#Blog number 3395. ರಾಮಚಂದ್ರಾಪುರ ಮಠದ ಈಗಿನ ಫೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿಗಳ ಶಾಲಾ TC ಮತ್ತು ಜಾತಕ ಬೇರೆ ಬೇರೆ ಯಾಕೆ?
ರಾಮಚಂದ್ರಾಪುರ ಮಠದ ಈಗಿನ ಫೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿಗಳ ಶಾಲಾ TC ಮತ್ತು ಜಾತಕ ಬೇರೆ ಬೇರೆ ಯಾಕೆ? ಸಿ ಎಮ್ ಶ್ರೀನಿವಾಸಭಟ್ಟರ ಮಗ ಹರೀಶನ TC ಹುಟ್ಟಿದ ತಾರೀಖು 15 5 75. ಹದಿನೈದು, ಐದು ಎಪ್ಪತ್ತೈದು. ಲಿಂಗನಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು. 7 6 86 ರಂದು ಈ ಟಿಸಿ ಕೊಡಲ್ಪಟ್ಟಿದೆ. ಆರನೇ ತರಗತಿ ಮುಗಿಸಿ ಏಳನೇ ತರಗತಿಗೆ ಜಾಯಿನ್ ಆಗುವಾಗ ಹನ್ನೊಂದು ವರ್ಷ.ಆವಾಗ ಕೊಟ್ಟಿದ್ದು. ಜಾತಕವೂ ಹರೀಶನದೇ. ಜಾತಕದಲ್ಲಿ ಹುಟ್ಟಿದ ತಾರೀಖು 25 7 75. ಇಪ್ಪತೈದು ಏಳು ಎಪ್ಪತ್ತೈದು. 15 5 75 ಕ್ಕು 25 7 75 ಕ್ಕು ಅಂತರ ಎರಡು ತಿಂಗಳು ಹತ್ತು ದಿನ ಮಾತ್ರ. ಜೂನ್ ತಿಂಗಳು ಶಾಲೆಗೆ ಸೇರಲು ಆವಾಗ ಐದು ವರ್ಷ ಹತ್ತು ತಿಂಗಳು ಆಗ ಬೇಕಾಗಿತ್ತು..25 7 75 ನೇ ತಾರೀಖು ಇವರಿಗೆ ಶಾಲೆಗೆ ಸೇರಿಸಲು ಅಡ್ಡಿಯಾದ ತಾರೀಖಲ್ಲ.ಆ ತಾರೀಖು ಕೂಡ ಶಾಲೆಗೆ ಸೇರಿಸಿಕೊಳ್ಳಲು ಅರ್ಹವಾದ ತಾರೀಖೇ. ಹೀಗಿದ್ದರೂ ಜಾತಕದಲ್ಲಿ ಒಂದು ಹುಟ್ಟಿದ ತಾರೀಖು, ಶಾಲಾ ಸರ್ಟಿಫಿಕೇಟ್ ನಲ್ಲಿ ಒಂದು ಹುಟ್ಟಿದ ತಾರೀಖು ಯಾಕಾಯಿತು? ಯಾಕಾಯಿತು ಎಂದರೆ ನಿಜವಾಗಿ ಹುಟ್ಟಿದ್ದು 15 5 75 ರಂದೇ. ಆದರೆ ಆ ದಿನದ ಜಾತಕದಲ್ಲಿ ಸನ್ಯಾಸಯೋಗ ಇಲ್ಲ.ಪೀಠಾಧಿಪತಿ ಯಾಗಲು ತಯಾರಿಸಿದ ಜಾತಕ 25 7 75 ರಂದು ಸನ್ಯಾಸಯೋಗ ಇದೆ.ಅದಕ್ಕಾಗಿಯೇ ಆ ತಾರೀಖಿನ ಜಾತಕ ಮಾಡಿಸಿ 35ನೇ ಪೀಠಾಧಿಪತಿ ಗಳಾದ ಶ್ರೀ ರಾಘವೇಂದ್ರ ಭಾರತಿಯವರಿಗೆ ತಪ್...