Skip to main content

Posts

4014. ಹತ್ತನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ

ಶತಮಾನಗಳ_ಹಿಂದಿನ_ಶಾಸನಗಳಲ್ಲಿ_ಅಡಿಕೆ.    ಸಾವಿರ ವರ್ಷಗಳ ಹಿಂದೆ ಅಡಿಕೆ ಪ್ರಮುಖ ಬೆಳೆ ಆಗಿತ್ತು ಮತ್ತು ಅಡಿಕೆಗೆ ತೆರಿಗೆ - ಸುಂಕಗಳನ್ನ ವಿದಿಸಲಾಗಿತ್ತೆಂಬ ಶಾಸನಗಳು ಅಡಿಕೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದೆ.   ಹತ್ತನೆ ಶತಮಾನದಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿಯ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತು.  ಮತ್ತು ಹನ್ನೆರಡನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ ಉಲ್ಲೇಖಗಳ ಸಂಗ್ರಹಿಸಿ ಬರೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್ ಹಿರೇಜಂಬೂರ್.   ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ  ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ.    ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.     ಅವರು 10ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕ...
Recent posts

4013. ನಮ್ಮ ಕಲ್ಲುಕುಟಿಕ ದೈವ

ಕಲ್ಲುಕುಟುಕಸ್ವಾಮಿ  ಸೊಪ್ಪುಗುಡ್ಡೆ - ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ.   ನೂರಾ ನಲವತ್ತು ವರ್ಷಗಳ ನಮ್ಮ ಕುಟುಂಬದ ಕಥೆ.   ನಮ್ಮ ಕುಟುಂಬದ ಕಲ್ಲುಕುಟಿಕ ಮತ್ತು ವರ್ತೆ ದೈವಸ್ಥಾನ ಮೊನ್ನೆ 2026ರ ಮೇ ತಿಂಗಳ 10ನೇ ತಾರೀಖು ಭಾನುವಾರ    #ತೀರ್ಥಹಳ್ಳಿಯ_ಸೊಪ್ಪುಗುಡ್ಡೆಯಲ್ಲಿ ಪುನರ್ ಪ್ರತಿಷ್ಠಾಪನೆ ಆಯಿತು ಇದು ನೂರು ವರ್ಷಗಳಲ್ಲಿ ಮೂರನೆ ಪುನರ್ ಪ್ರತಿಷ್ಠಾಪನೆ ಆಗಿದೆ.      ಅಂದಾಜು 1890 ನೇ ಇಸವಿಯಲ್ಲಿ  ಉಡುಪಿ ಜಿಲ್ಲೆಯ #ಬೆಣ್ಣೆಕುದುರಿನಿಂದ ಘಟ್ಟಕ್ಕೆ ಬರುವಾಗ ನನ್ನ ಅಜ್ಜಿ ಅಬ್ಬಕ್ಕ ತನ್ನ ಜೊತೆ ತಂದಿದ್ದು ಕಲ್ಲುಕುಟಿಕ ದೇವರನ್ನ.        ನನ್ನ ಅಜ್ಜಿ ಕಲ್ಲುಕುಟಿಕ ದೇವರ ಆರಾದಿಸುತ್ತಿದ್ದವರು ಮತ್ತು  ಕಲ್ಲುಕುಟಿಕ ದೇವರ ನೇಮ, ರೀತಿ-ನೀತಿಗಳ ಕಟ್ಟುಪಾಡು ಕಡ್ಡಾಯವಾಗಿ ಪಾಲಿಸಿಕೊಂಡು ಬಂದವರು.      ಸುಮಾರು ನೂರು ವರ್ಷಗಳ ಹಿಂದೆ ತಾನು ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರನ್ನ ಸರಿಯಾಗಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಹೋಗುವ ಭರವಸೆಯನ್ನು ತನ್ನ ಅಕ್ಕನ ಮಗಳು ಶ್ರೀಮತಿ #ಚಿಕ್ಕಮ್ಮರ ಪತಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ  #ರಾಮಣ್ಣಪಾತ್ರಿಗಳಲ್ಲಿ ನೋಡಿ ಅಲ್ಲಿಗೆ ಕಲ್ಲುಕುಟಿಕ ದೇವರನ್ನ ಸ್ಥಳಾಂತರಿಸುತ್ತಾರೆ.     ಈ ರೀತಿ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ...

4012. ನನ್ನ 4000 ಬ್ಲಾಗ್ ಲೇಖನಗಳು

ನಾಲ್ಕು_ಸಾವಿರ_ನನ್ನ_ಬ್ಲಾಗ್_ಲೇಖನ   ನಾಲ್ಕು ಸಾವಿರ ಲೇಖನಗಳು,ನನ್ನ ಬ್ಲಾಗ್ ನಲ್ಲಿ ನಾನು ಬರೆದ ಲೇಖನಗಳ ಸಂಖ್ಯೆ 4000 ತಲುಪಿದೆ.    ಇದನ್ನೆಲ್ಲ ಪುಟಗಳಾಗಿ ಪರಿವರ್ತಿಸಿದರೆ 50 ಸಾವಿರಕ್ಕಿಂತ ಹೆಚ್ಚು ಪುಟಗಳಾಗಿ ಮಿಕ್ಕಲಿದೆ,ನನಗೇ ಆಶ್ಚರ್ಯಇದೆಲ್ಲ ನನ್ನಿಂದ ಸಾಧ್ಯವಾಯಿತಾ? ಅಂತ.    ಆ ಲೆಕ್ಕದಲ್ಲಿ ನಾನು ಪೇಸ್ ಬುಕ್ ನಲ್ಲಿ ಬರೆದದ್ದೆಲ್ಲವನ್ನೂ  ಬ್ಲಾಗ್ ನಲ್ಲಿ ದಾಖಲಿಸಿದ್ದರೆ ಲೇಖನ 10 ಸಾವಿರ ಆಗುತ್ತಿತ್ತು ಮತ್ತು ನನ್ನ ವಿಡಿಯೋಗಳು ಸೇರಿದರೆ ಇನ್ನೊಂದಿಷ್ಟು ಸಾವಿರ ಆದರೆ ನಾನು ನಾನು ಬರೆದ ಲೇಖನದಲ್ಲಿ ನನಗೆ ಇಷ್ಟವಾಗಿ ಅದನ್ನು ದಾಖಲೆಯಾಗಿ ಕಾಪಿಟ್ಟುಕೊಳ್ಳಬೇಕೆಂದೆನ್ನಿಸಿದ ಲೇಖನ ಮಾತ್ರ ದಾಖಲಿಸಿದ್ದೇನೆ.     Youtube ನಲ್ಲಿ ಸಾವಿರಾರು ಪ್ರತ್ಯೇಕ ವಿಡಿಯೊಗಳು ದಾಖಲಾಗಿದೆ,ಇದೆಲ್ಲ ಬೇಕಾ? ... ಇದರಿಂದ ಲಾಭ ಏನು? ...ಎಂದರೆ ಬೇಕಾಗಿಲ್ಲ -ಲಾಭ ಇಲ್ಲ ಅಂತನೇ ಹೇಳುತ್ತೇನೆ ಆದರೆ ಈ ಖಯಾಲಿಗಳು ಕೊಡುವ ಸಂತೋಷ ಇದೆಯಲ್ಲ ಅದರ ಲೆವೆಲ್ಲೇ ಬೇರೆ ಅದು ನಮ್ಮ ಜೀವಿತ ಅವದಿಯ ಒಂದು ರೀತಿ ಸ್ವರ್ಗ ಸುಖ.       ಶಿವಮೊಗ್ಗ ಜಿಲ್ಲೆಯ ವಿಶ್ವಕೋಶ ನಿಮ್ಮ ಬ್ಲಾಗ್, ನಿಮ್ಮ ಕ್ರಿಯಾಶೀಲತೆ  ನಮಗೂ ಪ್ರೇರಣೆ ಅಂತ ಪ್ರಖ್ಯಾತ ಸಾಹಿತಿ #ಕುಂ_ವೀರಭದ್ರಪ್ಪನವರು ಹೇಳಿದ್ದಾರೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಏನಿದೆ ಹೇಳಿ.    ನಾನು ಬರೆದ ಲೇಖ...

4011. ಮಟಕಾ ಕಿಂಗ್

ರತನ್_ಲಾಲ್_ಖತ್ರಿ ಜುಗಾರಿ ಕ್ಷೇತ್ರದಲ್ಲಿನ ದಂತಕಥೆ. ಭಾರತದ ಪ್ರಸಿದ್ಧ / ಕುಪ್ರಸಿದ್ದ ಮಟ್ಕಾ ಕಿಂಗ್ ಏನಿದು ಓಪನ್ ಮತ್ತು ಕ್ಲೋಸ್ ನ ಸಂಕ್ಷಿಪ್ತ OC?... ಸಣ್ಣ ಸಣ್ಣ ಹಳ್ಳಿಗಳಿಗೂ ತಲುಪಿರುವ ಜುಗಾರಿ ಜಾಲ      ಮಟಕಾ ಕಿಂಗ್ ರತನ್ ಲಾಲ್ ಖತ್ರಿಯವರ ಜೀವನವು ಧರ್ಮಾತ್ಮ (1975) ಸೇರಿದಂತೆ ಜನಪ್ರಿಯ ಮಾಧ್ಯಮಗಳಲ್ಲಿ ಹಲವಾರು ಚಿತ್ರಣಗಳಿಗೆ ಸ್ಫೂರ್ತಿ ನೀಡಿದೆ ಎಂದರೆ ಅವರೆಷ್ಟು ಪ್ರಸಿದ್ದರೆಂದು ಗೊತ್ತಾಗುತ್ತದೆ.   2024 ರಲ್ಲಿ ತೆರೆಕಂಡ ವರುಣ್ ತೇಜ್ ನಟಿಸಿದ ಮಟ್ಕಾ ಎಂಬ ತೆಲುಗು ಚಿತ್ರ  ಮತ್ತು 2026 ರಲ್ಲಿ ತೆರೆಕಂಡ ವಿಜಯ್ ವರ್ಮಾ ನಟಿಸಿದ "ಮಟ್ಕಾ ಕಿಂಗ್" ಎಂಬ ಹಿಂದಿ ಜೀವನ ಚರಿತ್ರೆಯ ಸರಣಿಗಳು ಅವರ ಜೀವನ ಮತ್ತು ಕಾಲದಿಂದ ಪ್ರೇರಿತವಾಗಿವೆ.     ರಾಯ್ ಕಪೂರ್ ಫಿಲಂ ಮತ್ತು ಆತ್ ಪತ್ ಪ್ರೊಡಕ್ಷನ್ಸ್ ಭಾರತದಲ್ಲಿ "ಮಟ್ಕಾ ಕಿಂಗ್" ಆಗಿ ಖತ್ರಿ ಅವರ ಉದಯ ಮತ್ತು ಸ್ವಾತಂತ್ರ್ಯದ ನಂತರ ಭಾರತೀಯ ಸಮಾಜದ ಮೇಲೆ ಮಟ್ಕಾ ಜೂಜಾಟದ ಪ್ರಭಾವವನ್ನು ಎತ್ತಿ ತೋರಿಸುತ್ತವೆ.   ಬ್ರಿಟಿಷ್ ಭಾರತದ (ಈಗ ಪಾಕಿಸ್ತಾನ ) ಕರಾಚಿಯಲ್ಲಿ ಜನಿಸಿದ ಖತ್ರಿ 1947 ರ ವಿಭಜನೆಯ ಸಮಯದಲ್ಲಿ ಮುಂಬೈಗೆ ವಲಸೆ ಬಂದರು.   1960 ರ ದಶಕದ ಆರಂಭದಿಂದ 1990 ರ ದಶಕದ ಮಧ್ಯಭಾಗದವರೆಗೆ ಮೂಲ ಮಟ್ಕಾ ರಾಜ ಎಂದು ಕರೆಯಲ್ಪಡುವ ರತನ್ ಖತ್ರಿ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ರಾಷ್ಟ್ರವ್ಯ...

4010. ನೀಟ್ ಪರೀಕ್ಷೆ 2026 ಲೀಕ್

ನೀಟ್_ಪರೀಕ್ಷೆ 2026   ಪ್ರಶ್ನೆ ಪತ್ರಿಕೆಗಳ ಸೋರುವಿಕೆ ಮೂಲಕ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಅನರ್ಹತೆ.   ಬದಲಾಗ ಬೇಕಾಗಿದೆ ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತಾಗಬೇಕು.     #National_Eligibility_cum_Entrance Test NEET ನ ಪೂರ್ಣ ರೂಪವೆಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಇದನ್ನು ಸಾಮಾನ್ಯವಾಗಿ NEET (UG) ಎಂದು ಕರೆಯಲಾಗುತ್ತದೆ.  ಇದರ ಅರ್ಥ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ).   ಇದು MBBS, BDS, BAMS, BSMS, BUMS, ಮತ್ತು BHMS ಸೇರಿದಂತೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಭಾರತದಲ್ಲಿ ಪ್ರಾಥಮಿಕ, ಏಕ-ಗವಾಕ್ಷಿ (single window) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ ಇದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಾರ್ಷಿಕವಾಗಿ ನಡೆಸುತ್ತದೆ.   ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಈ ವರ್ಷದ NEET 2026 ಮರು ಪರೀಕ್ಷೆ ನಡೆಸಲಿದ್ದಾರೆ.     ಮೇ 12, 2026 ರಂದು NTA ಘೋಷಿಸಿದಂತೆ ಹೊಸ ದಿನಾಂಕಗಳು ಮತ್ತು ಪರಿಷ್ಕೃತ ಪ್ರವೇಶ ಪತ್ರದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತಾರೆ.    ಸರ್ಕಾರ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವನ್ನು ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಿದೆ.    NTA...

4009. ಕುಂಚಿಕಲ್ ಫಾಲ್ಸ್

ಕುಂಚಿಕಲ್_ಪಾಲ್ಸ್  ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉದ್ಭವ ಆಗುವ ವರಾಹಿ ನದಿಯ ಜಲಪಾತ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿ ಗ್ರಾಮದ ಅರಣ್ಯದಲ್ಲಿದೆ.   ವರಾಹಿ ನದಿಗೆ ಯಡೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಆಣೆಕಟ್ಟು ನಿರ್ಮಾಣವಾಗಿದೆ.     ವರಾಹಿ ನದಿ ಜಲಪಾತವಾಗಿ ಇಲ್ಲಿಂದ ದುಮುಕಿ ಉಡುಪಿ ಜಿಲ್ಲೆಯ ಹೊಸಂಗಡಿಯ ಮೂಲಕ ಕುಂದಾಪುರ ತಾಲೂಕಿನ ಬಸ್ರೂರು,ಗಂಗೊಳ್ಳಿ ಪ್ರದೇಶಗಳಲ್ಲಿ ಹರಿದು ಮುಂದೆ ಸೌಪರ್ಣಿಕಾ, ಕೇದಕ, ಚಕ್ರ ಮತ್ತು ಕುಬ್ಜ ನದಿಗಳನ್ನ ಸಂಗಮಿಸಿ ಅರಬ್ಬಿ ಸಮುದ್ರ ಸೇರುತ್ತದೆ.   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡು ಗ್ರಾಮದ ದಟ್ಟ ಅರಣ್ಯದಲ್ಲಿ ವರಾಹಿ ನದಿ ಜಲಪಾತ ಇದೆ.    1445 ಅಡಿ ಇದರ ಎತ್ತರ ಇದು ದೇಶದ ಅತ್ಯಂತ ದೊಡ್ಡ ಜಲಪಾತ ಎಂದು ದಾಖಲು ಆಗಿದೆ.    ಇದಕ್ಕೂ ಮೊದಲು ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ 1115 ಅಡಿ ಎತ್ತರದ ಮೇಘಾಲಯ ರಾಜ್ಯದ  #ನೋಹಾಕಾಲಿಕೈ ಜಲಪಾತ ಎಂದಾಗಿತ್ತು.     ಈಗ ವರಾಹಿ ನದಿಯ ನಮ್ಮ ಜಿಲ್ಲೆಯ #ಕುಂಚಿಕಲ್_ಪಾಲ್ಸ್ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಎಂಬ ದಾಖಲೆ ನಿರ್ಮಿಸಿದೆ.     ಎರೆಡು ವರ್ಷದ ಹಿಂದೆ ಈ ಬಗ್ಗೆ ನಾನು ಲೇಖನ ಬರೆದಾಗ ಅದ...

2008. ಆಂಜನೇಯ ಶಕ್ತಿ ಕೇಂದ್ರ ಬ್ರಾಂತೇಶ - ಕಾಂತೇಶ - ಶಾಂತೇಶ

ಅಧಿಕ_ಮಾಸ_2026  ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಮೂರು ಆಂಜನೇಯರ ದರ್ಶನ ಯಾತ್ರೆ ಅಧಿಕಮಾಸದಲ್ಲಿ ನಡೆಯುತ್ತದೆ ಗೊತ್ತಾ? ....   ಈ ಮೂರು ಅಂಜನೇಯ ವಿಗ್ರಹದಲ್ಲಿ ಸಾಲಿಗ್ರಾಮ ಅಳವಡಿಸಿದ್ದಾರೆ.    ಹಿಂದೂ ಪಂಚಾಂಗದಲ್ಲಿ ಅಧಿಕ ಮಾಸ ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರಕ್ಕೆ ಕೊನೆಗೊಳ್ಳುತ್ತದೆ.   ಅಧಿಕ ಮಾಸದಲ್ಲಿಯೇ  ಶಾಂತೇಶ, ಕಾಂತೇಶ, ಭ್ರಾಂತೇಶ ಮಹಿಮೆ ಅಪಾರ,ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡಲಗಿಯ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ದರ್ಶನ ಪಡೆದರೆ ಕಾಶಿ ಫಲಯಾತ್ರೆ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.    ಹೀಗಾಗಿ ಈ ಆಂಜನೇಯರಿಗೆ ಅಪಾರ ಭಕ್ತಸಮೂಹವಿದೆ, ಶಿಕಾರಿಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿ ಕದರಮಂಡಲಗಿ ಮತ್ತು 35 ಕಿ.ಮೀ ದೂರದಲ್ಲಿ ಸಾತೇನಹಳ್ಳಿ ಇರುವುದರಿಂದ, ಒಂದೇ ದಿನ ಈ ಮೂರೂ ಕ್ಷೇತ್ರಗಳನ್ನು ಭೇಟಿ ಮಾಡುವುದು ಸುಲಭ.   ಈ ಮಾಸದಲ್ಲಿ ದಾನ, ಪೂಜೆ, ವ್ರತ ಮತ್ತು ತೀರ್ಥಯಾತ್ರೆ (ವಿಶೇಷವಾಗಿ ಮಥುರಾ-ವೃಂದಾವನ) ಅತ್ಯಂತ ಫಲದಾಯಕವೆಂದು ಪರಿಗಣಿಸಲಾಗಿದೆ.   ಈ ಪವಿತ್ರ ತಿಂಗಳು ಪುರುಷೋತ್ತಮ ಮಾಸ ಅಥವ ಮಲಮಾಸ ಎಂದು ಕರೆಯುತ್ತಾ...