Skip to main content

Posts

4042. ಭಾಗ -4 ಘಟ್ಟಕ್ಕೆ ಕರಾವಳಿ ಭಾಗದವರ ವಲಸೆ

ಭಾಗ_4_ಘಟ್ಟಕ್ಕೆ_ಕರಾವಳಿಗರ_ವಲಸೆ.  ಕುವೆಂಪು ಸಾಹಿತ್ಯದಲ್ಲಿ ಕರಾವಳಿ ವಲಸಿಗರ ಪಾತ್ರಗಳು ಅದರಲ್ಲಿ ಬ್ಯಾರಿ ಮುಸ್ಲಿಂ ಮತ್ತು ತುಳುವ ಕೃಷಿ ಕಾರ್ಮಿಕರ ಉಲ್ಲೇಖಗಳು.   ಕರಾವಳಿಯಿಂದ ಘಟ್ಟಕ್ಕೆ ನಡೆಯುತ್ತಿದ್ದ ಈ ವಲಸೆ  ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅಧ್ಯಾಯವಾಗಿದೆ.    ನಿಮ್ಮ ಪೂರ್ವಿಕರು ಈ ರೀತಿ ವಲಸೆ ಮಾಡಿದ್ದರಾ?....ಹಾಗಿದ್ದರೆ ನೀವು ಈ ಕರಾವಳಿ ಜನರ ವಲಸೆಯ ಸರಣಿ ಲೇಖನಗಳನ್ನು ನಿಮ್ಮ ಕುಟುಂಬದಲ್ಲಿ ಶೇರ್ ಮಾಡಿ ಈ ಮೂಲಕ ಅವರಿಗೆ ನಿಮ್ಮ ಪೂರ್ವಿಕರ  ಆ ದಿನಗಳ ಕಷ್ಟದ ದಿನಗಳನ್ನ ನೆನಪು ಮಾಡಿ ಕೊಡಿ ಅದು ದಾಖಲಾಗಿ ಉಳಿಯಲಿ.   ತೀರ್ಥಹಳ್ಳಿಯ ಹಳೆಯ ಆಗುಂಬೆ ಸ್ಟಾಂಡ್ ಚಿತ್ರ ಈ ಲೇಖನದ ಜೊತೆ ಲಗತ್ತಿಸಿದೆ,ಕುವೆಂಪು ಅವರೂ ಕೆಳಗೆ ಆಗುಂಬೆ ಮೂಲಕ ಘಟ್ಟ ಇಳಿಯುವ ರಸ್ತೆಯನ್ನ #ಘಟ್ಟದ_ಕೆಳಗಿನ_ರಸ್ತೆ ಅಂತ ಸಾಹಿತ್ಯದಲ್ಲಿ ಬರೆದಿದ್ದಾರೆ.   #ಕುವೆಂಪು,ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಸಾಹಿತ್ಯವು ಪ್ರಮುಖವಾಗಿ ಮಲೆನಾಡಿನ ಜನಜೀವನ, ಸಂಸ್ಕೃತಿ ಮತ್ತು ಅಲ್ಲಿನ ಪರಿಸರವನ್ನು ಚಿತ್ರಿಸುತ್ತದೆ ಆದರೆ ಅವರ ಕಾದಂಬರಿಗಳಾದ #ಕಾನೂರು_ಹೆಗ್ಗಡಿತಿ ಮತ್ತು #ಮಲೆಗಳಲ್ಲಿ_ಮದುಮಗಳು ಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಕರಾವಳಿ ವಲಸೆಯ ಅತ್ಯಂತ ಮಹತ್ವದ ಉಲ್ಲೇಖಗಳು ಮತ್ತು ಚಿತ್ರಣಗಳು ಸಿಗುತ್ತವೆ.   ...
Recent posts

4041.ರೇಡಿಯೊ ಕಾಲರ್ ಆನೆ

ಕಳೆದ_ವರ್ಷ_ಈ_ಆನೆ_ಮಾಡಿದಷ್ಟು_ಸುದ್ದಿ_ಬೇರಾವ_ಕಾಡಾನೆ_ಮಾಡಿರಲಿಲ್ಲ.   ನೆನಪು ಮಾಡಿಕೊಳ್ಳಿ ಒಂದು ವರ್ಷದ ಹಿಂದೆ ಈ ಆನೆಯ ಬಿಂದಾಸ್ ಸಂಚಾರದ ಬಗ್ಗೆ ಮತ್ತು ಅಂದಿನ ಭಯದ ದಿನಗಳ ಬಗ್ಗೆ ಈ ಆನೆ ಸೆರೆಹಿಡಿಯುವ ತನಕ ಈ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು.   ತೀಥ೯ಹಳ್ಳಿಯಿಂದ ಸಂಚಾರ ಪ್ರಾರಂಬಿಸಿ ಯಡೂರು, ಹುಲಿಕಲ್, ಹೊಸಂಗಡಿ- ಹೆನ್ನಾಬೈಲು ಮತ್ತು  ಸಿದ್ದಾಪುರದಲ್ಲೆಲ್ಲ ಸಂಚರಿಸಿತ್ತು.   ಇಷ್ಟೆಲ್ಲಾ ಬಿಂದಾಸ್ ಆಗಿ ತಿರುಗಾಡಿದ ಆನೆ ಕುತ್ತಿಗೆಯಲ್ಲಿ ರೇಡಿಯೋ ಕಾಲರ್ ಇತ್ತು ಇದರ ಸಹಾಯದಿಂದಲೇ ಈ ಆನೆ ಯನ್ನು ಕುಂದಾಪುರ ಸಮೀಪದ ಹೊಸಂಗಡಿಯ ಹೆನ್ನಾಬೈಲಿನಲ್ಲಿ ಸೆರೆ ಹಿಡಿದು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಬಿಟ್ಟಿದ್ದರು  ಈ ಆನೆ ಮಾಡಿದಷ್ಟು ಸುದ್ದಿ ಬೇರಾವ ಕಾಡಾನೆ ಮಾಡಿರಲಿಲ್ಲ ಇದು ಬಿಂದಾಸ್ ಆಗಿ ಹಗಲು - ರಾತ್ರಿ ಊರೊಳಗೆ ಸಂಚರಿಸುತ್ತಿದ್ದರಿಂದ ಎಲ್ಲರ ಸೆಲ್ ಫೋನ್ ನಲ್ಲಿ ಇದರ ಪೋಟೋ ದಾಖಲಾಯಿತು.    ಬಹುಶಃ ಕಾಡಾನೆಯೊಂದು ಮಲೆನಾಡಿನಲ್ಲಿ ಯಾರಿಗೂ ತೊಂದರೆ ಕೊಡದೆ ಈ ರೀತಿ ಊರೊಳಗೆ ಬಿಂದಾಸ್ ಆಗಿ ಸಂಚರಿಸಿದ್ದು ಇದೇ ಮೊದಲು.    ಈ ಕಾಡಾನೆ ದಿನಕ್ಕೆ 50 KM ನಡೆಯುತ್ತಿತ್ತು, ಹುಲಿಕಲ್ ಘಾಟ್ ನಲ್ಲಿ ಸಂಚರಿಸುತ್ತಿದ್ದ ವಾಹನಗಳ ಅಕ್ಕಪಕ್ಕದಲ್ಲೇ ನಡೆಯುತ್ತಾ ಘಾಟಿ ಇಳಿದಿತ್ತು.    ಸಿದ್ದಾಪುರದ ಸಮೀಪದ #ಹೆನ್ನಾಬೈಲಿನ_ಬಾಮಿಕುಮ್ಕಿಯಲ್...

4040. ಬ್ಲಾಕ್ ಡಾಗ್ ಸ್ಕಾಚ್ ವಿಸ್ಕಿ ಹೆಸರಿಗೆ ಕಾರಣ

ಬ್ಲ್ಯಾಕ್_ಡಾಗ್_ಸ್ಕಾಚ್_ವಿಸ್ಕಿ_ಬ್ರಾಂಡ್_ಇತಿಹಾಸ    ಪ್ರಸಿದ್ಧವಾದ ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಈ ಸ್ಕಾಚ್ ವಿಸ್ಕಿ ಇತಿಹಾಸ ತುಂಬಾ ರೋಚಕವಾಗಿದೆ, ಇದು ಸ್ಕಾಟ್‌ಲ್ಯಾಂಡ್‌ನಲ್ಲಿ ಹುಟ್ಟಿ, ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಬೆಳೆದ ಕಥೆ ಇಲ್ಲಿದೆ. ಈ ಬ್ಲಾಕ್ ಡಾಗ್ ಬ್ರಾಂಡ್ ನಾಯಿ ಹೆಸರಲ್ಲ ಮೀನಿನ ಗಾಣಕ್ಕೆ ಸುರಿಯುವ ಕೃತಕ ಆಹಾರ ವಸ್ತುವಿನ ಹೆಸರು ಬ್ಲಾಕ್ ಡಾಗ್ ಈ ಸ್ಕಾಚ್ ವಿಸ್ಕಿಗೆ ಇಡುತ್ತಾರೆ. ​  ಬ್ರಿಟಿಷ್ ಭಾರತಕ್ಕಾಗಿ ಸಿದ್ಧವಾದ ​ಈ ಕಥೆ ಆರಂಭವಾಗುವುದು 1883 ರಲ್ಲಿ ಸ್ಕಾಟ್‌ಲ್ಯಾಂಡ್‌ನ ಲೀತ್  ಎಂಬಲ್ಲಿ.    ಬೊಂಬಾಯಿಯಲ್ಲಿ 'ಫಿಪ್ಸನ್ ಅಂಡ್ ಕಂಪನಿ' ಎಂಬ ಮದ್ಯದ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದ ಬ್ರಿಟಿಷ್ ಉದ್ಯಮಿ ಹರ್ಬರ್ಟ್ ಮುಸ್ಗ್ರೇವ್ ಫಿಪ್ಸನ್ ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತೀಯ ಗಣ್ಯರಿಗಾಗಿ ಒಂದು ಪ್ರೀಮಿಯಂ ಸ್ಕಾಚ್ ವಿಸ್ಕಿಯನ್ನು ಆಮದು ಮಾಡಿಕೊಳ್ಳಲು ಬಯಸಿದರು.   ​ಅದಕ್ಕಾಗಿ ಅವರು ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಮಾಸ್ಟರ್ ಬ್ಲೆಂಡರ್ ಆದ #ಜೇಮ್ಸ್_ಮ್ಯಾಕಿನ್ಲೇ ಅವರಿಗೆ ಆರ್ಡರ್ ನೀಡಿದರು.    ಮ್ಯಾಕಿನ್ಲೇ ಅವರು ಸುದೀರ್ಘ ಸಮುದ್ರ ಪ್ರಯಾಣದಲ್ಲೂ ತನ್ನ ಗುಣಮಟ್ಟವನ್ನು ಕಳೆದುಕೊಳ್ಳದ, ಕುಡಿಯಲು ಅತ್ಯಂತ ಮೃದುವಾದ  ಒಂದು ವಿಸ್ಕಿಯನ್ನು ಸಿದ್ಧಪಡಿಸಿದರು. ​ #ಬ್ಲ್ಯ...

4039.ಭಾಗ -3. ಘಟ್ಟಕ್ಕೆ ಕರಾವಳಿಯ ಜನರ ವಲಸೆ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ... #ಭಾಗ_3.  ಘಟ್ಟದ ಹೆಬ್ಬಾಗಿಲಾಗಿದ್ದ ಪಶ್ಚಿಮ ಘಟ್ಟದ ನಾಲ್ಕು ಘಾಟಿಗಳು.   ಯಾಕೆ_ಈ_ರೀತಿ_ವಲಸೆ_ಬಂದರು?.... ಆ ರೀತಿ ವಲಸೆ ಬಂದ ಸಾವಿರಾರು ಕುಟುಂಬಗಳು ಘಟ್ಟದಲ್ಲಿಯೇ ನೆಲೆಸಿ ಅಲ್ಲಿನ ಖಾಯಂ ನಿವಾಸಿಗಳಾಗಿದ್ದಾರೆ, ಅವರಿಗೆ ಅವರ ಕುಟುಂಬಗಳು ವಲಸೆಯ ಕಥೆ ಮರೆತು ಹೋಗಿರಬಹುದು.   ನಿಮ್ಮ ಕುಟುಂಬದಲ್ಲಿ ಇಂತಹ ವಲಸೆ ನಡೆದಿತ್ತಾ?....ಹಾಗಾದರೆ ಈ ಲೇಖನ ನೀವೂ ಓದಿ ಮತ್ತು ನಿಮ್ಮ ತಲೆಮಾರಿನವರಿಗೆ ಈ ಲೇಖನ ಶೇರ್ ಮಾಡಿ ತಲುಪಿಸಿ, ಅವರಿಗೆ ತಮ್ಮ ಕುಟುಂಬದ ಮರೆತು ಹೋದ ಮೂಲ ವಲಸೆ ಇತಿಹಾಸ ನೆನಪಾಗಿ ಉಳಿಯಲು ಸಹಾಯವಾಗುತ್ತದೆ.    ಇಂದು ನಾವು ಕೇವಲ ಗಂಟೆಗಳಲ್ಲಿ ದಾಟುವ ಈ ಘಾಟಿಗಳನ್ನು ಅಂದು ನಮ್ಮ ಹಿರಿಯರು ದಿನಗಟ್ಟಲೆ  ನಡೆದು ದಾಟುತ್ತಿದ್ದರು, ಆ ದಟ್ಟ ಕಾಡಿನ ಹಾದಿಯಲ್ಲಿ ಅವರು ಎದುರಿಸಿದ ಅತಿ ದೊಡ್ಡ ಭಯ ಅಥವ ಸಂಕಷ್ಟದ ಬಗ್ಗೆ ನಿಮ್ಮ ಅಜ್ಜ - ಅಜ್ಜಿಯಂದಿರು ಏನಾದರು ಹೇಳಿದ್ದಾರಾ? ....    ನಿಮ್ಮ ಪೂರ್ವಜರು ಕರಾವಳಿಯಿಂದ ಸಾಗರ - ಹೊಸನಗರ - ತೀರ್ಥಹಳ್ಳಿ -ಕೊಪ್ಪ ಎನ್ ಆರ್ ಪುರ -ಶೃ೦ಗೇರಿ - ಚಿಕ್ಕಮಗಳೂರು - ಮೂಡಿಗೆರೆ - ಕೊಡಗು ಹಾಸನಕ್ಕೆ ಈ ರೀತಿ ವಲಸೆ ಬಂದಿದ್ದರೆ  ಈ ಲೇಖನ ನಿಮ್ಮ ಊರಿನ ಗೆಳೆಯರಿಗೆ ಶೇರ್ ಮಾಡಿ ಅವರಿಗೂ ಈ ಕಷ್ಟದ ದಿನದ ನಿಮ್ಮ ಪೂರ್ವಿಕರ ವಲಸೆ ಯಾತ್ರೆ ಗೊತ್ತಾಗಲಿ.   ಆಗೆಲ್ಲ ನಡೆದೇ ಘಟ್ಟ ...

4038. ಭಾಗ -2 ಘಟ್ಟಕ್ಕೆ ಕರಾವಳಿ ಭಾಗದ ಜನರ ವಲಸೆ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ... #ಭಾಗ_2. #ಯಾಕೆ_ಈ_ರೀತಿ_ವಲಸೆ_ಬಂದರು?.... ನಿಮ್ಮ ಕುಟುಂಬದಲ್ಲಿ ಇಂತಹ ವಲಸೆ ನಡೆದಿತ್ತಾ?....  ನಿಮ್ಮ ತಂದೆ ಅಥವ ಅಜ್ಜಂದಿರಿಗೆ ಈ ಲೇಖನ ಕಳಿಸಿ ವಿಚಾರಿಸಿ ನಿಮ್ಮ ಪೂರ್ವಜರು ಕರಾವಳಿಯ ಯಾವ ಊರಿಂದ ವಲಸೆ ಬಂದಿದ್ದರು? ಅಂತ ಕೇಳಿ ... ಹಾಗಾದರೆ ನಿಮ್ಮ ತಲೆಮಾರಿನವರಿಗೆ ಈ ಲೇಖನ ಶೇರ್ ಮಾಡಿ ತಲುಪಿಸಿ, ಅವರಿಗೆ ತಮ್ಮ ಕುಟುಂಬದ ಮರೆತು ಹೋದ ಮೂಲ ವಲಸೆ ಇತಿಹಾಸ ನೆನಪಾಗಿ ಉಳಿಯಲು.   ಎಷ್ಟನೇ ಇಸವಿಯಿಂದ ಇದು ಪ್ರಾರಂಭವಾಯಿತು?...   ಆ ಕಾಲದ ಪ್ರಯಾಣ ಹೇಗಿತ್ತು?...  ವಲಸೆ ಬಂದವರ ಜೀವನ ಶೈಲಿ ಹೇಗಿತ್ತು?...   ಈ ವಲಸೆ ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅಧ್ಯಾಯವಾಗಿದೆ ಗೆಳೆಯರಾದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಕರಾವಳಿ ಭಾಗದ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ಈ ಲೇಖನ ಬರೆಯಲು ಪ್ರೇರಣೆ ಆಯಿತು, ಈ  ಲೇಖನ ದೀರ್ಘವಾಗಿರುವುದರಿಂದ ಕೆಲವು ಭಾಗಗಳಲ್ಲಿ ಪ್ರಕಟಿಸುತ್ತಿದ್ದೇನೆ.   ಕರಾವಳಿ ಜನರ ವಲಸೆಯು ಪ್ರಮುಖವಾಗಿ ಹವಾಮಾನ ವೈಪರೀತ್ಯಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ನಗರೀಕರಣದಿಂದ ಉಂಟಾಗುತ್ತಿತ್ತು.  ಸಾವಿರಾರು ಜನ ಈಗ ಘಟ್ಟ ವಾಸಿಗಳಾಗಿದ್ದಾರೆ ಅವರಿಗೆ ಅವರ ಕುಟುಂಬಗಳು ವಲಸೆ ಬಂದ ಕಥೆ ಮರೆತು ಹೋಗಿರಬಹುದು.   "ಘಟ್ಟಕ್...

4037. ಭಾಗ -1 ಘಟ್ಟಕ್ಕೆ ವಲಸೆ ಬಂದ ಕರಾವಳಿ ಜನ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ... #ಭಾಗ_1. #ಯಾಕೆ_ಈ_ರೀತಿ_ವಲಸೆ_ಬಂದರು?....   ಎಷ್ಟನೇ ಇಸವಿಯಿಂದ ಇದು ಪ್ರಾರಂಭವಾಯಿತು?...   ಆ ಕಾಲದ ಪ್ರಯಾಣ ಹೇಗಿತ್ತು?...  ವಲಸೆ ಬಂದವರ ಜೀವನ ಶೈಲಿ?...      ಗೆಳೆಯರಾದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಕರಾವಳಿ ಭಾಗದ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ಈ ಲೇಖನ ಬರೆಯಲು ಪ್ರೇರಣೆ ಆಯಿತು, ಈ  ಲೇಖನ ದೀರ್ಘವಾಗಿರುವುದರಿಂದ ಕೆಲವು ಭಾಗಗಳಲ್ಲಿ ಪ್ರಕಟಿಸುತ್ತೇನೆ. ಕರಾವಳಿ ಜನರ ವಲಸೆಯು ಪ್ರಮುಖವಾಗಿ ಹವಾಮಾನ ವೈಪರೀತ್ಯಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ನಗರೀಕರಣದಿಂದ ಉಂಟಾಗುತ್ತಿತ್ತು.  ಸಾವಿರಾರು ಜನ ಈಗ ಘಟ್ಟ ವಾಸಿಗಳಾಗಿದ್ದಾರೆ ಅವರಿಗೆ ಅವರ ಕುಟುಂಬಗಳು ವಲಸೆ ಬಂದ ಕಥೆ ಮರೆತು ಹೋಗಿರಬಹುದು. #ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ಎಂಬುದು ಕರ್ನಾಟಕದ ಸಾಮಾಜಿಕ ಮತ್ತು ಅರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅದ್ಯಾಯವಾಗಿದೆ.   ಈ ಕರಾವಳಿ ಜನರ ವಲಸೆ ಬಗ್ಗೆ ಶಿವರಾಮ ಕಾರಂತರು ತಮ್ಮ ಕಾದಂಬರಿಯಲ್ಲಿ ದಾಖಲಿಸಿದ್ದಾರೆ ಅದು ಸಿನಿಮಾ ಕೂಡ ಆಗಿ ಪ್ರಸಿದ್ಧಿ ಪಡೆದಿತ್ತು.    ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ #ಚೋಮನದುಡಿಯಲ್ಲಿ ಕರಾವಳಿ ಭಾಗದ ವಲಸೆಯ ಚಿತ್ರಣವು ಕೇವಲ ಭೌಗೋಳಿಕ ಸ್ಥಳಾಂತರವಾಗಿರದೆ ಅದು ಅಂದಿನ ಕಾಲದ ಸಾಮಾಜಿಕ, ಆರ್ಥಿಕ ಮತ...

4036. ಶಿವಮೊಗ್ಗ ಬೆಂಗಳೂರು ವಿಮಾನಗಳು ರದ್ದು ಯಾಕೆ?

ಶಿವಮೊಗ್ಗ_ಬೆಂಗಳೂರು_ವಿಮಾನ_ಸಂಚಾರ_ರದ್ದು_ಏಕೆ?...  ಶಿವಮೊಗ್ಗ ಬೆಂಗಳೂರು ವಿಮಾನ ಮಾರ್ಗದಲ್ಲಿ ಪ್ರಯಣಿಕರ ಸಂಖ್ಯೆ ಉತ್ತಮವಾಗೇ ಇತ್ತು ಸುಮಾರು ಶೇಕಡಾ 80% ಸೀಟುಗಳು ಭರ್ತಿ ಆಗುತ್ತಿತ್ತು ಆದರೂ ವಿಮಾನಗಳ ಸಂಚಾರ ಸ್ಥಗಿತಗೊಳಿಸಲು ಕಾರಣ ಏನು?...  ತಿಂಗಳಿಗೆ ಸರಾಸರಿ 10 ರಿಂದ 13 ಸಾವಿರ ಜನ ವಿಮಾನದಲ್ಲಿ ಈ ಮಾರ್ಗದಲ್ಲಿ ಸಂಚರಿಸಿದರೂ ವಿಮಾನ ಸಂಚಾರ ನಿಲ್ಲಿಸಿದ್ದು ಏಕೆ?...   ಶಿವಮೊಗ್ಗ ಬೆಂಗಳೂರಿಗೆ #ಉಡಾನ್ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ ಏಕೆ?..   ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿ ಮೋದೀಜಿ ಅವರಿಂದ ಉದ್ಘಾಟನೆಗೊಂಡ #ಕುವೆಂಪು_ ವಿಮಾನ ನಿಲ್ದಾಣದಲ್ಲಿ ಸಾಲು ಸಾಲಾಗಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುತ್ತಿರುವ ವಿಮಾನ ಸಂಸ್ಥೆಗಳ ನಿರ್ಧಾರದಿಂದ ಮೇಲಿನ ಈ ರೀತಿಯ ಪ್ರಶ್ನೆಗಳು ಏಳುತ್ತಿದೆ.   ಪ್ರಸ್ತುತ #ಶಿವಮೊಗ್ಗದಿಂದ_ಬೆಂಗಳೂರಿಗೆ_ಯಾವುದೇ_ನೇರ_ವಿಮಾನ_ಸೌಲಭ್ಯ_ಲಭ್ಯವಿಲ್ಲ.  ​ಈ ಹಿಂದೆ ಇಂಡಿಗೋ (IndiGo) ಸಂಸ್ಥೆಯು ಶಿವಮೊಗ್ಗ - ಬೆಂಗಳೂರು ನಡುವೆ ನೇರ ವಿಮಾನ ಸೇವೆ ನಡೆಸುತ್ತಿತ್ತಾದರೂ, ಕಾರ್ಯಾಚರಣೆಯ ಕಾರಣಗಳಿಂದಾಗಿ ಅದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.   ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವು ಆಗಸ್ಟ್ 31, 2023 ರಂದು ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.   ಭಾರತೀಯ ವಿಮಾನಯಾನ ಪ್ರಾಧಿಕಾರ (AAI) ಮತ್ತು ನಾಗರಿಕ ವಿಮಾನಯ...