Skip to main content

#Blog number 1773. ನನ್ನ ಆಫೀಸು ಪ್ರವೇಶಿಸಿ "ನಾನ್ಯಾರು" ಅಂದಾಗ ನೀವು ಶಾಂತಮ್ಮರ ಮಗ ವಸಂತಣ್ಣ ನಿಮ್ಮ ತಂದೆ ಪಾರೆಸ್ಟರ್ ಸುಶೀಲಪ್ಪನವರು, ನಿಮ್ಮ ತಂಗಿ ವಿಮಲಕ್ಕ ಮತ್ತು ಪ್ರೇಮಕ್ಕ ಅಂದಾಗ ಅವರಿಗೇ ಆಶ್ಚರ್ಯ ಕಾರಣ 56 ವರ್ಷದ ಹಿಂದೆ ಉದ್ಯೋಗಕ್ಕಾಗಿ ಊರು ತೊರೆದವರನ್ನು ಇದೇ ಮೊದಲ ಬಾರಿಗೆ ನೋಡಿದ್ದು.

#ನಿನ್ನೆಯ_ಘಟನೆ_ಮರೆಯಲಾರದ್ದು.

#ಅವರು_ನಮ್ಮ_ಊರು_ಬಿಟ್ಟಿದ್ದು_1967 .

#ನಾನು_ಹುಟ್ಟಿದ್ದು_1965.

#ನಿನ್ನೆ_ನನ್ನ_ಆಫೀಸಿಗೆ_ಬಂದು_ನಾನ್ಯಾರು_ಗೊತ್ತಾ_ಅಂದಾಗ_ನೀವು_ವಸಂತಣ್ಣ_ಅಂದಾಗ

#ನನ್ನ_ಮೆದುಳಿನ_ನೆನಪಿನ_ಕೋಶಗಳ_ಸಾಮರ್ಥ್ಯ_ನನಗೆ_ಅಚ್ಚರಿ.
     ನನಗೆ ನನ್ನ ನೆನಪಿನ ಶಕ್ತಿ ಬಗ್ಗೆ ಅಂತಹ ನಿರ್ಧಿಷ್ಟ ಸಾಮರ್ಥ್ಯ ಗೊತ್ತಿಲ್ಲ ಮತ್ತು ಕೆಲ ಸಂದರ್ಭದಲ್ಲಿ ಅದು ಬೆಳಕಿಗೆ ಬಂದಾಗ ನನಗೆ ಆಶ್ಚರ್ಯ.
  ನಿನ್ನೆ ಬೆಳಿಗ್ಗೆ ನಮ್ಮ ಆನಂದಪುರ೦ನ ನಾಡ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ತಾವರೇಹಳ್ಳಿ ಗೋವಿಂದ ಮೂರ್ತಿ ಬಂದು ಈ ಹಿಂದೆ ಆನಂದಪುರಂನ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದ ಈಗ ನಿವೃತ್ತರಾದ ಚೌಡಪ್ಪರ ಮಗ ಬಂದಿದ್ದಾರೆ ನಿಮ್ಮನ್ನು ಬೇಟಿ ಆಗಲು ಅಂದಾಗ 5-6 ಜನ ನನ್ನ ಅಪೀಸ್ ಒಳಗೆ ಬಂದರು.
   ಅವರಲ್ಲಿ ಒಬ್ಬರು "ನಾನ್ಯಾರು ಗೊತ್ತಾಯಿತಾ?" ಅಂದರು ತಕ್ಷಣ ಬನ್ನಿ ಬನ್ನಿ ಅಂತ ಅನ್ನುತ್ತಾ ಅವರ ಪ್ರಶ್ನೆಗೆ ಉತ್ತರಿಸಲು ನನ್ನ ಮೆದುಳಿನ ನೆನಪಿನ ಕೋಶಗಳು ನೆನಪನ್ನು   ಹೊರಹಾಕಿತು.. "ವಸಂತಣ್ಣ.. ಶಾಂತಮ್ಮರ ಮಗ... ನಿಮ್ಮ ತಂದೆ ಪಾರೆಸ್ಟರ್ ಸುಶೀಲಪ್ಪ ಅವರ ಹ್ಯಾಟ್ ಬ್ರಿಟಿಷ ಕಾಲದ್ದು ... ನಿಮ್ಮ ತಂಗಿಯಂದಿರು ವಿಮಲಕ್ಕ ಮತ್ತು ಪ್ರೇಮಕ್ಕ" ಅಂದಾಗ ಅವರಿಗೆ ಒಂದು ಕ್ಷಣ ಶಾಕ್ ಆಯಿತು.
   ಅವರು ನಮ್ಮ ಯಡೇಹಳ್ಳಿಯ ಮೂಲ ನಿವಾಸಿಗಳು, ಇವರ ತಂದೆ ಬ್ರಿಟೀಶ್ ಕಾಲದಲ್ಲಿ ನಮ್ಮ ಊರಿನ ಫಾರೆಸ್ಟರ್ ಸ್ವಾತಂತ್ರ್ಯ ನಂತರವೂ ಇವರ ಉದ್ಯೋಗ ಮುಂದುವರೆಯಿತು.
  ಇವರ ಮನೆ ಯಡೇಹಳ್ಳಿಯ ಸಂತ ಜೂದರ ಚರ್ಚ ಎದುರು ಇತ್ತು ಆಗ ನಮ್ಮ ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿ ಮೊದಲಿಗೆ ನಮ್ಮ ಮನೆ ನಂತರದ್ದು ಕುಲಿಮೆ ರಾಮಣ್ಣ ಆಚಾರದ್ದು ನಂತರದ್ದು ಪಾಂಡು ಪ್ರಭು ಅವರ ತಂದೆಯ ಮನೆ ನಂತರದ್ದು ಪಾರೆಸ್ಟರ್ ಸುಶೀಲಪ್ಪರ ಮನೆ ನಂತರ ರೈಲ್ವೇ ರಸ್ತೆ ನಂತರ ಬ್ರಿಟಿಷ್ ಬಂಗ್ಲೆ ನಂತರ ಬಟ್ಟಿಮಲ್ಲಪ್ಪದ ತನಕ ರಸ್ತೆಯ ಇಕ್ಕೆಲ 10 ಕಿ.ಮಿ.ದಟ್ಟಾರಣ್ಯ ಆಗಿತ್ತು.
 ಅಲ್ಲಿ ಆಗಿನ ಕಾಲದಲ್ಲಿ ಇವರ ಮನೆ ಮಾಡರ್ನ್ ಅನ್ನಿಸಿತ್ತು ಯಾಕೆಂದರೆ ಅವರ ಆಗಿನ ಮನೆ ಆನಂದಪುರಂಗೆ ಸೂಪರ್ ಶೈಲಿ.
  ಒಂದು ಭಾಗ ಪಾರೆಸ್ಟರ್ ಸುಶೀಲಪ್ಪರ ವಾಸಕ್ಕೆ ಇನ್ನೊಂದು ಭಾಗ ಬಾಡಿಗೆ ಮನೆ ಮದ್ಯದಲ್ಲಿ ಒಂದು ಅಂಗಡಿ ಮಳಿಗೆ ಅದರಲ್ಲಿ ಆ ಕಾಲದ ಪ್ರತಿಷ್ಟಿತ ಬ್ರಾಂಡ್ ನ ಚಾಕೋಲೆಟ್ ಬಿಸ್ಕಿಟ್ ಗಳು ಸ್ವಚ್ಚ ಗಾಜಿನ ಭರಣಿಗಳಲ್ಲಿ ಇರುತ್ತಿತ್ತು.
 ಅಂಗಡಿ ಎದರಲ್ಲಿ ಚೆಸ್ ಮತ್ತು ಕೇರಂ ಬೋರ್ಡ್ ಇರುತ್ತಿತ್ತು.
  ಸುಶೀಲಪ್ಪನವರು ಪ್ರೋಟೆಸ್ಟಂಟ್ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವರು ಅವರ ಪತ್ನಿ ಶಾಂತಮ್ಮ ನನ್ನ ತಾಯಿಯ ಆತ್ಮೀಯ ಗೆಳತಿ.
   ವಸಂತ್ ಆರೋಗ್ಯ ಇಲಾಖೆ ಉದ್ಯೋಗಕ್ಕಾಗಿ 1967ರಲ್ಲಿ ಊರು ಬಿಟ್ಟರು, ಇವರ ತಂಗಿ ವಿಮಲಾ ಸ್ವಾಪ್ ನರ್ಸ ಆಗಿ ಉದ್ಯೋಗಕ್ಕೆ ಹೋದರು, ಇವರ ಸಣ್ಣ ತಂಗಿ ಪ್ರೇಮ ಶಿಕ್ಷಕಿ ಆಗಿ ಶಿಕಾರಿಪುರದಲ್ಲಿ ನೆಲೆಸಿದರು.
  ವಸಂತರಿಗೆ ಈಗ 78ರ ವಯೋಮಾನ ನನಗೆ 58.
   ಇವರು ನನ್ನ ಆತ್ಮೀಯರಾಗಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಚೌಡಪ್ಪರ ಸಂಬಂದಿಗಳೂ ಆಗಿದ್ದಾರೆ.
   ಚೌಡಪ್ಪರ ಸಣ್ಣ ಮಗ, ಪ್ರೇಮಾರ ಕಿರಿಯ ಮಗಳು ವೈದ್ಯರಾಗಿ ಬೆಳೆಗಾ೦ನಲ್ಲಿದ್ದಾರೆ ಅವರ ಪತಿ ಜೊತೆ ವಸಂತ್ ಬಂದಿದ್ದರು.
  55 ವರ್ಷದ ಹಿಂದಿನ ನೆನಪಿನ ಸಂಬಂದ ಆ ಕ್ಷಣದಲ್ಲಿ ನೆನಪಾಗಿದ್ದು ಹೇಗೆ? ನನಗೆ ಆಶ್ವರ್ಯ, ನಾನು ನನ್ನ ಬ್ಲಾಗಿನಲ್ಲಿ ಈಗ ದಾಖಲಿಸಿರುವ 1770 ಲೇಖನಗಳು ಇದೇ ರೀತಿ ಇದ್ದಕ್ಕಿದ್ದಂತೆ ನೆನಪಾದ ನೆನಪುಗಳು, ನನ್ನ ಗುರಿಯಾದ 2000 ಲೇಖನಗಳಿಗೆ 230 ಲೇಖನ ಬಾಕಿ ಇದೆ.
   ಮನುಷ್ಯನ ಮೆದುಳು ಏನೇನಲ್ಲ ನೆನಪನ್ನು ಶೇಖರಿಸಿಕೊಂಡಿರುತ್ತೋ ದೇವರೇ ಬಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...