ಕೊರಾನಾ ಲಾಕ್ ಡೌನ್ ಡೈರಿ 33. ಕೊರೆಂಟೈನ್ ಗೆ ಅವಕಾಶ ನೀಡದ ಸ್ಥಳಿಯರು, ರೋಗ ಪೀಡಿತರನ್ನ ಗುಜರಾತಿನಿಂದ ಶಿವಮೊಗ್ಗಕ್ಕೆ ಕರೆತಂದ ಬಸ್ ಡ್ರೈವರ್ ವಾಪಾಸ್ ಕಳಿಸಿದ್ದರಿಂದ ಗುಜರಾತಿನವರೆಗೆ ರೋಗ ಹರಡುವ ಸಂಭವ!?
ಕೊರಾನಾ ಲಾಕ್ ಡೌನ್ ಡೈರಿ -2020 ಲೆಟರ್ ನಂಬರ್- 33 ದಿನಾ೦ಕ: 12 -ಮೇ -2020 #ಕೊರೆ೦ಟೈನ್_ಜಾಗನಿರಾಕರಿಸುವ_ಜನತೆ. #ಗುಜರಾತಿನಿಂದ_ಕೊರಾನಾ_ಪಾಸಿಟಿವ್_ಇದ್ದವರನ್ನ_ಶಿವಮೊಗ್ಗಕ್ಕೆ_ಬಸ್ನಲ್ಲಿ_ಕರೆತಂದ_ಡ್ರೈವರ್_ಪರೀಕ್ಷೆ_ಮಾಡದೆ_ಕಳಿಸಿದ್ದಾರೆ!?. "ಆದರೆ ರೋಗದ ಸೋ೦ಕಿತರೆಲ್ಲರನ್ನ ಕರೆತಂದ ಚಾಲಕನಿಗೆ ರೋಗ ತಲುಪದೆ ಇರಲು ಸಾಧ್ಯವಿಲ್ಲ ಈಗ ಆತ ಶಿವಮೊಗ್ಗದಿಂದ ಗುಜರಾತಿನವರೆಗೆ ರೋಗ ಹರಡುತ್ತಾನೆಂಬ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಳಿಸಿರುವುದು ಮಾತ್ರ ದೊಡ್ಡ ದುರ೦ತ" ಮಾರಣಾ೦ತಿಕ ವೈರಸ್ ನಿಯ೦ತ್ರಣಕ್ಕೆ ಸಕಾ೯ರದ ಎಲ್ಲಾ ಅಧೀನ ಇಲಾಖೆ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಮುಂಬೈನಲ್ಲಿ ಸಮುದಾಯ ಪ್ರಸರಣದ ಹಂತ ತಲುಪಿರುವ ವದಂತಿ ಇದೆ. 3ನೇ ಹಂತದ ಲಾಕ್ ಡೌನ್ ನಿಯಂತ್ರಣ ಸಡಲೀಕರಣ ಮಾಡಿದ ನಂತರ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ, ಸರಕು ಸಾಗಾಣಿಕೆಗೆ ಅವಕಾಶ ನೀಡಿದ್ದರಿಂದ ಅನೇಕರನ್ನ ವೈರಸ್ ಶಂಕೆಯಿ೦ದ ಕೊರಂಟೈನ್ನಲ್ಲಿ ಕೆಲದಿನ ನಿರೀಕ್ಷಣೆಗೆ ಒಳಪಡಿಸಲೇ ಬೇಕಾಗಿದೆ ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಕಾ೯ರದ ವಿದ್ಯಾಥಿ೯ ನಿಲಯಗಳನ್ನ ಬಳಸುತ್ತಿದ್ದಾರೆ. ಆದರೆ ಇತ್ತೀಚಿಗೆ ಸ್ಥಳಿಯರು ಕೊ...