾಟಗಾರರಾದ #ಎಸ್_ಎಸ್_ಕುಮುಟಾರ ಪುತ್ರಿ.    ಎಸ್. ಎಸ್. ಕುಮುಟಾ #ಶಾಂತವೇರಿ_ಗೋಪಾಲಗೌಡರ ಸಹವರ್ತಿಗಳು.     #ಕಾಗೋಡು_ಸತ್ಯಾಗ್ರಹದ ಹೋರಾಟದಲ್ಲಿ #ರಾಮಮನೋಹರ_ಲೋಹಿಯಾ ಮತ್ತಿತರ ನಾಯಕರ ಹಿಂದಿ ಬಾಷಣ ಲೀಲಾಜಾಲವಾಗಿ ಅನುವಾದ ಮಾಡುತ್ತಿದ್ದವರು.   ಪ್ರಖ್ಯಾತ ಕನ್ನಡದ ಸಾಹಿತಿ #ಶಿವರಾಂಕಾರಂತರ #ಚೋಮನ_ದುಡಿ ಕಾದಂಬರಿ ಆಧಾರಿತ ಸಿನಿಮಾದ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಗರದ ರಾಜಕಾರಣದ ಗುರು S. S. ಕುಮುಟಾರ ಪುತ್ರಿ ಪದ್ಮಾ ಕುಮುಟಾ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ದೇವಿ ದಶ೯...

Blog 3584. ಸಾಗರ ಮಾರಿಕಾಂಬಾ ಭಾಗ 12

#ಭಾಗ_12_ಸಾಗರದ_ಮಾರಿಕಾಂಬಾ_ಚರಿತ್ರೆ #ಇವತ್ತಿಗೆ_2026ರ_ಮಾರಿಕಾಂಭಾ_ಜಾತ್ರೆ_ಸಂಪನ್ನ. #ಜನಸಂದಣಿ_ವಸ್ತುಪ್ರದರ್ಶನ_ಕೆಲವು_ದಿನ_ಮುಂದುವರಿಯಲಿದೆ. #ಮುಂದಿನ_ಸಾಗರದ_ಮಾರಿಕಾಂಬಾ_ಜಾತ್ರೆ_2029ಕ್ಕೆ. #ಕೆಳದಿ_ಅರಸ_ಹಿರಿಯ_ವೆಂಕಟಪ್ಪ_ನಾಯಕರು_ಕುಲದೇವತೆಯಾಗಿ_ಇಕ್ಕೇರಿ_ಕೋಟೆ_ಹೊರಗೆ #ಸಣ್ಣ_ಗುಡಿಯಲ್ಲಿದ್ದ_ಮಾರಿಕಾಂಬೆಯನ್ನ_ಸ್ವೀಕರಿಸುತ್ತಾರೆ. #ಯುದ್ದ_ಗೆದ್ದು_ಬಂದಾಗ_ಅಲ್ಲಿದ್ದ_ದೇವಿಯ_ಶಿಲಾಮಯ_ಪಾದದ_ವಿಗ್ರಹ_ಸಾಗರಕ್ಕೆ_ತಂದು_ಪ್ರತಿಷ್ಟಾಪಿಸಿದರು. #ಈ_ದೇವಾಲಯ_1950ರಲ್ಲಿ_ಪುನಃ_ಊರ_ಹೊರಗೆ_ಸ್ಥಳಾಂತರಿಸುವ_ಪ್ರಯತ್ನ_ಪ್ಲೇಗ್_ರೋಗ_ಹರಡಿದ್ದರಿಂದ_ಕೈಬಿಡಲಾಯಿತು. #ಸಾಗರದ_ಕುಲುಮೆ_ಪಾಪಣ್ಣ_1960ರಲ್ಲಿ_ಎಂಟು_ಸಾವಿರ_ರೂಪಾಯಿ_ವೆಚ್ಚದಲ್ಲಿ_ದೇವಾಲಯ_ಸ್ವರೂಪ_ನೀಡಿದರು. #ಶಿವಮೊಗ್ಗದ_ಪ್ರಖ್ಯಾತ_ಶಿಲ್ಪಿ_ಕಾಶೀನಾಥರಿಂದ_72ಸಾವಿರ_ವೆಚ್ಚದಲ್ಲಿ_ನೂತನ_ಗೋಪುರ_ನಿಮಾ೯ಣವಾಯಿತು. #ಪ್ರಮುಖರಾದ_ನೀಲಪ್ಪ_ಬೋಜಪ್ಪ_ಲಿಂಗಪ್ಪ_ಪುತ್ತೂರಾಯರು_ಜಿ_ಆರ್‌_ಜಿ_ನಗರ್_ಮುಂತಾದವರು #ಹೊರತಾಲ್ಲೂಕಿನ_ದಾನಿಗಳಿಂದಲೂ_ದೇಣಿಗೆ_ಸಂಗ್ರಹಿಸಿದ್ದರು. #ಉತ್ತರಕನ್ನಡ_ಜಿಲ್ಲೆಯ_ಸಿರ್ಸಿ #ಶಿವಮೊಗ್ಗ_ಜಿಲ್ಲೆಯ_ಸಾಗರದ_ಮಾರಿಕಾಂಭಾ_ಜಾತ್ರೆಗಳು_ರಾಜ್ಯದಲ್ಲೇ_ದೊಡ್ಡ_ಜಾತ್ರೆ. #sagara #Marikamba #Keladi #Hiriyavenkatappanayaka #Ikkeri    ಜಾತ್ರೆಯಿ೦ದ ಜಾತ್ರೆಗೆ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸೇರುವ ಜನಸ್ತೋಮ ಮತ್ತು ...

Blog 3583. ಯೆನೆಪೋಯ ಆಸ್ಪತ್ರೆ

#ಯೆನೆಪೋಯ_ವಿಶ್ವವಿದ್ಯಾಲಯ #ಮಂಗಳೂರಿನ_ಯೆನೆಪೋಯ_ಆಸ್ಪತ್ರೆ #ನಮ್ಮ_ರಾಜ್ಯ_ಮಾತ್ರವಲ್ಲ_ಕೇರಳ_ರಾಜ್ಯದಲ್ಲೂ_ಪ್ರಸಿದ್ಧಿ_ಪಡೆದಿದೆ. #Mangalore #yenopoya #Hospital #karnataka #kerala #University  #yenepoyauniversity #yenepoyahospital #Mangalore #medicaleducation #nursingschool  ಇದನ್ನು 2008 ರಲ್ಲಿ ಯೆನೆಪೋಯ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಯಿತು.  1992 ರಲ್ಲಿ ಯೆನೆಪೋಯ ದಂತ ಕಾಲೇಜು ಪ್ರಾರಂಭವಾದಾಗಿನಿಂದ ಅನೇಕ ಕಾಲೇಜುಗಳು ಸರಣಿಯಲ್ಲಿ ಪ್ರಾರಂಭವಾದವು.   ವಿಶ್ವವಿದ್ಯಾನಿಲಯವು ವೈದ್ಯಕೀಯ, ದಂತ, ಸಂಬಂಧಿತ ಆರೋಗ್ಯ ವಿಜ್ಞಾನಗಳು, ಭೌತಚಿಕಿತ್ಸೆ, ಫಾರ್ಮಸಿ, ನರ್ಸಿಂಗ್ , ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಎಂಜಿನಿಯರಿಂಗ್ ಮತ್ತು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಗಾಗಿ ವಿವಿಧ ಘಟಕ ಕಾಲೇಜುಗಳನ್ನು ಹೊಂದಿದೆ.     ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ತಲುಪಲು ರೋಗಿಗಳಿಗೋಸ್ಕರ ರಾಜ್ಯ ಸಾರಿಗೆ  ಬಸ್ಸುಗಳನ್ನು ಕೂಡ ಬಿಡಲಾಗಿದೆ ಅಂದರೆ ಈ ಯೆನೆಪೋಯ ಆಸ್ಪತ್ರೆ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದು ಅರ್ಥವಾದೀತು.  ಯೆನೆಪೋಯ ಆಸ್ಪತ್ರೆಯ ಹಾಲಿ ಚೇರ್ಮನ್ ಶ್ರೀಯೆನೆಪೋಯ ಅಬ್ದುಲ್ ಕುಂಜ್ಞ ಇವರು ಜನಿಸಿದ್ದು 1947 ರಲ್ಲಿ.   ಇವರ ವಿದ್ಯಾಭ್ಯಾಸ ಮೈಸೂರು ಯುನಿವರ್ಸಿಟಿಯಲ್ಲಿ...

Blog 3582. ಸಾಗರ ಮಾರಿಕಾಂಬಾ ಭಾಗ - 13

#ಭಾಗ_13_ಸಾಗರ_ಮಾರಿಕಾಂಭಾ_ಚರಿತ್ರೆ. #ಕೇರಳದ_ಇತಿಹಾಸ_ಸಂಶೋಧಕರಾದ #ಪಾಂಡು_ಪ್ರದ್ಯುಮ್ನ_ಅವರ_ಲೇಖನದಲ್ಲಿ #ಸಾಗರದ_ಮಾರಿಕಾಂಬಾ_ಬಗ್ಗೆ_ಇರುವ_ಉಲ್ಲೇಖಗಳು. #Historian #Kerala #Karnataka #Sagara #Marikhambha #keladi       ಕೆಳದಿ ಅರಸರ ಕುಲದೇವಿ ವರದಾಂಬಿಕೆ ಮತ್ತು ಕುಲದೇವರು ಅಘೋರೇಶ್ವರ ಇವು ಮುಖ್ಯ ಗ್ರಾಮದೇವರುಗಳು.     ಕೆಳದಿ ಅರಸರು  ಮೈಸೂರು ಪ್ರಾಂತ್ಯಕ್ಕೆ ಯುದ್ದಕ್ಕೆ ಹೋದಾಗ  ಮೈಸೂರು ಸೈನ್ಯ ಸೋಲುವ ಹಂತದಲ್ಲಿದ್ದಾಗ ಕೆಳದಿ ಸೈನ್ಯವನ್ನು ಈಗಲೂ ಅಲ್ಲಿರುವ  ಕೋಟೆ ಮಾರಿಕಾಂಬೆ ಚದುರಿಸಿ ಕೊಂಡು ಬಂದು ಸಾಗರಕ್ಕೆ ಬಂದಳು ಎಂಬುದು ನಿಜ ಇತಿಹಾಸ.    ಹಾಗಾಗಿ ಇಂದಿಗೂ ಮೈಸೂರು ಅರಮನೆಯಿಂದ ಸಾಗರದ ಮಾರಿಕಾಂಬೆಗೆ ಮೊದಲ ಉಡಿ ತುಂಬುತ್ತಾರೆ.          ಸದಾಶಿವಸಾಗರ ಪಟ್ಟಣಕ್ಕೆ (ಇಂದಿನ ಸಾಗರ)  ಕ್ಷಾಮ ಬಂದಾಗ ಕೆಳದಿ ರಾಜರು ಜ್ಯೋತಿಷಿಗಳ ಮೊರೆ ಹೋದಾಗ ಜ್ಯೋತಿಷಿಗಳ ಸೂಚನೆ ಮೇರೆಗೆ ತುಂಬಿದ ಬಸುರಿ ಬಲಿ ಕೊಡುವಂತೆ ತಿಳಿಸುತ್ತಾರೆ.    ಆಗ ಶಿಕಾರಿಪುರದ  ಈಸೂರಿನ ಭೋವಿ ಗಂಗಾಮತ ಜಾತಿಯ ಹೆಣ್ಣನ್ನು ಬಲಿಕೊಡುತ್ತಾರೆ ಅವರ ವಂಶದವರು ಈಗಲೂ ಇದ್ದಾರೆ.   ಆಗಲು ಕ್ಷಾಮ ಪರಿಹಾರವಾಗದ ಕಾರಣ  ಬಯಲು ಸೀಮೆಯಿಂದ ಸಾಧೀ ಜನಾಂಗದವರನ್ನು ಕರೆಯಿಸಿ ಕೆಳದಿ ಅರಸರು ಮಾರಿ ಸಂಪ್ರದಾಯವನ್ನು...