Skip to main content

Posts

4050.ರಾಣಿ_ಚೆನ್ನಬೈರಾದೇವಿ_ಮೊದಲ_ಸಿನಿಮಾ ಸ್ಥಗಿತವಾಯಿತು ಏಕೆ?...

ರಾಣಿ_ಚೆನ್ನಬೈರಾದೇವಿ_ಮೊದಲ_ಸಿನಿಮಾ   2013 ರಲ್ಲಿ ಚಿತ್ರಿಕರಣ ಪ್ರಾರಂಭವಾಗಿ ಅರ್ದಕ್ಕೆ ನಿಂತು ಹೋಗಿತ್ತು,ಆ ಸಿನಿಮಾದಲ್ಲಿ ರಾಣಿ ಚೆನ್ನ ಬೈರಾದೇವಿ ಪಾತ್ರ ನಟಿ #ಶೃತಿ ಆಯ್ಕೆ ಆಗಿದ್ದರು.   ಆಗ ನಮ್ಮ ಗೇರುಸೊಪ್ಪೆಯ ರಾಣಿ ತೆರೆಗೆ ಬರುತ್ತಾರೆಂದು ನಾವೆಲ್ಲ ಆಸೆ ಪಟ್ಟಿದ್ದೆವು ಆದರೆ ಚಿತ್ರಿಕರಣ ಅರ್ಧದಲ್ಲೇ ನಿಂತು ಹೋಯಿತು ಇದು ಇತಿಹಾಸ ಆಸಕ್ತರಿಗೆ ತುಂಬಾ ನಿರಾಸೆ ಮಾಡಿತ್ತು.    ಈಗ 13 ವರ್ಷಗಳ ನಂತರ #ಬಂದನ ಸಿನಿಮಾ ಖ್ಯಾತಿಯ #ರಾಜೇಂದ್ರಸಿಂಗ್_ಬಾಬು ನಟಿ #ರಮ್ಯಾರನ್ನ ರಾಣಿ ಚೆನ್ನ ಬೈರಾದೇವಿ ಪಾತ್ರಕ್ಕೆ ಆಯ್ಕೆ ಮಾಡಿ ಸಿನಿಮಾ ಮಾಡಲಿದ್ದಾರೆ.   ರಾಣಿ ಚೆನ್ನ ಬೈರಾದೇವಿಯ ಎರಡನೆ ಸಿನಿಮಾ ಯಾವುದೇ ಅಡೆ ತಡೆ ಇಲ್ಲದೆ ಚಿತ್ರಿಕರಣ ಮುಗಿಸಿ ತೆರೆಯ ಮೇಲೆ ಬರಲಿ ಎಂದು ಹಾರೈಸೋಣ.   ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ #ವಿಷ್ಣುವರ್ಧನ್ ಅವರ ಆಪ್ತರಾಗಿದ್ದ ಖ್ಯಾತ ನಿರ್ದೇಶಕ #ಬಿ_ರಾಮಮೂರ್ತಿ ಅವರು 2013 ರಲ್ಲಿ #ರಾಣಿ_ಚೆನ್ನಭೈರಾದೇವಿ' ಎಂಬ ಐತಿಹಾಸಿಕ ಸಿನಿಮಾವನ್ನು ನಿರ್ದೇಶಿಸಲು ಯೋಜನೆ ರೂಪಿಸಿದ್ದರು.   ​ಕನ್ನಡದ ಹಿರಿಯ ನಟಿ ಶ್ರುತಿ ಅವರು ಈ ಚಿತ್ರದಲ್ಲಿ ರಾಣಿ ಚೆನ್ನಭೈರಾದೇವಿಯ ಪ್ರಧಾನ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದರು. ​  ಗೇರುಸೊಪ್ಪೆಯ ರಾಣಿಯಾಗಿದ್ದ ಚೆನ್ನಭೈರಾದೇವಿ ಕರಾವಳಿ ಕರ್ನಾಟಕವನ್ನು ಬರೋಬ್ಬರಿ 54 ವರ್ಷಗಳ ಕಾಲ ಆಳಿದ ಧೀರ ಮಹಿಳೆ.  ...
Recent posts

4049.ಪ್ರೆಸ್_ಕ್ಲಬ್_ಪ್ರೆಸ್_ಮೀಟ್

ಪ್ರೆಸ್_ಕ್ಲಬ್_ಪ್ರೆಸ್_ಮೀಟ್   ಬೆಂಗಳೂರಿನ ಪ್ರತಿಷ್ಟಿತ ಪ್ರೆಸ್ ಕ್ಲಬ್ ನಲ್ಲಿ ಪ್ರಖ್ಯಾತ ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದವರು ಶಿಸ್ತು ಕಾಪಾಡಿಕೊಳ್ಳದಿರುವುದು ಇಡೀ ಪತ್ರಿಕಾ ವ್ಯವಸ್ಥೆಯ ದೊಡ್ಡ ಲ್ಯಾಪ್ಸ್ ಆಗಿದೆ.    ಅತಿಥಿಗಳು ಪತ್ರಕರ್ತರ ಪ್ರಶ್ನೆಗಳಿಗೆ ಗೌರವ ನೀಡದಿದ್ದರೆ ಅದು ಪತ್ರಿಕಾ ಸ್ವಾತಂತ್ರ್ಯದ ಅವಮಾನ ಅದೇ ರೀತಿ ಪತ್ರಕರ್ತರು ವೃತ್ತಿಪರತೆ ಮರೆತು ವರ್ತಿಸಿದರೆ ಅದು ಮಾಧ್ಯಮ ರಂಗ ತನಗೆ ತಾನೇ ಮಾಡಿಕೊಳ್ಳುವ ಅವಮಾನ.   ಪತ್ರಿಕಾಗೋಷ್ಠಿಯ ಯಶಸ್ಸು ಅಡಗಿರುವುದು ಪಾರದರ್ಶಕತೆಯಲ್ಲಿ,ಸಂಘಟಕರು ಯಾವುದೇ ಮುಚ್ಚುಮರೆಯಿಲ್ಲದೆ ಮಾಹಿತಿ ನೀಡುವುದು ಮತ್ತು ಪತ್ರಕರ್ತರು ಯಾವುದೇ ಪೂರ್ವಾಗ್ರಹವಿಲ್ಲದೆ ವಸ್ತುನಿಷ್ಠವಾಗಿ ಪ್ರಶ್ನೆ ಕೇಳಿದಾಗ ಮಾತ್ರ ಪತ್ರಿಕಾಗೋಷ್ಠಿಯ ನೈಜ ಉದ್ದೇಶ ಸಫಲವಾಗುತ್ತದೆ.    ಹಾಗಾದರೆ ಆ ಪತ್ರಿಕಾಗೋಷ್ಟಿಯಲ್ಲಿ ಬೆಂಗಳೂರು ಫ್ರೆಸ್ ಕ್ಲಬ್ ನ ನಿಯಮ ಉಲ್ಲಂಘನೆ ಆಯಿತಾ...   ಇದರಿಂದ ಬೆಂಗಳೂರಿನ ಪ್ರೆಸ್ ಕ್ಲಬ್ ಈಗ ಕೈಗೊಂಡ ನಿರ್ಧಾರಗಳು ಏನು?...   ಕರ್ನಾಟಕದಲ್ಲಿ ಅಥವಾ ಯಾವುದೇ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ  ನಡೆಸಲು ಮತ್ತು ಅದರಲ್ಲಿ ಭಾಗವಹಿಸಲು ಕೆಲವು ನಿರ್ದಿಷ್ಟ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು  ಪಾಲಿಸಬೇಕಾಗುತ್ತದೆ.    ಇವುಗಳನ್ನು ಆಯಾ ಪ್ರೆಸ್ ಕ...

4048.ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ.#ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.

ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ. #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.   ನಾಡಿನ ಪ್ರಖ್ಯಾತ ಶ್ರೀಮತಿ #ನಂದಿನಿ ಮತ್ತು #ಆಕರ್ಷ ಅವರ #ಡಿಜಿಟಲ್_ಮಾಧ್ಯಮದಲ್ಲಿ  ಪ್ರಸಾರವಾದ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಎಪಿಸೋಡುಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟವರು ಲೋಕರಾಜ್ ಜೈನ್.    #ರಾಜೇಂದ್ರ_ಸಿಂಗ್_ಬಾಬು ಅವರ ನಿರ್ದೇಶನದಲ್ಲಿ ಗೇರುಸೊಪ್ಪೆಯ ಜೈನ ರಾಣಿ ಚೆನ್ನ ಬೈರಾದೇವಿಯ ಸಿನಿಮಾ ನಿರ್ಮಾಣದ ಚಿತ್ರಿಕರಣ ಪೂರ್ವದ ಕೆಲಸಗಳು ನಡೆಯುತ್ತಿದೆ.    ದರ್ಮಸ್ಥಳದ ಧರ್ಮಾಧಿಕಾರಿಗಳಾದ #ಡಾ_ವಿರೇಂದ್ರಹೆಗ್ಗಡೆ ಅರ್ಪಿಸುವ #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ ಸಿನಿಮಾದ ಚಿತ್ರಕಥೆ ದಿವಂಗತ ನಾಡೋಜ ಕಮಲ ಹಂಪನಾ, ನಾಡೋಜ ನಾಗರಾಜ ಹಂಪನಾ ಮತ್ತು ಸಾಗರದ ಲೋಕರಾಜ್ ಜೈನ್ ಜಂಟಿಯಾಗಿ ಬರೆದಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಜಲಪಾತದ #ಹೆನ್ನೆ ಊರಿನ ಲೋಕರಾಜ್ ಜೈನ್  ವೃತ್ತಿಯಲ್ಲಿ ಉಪನ್ಯಾಸಕರು ಪ್ರವೃತ್ತಿಯಲ್ಲಿ ಇತಿಹಾಸ ಸಂಶೋದಕರು.   ಇವರು ರಾಣಿ ಚೆನ್ನ ಬೈರಾದೇವಿ ವಂಶಸ್ಥರೂ ಹೌದು, ಗೇರುಸೊಪ್ಪೆಯ ಸಾಳ್ವ ವಂಶದ ಇತಿಹಾಸದ ಸಂಶೋಧನೆ ಕೆಲಸದಲ್ಲಿ ಅನೇಕ ದಶಕದಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ತೊಡಗಿಕೊಂಡವರು.   ನನ್ನ ಇವರ ಪರಿಚಯ ಆಗಿದ್ದು ತುಮರಿ ಸಮೀಪದ #ಹಾಳಸಸಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ #ಚಂದ್ರಕುಮಾರರಿಂದ. ...

4047.ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5

  ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5.   ಈ ಸರಣಿ ಲೇಖನ ಮಾಲೆಗೆ ಅಭೂತಪೂವ೯ ವೀಕ್ಷಣೆ - ಪ್ರತಿಕ್ರಿಯೆಗಳು ಬರುತ್ತಿರುವುದು ನನಗೆ ಮತ್ತೆ ಮತ್ತೆ ಬರೆಯಲು ಹುಮ್ಮಸ್ಸು ತರುತ್ತಿದೆ.   ವಲಸೆ ಎಂಬುದು ನಿರಂತರ ಮತ್ತು ಸರ್ವಕಾಲಿಕ ಸತ್ಯ, ಜಗತ್ತು ಇರುವವರೆಗೂ ವಲಸೆ ನಿಲ್ಲಲು ಸಾಧ್ಯವೇ ಇಲ್ಲ ಏಕೆಂದರೆ ಪ್ರಕೃತಿ ನಿಯಮ ಮತ್ತು ಮಾನವನ ಆಸೆಗಳು ನಿರಂತರವಾಗಿ ಬದಲಾಗುತ್ತಿರುತ್ತದೆ.    ಕರಾವಳಿ ಭಾಗದ ಜನರು ವಿಶೇಷವಾಗಿ ದಕ್ಷಿಣ ಕನ್ನಡ - ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಲ್ಲಾ ಜಾತಿ ಧರ್ಮದ ಜನರು ಮಲೆನಾಡು ಮತ್ತು ಘಟ್ಟದ ಮೇಲಿನ ಶಿವಮೊಗ್ಗ - ಚಿಕ್ಕಮಗಳೂರು - ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ನಡೆಸಿದ ವಲಸೆ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದದ್ದು ಎಂದು ಪರಿಗಣಿಸ ಬಹುದು.      #ಕರಾವಳಿಗರ ಘಟ್ಟದ ವಲಸೆಯನ್ನು ವಿಶ್ವದ ಮೂರು ಪ್ರಮುಖ ವಲಸೆಗಳಾದ #ಅಮೇರಿಕಾ_ಪಶ್ಚಿಮ ವಲಸೆ, #ಯುರೋಪಿನ_ಹ್ಯೂಗೆ_ನಾಟ್ಸ್ ವಲಸೆ ಮತ್ತು 1840 ರ ದಶಕದ ಕ್ಯಾಲಿಫೋರ್ನಿಯಾದ #ಚಿನ್ನದ_ಗಣಿ_ವಲಸೆ ಜೊತೆ ಸಮೀಕರಿಸಬಹುದೆಂದು #ಅಮೇರಿಕನ್_ಹಿಸ್ಟಾರಿಕಲ್_ಅಸೋಸಿಯೇಷನ್‌ ಲೇಖನದಲ್ಲಿ ಉಲ್ಲೇಖಿಸಿದೆಯಂತೆ ಆದ್ದರಿಂದ ನಮ್ಮ ಕರ್ನಾಟಕದ ಕರಾವಳಿಯ ಜನರ ಘಟ್ಟದ ವಲಸೆ ಮಹತ್ವದ ವಲಸೆ ವಿಚಾರವಾಗಿದೆ.  ನಾನು ಕೂಡ ಈ ರೀತಿಯೇ  ಕರಾವಳಿಯಿಂದ ಘಟ್ಟಕ್ಕೆ ವಲಸೇ ಬಂದ ಕುಟುಂಬಕ್ಕೆ ಸೇರಿದವನು ಆದ್...

4046. ಮಹಾಮಂಡಲೇಶ್ವರಿ ಚೆನ್ನ ಬೈರಾದೇವಿ ಸಿನಿಮಾ ಆಗಲಿದೆ

ಗೇರುಸೊಪ್ಪೆಯ_ಕಾಳುಮೆಣಸಿನರಾಣಿ ಚೆನ್ನಬೈರಾದೇವಿ_ಸಿನಿಮಾ_ಆಗಲಿದೆ. #Pepper_Queen_Raina_de_Pimenta.     ಈ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕರು ಯಾರು ಗೊತ್ತಾ? ....    ದೊಡ್ಡ ಬಜೆಟ್ ಸಿನಿಮಾಗೆ ಯಾರು ಯಾರು ಹಣ ಹಾಕಲಿದ್ದಾರೆ?.....     ಗೇರುಸೊಪ್ತೆಯ ಜೈನ ರಾಣಿ ಚೆನ್ನ ಬೈರಾದೇವಿ ಆಡಳಿತಾವಧಿ ಕ್ರಿ.ಶ. 1552 ರಿಂದ 1606.  ಗೇರುಸೊಪ್ಪೆ ಮತ್ತು ಉತ್ತರ ಕನ್ನಡದ ಮಲೆನಾಡು ಭಾಗದಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ #ಕಾಳುಮೆಣಸನ್ನು Black Pepper ಬೆಳೆಯಲಾಗುತ್ತಿತ್ತು.    ಇದನ್ನು ಯುರೋಪಿಯನ್ ರಾಷ್ಟ್ರಗಳಿಗೆ ರಾಣಿ ಚೆನ್ನ ಬೈರಾದೇವಿ ರಫ್ತು ಮಾಡುತ್ತಿದ್ದಾಗ ಆ ಕಾಳು ಮೆಣಸಿನ ವ್ಯಾಪಾರದ ಮೇಲಿನ ಅವರ ಏಕಸ್ವಾಮ್ಯ ಮತ್ತು ನಿಯಂತ್ರಣವನ್ನು ನೋಡಿ ಬ್ರಿಟಿಷರು ಮತ್ತು ಪೋರ್ಚುಗೀಸರು ಗೇರುಸೊಪ್ಪೆಯ ರಾಣಿ ಚೆನ್ನಬೈರಾದೇವಿಯವರಿಗೆ ಗೌರವದಿಂದ #ರೈನಾ_ಡಿ_ಪಿಮೆಂಟಾ Raina de Pimenta ಅಂದರೆ " ಕಾಳು ಮೆಣಸಿನ ರಾಣಿ" ಎಂದು ಬಿರುದು ನೀಡಿ ಕರೆದರು.   ಶರಾವತಿ ನದಿ ದಂಡೆಯ ಜೈನ ರಾಣಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ರಾಜ್ಯವನ್ನ ವರದಾ ನದಿ ದಂಡೆಯ #ಕೆಳದಿ_ರಾಜ_ವೆಂಕಟಪ್ಪನಾಯಕ ವಶಪಡಿಸಿಕೊಳ್ಳುತ್ತಾರೆ ಆ ಸಂದರ್ಭದಲ್ಲಿ ರಾಣಿ ಚೆನ್ನ ಬೈರಾದೇವಿಯನ್ನು #ಆನಂದಪುರಂ ಕೋಟೆಯಲ್ಲಿ ಬಂದಿಸಿಡುತ್ತಾರೆ.    ನಂತರ ಸಾಗರದ ...

4045. ಬ್ಲಾಕ್ & ವೈಟ್ ಸ್ಕ್ಯಾಚ್ ಬ್ರಾಂಡ್ ಕಥೆ

ಬ್ಲಾಕ್_ಆಂಡ್_ವೈಟ್  #Black_and_White  ಬ್ಲಾಕ್ & ವೈಟ್ ಸ್ಕಾಚ್ ವಿಸ್ಕಿಯ ಇತಿಹಾಸವು ಅತ್ಯಂತ ಜನಪ್ರಿಯ ಹಾಗೂ ಜಗತ್ತಿನಾದ್ಯಂತ ಲಕ್ಷಾಂತರ ಮದ್ಯಪ್ರಿಯರನ್ನು ಸೆಳೆದ ವಿಶಿಷ್ಟ ಕಥೆಯಾಗಿದೆ.    ಎರಡು ಮುದ್ದಾದ ನಾಯಿಗಳ ಲೋಗೋ ಹೊಂದಿರುವ ಈ ಬ್ರ್ಯಾಂಡ್ ಹುಟ್ಟಿಕೊಂಡಿದ್ದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.   ​ಈ ಬ್ರ್ಯಾಂಡ್‌ನ ಸೃಷ್ಟಿಕರ್ತ #ಜೇಮ್ಸ್_ಬುಕಾನನ್ ಕೆನಡಾದಲ್ಲಿ ಹುಟ್ಟಿ ಸ್ಕಾಟ್‌ಲ್ಯಾಂಡ್‌ನಲ್ಲಿ ಬೆಳೆದವರು.   ಇವರು 1879ರಲ್ಲಿ ಲಂಡನ್‌ಗೆ ಬಂದು ಮದ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡರು.    ಅಂದಿನ ಕಾಲದಲ್ಲಿದ್ದ ಸ್ಕಾಚ್ ವಿಸ್ಕಿಗಳು ಸಾಮಾನ್ಯ ಜನರಿಗೆ ಕುಡಿಯಲು ತುಂಬಾ ಕಟುವಾಗಿರುತ್ತಿದ್ದವು ​ಇದನ್ನು ಗಮನಿಸಿದ ಬುಕಾನನ್, ಜನರಿಗೆ ಸುಲಭವಾಗಿ ಇಷ್ಟವಾಗುವಂತಹ, ಮೃದುವಾದ ಮತ್ತು ಹಗುರವಾದ  ಹೊಸ ಬ್ಲೆಂಡೆಡ್ ವಿಸ್ಕಿಯನ್ನು ಸಿದ್ಧಪಡಿಸಿ 1884 ರಲ್ಲಿ ಮಾರುಕಟ್ಟೆಗೆ ತಂದರು.  ಇದಕ್ಕೆ ಅವರು ಮೊದಲು ಇಟ್ಟ ಹೆಸರು #ಬುಕಾನನ್ಸ್_ಬ್ಲೆಂಡ್" Buchanan's Blend.   ​ಜೇಮ್ಸ್ ಬುಕಾನನ್ ತಮ್ಮ ವಿಸ್ಕಿಯನ್ನು ಬಿಳಿ ಬಣ್ಣದ ಲೇಬಲ್ ಹೊಂದಿದ್ದ ಕಪ್ಪು ಬಾಟಲಿಗಳಲ್ಲಿ ಮಾರಾಟ ಮಾಡುತ್ತಿದ್ದರು.    ಅಂಗಡಿಗಳಿಗೆ ಬರುವ ಗ್ರಾಹಕರು ಇದರ ಅಸಲಿ ಹೆಸರನ್ನು ಕರೆಯುವ ಬದಲು, ಸುಲಭವಾಗಿ ಗುರುತಿಸಲು ಆ ಕಪ್ಪು ಮತ್ತು ಬಿಳಿ ಬಾಟಲಿ ಕೊಡಿ Th...

4044.ಫೈರ್_ಪ್ರೂಪ್_ವಸ್ತುಗಳಿಂದ_ಮಾತ್ರ_ಇಂಟಿರಿಯರ್_ಡೆಕೋರೇಷನ್_ಮಾಡಿಸಿ

ಫೈರ್_ಪ್ರೂಪ್_ವಸ್ತುಗಳಿಂದ_ಮಾತ್ರ_ಇಂಟಿರಿಯರ್_ಡೆಕೋರೇಷನ್_ಮಾಡಿಸಿ.   ನೀವು ಯಾವುದೇ ಹೋಟೆಲ್ - ರೆಸ್ಟೋರೆಂಟ್ ಅಥವ ಮನೆ ಪ್ರವೇಶಿಸುವ ಮುನ್ನ ಅಲ್ಲಿನ ಇಂಟೀರಿಯರ್ ಗಮನಿಸಿ ಅದು ಅಗ್ನಿ ನಿರೋಧಕ ಆಗಿಲ್ಲದಿದ್ದರೆ ಪ್ರವೇಶ ಮಾಡಲೇ ಬೇಡಿ.    ಹೋಟಲ್ ರೆಸ್ಟೋರೆಂಟ್ ತೆರೆಯುವ ಉದ್ಯಮಿಗಳಲ್ಲಿ ನನ್ನ ವಿನಂತಿ ದಯಮಾಡಿ ಅಗ್ನಿ ಸುರಕ್ಷತೆ ಇಲ್ಲದ ಒಳಾಂಗಣ ವಿನ್ಯಾಸ ಮಾಡಿಸಲೇ ಬೇಡಿ.   ಹೋಟೆಲ್ - ರೆಸ್ಟೋರೆಂಟ್ - ಮಾಲ್ ಅಥವ ಮನೆಗಳಲ್ಲಿ ಅದರ ಮಾಲಿಕರುಗಳೇ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇಂತಹ ದುರಂತಗಳು ಸಂಭವಿಸಿದಂತೆ ನೋಡಿಕೊಳ್ಳಬೇಕು.    ಆದರೆ ಒಳಾಂಗಣ ವಿನ್ಯಾಸಗಾರರು ಮತ್ತು ಪಾಲ್ ಸೀಲಿಂಗ್ ಮಾಡಿಸುವ ಹೆಚ್ಚಿನ ಜನರು ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ.    ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟುತ್ತಾರೆ ಆದರೆ ಅಗ್ನಿ ನಿರೋಧಕ ಅಲ್ಲದ ವಸ್ತುವಿನಿಂದ ಒಳಾಂಗಣ ವಿನ್ಯಾಸ ಮತ್ತು ಪಾಲ್ ಸೀಲಿಂಗ್ ಗಳನ್ನ ಮಾಡಿಸುತ್ತಾರೆ.    ಕಳೆದೆ ವರ್ಷ ಉಡುಪಿಯ ಬಾರ್ ಮಾಲಿಕ ದಂಪತಿಗಳು ಇಂತಹ ಅಗ್ನಿ ದುರಂತದಲ್ಲಿ ಬಲಿ ಆಗಿದ್ದರು.     ನಿನ್ನೆ 2026ರ ಜೂನ್ 15ರ ಸೋಮವಾರ ಸಂಜೆ #ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆ (ನಟರಾಜ್ ಸರ್ಕಲ್ ಬಳಿ) ಇರುವ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' #ರೆಸ್ಟೋ_ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ದುರ್ಮರಣ...