4114. ಟಿ_ಪಿ_ಕೈಲಾಸಂಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.
ಟಿ_ಪಿ_ಕೈಲಾಸಂ
ಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.
ಕೈಲಾಸಂ ಅವರು ಇಂಗ್ಲೆಂಡ್ನಿಂದ ಹಿಂದಿರುಗಿದಾಗ, ಭಾರತದಲ್ಲಿದ್ದ (ವಿಶೇಷವಾಗಿ ಮೈಸೂರು/ಬೆಂಗಳೂರು ಪ್ರಾಂತ್ಯದ) ಅಂದಿನ ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನು ಹತ್ತಿರದಿಂದ ನೋಡಿದರು.
ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲು ಬಾಯಿಪಾಠ (Rote learning) ಮಾಡುವುದನ್ನು, ಪೋಷಕರು ಅಂಕಗಳ ಆಧಾರದ ಮೇಲೆ ಮಕ್ಕಳನ್ನು ಅಳೆಯುವುದನ್ನು ಕಂಡು, ಆ ಪದ್ಧತಿಗೆ ವಿರೋಧವಾಗಿ ಹಾಗೂ ಜಾಗೃತಿ ಮೂಡಿಸಲು ಈ ನಾಟಕವನ್ನು ಬರೆದರು.
ಇನ್ನೂ ಒಂದು ವಿಶೇಷ ಆ ನಾಟಕದ ಮೊದಲ ರಂಗ ಪ್ರಯೋಗ ಆಗಿದ್ದು ಕುಂಸಿಯಲ್ಲಿ.
ಕುಂಸಿ -ಚೋರಡಿ ಮತ್ತು ತುಪ್ಪೂರಿನಲ್ಲಿದ್ದ MML ಮ್ಯಾಂಗನೀಸ್ ಗಣಿಯ ಉನ್ನತಾಧಿಕಾರಿ ಆಗಿದ್ದರು ಟಿ.ಪಿ. ಕೈಲಾಸಂ.
ಮಹಾನ್ ನಾಟಕಕಾರ ಸಾಹಿತಿ ಟಿ.ಪಿ.ಕೈಲಾಸಂ ಶಿವಮೊಗ್ಗ ಜಿಲ್ಲೆಯಲ್ಲಿ ನಾಟಕ ಬರೆದರು ಮತ್ತು ಅ ನಾಟಕ ಪ್ರದರ್ಶನ ಕುಂಸಿ ಎಂಬ ಊರಲ್ಲಿ ಮಾಡಿಸಿದ್ದರು ಎಂಬುದೇ ವಿಶೇಷ ಸುದ್ದಿ.
ಟಿ.ಪಿ.ಕೈಲಾಸಂ ಬರೆದ ಕೊ ಕೋ ಕೋಳಿಕೆ ರಂಗ ಎಂಬ ಹಾಡು ಕನ್ನಡದ ಖ್ಯಾತ ಗಾಯಕ ಕಾಳಿಂಗರಾವ್ ದ್ವನಿಯಲ್ಲ ಅದ್ಬುತವಾಗಿ ಮೂಡಿ ಬರುತ್ತಿತ್ತು ನೆನಪಿಸಿಕೊಳ್ಳಿ.
ನಮ್ಮ ಶಿವಮೊಗ್ಗ ತಾಲ್ಲೂಕಿನ ಕುಂಸಿ, ಚೋರಡಿ ಮತ್ತುತುಪ್ಪೂರು ಬಾಗಗಳಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯನ್ನ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಕಂಪನಿ MML ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿತ್ತು.
ಈಗಲೂ ಅಲ್ಲಿ ಮ್ಯಾಂಗನೀಸ್ ಅದರು ತೆಗೆದ ಗಣಿಗಳಿದೆ ಈಗ ಈ ಪ್ರದೇಶ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ಮ್ಯಾಂಗನೀಸ್ ಗಣಿಗಾರಿಕೆ ಇಲ್ಲಿ ಈಗ ಸ್ಥಗಿತವಾಗಿದೆ.
ನಾಟಕಕಾರರು, ಕನ್ನಡ ಸಾಹಿತಿಗಳು ಆಗಿದ್ದ ಟಿ.ಪಿ ಕೈಲಾಸಂ'ರವರು 1918ರಲ್ಲಿ ಮೈಸೂರು ಮಿನರಲ್ಸ್ ಸಂಸ್ಥೆಯಲ್ಲಿ ಉನ್ನತ ಅಧಿಕಾರಿಗಳಾಗಿ ಕುಂಸಿ - ಚೋರಡಿ ಮತ್ತು ತುಪ್ಪೂರು ಭಾಗದ ಮ್ಯಾಂಗನೀಸ್ ಗಣಿಗಳ ಜವಾಬ್ದಾರಿ ವಹಿಸಿದ್ದರು.
ಆಗ ಅವರು ಶಿವಮೊಗ್ಗ ಪಟ್ಟಣದಲ್ಲಿ ವಾಸವಿದ್ದರು, ಅವರು MML ನಲ್ಲಿ ಕೆಲಸದಲ್ಲಿದ್ದಾಗಲೇ ಶಿವಮೊಗ್ಗದಲ್ಲಿದ್ದಾಗಲೇ ಅವರ ಖ್ಯಾತ ನಾಟಕ #ಟೊಳ್ಳುಗಟ್ಟಿ ಬರೆಯುತ್ತಾರೆ.
ಟಿ.ಪಿ. ಕೈಲಾಸಂ ಅವರಿಗೆ ರಂಗಾಸಕ್ತಿ ಹೆಚ್ಚು ಆದ್ದರಿಂದ ಈ ಬಾಗದ ಸ್ಥಳೀಯರನ್ನ ಸೇರಿಸಿಕೊಂಡು ಟೊಳ್ಳುಗಟ್ಟಿ ನಾಟಕ ನಿರ್ಧೇಶನ ಮಾಡಿ ಕುಂಸಿಯಲ್ಲಿ ಆ ನಾಟಕ ಪ್ರದರ್ಶನ ನೀಡಿದ್ದರು, ನಂತರವೂ ಅವರು ಇಲ್ಲಿ ಸೇವೆ ಸಲ್ಲಿಸುವಾಗ ಅನೇಕ ನಾಟಕ ಪ್ರದರ್ಶನ ಮಾಡಿಸಿದ್ದರಂತೆ.
ಟಿ.ಪಿ.ಕೈಲಾಸಂ ಅಂದರೆ #ತ್ಯಾಗರಾಜ_ಪರಮಶಿವ_ಕೈಲಾಸಂ ಜನನ 29- ಜುಲೈ- 1884 ಮತ್ತು ಮರಣ 26 - ಡಿಸೆಂಬರ್-1946.
ಒಬ್ಬ ಭಾರತೀಯ ನಾಟಕಕಾರ ಮತ್ತು ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರರಾಗಿದ್ದರು,ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶೆಯನ್ನು ಕೈಲಾಸಂ ತಮ್ಮ ಕೃತಿಗಳಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ.
ಕನ್ನಡ ನಾಟಕೀಯ ಹಾಸ್ಯಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ಅವರಿಗೆ ಪ್ರಹಸನ ಪ್ರಪಿತಾಮಹ (ಹಾಸ್ಯ ನಾಟಕಗಳ ಮುತ್ತಜ್ಜ) ಎಂಬ ಬಿರುದು ದೊರಕಿತು ನಂತರ ಅವರನ್ನು "ಕನ್ನಡದ ಏಕೈಕ ಕೈಲಾಸಂ" ಎಂದು ಗೌರವಿಸಲಾಯಿತು.
ಕೈಲಾಸಂ ಅವರ ಜೀವನವು ಸ್ಥಳೀಯ ರಂಗಭೂಮಿಗೆ ಮೀಸಲಾಗಿತ್ತು ಅವರ ಹಾಸ್ಯವು ಕನ್ನಡಿಗರ ಮೇಲೆ ಒಂದು ಪ್ರಭಾವ ಬೀರಿತು.
ಅವರು ಕಂಪನಿ ರಂಗಭೂಮಿಯ ಪುರಾಣ ಮತ್ತು ರಾಜಮನೆತನದ ಕಥೆಗಳ ಗೀಳನ್ನು ವಿರೋಧಿಸಿದರು ಮತ್ತು ಅವರ ನಾಟಕಗಳಿಗೆ ಸಂಗೀತವನ್ನು ತುಂಬಲು ಇಷ್ಟ ಪಡಲಿಲ್ಲ ಬದಲಾಗಿ ಅವರು ಸರಳ, ವಾಸ್ತವಿಕ ಸೆಟ್ಗಳನ್ನು ಪರಿಚಯಿಸಿದರು.
ಕೈಲಾಸಂ 1945 ರಲ್ಲಿ ಮದ್ರಾಸ್ನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಕೈಲಾಸಂ ಅವರು ಮೈಸೂರು ರಾಜ್ಯದ (ಈಗ ಕರ್ನಾಟಕ ) ಮೈಸೂರಿನಲ್ಲಿ ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿದರು.
ಅವರ ತಂದೆ ತ್ಯಾಗರಾಜ ಪರಮಶಿವ ಅಯ್ಯರ್ ತಾಯಿ ಕಮಲಮ್ಮ ಮೈಸೂರು ಸರ್ಕಾರದಲ್ಲಿ ಕಂದಾಯ ಸಂಗ್ರಾಹಕರಾಗಿದ್ದರು ನಂತರ ಅವರು ಮೈಸೂರು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾದರು.
ಅವರ ತಂದೆಯ ಸಹೋದರ ಸರ್ ಟಿ. ಸದಾಶಿವ ಅಯ್ಯರ್ ತಿರುವಾಂಕೂರು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದರು.
ಸರ್ ಸಿ.ವಿ. ರಾಮನ್ ಇವರ ತಂದೆಯ ಸೋದರಸಂಬಂಧಿ.
ಕೈಲಾಸಂ ಉತ್ತಮ ಶಿಕ್ಷಣ ಪಡೆದರು, ಲಂಡನ್ನ ರಾಯಲ್ ಕಾಲೇಜ್ ಆಫ್ ಸೈನ್ಸ್ನಲ್ಲಿ ಭೂವಿಜ್ಞಾನವನ್ನು ಅಧ್ಯಯನ ಮಾಡಲು ಮಹಾರಾಜ ಕೃಷ್ಣರಾಜ ಒಡೆಯರ್ IV ಅವರ ಬೆಂಬಲವನ್ನು ಪಡೆದರು.
ಅವರ ಆಪ್ತ ಸ್ನೇಹಿತರು ಮತ್ತು ಸಹಪಾಠಿಗಳಾಗಿದ್ದವರು ಕೆ.ವಿ. ಅಯ್ಯರ್ ಮತ್ತು ವಿ. ಸೀತಾರಾಮಯ್ಯ.
ಇಂಗ್ಲೆಂಡ್ನಲ್ಲಿ ವ್ಯಾಸಂಗ ಮಾಡುವಾಗ ರಂಗಭೂಮಿಯಲ್ಲಿ ಭಾಗವಹಿಸಿದ್ದರು.
ವಿಶಿಷ್ಟ ಸಂವೇದನೆಯ ನಾಟಕಕಾರ ಟಿ. ಪಿ. ಕೈಲಾಸಂ ಅವರ ಕೃತಿಗಳಲ್ಲಿ ಲಭ್ಯವಾದವು 17 ಕನ್ನಡ ಮತ್ತು 4 ಇಂಗ್ಲಿಷ್ ನಾಟಕಗಳು.
ಕಥಾ ಹಂದರವನ್ನು ನಿರೂಪಿಸಿ, ಪೂರ್ತಿಗೊಳಿಸಲಾರದವು ಅದೆಷ್ಟೋ.
ಹಾಸ್ಯ ಸಾಹಿತ್ಯ, ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದ ಅವರು ಸ್ವತಃ ನಾಟಕಗಳನ್ನು ಬರೆಯುವುದರ ಹೊರತಾಗಿ ಇತರರಿಗೆ ಹೇಳಿ ಬರೆಸಿದ್ದೇ ಹೆಚ್ಚು.
ಟೊಳ್ಳೂಗಟ್ಟಿ, ಬಹಿಷ್ಕಾರ, ಗಂಡಸ್ಕತ್ರಿ, ಪೋಲಿಕಿಟ್ಟಿ, ಸೂಳೆ, ನಂತರ ಕನ್ನಡ ಸಾಮಾಜಿಕ ನಾಟಕಗಳನ್ನೂ ತಾವರೆಕೆರೆ (ಕಥಾಸಂಗ್ರಹ), ಕೋಳಿಕೇರಂಗ (ಹಾಡುಗಳು), ಕರ್ಣ, ಕೀಚಕ (ಇಂಗ್ಲಿಷ್ ನಾಟಕಗಳು) ಪ್ರಸಿದ್ದಿ ಪಡೆದ ಸಾಹಿತ್ಯಗಳು.
#kumsi #shivamogga #mml #tuppuru #choradi
#TPKilasam #MML #Shivamogga
#karnatakastategovernment #mines #manganis #tpkilasam #drama #kilasam #kumsi #drama
#tollugatti
Comments
Post a Comment