ಕಲ್ಯಾಣ್_ಜೀ_ ಭಗತ್ ಪ್ರಾರಂಬಿಸಿದ ಮೊದಲ ವರ್ಲಿ ಮಟಕಾ. ಇದಕ್ಕೆ ಕಲ್ಯಾಣಿ ಮಾರ್ಕೆಟ್ ಎಂತಲೂ ಜನ ಕರೆಯುತ್ತಾರೆ. ನನ್ನ ಹಿಂದಿನ ರತನ್ ಖತ್ರಿ ಲೇಖನ ಓದಿದವರು ಕಲ್ಯಾಣ್ ಜಿ ಮಟಕಾ ಮಾರ್ಕೆಟ್ ಬಗ್ಗೆ ಕೂಡ ಬರೆಯುಂತೆ ವಿನಂತಿಸಿದ್ದರಿಂದ ಈ ಲೇಖನ ಓದಿ... #ರತನ್_ಲಾಲ್_ಖತ್ರಿಗಿಂತ ಮೊದಲಿಗರು ಕಲ್ಯಾಣ್ ಜಿ ಭಗತ್ ಇವರೇ ಭಾರತದ ಮೊದಲ ಮಟ್ಕಾ / ಓಸಿ ಜುಗಾರಿಯ ಪ್ರವರ್ತಕರು. ಆದರೆ ಮಟ್ಕಾ ಕಿಂಗ್ ಬಿರುದು ಜನಪ್ರಿಯತೆ ಮಾತ್ರ ರತನ್ ಲಾಲ್ ಖತ್ರಿಗೆ ಸೀಮಿತವಾಯಿತು. ಭಾರತದ ಮೊದಲ ಮಟಕಾ ಪ್ರವರ್ತಕರಾದ ಕಲ್ಯಾಣ್ ಜಿ ಭಗತ್ ಇವರ ಓಸಿ ಮಾರ್ಕೆಟ್ ಹೆಸರು #ವರ್ಲಿ_ಮಟಕಾ. ಕಲ್ಯಾಣ್ ಜಿ ಭಗತ್ 1962 ರಲ್ಲಿ ವರ್ಲಿ ಮಟಕಾ ಆರಂಭಿಸಿದರು. ನಂತರ #ರತನ್_ಖತ್ರಿ #ರತನ್_ಮಟ್ಕಾ ಅಥವಾ 'ಮೇನ್ ಬಜಾರ್' ಆರಂಭಿಸಿದರು ಅವರು ಇಸ್ಪೀಟ್ ಎಲೆಗಳನ್ನು ಬಳಸಿ ನಂಬರ್ ಡ್ರಾ ಮಾಡುವುದರಿಂದ ಮಟಕಾ ಹೆಚ್ಚು ಪಾರದರ್ಶಕಗೊಳಿಸಿದರು. ಈಗಿನ ಸ್ಕಿಲ್ ಗೇಮ್, ಆನ್ ಲೈನ್, ಜಂಗಲಿ ರಮ್ಮಿ ಇತ್ಯಾದಿಗಳಷ್ಟು ಮಟಕಾ ಮಾರಕವಲ್ಲ ಎನ್ನುತ್ತಾರೆ. ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಇದನ್ನು #ಅಂಕದ_ಜುಗರ್' ಎಂದು ಕರೆಯಲಾಗುತ್ತಿತ್ತು. 1960ರ ದಶಕದಲ್ಲಿ ನ್ಯೂಯಾರ್ಕ್ ಕಾಟನ್ ಎಕ್ಸ್ಚೇಂಜ್ ದರ ರದ್ದಾದ ನಂತರ ಮಣ್ಣಿನ ಮಡಕೆಯಿಂದ ಚೀಟಿ ಎತ್ತುವ ಪದ್ಧತಿ ಜಾ...
ಶತಮಾನಗಳ_ಹಿಂದಿನ_ಶಾಸನಗಳಲ್ಲಿ_ಅಡಿಕೆ. ಸಾವಿರ ವರ್ಷಗಳ ಹಿಂದೆ ಅಡಿಕೆ ಪ್ರಮುಖ ಬೆಳೆ ಆಗಿತ್ತು ಮತ್ತು ಅಡಿಕೆಗೆ ತೆರಿಗೆ - ಸುಂಕಗಳನ್ನ ವಿದಿಸಲಾಗಿತ್ತೆಂಬ ಶಾಸನಗಳು ಅಡಿಕೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದೆ. ಹತ್ತನೆ ಶತಮಾನದಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿಯ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತು. ಮತ್ತು ಹನ್ನೆರಡನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ ಉಲ್ಲೇಖಗಳ ಸಂಗ್ರಹಿಸಿ ಬರೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್ ಹಿರೇಜಂಬೂರ್. ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ. ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ. ಅವರು 10ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕ...