Skip to main content

Blog number 1229. ಶಿವಮೊಗ್ಗ ಜಿಲ್ಲೆಗೆ ಯಡೂರಪ್ಪನವರ ಎರೆಡು ಮಹತ್ವದ ಕೊಡುಗೆ, ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮತ್ತು ತುಮರಿ ಸೇತುವೆ.

# ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಯಡೂರಪ್ಪರ ಈ ಎರೆಡು ಮಹಾನ್ ಕಾಯ೯ಕ್ಕೆ ಜಿಲ್ಲೆಯ ಜನರ ಪರ ಅಭಿನಂದನೆಗಳು#

    ಒಂದು ಹಂತದಲ್ಲಿ ಶಿವಮೊಗ್ಗದಿಂದ ತಾಳಗುಪ್ಪದ ಮೀಟರ್ ಗೇಜ್ ರೈಲು ಮಾಗ೯ ಬ್ರಾಡ್ ಗೇಜ್ ಪರಿವತ೯ನೆಗಾಗಿ ರೈಲು ಸಂಚಾರ ನಿಲ್ಲಿಸಿದ್ದು ನಂತರ ಈ ಮಾಗ೯ ಲಾಭದಾಯಕವಲ್ಲ ಎಂದು ಕೇಂದ್ರ ಸಕಾ೯ರ ಅನುದಾನ ನೀಡದೆ ಮುಂದೆ ಈ ರೈಲು ಮಾಗ೯ ರದ್ದಾಗುವ ಮಟ್ಟ ತಲುಪಿತ್ತು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ರಾಜ್ಯ ಸಕಾ೯ರದಿಂದ ಅನುದಾನ ನೀಡಿ, ರೈಲ್ವೆ ಇಲಾಖೆಯ ಹಣ ಪಡೆದು ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಬ್ರಾಡ್ ಗೇಜ್ ನಿಮಾ೯ಣಕ್ಕೆ ಕಾರಣಕತ೯ರಾಗಿ ಈ ರೈಲ್ ಮಾಗ್೯ದ ಉಳಿವಿಗೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು.
   ತುಮರಿ ಸೇತುವೆಗಾಗಿ ಜನರ ಬೇಡಿಕೆ ಕೆಲವು ದಶಕದ್ದು, ಶರಾವತಿ ನದಿಗೆ ವಿದ್ಯುತ್ ಉತ್ಪಾದನೆಗಾಗಿ ಹಿರೇಬಾಸ್ಕರ ಎಂಬಲ್ಲಿ ಮೊದಲ ಆಣೆಕಟ್ಟು ಕಟ್ಟಿದಾಗಿನಿಂದ ಶುರುವಾಗಿ ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ನಿಮಾ೯ಣವಾದರು ನದಿಯ ಆ ಬಾಗದ ಜನತೆಗೆ ಸಂಚಾರಕ್ಕೆ ಪೆರಿ ಒಂದನ್ನ ಒದಗಿಸಲಾಗಿತ್ತು, ಕಾಲ ಕ್ರಮೇಣ ಜನಸಂಖ್ಯೆ ಹೆಚ್ಚು ಆಯಿತು.ಈ ಬಾಗದ ಸಿಗಂದೂರು ದೇವಾಲಯ ಪ್ರಖ್ಯಾತಿಗೊಂಡಂತೆ ವಿಪರೀತ ಪ್ರವಾಸಿಗರ ಸಂಖ್ಯೆಯಿ೦ದ ಸ್ಥಳಿಯರಿಗೆ ಸಂಚಾರ ಕಷ್ಟಸಾಧ್ಯವಾಯಿತು.
  ಜೆ.ಹೆಚ್.ಪಟೇಲರು ಮುಖ್ಯಮಂತ್ರಿ ಆದಾಗ ಹೆಚ್ಚುವರಿ ಪೆರಿ ನೀಡಿದರು, ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಇನ್ನೊಂದು ಮಂಜೂರಾಗಿತ್ತು.
 ಆದರೆ ಇದಾವುದು ಖಾಯO ಪರಿಹಾರ ಆಗಲಿಲ್ಲ ಈ ಮಧ್ಯೆ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ಸಾಗರದಲ್ಲಿ ಚುನಾವಣ ಪೂವ೯ದಲ್ಲಿ ತುಮರಿ ಸೇತುವೆಗೆ ಶುOಕು ಸ್ಥಾಪನೆ ಕಲ್ಲು ಹಾಕಿದರಾದರೂ ಇದು ಕಾಯ೯ಗತ ಆಗಲಿಲ್ಲ.
  ನಂತರ ಬಂದ ಸಕಾ೯ರದಲ್ಲಿ ಮಂಜೂರಾಯಿತು ಎಂದರೂ ಮರೀಚಿಗೆ ಆಯಿತು ಈಗ ಸಂಸದರಾದ ಯಡೂರಪ್ಪರ ಪ್ರಯತ್ನದಿ೦ದ ಕೇಂದ್ರ ಸಕಾ೯ರ 600 ಕೋಟಿ ಮಂಜೂರು ಮಾಡಿ ಕೇಂದ್ರ ಸಚಿವರಾದ ಗಡ್ಕರಿ  ಇದೇ ಫೆಬ್ರುವರಿ 19ಕ್ಕೆ ಇನ್ನೊಂದು ಶಂಕು ಸ್ಥಾಪನೆ ಮಾಡುತ್ತಿದ್ದಾರೆ, ಎಲ್ಲರ ಇಚ್ಚಾ ಶಕ್ತಿಯಿ೦ದ ತಕ್ಷಣ ಟೆಂಡರು ಕರೆದು ಅತಿ ಶೀಘ್ರವಾಗಿ ಸೇತುವೆ ನಿಮಾ೯ಣವಾಗಬೇಕು ಈ ರೀತಿ ಜಿಲ್ಲೆಗೆ ಈ ಎರೆಡು ಪ್ರಮುಖವಾದ ಯಾರಿಂದಲೂ ಸಾಧ್ಯವಾಗದ ಕೆಲಸ ಯಡೂರಪ್ಪ ಮಾಡಿ ತೋರಿಸಿದ್ದಾರೆ ಪಕ್ಷಾತೀತವಾಗಿ ಈ ಮಹಾನ್ ಕಾಯ೯ಕ್ಕಾಗಿ ಜಿಲ್ಲೆಯ ಜನತೆ ಅವರನ್ನ ಅಭಿನಂದಿಸುತ್ತದೆ.
  ತುಮರಿ ಸೇತುವೆಗಾಗಿ ಅನೇಕರು ಅನೇಕ ರೀತಿಯಲ್ಲಿ ಪ್ರಯತ್ನಿಸಿದ್ದಾರೆ ಅವರೆಲ್ಲರಿಗೂ ಕೃತಜ್ಞತೆಗಳ ಜೊತೆ ಬೇಡಿಕೆ ಈಡೇರಿದ ಸಂಭ್ರಮದ ಸಿಹಿ ನೀಡಿದ್ದಾರೆ ಯಡೂರಪ್ಪ.
  2003ರಲ್ಲಿ ನಾನು ಸಾಗರ ತಾಲ್ಲೂಕಿನಾದ್ಯಂತ 11 ದಿನ ನಡೆಸಿದ ಪಾದಯಾತ್ರೆಯಲ್ಲಿ ತುಮರಿ ಸೇತುವೆ ಮುಖ್ಯ ಬೇಡಿಕೆ ಆಗಿತ್ತು, 200O ನೇ ಇಸವಿಯಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ನೇತೃತ್ವದ ದೆಹಲಿ ಚಲೋದ ಮುಖ್ಯ ಬೇಡಿಕೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್, ತುಮರಿ ಸೇತುವೆ , ಹಂದಿಗೋಡು ಕಾಯಿಲೆ ಪೀಡಿತರ ಸಮಸ್ಯೆ ಪರಿಹಾರ ಮತ್ತು ಸಾಗರ ರೈಲು ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾರ ಹೆಸರ ನಾಮಕರಣ.
  ಈ ನಿಯೋಗದಲ್ಲಿ ಆಗ ರಾಜ್ಯಸಭಾ ಸದಸ್ಯರಾದ ಹಾಸನದ ಜವರೇಗೌಡರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಿ.ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು, ಕಲ್ಲೂರು ಮೇಘರಾಜ್, ಕಬಸೆ ಅಶೋಕ ಮೂತಿ೯ ಮುಂತಾದವರಿದ್ದರು.
  ಮುಂದಿನ ದಿನದಲ್ಲಿ ಸಾಗರ ರೈಲು ನಿಲ್ದಾಣದ ಮರು ನಾಮಕರಣ ಮತ್ತು ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆ ಕೂಡ ಪ್ರಾರಂಭವಾಗಲಿ ಆ ಬಗ್ಗೆ ಜನರು ಒತ್ತಾಯಿಸಲಿ ಎಂದು ಆಗ್ರಹಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...