ಭಾಗ_4_ಘಟ್ಟಕ್ಕೆ_ಕರಾವಳಿಗರ_ವಲಸೆ. ಕುವೆಂಪು ಸಾಹಿತ್ಯದಲ್ಲಿ ಕರಾವಳಿ ವಲಸಿಗರ ಪಾತ್ರಗಳು ಅದರಲ್ಲಿ ಬ್ಯಾರಿ ಮುಸ್ಲಿಂ ಮತ್ತು ತುಳುವ ಕೃಷಿ ಕಾರ್ಮಿಕರ ಉಲ್ಲೇಖಗಳು. ಕರಾವಳಿಯಿಂದ ಘಟ್ಟಕ್ಕೆ ನಡೆಯುತ್ತಿದ್ದ ಈ ವಲಸೆ ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅಧ್ಯಾಯವಾಗಿದೆ. ನಿಮ್ಮ ಪೂರ್ವಿಕರು ಈ ರೀತಿ ವಲಸೆ ಮಾಡಿದ್ದರಾ?....ಹಾಗಿದ್ದರೆ ನೀವು ಈ ಕರಾವಳಿ ಜನರ ವಲಸೆಯ ಸರಣಿ ಲೇಖನಗಳನ್ನು ನಿಮ್ಮ ಕುಟುಂಬದಲ್ಲಿ ಶೇರ್ ಮಾಡಿ ಈ ಮೂಲಕ ಅವರಿಗೆ ನಿಮ್ಮ ಪೂರ್ವಿಕರ ಆ ದಿನಗಳ ಕಷ್ಟದ ದಿನಗಳನ್ನ ನೆನಪು ಮಾಡಿ ಕೊಡಿ ಅದು ದಾಖಲಾಗಿ ಉಳಿಯಲಿ. ತೀರ್ಥಹಳ್ಳಿಯ ಹಳೆಯ ಆಗುಂಬೆ ಸ್ಟಾಂಡ್ ಚಿತ್ರ ಈ ಲೇಖನದ ಜೊತೆ ಲಗತ್ತಿಸಿದೆ,ಕುವೆಂಪು ಅವರೂ ಕೆಳಗೆ ಆಗುಂಬೆ ಮೂಲಕ ಘಟ್ಟ ಇಳಿಯುವ ರಸ್ತೆಯನ್ನ #ಘಟ್ಟದ_ಕೆಳಗಿನ_ರಸ್ತೆ ಅಂತ ಸಾಹಿತ್ಯದಲ್ಲಿ ಬರೆದಿದ್ದಾರೆ. #ಕುವೆಂಪು,ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಸಾಹಿತ್ಯವು ಪ್ರಮುಖವಾಗಿ ಮಲೆನಾಡಿನ ಜನಜೀವನ, ಸಂಸ್ಕೃತಿ ಮತ್ತು ಅಲ್ಲಿನ ಪರಿಸರವನ್ನು ಚಿತ್ರಿಸುತ್ತದೆ ಆದರೆ ಅವರ ಕಾದಂಬರಿಗಳಾದ #ಕಾನೂರು_ಹೆಗ್ಗಡಿತಿ ಮತ್ತು #ಮಲೆಗಳಲ್ಲಿ_ಮದುಮಗಳು ಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಕರಾವಳಿ ವಲಸೆಯ ಅತ್ಯಂತ ಮಹತ್ವದ ಉಲ್ಲೇಖಗಳು ಮತ್ತು ಚಿತ್ರಣಗಳು ಸಿಗುತ್ತವೆ. ...
ಕಳೆದ_ವರ್ಷ_ಈ_ಆನೆ_ಮಾಡಿದಷ್ಟು_ಸುದ್ದಿ_ಬೇರಾವ_ಕಾಡಾನೆ_ಮಾಡಿರಲಿಲ್ಲ. ನೆನಪು ಮಾಡಿಕೊಳ್ಳಿ ಒಂದು ವರ್ಷದ ಹಿಂದೆ ಈ ಆನೆಯ ಬಿಂದಾಸ್ ಸಂಚಾರದ ಬಗ್ಗೆ ಮತ್ತು ಅಂದಿನ ಭಯದ ದಿನಗಳ ಬಗ್ಗೆ ಈ ಆನೆ ಸೆರೆಹಿಡಿಯುವ ತನಕ ಈ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ತೀಥ೯ಹಳ್ಳಿಯಿಂದ ಸಂಚಾರ ಪ್ರಾರಂಬಿಸಿ ಯಡೂರು, ಹುಲಿಕಲ್, ಹೊಸಂಗಡಿ- ಹೆನ್ನಾಬೈಲು ಮತ್ತು ಸಿದ್ದಾಪುರದಲ್ಲೆಲ್ಲ ಸಂಚರಿಸಿತ್ತು. ಇಷ್ಟೆಲ್ಲಾ ಬಿಂದಾಸ್ ಆಗಿ ತಿರುಗಾಡಿದ ಆನೆ ಕುತ್ತಿಗೆಯಲ್ಲಿ ರೇಡಿಯೋ ಕಾಲರ್ ಇತ್ತು ಇದರ ಸಹಾಯದಿಂದಲೇ ಈ ಆನೆ ಯನ್ನು ಕುಂದಾಪುರ ಸಮೀಪದ ಹೊಸಂಗಡಿಯ ಹೆನ್ನಾಬೈಲಿನಲ್ಲಿ ಸೆರೆ ಹಿಡಿದು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಬಿಟ್ಟಿದ್ದರು ಈ ಆನೆ ಮಾಡಿದಷ್ಟು ಸುದ್ದಿ ಬೇರಾವ ಕಾಡಾನೆ ಮಾಡಿರಲಿಲ್ಲ ಇದು ಬಿಂದಾಸ್ ಆಗಿ ಹಗಲು - ರಾತ್ರಿ ಊರೊಳಗೆ ಸಂಚರಿಸುತ್ತಿದ್ದರಿಂದ ಎಲ್ಲರ ಸೆಲ್ ಫೋನ್ ನಲ್ಲಿ ಇದರ ಪೋಟೋ ದಾಖಲಾಯಿತು. ಬಹುಶಃ ಕಾಡಾನೆಯೊಂದು ಮಲೆನಾಡಿನಲ್ಲಿ ಯಾರಿಗೂ ತೊಂದರೆ ಕೊಡದೆ ಈ ರೀತಿ ಊರೊಳಗೆ ಬಿಂದಾಸ್ ಆಗಿ ಸಂಚರಿಸಿದ್ದು ಇದೇ ಮೊದಲು. ಈ ಕಾಡಾನೆ ದಿನಕ್ಕೆ 50 KM ನಡೆಯುತ್ತಿತ್ತು, ಹುಲಿಕಲ್ ಘಾಟ್ ನಲ್ಲಿ ಸಂಚರಿಸುತ್ತಿದ್ದ ವಾಹನಗಳ ಅಕ್ಕಪಕ್ಕದಲ್ಲೇ ನಡೆಯುತ್ತಾ ಘಾಟಿ ಇಳಿದಿತ್ತು. ಸಿದ್ದಾಪುರದ ಸಮೀಪದ #ಹೆನ್ನಾಬೈಲಿನ_ಬಾಮಿಕುಮ್ಕಿಯಲ್...