Skip to main content

Posts

Showing posts from June, 2026

4050.ರಾಣಿ_ಚೆನ್ನಬೈರಾದೇವಿ_ಮೊದಲ_ಸಿನಿಮಾ ಸ್ಥಗಿತವಾಯಿತು ಏಕೆ?...

ರಾಣಿ_ಚೆನ್ನಬೈರಾದೇವಿ_ಮೊದಲ_ಸಿನಿಮಾ   2013 ರಲ್ಲಿ ಚಿತ್ರಿಕರಣ ಪ್ರಾರಂಭವಾಗಿ ಅರ್ದಕ್ಕೆ ನಿಂತು ಹೋಗಿತ್ತು,ಆ ಸಿನಿಮಾದಲ್ಲಿ ರಾಣಿ ಚೆನ್ನ ಬೈರಾದೇವಿ ಪಾತ್ರ ನಟಿ #ಶೃತಿ ಆಯ್ಕೆ ಆಗಿದ್ದರು.   ಆಗ ನಮ್ಮ ಗೇರುಸೊಪ್ಪೆಯ ರಾಣಿ ತೆರೆಗೆ ಬರುತ್ತಾರೆಂದು ನಾವೆಲ್ಲ ಆಸೆ ಪಟ್ಟಿದ್ದೆವು ಆದರೆ ಚಿತ್ರಿಕರಣ ಅರ್ಧದಲ್ಲೇ ನಿಂತು ಹೋಯಿತು ಇದು ಇತಿಹಾಸ ಆಸಕ್ತರಿಗೆ ತುಂಬಾ ನಿರಾಸೆ ಮಾಡಿತ್ತು.    ಈಗ 13 ವರ್ಷಗಳ ನಂತರ #ಬಂದನ ಸಿನಿಮಾ ಖ್ಯಾತಿಯ #ರಾಜೇಂದ್ರಸಿಂಗ್_ಬಾಬು ನಟಿ #ರಮ್ಯಾರನ್ನ ರಾಣಿ ಚೆನ್ನ ಬೈರಾದೇವಿ ಪಾತ್ರಕ್ಕೆ ಆಯ್ಕೆ ಮಾಡಿ ಸಿನಿಮಾ ಮಾಡಲಿದ್ದಾರೆ.   ರಾಣಿ ಚೆನ್ನ ಬೈರಾದೇವಿಯ ಎರಡನೆ ಸಿನಿಮಾ ಯಾವುದೇ ಅಡೆ ತಡೆ ಇಲ್ಲದೆ ಚಿತ್ರಿಕರಣ ಮುಗಿಸಿ ತೆರೆಯ ಮೇಲೆ ಬರಲಿ ಎಂದು ಹಾರೈಸೋಣ.   ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ #ವಿಷ್ಣುವರ್ಧನ್ ಅವರ ಆಪ್ತರಾಗಿದ್ದ ಖ್ಯಾತ ನಿರ್ದೇಶಕ #ಬಿ_ರಾಮಮೂರ್ತಿ ಅವರು 2013 ರಲ್ಲಿ #ರಾಣಿ_ಚೆನ್ನಭೈರಾದೇವಿ' ಎಂಬ ಐತಿಹಾಸಿಕ ಸಿನಿಮಾವನ್ನು ನಿರ್ದೇಶಿಸಲು ಯೋಜನೆ ರೂಪಿಸಿದ್ದರು.   ​ಕನ್ನಡದ ಹಿರಿಯ ನಟಿ ಶ್ರುತಿ ಅವರು ಈ ಚಿತ್ರದಲ್ಲಿ ರಾಣಿ ಚೆನ್ನಭೈರಾದೇವಿಯ ಪ್ರಧಾನ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದರು. ​  ಗೇರುಸೊಪ್ಪೆಯ ರಾಣಿಯಾಗಿದ್ದ ಚೆನ್ನಭೈರಾದೇವಿ ಕರಾವಳಿ ಕರ್ನಾಟಕವನ್ನು ಬರೋಬ್ಬರಿ 54 ವರ್ಷಗಳ ಕಾಲ ಆಳಿದ ಧೀರ ಮಹಿಳೆ.  ...

4049.ಪ್ರೆಸ್_ಕ್ಲಬ್_ಪ್ರೆಸ್_ಮೀಟ್

ಪ್ರೆಸ್_ಕ್ಲಬ್_ಪ್ರೆಸ್_ಮೀಟ್   ಬೆಂಗಳೂರಿನ ಪ್ರತಿಷ್ಟಿತ ಪ್ರೆಸ್ ಕ್ಲಬ್ ನಲ್ಲಿ ಪ್ರಖ್ಯಾತ ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದವರು ಶಿಸ್ತು ಕಾಪಾಡಿಕೊಳ್ಳದಿರುವುದು ಇಡೀ ಪತ್ರಿಕಾ ವ್ಯವಸ್ಥೆಯ ದೊಡ್ಡ ಲ್ಯಾಪ್ಸ್ ಆಗಿದೆ.    ಅತಿಥಿಗಳು ಪತ್ರಕರ್ತರ ಪ್ರಶ್ನೆಗಳಿಗೆ ಗೌರವ ನೀಡದಿದ್ದರೆ ಅದು ಪತ್ರಿಕಾ ಸ್ವಾತಂತ್ರ್ಯದ ಅವಮಾನ ಅದೇ ರೀತಿ ಪತ್ರಕರ್ತರು ವೃತ್ತಿಪರತೆ ಮರೆತು ವರ್ತಿಸಿದರೆ ಅದು ಮಾಧ್ಯಮ ರಂಗ ತನಗೆ ತಾನೇ ಮಾಡಿಕೊಳ್ಳುವ ಅವಮಾನ.   ಪತ್ರಿಕಾಗೋಷ್ಠಿಯ ಯಶಸ್ಸು ಅಡಗಿರುವುದು ಪಾರದರ್ಶಕತೆಯಲ್ಲಿ,ಸಂಘಟಕರು ಯಾವುದೇ ಮುಚ್ಚುಮರೆಯಿಲ್ಲದೆ ಮಾಹಿತಿ ನೀಡುವುದು ಮತ್ತು ಪತ್ರಕರ್ತರು ಯಾವುದೇ ಪೂರ್ವಾಗ್ರಹವಿಲ್ಲದೆ ವಸ್ತುನಿಷ್ಠವಾಗಿ ಪ್ರಶ್ನೆ ಕೇಳಿದಾಗ ಮಾತ್ರ ಪತ್ರಿಕಾಗೋಷ್ಠಿಯ ನೈಜ ಉದ್ದೇಶ ಸಫಲವಾಗುತ್ತದೆ.    ಹಾಗಾದರೆ ಆ ಪತ್ರಿಕಾಗೋಷ್ಟಿಯಲ್ಲಿ ಬೆಂಗಳೂರು ಫ್ರೆಸ್ ಕ್ಲಬ್ ನ ನಿಯಮ ಉಲ್ಲಂಘನೆ ಆಯಿತಾ...   ಇದರಿಂದ ಬೆಂಗಳೂರಿನ ಪ್ರೆಸ್ ಕ್ಲಬ್ ಈಗ ಕೈಗೊಂಡ ನಿರ್ಧಾರಗಳು ಏನು?...   ಕರ್ನಾಟಕದಲ್ಲಿ ಅಥವಾ ಯಾವುದೇ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ  ನಡೆಸಲು ಮತ್ತು ಅದರಲ್ಲಿ ಭಾಗವಹಿಸಲು ಕೆಲವು ನಿರ್ದಿಷ್ಟ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು  ಪಾಲಿಸಬೇಕಾಗುತ್ತದೆ.    ಇವುಗಳನ್ನು ಆಯಾ ಪ್ರೆಸ್ ಕ...

4048.ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ.#ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.

ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ. #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.   ನಾಡಿನ ಪ್ರಖ್ಯಾತ ಶ್ರೀಮತಿ #ನಂದಿನಿ ಮತ್ತು #ಆಕರ್ಷ ಅವರ #ಡಿಜಿಟಲ್_ಮಾಧ್ಯಮದಲ್ಲಿ  ಪ್ರಸಾರವಾದ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಎಪಿಸೋಡುಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟವರು ಲೋಕರಾಜ್ ಜೈನ್.    #ರಾಜೇಂದ್ರ_ಸಿಂಗ್_ಬಾಬು ಅವರ ನಿರ್ದೇಶನದಲ್ಲಿ ಗೇರುಸೊಪ್ಪೆಯ ಜೈನ ರಾಣಿ ಚೆನ್ನ ಬೈರಾದೇವಿಯ ಸಿನಿಮಾ ನಿರ್ಮಾಣದ ಚಿತ್ರಿಕರಣ ಪೂರ್ವದ ಕೆಲಸಗಳು ನಡೆಯುತ್ತಿದೆ.    ದರ್ಮಸ್ಥಳದ ಧರ್ಮಾಧಿಕಾರಿಗಳಾದ #ಡಾ_ವಿರೇಂದ್ರಹೆಗ್ಗಡೆ ಅರ್ಪಿಸುವ #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ ಸಿನಿಮಾದ ಚಿತ್ರಕಥೆ ದಿವಂಗತ ನಾಡೋಜ ಕಮಲ ಹಂಪನಾ, ನಾಡೋಜ ನಾಗರಾಜ ಹಂಪನಾ ಮತ್ತು ಸಾಗರದ ಲೋಕರಾಜ್ ಜೈನ್ ಜಂಟಿಯಾಗಿ ಬರೆದಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಜಲಪಾತದ #ಹೆನ್ನೆ ಊರಿನ ಲೋಕರಾಜ್ ಜೈನ್  ವೃತ್ತಿಯಲ್ಲಿ ಉಪನ್ಯಾಸಕರು ಪ್ರವೃತ್ತಿಯಲ್ಲಿ ಇತಿಹಾಸ ಸಂಶೋದಕರು.   ಇವರು ರಾಣಿ ಚೆನ್ನ ಬೈರಾದೇವಿ ವಂಶಸ್ಥರೂ ಹೌದು, ಗೇರುಸೊಪ್ಪೆಯ ಸಾಳ್ವ ವಂಶದ ಇತಿಹಾಸದ ಸಂಶೋಧನೆ ಕೆಲಸದಲ್ಲಿ ಅನೇಕ ದಶಕದಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ತೊಡಗಿಕೊಂಡವರು.   ನನ್ನ ಇವರ ಪರಿಚಯ ಆಗಿದ್ದು ತುಮರಿ ಸಮೀಪದ #ಹಾಳಸಸಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ #ಚಂದ್ರಕುಮಾರರಿಂದ. ...

4047.ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5

  ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5.   ಈ ಸರಣಿ ಲೇಖನ ಮಾಲೆಗೆ ಅಭೂತಪೂವ೯ ವೀಕ್ಷಣೆ - ಪ್ರತಿಕ್ರಿಯೆಗಳು ಬರುತ್ತಿರುವುದು ನನಗೆ ಮತ್ತೆ ಮತ್ತೆ ಬರೆಯಲು ಹುಮ್ಮಸ್ಸು ತರುತ್ತಿದೆ.   ವಲಸೆ ಎಂಬುದು ನಿರಂತರ ಮತ್ತು ಸರ್ವಕಾಲಿಕ ಸತ್ಯ, ಜಗತ್ತು ಇರುವವರೆಗೂ ವಲಸೆ ನಿಲ್ಲಲು ಸಾಧ್ಯವೇ ಇಲ್ಲ ಏಕೆಂದರೆ ಪ್ರಕೃತಿ ನಿಯಮ ಮತ್ತು ಮಾನವನ ಆಸೆಗಳು ನಿರಂತರವಾಗಿ ಬದಲಾಗುತ್ತಿರುತ್ತದೆ.    ಕರಾವಳಿ ಭಾಗದ ಜನರು ವಿಶೇಷವಾಗಿ ದಕ್ಷಿಣ ಕನ್ನಡ - ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಲ್ಲಾ ಜಾತಿ ಧರ್ಮದ ಜನರು ಮಲೆನಾಡು ಮತ್ತು ಘಟ್ಟದ ಮೇಲಿನ ಶಿವಮೊಗ್ಗ - ಚಿಕ್ಕಮಗಳೂರು - ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ನಡೆಸಿದ ವಲಸೆ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದದ್ದು ಎಂದು ಪರಿಗಣಿಸ ಬಹುದು.      #ಕರಾವಳಿಗರ ಘಟ್ಟದ ವಲಸೆಯನ್ನು ವಿಶ್ವದ ಮೂರು ಪ್ರಮುಖ ವಲಸೆಗಳಾದ #ಅಮೇರಿಕಾ_ಪಶ್ಚಿಮ ವಲಸೆ, #ಯುರೋಪಿನ_ಹ್ಯೂಗೆ_ನಾಟ್ಸ್ ವಲಸೆ ಮತ್ತು 1840 ರ ದಶಕದ ಕ್ಯಾಲಿಫೋರ್ನಿಯಾದ #ಚಿನ್ನದ_ಗಣಿ_ವಲಸೆ ಜೊತೆ ಸಮೀಕರಿಸಬಹುದೆಂದು #ಅಮೇರಿಕನ್_ಹಿಸ್ಟಾರಿಕಲ್_ಅಸೋಸಿಯೇಷನ್‌ ಲೇಖನದಲ್ಲಿ ಉಲ್ಲೇಖಿಸಿದೆಯಂತೆ ಆದ್ದರಿಂದ ನಮ್ಮ ಕರ್ನಾಟಕದ ಕರಾವಳಿಯ ಜನರ ಘಟ್ಟದ ವಲಸೆ ಮಹತ್ವದ ವಲಸೆ ವಿಚಾರವಾಗಿದೆ.  ನಾನು ಕೂಡ ಈ ರೀತಿಯೇ  ಕರಾವಳಿಯಿಂದ ಘಟ್ಟಕ್ಕೆ ವಲಸೇ ಬಂದ ಕುಟುಂಬಕ್ಕೆ ಸೇರಿದವನು ಆದ್...

4046. ಮಹಾಮಂಡಲೇಶ್ವರಿ ಚೆನ್ನ ಬೈರಾದೇವಿ ಸಿನಿಮಾ ಆಗಲಿದೆ

ಗೇರುಸೊಪ್ಪೆಯ_ಕಾಳುಮೆಣಸಿನರಾಣಿ ಚೆನ್ನಬೈರಾದೇವಿ_ಸಿನಿಮಾ_ಆಗಲಿದೆ. #Pepper_Queen_Raina_de_Pimenta.     ಈ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕರು ಯಾರು ಗೊತ್ತಾ? ....    ದೊಡ್ಡ ಬಜೆಟ್ ಸಿನಿಮಾಗೆ ಯಾರು ಯಾರು ಹಣ ಹಾಕಲಿದ್ದಾರೆ?.....     ಗೇರುಸೊಪ್ತೆಯ ಜೈನ ರಾಣಿ ಚೆನ್ನ ಬೈರಾದೇವಿ ಆಡಳಿತಾವಧಿ ಕ್ರಿ.ಶ. 1552 ರಿಂದ 1606.  ಗೇರುಸೊಪ್ಪೆ ಮತ್ತು ಉತ್ತರ ಕನ್ನಡದ ಮಲೆನಾಡು ಭಾಗದಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ #ಕಾಳುಮೆಣಸನ್ನು Black Pepper ಬೆಳೆಯಲಾಗುತ್ತಿತ್ತು.    ಇದನ್ನು ಯುರೋಪಿಯನ್ ರಾಷ್ಟ್ರಗಳಿಗೆ ರಾಣಿ ಚೆನ್ನ ಬೈರಾದೇವಿ ರಫ್ತು ಮಾಡುತ್ತಿದ್ದಾಗ ಆ ಕಾಳು ಮೆಣಸಿನ ವ್ಯಾಪಾರದ ಮೇಲಿನ ಅವರ ಏಕಸ್ವಾಮ್ಯ ಮತ್ತು ನಿಯಂತ್ರಣವನ್ನು ನೋಡಿ ಬ್ರಿಟಿಷರು ಮತ್ತು ಪೋರ್ಚುಗೀಸರು ಗೇರುಸೊಪ್ಪೆಯ ರಾಣಿ ಚೆನ್ನಬೈರಾದೇವಿಯವರಿಗೆ ಗೌರವದಿಂದ #ರೈನಾ_ಡಿ_ಪಿಮೆಂಟಾ Raina de Pimenta ಅಂದರೆ " ಕಾಳು ಮೆಣಸಿನ ರಾಣಿ" ಎಂದು ಬಿರುದು ನೀಡಿ ಕರೆದರು.   ಶರಾವತಿ ನದಿ ದಂಡೆಯ ಜೈನ ರಾಣಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ರಾಜ್ಯವನ್ನ ವರದಾ ನದಿ ದಂಡೆಯ #ಕೆಳದಿ_ರಾಜ_ವೆಂಕಟಪ್ಪನಾಯಕ ವಶಪಡಿಸಿಕೊಳ್ಳುತ್ತಾರೆ ಆ ಸಂದರ್ಭದಲ್ಲಿ ರಾಣಿ ಚೆನ್ನ ಬೈರಾದೇವಿಯನ್ನು #ಆನಂದಪುರಂ ಕೋಟೆಯಲ್ಲಿ ಬಂದಿಸಿಡುತ್ತಾರೆ.    ನಂತರ ಸಾಗರದ ...

4045. ಬ್ಲಾಕ್ & ವೈಟ್ ಸ್ಕ್ಯಾಚ್ ಬ್ರಾಂಡ್ ಕಥೆ

ಬ್ಲಾಕ್_ಆಂಡ್_ವೈಟ್  #Black_and_White  ಬ್ಲಾಕ್ & ವೈಟ್ ಸ್ಕಾಚ್ ವಿಸ್ಕಿಯ ಇತಿಹಾಸವು ಅತ್ಯಂತ ಜನಪ್ರಿಯ ಹಾಗೂ ಜಗತ್ತಿನಾದ್ಯಂತ ಲಕ್ಷಾಂತರ ಮದ್ಯಪ್ರಿಯರನ್ನು ಸೆಳೆದ ವಿಶಿಷ್ಟ ಕಥೆಯಾಗಿದೆ.    ಎರಡು ಮುದ್ದಾದ ನಾಯಿಗಳ ಲೋಗೋ ಹೊಂದಿರುವ ಈ ಬ್ರ್ಯಾಂಡ್ ಹುಟ್ಟಿಕೊಂಡಿದ್ದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.   ​ಈ ಬ್ರ್ಯಾಂಡ್‌ನ ಸೃಷ್ಟಿಕರ್ತ #ಜೇಮ್ಸ್_ಬುಕಾನನ್ ಕೆನಡಾದಲ್ಲಿ ಹುಟ್ಟಿ ಸ್ಕಾಟ್‌ಲ್ಯಾಂಡ್‌ನಲ್ಲಿ ಬೆಳೆದವರು.   ಇವರು 1879ರಲ್ಲಿ ಲಂಡನ್‌ಗೆ ಬಂದು ಮದ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡರು.    ಅಂದಿನ ಕಾಲದಲ್ಲಿದ್ದ ಸ್ಕಾಚ್ ವಿಸ್ಕಿಗಳು ಸಾಮಾನ್ಯ ಜನರಿಗೆ ಕುಡಿಯಲು ತುಂಬಾ ಕಟುವಾಗಿರುತ್ತಿದ್ದವು ​ಇದನ್ನು ಗಮನಿಸಿದ ಬುಕಾನನ್, ಜನರಿಗೆ ಸುಲಭವಾಗಿ ಇಷ್ಟವಾಗುವಂತಹ, ಮೃದುವಾದ ಮತ್ತು ಹಗುರವಾದ  ಹೊಸ ಬ್ಲೆಂಡೆಡ್ ವಿಸ್ಕಿಯನ್ನು ಸಿದ್ಧಪಡಿಸಿ 1884 ರಲ್ಲಿ ಮಾರುಕಟ್ಟೆಗೆ ತಂದರು.  ಇದಕ್ಕೆ ಅವರು ಮೊದಲು ಇಟ್ಟ ಹೆಸರು #ಬುಕಾನನ್ಸ್_ಬ್ಲೆಂಡ್" Buchanan's Blend.   ​ಜೇಮ್ಸ್ ಬುಕಾನನ್ ತಮ್ಮ ವಿಸ್ಕಿಯನ್ನು ಬಿಳಿ ಬಣ್ಣದ ಲೇಬಲ್ ಹೊಂದಿದ್ದ ಕಪ್ಪು ಬಾಟಲಿಗಳಲ್ಲಿ ಮಾರಾಟ ಮಾಡುತ್ತಿದ್ದರು.    ಅಂಗಡಿಗಳಿಗೆ ಬರುವ ಗ್ರಾಹಕರು ಇದರ ಅಸಲಿ ಹೆಸರನ್ನು ಕರೆಯುವ ಬದಲು, ಸುಲಭವಾಗಿ ಗುರುತಿಸಲು ಆ ಕಪ್ಪು ಮತ್ತು ಬಿಳಿ ಬಾಟಲಿ ಕೊಡಿ Th...

4044.ಫೈರ್_ಪ್ರೂಪ್_ವಸ್ತುಗಳಿಂದ_ಮಾತ್ರ_ಇಂಟಿರಿಯರ್_ಡೆಕೋರೇಷನ್_ಮಾಡಿಸಿ

ಫೈರ್_ಪ್ರೂಪ್_ವಸ್ತುಗಳಿಂದ_ಮಾತ್ರ_ಇಂಟಿರಿಯರ್_ಡೆಕೋರೇಷನ್_ಮಾಡಿಸಿ.   ನೀವು ಯಾವುದೇ ಹೋಟೆಲ್ - ರೆಸ್ಟೋರೆಂಟ್ ಅಥವ ಮನೆ ಪ್ರವೇಶಿಸುವ ಮುನ್ನ ಅಲ್ಲಿನ ಇಂಟೀರಿಯರ್ ಗಮನಿಸಿ ಅದು ಅಗ್ನಿ ನಿರೋಧಕ ಆಗಿಲ್ಲದಿದ್ದರೆ ಪ್ರವೇಶ ಮಾಡಲೇ ಬೇಡಿ.    ಹೋಟಲ್ ರೆಸ್ಟೋರೆಂಟ್ ತೆರೆಯುವ ಉದ್ಯಮಿಗಳಲ್ಲಿ ನನ್ನ ವಿನಂತಿ ದಯಮಾಡಿ ಅಗ್ನಿ ಸುರಕ್ಷತೆ ಇಲ್ಲದ ಒಳಾಂಗಣ ವಿನ್ಯಾಸ ಮಾಡಿಸಲೇ ಬೇಡಿ.   ಹೋಟೆಲ್ - ರೆಸ್ಟೋರೆಂಟ್ - ಮಾಲ್ ಅಥವ ಮನೆಗಳಲ್ಲಿ ಅದರ ಮಾಲಿಕರುಗಳೇ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇಂತಹ ದುರಂತಗಳು ಸಂಭವಿಸಿದಂತೆ ನೋಡಿಕೊಳ್ಳಬೇಕು.    ಆದರೆ ಒಳಾಂಗಣ ವಿನ್ಯಾಸಗಾರರು ಮತ್ತು ಪಾಲ್ ಸೀಲಿಂಗ್ ಮಾಡಿಸುವ ಹೆಚ್ಚಿನ ಜನರು ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ.    ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟುತ್ತಾರೆ ಆದರೆ ಅಗ್ನಿ ನಿರೋಧಕ ಅಲ್ಲದ ವಸ್ತುವಿನಿಂದ ಒಳಾಂಗಣ ವಿನ್ಯಾಸ ಮತ್ತು ಪಾಲ್ ಸೀಲಿಂಗ್ ಗಳನ್ನ ಮಾಡಿಸುತ್ತಾರೆ.    ಕಳೆದೆ ವರ್ಷ ಉಡುಪಿಯ ಬಾರ್ ಮಾಲಿಕ ದಂಪತಿಗಳು ಇಂತಹ ಅಗ್ನಿ ದುರಂತದಲ್ಲಿ ಬಲಿ ಆಗಿದ್ದರು.     ನಿನ್ನೆ 2026ರ ಜೂನ್ 15ರ ಸೋಮವಾರ ಸಂಜೆ #ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆ (ನಟರಾಜ್ ಸರ್ಕಲ್ ಬಳಿ) ಇರುವ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' #ರೆಸ್ಟೋ_ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ದುರ್ಮರಣ...

4043. 2026 ಲಿಂಗನಮಕ್ಕಿ ಜಲಾಶಯದ ತುಂಬುತ್ತಾ? ...

ಈ_ವರ್ಷ_ಲಿಂಗನಮಕ್ಕಿ_ಡ್ಯಾಮು_ತುಂಬುತ್ತಾ? ... #ಏನಿದು_ಎಲ್_ನೀನೋ_ಎಪೆಕ್ಟ್.... #ಏನಿದು_ಲಾ_ನೀನೋ_ಎಪೆಕ್ಟ್ ...   ಇದಕ್ಕೂ ಭಾರತದ ಹವಾಮಾನಕ್ಕೂ ಒಂದೊಂಕ್ಕೊಂದು ಸಂಬಂಧ ಇದೆ.    2026 ಜೂನ್ 16 ಬಂದರೂ ಬಿರು ಬಿಸಿಲಿನ ದಗೆ ಇದೆ ಯಾಕೆ?... ಎಂಬ ಪ್ರಶ್ನೆಗೆ ಇದು ಎಲ್ ನೀನೋ ಎಪೆಕ್ಟ್ ಆದ್ದರಿಂದ ಈ ವರ್ಷ ಮುಂಗಾರು ಕಡಿಮೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದಾರೆ.   ಶಿವಮೊಗ್ಗ ಜಿಲ್ಲೆಯಲ್ಲಿನ ಶರಾವತಿ ಕ್ಯಾಚ್ಮೆಂಟ್ ಏರಿಯಾ ಮತ್ತು ಈ ನದಿ ಹರಿದು ಅರಬ್ಬಿ ಸಮುದ್ರ ಸೇರುವ ಹೊನ್ನಾವರ ಭಾಗದ ಜನರು ಮುಂಗಾರು ಕೇರಳ ತಲುಪಿತು ಎಂಬ ಸುದ್ದಿ ಕೇಳಿದಾಗಲೇ ಅವರವರೇ ಪರಸ್ಪರ ಎದುರಾದಾಗ ಪ್ರಶ್ನಿಸಿಕೊಳ್ಳುವುದೇನೆಂದರೆ ಈ ವರ್ಷ ಲಿಂಗನಮಕ್ಕಿ ಆಣೆ ಕಟ್ಟು ತುಂಬುತ್ತದಾ? ಎಂದೇ ಮಾತು - ಕುಶಲೋಪರಿ ಪ್ರಾರಂಭ ಮಾಡುತ್ತಾರೆ.    #ಎಲ್_ನಿನೊ (El Niño) ಎಂಬುದು ಪೆಸಿಫಿಕ್ (ಶಾಂತ) ಮಹಾಸಾಗರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ಒಂದು ಜಾಗತಿಕ ಹವಾಮಾನ ವಿದ್ಯಮಾನವಾಗಿದೆ. ಇದು ಪ್ರಪಂಚದಾದ್ಯಂತದ ಹವಾಮಾನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಭಾರತದಲ್ಲಿ ಮುಖ್ಯವಾಗಿ ಬರಗಾಲ ಹಾಗೂ ಮುಂಗಾರು ಮಳೆಯ ಕೊರತೆಗೆ ಕಾರಣವಾಗುತ್ತದೆ. ​ಸ್ಪ್ಯಾನಿಷ್ ಭಾಷೆಯಲ್ಲಿ 'ಎಲ್ ನಿನೊ' ಎಂದರೆ "ಸಣ್ಣ ಹುಡುಗ" ಅಥವಾ "ಬಾಲ ಯೇಸು" ಎಂದರ್ಥ.     ಕ್ರಿಸ್ಮಸ್ ಹಬ್ಬದ ಸಮಯದಲ್ಲಿ (ಡಿಸೆಂಬರ್ ...

4042. ಭಾಗ -4 ಘಟ್ಟಕ್ಕೆ ಕರಾವಳಿ ಭಾಗದವರ ವಲಸೆ

ಭಾಗ_4_ಘಟ್ಟಕ್ಕೆ_ಕರಾವಳಿಗರ_ವಲಸೆ.  ಕುವೆಂಪು ಸಾಹಿತ್ಯದಲ್ಲಿ ಕರಾವಳಿ ವಲಸಿಗರ ಪಾತ್ರಗಳು ಅದರಲ್ಲಿ ಬ್ಯಾರಿ ಮುಸ್ಲಿಂ ಮತ್ತು ತುಳುವ ಕೃಷಿ ಕಾರ್ಮಿಕರ ಉಲ್ಲೇಖಗಳು.   ಕರಾವಳಿಯಿಂದ ಘಟ್ಟಕ್ಕೆ ನಡೆಯುತ್ತಿದ್ದ ಈ ವಲಸೆ  ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅಧ್ಯಾಯವಾಗಿದೆ.    ನಿಮ್ಮ ಪೂರ್ವಿಕರು ಈ ರೀತಿ ವಲಸೆ ಮಾಡಿದ್ದರಾ?....ಹಾಗಿದ್ದರೆ ನೀವು ಈ ಕರಾವಳಿ ಜನರ ವಲಸೆಯ ಸರಣಿ ಲೇಖನಗಳನ್ನು ನಿಮ್ಮ ಕುಟುಂಬದಲ್ಲಿ ಶೇರ್ ಮಾಡಿ ಈ ಮೂಲಕ ಅವರಿಗೆ ನಿಮ್ಮ ಪೂರ್ವಿಕರ  ಆ ದಿನಗಳ ಕಷ್ಟದ ದಿನಗಳನ್ನ ನೆನಪು ಮಾಡಿ ಕೊಡಿ ಅದು ದಾಖಲಾಗಿ ಉಳಿಯಲಿ.   ತೀರ್ಥಹಳ್ಳಿಯ ಹಳೆಯ ಆಗುಂಬೆ ಸ್ಟಾಂಡ್ ಚಿತ್ರ ಈ ಲೇಖನದ ಜೊತೆ ಲಗತ್ತಿಸಿದೆ,ಕುವೆಂಪು ಅವರೂ ಕೆಳಗೆ ಆಗುಂಬೆ ಮೂಲಕ ಘಟ್ಟ ಇಳಿಯುವ ರಸ್ತೆಯನ್ನ #ಘಟ್ಟದ_ಕೆಳಗಿನ_ರಸ್ತೆ ಅಂತ ಸಾಹಿತ್ಯದಲ್ಲಿ ಬರೆದಿದ್ದಾರೆ.   #ಕುವೆಂಪು,ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಸಾಹಿತ್ಯವು ಪ್ರಮುಖವಾಗಿ ಮಲೆನಾಡಿನ ಜನಜೀವನ, ಸಂಸ್ಕೃತಿ ಮತ್ತು ಅಲ್ಲಿನ ಪರಿಸರವನ್ನು ಚಿತ್ರಿಸುತ್ತದೆ ಆದರೆ ಅವರ ಕಾದಂಬರಿಗಳಾದ #ಕಾನೂರು_ಹೆಗ್ಗಡಿತಿ ಮತ್ತು #ಮಲೆಗಳಲ್ಲಿ_ಮದುಮಗಳು ಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಕರಾವಳಿ ವಲಸೆಯ ಅತ್ಯಂತ ಮಹತ್ವದ ಉಲ್ಲೇಖಗಳು ಮತ್ತು ಚಿತ್ರಣಗಳು ಸಿಗುತ್ತವೆ.   ...

4041.ರೇಡಿಯೊ ಕಾಲರ್ ಆನೆ

ಕಳೆದ_ವರ್ಷ_ಈ_ಆನೆ_ಮಾಡಿದಷ್ಟು_ಸುದ್ದಿ_ಬೇರಾವ_ಕಾಡಾನೆ_ಮಾಡಿರಲಿಲ್ಲ.   ನೆನಪು ಮಾಡಿಕೊಳ್ಳಿ ಒಂದು ವರ್ಷದ ಹಿಂದೆ ಈ ಆನೆಯ ಬಿಂದಾಸ್ ಸಂಚಾರದ ಬಗ್ಗೆ ಮತ್ತು ಅಂದಿನ ಭಯದ ದಿನಗಳ ಬಗ್ಗೆ ಈ ಆನೆ ಸೆರೆಹಿಡಿಯುವ ತನಕ ಈ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು.   ತೀಥ೯ಹಳ್ಳಿಯಿಂದ ಸಂಚಾರ ಪ್ರಾರಂಬಿಸಿ ಯಡೂರು, ಹುಲಿಕಲ್, ಹೊಸಂಗಡಿ- ಹೆನ್ನಾಬೈಲು ಮತ್ತು  ಸಿದ್ದಾಪುರದಲ್ಲೆಲ್ಲ ಸಂಚರಿಸಿತ್ತು.   ಇಷ್ಟೆಲ್ಲಾ ಬಿಂದಾಸ್ ಆಗಿ ತಿರುಗಾಡಿದ ಆನೆ ಕುತ್ತಿಗೆಯಲ್ಲಿ ರೇಡಿಯೋ ಕಾಲರ್ ಇತ್ತು ಇದರ ಸಹಾಯದಿಂದಲೇ ಈ ಆನೆ ಯನ್ನು ಕುಂದಾಪುರ ಸಮೀಪದ ಹೊಸಂಗಡಿಯ ಹೆನ್ನಾಬೈಲಿನಲ್ಲಿ ಸೆರೆ ಹಿಡಿದು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಬಿಟ್ಟಿದ್ದರು  ಈ ಆನೆ ಮಾಡಿದಷ್ಟು ಸುದ್ದಿ ಬೇರಾವ ಕಾಡಾನೆ ಮಾಡಿರಲಿಲ್ಲ ಇದು ಬಿಂದಾಸ್ ಆಗಿ ಹಗಲು - ರಾತ್ರಿ ಊರೊಳಗೆ ಸಂಚರಿಸುತ್ತಿದ್ದರಿಂದ ಎಲ್ಲರ ಸೆಲ್ ಫೋನ್ ನಲ್ಲಿ ಇದರ ಪೋಟೋ ದಾಖಲಾಯಿತು.    ಬಹುಶಃ ಕಾಡಾನೆಯೊಂದು ಮಲೆನಾಡಿನಲ್ಲಿ ಯಾರಿಗೂ ತೊಂದರೆ ಕೊಡದೆ ಈ ರೀತಿ ಊರೊಳಗೆ ಬಿಂದಾಸ್ ಆಗಿ ಸಂಚರಿಸಿದ್ದು ಇದೇ ಮೊದಲು.    ಈ ಕಾಡಾನೆ ದಿನಕ್ಕೆ 50 KM ನಡೆಯುತ್ತಿತ್ತು, ಹುಲಿಕಲ್ ಘಾಟ್ ನಲ್ಲಿ ಸಂಚರಿಸುತ್ತಿದ್ದ ವಾಹನಗಳ ಅಕ್ಕಪಕ್ಕದಲ್ಲೇ ನಡೆಯುತ್ತಾ ಘಾಟಿ ಇಳಿದಿತ್ತು.    ಸಿದ್ದಾಪುರದ ಸಮೀಪದ #ಹೆನ್ನಾಬೈಲಿನ_ಬಾಮಿಕುಮ್ಕಿಯಲ್...

4040. ಬ್ಲಾಕ್ ಡಾಗ್ ಸ್ಕಾಚ್ ವಿಸ್ಕಿ ಹೆಸರಿಗೆ ಕಾರಣ

ಬ್ಲ್ಯಾಕ್_ಡಾಗ್_ಸ್ಕಾಚ್_ವಿಸ್ಕಿ_ಬ್ರಾಂಡ್_ಇತಿಹಾಸ    ಪ್ರಸಿದ್ಧವಾದ ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಈ ಸ್ಕಾಚ್ ವಿಸ್ಕಿ ಇತಿಹಾಸ ತುಂಬಾ ರೋಚಕವಾಗಿದೆ, ಇದು ಸ್ಕಾಟ್‌ಲ್ಯಾಂಡ್‌ನಲ್ಲಿ ಹುಟ್ಟಿ, ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಬೆಳೆದ ಕಥೆ ಇಲ್ಲಿದೆ. ಈ ಬ್ಲಾಕ್ ಡಾಗ್ ಬ್ರಾಂಡ್ ನಾಯಿ ಹೆಸರಲ್ಲ ಮೀನಿನ ಗಾಣಕ್ಕೆ ಸುರಿಯುವ ಕೃತಕ ಆಹಾರ ವಸ್ತುವಿನ ಹೆಸರು ಬ್ಲಾಕ್ ಡಾಗ್ ಈ ಸ್ಕಾಚ್ ವಿಸ್ಕಿಗೆ ಇಡುತ್ತಾರೆ. ​  ಬ್ರಿಟಿಷ್ ಭಾರತಕ್ಕಾಗಿ ಸಿದ್ಧವಾದ ​ಈ ಕಥೆ ಆರಂಭವಾಗುವುದು 1883 ರಲ್ಲಿ ಸ್ಕಾಟ್‌ಲ್ಯಾಂಡ್‌ನ ಲೀತ್  ಎಂಬಲ್ಲಿ.    ಬೊಂಬಾಯಿಯಲ್ಲಿ 'ಫಿಪ್ಸನ್ ಅಂಡ್ ಕಂಪನಿ' ಎಂಬ ಮದ್ಯದ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದ ಬ್ರಿಟಿಷ್ ಉದ್ಯಮಿ ಹರ್ಬರ್ಟ್ ಮುಸ್ಗ್ರೇವ್ ಫಿಪ್ಸನ್ ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತೀಯ ಗಣ್ಯರಿಗಾಗಿ ಒಂದು ಪ್ರೀಮಿಯಂ ಸ್ಕಾಚ್ ವಿಸ್ಕಿಯನ್ನು ಆಮದು ಮಾಡಿಕೊಳ್ಳಲು ಬಯಸಿದರು.   ​ಅದಕ್ಕಾಗಿ ಅವರು ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಮಾಸ್ಟರ್ ಬ್ಲೆಂಡರ್ ಆದ #ಜೇಮ್ಸ್_ಮ್ಯಾಕಿನ್ಲೇ ಅವರಿಗೆ ಆರ್ಡರ್ ನೀಡಿದರು.    ಮ್ಯಾಕಿನ್ಲೇ ಅವರು ಸುದೀರ್ಘ ಸಮುದ್ರ ಪ್ರಯಾಣದಲ್ಲೂ ತನ್ನ ಗುಣಮಟ್ಟವನ್ನು ಕಳೆದುಕೊಳ್ಳದ, ಕುಡಿಯಲು ಅತ್ಯಂತ ಮೃದುವಾದ  ಒಂದು ವಿಸ್ಕಿಯನ್ನು ಸಿದ್ಧಪಡಿಸಿದರು. ​ #ಬ್ಲ್ಯ...

4039.ಭಾಗ -3. ಘಟ್ಟಕ್ಕೆ ಕರಾವಳಿಯ ಜನರ ವಲಸೆ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ... #ಭಾಗ_3.  ಘಟ್ಟದ ಹೆಬ್ಬಾಗಿಲಾಗಿದ್ದ ಪಶ್ಚಿಮ ಘಟ್ಟದ ನಾಲ್ಕು ಘಾಟಿಗಳು.   ಯಾಕೆ_ಈ_ರೀತಿ_ವಲಸೆ_ಬಂದರು?.... ಆ ರೀತಿ ವಲಸೆ ಬಂದ ಸಾವಿರಾರು ಕುಟುಂಬಗಳು ಘಟ್ಟದಲ್ಲಿಯೇ ನೆಲೆಸಿ ಅಲ್ಲಿನ ಖಾಯಂ ನಿವಾಸಿಗಳಾಗಿದ್ದಾರೆ, ಅವರಿಗೆ ಅವರ ಕುಟುಂಬಗಳು ವಲಸೆಯ ಕಥೆ ಮರೆತು ಹೋಗಿರಬಹುದು.   ನಿಮ್ಮ ಕುಟುಂಬದಲ್ಲಿ ಇಂತಹ ವಲಸೆ ನಡೆದಿತ್ತಾ?....ಹಾಗಾದರೆ ಈ ಲೇಖನ ನೀವೂ ಓದಿ ಮತ್ತು ನಿಮ್ಮ ತಲೆಮಾರಿನವರಿಗೆ ಈ ಲೇಖನ ಶೇರ್ ಮಾಡಿ ತಲುಪಿಸಿ, ಅವರಿಗೆ ತಮ್ಮ ಕುಟುಂಬದ ಮರೆತು ಹೋದ ಮೂಲ ವಲಸೆ ಇತಿಹಾಸ ನೆನಪಾಗಿ ಉಳಿಯಲು ಸಹಾಯವಾಗುತ್ತದೆ.    ಇಂದು ನಾವು ಕೇವಲ ಗಂಟೆಗಳಲ್ಲಿ ದಾಟುವ ಈ ಘಾಟಿಗಳನ್ನು ಅಂದು ನಮ್ಮ ಹಿರಿಯರು ದಿನಗಟ್ಟಲೆ  ನಡೆದು ದಾಟುತ್ತಿದ್ದರು, ಆ ದಟ್ಟ ಕಾಡಿನ ಹಾದಿಯಲ್ಲಿ ಅವರು ಎದುರಿಸಿದ ಅತಿ ದೊಡ್ಡ ಭಯ ಅಥವ ಸಂಕಷ್ಟದ ಬಗ್ಗೆ ನಿಮ್ಮ ಅಜ್ಜ - ಅಜ್ಜಿಯಂದಿರು ಏನಾದರು ಹೇಳಿದ್ದಾರಾ? ....    ನಿಮ್ಮ ಪೂರ್ವಜರು ಕರಾವಳಿಯಿಂದ ಸಾಗರ - ಹೊಸನಗರ - ತೀರ್ಥಹಳ್ಳಿ -ಕೊಪ್ಪ ಎನ್ ಆರ್ ಪುರ -ಶೃ೦ಗೇರಿ - ಚಿಕ್ಕಮಗಳೂರು - ಮೂಡಿಗೆರೆ - ಕೊಡಗು ಹಾಸನಕ್ಕೆ ಈ ರೀತಿ ವಲಸೆ ಬಂದಿದ್ದರೆ  ಈ ಲೇಖನ ನಿಮ್ಮ ಊರಿನ ಗೆಳೆಯರಿಗೆ ಶೇರ್ ಮಾಡಿ ಅವರಿಗೂ ಈ ಕಷ್ಟದ ದಿನದ ನಿಮ್ಮ ಪೂರ್ವಿಕರ ವಲಸೆ ಯಾತ್ರೆ ಗೊತ್ತಾಗಲಿ.   ಆಗೆಲ್ಲ ನಡೆದೇ ಘಟ್ಟ ...

4038. ಭಾಗ -2 ಘಟ್ಟಕ್ಕೆ ಕರಾವಳಿ ಭಾಗದ ಜನರ ವಲಸೆ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ... #ಭಾಗ_2. #ಯಾಕೆ_ಈ_ರೀತಿ_ವಲಸೆ_ಬಂದರು?.... ನಿಮ್ಮ ಕುಟುಂಬದಲ್ಲಿ ಇಂತಹ ವಲಸೆ ನಡೆದಿತ್ತಾ?....  ನಿಮ್ಮ ತಂದೆ ಅಥವ ಅಜ್ಜಂದಿರಿಗೆ ಈ ಲೇಖನ ಕಳಿಸಿ ವಿಚಾರಿಸಿ ನಿಮ್ಮ ಪೂರ್ವಜರು ಕರಾವಳಿಯ ಯಾವ ಊರಿಂದ ವಲಸೆ ಬಂದಿದ್ದರು? ಅಂತ ಕೇಳಿ ... ಹಾಗಾದರೆ ನಿಮ್ಮ ತಲೆಮಾರಿನವರಿಗೆ ಈ ಲೇಖನ ಶೇರ್ ಮಾಡಿ ತಲುಪಿಸಿ, ಅವರಿಗೆ ತಮ್ಮ ಕುಟುಂಬದ ಮರೆತು ಹೋದ ಮೂಲ ವಲಸೆ ಇತಿಹಾಸ ನೆನಪಾಗಿ ಉಳಿಯಲು.   ಎಷ್ಟನೇ ಇಸವಿಯಿಂದ ಇದು ಪ್ರಾರಂಭವಾಯಿತು?...   ಆ ಕಾಲದ ಪ್ರಯಾಣ ಹೇಗಿತ್ತು?...  ವಲಸೆ ಬಂದವರ ಜೀವನ ಶೈಲಿ ಹೇಗಿತ್ತು?...   ಈ ವಲಸೆ ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅಧ್ಯಾಯವಾಗಿದೆ ಗೆಳೆಯರಾದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಕರಾವಳಿ ಭಾಗದ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ಈ ಲೇಖನ ಬರೆಯಲು ಪ್ರೇರಣೆ ಆಯಿತು, ಈ  ಲೇಖನ ದೀರ್ಘವಾಗಿರುವುದರಿಂದ ಕೆಲವು ಭಾಗಗಳಲ್ಲಿ ಪ್ರಕಟಿಸುತ್ತಿದ್ದೇನೆ.   ಕರಾವಳಿ ಜನರ ವಲಸೆಯು ಪ್ರಮುಖವಾಗಿ ಹವಾಮಾನ ವೈಪರೀತ್ಯಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ನಗರೀಕರಣದಿಂದ ಉಂಟಾಗುತ್ತಿತ್ತು.  ಸಾವಿರಾರು ಜನ ಈಗ ಘಟ್ಟ ವಾಸಿಗಳಾಗಿದ್ದಾರೆ ಅವರಿಗೆ ಅವರ ಕುಟುಂಬಗಳು ವಲಸೆ ಬಂದ ಕಥೆ ಮರೆತು ಹೋಗಿರಬಹುದು.   "ಘಟ್ಟಕ್...

4037. ಭಾಗ -1 ಘಟ್ಟಕ್ಕೆ ವಲಸೆ ಬಂದ ಕರಾವಳಿ ಜನ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ... #ಭಾಗ_1. #ಯಾಕೆ_ಈ_ರೀತಿ_ವಲಸೆ_ಬಂದರು?....   ಎಷ್ಟನೇ ಇಸವಿಯಿಂದ ಇದು ಪ್ರಾರಂಭವಾಯಿತು?...   ಆ ಕಾಲದ ಪ್ರಯಾಣ ಹೇಗಿತ್ತು?...  ವಲಸೆ ಬಂದವರ ಜೀವನ ಶೈಲಿ?...      ಗೆಳೆಯರಾದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಕರಾವಳಿ ಭಾಗದ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ಈ ಲೇಖನ ಬರೆಯಲು ಪ್ರೇರಣೆ ಆಯಿತು, ಈ  ಲೇಖನ ದೀರ್ಘವಾಗಿರುವುದರಿಂದ ಕೆಲವು ಭಾಗಗಳಲ್ಲಿ ಪ್ರಕಟಿಸುತ್ತೇನೆ. ಕರಾವಳಿ ಜನರ ವಲಸೆಯು ಪ್ರಮುಖವಾಗಿ ಹವಾಮಾನ ವೈಪರೀತ್ಯಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ನಗರೀಕರಣದಿಂದ ಉಂಟಾಗುತ್ತಿತ್ತು.  ಸಾವಿರಾರು ಜನ ಈಗ ಘಟ್ಟ ವಾಸಿಗಳಾಗಿದ್ದಾರೆ ಅವರಿಗೆ ಅವರ ಕುಟುಂಬಗಳು ವಲಸೆ ಬಂದ ಕಥೆ ಮರೆತು ಹೋಗಿರಬಹುದು. #ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ಎಂಬುದು ಕರ್ನಾಟಕದ ಸಾಮಾಜಿಕ ಮತ್ತು ಅರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅದ್ಯಾಯವಾಗಿದೆ.   ಈ ಕರಾವಳಿ ಜನರ ವಲಸೆ ಬಗ್ಗೆ ಶಿವರಾಮ ಕಾರಂತರು ತಮ್ಮ ಕಾದಂಬರಿಯಲ್ಲಿ ದಾಖಲಿಸಿದ್ದಾರೆ ಅದು ಸಿನಿಮಾ ಕೂಡ ಆಗಿ ಪ್ರಸಿದ್ಧಿ ಪಡೆದಿತ್ತು.    ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ #ಚೋಮನದುಡಿಯಲ್ಲಿ ಕರಾವಳಿ ಭಾಗದ ವಲಸೆಯ ಚಿತ್ರಣವು ಕೇವಲ ಭೌಗೋಳಿಕ ಸ್ಥಳಾಂತರವಾಗಿರದೆ ಅದು ಅಂದಿನ ಕಾಲದ ಸಾಮಾಜಿಕ, ಆರ್ಥಿಕ ಮತ...

4036. ಶಿವಮೊಗ್ಗ ಬೆಂಗಳೂರು ವಿಮಾನಗಳು ರದ್ದು ಯಾಕೆ?

ಶಿವಮೊಗ್ಗ_ಬೆಂಗಳೂರು_ವಿಮಾನ_ಸಂಚಾರ_ರದ್ದು_ಏಕೆ?...  ಶಿವಮೊಗ್ಗ ಬೆಂಗಳೂರು ವಿಮಾನ ಮಾರ್ಗದಲ್ಲಿ ಪ್ರಯಣಿಕರ ಸಂಖ್ಯೆ ಉತ್ತಮವಾಗೇ ಇತ್ತು ಸುಮಾರು ಶೇಕಡಾ 80% ಸೀಟುಗಳು ಭರ್ತಿ ಆಗುತ್ತಿತ್ತು ಆದರೂ ವಿಮಾನಗಳ ಸಂಚಾರ ಸ್ಥಗಿತಗೊಳಿಸಲು ಕಾರಣ ಏನು?...  ತಿಂಗಳಿಗೆ ಸರಾಸರಿ 10 ರಿಂದ 13 ಸಾವಿರ ಜನ ವಿಮಾನದಲ್ಲಿ ಈ ಮಾರ್ಗದಲ್ಲಿ ಸಂಚರಿಸಿದರೂ ವಿಮಾನ ಸಂಚಾರ ನಿಲ್ಲಿಸಿದ್ದು ಏಕೆ?...   ಶಿವಮೊಗ್ಗ ಬೆಂಗಳೂರಿಗೆ #ಉಡಾನ್ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ ಏಕೆ?..   ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿ ಮೋದೀಜಿ ಅವರಿಂದ ಉದ್ಘಾಟನೆಗೊಂಡ #ಕುವೆಂಪು_ ವಿಮಾನ ನಿಲ್ದಾಣದಲ್ಲಿ ಸಾಲು ಸಾಲಾಗಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುತ್ತಿರುವ ವಿಮಾನ ಸಂಸ್ಥೆಗಳ ನಿರ್ಧಾರದಿಂದ ಮೇಲಿನ ಈ ರೀತಿಯ ಪ್ರಶ್ನೆಗಳು ಏಳುತ್ತಿದೆ.   ಪ್ರಸ್ತುತ #ಶಿವಮೊಗ್ಗದಿಂದ_ಬೆಂಗಳೂರಿಗೆ_ಯಾವುದೇ_ನೇರ_ವಿಮಾನ_ಸೌಲಭ್ಯ_ಲಭ್ಯವಿಲ್ಲ.  ​ಈ ಹಿಂದೆ ಇಂಡಿಗೋ (IndiGo) ಸಂಸ್ಥೆಯು ಶಿವಮೊಗ್ಗ - ಬೆಂಗಳೂರು ನಡುವೆ ನೇರ ವಿಮಾನ ಸೇವೆ ನಡೆಸುತ್ತಿತ್ತಾದರೂ, ಕಾರ್ಯಾಚರಣೆಯ ಕಾರಣಗಳಿಂದಾಗಿ ಅದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.   ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವು ಆಗಸ್ಟ್ 31, 2023 ರಂದು ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.   ಭಾರತೀಯ ವಿಮಾನಯಾನ ಪ್ರಾಧಿಕಾರ (AAI) ಮತ್ತು ನಾಗರಿಕ ವಿಮಾನಯ...

4035. ದೇವನೂರು ಮಹಾದೇವ 78

ದ್ಯಾವನೂರು_ಮಹಾದೇವ_78.  ದೇವನೂರು ಮಹಾದೇವ ಅವರು 1948ರ ಜೂನ್ 10 ರಂದು ಜನಿಸಿದರು ಆ ಲೆಕ್ಕಾಚಾರದಲ್ಲಿ ಇಂದು ಜೂನ್ 10 ಅವರ 78ನೇ ಹುಟ್ಟುಹಬ್ಬ.  ದೇವನೂರು' ಮತ್ತು 'ದ್ಯಾವನೂರು' ಎರಡೂ ಸರಿಯೇ, ಆದರೆ ಅವುಗಳನ್ನು ಬಳಸುವ ಸಂದರ್ಭಗಳು ಬೇರೆ ಬೇರೆ.   ದೇವನೂರು' ಎಂಬ ಊರಿನ ಹೆಸರನ್ನೇ ಆ ಭಾಗದ ಗ್ರಾಮೀಣ ಜನ ಆಡುಭಾಷೆಯಲ್ಲಿ ಜನಪದ ಶೈಲಿಯಲ್ಲಿ 'ದ್ಯಾವನೂರು' ಎಂದು ಕರೆಯುತ್ತಾರೆ.   #ದ್ಯಾವನೂರು' ಎಂಬುದು ದೇವನೂರು ಮಹಾದೇವ ಅವರು 1973 ರಲ್ಲಿ ಪ್ರಕಟಿಸಿದ ತಮ್ಮ ಮೊದಲ ಸಣ್ಣಕಥೆಗಳ ಸಂಕಲನದ ಹೆಸರು.    ಇವರ ಎದೆಗೆ ಬಿದ್ದ ಅಕ್ಷರ ಪುಸ್ತಕ ನನ್ನ ಜೊತೆ ಇದೆ, ಪುಸ್ತಕ ಅರ್ಧ ಓದಿದ್ದೇನೆ,ನಿದಾನವಾಗಿ ಓದುವುದು ನನ್ನ ಅಭ್ಯಾಸ  ದೇವನೂರು ಮಹಾದೇವ ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಪ್ರಭಾವಶಾಲಿ ಮತ್ತು ವಿಶಿಷ್ಟ ಲೇಖಕರಲ್ಲಿ ಒಬ್ಬರು.    ತಮ್ಮ ಸಾಮಾಜಿಕ ಬದ್ಧತೆ, ದಲಿತ ಚಳವಳಿಯ ನೇತೃತ್ವ ಮತ್ತು ಅನನ್ಯ ಬರವಣಿಗೆಯ ಶೈಲಿಯಿಂದ ಅವರು ಪ್ರಸಿದ್ಧರಾಗಿದ್ದಾರೆ.   ​ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇದೇ ಹಳ್ಳಿಯ ಹೆಸರೇ ಅವರ ಹೆಸರಿನ ಮುಂದಿದೆ. ನಾನು ಈವರೆಗೆ ಅವರ ಮುಖತಃ ಬೇಟಿ ಆಗಲು ಆಗಲೇ ಇಲ್ಲ ಆದರೆ ಅವರ ಜೊತೆ ಫೋನ್ ಸಂಬಾಷಣೆ ಮಾಡುವ ಅವಕಾಶ ಮೈಸೂರಿನ ಮಿತ್ರ ಕರುಣಾಕರ್ ಮಾಡಿಕೊಟ್ಟಿದ್ದರು.   ಇವತ್ತು ...