ದ್ಯಾವನೂರು_ಮಹಾದೇವ_78.
ದೇವನೂರು ಮಹಾದೇವ ಅವರು 1948ರ ಜೂನ್ 10 ರಂದು ಜನಿಸಿದರು ಆ ಲೆಕ್ಕಾಚಾರದಲ್ಲಿ ಇಂದು ಜೂನ್ 10 ಅವರ 78ನೇ ಹುಟ್ಟುಹಬ್ಬ.
ದೇವನೂರು' ಮತ್ತು 'ದ್ಯಾವನೂರು' ಎರಡೂ ಸರಿಯೇ, ಆದರೆ ಅವುಗಳನ್ನು ಬಳಸುವ ಸಂದರ್ಭಗಳು ಬೇರೆ ಬೇರೆ.
ದೇವನೂರು' ಎಂಬ ಊರಿನ ಹೆಸರನ್ನೇ ಆ ಭಾಗದ ಗ್ರಾಮೀಣ ಜನ ಆಡುಭಾಷೆಯಲ್ಲಿ ಜನಪದ ಶೈಲಿಯಲ್ಲಿ 'ದ್ಯಾವನೂರು' ಎಂದು ಕರೆಯುತ್ತಾರೆ.
#ದ್ಯಾವನೂರು' ಎಂಬುದು ದೇವನೂರು ಮಹಾದೇವ ಅವರು 1973 ರಲ್ಲಿ ಪ್ರಕಟಿಸಿದ ತಮ್ಮ ಮೊದಲ ಸಣ್ಣಕಥೆಗಳ ಸಂಕಲನದ ಹೆಸರು.
ಇವರ ಎದೆಗೆ ಬಿದ್ದ ಅಕ್ಷರ ಪುಸ್ತಕ ನನ್ನ ಜೊತೆ ಇದೆ, ಪುಸ್ತಕ ಅರ್ಧ ಓದಿದ್ದೇನೆ,ನಿದಾನವಾಗಿ ಓದುವುದು ನನ್ನ ಅಭ್ಯಾಸ
ದೇವನೂರು ಮಹಾದೇವ ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಪ್ರಭಾವಶಾಲಿ ಮತ್ತು ವಿಶಿಷ್ಟ ಲೇಖಕರಲ್ಲಿ ಒಬ್ಬರು.
ತಮ್ಮ ಸಾಮಾಜಿಕ ಬದ್ಧತೆ, ದಲಿತ ಚಳವಳಿಯ ನೇತೃತ್ವ ಮತ್ತು ಅನನ್ಯ ಬರವಣಿಗೆಯ ಶೈಲಿಯಿಂದ ಅವರು ಪ್ರಸಿದ್ಧರಾಗಿದ್ದಾರೆ.
ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇದೇ ಹಳ್ಳಿಯ ಹೆಸರೇ ಅವರ ಹೆಸರಿನ ಮುಂದಿದೆ.
ನಾನು ಈವರೆಗೆ ಅವರ ಮುಖತಃ ಬೇಟಿ ಆಗಲು ಆಗಲೇ ಇಲ್ಲ ಆದರೆ
ಅವರ ಜೊತೆ ಫೋನ್ ಸಂಬಾಷಣೆ ಮಾಡುವ ಅವಕಾಶ ಮೈಸೂರಿನ ಮಿತ್ರ ಕರುಣಾಕರ್ ಮಾಡಿಕೊಟ್ಟಿದ್ದರು.
ಇವತ್ತು ನಮ್ಮ ಖ್ಯಾತ ಕವಿ ದೇವನೂರು ಮಹಾದೇವರ 78ನೇ ಹುಟ್ಟು ಹಬ್ಬ ಅವರಿಗೆ ನನ್ನ ಶುಭ ಕಾಮನೆಗಳನ್ನ ಅರ್ಪಿಸುತ್ತಾ ಅವರ ಜೊತೆ ಪೋನಿನಲ್ಲಿ ಒಮ್ಮೆ ಮಾತ್ರ ಮಾತನಾಡಿದ ನೆನಪುಗಳ ಮತ್ತೊಮ್ಮೆ ಬರೆಯ ಬೇಕನ್ನಿಸಿತು...
ಅವತ್ತು ಬೆಳಿಗ್ಗೆ 4-ನವೆಂಬರ್-2016 ರಂದು ದೇವನೂರು ಮಹದೇವರಿಂದ ಪೋನ್ ಬಂದಿತ್ತು.....
ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು....
"#ಹಲೋ_ನಾನು_ದೇವನೂರು_ಮಹಾದೇವ" ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ....
ನೀವು ಬರೆದ #ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ...
"ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ" ಅಂದರು.
ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ನಮ್ಮ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ....
ನೀವು ದಸರಾ ಉದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ...
"ಹಾಗೇನಿಲ್ಲ ಆ ಸಂದಭ೯ ಹಾಗಿತ್ತು ಆದ್ದರಿಂದ ನಿರಾಕರಿಸಿದೆ..." ಎಂದರು...
ಈ ಸಾರಿಯ 29- ಡಿಸೆಂಬರ್-2016ರ #ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು...
ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ? ಅಂತ ಕೇಳಿದೆ...
"ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ".... ಅಂದರು.
"ಮೈಸೂರಿಗೆ ಬನ್ನಿ" ಎಂದು ಅಮಂತ್ರಿಸಿದರು....
ಅವರೊಂದಿಗಿನ ಪೋನ್ ಸ೦ಬಾಷಣೆ ತುಂಬಾ ಸಂತೋಷ ನೀಡಿತ್ತು, ಮುಖತಃ ಅವರನ್ನ ಬೇಟಿ ಮಾಡಬೇಕುಆದರೆ ಕಾಲ ಈವರೆಗೆ ಕೂಡಿ ಬಂದಿಲ್ಲ.
ದೇವನೂರು ಮಹಾದೇವ ಅವರು ಪ್ರಕಟಿಸಿರುವ ಸ್ವತಂತ್ರ ಪುಸ್ತಕಗಳ ಒಟ್ಟು ಸಂಖ್ಯೆ ತೀರಾ ಕಡಿಮೆ — ಸುಮಾರು 6 ರಿಂದ 7 ಮುಖ್ಯ ಪುಸ್ತಕಗಳು ಮಾತ್ರ.
ಅವರು ಸಂಖ್ಯೆಗಿಂತ ಕೃತಿಯ ಗುಣಮಟ್ಟ ಮತ್ತು ಆಳಕ್ಕೆ ಹೆಸರಾದವರು.
ಅವರ ಒಟ್ಟು ಪ್ರಕಟಣೆಗಳು
1. ಸೃಜನಶೀಲ ಸಾಹಿತ್ಯ (ಕಥೆ/ಕಾದಂಬರಿ) - 3 ಪುಸ್ತಕಗಳು
ದ್ಯಾವನೂರು (1973) – ಸಣ್ಣಕಥೆಗಳ ಸಂಕಲನ
ಒಡಲಾಳ (1978) – ಕಿರುಕಾದಂಬರಿ/ದೀರ್ಘಕಥೆ
ಕುಸುಮಬಾಲೆ (1988) – ಕಾದಂಬರಿ.
2. ವೈಚಾರಿಕ ಮತ್ತು ಪ್ರಬಂಧ ಸಂಕಲನಗಳು - 3 ಪುಸ್ತಕಗಳು
ಎದೆಗೆ ಬಿದ್ದ ಅಕ್ಷರ – ಬಿಡಿ ಲೇಖನಗಳು ಮತ್ತು ಭಾಷಣಗಳ ಸಂಕಲನ.
ನೋಡು ಮತ್ತು ಕೂಡು – ಚಿಂತನೆಗಳ ಕೃತಿ
ಆರ್.ಎಸ್.ಎಸ್. ಆಳ ಮತ್ತು ಅಗಲ (2022) – ಸಮಕಾಲೀನ ರಾಜಕೀಯ/ಸಾಮಾಜಿಕ ವಿಶ್ಲೇಷಣೆಯ ಪುಸ್ತಿಕೆ.
3. ಸಮಗ್ರ ಸಂಪುಟಗಳು
ಇವುಗಳ ಹೊರತಾಗಿ, ಅವರ ಇಷ್ಟು ಕೃತಿಗಳನ್ನು ಒಟ್ಟುಗೂಡಿಸಿ "ದೇವನೂರು ಮಹಾದೇವ ಅವರ ಕೃತಿ ಸಂಪುಟ" (ಅಥವಾ ಎಲ್ಲ ಕತೆ, ಕಾದಂಬರಿಗಳು) ಮತ್ತು "ಆಯ್ದ ಕಥೆಗಳು" ಎಂಬ ಹೆಸರಿನಲ್ಲಿಯೂ ಪುಸ್ತಕಗಳು ಪ್ರಕಟವಾಗಿವೆ.
ಹಾಗಾಗಿ ಮೂಲ ಕೃತಿಗಳ ಲೆಕ್ಕಾಚಾರದಲ್ಲಿ ಅವರ ಒಟ್ಟು ಪುಸ್ತಕಗಳು 6 ಎಂದು ಹೇಳಬಹುದು.
ಇವರ ಬರಹಗಳು ಕೇವಲ ಶೋಷಣೆಯನ್ನು ಮಾತ್ರ ಹೇಳದೆ, ಶೋಷಿತರ ಒಳಗಿನ ಆತ್ಮಗೌರವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ.
ಇವರು ತೀರಾ ಕಡಿಮೆ ಬರೆದಿದ್ದರೂ ಬರೆದ ಪ್ರತಿಯೊಂದು ಕೃತಿಯೂ ಕನ್ನಡ ಸಾಹಿತ್ಯದ ಮೇಲೆ ಆಳವಾದ ಪ್ರಭಾವ ಬೀರಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕುಸುಮಬಾಲೆ ಕಾದಂಬರಿಗೆ ನೀಡಿದೆ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ರಾಜ್ಯೋತ್ಸವ ಪ್ರಶಸ್ತಿ ಮತ್ತು
ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತಾದರೂ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಪ್ರತಿಭಟಿಸಿ ಅವರು ಆ ಪ್ರಶಸ್ತಿಯನ್ನು ನಿರಾಕರಿಸಿದರು.
#kusumabale #mysore #devanrumahadeva
#dyavanuru #odalala #birthday
Comments
Post a Comment