ಆನಂದಪುರಂ_ರೈಲ್ವೆಸ್ಟೇಶನ್_ವಡೆ_ವಾಸಣ್ಣ ಆನಂದಪುರಂ ರೈಲು ನಿಲ್ದಾಣದ ಹೆಸರು ಪ್ರಸಿದ್ದಿಗೆ ಬಂದಿದ್ದೇ ವಾಸಣ್ಣ ತಯಾರಿಸುತ್ತಿದ್ದ ಬಿಸಿ ಬಿಸಿ ಗರಿ ಗರಿ ಉದ್ದಿನ ವಡೆಯಿಂದ. ಖ್ಯಾತ ಚಲನಚಿತ್ರ ನಟ ಡಾಕ್ಟರ್ #ರಾಜಕುಮಾರ್, ಮುಖ್ಯಮಂತ್ರಿ #ರಾಮಕೃಷ್ಣಹೆಗಡೆ ಕೂಡ ವಾಸಣ್ಣರ ಉದ್ದಿನ ವಡೆ ಸವಿದವರು ಈ ಮಾರ್ಗದಲ್ಲಿ ಆಗಮಿಸುವ ಎಲ್ಲಾ ಸೆಲೆಬ್ರಿಟಿಗಳು -ಜನ ಸಾಮಾನ್ಯರೂ ವಾಸಣ್ಣನ ರೈಲ್ವೆ ಕ್ಯಾಂಟೀನ್ ನ ಉದ್ದಿನ ವಡೆಗೆ ಫಿದಾ ಆಗಿದ್ದರು. ವಾಸಣ್ಣ ದಂಪತಿಗಳು ಡಬಲ್ ಘೋಡಾ ಬ್ರಾಂಡಿನ ಉತ್ಕೃಷ್ಟ ಉದ್ದಿನ ಬೇಳೆ ನೆನೆಸಿ ನಂತರ ಅದನ್ನು ತಿರುವ ಕಲ್ಲಿನಲ್ಲಿ ಕೈಯಲ್ಲಿ ಅರೆದು ಕಟ್ಟಿಗೆ ಒಲೆಯಲ್ಲಿ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ಕರಿದು ಮುತ್ತುಗದ ಎಲೆಯಲ್ಲಿ ಹಾಕಿ ಜೊತೆಗೆ ಕಾಯಿ ಚಟ್ನಿ ಸುರಿದು ಕೊಡುತ್ತಿದ್ದರು. ಆ ಕಾಲದಲ್ಲಿ ಗ್ರೈಂಡರ್, LPG ಗ್ಯಾಸ್ ಸ್ಟವ್ ನಮ್ಮ ಊರಿಗೆ ಬಂದಿರಲಿಲ್ಲ. ಆಗ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಒಂದು ರೈಲು ಇನ್ನೊಂದು ಬೆಂಗಳೂರಿಂದ ತಾಳಗುಪ್ಪಕ್ಕೆ ಒಂದು ರೈಲು ಬರುತ್ತಿತ್ತು ಇದೇ ರೀತಿ ರಾತ್ರಿ ಎರೆಡು ರೈಲು ಇವೆಲ್ಲವೂ ಕಲ್ಲಿದ್ದಲು ಉರಿಸಿ ಉುಗಿಯಿಂದ ಚಲಿಸುತ್ತಿದ್ದ ಉಗಿ ಬಂಡಿಗಳಾದ್ದರಿಂದ ಅದಕ್ಕೆ ಬೇಕಾದ ನೀರು ಆನಂದಪುರ0 ನಿಲ್ದಾಣದಲ್ಲೇ ತುಂಬಿಸಿಕೊಳ್ಳ ಬೇಕಾದ್ದರಿಂದ ಹೆಚ್ಚು ಸಮಯ ರೈಲು ನಿಲ್ಲುತ್ತಿತ್ತು. ಪ್ರಯಾಣಿಕರು ವಾಸಣ್ಣನ ಕ್ಯಾಂಟೀನ...
ಹೀಗೂ ಉಂಟೇ... ಇಷ್ಟು ಕಡಿಮೆ ಬೆಲೆಯಲ್ಲಿ ಅಡಿಕೆ ಸಸಿ ಸಿಗುತ್ತಾ? ... #ಮಲೆನಾಡಿನಲ್ಲಿ_ಕೇವಲ_20_ರೂಪಾಯಿಗೆ_ಅಡಿಕೆ_ಸಸಿ_ಲಭ್ಯವಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದಲ್ಲಿ ( ರಿಪ್ಪನಪೇಟೆ ಹೊಸನಗರ ಮುಖ್ಯ ರಸ್ತೆಯಲ್ಲಿ) #ಮಂಜುಶ್ರೀ_ನರ್ಸರಿ ಇದೆ. ಇದು ನನ್ನ ಆಪ್ತ ಗೆಳೆಯರಾದ ಮಂಜುನಾಥ ಭಟ್ಟರದ್ದು ಇವತ್ತು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅವರಲ್ಲಿ #ಅಡಿಕೆ_ಸಸಿಗಳು_ಲಭ್ಯವಿದೆ_ಬೆಲೆ_20ರೂಪಾಯಿ. ಇದು ಕೇಳಿದವರು ಆಶ್ಚರ್ಯ ಪಡುತ್ತಾರೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗುತ್ತಿದೆ ಇದರಿಂದ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ ಇದೆ ಆದರೆ ಅಡಿಕೆ ಸಸಿ ಬೆಲೆ ಒಂದಕ್ಕೆ 100 ರಿಂದ 150 ರ ತನಕ ಆಗಿದೆ. ಹಾಗಂತ ಇವರು ನರ್ಸರಿ ಕ್ಷೇತ್ರಕ್ಕೆ ಹೊಸಬರಲ್ಲ 1985 ರಿಂದ ಇವರು ಈ ಕ್ಷೇತ್ರದಲ್ಲಿದ್ದಾರೆ ಸುಮಾರು 40 ವರ್ಷದ ಅನುಭವ ಇವರದ್ದು ಇವರ ನರ್ಸರಿಯ ಯಾವುದೇ ಸಸಿ ಕೂಡ ಉತ್ಕೃಷ್ಟ ದರ್ಜೆಯದ್ದೇ ಆಗಿದೆ. #ಜೇನಿಮಂಜುನಾಥಭಟ್ಟರ ಜೀವನ ಶೈಲಿಯೇ ಬೇರೆ ಅವರಿಗೆ ಆಸೆ ಇಲ್ಲವೇ ಇಲ್ಲ ಅಲ್ಲಿ ದುರಾಸೆ ಎಲ್ಲಿ ಬರಬೇಕು? ... ಕಳೆದ ವರ್ಷ ಇವರಲ್ಲಿ ಅಡಿಕೆ ಸಸಿ ಬೆಲೆ ಕೇವಲ 12 ಇತ್ತು. ಅವರ ಕಂಡೀಷನ್ ಏನೆಂದರೆ ನೇರವಾಗಿ ರೈತರಿಗೆ ಮಾತ್ರ ಅಡಿಕೆ ಸಸಿ ಮಾರಾಟ ಮಾಡುತ್ತಾರೆ ...