Skip to main content

Posts

4071 ಭಾಗ_ಎರಡು ಸಂಸದರಾದ_ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪನವರನ್ನೇ_ಬಿಟ್ಟು_ಹೋದ ಹೊಳೆಬಾಗಿಲು_ಲಾಂಚ್_ಸಿಬ್ಬಂದಿಗಳು.

ಭಾಗ_ಎರಡು #ಸಂಸದರಾದ_ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪನವರನ್ನೇ_ಬಿಟ್ಟು_ಹೋದ  #ಹೊಳೆಬಾಗಿಲು_ಲಾಂಚ್_ಸಿಬ್ಬಂದಿಗಳು. #sharavathirivet #sagar #govtofkarnataka #govtofindia #ambargodlu #kalasavalli #siganduru #cablebridge #SBangarappa #shivamogga #parlimentmember    1996ರಲ್ಲಿ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು.    ಆಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ಕಾಗೋಡು ತಿಮ್ಮಪ್ಪನವರ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿರಲಿಲ್ಲ.   ಅವರೆಲ್ಲ ಚುನಾವಣೆಯಲ್ಲಿ ಬಂಗಾರಪ್ಪನವರಿಗೆ ವಿರುದ್ಧವಾಗಿ ಕಾಂಗ್ರೇಸ್ ಅಭ್ಯರ್ಥಿ ಕೆ.ಜಿ. ಶಿವಪ್ಪನವರ ಪರವಾಗಿ ಕೆಲಸ ಮಾಡಿದ್ದರು.    ಸಾಗರ ತಾಲೂಕಿನಲ್ಲಿ ಹರುನಾಥರಾವ್, ಮೊಹಮ್ಮದ್ ಕೊಯಾ, ಮೊಹಮದ್ ಖಾಸಿಂ,ಕಾಗೋಡು ಹೋರಾಟದ ನೇತಾರಗಣಪತಿಯಪ್ಪ ಮತ್ತು ಅನೇಕರ ಜೊತೆ ನಾನು ಸೇರಿ ಬಂಗಾರಪ್ಪನವರ ಗೆಲುವಿಗೆ ಕಟಿಬದ್ಧರಾಗಿ ಚುನಾವಣೆ ಮಾಡಿದೆವು ಚುನಾವಣೆಯಲ್ಲಿ ಬಂಗಾರಪ್ಪನವರು ಗೆಲ್ಲುತ್ತಾರೆ ಸಾಗರ ತಾಲೂಕಿನಲ್ಲಿ ಅವರಿಗೆ ಲೀಡ್ ಬರುತ್ತದೆ.   ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಗಾರಪ್ಪನವರಿಗೆ ವಿರುದ್ಧ ಆಗಿದ್ದರೂ ಮತದಾರರು ಬಂಗಾರಪ್ಪನವರ ಕೈ ಬಿಡಲಿಲ್ಲ.    ಸಂಸದರಾಗಿ ಆಯ್ಕೆ ಆದ ಬಂಗಾ...
Recent posts

4070 ಭಾಗ_ಒಂದು.#ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ

ಭಾಗ_ಒಂದು. #ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ #ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು. #sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa   1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.     ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.     ನಂತರ ಸುಮಾರು  ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.    1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.   ಆಗ ...

4069. ದೇವನೂರು ಮಹಾದೇವರ ಎದೆಗೆ ಬಿದ್ದ ಅಕ್ಷರ

ದೇವನೂರು_ಮಹಾದೇವರ ಎದೆಗೆ_ಬಿದ್ದ_ಅಕ್ಷರ_ಪುಸ್ತಕ. ನನ್ನ ಓದಿನ ಅನಿಸಿಕೆಗಳು.    ನಾನು ಈ ಪುಸ್ತಕ ಶಿಕಾರಿಪುರದ #ಸುಪ್ರ_ಪ್ರಕಾಶನದವರಿಂದ ತರಿಸಿದ್ದೆ, ಯಾವುದೇ ಪುಸ್ತಕ ಬೇಕಾದರೂ ಅವರಿಗೆ ವಾಟ್ಸಪ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಅತ್ಯುತ್ತಮ ಪುಸ್ತಕ ಮಾರಾಟ ಸಂಸ್ಥೆಯ ಫೋನ್ ನಂಬರ್ ಕಾಮೆಂಟ್ ಬಾಕ್ಸ್ ನಲ್ಲಿ ಇದೆ. ಈ ಪುಸ್ತಕದಲ್ಲಿ  #ದಲಿತ_ನೌಕರರ_ಜೊತೆ_ಪಿಸುಮಾತು ಪುಟ ಸಂಖ್ಯೆ 257 ರಲ್ಲಿ ದೇವನೂರು ಮಹಾದೇವರು ಹೀಗೆ ಬರೆದಿದ್ದಾರೆ... ದಲಿತ ನೌಕರರ ಬಗ್ಗೆ ಪ್ರಚಲಿತದಲ್ಲಿರುವ ಒಂದು ಮಾತು ಹೀಗಿದೆ..."ತನಗೆ ಏನಾದರೂ ಅನ್ಯಾಯ ಕಷ್ಟ ಬಂದಾಗ ದಲಿತ ನೌಕರ ಅದನ್ನು ಇಡೀ ತನ್ನ ಜನಾಂಗಕ್ಕೆ ಆದ ಅನ್ಯಾಯ ಎಂಬಂತೆ ಗೋಳಾಡುತ್ತಾನೆ ಇಲ್ಲದಿದ್ದರೆ ಸುಮ್ಮನಿರುತ್ತಾನೆ" ಅಂತ.    ಇದೇ ರೀತಿ ಬ್ರಾಹ್ಮಣ ಅರ್ಚಕರು ತಮಗೆ ಏನಾದರು ಅನ್ಯಾಯ  ಅವಮಾನ ಆದರೆ ಅದನ್ನು ಇಡೀ ತನ್ನ ಬ್ರಾಹ್ಮಣ ಜನಾಂಗಕ್ಕೆ ಆದ ಅವಮಾನ ಎಂಬಂತೆ ಸುದ್ದಿ ಮಾಡುತ್ತಾನೆ ಅಂತ ಹೇಳಿದವರು ಖ್ಯಾತ ವಿಮರ್ಶಕ ಅರವಿಂದ ಚೊಕ್ಕಾಡಿ ನನ್ನ ಅತಿಥಿ ಆಗಿ ಬಂದಾಗ ಮಾತಾಡುವಾಗ ಹೇಳಿದ್ದು.    ಇದು ಇಬ್ಬರು ಬೇರೆ ಬೇರೆ ಸಂದರ್ಭದ ಮಾತು ಇದು ಏನು ಹೇಳುತ್ತದೆ ಅಂದರೆ ಕಣ್ಣಿದ್ದು ಕುರುಡಾಗಿ ತಮ್ಮ ಜಾತಿಯ ಜನರ ತಪ್ಪು ಸಮರ್ಥಿಸಿಕೊಳ್ಳದ ಇಬ್ಬರು ಜ್ಞಾನಿಗಳು ಸಮಾಜವನ್ನ ತಮ್ಮ ಸಮತೋಲನದ ಬುದ್ದಿಯಿಂದ ಅವಲೋಕಿಸಿದ ರೀತಿ.   ...

4068. ಭಾಗ -6 ಘಟ್ಟಕ್ಕೆ ಕರಾವಳಿಗರ ವಲಸೆ

ಭಾಗ_6_ಘಟ್ಟಕ್ಕೆ_ಕರಾವಳಿ_ಭಾಗದವರ_ವಲಸೆ #ಹಾಳೆಟೊಪ್ಪಿ_ಮಂಡೆಹಾಳೆ_ಮುಟ್ಟಾಳೆ_ಅಡಿಕೆಹಾಳೆಟೊಪ್ಪಿ   ಹಾಳೆ ಟೊಪ್ಪಿ ಎನ್ನುವುದು ಕರಾವಳಿ ಮತ್ತು ಮಲೆನಾಡಿನ ಜನರ ಅತಿ ದೊಡ್ಡ ಗ್ರಾಮೀಣ ಆವಿಷ್ಕಾರ!...  ಮಳೆಯಿಂದ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಅಂದಿನ ಕಾಲದಲ್ಲಿ ಘಟ್ಟಕ್ಕೆ ಬರುತ್ತಿದ್ದ ಕರಾವಳಿ ವಲಸಿಗರು ಹಾಗೂ ಕೃಷಿಕರು ಬಳಸುತ್ತಿದ್ದ ಅತ್ಯಂತ ಸುಲಭ, ಉಚಿತ ಮತ್ತು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಹೆಲ್ಮೆಟ್ ಇದು.   ಇದಕ್ಕೆ ಮುಟ್ಟಾಳೆ-ಮಂಡೆಹಾಳೆ_ ಹಾಳೆಟೊಪ್ಪಿ_ಅಡಿಕೆ ಹಾಳೆ ಟೊಪ್ಪಿ ಎಂತಲೂ ಇದನ್ನ ಕರೆಯುತ್ತಾರೆ, ​ದಿನಗಟ್ಟಲೆ ಬಿಸಿಲು - ಮಳೆಯಲ್ಲಿ ನಡೆದು ಬರುತ್ತಿದ್ದ ಆ ಕಾಲದ ವಲಸೆಯ ಹಾದಿಯಲ್ಲಿ ಮತ್ತು ತೋಟದ ಕೆಲಸಗಳಲ್ಲಿ ಈ ಹಾಳೆ ಟೊಪ್ಪಿಗೆಗೆ ಮಹತ್ವದ ಸ್ಥಾನವಿದೆ. ತೋಟದ ಕೆಲಸದ ಮಧ್ಯೆ ಬರುವ ಬಿಸಿ ಬಿಸಿ ಟೀ ಚಹಾ ಅಥವಾ ಕಾಡಿನ ಹಾದಿಯಲ್ಲಿ ಸಿಗುತ್ತಿದ್ದ ತಾಜಾ ಶೇಂದಿ -ಕಳ್ಳು ಕುಡಿಯಲು ಇದನ್ನು ಬಳಸುವುದು ಅಂದಿನ ಒಂದು ವಿಶಿಷ್ಟ ಸಂಸ್ಕೃತಿಯಾಗಿತ್ತು.    ತನಗಿಂತ ಕೆಳಜಾತಿಯವನ ಲೋಟದ ಎಂಜಲು ತನಗೆ ತಗುಲುತ್ತದೆ ಎಂಬ ಭಯ ಮೇಲ್ಜಾತಿಯ ಕಾರ್ಮಿಕರಿಗೂ  ಇರುತ್ತಿತ್ತು.   ಹಾಳೆ ಟೊಪ್ಪಿಯಲ್ಲಿ ಟೀ ಅಥವಾ ಶೇಂದಿ ಕುಡಿಯುವ ಈ ಪದ್ಧತಿಯ ಹಿಂದೆ ಕೂಡ ಅಂದಿನ ಕಠಿಣ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಕಟು ವಾಸ್ತವ ಅಡಗಿತ್ತು ಇದನ್ನು ಕೇವಲ ಅನುಕೂಲಕ್ಕಾಗಿ ಮಾಡಿದ ವ್ಯವ...

4067. ನೈಸರ್ಗಿಕ ಅಣಬೆಗಳು

ನೈಸರ್ಗಿಕವಾಗಿ_ಸಿಗುವ_ಕಾಡಿನ_ಅಣಬೆಗಳು.       ತಿನ್ನ ಬಹುದಾದ ಮತ್ತು ತಿನ್ನಬಾರದ ಅಣಬೆಗಳು ಇದೆ. ನೀವೂ ಕಾಡಿನಲ್ಲಿ ಅರಳುವ ಈ ಅಣಬೆಗಳನ್ನ ನೋಡಿದ್ದೀರಾ? ... ಇದರ ಖಾದ್ಯ ಸವಿದಿದ್ದೀರಾ? ....  ನಿಮ್ಮ ಅನುಭವ ಹಂಚಿಕೊಳ್ಳಿ .... ಧಾರ್ಮಿಕ ಕಾರಣದಿಂದ ಕೆಲ ಜಾತಿಗಳಲ್ಲಿ ಅಣಬೆ ಸೇವನೆ ನಿಶೇಧ ಇದೆ.   ವಿಶ್ವದ ಪ್ರಮುಖ ಧರ್ಮಗಳನ್ನು ಗಮನಿಸಿದರೆ, ಜೈನ, ಬ್ರಾಹ್ಮಣ ಮತ್ತು ಲಿಂಗಾಯತ ಸಂಪ್ರದಾಯಗಳಂತೆ ಬೇರೆ ಯಾವುದೇ ಪ್ರಮುಖ ಜಾಗತಿಕ ಧರ್ಮಗಳು ಉದಾಹರಣೆಗೆ ಇಸ್ಲಾಂ, ಕ್ರಿಶ್ಚಿಯನ್ ಅಥವಾ ಬೌದ್ಧ ಧರ್ಮಅಣಬೆಯನ್ನು ಸಂಪೂರ್ಣವಾಗಿ ಕಟ್ಟುನಿಟ್ಟಾಗಿ ನಿಷೇಧಿಸಿಲ್ಲ.   ಮುಂಗಾರು ಮಳೆಯ ದಿನದಲ್ಲಿ ಕಾಡಿನಲ್ಲಿ - ಕೃಷಿ ಜಮೀನಿನಲ್ಲಿ ಅರಳಿ ಬರುವ ತರಹೇವಾರಿ ಅಣಬೆಗಳಲ್ಲಿ ತಿನ್ನಲು ಬಾರದ ಅಣಬೆಗಳು ಹೆಚ್ಚು ಇದೆ,ಎಲ್ಲವೂ ಆಹಾರವಾಗಿ ಬಳಸಲು ಸಾಧ್ಯವಿಲ್ಲ ವಿಷಪೂರಿತ ಅಣಬೆಗಳು ಸೇವಿಸಲೇ ಬಾರದು.   ಮು೦ಗಾರು ಮಳೆ ಪ್ರಾರಂಭ ಆಗುವಾಗ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿನ ಮನೆಗಳಲ್ಲಿವಿವಿದ ಮಲೆನಾಡಿನ ಸಂಪ್ರದಾಯಿಕ ಆಹಾರ ಕೂಡ ತಯಾರಾಗುತ್ತದೆ.  ಕಳಲೆ - ಮರಕೆಸ - ಅಣಬೆ-ಅರಿಶಿಣದ ಎಲೆ ಕಡಬು ಹೀಗೆ ಉದ್ದವಾದ ಪಟ್ಟಿ ಸಾಲು... ಸಂಪ್ರದಾಯಿಕ ಮೇಲ್ವರ್ಗದ ಬ್ರಾಹ್ಮಣ, ಜೈನ ಮತ್ತು ಲಿಂಗಾಯಿತರ ಕುಟುಂಬಗಳಲ್ಲಿ ಅವರಿಗೆ ಅಣಬೆ ಆಹಾರವಾಗಿ ಸ್ವೀಕರಿಸಲು ಅವಕಾಶ ಇಲ್ಲ ಅವರಲ್ಲಿ ಅಣಬೆ ನಿಷೇದ ಇದೆ. ಸಸ್ಯ ...

4067.2026 ರ ಆರಿದ್ರಾ ಮಳೆ ಅಭಾವ

ಆರಿದ್ರಾ_ಮಳೆ_ಹಬ್ಬ     ಈ ವರ್ಷ ಪ್ರಾರಂಭದಲ್ಲೇ ಮುಂಗಾರು ಕ್ಷೀಣಿಸಿದೆ,ಆರಿದ್ರಾ ನಕ್ಷತ್ರದ ಮಳೆ ಕಾಲದಲ್ಲಿ ಆರಿದ್ರಾ ಮಳೆ ಹಬ್ಬ ಆಚರಿಸಲು ರೈತರು ತಯಾರಾಗುತ್ತಿದ್ದಾರೆ.   ಇವತ್ತಿನಿಂದ ಪ್ರಾರಂಭ ಅಂದರೆ 22 -ಜೂನ್ - 2026 ಸೋಮವಾರದಿಂದ ಜುಲೈ -6 ರ ವರೆಗೆ ಆರಿದ್ರಾ ಮಳೆ ಆಗಲಿದೆ.   ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಲಿ ಎಂಬ ಹರಕೆ ಹಾರೈಕೆಗಳು ಫಲಿಸಲಿ.      ಆರಿದ್ರಾ ಮಳೆ ಹಬ್ಬವು ಕರ್ನಾಟಕದ ಮಲೆನಾಡು ಭಾಗದಲ್ಲಿ ಮುಖ್ಯವಾಗಿ ಶಿವಮೊಗ್ಗ, ಸಾಗರ, ಸೊರಬ ಮುಂತಾದ ಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುವ ಸಾಂಪ್ರದಾಯಿಕ ಮತ್ತು ಪ್ರಕೃತಿ ಆರಾಧನೆಯ ವಿಶೇಷ ಹಬ್ಬವಾಗಿದೆ.  ಮಳೆರಾಯನನ್ನು ಸ್ವಾಗತಿಸಲು ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸಲು ಈ ಹಬ್ಬವನ್ನು ನಡೆಸಲಾಗುತ್ತದೆ.   ಆರಿದ್ರಾ ಮಳೆ ಹುಯ್ಯದಿದ್ದರೆ ದಾರಿದ್ರ್ಯ ಖಚಿತ ಎಂಬುದು ಹಿರಿಯರ ನಂಬಿಕೆ. ಮಳೆಗಾಲದ ಆರಂಭದಲ್ಲಿ ಮಳೆರಾಯನನ್ನು ಒಲಿಸಿಕೊಳ್ಳಲು ರೈತರು ಪ್ರಕೃತಿಯನ್ನು ಪೂಜಿಸುತ್ತಾರೆ.  ಮಲೆನಾಡಿನ ಕೆಲವು ಸಮುದಾಯಗಳು ವಿಶೇಷವಾಗಿ ದೀವರ ಜನಾಂಗ ತಮ್ಮ ಆರಾಧ್ಯ ದೈವವಾದ ಕುಮಾರರಾಮನನ್ನು ಈ ಹಬ್ಬದಲ್ಲಿ ನೆನೆಯುತ್ತಾರೆ.  ಹಬ್ಬದ ಸಂದರ್ಭದಲ್ಲಿ ಸುರಿಯುವ ಮಳೆ ನೀರನ್ನು ಹಿಡಿದಿಟ್ಟು ನಂತರ ದೇವರ ವಿಗ್ರಹಕ್ಕೆ ಅದೇ ನೀರಿನಿಂದ ಅಭಿಷೇಕ ಮಾಡುವ ಪದ್ಧತಿಯೂ ಇದೆ.   ಹಬ್...

4066. ಭಾಗ -7 ಘಟ್ಟಕ್ಕೆ ಕರಾವಳಿಗರ ವಲಸೆ

ಭಾಗ_7. ಘಟ್ಟಕ್ಕೆ_ಕರಾವಳಿ_ಭಾಗದವರ_ವಲಸೆ.     ಆ ಕಾಲದ ನಿರಂತರ ವಲಸೆಯಲ್ಲಿ ಸಂಪಾಜೆ, ಬಿಸಿಲೆ, ಶಿರಾಡಿ, ಚಾರ್ಮಾಡಿ, ಆಗುಂಬೆ, ಬಾಳೆಬರೆ, ಕೊಲ್ಲೂರು, ಕಾರಣಿ, ಕೋಗಾರು, ಗೇರುಸೊಪ್ಪೆ, ದೊಡ್ಮನೆ, ದೇವಿಮನೆ, ಬೇಡ್ತಿ ಘಾಟಿ, ಯಲ್ಲಾಪುರ ಘಾಟಿ, ಗಣೇಶನಗುಡಿ ಘಾಟಿ ಮತ್ತು ಅಣಮೋಡ ಘಾಟಿಗಳು ಬಹು ಮುಖ್ಯ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆ ಆಗಿತ್ತು.   ಹಿಂದೆ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ  20ಕ್ಕೂ ಹೆಚ್ಚು ಘಾಟಿ ಕಾಡುದಾರಿಗಳು ಇದ್ದವಂತೆ ಆದರೆ ನನ್ನ ಮಾಹಿತಿಗೆ ದೊರಕಿದ್ದು 16 ಘಾಟಿ ದಾರಿಗಳು ಮಾತ್ರ.   ಆದರೆ ಇಂದು ನಕ್ಷೆಯಲ್ಲಿ ಅಧಿಕೃತವಾಗಿ ನಾವೆಲ್ಲರೂ ವಾಹನಗಳಲ್ಲಿ ಸಂಚರಿಸುವ ಸುಸಜ್ಜಿತ ಘಾಟಿಗಳ ಸಂಖ್ಯೆ 15 ಮಾತ್ರ.    ಈಗ ಈ ಮಾರ್ಗಗಳು ಸರ್ವ ಋತು ರಸ್ತೆಗಳಾಗಿ ವಾಹನಗಳು ನಿತ್ಯ ಸಂಚರಿಸುತ್ತದೆ.    ಇನ್ನೊಂದು ಘಾಟಿ ರಸ್ತೆ ಆಗಿದ್ದ ಬೈಂದೂರಿನಿಂದ ಸಾಗರ ಪ್ರಾಂತ್ಯಕ್ಕೆ ನೇರ ಮತ್ತು ಅತಿ ಸಮೀಪದ ಘಾಟಿ ರಸ್ತೆ ಆಗಿದ್ದ #ಬೈಂದೂರು_ಕಾರಣಿ ಘಟ್ಟ ರಸ್ತೆ ಮಾತ್ರ ಈಗ ಸಂಪೂರ್ಣ ಅರಣ್ಯದಿಂದ ಮುಚ್ಚಿ ಹೋಗಿ ಬಳಕೆಯಲ್ಲಿಲ್ಲ.    ಹಿಂದಿನ ನನ್ನ ಲೇಖನದಲ್ಲಿ ನಾನು ಘಟ್ಟಕ್ಕೆ ಕರಾವಳಿ ಭಾಗದ ಜನರ ನಿರಂತರ ವಲಸೆಗೆ ಹೆಚ್ಚು ಬಳಕೆ ಮಾಡಿದ್ದ ಶಿರಾಡಿ, ಚಾರ್ಮಾಡಿ, ಆಗುಂಬೆ, ಬಾಳೆಬರೆ ಎಂಬ ವಲಸಿರ ಹೆಬ್ಬಾಗಿಲು ಎಂದು ನಾಲ್ಕು ಘಾಟ...