Blog number 1229. ಶಿವಮೊಗ್ಗ ಜಿಲ್ಲೆಗೆ ಯಡೂರಪ್ಪನವರ ಎರೆಡು ಮಹತ್ವದ ಕೊಡುಗೆ, ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮತ್ತು ತುಮರಿ ಸೇತುವೆ.
# ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಯಡೂರಪ್ಪರ ಈ ಎರೆಡು ಮಹಾನ್ ಕಾಯ೯ಕ್ಕೆ ಜಿಲ್ಲೆಯ ಜನರ ಪರ ಅಭಿನಂದನೆಗಳು# ಒಂದು ಹಂತದಲ್ಲಿ ಶಿವಮೊಗ್ಗದಿಂದ ತಾಳಗುಪ್ಪದ ಮೀಟರ್ ಗೇಜ್ ರೈಲು ಮಾಗ೯ ಬ್ರಾಡ್ ಗೇಜ್ ಪರಿವತ೯ನೆಗಾಗಿ ರೈಲು ಸಂಚಾರ ನಿಲ್ಲಿಸಿದ್ದು ನಂತರ ಈ ಮಾಗ೯ ಲಾಭದಾಯಕವಲ್ಲ ಎಂದು ಕೇಂದ್ರ ಸಕಾ೯ರ ಅನುದಾನ ನೀಡದೆ ಮುಂದೆ ಈ ರೈಲು ಮಾಗ೯ ರದ್ದಾಗುವ ಮಟ್ಟ ತಲುಪಿತ್ತು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ರಾಜ್ಯ ಸಕಾ೯ರದಿಂದ ಅನುದಾನ ನೀಡಿ, ರೈಲ್ವೆ ಇಲಾಖೆಯ ಹಣ ಪಡೆದು ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಬ್ರಾಡ್ ಗೇಜ್ ನಿಮಾ೯ಣಕ್ಕೆ ಕಾರಣಕತ೯ರಾಗಿ ಈ ರೈಲ್ ಮಾಗ್೯ದ ಉಳಿವಿಗೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು. ತುಮರಿ ಸೇತುವೆಗಾಗಿ ಜನರ ಬೇಡಿಕೆ ಕೆಲವು ದಶಕದ್ದು, ಶರಾವತಿ ನದಿಗೆ ವಿದ್ಯುತ್ ಉತ್ಪಾದನೆಗಾಗಿ ಹಿರೇಬಾಸ್ಕರ ಎಂಬಲ್ಲಿ ಮೊದಲ ಆಣೆಕಟ್ಟು ಕಟ್ಟಿದಾಗಿನಿಂದ ಶುರುವಾಗಿ ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ನಿಮಾ೯ಣವಾದರು ನದಿಯ ಆ ಬಾಗದ ಜನತೆಗೆ ಸಂಚಾರಕ್ಕೆ ಪೆರಿ ಒಂದನ್ನ ಒದಗಿಸಲಾಗಿತ್ತು, ಕಾಲ ಕ್ರಮೇಣ ಜನಸಂಖ್ಯೆ ಹೆಚ್ಚು ಆಯಿತು.ಈ ಬಾಗದ ಸಿಗಂದೂರು ದೇವಾಲಯ ಪ್ರಖ್ಯಾತಿಗೊಂಡಂತೆ ವಿಪರೀತ ಪ್ರವಾಸಿಗರ ಸಂಖ್ಯೆಯಿ೦ದ ಸ್ಥಳಿಯರಿಗೆ ಸಂಚಾರ ಕಷ್ಟಸಾಧ್ಯವಾಯಿತು. ಜೆ.ಹೆಚ್.ಪಟೇಲರು ಮುಖ್ಯಮಂತ್ರಿ ಆದಾಗ ಹೆಚ್ಚುವರಿ ಪೆರಿ ನೀಡಿದರು, ನಂತರ ಕುಮಾರಸ್ವಾಮಿ ಮುಖ...