Skip to main content

4110. ಕೊರಗಜ್ಜ_ನಂಬಿದವರನ್ನು_ಎಂದೂ_ಕೈಬಿಡದತುಳುನಾಡಿನ_ಪವಾಡ_ಪುರುಷ.


ಕೊರಗಜ್ಜ_ನಂಬಿದವರನ್ನು_ಎಂದೂ_ಕೈಬಿಡದ
ತುಳುನಾಡಿನ_ಪವಾಡ_ಪುರುಷ.

  ​ತುಳುನಾಡಿನ ಕಾರಣಿಕ ದೈವ, ಭಕ್ತರ ಆಪತ್ಬಾಂಧವ ಶ್ರೀ ಕೊರಗಜ್ಜ.

  ಇಂದಿನ ಆಧುನಿಕ ಯುಗದಲ್ಲೂ ಕೊರಗಜ್ಜನ ಪವಾಡಗಳು ಕಡಿಮೆಯಾಗಿಲ್ಲ,ಜಾತಿದರ್ಮಗಳ ಗಡಿಯನ್ನು ಮೀರಿ ಕೊರಗಜ್ಜನನ್ನು ಆರಾಧಿಸುವ ಭಕ್ತರು ಪ್ರಪಂಚದಾದ್ಯಂತ ಇದ್ದಾರೆ.

  ​ತುಳುನಾಡು ಎಂದರೆ ಪವಿತ್ರ ದೈವರಾಧನೆಯ ಪುಣ್ಯಭೂಮಿ ಇಲ್ಲಿನ ಪ್ರತಿಯೊಂದು ಶಕ್ತಿಯ ಹಿಂದೆ ದೊಡ್ಡ ಪವಾಡ ಮತ್ತು ಸತ್ಯದ ಕಥೆಯಿದೆ.

   ಅಂತಹ ಅಪಾರ ಕಾರಣಿಕ ಹಾಗೂ ಧಾರ್ಮಿಕ ನಂಬಿಕೆಯ ಪ್ರತೀಕವೇ ‘ಶ್ರೀ ಕೊರಗಜ್ಜ’.

  ​ಕೊರಗಜ್ಜನನ್ನು ತುಳುನಾಡಿನಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ತಕ್ಷಣವೇ ಭಕ್ತರ ಪ್ರಾರ್ಥನೆಗೆ ಓಗೊಡುವ ದೈವವೆಂದು ನಂಬಲಾಗುತ್ತದೆ. 

   ಕಷ್ಟದಲ್ಲಿದ್ದಾಗ, ವಸ್ತುಗಳು ಕಳೆದುಹೋದಾಗ ಅಥವಾ ಜೀವನದಲ್ಲಿ ದಿಕ್ಕು ತೋಚದಿದ್ದಾಗ "ಕೊರಗಜ್ಜಾ ಕಾಪಾಡು" ಎಂದು ಶ್ರದ್ಧೆಯಿಂದ ನೆನೆದರೆ ಆತ ಭಕ್ತರ ನೆರವಿಗೆ ಧಾವಿಸುತ್ತಾನೆ ಎಂಬುದು ಕೋಟ್ಯಂತರ ಜನರ ಅನುಭವ.

  ​ಕೊರಗಜ್ಜ ದೇವರಿಗೆ ಯಾವುದೇ ಆಡಂಬರದ ಪೂಜೆ-ಪುರಸ್ಕಾರಗಳ ಅಗತ್ಯವಿಲ್ಲ,ಶುದ್ಧ ಮನಸ್ಸಿನ ಪ್ರಾರ್ಥನೆ, ನಂಬಿಕೆ ಮತ್ತು ಸರಳ ನೇಮ-ನಿಷ್ಠೆಗಳೇ ಆತನಿಗೆ ಪ್ರಿಯ.

  ತಮಲಪಾಲು (ವೀಳ್ಯದೆಲೆ, ಅಡಿಕೆ), ಸುರಾಪಾನ (ಕಳ್ಳು/ಶೇಂದಿ) ಮತ್ತು ಸಿಹಿತಿಂಡಿಗಳನ್ನು ಅಗೇಲು ಸೇವೆಯಾಗಿ ಅರ್ಪಿಸುವುದು ಇಲ್ಲಿನ ಸಾಂಪ್ರದಾಯಿಕ ಪದ್ಧತಿ.
  ​
 "ಸತ್ಯಕ್ಕೆ ಎಂದಿಗೂ ಜಯ, ಅಸತ್ಯಕ್ಕೆ ಕೊರಗಜ್ಜನ ದಂಡನೆ" ಎಂಬುದು ಭಕ್ತರ ದೃಢವಾದ ನಂಬಿಕ

 ಪ್ರಮುಖ ಆದಿ ಸ್ಥಳಗಳು ದೆಕ್ಕಾಡು (ಕುತ್ತಾರು): ಇದು ಪ್ರಮುಖ ಮತ್ತು ಪ್ರಸಿದ್ಧ ಆದಿಸ್ಥಳ.

  ಸ್ವಾಮಿ ತಲ: ದೈವದ ಮೂಲ ಕ್ಷೇತ್ರಗಳಲ್ಲಿ ಒಂದು.

  ಬೊಲ್ಯ: ಇತಿಹಾಸ ಪ್ರಸಿದ್ಧ ಪವಿತ್ರ ಸ್ಥಳ.

  ಮಿತ್ತ ಅಗೆಲ: ಪ್ರಾಚೀನ ಆರಾಧನಾ ಸ್ಥಳ.

  ಉಜಿಲ: ದೈವದ ಸಾನಿಲ್ಯವಿರುವ ಮತ್ತೊಂದು ಸ್ಥಳ.

  ತಲ: ಸಾಂಪ್ರದಾಯಿಕ ನಂಬಿಕೆಯುಳ್ಳ ಸ್ಥಳ.

 ದೇರಳಕಟ್ಟೆ: ಮಂಗಳೂರು ಕುತ್ತಾರು ಭಾಗದ ಪ್ರಮುಖ ಆದಿಸ್ಥಳಗಳಲ್ಲಿ ಕೊನೆಯದು.

ಸಾರ್ವಜನಿಕರಿಗೆ ಆದಿಸ್ಥಳಗಳು ವರ್ಷದ ಎಲ್ಲ ದಿನವೂ, ದಿನದ 24 ಗಂಟೆಯೂ ತೆರೆದಿರುತ್ತವೆ.

   ಭಕ್ತರು ಯಾವುದೇ ಸಮಯದಲ್ಲಿ ಭೇಟಿ ನೀಡಿ ಪ್ರಾರ್ಥಿಸಬಹುದು.

   ಮಹಿಳೆಯರಿಗೆ ಪ್ರತ್ಯೇಕ ಸಮಯವಿದೆ, ಮಹಿಳಾ ಭಕ್ತರಿಗೆ ಮಾತ್ರ ಬೆಳಗ್ಗೆ 6:30 ರಿಂದ ಸಂಜೆ 6:30 ರವರೆಗೆ ಮಾತ್ರ ಆದಿಸ್ಥಳದ ಪ್ರವೇಶಕ್ಕೆ ಅವಕಾಶವಿರುತ್ತದೆ.

  ಸಂಜೆ 6:30 ರ ನಂತರ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ.

   ತಲುಪುವ ಮಾರ್ಗಸೂಚಿ  ಕೊರಗಜ್ಜನ ಮುಖ್ಯ ಆದಿಸ್ಥಳವಾದ ಕುತ್ತಾರು ಮಂಗಳೂರು ನಗರದಿಂದ ಸುಮಾರು 12 ರಿಂದ 15 ಕಿಲೋಮೀಟರ್ ದೂರದಲ್ಲಿದೆ.

   ಮಂಗಳೂರು ನಗರದಿಂದ ಕುತ್ತಾರು ಜಂಕ್ಷನ್‌ಗೆ ಹಲವಾರು ಸಿಟಿ ಬಸ್‌ಗಳು ಸಂಚರಿಸುತ್ತವೆ.

   ನೇರವಾಗಿ ದೇವಸ್ಥಾನದ ಮುಂಭಾಗಕ್ಕೆ ಹೋಗಲು ಬಸ್ ನಂಬರ್ 44 ಮತ್ತು 44B ಅನ್ನು ಏರಬಹುದು.

   ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ (Mangalore Central) ಇದು ಸುಮಾರು 12 ಕಿ.ಮೀ ದೂರದಲ್ಲಿದೆ ಅಲ್ಲಿಂದ ಖಾಸಗಿ ವಾಹನ ಅಥವಾ ಬಸ್ ಮೂಲಕ ಕುತ್ತಾರು ತಲುಪಬಹುದು.

  ಭಕ್ತರು ಸಾಂಪ್ರದಾಯಿಕ ಅಥವಾ ಯೋಗ್ಯವಾದ ಉಡುಪುಗಳನ್ನು ಧರಿಸಬೇಕು,
ಶಾರ್ಟ್ಸ್ (Shorts/Half Pants) ಧರಿಸಿ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

  ಕ್ಷೇತ್ರದ ಆವರಣದೊಳಗೆ ಮೊಬೈಲ್ ಬಳಕೆ ಮತ್ತು ಫೋಟೋ ಅಥವಾ ವಿಡಿಯೋ ತೆಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

  ರಾತ್ರಿಯ ಸಮಯದಲ್ಲಿ ಆದಿಸ್ಥಳದ ಮಾರ್ಗವಾಗಿ ಚಲಿಸುವಾಗ ಗೌರವಾರ್ಥವಾಗಿ ವಾಹನಗಳ ಹೆಡ್‌ಲೈಟ್‌ಗಳನ್ನು ಆಫ್ ಮಾಡುವ ಸಂಪ್ರದಾಯವಿದೆ.

 ಕೊರಗಜ್ಜರಿಗೆ ಪ್ರಿಯವಾದ ಹುರುಳಿ,ಬಸಲೇಸಾರು,ಮೀನು,ಕೋಳಿ,ಚಕ್ಕಲಿ,ಶೇಂದಿಯ ನೈವೇದ್ಯ ಸೇವೆ .

ಕೊರಗಜ್ಜರ ಸಾನ್ನಿಧ್ಯದಲ್ಲಿ ಸಂಜೆ 7ರ ನಂತರ ಸ್ತ್ರಿಯರಿಗೆ ಪ್ರವೇಶ ಇಲ್ಲ .

  ರಾತ್ರಿ ಗುಡಿಯಲ್ಲಿ ದೀಪ ಬೆಳಗಿಸುವಂತಿಲ್ಲ ಎಂಬ ನಿಯಮ ಇದೆ ಆದ್ದರಿಂದಲೇ ಮಂಗಳೂರಿನ ಕೊತ್ತಾರಿನ ಈ ದೇವರ ಬೀದಿಯಲ್ಲಿ ಬೀದಿ ದೀಪಗಳೂ ಇಲ್ಲ ಅಷ್ಟೆ ಅಲ್ಲ ಗುಡಿಯ ಎದುರಿನ ಮನೆಗಳಲ್ಲೂ ವಿದ್ಯುತ್ ದೀಪ ಬಳಸುವುದಿಲ್ಲ ಅಷ್ಟು ಭಯ ಮತ್ತು ಭಕ್ತಿ ಅಲ್ಲಿದೆ.

  ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಸಮೀಪದಲ್ಲಿ ಹರಿಯುವ ಗಂಗಾವಳಿ ನದಿಯಿಂದ ಕೇರಳ ಕಾಸರಗೋಡು ಸಮೀಪದ ಚಂದ್ರಗಿರಿ ನದಿ ಮದ್ಯದ ಪ್ರದೇಶದ ದೈವಾರಾದನೆ ಮತ್ತು ನಂಬಿಕೆಗಳು ಬೇರೆಯ ಪ್ರದೇಶದವರಿಗೆ ಸರಿಯಾಗಿ ಅಥ೯ ಮಾಡಿಕೊಳ್ಳಲು ಕಷ್ಟವೇ ಸರಿ.

   ಇಲ್ಲಿನ ದೈವಗಳು ಕಲ್ಲುಕುಟಿಕ ,ಪಂಜುಲಿ೯, ಬೊಬ್ಬಯ೯,ಗುಳಿಗ, ಚಿಕ್ಕು ಹೀಗೆ ಮುಂದುವರಿದು ಕೋಟಿ ಚೆನ್ನಯ್ಯ, ಆಲೀಬೂತ ಕೊರಗಜ್ಜರ ತನಕ 102 ದೈವದ ಸಾವಿರಾರು ಗುಡಿ, ಗರುಡಿ, ದೇವಾಲಯಗಳಿದೆ.

    ಎಲ್ಲಾ ದೈವಗಳ ಆರಾದನೆ ಕೊಲಾಗಳು ನಿರಂತರವಾಗಿ ಕಾಲ ಕಾಲಕ್ಕೆ ನೆರವೇರುತ್ತಲೇ ಇರುತ್ತದೆ ಇದನ್ನು ನೆರವೇರಿಸುವ ದೈವ ಪಾತ್ರಿಗಳೆಂಬ ಕುಟುಂಬಗಳೇ ಕರಾವಳಿಯಲ್ಲಿ ಇದೆ.

  ಇಲ್ಲಿನ ಬ್ರಾಹ್ಮಣರು,ಜೈನರು, ಬಂಟರಾದಿ ಆಗಿ ಎಲ್ಲಾ ಜಾತಿಯವರು ಮತ್ತು ಮುಸ್ಲಿ೦ - ಕ್ರೈಸ್ತ ದಮಿ೯ಯರೂ ಕೂಡ ಈ  ದೈವರಾದನೆ ನಂಬುತ್ತಾರೆ.

  ಮಾಪುಳ್ತಿ ಬೂತ, ಆಲೀ ಬೂತ, ಮಾಪಳ್ಳಿ ಬೂತ,ಬ್ಯಾದಿ೯ ಬೂತಗಳೆಂಬ ಮುಸ್ಲಿಂ ದೈವಗಳ ಆರಾದನೆಯೂ ಕಾಸರಗೋಡು ಬಾಗದಲ್ಲಿದೆ.

   ಒಮ್ಮೆ ಮಂಗಳೂರಿನ ಕುತ್ತಾರು ಮೂಲ ಸ್ಥಾನದ #ಕೊರಗಜ್ಜ ದೈವದ ಹುಂಡಿಯಲ್ಲಿ ನಿರೋದ್ ಪ್ಯಾಕೆಟ್ ಹಾಕಿದ ಕಿಡಿಗೇಡಿಗಳು ಭಕ್ತರ ದಾರ್ಮಿಕ ಭಾವನೆಗೆ ಕುಂದು ತಂದ ವಿಷಯ ಸುದ್ದಿ ಆಗಿತ್ತು.

  ಸ್ವಲ್ಪ ದಿನದಲ್ಲೇ ಕಿಡಿಗೇಡಿತನ ಮಾಡಿದವರು ಪಶ್ಚಾತ್ತಾಪ ಪಟ್ಟು ದೈವ ಸನ್ನಿದಿಗೆ ಬಂದು ಶರಣಾದ ಸುದ್ದಿ ಆಗ ವೈರಲ್ ಆಗಿತ್ತು.

  ಕೊರಗಜ್ಜರ ಪವಾಡಗಳು ನೂರಾರು ಇದೆ, ಮಕ್ಕಳಿಗೆ ಕಾಯಿಲೆ ಆದಾಗ ವೀಳ್ಯದ ಎಲೆ ಹರಕೆಯಿಂದ ಹಿಡಿದು ಕಳ್ಳತನವಾದ ವಸ್ತು ಸಿಗದಾಗ ಇಲ್ಲಿ ಹರಕೆ ಮಾಡಿದಾಗ ಸಿಕ್ಕುತ್ತದೆ ಎಂಬುದು ಕೂಡ.

#ಕೊರಗಜ್ಜ_ತನಿಯರ_ಬಾಲ್ಯ_ಮತ್ತು_ದೈವವಾದ_ಕಥೆ...

  ತುಳುನಾಡಿನ ಪವರ್ ಫುಲ್ ದೈವ #ಕೊರಗಜ್ಜರ ಮೂಲ ಕಥೆ ಏನೆಂದರೆ ಪಣಂಬೂರಿನ #ಕೊರಗ ಜನಾಂಗದ #ಓಡಿ ಮತ್ತು ಅಚ್ಚುಮೈರದಿ ದಂಪತಿಗೆ ಗಂಡು ಮಗು ಹುಟ್ಟುತ್ತದೆ ಆ ಮಗುವಿಗೆ #ತನಿಯಾ ಎಂದು ನಾಮಕರಣ ಮಾಡುತ್ತಾರೆ.

  ತನಿಯ ಹುಟ್ಟಿದ 30 ದಿನದಲ್ಲೇ ತಂದೆ ತಾಯಿ ಕಳೆದುಕೊಂಡು ಅನಾಥನಾದ ತನಿಯಾನನ್ನು ಶೇಂದಿ ವ್ಯಾಪಾರ ಮಾಡುವ #ಮೈರಕ್ಕ_ಬೈದದಿ ಮತ್ತು ಅವಳ ಮಗು #ಚಿನ್ನಯ್ಯ ತಂದು ಸಾಕುತ್ತಾರೆ.

   ನಂತರ ದಿನದಲ್ಲಿ ಅನೇಕ ಪವಾಡಗಳು ತನಿಯರಿಂದ ನಡೆಯುತ್ತದೆ.

  ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ (ನಾಥ ಪಂಥದ )  ಹರಕೆ ಸಲ್ಲಿಸಲು 7 ಜನರು ಹೊರುವಷ್ಟು ವಸ್ತುಗಳು ಬಾಲಕ ತನಿಯ ಒಬ್ಬರೇ ತಲೆಯ ಮೇಲೆ ಹೊತ್ತು ಕೊಂಡು ನಡೆಯುವ ವಿಸ್ಮಯ ಜನರಿಗೆ ತಿಳಿಯುತ್ತದೆ.

  ನಂತರ ಮಾಯವಾಗುವ ತನಿಯರೇ  #ಕೊರಗಜ್ಜನಾಗಿ ನಂಬಿದವರನ್ನು ಕಾಪಾಡುವ ದೈವವಾಗುತ್ತಾರೆ.

   ದೈವ ಸ್ಥಾನಕ್ಕೆ ಅಪಚಾರ ಮಾಡಿದರೆ ತೀವ್ರ ಶಿಕ್ಷೆಗೆ ಒಳಪಡಿಸುತ್ತಾರೆಂಬುದೇ ಮೊನ್ನೆಯ ಕೊರಗಜ್ಜರ ಹುಂಡಿಗೆ ಕಾಂಡೋಮ್ ಹಾಕಿದ ಕಿಡಿಗೇಡಿಗಳು ಅನುಭವಿಸಿದ ನಿಜ ಕಥೆ ಇಂತಹ ಲಕ್ಷಾಂತರ ಪವಾಡಗಳು ಇಲ್ಲಿ ನಡೆಯುತ್ತಲೇ ಇದೆ.

   ಏಳು ಕಲ್ಲುಗಳು ಸ್ಥಾಪಿಸಿ ಕೊರಗಜ್ಜರನ್ನು ಸ್ಥಾಪಿಸಿ ಪೂಜಿಸುವ ಪದ್ಧತಿ ಇದೆ.

  ಸಮಾಜದಲ್ಲಿ ಕೀಳು ಜಾತಿಯವನೆಂದು ಕಡೆಗಾಣಿಸಿದ ಬೇಡರ ಕಣ್ಣಪ್ಪನಿಗೆ ದೇವರು ಪ್ರತ್ಯಕ್ಷವಾಗಿ ವರ ನೀಡಿದಂತೆಯೇ ತನಿಯ ಕೂಡ ಸಮಾಜದಲ್ಲಿ ಜಾತಿ ತಾರತಮ್ಯ ಮೀರಿ ದೇವರಾಗಿ ಎಲ್ಲಾ ದಮಿ೯ಯರಲ್ಲಿ ಭಯ ಭಕ್ತಿಯುಂಟು ಮಾಡಿರುವುದು ವಿಶೇಷವೇ ಆಗಿದೆ.

#kottaru #koragajja #taniya 
#Mangalore #karavali #koragajja #taniya #pavada #diva

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...