Skip to main content

Posts

Showing posts from October, 2023

Blog number 1807. ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸುವ ಶಾಲೆಗಳು ಸಂಘ ಸಂಸ್ಥೆಗಳು ಸಾದಕರನ್ನ ಸ್ಮರಿಸಲು ಮರೆಯದಿರಲಿ

ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸುವ ಕನ್ನಡ ಸಂಘ ಸಂಸ್ಥೆಗಳು ಸಾದಕರನ್ನು ಸ್ಮರಿಸಲು ಮರೆಯದಿರಲಿ. #ಆನಂದಪುರಂ_ಇತಿಹಾಸ #ಭಾಗ_64. #ಕರ್ನಾಟಕ_ನಾಮಕರಣಕ್ಕೂ_ಆನಂದಪುರಂಗೂ_ನಂಟಿದೆ. #ಕನ್ನಡ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವದ_ಶುಭಾಷಯಗಳು. #ಶಿವಮೊಗ್ಗ_ಶಿವಮೊಗ್ಗ_ಎಂದು_ಬದಲಾಗಿ_ಹತ್ತನೇ_ವರ್ಷ. #ದೇವರಾಜಅರಸರು_1973_ನವೆಂಬರ್_1ರಂದು_ಕರ್ನಾಟಕ_ನಾಮಕರಣ_ಮಾಡುವಾಗ_ಜೊತೆಗಿದ್ದವರು_ಬದರಿನಾರಾಯಣಯ್ಯಂಗಾರರು. #ಕರ್ನಾಟಕ_ನಾಮಕರಣಕ್ಕೆ_ಆಗಿನ_ಶಿಕ್ಷಣ_ಮತ್ತು_ಕನ್ನಡಸಂಸ್ಕೃತಿ_ಇಲಾಖೆ_ಮಂತ್ರಿ_ಬದರಿನಾರಾಯಣಯ್ಯಂಗಾರ್_ಪ್ರಮುಖರು. #ಜ್ಞಾನಪೀಠಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ_ಕುವೆಂಪು. #ಶಿಮೊಗ್ಗ_ಎಂಬ_ಹೆಸರನ್ನು_ಶಿವಮೊಗ್ಗ_ಎಂದು_ಬದಲಿಸಿದವರು_ಸಿದ್ದರಾಮಯ್ಯ_2014ರಲ್ಲಿ.    ಮೈಸೂರು ರಾಜ್ಯ 1956 ನವೆಂಬರ್ 1 ರಂದು ಉದಯವಾಯಿತು. ಕನ್ನಡ ಮಾತಾಡುವ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಮಾಡಲಾಗಿತ್ತು.   1973 ನವೆಂಬರ್ 1 ರಂದು ದೇವರಾಜ ಅರಸರು ಮೈಸೂರು ರಾಜ್ಯಕ್ಕೆ #ಕರ್ನಾಟಕ ಎಂದು ಮರು ನಾಮಕರಣ ಮಾಡುತ್ತಾರೆ ಅವತ್ತು ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಮಂತ್ರಿ ಆಗಿದ್ದವರು ಶಿವಮೊಗ್ಗ ಜಿಲ್ಲೆಯ ಎ.ಆರ್. ಬದರಿನಾರಾಯಣಯ್ಯಂಗಾರ್ (ಆನಂದಪುರಂ ರಾಮಕೃಷ್ಣಯ್ಯಂಗಾರ್ ಬದರಿನಾರಾಯಣ್ ಅಯ್ಯಂಗಾರ್ ಎಂಬುದು ಅವರ ಪೂರ್ಣ ಹೆಸರು) ಈ ಐತಿಹಾಸಿಕ ಕ

Blog number 1806. ಬೂದಗುಂಬಳದ ಈ ಆಕಾರವೇಕೋ ?...

https://youtube.com/shorts/GM9x-qJ98gw?feature=shared ಬೂದು ಕುಂಬಳ ಕಾಯಿಯ ಈ ಆಕೃತಿ ನೋಡಿದ್ದೀರಾ?.  ನಿನ್ನೆ ನಮ್ಮ ಮಲ್ಲಿಕಾ ವೆಜ್ ಗೆ ಆಪ್ತ ಮುಂಬಾಳು ಕುಟ್ಟೀಚನ್ ತಂದದದ್ದು. ಎರೆಡೂ ಕಾಲು ಅಡಿ ಉದ್ದದ ಹದಿನಾರು ಕೆಜಿ ತೂಕದ ಬೂದುಗುಂಬಳ  ಸಾಮಾನ್ಯವಾಗಿ ದುಂಡಾಗಿರುತ್ತದೆ ಬೂದುಗುಂಬಳ  ಈ ಬೂದು ಕುಂಬಳ ಮಾತ್ರ ಸೋರೆಕಾಯಿ ರೀತಿ ಉದ್ದವಾಗಿದೆ.    ನನ್ನ ಅತ್ಯಾಪ್ತ ಮಲೆಯಾಳಿ ಮಿತ್ರ ಮುಂಬಾಳಿನ ಕುಟ್ಟಿಚನ್ ಗೆ ನಮ್ಮ ಸಂಸ್ಥೆಯಿಂದ ಪಾವತಿಸ ಬೇಕಾದ ಬಾಕಿ 2800 ರೂಪಾಯಿ ಕಳೆದ ಐದು ತಿಂಗಳಿಂದ ಸ್ವೀಕರಿಸಲು ಬಂದಿಲ್ಲ ಅಂದಿದ್ದರಿಂದ ನಾನೇ ಪೋನು ಮಾಡಿದೆ.    "ಹಣ ನಿಮ್ಮ ಹತ್ತಿರ ಇದ್ದರೆ ಬ್ಯಾಂಕಿಗಿಂತ ಗ್ಯಾರ೦ಟಿ, ಮರಗೆಣಸು,ಸುವರ್ಣ ಗೆಡ್ಡೆ ಎಲ್ಲಾ ಬೆಲೆ ಜಾಸ್ತಿ ಅದಕ್ಕೆ ಬರಲಿಲ್ಲ" ಅಂದಾಗ, ಇವತ್ತೇ ಬಂದು ಬಾಕಿ ತೆಗೆದು ಕೊಂಡು ಹೋಗಲು ವಿನಂತಿಸಿದ್ದೆ.    ಹಣ ಪಡೆಯಲು ಬಂದ ಕುಟ್ಟೀಚನ್ 150 ಕೇಜಿ ಬೂದು ಗುಂಬಳ, 15 ಕೇಜಿ ಚಿಕ್ಕು ಹಣ್ಣು, 2 ಕೇಜಿ ನೇಂದ್ರ ಬಾಳೆಹಣ್ಣು ತಂದಿದ್ದರು.   ಒ0ದು ವಿಶೇಷ ಅಂದರೆ ಬೂದ ಗುಂಬಳದ ಆಕಾರ, ಸಾಮಾನ್ಯವಾಗಿ  ಬೂದ ಗುಂಬಳ ಗುಂಡಾಗಿ ಇರುತ್ತದೆ ಆದರೆ ಕುಟ್ಟೀಚನ್ ತಂದ ಬೂದ ಗುಂಬಳದಲ್ಲಿ ಎರೆಡು ಬೂದ ಗುಂಬಳ ಮಾತ್ರ 28 ಇಂಚು ಉದ್ದ ಮತ್ತು 16 ಕೇಜಿ ತೂಗಿದೆ!.   ಈ ಅಪರೂಪದ ಆಕಾರದ ಬೂದಗುಂಬಳ ಮುಂಬಾಳಿನ ಶುಂಠಿ ವ್ಯಾಪಾರಿಗಳು ಮತ್ತು ಪ್ರಗತಿ

Blog number 1805. ಕಣ್ಣೂರಿನ ನಾಗರಾಜ್ ನನ್ನ ಆಪ್ತರು ಅವರ ಮನೆಯ ಭಕ್ತಿ ಪೂರ್ವಕ ಭೂಮಿ ಹುಣ್ಣಿಮೆ.

https://youtu.be/ZGP02mG3Pz0?feature=shared #ಭೂಮಿ_ಹುಣ್ಣಿಮೆ_ಭಕ್ತಿಪೂರ್ವಕವಾಗಿ_ಆಚರಿಸಿದ_ನಮ್ಮ_ಸಿಬ್ಬಂದಿ #ಕಣ್ಣೂರಿನ_ನಾಗರಾಜ್ #ಕಳೆದ_ಐದು_ವರ್ಷದಿಂದ_ನಮ್ಮ_ಸಂಸ್ಥೆಯ_ಮ್ಯಾನೆಜ್ಮೆಂಟ್_ಗ್ರೂಪಿನಲ್ಲಿದ್ದಾರೆ.      ನಾನು ಬಾಲ್ಯದಲ್ಲಿ ಬಿದನೂರು ನಗರದ ದೇವಗಂಗೆಯಲ್ಲಿ ನನ್ನ ತಾಯಿಯ ಅಕ್ಕ ನನ್ನ ದೊಡ್ಡಮ್ಮನ ಮನೆಯಲ್ಲಿ ಭೂಮಿ ಹುಣ್ಣಿಮೆ ಆಚರಣೆಯನ್ನು ನೋಡಿದ್ದೆ ನಂತರ ನಾನು ಭೂಮಿ ಹುಣ್ಣಿಮೆಯಲ್ಲಿ ಸ್ವತಃ ಭಾಗವಹಿಸಲಿಲ್ಲ ಮತ್ತು ನಮ್ಮ ಮನೆಯಲ್ಲಿ ಇದನ್ನು ಆಚರಿಸುವ ಪದ್ದತಿ ಇಲ್ಲ.   ಮಲೆನಾಡಿನ ದೀವರ ಭೂಮಿ ಹುಣ್ಣಿಮೆ ಆಚರಣೆ ಬಗ್ಗೆ ಸವಿಸ್ತಾರವಾಗಿ ಸಚಿತ್ರವಾಗಿ ಮೊದಲು ವರದಿ ಮಾಡಿದವರು ಸಾಗರದ ಪತ್ರಕರ್ತ ದೀಪಕ್ ಸಾಗರ್ ಈಗ ಪ್ರತಿ ವರ್ಷ ಮಲೆನಾಡಿನ ಭೂಮಿ ಹುಣ್ಣಿಮೆಯ ಆಚರಣೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ಹೆಚ್ಚು ಮಾಹಿತಿ ಲಭ್ಯವಿದೆ.     ನಮ್ಮ ಸಂಸ್ಥೆಯಲ್ಲಿ ಸಣ್ಣ ಕೆಲಸಕ್ಕೆ ಸೇರಿ ಈಗ ಇಡೀ ನಮ್ಮ ಸಂಸ್ಥೆಯ ಜವಾಬ್ದಾರಿಯುತ ಆಡಳಿತ ಮಂಡಳಿಯಲ್ಲಿ ಪ್ರಮುಖರಾಗಿ ಅತಿ ಹೆಚ್ಚು ಸಂಭಾವನೆ ಜೊತೆ ಜವಾಬ್ದಾರಿ ಕಾರ್ಯನಿರ್ವಹಿಸುತ್ತಿರುವ ಕಣ್ಣೂರಿನ ನಾಗರಾಜ್ ಅವರ ಮನೆಯ ಭೂಮಿ ಹುಣ್ಣಿಮೆ ಕಾರ್ಯಕ್ರಮದ ವಿಡಿಯೋ ಮತ್ತು ಪೋಟೋ ನೋಡಿದೆ.   ಪ್ರಾಮಾಣಿಕತೆ, ನಿಯತ್ತುಗಳಿಂದ ಕಣ್ಣೂರಿನ ನಾಗರಾಜ್ ನನ್ನ ಆತ್ಮೀಯ ವ್ಯಕ್ತಿ ಆಗಿದ್ದಾರೆ ಅಷ್ಟೇ ಅಲ್ಲ ಇಡೀ ಸಂಸ್ಥೆಯಲ್ಲಿ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ

Blog number 1804. ಮೈನೂರು ರಾಜ್ಯ ಎನ್ನುವ ಹೆಸರನ್ನು ಕರ್ನಾಟಕ ರಾಜ್ಯ ಎಂದು ನಾಮಕರಣವನ್ನು 1 ನವೆಂಬರ್ 1973ರಂದು ವಿಧಾನ ಸೌಧದ ಎದುರು ಅಧಿಕೃತವಾಗಿ ಅನಾವರಣ ಮಾಡಿದ ಕನ್ನಡ ರಾಜ್ಯೋತ್ಸವಕ್ಕೆ ಈಗ ಸುವರ್ಣ ಮಹೋತ್ಸವದ ಚಿನ್ನದ ಲೇಪನ.

#ಕನ್ನಡ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವ_ವರ್ಷ_ಪೂರ್ತಿ_ಆಚರಣೆ. #ಭೂಗೋಳಿಕವಾಗಿ_ರಾಜ್ಯದ_ಮಧ್ಯದಲ್ಲಿರುವ_ಶಿವಮೊಗ್ಗ_ಜಿಲ್ಲೆಗೆ_ವಿಶೇಷ_ಸಂಬಂದವಿದೆ #ಕರ್ನಾಟಕ_ರಾಜ್ಯ_ನಾಮಕರಣ_1973_ನವೆಂಬರ್_1_ರಂದು_ವಿಧಾನ_ಸೌದದ_ಎದುರು_ಅನಾವರಣ. #ಅನಾವರಣ_ಮಾಡಿದವರು_ಆಗಿನ_ಮುಖ್ಯಮಂತ್ರಿ_ದೇವರಾಜ_ಅರಸರು #ಜೊತೆಯಲ್ಲಿದ್ದ_ಮಂತ್ರಿಗಳು_ಶಿವಮೊಗ್ಗ_ಜಿಲ್ಲೆಯ_ಬದರಿನಾರಾಯಣ_ಅಯ್ಯಂಗಾರ್_ಮತ್ತು_ಬಸಲಿಂಗಪ್ಪನವರು. #ಕರ್ನಾಟಕ_ನಾಮಕರಣಕ್ಕೆ_ಕಾರಣವಾದ_ಮಂತ್ರಿ_ಖಾತೆ_ಹೊಂದಿದ್ದ_ಬದರಿನಾರಾಯಣ_ಅಯ್ಯಂಗಾರ್ #ನಮ್ಮ_ಊರು_ಆನಂದಪುರಂದವರು. #ಕನ್ನಡಿಗರು_ತಮ್ಮ_ಮಕ್ಕಳಿಗೆ_ಕನಿಷ್ಟ_ಕನ್ನಡ_ಓದಿ_ಮರೆಯಲು_ಕಲಿಸಲಿ #ಕನ್ನಡದ_ಬಗ್ಗೆ_ರೋಷಾವೇಷದ_ಉದ್ದುದ್ದ_ಬಾಷಣ_ಮಾಡುವ_ಕನ್ನಡದ_ #ಹೋರಾಟಗಾರರೆ_ನಿಮ್ಮ_ಮಕ್ಕಳಿಗೆ_ಕನಿಷ್ಟ_ಕನ್ನಡ_ಪ್ರಾಥಮಿಕ_ಶಾಲಾ_ಶಿಕ್ಷಣ_ಕೊಡಿಸಿದ್ದೀರಾ?  #ಹೀಗಾದರೆ_ಕನ್ನಡ_ಭಾಷೆ_ಉಳಿದೀತೆ?. #ಕನ್ನಡ_ರಾಜ್ಯೋತ್ಸವ_ಸುವರ್ಣ_ಮಹೋತ್ಸವ_2023_2024_ಸಕಾ೯ರಿ_ಕನ್ನಡ_ಪ್ರಾಥಮಿಕ_ಶಾಲಾ_ಶಿಕ್ಷಣದ_ಅಭಿಯಾನವಾಗಲಿ. #ಕನ್ನಡದಲ್ಲೇ_ಪ್ರಾಥಮಿಕ_ಶಿಕ್ಷಣ_ಕಡ್ಡಾಯ_ನೀಡಿದ_ಇಂಗ್ಲೀಷ್_ಮಾಧ್ಯಮ_ಶಾಲೆಗಳಿಗೆ #ಅವರಿಗೆ_ಸಹಕರಿಸುವ_ತಾಲ್ಲೂಕು_ಶಿಕ್ಷಣ_ಇಲಾಖೆಗಳಿಗೆ_ಎಚ್ಚರಿಸುವ_ಕೆಲಸ_ಕನ್ನಡ_ಸಂಘ_ಸಂಸ್ಥೆಗಳು_ಮಾಡಲಿ.       ನನ್ನ ಬಹಳಷ್ಟು ಗೆಳೆಯರು ಕನ್ನಡ ಅಭಿಮಾನಿಗಳು, ಕನ್ನಡ ಕಡ್ಡಾಯ ಅಂತೆಲ್ಲ ಹೋರಾಟ ಮಾಡುವ ವಿಚಾರವಂತರು, ಸಾಹಿತಿಗಳು, ಪತ್ರಕರ್ತರು, ಲೇಖಕರು,

Blog number 1803. ಕಳೆ ಗಿಡದಂತೆ ಪರಿಗಣಿಸಿದ ಕಾಕಿ ಹಣ್ಣಿನ ಗಿಡದಲ್ಲಿರುವ ಔಷದದ ಗುಣಗಳು ಹೆಚ್ಚು ಹೆಚ್ಚು ಜನರಿಗೆ ತಲುಪಲಿ.

https://youtube.com/shorts/J1S0ywS2JpM?feature=shared #ಬೀಜ_ಪ್ರಸಾರಣದ_ವಿಸ್ಮಯ_ಜಗತ್ತು. #ನನ್ನ_ಬೆಳಗಿನ_ವಾಕಿಂಗ್_ಪಾತಿನ_ಗಾರ್ಡನ್_ಪಾಟಲ್ಲಿ_ಕಾಕಿ_ಹಣ್ಣಿನ_ಗಿಡ #ನಾವ್ಯಾರು_ನಟ್ಟಿ_ಬೆಳೆಸಿದ್ದಲ್ಲ. #ಕಾಗೆ_ಅಥವ_ಇನ್ನಾವುದೋ_ಪಕ್ಷಿ_ಕಾಕಿ_ಹಣ್ಣು_ತಿಂದು_ಈ_ಪಾಟಿನಲ್ಲಿ_ವಿಸರ್ಜಿಸಿರಬೇಕು. #ರೊಟ್ಟಿ_ಜಾರಿ_ತುಪ್ಪದ_ಪಾತ್ರೆಗೆ_ಬಿದ್ದಂತೆ_ಔಷದಿಯುಕ್ತ_ಸಸ್ಯ_ನಮ್ಮ_ಗಾರ್ಡನ್_ಪಾಟಿನಲ್ಲಿ.   ಕಾಕಿ ಹಣ್ಣು - ಕಾಕ ಮಾಚಿ -ಕಾಗೆಸೊಪ್ಪಿನ ಹಣ್ಣು ಎಂದು ಕರೆಯುವ ಈ ಡಾರ್ಕ್ ನೈಟ್ ಶೇಡ್ ಎಂದು ಇಂಗ್ಲೀಷಿನಲ್ಲಿ ಕೆರೆಯುವ ಮತ್ತು 61 ದೇಶಗಳಲ್ಲಿ ಕಳೆ ಸಸ್ಯ ಎಂದು ಘೋಷಿಸಿರುವ ಕಾಕಿ ಹಣ್ಣು ಬೇಲಿ ಸಾಲಿನ ಕಪ್ಪು ದ್ರಾಕ್ಷಿಯ ಮಿನಿಯೇಚರನಂತ ಸಿಹಿ ಹುಳಿಯ ಹಣ್ಣು ಮಲೆನಾಡಿನ ಮಕ್ಕಳಿಗೆ ಹೆಚ್ಚು ಪರಿಚಿತ.    ಗುಲಗುಂಜಿ ಗಾತ್ರದ ಕಪ್ಪು ಹಣ್ಣಿನಲ್ಲಿ 40 ಬೀಜಗಳಿದ್ದರು ಇದು ಅದಾಗಿಯೇ ಮಣ್ಣಿನಲ್ಲಿ ಬಿದ್ದು ಗಿಡವಾಗುವುದಿಲ್ಲ, ಈ ಬೀಜ ಕಾಗೆ ಇನ್ನಿತರ ಪಕ್ಷಿ ಹೊಟ್ಟೆ ಸೇರಿ ಅಲ್ಲಿ ಇದರ ಬೀಜ ಜೀರ್ಣಾಂಗದ ಮೂಲಕ ಹಾದು ಅದು ಮೊಳಕೆ ಒಡೆಯುವ ಹಂತಕ್ಕೆ ಬೇಕಾದ ಉಷ್ಣಾಂಶ ಪಡೆದು ಹಕ್ಕಿಯ ವಿಸರ್ಜನೆ ಮಣ್ಣಿಗೆ ಸೇರಿ ಮುಂಗಾರಿನ ಮಳೆಯ ತೇವಾಂಶ ಪಡೆದು ಚಿಗುರಿ ಗಿಡವಾಗಿ ಅಕ್ಟೋಬರ್ - ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹಣ್ಣು ಬಿಡುವ ಸಸ್ಯ ಇದು ಇದೇ ರೀತಿ ಜೀರಿಗೆ ಮೆಣಸಿನ ಬೀಜ ಪ್ರಸಾರ ಕೂಡ ಆಗುತ್ತದೆ.     ತೆಂಗ

Blog number 1802. ಖ್ಯಾತ ಚಿತ್ರ ಕಲಾವಿದೆ ಶ್ರೀಮತಿ ಮಧು ಪ್ರೋದಾನ್ ನೀಡಿದ ಈ ಗಣಪತಿ ಚಿತ್ರ ನನ್ನ ಮನೆಯ ಬಾಗಿಲ ಮೇಲೆ ಅಲಂಕರಿಸಿದೆ.

#ಕಲೆಗೆ_ಬೆಲೆ_ಕಟ್ಟಲಾಗದು #ಉಡುಗೊರೆಗೆ? #ಉಡುಗೊರೆ_ಮತ್ತು_ಉಡುಗೊರೆ_ನೀಡಿದವರನ್ನು_ಸದಾ_ಸ್ಮರಿಸುತ್ತೇನೆ #ಈ_ಉಡುಗೊರೆ_ಮತ್ತು_ಉಡುಗೊರೆ_ನೀಡಿದವರನ್ನು_ಮರೆತು_ಬಿಟ್ಟಿದ್ದೆ. #ಖ್ಯಾತ_ಬೆಂಗಾಲಿ_ಕಲಾವಿದೆ_ಶ್ರೀಮತಿ_ಮದು_ಪ್ರೊದಾನ್_ಬರೆದು_ನೀಡಿದ_ಗಣಪತಿ. #ನನ್ನ_ಮನೆಯ_ಒಳ_ಬಾಗಿಲ_ಮೇಲೆ_ಇರಿಸಿದ್ದೇನೆ.   ನನಗೆ ಉಡುಗೊರೆ ಕೊಡುವವವರು ತುಂಬಾ ಕಡಿಮೆ, ನಾನು ಉಡುಗೊರೆ ಸ್ವೀಕರಿಸುವುದೂ ಇಲ್ಲ ಆದರೂ ಕೆಲವರು ನೀಡುವ ಪುಸ್ತಕ ಹಾಗೂ ಕಲಾಕೃತಿ ನಿರಾಕರಿಸಲು ಸಾಧ್ಯವಾಗದ ಕೆಲ ಪ್ರಸಂಗಳು ಇದೆ.   ಆ ಉಡುಗೊರೆಗಳನ್ನು ನನ್ನ ಕಛೇರಿಯಲ್ಲಿ, ಮನೆಯಲ್ಲಿ, ಮನೆಯ ಹೊಂ ಆಫೀಸಿನಲ್ಲಿ ಕಾಣುವಂತೆ ಇಡುತ್ತೇನೆ ಮತ್ತು ಉಡುಗೊರೆ ನೀಡಿದವರ ನೆನಪಿಸುವ ಲೇಖನ ಕೂಡ ಬರೆದು ಬ್ಲಾಗ್ ನಲ್ಲಿ ಸಂರಕ್ಷಿಸಿದ್ದೇನೆ.   ಇವತ್ತು ಮನೆಯಿಂದ ಹೊರ ಹೋಗುವಾಗ ಭಾಗಿಲ ಮೇಲೆ ಇರುವ ಗಣಪತಿಯ ಪೆನ್ಸಿಲ್ ಸ್ಕೆಚ್ ಆರ್ಟ್ ನೋಡಿದಾಗಲೇ ಇದನ್ನು ಮರೆತಿದ್ದೆ ಅಂತ ಗೊತ್ತಾಯಿತು.    ದಿನಾಂಕ 8 - ಮಾರ್ಚ್ - 2018 ರಂದು ಖ್ಯಾತ ಚಿತ್ರ ಕಲಾವಿದೆ ಶ್ರೀಮತಿ ಮಧು ಪ್ರೋದಾನ್ ನಮ್ಮಲ್ಲಿ ತಂಗಿದ್ದಾಗ ಅವರೇ ಬರೆದು ನನಗೆ ನೀಡಿದ ಈ ಪೆನ್ಸಿಲ್ ಸ್ಕೆಚ್ ಆರ್ಟ್ ನ ಗಣಪತಿ ಪೋಟೋ ಇದು.    ಪಶ್ಚಿಮ ಬಂಗಾಳದ ಈ ಕಲಾವಿದೆ ಈಗ ಹೈದ್ರಾಬಾದ್ ನಲ್ಲಿ ನೆಲೆಸಿದ್ದಾರೆ.

Blog number 1801. ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದ ತುಳಸಿ.

https://youtu.be/QvYnCsnTv1M?feature=shared #ನಾನು_ಧರಿಸುವ_ತುಳಸಿ_ಮಾಲೆ_ಬೆಂಗಳೂರಿನ_ಇಸ್ಕಾನಿಂದ_ಖರೀದಿಸಿದ್ದು. #ಇಪ್ಪತ್ತೈದು_ವರ್ಷದಿಂದ_ಧರಿಸುತ್ತಿದ್ದೇನೆ. #ತುಳಸಿ_ಮಾಲೆಯೇ_ನನ್ನ_ಬಂಗಾರ. #ನನ್ನಲ್ಲಿರುವ_ಚಿನ್ನ_ಗುಲಗುಂಜಿ_ಗಾತ್ರದ_ಪುಷ್ಯರಾಗದ_ಹರಳು_ಪೊಣಿಸಿದ_ಕೊಂಡಿ_ಮಾತ್ರ. #ವಿದೇಶದಲ್ಲಿ_ಅಡುಗೆಯಲ್ಲಿ_ತುಳಸಿ_ಬಳಸುತ್ತಾರೆ #ನನ್ನ_ದೀರ್ಘಕಾಲದ_ಗಂಟಲು_ಸೋಂಕು_ಗುಣವಾಗಿದ್ದು_ನಿತ್ಯ_ಬೆಳಿಗ್ಗೆ_ತುಳಸಿ_ಕುಡಿ_ಸೇವಿಸಿದ್ದರಿಂದ .          ತುಳಸಿ ಭಾರತ ಮೂಲದ ಔಷದಿ ಸಸ್ಯ ಇದರ ಸುವಾಸನೆ, ಔಷದಿಯುಕ್ತ ರುಚಿ ವಿಬಿನ್ನ , ಭಾರತದಲ್ಲಿ 5000 ವರ್ಷದಿಂದ ಬಳಕೆಯಲ್ಲಿದೆಯಂತೆ.   ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನ ನೀಡಿದೆ, ಪೂಜಾ ವಿಧಾನಗಳಲ್ಲಿ ತುಳಸಿ ಬೇಕೇ ಬೇಕು, ಪ್ರತಿಯೊಬ್ಬ ಹಿಂದು ಧರ್ಮಿಯರ ಮನೆಯಲ್ಲಿ ತುಳಸಿ ಗಿಡ ಇರದೇ ಇರದು.   ತುಳಸಿ ಮಾಲೆ ಧರಿಸಿದರೆ ಯಾವುದೇ ಸಾಂಕ್ರಮಿಕ ರೋಗ ಅಥವ ಅಕಾಲಿಕ ಮರಣ ಎದುರಾಗುವುದಿಲ್ಲ ಎಂಬ ಹಿಂದೂ ಧಾರ್ಮಿಕ ನಂಬಿಕೆ ಆಚರಣೆಯಲ್ಲಿದೆ.   ತುಳಸಿ ಮಾಲೆ ಜ್ವರ - ನೆಗಡಿ-ತಲೆನೋವು - ಚರ್ಮ ರೋಗ ನಿವಾರಣೆ ಮಾಡುವ ಆಯುರ್ವೇದ ಔಷದಿ ಶಕ್ತಿ ಹೊಂದಿದೆ.   108 ತುಳಿಸಿ ಮಣಿಯ ಹಾರ ನಾನು 1995 ರಿಂದ ಧರಿಸುತ್ತಿದ್ದೇನೆ ಮತ್ತು ಇದನ್ನು ನಾನು ಖರೀದಿಸುವುದು ಬೆಂಗಳೂರಿನ ಇಂಟರನ್ಯಾಷನಲ್ ಸೊಸೈಟಿ ಪಾರ್ ಕೃಷ್ಣ ಕಾನ್ಷಿಯಸ್ನೆಸ್ (ISKON) ಸಂಸ್ಥೆಯಲ್

Blog number 1800. ನನ್ನ ಹಿರಿಯ ಅತ್ಮೀಯ ಗೆಳೆಯರಾದ ಹಿನ್ನೀರಿನ ಬಂಗಾರದ ಮನುಷ್ಯ ತಿಮ್ಮಣ್ಣ ಇವರ ಪುತ್ರ ಶರಾವತಿ ಹಿನ್ನೀರಿನ ಸಾಹಿತಿ ಜಿ.ಟಿ. ಸತ್ಯನಾರಾಯಣ್ ತಮ್ಮ ತಂದೆಯ ಆತ್ಮಚರಿತ್ರೆ ಅಪ್ಪಯ್ಯ ಎಂಬ ಕೃತಿ ಬಿಡುಗಡೆ ಸಮಾರಂಭ ಏರ್ಪಡಿಸಿದ್ದಾರೆ (29-ಅಕ್ಟೋಬರ್ -2023 ಭಾನುವಾರ) ಈ ಕಾರ್ಯಕ್ರಮ ಸ್ಮರಣೀಯವಾಗಿಸುವ ಅವರ ಪ್ರಯತ್ನಕ್ಕೆ ಅಭಿನಂದನೆಗಳು

#ಹೀಗೂ_ಮಾಡಬಹುದು_ಪುಸ್ತಕ_ಬಿಡುಗಡೆ_ಸ್ಮರಣೀಯವಾಗಿ #ಕರೂರಿನ_ಶ್ರಮಿಕ_ತಿಮ್ಮಣ್ಣ_ದಂಪತಿಗಳ_58ನೆ_ದಾಂಪತ್ಯ_ಜೀವನದ_ಹೊಸ್ತಿಲಲ್ಲಿ #ಶರಾವತಿ_ಹಿನ್ನೀರಿನ_ಸಾಹಿತಿ_ಜಿ_ಟಿ_ಸತ್ಯನಾರಾಯಣರ_ಎರೆಡು_ಕೃತಿ_ಬಿಡುಗಡೆ. #ಇವರ_ಅಪ್ಪಯ್ಯರಿಗೆ_80_ವರ್ಷ_ಅಮ್ಮನಿಗೆ_75.    ಜಿ.ಟಿ. ಸತ್ಯನಾರಾಯಣ್ ಸಾಗರ ತಾಲೂಕಿನ ತುಮರಿ ಭಾಗದಲ್ಲಿ ಪ್ರಜಾವಾಣಿ ವರದಿಗಾರರಾಗಿದ್ದರು, ಪದವಿ ವ್ಯಾಸಂಗ ಬಿ.ಆರ್.ಪಿಯ ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಡುವಾಗಲೇ ಮೊದಲ ಕೃತಿ ಪ್ರಕಟಿಸಿದ್ದರು ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡಿದರು ನಂತರ ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅನೇಕ ಜನಪರ ಕೆಲಸ ಮಾಡಿದ್ದಾರೆ.    ಇವರ ಕ್ರಿಯಾಶೀಲತೆ ನಿರಂತರ... ನೋ ನೆಟ್ವರ್ಕ್ ನೋ ವೋಟ್ ಅಭಿಯಾನ, ಅರಣ್ಯ ಭೂಮಿ ಒಳಗಿನ ಕೃಷಿಕರ ಮೂಲಭೂತ ಸೌಲಭ್ಯಕ್ಕಾಗಿ ಹೋರಾಟ, ಶರಾವತಿ ಹಿನ್ನೀರಿನ ಅಸಹಾಯಕರ ಸಹಾಯಕ್ಕಾಗಿ ಕ್ರೌಡಿಂಗ್ ಪಂಡ್ ಅಭಿಯಾನ ಹೀಗೆ ನೂರಾರು.    ಇವರ ಪೂರ್ವಿಕರು ಈ ಭಾಗದ ಶ್ರೀಮಂತ ಗುತ್ತಿಗೆದಾರರಾಗಿ ಆಸ್ತಿವಂತರಾದವರು ನಂತರ ಮುಳುಗಡೆ ಇತ್ಯಾದಿ ಸಮಸ್ಯೆಯಿಂದ ಎಲ್ಲಾ ಕಳೆದುಕೊಂಡವರು.     ಜಿ.ಟಿ. ಸತ್ಯನಾರಾಯಣರ ತಾಯಿಯ ಸಹೋದರರಾದ ಬಾಬಣ್ಣ, ಅಂಗಡಿ ಯಂಕಪ್ಪ ನನಗೆ ಹೆಚ್ಚು ಆತ್ಮೀಯರು ನಾನು 1999ರಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದಾಗ ತನು-ಮನ-ಧನ ಸಹಾಯದ ಜೊತೆ ನನ್ನ ಜೊತೆ ಇದ್ದವರು.    ಇ

Blog number 1799. ನಾವು ಮಾಡುವ ಕೆಲಸ ನಾವು ಪ್ರೀತಿಸಿದರೆ ಆಯಾಸ ಆಗುವುದಿಲ್ಲ... ಹುಸಿ ಅಂತಸ್ತು ಜೀವನಕ್ಕೆ ಬೇಕಾ?...

#ನಮ್ಮ_ಕೆಲಸ_ಉದ್ಯೋಗಕ್ಕೆ_ಬೇರೆಯವರ_ಭಯ_ಏಕೆ?  #ಕುಟುಂಬದ_ಉದ್ಯೋಗ_ಮುಂದುವರಿಸಲು_ಅಂಜಿಕೆ_ಏಕೆ? #ನಾವು_ಮಾಡುವ_ಕೆಲಸ_ನಾವು_ಪ್ರೀತಿಸಿದರೆ_ಆಯಾಸ_ಇರುವುದಿಲ್ಲ. #ಎಲ್ಲರೂ_ಆಫೀಸರ್_ಆಗಲು_ಸಾಧ್ಯವಿಲ್ಲ         ಈಗಲೂ ಈ ಗಿಲ್ಟ್ ಯುವ ಜನರಲ್ಲಿದೆ, ಕಾರಣ ತಾನು ಮಾಡುವ ಕೆಲಸ ಕನಿಷ್ಟ ಮತ್ತು ಅವಮಾನಕರ ಎಂಬುದು,               ಸ್ವತಃ ತಾನು ಮಾಡುವ ಕೆಲಸ ಪ್ರೀತಿಸದೇ ಇರುವುದು ಮತ್ತು ತಾನು ಮಾಡುವ ಕೆಲಸ ಕನಿಷ್ಟ ಎಂದು ತೀಮಾ೯ನ ಮಾಡುವುದು.      ಆ ಕೆಲಸ ಮಾಡುವಾಗ ಪರಿಚಯಸ್ಥರು, ಗೆಳೆಯರು ನೋಡಬಾರದೆಂಬ ಮನಸ್ಸಿನ ಆತಂಕ,ಇದು ನಮ್ಮ ಮನೆಯಲ್ಲಿ ಬಾಲ್ಯದಲ್ಲಿ ತಂದೆ ತಾಯಿಗಳು ಮಕ್ಕಳಿಗೆ ನಮ್ಮ ಆದಾಯ ಸಾಲಗಳ ಪರಿಚಯ ಮಾಡದೆ ತಮ್ಮ ಕಷ್ಟಗಳನ್ನು ಮಕ್ಕಳಿಂದ ಮರೆ ಮಾಚುವುದು ಮತ್ತು ಯಾವ ಹೊಟ್ಟೆಪಾಡಿನ ಉದ್ಯೋಗ ಮೇಲೂ ಇಲ್ಲ ಕೀಳೂ ಇಲ್ಲ ಎಂಬುದು ಪ್ರಾಥಮಿಕ ಶಿಕ್ಷಣದಲ್ಲಿ ಸರಿಯಾಗಿ ನಮ್ಮ ತಲೆಗೆ ಹೊಕ್ಕುವಂತ ಪಾಠಗಳಲ್ಲಿ ಸೇರದಿರುವುದು.   ಗಾಂದೀಜಿ ಹೇಳಿರುವ "ವಕೀಲನಿಗಿರುವ ವೃತ್ತಿ ಗೌರವ ಮತ್ತು ಕ್ಷೌರಿಕನಿಗಿರುವ ವೃತ್ತಿ ಗೌರವ ಒಂದೇ" ಅನ್ನುವುದು ನಮಗೆ ಅರ್ಥವಾಗುವಾಗ ನಮಗೆ ಅದ೯ ಆಯಸ್ಸು ಆಗಿರುತ್ತದೆ.    ಈಗಿನ ಯುವ ಜನರು ತಮ್ಮ ಕುಟುಂಬದ ಉದ್ಯೋಗ ಮುಂದುವರಿಸಿ ಅದರಲ್ಲಿ ಅವರ ಜ್ಞಾನದಿಂದ ಹೆಚ್ಚು ಆದೂನಿಕರಣಗೊಳಿಸಿ ಹೆಚ್ಚು ಲಾಭ ಮಾಡುವ ಅವಕಾಶ ಇದ್ದರೂ ಅನೇಕ ಕುಟುಂಬಗಳಲ್ಲಿ ಯಾವ ಕಾರಣಕ್ಕೂ ಅಪ್ಪ ಮಾಡುವ ಉದ್ಯೋಗ ಬೇಡವೇ ಬ

Blog number 1798.ಆನಂದಪುರಂನ ಕಠಾರೆ ಕುಟುಂಬದ ಅವಳಿ ಸಹೋದರರಾದ ರಾಮ ಮತ್ತು ಲಕ್ಷ್ಮಣ ಕಠಾರೆ ಕುಟುಂಬ ಯಡೇಹಳ್ಳಿಯ ಶ್ರೀವರ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ನೂತನ ಪಲ್ಲಕ್ಕಿ ಸಮರ್ಪಿಸಿದ್ದಾರೆ.

https://youtu.be/ol2FB95YtSE?feature=shared #ನಮ್ಮ_ಊರಿನ_ವರಸಿದ್ದಿವಿನಾಯಕ_ದೇವರಿಗೆ_ಪಲ್ಲಕ್ಕಿ_ಕೊಡುಗೆ. #ಅವಳಿ_ಜವಳಿ_ಸಹೋದರರ_ಕುಟುಂಬದಿಂದ #ಅವಳಿ_ಸಹೋದರರಾದ_ರಾಮ_ಲಕ್ಷ್ಮಣರು_ಟೈಲರ್_ಗೋವಿಂದಪ್ಪರ_ಮಕ್ಕಳು #ಇವತ್ತು_ದಸರಾ_ಪಲ್ಲಕ್ಕಿ_ಉತ್ಸವ_ಈ_ಕುಟುಂಬದ_ಕೊಡುಗೆಯಾದ_ನೂತನ_ಪಲ್ಲಕ್ಕಿಯಲ್ಲಿ_ನೆರವೇರಿತು.     ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನ ಪ್ರಾರಂಭದ ಪ್ರತಿಷ್ಟಾಪನೆಯಿಂದ ಇವತ್ತಿನವರೆಗೆ 17 ವರ್ಷಗಳಿಂದ ನಿರಂತರ ವರಸಿದ್ದಿ ವಿನಾಯಕ ದೇವರ ಸೇವೆ ಭಕ್ತಿ ಪೂರ್ವಕವಾಗಿ ಮಾಡುವವರಲ್ಲಿ ಟೈಲರ್ ರಾಮಣ್ಣ ಮತ್ತು ಅವರ ಪುತ್ರ ಪತ್ರಕರ್ತ ಪವನಾ ಯಾವುತ್ತೂ ಮುಂದಿರುತ್ತಾರೆ ಮತ್ತು ಯಾವತ್ತೂ ತಮ್ಮ ಹೆಸರು ಅಥವ ಪ್ರಚಾರ ಬಯಸದೇ ಎಲೆಮರೆಯ ಕಾಯಿಯಂತೆ ದೇವರ ಸೇವೆ ಮಾಡುತ್ತಾರೆ.   ಟೈಲರ್ ರಾಮಣ್ಣರ ಪೂರ್ತಿ ಹೆಸರು ರಾಮ ಕಠಾರೆ ಇವರ ಅವಳಿ ಸಹೋದರ ಲಕ್ಷ್ಮಣ ಕಠಾರೆ, ಆ ಕಾಲದ ಟೈಲರ್ ಗೋವಿಂದಪ್ಪನವರಿಗೆ  ಈ ಅವಳಿ ಪುತ್ರರು ಸೇರಿ ಒಟ್ಟು ಆರು ಗಂಡು ಮಕ್ಕಳು.    ಇವರ ದೊಡ್ಡ ಮಗ ನಾರಾಯಣಪ್ಪ, ರಾಮಣ್ಣ ಮತ್ತು ಚಿಕ್ಕ ಮಗ ಅಶೋಕ (ಸಿಮೆಂಟ್ ವ್ಯಾಪಾರಿ) ಆನಂದಪುರಂನಲ್ಲೇ ನೆಲೆಸಿದ್ದಾರೆ, ಅವಳಿ ಜವಳಿ ಪುತ್ರರಲ್ಲಿ ರಾಮಣ್ಣ ಇಲ್ಲಿ ಉಳಿದರೆ ಲಕ್ಷ್ಮಣ ಮುಂಬೈಯಲ್ಲಿ ನೆಲೆಸಿದ್ದರು, ಕೆಲ ವರ್ಷಗಳ ಹಿಂದೆ (17-ಡಿಸೆಂಬರ್ 2017) ಬಂದಾಗ ಇವರಿಬ್ಬರೂ ಒಟ್ಟಿಗೆ ನನ್ನ ಬೇಟಿಗೆ ಬಂದಾಗ ತೆಗೆದ ಪೋಟ