Skip to main content

Posts

Showing posts with the label Kodachadri hill station a South Indian EVEREST

Blog number 1051. ಶಿವಮೊಗ್ಗ ಜಿಲ್ಲೆಯಲ್ಲಿರುವ ದಕ್ಷಿಣ ಭಾರತದ ಎವರೆಸ್ಟ್ ಎಂದೇ ಹೆಸರಾದ ಗಿರಿದಾಮ ಕೊಡಚ್ಚಾದ್ರಿ ಬೆಟ್ಟ

ಕೊಡಚಾದ್ರಿ ಅಂದರೆ ದಕ್ಷಿಣ ಭಾರತದ ಎವರೆಸ್ಟ್ ಅಂತೆಲ್ಲ ಹೊಗಳುತ್ತಾರೆ. ಇಲ್ಲಿನ ಚಿತ್ರ ಮೂಲದ ಗವಿಯಲ್ಲಿ ಶಂಕರಾಚಾಯ೯ರು ತಪಸ್ಸು ಮಾಡಿದರೆಂಬ ನಂಬಿಕೆ, ಮೂಕಾಸುರ ಎಂಬ ರಕ್ಕಸ ನನ್ನ ಈ ಬೆಟ್ಟದಲ್ಲಿ ದೇವಿ ಹತ್ಯೆ ಮಾಡಿ ಮೂಕಾಂಬಿಕೆ ಆದಳೆಂಬ ಪ್ರತೀತಿಗಳ ನಡುವೆ ಇಲ್ಲಿನ ಮೂಲ ಮೂಕಾಂಬಿಕ ದೇವಸ್ಥಾನದಲ್ಲಿ ಗುಪ್ತವಾಗಿ ನಡೆಯುವ ಶಕ್ತಿ ಪೂಜೆ, ಲೋಹದ ಎತ್ತರದ ಕಂಬದ ರಹಸ್ಯ, ಸೂಯೋ೯ದಯ, ಸೂಯಾ೯ಸ್ತ. ಬೇಸಿಗೆಯಲ್ಲಿನ ತಂಪು ವಾತಾವರಣ, ಚಾರಣಿಗರಿಗೆ ಪ್ರಶಸ್ತವಾದ ಸ್ಥಳ ನಮ್ಮ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ. ನನಗೆ ಏಕಾ೦ತ ವಾಸ ಬೇಕಾದಾಗ ಜೋಗ ಜಲಪಾತ, ಮುಡೇ೯ಶ್ವರ ಮತ್ತು ಕೊಡಚಾದ್ರಿಯಲ್ಲಿ ಹೆಚ್ಚು ದಿನ ಕಳೆಯುತ್ತೇನೆ. 2006ರಲ್ಲಿ ಅಂಬಾಸಡರ್ ಕಾರಲ್ಲಿ ಹಿರಿಯರಾದ ಗನ್ನಿಸಾಬರನ್ನ ಕರೆದುಕೊಂಡು ಹೊರಟಿದ್ದೆ, ರಾಮು ಎಂಬ ಕುಣುಬಿ ಗುಡ್ಡಗಾಡು ಸಮುದಾಯದ ಡೈವರ್ ಗೆ ಈವರೆಗೆ ಅಂಬಾಸಡರ ಕಾರು ಕೊಡಚಾದ್ರಿ ತುದಿಗೆ ಹೋಗಿಲ್ಲ,4 ವೀಲ್ ಡೈವ್ ನ ಜೀಪ್ ಬಿಟ್ಟರೆ ಮೂಲ ಮೂಕಾ೦ಬಿಕ ದೇವಾಲಯದ ಅಚ೯ಕರು ಸ್ಥಳಿಯ ಪಂಚಾಯಿತಿ ಸದಸ್ಯ ನಾಗೇಂದ್ರ ಜೋಗಿಯ ಮಾರುತಿ ಮಾತ್ರ ಹೋಗಿದೆ ನೀನು ಪ್ರಯತ್ನ ಮಾಡು ಅಂದೆ. ಅಂಬಾಸಡರ್ ಕ್ರಾ೦ಕಿಸ್ ತುಂಬಾ ಕೆಳಗೆ ಇರುತ್ತೆ, ಇಲ್ಲಿ ರಸ್ತೆ ಸರಿ ಇಲ್ಲ ಕಲ್ಲು ತಾಗಿದರೆ ಇಂಜಿನ್ ಆಯಿಲ್ ಸೋರಿ ಕಾರು ಇಲ್ಲಿ ನಿಲ್ಲಿಸ ಬೇಕಾಗುತ್ತೆ ಅಂತ ಆತನ ಆತಂಕ ವ್ಯಕ್ತಪಡಿಸಿದ. ಆಗಷ್ಟ ಮೆಕ್ಕಾ...