ನೊಣವಿನಕೆರೆ_ಅಜ್ಜಯ್ಯ #ಮುಖ್ಯಮಂತ್ರಿ_ಡಿಕೆ_ಶಿವಕುಮಾರ್. ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣಕ್ಕೆ 12 ಕಿಲೋ ಮೀಟರ್ ದೂರದಲ್ಲಿರುವ #ನೊಣವಿನಕೆರೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗುವುದು ನಿಶ್ಚಿತ. ನೊಣವಿನಕೆರೆಯಲ್ಲಿ ಜೀವಂತ ಸಮಾಧಿಯಾದ ಪ್ರಸಿದ್ಧ ಸಂತರೆಂದರೆ #ಶ್ರೀಕಾಡುಸಿದ್ಧೇಶ್ವರಸ್ವಾಮಿಗಳು ಅವರ ಪೂರ್ಣ ಹೆಸರು ಶ್ರೀ ಕರಿಸಿದ್ದೇಶ್ವರ ಸ್ವಾಮಿಗಳು. ಇದು ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದ್ದು ಇಲ್ಲಿನ ಶ್ರೀ ಕಾಡುಸಿದ್ಧೇಶ್ವರ ಮಠ/ಕರಡಾಳು ಮಠ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿನ ಮೂಲ ಗುರುಗಳಾದ ಶ್ರೀಕಾಡುಸಿದ್ಧೇಶ್ವರ ಸ್ವಾಮಿಗಳು ಪವಾಡ ಪುರುಷರಾಗಿದ್ದು, ಲೋಕಕಲ್ಯಾಣಕ್ಕಾಗಿ ನೊಣವಿನಕೆರೆಯ ಗವಿಮಠದ ಆವರಣದಲ್ಲಿ ಜೀವಂತ ಸಮಾಧಿಯಾದರು ಎಂಬ ಇತಿಹಾಸವಿದೆ. ಈ ಮಠಕ್ಕೆ ಶತಶತಮಾನಗಳ ಇತಿಹಾಸವಿದ್ದು ವೀರಶೈವ ಲಿಂಗಾಯತ ಧರ್ಮದ ಶೂನ್ಯಸಿಂಹಾಸನ ಪರಂಪರೆಯನ್ನು ಹೊಂದಿದೆ. ಇಲ್ಲಿನ ಸ್ವಾಮಿಗಳು ತಪಸ್ಸು ಮತ್ತು ಜನಸೇವೆಯ ಮೂಲಕ ಈ ಭಾಗದಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ್ದರು. ಇಂದು ಈ ಸ್ಥಳವು ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು ಪ್ರತಿವರ್ಷ ಇಲ್ಲಿ ವಿಶೇಷ ಪೂಜೆ, ಜಾತ್ರೆ ಮತ್ತು ಆರಾಧನಾ ಮಹೋತ್ಸವಗಳು ಜರುಗುತ್ತವೆ. ...
ಶ್ರೀಮಾತಾ_ಆಸ್ಪತ್ರೆ_ಕುಂದಾಪುರ #ಪ್ರಸಿದ್ಧ_ಮಾನಸಿಕ_ಆಸ್ಪತ್ರೆ #ಡಾ_ಪ್ರಕಾಶ್_ತೋಳಾರ್_ಮುಖ್ಯ_ವೈದ್ಯಾದಿಕಾರಿ_ನೇತೃತ್ವದಲ್ಲಿ #ಕರಾವಳಿಯಿಂದ_ಮಲೆನಾಡಿನವರೆಗೆ_ಪ್ರಸಿದ್ಧಿ_ಪಡೆದಿದೆ #Famouspsychologist #srimathahospital #kundapura #Drprakashtolar ಇವತ್ತು ನಮ್ಮ ದೇವರ ಮಗ ನಾರಾಯಣ ಪ್ರದಾನ್ ನನ್ನು ಕುಂದಾಪುರದ ಪ್ರಸಿದ್ಧ ಶ್ರೀ ಮಾತಾ ಆಸ್ಪತ್ರೆಯ ಮುಖ್ಯ ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್ ಹತ್ತಿರ ರೋಟಿನ್ ಚೆಕ್ ಅಪ್ ಗೆ ನಮ್ಮ ಅಣ್ಣ ಕರೆದೊಯ್ದಿದ್ದರು. ಕಳೆದ ನಾಲ್ಕು ವರ್ಷಗಳಿಂದ ನಾರಾಯಣ ಪ್ರಧಾನ್ ಚಿಕಿತ್ಸೆ ಕುಂದಾಪುರದ ಶ್ರೀಮಾತಾ ಆಸ್ಪತ್ರೆಯಲ್ಲೇ ನಡೆಯುತ್ತಿದೆ. ನಾರಾಯಣ ಈ ರೀತಿ ಗುಣ ಆಗುತ್ತಾನೆಂಬ ಭರವಸೆ ನನಗಿರಲಿಲ್ಲ ಆದರೆ ಡಾ.ಪ್ರಕಾಶ್ ತೋಳಾರ್ ಗುಣ ಪಡಿಸಿದ್ದಾರೆ ಅವರಿಗೆ ನಾನು ಅಭಾರಿ. ನಾರಾಯಣ ಪ್ರಧಾನ್ ಹದಿನಾಲ್ಕು ವರ್ಷಗಳ ಹಿಂದೆ ದಾರಿಯಲ್ಲಿ ಸಿಕ್ಕಿದ ಅನಾಥ ಹುಡುಗ ಆದ್ದರಿಂದ ವೈದ್ಯರು ಚಿಕಿತ್ಸೆಗೆ ಹಣ ಪಡೆಯುವುದಿಲ್ಲ. ಮನೋವೈದ್ಯರಾದ #ಡಾ_ಪ್ರಕಾಶ್_ತೋಳಾರ್ ಅವರ ಮಾನವೀಯತೆಗೆ ಇದು ಸಾಕ್ಷಿ. ಕಾರವಾರದಿಂದ ಕೇರಳದ ಕಾಸರಗೋಡಿನ ತನಕ ಇವರು ಪ್ರಸಿದ್ದರಾಗಿದ್ದವರು ಕಳೆದ ಹತ್ತು ವರ್ಷಗಳಿಂದ ಘಟ್ಟದ ಮೇಲಿನ ಮಲೆನಾಡಿನಾದ್ಯಂತ ಇವರ ಚಿಕಿತ್ಸೆ ಬಗ್ಗೆ ಒಳ್ಳೆಯ ಹೆಸರಿಂದ ಜನಪ್ರಿಯರಾ...