Skip to main content

Blog number 1797. ಮುಂಬೈನ ಪ್ರತಿಷ್ಠಿತ ಕನ್ನಡ ಕಲಾ ಕೇಂದ್ರದ ಸತತ ಎರಡನೆ ಅವದಿ ಅಧ್ಯಕ್ಷರಾಗಿ ಯಶಸ್ವಿಯಾಗಿ 64ನೇ ಕನ್ನಡ ನಾಟಕೋತ್ಸವ ನಡೆಸುತ್ತಿರುವ ಟಿ.ಆರ್.ಮದುಸೂದನ್ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದವರೆಂಬುದೇ ನಮಗೆಲ್ಲ ಹೆಮ್ಮೆಯ ವಿಷಯ.

#ಮುಂಬೈನ_ಪ್ರತಿಷ್ಟಿತ_ಕನ್ನಡ_ಕಲಾ_ಕೇಂದ್ರದ_ಅಧ್ಯಕ್ಷರು_ಸಾಗರದ_ಟಿಆರ್_ಮದುಸೂದನ್

#ಕನ್ನಡ_ಕಲಾ_ಕೇಂದ್ರ_ಅಸ್ತಿತ್ವಕ್ಕೆ_ಬಂದಿದ್ದು_1954ರಲ್ಲಿ

#ಮೊದಲ_ನಾಟಕೋತ್ಸವ_ಪ್ರಾರಂಭ_ಆಗಿದ್ದು_1964ರಲ್ಲಿ

#ಈ_ವರ್ಷದ_ನಾಟಕೋತ್ಸವ_64ನೇ_ವರ್ಷದ್ದು.

#ಈ_ವರ್ಷದ_ಕರ್ನಾಟಕ_ಸುವರ್ಣ_ಮಹೋತ್ಸವದಲ್ಲಿ_ಮುಂಬೈನ_ಕನ್ನಡ_ಕಲಾ_ಕೇಂದ್ರಕ್ಕೆ_ಮತ್ತು_ಅಧ್ಯಕ್ಷ_ಮದುಸೂದನರಿಗೆ
#ರಾಜ್ಯೋತ್ಸವ_ಪ್ರಶಸ್ತಿ_ರಾಜ್ಯ_ಸರ್ಕಾರ_ಘೋಷಿಸಬೇಕು.
   ಮುಂಬೈ ಕನ್ನಡ ಕಲಾ ಕೇಂದ್ರದ ಬಗ್ಗೆ ವಿಸ್ತಾರವಾಗಿ ಇರುವ ಮಾಹಿತಿ ದಯಾನಂದ ಸಾಲ್ಯಾನರು #ವಾರ್ತಾಭಾರತಿ ದಿನಪತ್ರಿಕೆಯ ಮುಂಬೈ ಸ್ವಗತ ಕಾಲಂನಲ್ಲಿದೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಬಹುದು 
https://www.varthabharati.in/article/2021_06_25/296195.
   ಇಂತಹ ಪ್ರತಿಷ್ಟಿತ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾಗಿ ಎರಡನೆ ಅವಧಿಯ ಆಡಳಿತ ನಡೆಸುತ್ತಿರುವ ಟಿ.ಆರ್. ಮದುಸೂದನ್ ಇವರ ಇನ್ಷಿಯಲ್ ಟಿ ಆರ್ ಅಂದರೆ ತೀರ್ಥಹಳ್ಳಿ ರಾಮಕೃಷ್ಣ ಇವರ ತಂದೆ ಇವರೂ ಕಲಾವಿದರು ಸಾಗರದ ಮುನ್ಸಿಪಲ್ ಸಂಸ್ಥೆ ಉದ್ಯೋಗಿ ಆಗಿದ್ದರೂ ಪ್ರತಿ ವರ್ಷ ನವರಾತ್ರಿಯಲ್ಲಿ ತೀರ್ಥಹಳ್ಳಿಯಲ್ಲಿ ಹುಲಿ ವೇಶ ಸೇವೆ ತಪ್ಪಿಸಿದವರಲ್ಲ, ಸಾಗರದ ಮುನ್ಸಿಪಲ್ ಕಛೇರಿಯ ನೌಕರರಿಗೆ ಸದಾ ಸಹಕಾರ ಸಹಾಯ ನೀಡಿ ಜನಪ್ರಿಯರಾಗಿದ್ದರು.
   ಇವರ ಪುತ್ರ ಟಿ.ಆರ್. ಮದುಸೂದನ್ ಸವಿಸಿದ ಜೀವನದ ಹಾದಿ ಕಲ್ಲು ಮುಳ್ಳಿನದ್ದು, ಭದ್ರಾವತಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮ ಉನ್ನತ ಶ್ರೇಣಿಯಲ್ಲಿ ಮುಗಿಸಿ ಪ್ರತಿಷ್ಟಿತ ಮಣಿಪಾಲ್ ಸಂಸ್ಥೆಯಲ್ಲಿ ಉದ್ಯೋಗ ಮಾಡಿ ನಂತರ ಮುಂಬೈ ಟಾಟಾ ಕಂಪೆನಿಯಲ್ಲಿ ಉದ್ಯೋಗ ಮಾಡಿ ಈಗ ಸ್ವತಂತ್ರವಾಗಿ ಇದರದ್ದೇ ಖಾಸಾಗಿ ಬಿಲ್ಡರ್ ಸಂಸ್ಥೆ ಸ್ಥಾಪಿಸಿ ಮುಂಬೈನಲ್ಲಿ ಪ್ರಸಿಧ್ಧಿ ಪಡೆದಿದ್ದಾರೆ.
  ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಮದುಸೂದನ್ ಬಂಗಾರದ ಮನುಷ್ಯ ಚಲನಚಿತ್ರದ ಡಾಕ್ಟರ್ ರಾಜ್ ಕುಮಾರ್ ಇದ್ದಂತೆ ಅವರ ಜೀವನ.
 ಸಾಗರದ ಉಡುಪಿ ಮೆಡಿಕಲ್ಸ್ ನ ಚಂದ್ರು ಅವರ ತಂದೆ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣ ಮತ್ತು ಮದುಸೂದನರ ತಂದೆ ರಾಮಕೃಷ್ಣಣ್ಣ ಕಸಿನ್ ಬ್ರದರ್ಸ್.
   ಇವರು ಯಶಸ್ವಿಯಾಗಿ ಒಂದು ಅವಧಿಯ ಮುಂಬೈನ ಪ್ರತಿಷ್ಟಿತ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾಗಿ ಈಗ ಎರಡನೆ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ ಅಂದರೆ ಅರ್ಥವಾದೀತು ಅವರ ಸಾಧನೆ.
  1954 ರಲ್ಲಿ ಅಸ್ತಿತ್ವಕ್ಕೆ ಬಂದ ಮುಂಬೈ ಕನ್ನಡ ಕಲಾ ಕೇಂದ್ರ ಭಾಷಾವಾರು ಪ್ರಾಂತ್ಯ ವಿಂಗಡನೆ ಕಾಲದಲ್ಲಿ ಮುಂಬೈ ಸರ್ಕಾರ ಈ ಕನ್ನಡ ಕಲಾ ಕೇಂದ್ರದಲ್ಲಿ ಕನ್ನಡ ನಾಟಕ ಪ್ರದರ್ಶನ - ನಾಟಕೋತ್ಸವ ನಿಷೇದ ಮಾಡಿತ್ತು.
  1964 ರಲ್ಲಿ ಈ ಸಂಘಟನೆ ಸರ್ಕಾರದ ನೀತಿಗೆ ಸೆಡ್ಡು ಹೊಡೆದು ಮೊದಲ ನಾಟಕೋತ್ಸವ 12 - ಡಿಸೆಂಬರ್ -1964 ರಿಂದ 26 - ಡಿಸೆಂಬರ್ -1964 ರವರೆಗೆ ಯಶಸ್ವಿಯಾಗಿ ನಡೆಸಿತು, ಈ ಸಂಘಟನೆ ಅತಿರಥ ಮಹಾರಥರಾದ ಕನ್ನಡಿಗರು ಮುನ್ನಡೆಸಿದ್ದಾರೆ ಇಲ್ಲಿ ಜಾತಿ ಅಂತಸ್ತುಗಳಿಲ್ಲದೆ ನಮ್ಮ ಮಾತೃ ಭಾಷೆ ಕನ್ನಡದಿಂದ ಒಂದಾದ ಸಂಸ್ಥೆ ಆಗಿದೆ.
 ಈ ವರ್ಷದ ನಾಟಕೋತ್ಸವ 64 ನೆಯದ್ದು ಇದರ ಅಧ್ಯಕ್ಷರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಪಟ್ಟಣದ ಟಿ.ಆರ್. ಮದುಸೂದನ್ ಎಂಬುದು ಹೆಮ್ಮೆಯ ಸಂಗತಿ ಆಗಿದೆ.
  ಈ ವರ್ಷ ಕರ್ನಾಟಕ ನಾಮಕರಣಕ್ಕೆ 50 ನೇ ವಾರ್ಷಿಕೋತ್ಸವ, 1972 ರಲ್ಲಿ ಕರ್ನಾಟಕ ನಾಮಕರಣದ ಫಲಕ ವಿಧಾನ ಸೌದದ ಎದರು ಅನಾವರಣ ಮಾಡಿದವರು ಆಗಿನ ಮುಖ್ಯಮಂತ್ರಿ ದೇವರಾಜ ಅರಸರು ಮತ್ತು ನಮ್ಮ ಆನಂದಪುರ೦ನವರೇ ಆದ ಆಗಿನ ವಿದ್ಯಾಮಂತ್ರಿ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್.
   ಸುವರ್ಣ ಕರ್ನಾಟಕದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಪ್ರತಿಷ್ಠಿತ ಕನ್ನಡ ಕಲಾ ಕೇಂದ್ರದ ಸಾಧನೆಗಾಗಿ ಈ ಕಲಾ ಕೇಂದ್ರಕ್ಕೆ ಮತ್ತು ಇದರ ಎರಡು ಅವಧಿಗೆ ಅಧ್ಯಕ್ಷರಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಪಟ್ಟಣದ ಪ್ರತಿಭಾವಂತ ಕನ್ನಡಿನ ಟಿ.ಆರ್.ಮದುಸೂದನ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ವಿನಂತಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ