Skip to main content

4096.ನನ್ನ_ಪ್ರತಿವರ್ಷದ_ಶ್ರಾವಣ_ಮಾಸದ ಸದುಪಯೋಗ

ನನ್ನ_ಪ್ರತಿವರ್ಷದ_ಶ್ರಾವಣ_ಮಾಸದ
ಸದುಪಯೋಗ_ಹೀಗಿದೆ..

  #ಇದು_ನನ್ನ_ಸ್ವಂತ_ಪ್ರಯೋಗ_ಯಶಸ್ವಿ_ಆದ_ಕಥೆ.
#ಇದು_ಪುಸ್ತಕ_ರೂಪದಲ್ಲೂ_ಬರಲಿದೆ.

  ನೀವು ಕೂಡ ಹಂತ ಹಂತವಾಗಿ ಶ್ರಾವಣ ಮಾಸದಿಂದಲೇ ನಿಮ್ಮ ಸ್ಥೂಲಕಾಯ ನಿವಾರಣೆಗಾಗಿ, ಡಯಾಬಿಟೀಸ್ -ಬಿಪಿ ನಿಯಂತ್ರಣಕ್ಕಾಗಿ ಇದನ್ನು ಪ್ರಾರಂಭಿಸ ಬಹುದು.

    ಇವತ್ತಿನಿಂದ ಶ್ರಾವಣ ಮಾಸ ಅಂದರೆ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭವಾಗಿ ಮುಂದಿನ ಅಮವಾಸ್ಯೆ ದಿನಾಂಕ 11 - ಸೆಪ್ಟೆಂಬರ್ -2026 ಶುಕ್ರವಾರದ ತನಕ ಇರಲಿದೆ.

  ಶ್ರಾವಣ ಮಾಸ ಬಂತು ಎಂದರೆ ಹಬ್ಬಗಳ ಸಾಲು ಸಾಲು ಪ್ರಾರಂಭ..
 ಶ್ರಾವಣ ಸೋಮವಾರ ಆಚರಣೆ, ವರಮಹಾಲಕ್ಷ್ಮಿ ವೃತ,ನಾಗರ ಪಂಚಮಿ, ರಕ್ಷಾ ಬಂಧನ, ಕೃಷ್ಣಾಷ್ಟಮಿಗಳು.

  ಹಿಂದೂ ಧರ್ಮದಲ್ಲಿ ಪ್ರತಿ ಮನೆಗಳಳಲ್ಲಿ ಅಸ್ತಿಕ -ನಾಸ್ತಿಕರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ.

   ಬೇರೆ ಧರ್ಮಗಳಲ್ಲಿ ನಾಸ್ತಿಕರಿಗೆ ಪ್ರಾರ್ಥನ ಮಂದಿರ ಮತ್ತು ಅವರ ಸಮಾದಿಗಳಲ್ಲಿ ಕೆಲವು ಕಠಿಣ ಕಟ್ಟುಪಾಡುಗಳಿದೆ ಆದರೆ ಹಿಂದೂ ಧರ್ಮದಲ್ಲಿ ನಾಮಕರಣ - ವಿವಾಹ ಮತ್ತು ಅಂತ್ಯ ಸಂಸ್ಕಾರದಲ್ಲಿ ಅಂತಹ ಕಟ್ಟು ಪಾಡು ಇಲ್ಲ.

   ನಾನು ಪ್ರತಿ ವರ್ಷ ಶ್ರಾವಣ ಮಾಸವನ್ನ ನನ್ನದೇ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಆಚರಿಸುತ್ತೇನೆ.

   ಇದರಲ್ಲಿ ನನ್ನ ತೂಕ ನಿಯಂತ್ರಣ, ಡಯಾಬಿಟೀಸ್ ಮತ್ತು ಬಿಪಿ ನಿಯಂತ್ರಣವನ್ನ ಕೇಂದ್ರಿಕರಿಸಿ ನನ್ನ ದೇಹ ಶುದ್ಧಿ (detox ) ಮಾಡುತ್ತೇನೆ.

     ಇವತ್ತಿನಿಂದ ಶ್ರಾವಣ ಮಾಸ ಪೂರ್ತಿ ನಾನು ಕಾಫಿ ಅಥವ ಟೀ ಸೇವಿಸುವುದಿಲ್ಲ, ರಾತ್ರಿ ಊಟ ತ್ಯಜಿಸಿ ಏಳು ವರ್ಷ ಆಯಿತು ಅದು ಮುಂದುವರಿದಿದೆ.

   ನಾನು ವಾರದಲ್ಲಿ ಸೋಮವಾರ ಮತ್ತು ಗುರುವಾರ ಉಪವಾಸ ಮಾಡುತ್ತೇನೆ ಉಳಿದ ಐದು ದಿನ ವಾರದಲ್ಲಿ ಮಧ್ಯಾಹ್ನ ಮಾತ್ರ ಊಟ ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ,ಧಾನ್ಯಗಳು (ಕಾರ್ಬೋಹೈಡ್ರೇಟ್ ) ಇದರಿಂದ ನನ್ನ ಡಯಾಬಿಟೀಸ್ ರಿವರ್ಸಲ್ ನಿರಂತರವಾಗಿ ಮುಂದುವರಿಯಲು ಅತ್ಯವಶ್ಯಕ.

  ಇದೆಲ್ಲ ನಾನು ಕೆಲ ವರ್ಷಗಳ ಹಿಂದಿನ ಶ್ರಾವಣ ಮಾಸದಲ್ಲಿಯೇ ಒಂದೊಂದೆ ಆಚರಣೆ ಪ್ರಾರಂಬಿಸಿ ನಿತ್ಯ ಆಚರಣೆಗೆ ತಂದಿದ್ದು.

   ಪ್ರತಿ ನಿತ್ಯದ ಒಂದು ಗಂಟೆ ವಾಕಿಂಗ್, ಸಿದ್ದ ಸಮಾಧಿ ಯೋಗದ ಧ್ಯಾನ, ಪ್ರಾಣಯಾಮ ಗಳು ಕೂಡ ಮುಂದುವರಿಯುತ್ತದೆ.

  ನನ್ನ ಅವತ್ತಿನ 145 ಕಿಲೋ ತೂಕ ಈಗ 97 - 98 ರಲ್ಲಿದೆ, ಡಯಾಬಿಟೀಸ್ ನಿಯಂತ್ರಣಕ್ಕಾಗಿ ದಿನಕ್ಕೆ ಬೆಳಿಗ್ಗೆ ರಾತ್ರಿ ತೆಗೆದುಕೊಳ್ಳುತ್ತಿದ್ದ ಇನ್ಸುಲಿನ್ ಮಾತ್ರೆಗಳು ಈಗ ಇಲ್ಲ ಎಲ್ಲಾ ರೀತಿಯ ಸಿಹಿ ತಿಂದರೂ ಖಾಲಿ ಹೊಟ್ಟೆಯಲ್ಲಿ ಗರಿಷ್ಟ ಶುಗರ್ ಲೆವೆಲ್ 120 ಮತ್ತು ಊಟದ ನಂತರ 140 ದಾಟುತ್ತಿಲ್ಲ.

   ಬಿಪಿ ನಾರ್ಮಲ್ ಇದೆ ಅದಕ್ಕೆ ಸಂಜೆ ಒಂದು ಮಾತ್ರೆ ಮಾತ್ರ ಇದೆ, ಗೊರಕೆ ಸಂಪೂರ್ಣ ನಿಂತಿದೆ, ಹೊಕ್ಕಳಿನ ಹರ್ನಿಯ ಮಾಯವಾಗಿದೆ ಇದು ನನ್ನ ಸ್ವಂತ ಪ್ರಾಯೋಗ ಯಶಸ್ವಿ ಆದ ಕಥೆ.

   ಈ ಬಗ್ಗೆ ನಾನು ಬರೆದ ಪುಸ್ತಕ ಮುಂದಿನ ವರ್ಷದ ಶ್ರಾವಣ ಮಾಸದಲ್ಲಿ ಬಿಡುಗಡೆ ಮಾಡಬೇಕು ಅದಕ್ಕೆ ಏನು ಶೀರ್ಷಿಕೆ ಇಡಲಿ?...
     #ನನ್ನ_ಡಯಾಬಿಟೀಸ್_ರಿವರ್ಸಲ್
#ಮತ್ತು_ಸ್ಥೂಲಕಾಯದ_ನಿವಾರಣೆ ಅಂತ ಇಡಬೇಕಂತ ಮಾಡಿದ್ದೇನೆ.

  ಇದೆಲ್ಲ ನೀವು ಕೂಡ ಹಂತ ಹಂತವಾಗಿ ಶ್ರಾವಣ ಮಾಸದಿಂದಲೇ ನಿಮ್ಮ ಸ್ಥೂಲಕಾಯ ನಿವಾರಣೆಗಾಗಿ, ಡಯಾಬಿಟೀಸ್ -ಬಿಪಿ ನಿಯಂತ್ರಣಕ್ಕಾಗಿ ಪ್ರಾರಂಭಿಸ ಬಹುದು.

#shravanamasa #weightloss #obesity #diabetes #reversel #bp
#insulim #ssy #siddasamadiyoga #detoxing

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...