ಸಾಗರನ_ವಿಧಾನಸಭಾ_ಕ್ಷೇತ್ರಕ್ಕೆ_ಮಂತ್ರಿ_ಸ್ಥಾನ_ಸಿಗಲಿ.
ಶಾಸಕರಾದ #ಗೋಪಾಲಕೃಷ್ಣಬೇಳೂರು ನೂತನ ಮುಖ್ಯಮಂತ್ರಿ #ಡಿ_ಕೆ_ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಲಿ ಎಂದು ಹಾರೈಸುತ್ತೇನೆ.
ನಮ್ಮ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ದೊರೆತರೆ ಈ ಮೂಲಕ ನಮ್ಮ ಸಾಗರ ವಿಧಾನ ಸಭಾ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ ಆದ್ದರಿಂದ ಯಾವುದೇ ಪಕ್ಷದ ಶಾಸಕರಾಗಿದ್ದರೂ ಅವರ ಪಕ್ಷದ ಸರ್ಕಾರದಲ್ಲಿ ಮಂತ್ರಿ ಆಗಲಿ ಎಂದು ಬಯಸುತ್ತೇನೆ.
ನಮ್ಮ ಸಾಗರ ವಿದಾನ ಸಭಾ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಮಂತ್ರಿ - ಸ್ಪೀಕರ್ ಆಗಿದ್ದರು, ನಮ್ಮ ಆನಂದಪುರಂನವರೇ ಆಗಿದ್ದ ಬದರಿನಾರಾಯಣ ಅಯ್ಯಂಗಾರ್ ಮತ್ತು ನಮ್ಮ ತಾಲ್ಲೂಕಿನವ ರೇ ಆಗಿದ್ದ ಕೆ.ಹೆಚ್. ಶ್ರೀನಿವಾಸರು ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರೂ ಮಂತ್ರಿ ಆಗಿರಲಿಲ್ಲ ಇವರುಗಳು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆದಾಗ ಮಂತ್ರಿ ಆಗಿದ್ದು ಇತಿಹಾಸ.
ಶಿವಮೊಗ್ಗ ಜಿಲ್ಲೆಯ ಕಡಿದಾಳು ಮಂಜಪ್ಪ, ಬಂಗಾರಪ್ಪ, ಜೆ. ಹೆಚ್. ಪಟೇಲರು ಮತ್ತು ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು, ಶಿಕಾರಿಪುರದ ಯಂಕಟಪ್ಪ, ಬಸವಣ್ಯಪ್ಪ , ಕಿಮ್ಮನೆರತ್ನಾಕರ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಮತ್ತು ಮಧು ಬಂಗಾರಪ್ಪ ಮಂತ್ರಿಗಳಾಗಿದ್ದವರು.
ನಮ್ಮ ಸಾಗರದ ಮೂವರು ಅಳಿಯಂದಿರು ತಮಕೂರಿನ ನಾಗೇಶ್, ಕಾರ್ಕಳದ ಸುನಿಲ್ ಕುಮಾರ್, ಸಾಗರ ತಾಲೂಕಿನ ಸೊಸೆ ಚಿತ್ರ ನಟಿ ಜಯಮಾಲ ಮಂತ್ರಿಗಳಾಗಿದ್ದರು
ಮತ್ತು ಈಗಿನ ಕೇರಳ ಸರ್ಕಾರದ ವಿಷ್ಣುನಾದನ್ ಮಂತ್ರಿಗಳಾಗಿದ್ದಾರೆ.
ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಗೋಪಾಲಕೃಷ್ಣ ಬೇಳೂರು ಮತ್ತು ಭದ್ರಾವತಿ ವಿದಾನ ಸಭಾ ಕ್ಷೇತ್ರದ ಸಂಗಮೇಶ್ ಅತ್ಯಂತ ಹಿರಿಯ ಶಾಸಕರು ಮತ್ತು ಮಂತ್ರಿಗಳಾಗುವ ಅರ್ಹತೆ ಅವರ ಪಕ್ಷದಲ್ಲಿ ಇವರಿಗೆ ಇದೆ.
ಪಕ್ಷ -ಪಾರ್ಟಿಗಳು ಚುನಾವಣೆಗೆ ಮಾತ್ರ ಸೀಮಿತ ಆಗಲಿ, ದ್ವೇಷದ ರಾಜಕಾರಣ ಬದಿಗಿಟ್ಟು ನಮ್ಮ ಸಾಗರ ಕ್ಷೇತ್ರದ ಅಭಿವೃದ್ಧಿ ಪರವಾಗಿ ಯೋಚಿಸೋಣ.
ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಮಂತ್ರಿ ಆದರೆ ನಮ್ಮ ಕ್ಷೇತ್ರದ ಅಭಿವೃದ್ದಿಗೆ ವೇಗ ದೊರೆಯುತ್ತದೆ ಆದ್ದರಿಂದ ನಾನು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನೂತನ ಸರ್ಕಾರದ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಲಿ ಎಂದು ಆಶಿಸುತ್ತೇನೆ.
ಶಾಸಕರು ಮಂತ್ರಿಯಾದರೆ ಅವರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಅಭಿವೃದ್ಧಿ ಕಾಮಗಾರಿಗಳ ಜೊತೆ ಪ್ರಭಾವ ಹೆಚ್ಚುತ್ತದೆ,
ಶಾಸಕರು ಸಚಿವರಾಗುವುದರಿಂದ ಕ್ಷೇತ್ರಕ್ಕೆ ನೇರವಾಗಿ ಸಿಗುವ ಕೆಲವು ಪ್ರಮುಖ ಲಾಭಗಳಲ್ಲಿ ಹೆಚ್ಚುವರಿ ಅನುದಾನ ಕೂಡ ಒಂದು.
ಸಚಿವರು ತಮ್ಮ ಇಲಾಖೆಯ ಬಜೆಟ್ನಿಂದ ವಿಶೇಷ ಅನುದಾನಗಳನ್ನು ಮತ್ತು ಸರ್ಕಾರಿ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಸುಲಭವಾಗಿ ಮಂಜೂರು ಮಾಡಿಸಿಕೊಳ್ಳಬಹುದು.
ಅಭಿವೃದ್ಧಿ ಯೋಜನೆಗಳಲ್ಲಿ ಮುಖ್ಯವಾಗಿ ರಸ್ತೆ, ನೀರಾವರಿ, ಆಸ್ಪತ್ರೆ ಮತ್ತು ಬೃಹತ್ ಕೈಗಾರಿಕೆಗಳಂತಹ ದೊಡ್ಡ ಯೋಜನೆಗಳು ಕ್ಷೇತ್ರದ ಪಾಲಾಗುತ್ತವೆ.
ಮಂತ್ರಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಾರೆ, ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ಮೇಲೆ ಸಚಿವರಿಗೆ ನೇರ ನಿಯಂತ್ರಣ ಇರುವುದರಿಂದ ಕೆಲಸಗಳು ವೇಗವಾಗಿ ಮತ್ತು ಸುಲಭವಾಗಿ ನಡೆಯುತ್ತವೆ.
ಶಾಸಕರು ಮಂತ್ರಿಯಾದರೆ (ಒಬ್ಬ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದರೆ) ಅವರ ಜವಾಬ್ದಾರಿಗಳು, ಅಧಿಕಾರ ಮತ್ತು ಕರ್ತವ್ಯಗಳಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ.
ಇದರ ಪ್ರಮುಖ ಅಂಶಗಳು ಹೆಚ್ಚುವರಿ ಜವಾಬ್ದಾರಿ ಮತ್ತು ಅಧಿಕಾರ ಕ್ಷೇತ್ರದ ಜೊತೆಗೆ ರಾಜ್ಯದ ಹೊಣೆ.
ಶಾಸಕರಾಗಿದ್ದಾಗ ಕೇವಲ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕಿರುತ್ತದೆ ಆದರೆ ಮಂತ್ರಿಯಾದ ತಕ್ಷಣ ಅವರಿಗೆ ವಹಿಸಲಾದ ಇಲಾಖೆಯ ಮೂಲಕ ಇಡೀ ರಾಜ್ಯದ ಜವಾಬ್ದಾರಿ ಅವರ ಹೆಗಲಿಗೆ ಬೀಳುತ್ತದೆ.
ನೀತಿ ನಿಯಮಗಳ ರಚನೆ ಜೊತೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಕಾನೂನುಗಳು, ಯೋಜನೆಗಳು ಮತ್ತು ನೀತಿಗಳನ್ನು ರೂಪಿಸುವ ಮಹತ್ವದ ಅಧಿಕಾರ ಅವರಿಗೆ ಸಿಗುತ್ತದೆ.
ಸಚಿವ ಸಂಪುಟದ ಸದಸ್ಯತ್ವದಿಂದ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಗಳಲ್ಲಿ ಭಾಗವಹಿಸುವ ಹಕ್ಕು ಸಿಗುತ್ತದೆ.
ರಾಜ್ಯದ ಪ್ರಮುಖ ನಿರ್ಧಾರಗಳು, ಬಜೆಟ್ ಹಂಚಿಕೆ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಇಲಾಖೆಯ ಮೇಲ್ವಿಚಾರಣೆ ಮತ್ತು ಆಡಳಿತ ತಮಗೆ ನೀಡಲಾದ ಇಲಾಖೆಯ ಐಎಎಸ್ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಮಂತ್ರಿಗಳಿಗಿರುತ್ತದೆ.
ಇಲಾಖೆಯ ಹಣಕಾಸು ವೆಚ್ಚಗಳು ಮತ್ತು ಯೋಜನೆಗಳ ಅನುಷ್ಠಾನದ ಸಂಪೂರ್ಣ ಹೊಣೆಗಾರಿಕೆ ಇವರದ್ದಾಗಿರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶಾಸಕರು ಮಂತ್ರಿಯಾದರೆ ಅವರ ಅಧಿಕಾರ ಮತ್ತು ಗೌರವ ಹೆಚ್ಚುತ್ತದೆ ಜೊತೆಗೆ ಇಡೀ ರಾಜ್ಯದ ಜನರಿಗೆಉತ್ತರದಾಯಿಯಾಗಿರಬೇಕಾದ ಜವಾಬ್ದಾರಿಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಮೂರು ಅವದಿಗೆ ಶಾಸಕರಾಗಿ ಅನುಭವ ಹೊಂದಿರುವ ಹಿರಿಯ ಶಾಸಕರಾಗಿದ್ದಾರೆ, ಇವರ ಒಂದು ಆಡಳಿತದ ವಿಶೇಷ ಅಂದರೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಕ್ಷೇತ್ರದ ಅಭಿವೃದ್ಧಿಯ ಆಡಳಿತ ಇವರದ್ದು ಇದು ನನಗೆ ಹೆಚ್ಚು ಇಷ್ಟವಾಯಿತು.
ನಾನು ಸಾಗರ ವಿಧಾನಸಭಾ ಕ್ಷೇತ್ರದವನಾಗಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಗೋಪಾಲಕೃಷ್ಣ ಬೇಳೂರು ಮಂತ್ರಿ ಆಗಲಿ ಎಂದು ಹಾರೈಸುತ್ತೇನೆ.
Comments
Post a Comment