Skip to main content

4039.ಭಾಗ -3. ಘಟ್ಟಕ್ಕೆ ಕರಾವಳಿಯ ಜನರ ವಲಸೆ


ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ...
#ಭಾಗ_3.

 ಘಟ್ಟದ ಹೆಬ್ಬಾಗಿಲಾಗಿದ್ದ ಪಶ್ಚಿಮ ಘಟ್ಟದ ನಾಲ್ಕು ಘಾಟಿಗಳು.

  ಯಾಕೆ_ಈ_ರೀತಿ_ವಲಸೆ_ಬಂದರು?....
ಆ ರೀತಿ ವಲಸೆ ಬಂದ ಸಾವಿರಾರು ಕುಟುಂಬಗಳು ಘಟ್ಟದಲ್ಲಿಯೇ ನೆಲೆಸಿ ಅಲ್ಲಿನ ಖಾಯಂ ನಿವಾಸಿಗಳಾಗಿದ್ದಾರೆ, ಅವರಿಗೆ ಅವರ ಕುಟುಂಬಗಳು ವಲಸೆಯ ಕಥೆ ಮರೆತು ಹೋಗಿರಬಹುದು.

  ನಿಮ್ಮ ಕುಟುಂಬದಲ್ಲಿ ಇಂತಹ ವಲಸೆ ನಡೆದಿತ್ತಾ?....ಹಾಗಾದರೆ ಈ ಲೇಖನ ನೀವೂ ಓದಿ ಮತ್ತು ನಿಮ್ಮ ತಲೆಮಾರಿನವರಿಗೆ ಈ ಲೇಖನ ಶೇರ್ ಮಾಡಿ ತಲುಪಿಸಿ, ಅವರಿಗೆ ತಮ್ಮ ಕುಟುಂಬದ ಮರೆತು ಹೋದ ಮೂಲ ವಲಸೆ ಇತಿಹಾಸ ನೆನಪಾಗಿ ಉಳಿಯಲು ಸಹಾಯವಾಗುತ್ತದೆ.

   ಇಂದು ನಾವು ಕೇವಲ ಗಂಟೆಗಳಲ್ಲಿ ದಾಟುವ ಈ ಘಾಟಿಗಳನ್ನು ಅಂದು ನಮ್ಮ ಹಿರಿಯರು ದಿನಗಟ್ಟಲೆ  ನಡೆದು ದಾಟುತ್ತಿದ್ದರು, ಆ ದಟ್ಟ ಕಾಡಿನ ಹಾದಿಯಲ್ಲಿ ಅವರು ಎದುರಿಸಿದ ಅತಿ ದೊಡ್ಡ ಭಯ ಅಥವ ಸಂಕಷ್ಟದ ಬಗ್ಗೆ ನಿಮ್ಮ ಅಜ್ಜ - ಅಜ್ಜಿಯಂದಿರು ಏನಾದರು ಹೇಳಿದ್ದಾರಾ? ....

   ನಿಮ್ಮ ಪೂರ್ವಜರು ಕರಾವಳಿಯಿಂದ ಸಾಗರ - ಹೊಸನಗರ - ತೀರ್ಥಹಳ್ಳಿ -ಕೊಪ್ಪ ಎನ್ ಆರ್ ಪುರ -ಶೃ೦ಗೇರಿ - ಚಿಕ್ಕಮಗಳೂರು - ಮೂಡಿಗೆರೆ - ಕೊಡಗು ಹಾಸನಕ್ಕೆ ಈ ರೀತಿ ವಲಸೆ ಬಂದಿದ್ದರೆ  ಈ ಲೇಖನ ನಿಮ್ಮ ಊರಿನ ಗೆಳೆಯರಿಗೆ ಶೇರ್ ಮಾಡಿ ಅವರಿಗೂ ಈ ಕಷ್ಟದ ದಿನದ ನಿಮ್ಮ ಪೂರ್ವಿಕರ ವಲಸೆ ಯಾತ್ರೆ ಗೊತ್ತಾಗಲಿ.

  ಆಗೆಲ್ಲ ನಡೆದೇ ಘಟ್ಟ ಹತ್ತಿ ಬರುತ್ತಿದ್ದರು ಕಷ್ಟ ಪಟ್ಟು ಘಟ್ಟ ಹತ್ತುತ್ತಿದ್ದ ಆ ಕಾಲದ ಕಥೆ -ವ್ಯಥೆ...

     ದಟ್ಟ ಅರಣ್ಯದಲ್ಲಿ ವನ್ಯಜೀವಿಗಳಿಂದ ರಕಕ್ಷಣೆಗಾಗಿ ಗುಂಪು ಗುಂಪಾಗಿ ಪ್ರಯಾಣತ್ತಿದ್ದರಂತೆ.

    ಮಾರ್ಗ ಮಧ್ಯದಲ್ಲಿ ಸಿಗುವ ಹೊಳೆ -ಹಳ್ಳದ ಸಮೀಪ ಅಡುಗೆ ಅದೂ ಜಾತಿ ಕಾರಣದಿಂದ ಪ್ರತ್ಯೇಕ ಪ್ರತ್ಯೇಕ ಅಡುಗೆ. 

  ಈ ಮಾರ್ಗದಲ್ಲಿ ಕರಾವಳಿ ಮೂಲದ ಕೆಲ ಸಹೃದಯಿ ಮನೆಗಳು ಇರುತ್ತಿದ್ದವು ಅಲ್ಲಿ
ರಾತ್ರಿಯಲ್ಲಿ ಇಂತಹ ಪ್ರಯಾಣಿಕರಿಗೆ ಅವರ ಮನೆಯ ಹೊರ ಆವರಣದ ಚಾವಣಿಯಲ್ಲಿ ತಂಗಲು ಅವಕಾಶ ನೀಡುತ್ತಿದ್ದರಂತೆ.

   ಅಲ್ಲಿ ಇವರಿಗೆ ಇಂಬುಳದ ರಕ್ಷಣೆಗೆ ಕಾಲಿಗೆ ಹಚ್ಚಿಕೊಳ್ಳಲು ಉಚಿತ ಸುಣ್ಣ, ಕುಡಿಯಲು ನೀರು - ಬೆಲ್ಲ ಇಡುತ್ತಿದ್ದರಂತೆ.

  ಘಟ್ಟದ ಮೇಲಿನ ಕೃಷಿ ತೋಟದ ಕೆಲಸಗಾರರನ್ನ ಕರೆತರುವ ಸೇರೆಗಾರರೇ ಟೀಮ್ ಲೀಡರ್ ಅವರು ಈ ಕ್ಯಾರವಾನ್ ಗಳ ಲೀಡ್ ಮಾಡುತ್ತಿದ್ದರು.

  ಈ ಘಟ್ಟಕ್ಕೆ ಬರುವ ತಂಡಗಳಲ್ಲಿ ಮರದ ಕೆಲಸದ ವಿಶ್ವಕರ್ಮಆಚಾರರು, ಕೊಂಕಣಿ ಆಚಾರರು, ಮೆಸ್ತಾಗಳು,ಮಣ್ಣಿನ ಗೋಡೆ ಕಟ್ಟುವ ಗಂಜಿಯವರು, ಜಂಬಿಟ್ಟಿಗೆ ಕಲ್ಲು ಕೀಳುವ ಮತ್ತು ಗಾರೆ ಕೆಲಸದ ಪರ್ಬುಗಳು ಎಂದು ಹೇಳುವ ಕ್ರೈಸ್ತರು,ಸಂಪ್ರದಾಯಕ ಆಲೇ ಮನೆ ಹಾಕಿ ಬೆಲ್ಲ ತಯಾರಿಸುವ ತಂಡದ ಆಲೇ ಶೆಟ್ಟರು ಮತ್ತು ಅವರ ಕೋಣಗಳು, ಒಣ ಮೀನು, ವಾಲೆ ಬೆಲ್ಲ ಮಾರಾಟಗಾರರಾದ ಬ್ಯಾರಿ ಸಾಹೇಬರು, ದೇವಾಡಿಗರು, ಬಿಲ್ಲವ - ಪೂಜಾರರು, ಬಂಟರು, ರಾಮಕ್ಷತ್ರಿಯರು, ಮೊಗೇರರು, ಬತ್ತಾಡರು, ಕೊರಗರು, ಕೂಸಾಳರು , ಸಮಗಾರರು, ಕ್ಷೌರಿಕ ವೃತ್ತಿಯ ಭಂಡಾರರು, ಗೊಲ್ಲರು, ಮರಕೆಲಸದ ಕೇರಳ ಮೂಲದ ಮಲೆಯಾಳಿಗಳು, ಆರ್ಚಕ ವೃತ್ತಿಯ ವಿವಿಧ ಬ್ರಾಹ್ಮಣ ಸಮಾಜದವರು, ಹೋಟೆಲ್ ಮತ್ತು  ಬೇರೆ ವೃತ್ತಿಯ ಗೌಡ ಸಾರಸ್ವತರು ಇನ್ನೂ ಅನೇಕ ಜಾತಿ ವರ್ಗದವರು ಘಟ್ಟಕ್ಕೆ ಹೊಟ್ಟೆಪಾಡಿಗಾಗಿ ವಲಸೆ ಬರುತ್ತಿದ್ದರು ಇವರ ಜೊತೆ ಘಟ್ಟದ ಮೇಲೆ ನೆಲೆಸಿ ಊರಿಗೆ ಬಾರದ ತಮ್ಮಸಂಬಂದಿಗಳ ನೋಡಲು ಬರುವವರೂ ಇರುತ್ತಿದ್ದರು.

    ಅವರೆಲ್ಲ ಘಟ್ಟ ಹತ್ತಿ ಬರುವ ಮಾರ್ಗದಲ್ಲಿ ಆ ಕಾಲದಲ್ಲಿ ಅವರ ಊರಿಂದ ಬಾಂಬೆಗೆ ಓಡಿ ಹೋಗಿ ಬಂದವರು ಹೇಳುವ ಕಥೆ ಕೇಳುತ್ತಾ,ಘಟ್ಟದ ಕಾಡಿನ ಹುಲಿ - ಹೆಬ್ಬಾವಿನ ಕಥೆ ಕೇಳುತ್ತಾ ಭಯ ಪಡುತ್ತಾ ಬರುವಾಗ ಅವರು ಅವರ ಆರಾದ್ಯ ದೈವಗಳಾದ ಕರಾವಳಿ ದೈವಗಳ ಪವಾಡದ ಕಥೆಗಳನ್ನು ಕೇಳುತ್ತಾ ದೈರ್ಯ ಪಟ್ಟುಕೊಳ್ಳುತ್ತಿದ್ದರು.

   ಇವರ ಮಧ್ಯ ಕೇರಳದ ಮರ ಕೊಯ್ಯುವ ಕೆಲಸದ ಮಲೆಯಾಳಿಗಳು ಇರುತ್ತಿದ್ದರು ಅವರಲ್ಲಿ ಹೆಚ್ಚಿನವರು ಅವರವರ ಊರಲ್ಲಿ ತಪ್ಪು ಮಾಡಿ ಪೋಲಿಸರ ಕಣ್ಣು ತಪ್ಪಿಸಿ ಕೊಂಡು ಬಂದವರು ಈ ಗುಂಪು ಸೇರುತ್ತಿದ್ದರು.

  ಇದು ಘಟ್ಟ ಹತ್ತುವವರ ಕಥೆ ಆದರೆ ಘಟ್ಟ ಇಳಿಯುವವರ ಕಥೆ ಅದು ಇನ್ನೊಂದು ರೀತಿಯ ಬೇರೆಯದ್ದು...

  ವರ್ಷ ಕಾಲ ದುಡಿದ ಹಣ ಊರು ಮುಟ್ಟುವ ತನಕ ಸಂರಕ್ಷಣೆ ಮಾಡಿ ಊರು ತಲುಪುವುದು ಆ ಕಾಲದಲ್ಲಿ ದೊಡ್ಡ ಕಷ್ಟ ಆಗಿತ್ತು.

   ಘಟ್ಟ ಇಳಿಯುವವರ ಹತ್ತಿರ ಹಣ ಇದೆ ಎಂದು ಅವರನ್ನ ದೋಚಲು ಹೊಂಚು ಹಾಕುತ್ತಿದ್ದ ಕಳ್ಳರು ದರೋಡೆಕೋರರು ಅಲ್ಲಲ್ಲಿ ಇರುತ್ತಿದ್ದರು.

    ಕರ್ನಾಟಕದ ಇತಿಹಾಸದಲ್ಲಿ ಮಹತ್ತರವಾದ ಕರಾವಳಿ ಭಾಗದ ಜನರ ವಲಸೆಯಲ್ಲಿ ಪ್ರಮುಖವಾಗಿ ಆ ಕಾಲದಲ್ಲಿ ಈ ಜನ ಬಳಸಿದ ಘಟ್ಟದ ಮಾರ್ಗದ ನಾಲ್ಕು ಘಾಟಿಗಳು ಕೂಡ ಮುಖ್ಯವಾಗಿದೆ.

  ಕರಾವಳಿ ಭಾಗದಿಂದ ಮಲೆನಾಡು ಅಥವಾ ಘಟ್ಟದ ಮೇಲಿನ ಪ್ರದೇಶಗಳಿಗೆ ಉದಾಹರಣೆಗೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಮುಂತಾದ ಕಡೆಗಳಿಗೆ ಜನರು ವಲಸೆ ಹೋಗಲು ಅಥವಾ ವ್ಯಾಪಾರಕ್ಕಾಗಿ ಹಿಂದಿನಿಂದಲೂ ಬಳಸುತ್ತಿದ್ದ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಘಾಟಿ ಮಾರ್ಗವೆಂದರೆ ಆಗುಂಬೆ ಘಾಟಿ,ಶಿರಾಡಿ ಘಾಟಿ,ಚಾರ್ಮಾಡಿ ಘಾಟಿ ಮತ್ತು ಹುಲಿಕಲ್ ಘಾಟಿಗಳು.

#ಚಾರ್ಮಾಡಿ_ಘಾಟ್‌
 ಸಂಪರ್ಕಿಸುವ ಪ್ರದೇಶಗಳು ದಕ್ಷಿಣ ಕನ್ನಡದ ಮಂಗಳೂರು/ಬೆಳ್ತಂಗಡಿಯಿಂದ ಚಿಕ್ಕಮಗಳೂರು ಮೂಡಿಗೆರೆ.
 ಈ ಮಾರ್ಗ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ಜನರು ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ಕೆಲಸಕ್ಕಾಗಿ ವಲಸೆ ಹೋಗಲು ದಶಕಗಳಿಂದಲೂ ಬಳಸುತ್ತಿದ್ದ ಅತ್ಯಂತ ಮುಖ್ಯವಾದ ಮತ್ತು ಹತ್ತಿರದ ಘಾಟಿ ಮಾರ್ಗ ಇದಾಗಿದೆ.

#ಆಗುಂಬೆ_ಘಾಟ್‌.
 ಸಂಪರ್ಕಿಸುವ ಪ್ರದೇಶಗಳು ಉಡುಪಿ/ಕುಂದಾಪುರದಿಂದ ಶಿವಮೊಗ್ಗ ತೀರ್ಥಹಳ್ಳಿ.
  ಇದನ್ನು ದಕ್ಷಿಣ ಭಾರತದ ಚಿರಾಪುಂಜಿ ಎನ್ನಲಾಗುವ ಆಗುಂಬೆಯ ಮೂಲಕ ಹಾದುಹೋಗುವ ಈ ಮಾರ್ಗವನ್ನು ಕರಾವಳಿ ಜನರು ಶಿವಮೊಗ್ಗ, ಚಿಕ್ಕಮಗಳೂರು ಭಾಗಕ್ಕೆ ವಲಸೆ ಬರಲು ಹೆಚ್ಚಾಗಿ ಬಳಸುತ್ತಿದ್ದರು.

#ಶಿರಾಡಿ_ಘಾಟ್‌.
 ಸಂಪರ್ಕಿಸುವ ಪ್ರದೇಶಗಳು ಮಂಗಳೂರುನಿಂದ ಹಾಸನ, ಕೊಡಗು, ಸಕಲೇಶಪುರ ಮತ್ತು ಬೆಂಗಳೂರು.
 ಇದು ಕರಾವಳಿ ಮತ್ತು ಬಯಲು ಸೀಮೆಯನ್ನು ಸಂಪರ್ಕಿಸುವ ಅತ್ಯಂತ ದೊಡ್ಡ ವಾಣಿಜ್ಯ ಮಾರ್ಗವಾಗಿದ್ದು, ಹಾಸನದ ಸಕಲೇಶಪುರ ಭಾಗದ ಕಾಫಿ ತೋಟಗಳಿಗೆ ವಲಸೆ ಹೋಗುವ ಕಾರ್ಮಿಕರಿಗೆ ಇದು ಪ್ರಮುಖ ದಾರಿಯಾಗಿತ್ತು.

#ಹುಲಿಕಲ್_ಘಾಟ್‌ / ಬಾಳೆಬರೆ ಘಾಟ್‌.
 ಸಂಪರ್ಕಿಸುವ ಪ್ರದೇಶಗಳು ಉಡುಪಿ,ಕುಂದಾಪುರದಿಂದ ಶಿವಮೊಗ್ಗ,ಹೊಸನಗರ ಮತ್ತು ಸಾಗರ.
 ಕುಂದಾಪುರ ಭಾಗದ ಕರಾವಳಿ ಜನರು ಘಟ್ಟದ ಮೇಲಿನ ಪ್ರದೇಶಗಳಿಗೆ ವಲಸೆ ಹೋಗಲು ಈ ಮಾರ್ಗವನ್ನು ಬಳಸುತ್ತಿದ್ದರು.

  ಈ ನಾಲ್ಕು ಘಾಟಿಗಳಲ್ಲಿ ಚಾರ್ಮಾಡಿ ಘಾಟಿ  ಕರಾವಳಿ ಜನರ ಬದುಕಿನೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಮುಖ್ಯ ಮಾರ್ಗವಾಗಿತ್ತು.

   ಘಟ್ಟಕ್ಕೆ ಕರಾವಳಿ ವಲಸೆ ಸರಣಿ ಲೇಖನದ ಹಿಂದಿನ ಎರೆಡು ಭಾಗಗಳು ಓದಲು ಕಾಮೆಂಟ್ ನಲ್ಲಿ ಲಿಂಕ್ ಇದೆ ನೋಡಿ.

#migration #karavali #westernghats #coastal #cofee #areca

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...