Skip to main content

Posts

Showing posts from September, 2022

Blog number 996. ಗಾಂಧೀಜಿ ಅವರನ್ನು ವಿರೋದಿಸುವ ಗಾಂಧೀ ಹತ್ಯೆ ಮಾಡಿದ ನಾಥುರಾಮ ಗೋಡ್ಸೆ ಸಮರ್ಥಿಸುವವರೆಲ್ಲ ಬಳಸುವುದು ಗಾಂಧಿ ನಮ್ಮ ರಾಷ್ಟ್ರೀಯತೆಗೆ ದಕ್ಕೆ ತಂದರು, ಅವರ ಹೋರಾಟದ ವೇದಿಕೆ ಕಾಂಗ್ರೇಸ್ ಬ್ರಿಟಿಷರ ಪರವಾಗಿತ್ತು ಇತ್ಯಾದಿ ಅದಕ್ಕೆಲ್ಲ ಉತ್ತರ ಇವರ ಲೇಖನದಲ್ಲಿದೆ ಓದಿ.

ಅರವಿಂದ ಚೊಕ್ಕಾಡಿಯವರ ಎಲ್ಲಾ ಲೇಖನ ಈ ವಿಚಾರದಲ್ಲಿ ಸ್ಪಷ್ಟವಾಗಿದೆ ಆದರೆ ಈ ಲೇಖನ ಮಾತ್ರ ಈಗಿನ ತಲೆಮಾರಿನವರಿಗೆ ಇತಿಹಾಸ ತಿರುಚಿ ರಾಷ್ಟ್ರೀಯತೆ ಹೆಸರಲ್ಲಿ ಗಾಂದಿಯವರನ್ನು ಟಾರ್ಗೆಟ್ ಮಾಡಿ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಪ್ರೋತ್ಸಾಹಿಸುವ ಈ ಕಾಲಘಟ್ಟದಲ್ಲಿ ಕಣ್ಣು ತೆರೆಸುವಂತ ಲೇಖನ ಇದು🙏🙏🙏 ಕಿರಣ್ ಕಾಶಿ, ನಿಮ್ಮ ಒಂದು ಕಮೆಂಟ್ ಅನ್ನು ನಾನು ತೆಗೆದು ಹಾಕಿದ್ದೇನೆ. ಏಕೆಂದರೆ ಅಲ್ಲಿಗದು ಅಪ್ರಸ್ತುತವಾಗಿತ್ತು. ಆದರೆ ಇಲ್ಲಿ ಉತ್ತರಿಸುತ್ತೇನೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಬ್ರಿಟಿಷರನ್ನು ಬೆಂಬಲಿಸಲು ಇದ್ದದ್ದು, ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಗಾಂಧಿಯೊಂದಿಗಿದ್ದವರು ಸ್ಥಳೀಯ ಹಿತಾಸಕ್ತಿಯವರು, ರಾಷ್ಟ್ರೀಯತೆಗೆ ವಿರುದ್ಧ ಇದ್ದವರು ಎಂಬ ನಿಮ್ಮ ವಾದವೇ ಹಿಸ್ಟಾರಿಕಲ್ ಮೆಥಡಾಲಜಿಯ ತಳಹದಿಯಲ್ಲಿ ಸ್ವೀಕಾರಾರ್ಹವಲ್ಲ. ನೀವು ಸ್ವಾತಂತ್ರ್ಯ ಬಂದ ನಂತರ ಗಾಂಧಿ, ನೆಹರೂ ಅವರನ್ನು ಜಾಸ್ತಿ ಹೈಲೈಟ್ ಮಾಡಿದರು ಎಂದರೆ ಪರಿಗಣನೆಗೆ ಅರ್ಹ ವಾದ. ಏಕೆಂದರೆ ಅಧಿಕಾರ ಕಾಂಗ್ರೆಸ್‌ನ ಬಳಿ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಧಿಕಾರ ಬ್ರಿಟಿಷರ ಬಳಿ ಇತ್ತು. ಹಿಂದೂ ಮಹಾ ಸಭಾ ಮತ್ತು ಮುಸ್ಲಿಂ ಲೀಗ್ ಎರಡೂ ಕಾಂಗ್ರೆಸ್‌ಗೆ ವಿರೋಧಿಗಳಾಗಿದ್ದವು.‌ ಗಾಂಧೀಜಿಯ ಪ್ರಬಲ ಟೀಕಾಕಾರರಾದ ಅಂಬೇಡ್ಕರ್, ಸಾವರ್ಕರ್ ಆಗಲಿ, ವಿನ್ಸ್ಟನ್ ಚರ್ಚಿಲ್ ಆಗಲಿ ಗಾಂಧೀಜಿ ಅಥವಾ ಅಂದಿನ ಕಾಂಗ್ರೆಸ್ ಬ್ರಿಟಿಷರ ಪರವಾಗಿ ಕೆಲಸ ಮಾಡುವ ಸಂಸ್ಥೆ ಎಂಬ ಟ

Blog number 995. ಮೈಸೂರಿನಲ್ಲಿ ಜಾವಾ ಬೈಕ್ ತಯಾರಾದರೆ ಅದರ ಸೀಟ್ ಕುಷನ್ ಶಿವಮೊಗ್ಗದ ಪೂಸ್ವಾಮಿಯದ್ದೆ೦ದರೆ ....

# ಮೈಸೂರಲ್ಲಿ ಜಾವಾ ಬೈಕ್ ಖರೀದಿಸಿದವರು ಶಿವಮೊಗ್ಗಕ್ಕೆ ಇವರನ್ನ ಹುಡುಕಿಕೊಂಡು ಬರುತ್ತಿದ್ದರೆಂದರೆ !? #   1965ರ ಕಾಲದಲ್ಲಿ ಇವರದ್ದು ಅದ್ದೂರಿಯ ಜೀವನ, ಜಾವ ಬೈಕಿಗೆ ಲಗತ್ತಾದ ಸೀಟು ತಯಾರಿಸುವುದರಲ್ಲಿ ಇವರದ್ದು ಎತ್ತಿದ ಕೈ ರಾಜ್ಯದಲ್ಲೇ ಹೆಸರುವಾಸಿ, ಈಗಿನ Sports ಬೈಕ್ ಖರೀದಿಸುವ ಶೋಕಿ ಇರುವ ಯುವ ಜನಾ೦ಗದಂತೆ ಆಗಿನ ಯುವ ಜನಾ೦ಗ ಜಾವಾ ಬೈಕ್ ಗೆ ಫಿದಾ ಆಗಿದ್ದ ಕಾಲ, ಎಡಕಲ್ಲು ಗುಡ್ಡದ೦ತ ಪ್ರಖ್ಯಾತ ಸಿನಿಮಾದ ಹಾಡಿನಲ್ಲಿ ನಾಯಕ ಚಂದ್ರಶೇಖರ್, ನಾಯಕಿ ಜಯಂತಿ ಜಾವಾ ಬೈಕ್ ನಲ್ಲಿ ಪ್ರಣಯಗೀತೆ ಹಾಡುತ್ತಾ ಸಾಗುವುದು ಉದಾಹರಣೆ.   ಆ ಬೈಕಿನ ಸೀಟು ತಯಾರಿಸಿದವರು ಶಿವಮೊಗ್ಗದ ಪೂಸ್ವಾಮಿ ಪ್ರಕಾಶ್ & ಬ್ರದರ್ಸ್ ಮಾಲಿಕರು ಮೊದಲಿಗೆ ನೆಹರು ರೋಡಿನ ಚಂದ್ರು ಸ್ಟುಡಿಯೋ ಪಕ್ಕದಲ್ಲಿ ಇದ್ದರು ಈಗ ನೆಹರು ರಸ್ತೆಯ ಮೂರನೆ ತಿರುವಿನ ಸನ್ಮಾನ್‌ ಹೋಟೆಲ್ ಎದರು ಸ್ವಂತ ಕಟ್ಟಡದಲ್ಲಿ ಸುಪುತ್ರ ಗಿರಿ ಜೊತೆ ಬೆಡ್ ಕುಷ್ ನ್ ಗಳ ದೊಡ್ಡ ಮಟ್ಟದ ವ್ಯವಹಾರ ನಡೆಸಿದ್ದಾರೆ.    1954ರಲ್ಲಿ ಹಾಡ್೯ವೇರ್ ವ್ಯವಹಾರದಿಂದ ಈಗಿನ ಬೆಡ್ ಕುಷ್ ನ್ , ಸೋಪಾ, ಕಿಟಕಿ ಕಟ೯ನ್ಗಳನ್ನ ಗ್ರಾಹಕರ ಆಯ್ಕೆಗೆ ತಕ್ಕ೦ತೆ ತಯಾರಿಸಿ ಕೊಡುತ್ತಾರೆ.   ಇವರ ಉದ್ದಿಮೆಯಲ್ಲಿ ನಿತ್ಯವೂ ಹೊಸ ಟ್ರೆಂಡ್ ಬರುತ್ತದೆ ಅದನ್ನ ಇವರ ಮಗ ಗಿರಿ ಮಾರುಕಟ್ಟೆ ಮಾಡುತ್ತಾರೆ.   ಇವರಲ್ಲಿ 2500 ರಿಂದ 2 ಲಕ್ಷದ 50 ಸಾವಿರದ ವರೆಗಿನ ಹಾಸಿಗೆ ಇದೆ, ದೊಡ್ಡ ದೊಡ್ಡ ಲಾ

Blog number 994. ಖ್ಯಾತ ಸಾಹಿತಿ - ವಿಮರ್ಶಕ ಉದಯ ಕುಮಾರ್ ಹಬ್ಬು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಶೆ ಮಾಡಿದ್ದಾರೆ ಇವರು ಕೆಳದಿ ಇತಿಹಾಸ ಸಂಶೋದಕರೂ ಹೌದು

#ಉದಯ_ಕುಮಾರ್_ಹಬ್ಬು  ಕಾರವಾರ ಜಿಲ್ಲೆಯವರು ನಿವೃತ್ತ ಪ್ರಾಂಶುಪಾಲರು ಕೆಳದಿ ಇತಿಹಾಸ ಸಮಗ್ರ ಅಧ್ಯಾಯನ ಮಾಡಿದ್ದಾರೆ ಅವರು ನನ್ನ ಕಾದಂಬರಿ ಓದಿ ಅತ್ಯುತ್ತಮ ವಿಮಶೆ೯ ಮಾಡಿದ್ದಾರೆ. Aravinda Chokkadi  ಯವರು ಕೆ.ಅರುಣಪ್ರಸಾದ್ ಬರೆದಿರುವ ಈ ಕಾದಂಬರಿ "ಕೆಳದಿ‌ ಸಾಮ್ರಾಜ್ಯ ಇತಿಹಾಸ ಮರೆತಿರುವ " ಬೆಸ್ತರರಾಣಿ ಚಂಪಕಾ" ಕುರಿತು ಒಳ್ಳೆಯ ಮಾತುಗಳನ್ನು ಬರೆದಿದ್ದರು. ನಾನು ಶ್ರೀ ಕೆ. ಅರುಣಪ್ರಸಾದರಿಗೆ ಪುಸ್ತಕ ಕಳಿಸುವಂತೆ ಮೆಸ್ಯೇಜ್ ಹಾಕಿದೆ. ತಡ ಮಾಡದೆ ಕಳಿಸಿದ್ದಾರೆ. ಅವರಿಗೆ ನಾನು ಆಭಾರಿ.  ನಾನು ಕೆಳದಿಗೆ ಮತ್ತು ಇಕ್ಕೇರಿಗೆ ಹೋದಾಗ ಅಲ್ಲಿ ಪ್ರಾಚ್ಯ ಸಂಗ್ರಹಾಲಯಕ್ಕೆ ಹೋಗಿ. ಅದರ ಹತ್ತಿರ ಮನೆ ಮಾಡಿದ್ದ ಮಾನ್ಯ ಗುಂಡಾ ಜೋಯಿಸ್ ರಲ್ಲಿ ಹೋಗಿ ಮಾತಾಡಿಸಿ ಕೆಲವು ಪುಸ್ತಕಗಳನ್ನು ಖರೀದಿ ಮಾಡಿದ್ದೆ  ಅವುಗಳಲ್ಲಿ The Glorious Keladi(History and Culture)  ಪುಸ್ತಕದ ಜೊತೆಗೆ ಕನ್ನಡದಲ್ಲಿ ಅನುವಾದಗೊಂಡ ಡೆಲ್ಲಾ ವಲ್ಲೆಯ ಪುಸ್ತಕಗಳನ್ನು ಖರೀದಿಸಿದ್ದೆ. ಈ ಕಾದಂಬರಿಯು ಚಂಪಕಾ ಎಂಬ ಬೆಸ್ತರ ಯುವತಿ ಕೆಳದಿಯ ಅರಸನಾದ ವೆಂಕಟಪ್ಪ ನಾಯಕನ ಕಣ್ಣಿಗೆ ಅವಳ ರಂಗೋಲಿ ಕಲೆಯ ಮೂಲಕ ಬೀಳುತ್ತಾಳೆ ಅವಳನ್ನು ವಿದ್ಯುಕ್ತವಾಗಿ ವೆಂಕಟಪ್ಪ ನಾಯಕ ವಿವಾಹವಾಗುತ್ತಾನೆ. ಈ ವಿವಾಹ ವೆಂಕಟಪ್ಪ ನಾಯಕನ ಪಟ್ಟದ ರಾಣಿಗೆ ಸರಿ ಕಾಣದೆ ವಿವಾಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಮತ್ತು ಅವಳನ್ನು ಮತ್ತು ಅವಳ ತಂದೆಯನ್ನು

Blog number 993.ಸೆಪ್ಟೆಂಬರ್ 30 ಕಾಗೋಡು ಭೂ ಹೋರಾಟದ ನೇತಾರ ಹೆಚ್.ಗಣಪತಿಯಪ್ಪ ಅವರ ಪುಣ್ಯ ತಿಥಿ.

#ಕಾಗೋಡು_ಹೋರಾಟದ_ರೂವಾರಿ #ಹೆಚ್_ಗಣಪತಿಯಪ್ಪರ_ನೆನಪು       ನಾನು ಗುರು ಅಂತ ಕರೆದಿದ್ದು ಇವರೊಬ್ಬರಿಗೆ ಅದಕ್ಕೆ ಹಲವು ಕಾರಣ ಇದೆ, ನಿನ್ನೆ ರಾತ್ರಿ ಕನಸಿನಲ್ಲಿ ಗಣಪತಿಯಪ್ಪನವರು ಅವರ ಶಿಸ್ತಿನ ವಸ್ತ್ರ ಅಲಂಕರಿಸಿ ಬಂದಿದ್ದರು.   ಬಿಳಿ ಜುಬ್ಬಾ ಕಚ್ಚೆ ಪಂಜೆ ಮೇಲೆ ಕ್ಯಾಮೆಲ್ ಕಲರ್ ನ ವೇಸ್ಟ್ ಕೋಟ್ ಬಗಲ ಚೀಲದೊಂದಿಗೆ ಬಂದಿದ್ದರು.   ಅವರು ಇಹ ಲೋಕ ತ್ಯಜಿಸಿದ ನಂತರ ಯಾವತ್ತೂ ಕನಸಿಗೆ ಬಂದಿರಲಿಲ್ಲ.    ಗೂಗಲ್ ನಲ್ಲಿ ಅವರ ಬಗ್ಗೆಯ ಮಾಹಿತಿಗಾಗಿ ಕ್ಷಿಕ್ ಮಾಡಿದರೆ ಮೊದಲಿಗೆ ಬಂತು ದಿ ಹಿಂದೂ ಪತ್ರಿಕೆಯ ಅವರ ಇಹ ಲೋಕ ತ್ಯಜಿಸಿದ ವರದಿ.    ಕಾಕತಾಳಿಯ / ಆರನೇ ಇಂದ್ರಿಯಾ/ಸುಪ್ತ ಮನಸ್ಸಿನ ಪುನರ್ ಜ್ಞಾಪಕ ಹೀಗೆ ಯಾವುದೋ 2014 ಸೆಪ್ಟೆಂಬರ್ 30 ರಂದು ಅವರು ವಿದಿವಶರಾದ ದಿನ.    ಇವತ್ತು #ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ಪುಣ್ಯತಿಥಿ.    ಅವರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ ಸಾಹಿತಿ ಕೋಣಂದೂರು ವೆಂಕಟಪ್ಪ ಗೌಡರಿಂದ ಬರಿಸಿದ್ದು, ಅದಕ್ಕೆ ದಾಖಲೆ ಹುಡುಕಾಟ, ಪುಸ್ತಕ ಮುದ್ರಣಕ್ಕೆ ಹಣಕ್ಕಾಗಿ ಪ್ರಯತ್ನ, ಪುಸ್ತಕ ಮುದ್ರಿಸದಂತೆ ಬಾಹ್ಯ ಒತ್ತಡ, ಬಿಡುಗಡೆ ಮಾಡದಂತೆ ಕಾಯ೯ಕ್ರಮ ಹಾಳು ಮಾಡುವ ಪ್ರಯತ್ನ, ಕೆಟ್ಟ ವಿಮಶೆ೯ ಬರೆದ ವಿಮರ್ಶಕರು,ಕಾಗೋಡಿನಲ್ಲಿ ಲೋಹಿಯಾ ಆ ಕಾಲದಲ್ಲಿ ಕಾಗೋಡಿನ ವೀರ ಹೋರಾಟಗಾರರನ್ನ ಉದ್ದೇಶಿಸಿ ಬಾಷಣ ಮಾಡಿದ ಅರಳಿಕಟ್ಟೆಯಿಂದ  ಕಡಿದಾಳಿನ ಕಡಿದಾಳು ಮಂಜಪ್ಪರ ಸಮಾದಿವರೆ

Blog number 992. ತಾಳಗುಪ್ಪದ ರಾ.ಹೆ. 69 ಕ್ಕೆ ಅತಿ ಸಮೀಪದ ಶರಾವತಿ ನದಿ ಮುಳುಗಡೆಯ ಜನವಸತಿ ಕೇಂದ್ರ ಬೆಳ್ಳೆಣ್ಣೆ ಮತ್ತು ಅಲ್ಲಿನ ಪ್ರಾಚೀನ ಕಾಲದ ಭಕ್ತಿ-ಶಕ್ತಿಯ ಶಂಭೂಲಿಂಗೇಶ್ವರ ದೇವಾಲಯ.

#ಬೆಳ್ಳೆಣ್ಣೆಯ_ಪುರಾತನ_ಶ೦ಭು_ಲಿಂಗೇಶ್ವರ  #ಪ್ರಾಚೀನ_ಪುಣ್ಯಕ್ಷೇತ್ರ. #ಶರಾವತಿ_ಮುಳುಗಡೆಯಿಂದ_ವಿರಳ_ಜನವಸತಿ. #ಖೇಚರಿ_ವಿದ್ಯೆ_ಪಾರಂಗಿತ_ಕಲ್ಸೆ_ಸ್ವಾಮಿಗಳು_ಈ_ದೇವಾಲಯದ_ಹಿಂದಿನ_ಬಂಡೆಯ_ಗುಹೆಯಲ್ಲಿ_ತಪಸ್ಸು_ಮಾಡಿದ್ದರು. #ಆಕರ್ಷಕ_ಬೃಹತ್_ಲಿಂಗ. #ತಾಳಗುಪ್ಪದ_ಪೋಲಿಸ್_ಠಾಣೆ_ಪಕ್ಕದಿಂದ_ಕೇವಲ_5ಕಿಮಿ  #ರಾಷ್ರೀಯ_ಹೆದ್ದಾರಿ_69ಕ್ಕೆ_ಅತಿ_ಸಮೀಪದ_ಶರಾವತಿ_ಮುಳುಗಡೆ_ಪ್ರದೇಶ_ದರ್ಶನ. https://youtube.com/shorts/ujNYu34w6-4?feature=share      ಪ್ರಖ್ಯಾತ ಜೋಗ ಜಲಪಾತಕ್ಕೆ ನೀವು ಮುಂದಿನ ಬಾರಿ ವೀಕ್ಷಣೆಗೆ ಹೋಗುವಾಗ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ ದಾಟಿ ತಾಳಗುಪ್ಪ ಎಂಬ ಹೋಬಳಿ ಕೇಂದ್ರ (ಕೊನೆಯ ರೈಲು ನಿಲ್ದಾಣದ ಊರು)ದ ಪೋಲಿಸ್ ಠಾಣೆಯ ಎಡಕ್ಕೆ ತಿರುಗಿ ಸುಮಾರು 3 ಕಿಮಿ ಸಾಗಿದರೆ ಬೆಳ್ಳೆಣ್ಣೆ ಎಂಬ ಊರು ಪ್ರಾರಂಭದ ಬೋರ್ಡ್ ನೋಡುತ್ತೀರಿ ಅಲ್ಲಿಂದ ಮುಂದೆ ಹೊದರೆ ಪ್ರಾಚೀನವಾದ ಶಂಭುಲಿಂಗೇಶ್ವರ ದೇವಾಲಯ ಸಿಗುತ್ತದೆ.     ಈ ದೇವಾಲಯದ ರಚನೆ, ಪೌಳಿಗಳು ಒಂದು ಕಾಲದ ಈ ದೇವಾಲಯದ ಶ್ರೀಮಂತಿಕೆ ಮತ್ತು ಮುಳುಗಡೆಯ ಮೊದಲಿನ ಜನ ವಸತಿ ಕೇಂದ್ರದ ಆರಾಧ್ಯ ಕೇಂದ್ರವಾಗಿದ್ದರ ಕುರುಹು ಆಗಿದೆ.    ಮುಜರಾಯಿ ಇಲಾಖೆಗೆ ಈ ದೇವಳ ಸೇರಿದೆ, ಇಲ್ಲಿನ ದೇವರ ಬೆಳ್ಳಿ ಕವಚದಲ್ಲಿ ಭಕ್ತರು ದರ್ಶನದಲ್ಲಿ ಒಂದು ರೀತಿಯ ರುದ್ರ ರೂಪ ನೋಡಬಹುದು, ಮಕ್ಕಳಿಗೆ ಭಕ್ತಿಯ ಜೊತೆ ಇಲ್ಲಿ ಭಯ ಉಂಟಾಗದೆ

Blog number 991. ಮಲೆನಾಡ ಗಿಡ್ಡ ಎಂಬ ಪಶ್ಚಿಮ ಘಟ್ಟದ ದೇಸಿ ಆಕಳ ತಳಿ, ಇದರ ಹಾಲು ಮೊಸರು ತುಪ್ಪಕ್ಕೆ ಈಗ ಬಾರೀ ಬೇಡಿಕೆ ಮತ್ತು ದುಬಾರಿ ಏಕೆಂದರೆ ಅಳಿವಿನಂಚಿನಲ್ಲಿರುವ ಈ ತಳಿಯ ಸಂರಕ್ಷಣೆ ಆಗಬೇಕು

#ಮಲೆನಾಡು_ಗಿಡ್ಡ_ತಳಿ_ಉಳಿದೀತೆ? #ದೇಶಿತಳಿ_ಜಾನುವಾರು_ಸಂರಕ್ಷಣೆಗೆ_ಸರ್ಕಾರದ_ದೊಡ್ಡ_ದೊಡ್ಡ_ಘೋಷಣೆ #ಆದರೆ_ಬ್ಯಾಂಕುಗಳು_ಸಾಲ_ನೀಡುವುದಿಲ್ಲ.   ಪಶ್ಚಿಮ ಘಟ್ಟದ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಈ ವಿಶೇಷ ತಳಿಯ ಜಾನುವಾರಿಗೆ ಅವುಗಳ ಸಣ್ಣ ಆಕೃತಿಗಾಗಿ ಸ್ಥಳಿಯರು #ಮಲೆನಾಡು_ಗಿಡ್ಡ   ಎಂದೇ ಕರೆಯುತ್ತಿದ್ದರಿಂದ ಇದೇ ಹೆಸರು ಈ ತಳಿಗೆ ಉಳಿಯಿತು ಮತ್ತು ನ್ಯಾಷನಲ್ ಬ್ಯೂರೋ ಆಫ್ ಎನಿಮಲ್ ಜೆನಿಟಿಕ್ ಸಿಸೋರ್ಸ್ಸ್ ಪಟ್ಟಿಯಲ್ಲಿ ಕೂಡ ಮಲೆನಾಡು ಗಿಡ್ಡ ತಳಿ ಎಂದೇ ನಮೂದಾಗಿದೆ.    ಮನುಷ್ಯ ದೇಹಕ್ಕೆ ಬೇಕಾದ ಲ್ಯಾಕ್ಟೋಪೆರಿಸ್ ಈ ತಳಿಯಲ್ಲಿ ಯಥೇಚ್ಚವಾಗಿರುವುದು, ಇದರ ಸಂಗೋಪನ ವೆಚ್ಚ ಅತ್ಯಂತ ಕಡಿಮೆ, ಹೆಚ್ಚು ವರ್ಷ ಬದುಕುವ ಹೆಚ್ಚು ಕರು ಹಾಕುವ ಈ ತಳಿಯ ಸಂರಕ್ಷಣೆಗೆ ಸಕಾ೯ರ ಸಂಘ ಸಂಸ್ಥೆಗಳು ಮತ್ತು ಮಠಾದೀಶರು ಹೆಚ್ಚು ಪ್ರಚಾರ ನೀಡುತ್ತಿದ್ದಾರೆ.   ಆದರೆ 2007ರಲ್ಲಿ ಜಾನುವಾರು ಗಣತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 6 ಲಕ್ಷದಷ್ಟಿದ್ದ ಮಲೆನಾಡು ಗಿಡ್ದ,2012ರ ಜಾನುವಾರು ಸಮೀಕ್ಷೆಯಲ್ಲಿ 4.45 ಲಕ್ಷಕ್ಕೆ ಇಳಿದಿದೆ ಅಷ್ಟೇ ಅಲ್ಲ ಪ್ರತಿ ವರ್ಷ 50 ಸಾವಿರ ಕಡಿಮೆ ಆಗುತ್ತಿದೆ ಎಂಬ ಮಾಹಿತಿ ಇದೆ.   ಕರಾವಳಿಯ ಗೆಳೆಯರೋರ್ವರು ಮಲೆನಾಡು ಗಿಡ್ಡ ಜಾನುವಾರುಗಳಿಂದ ಗೋಉತ್ಪನ್ನಗಳನ್ನು ದೇಶದಾದ್ಯಂತ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ ಇದಕ್ಕಾಗಿ ಮಲೆನಾಡು ಗಿಡ್ಡ ಸಂಗೋಪನೆಗೆ ಆಸಕ್ತರು

Blog number 990. ಮದ್ಯಪಾನದ ಆಸಕ್ತರಿಗೆ ಮದ್ಯಪಾನದ ಬಗ್ಗೆ ಈ ಮಾಹಿತಿ ತುಂಬಾ ಉಪಯುಕ್ತ.

 ಪ್ರಪ೦ಚದಲ್ಲಿ ಮಧ್ಯಪಾನದ ಬಗ್ಗೆ ಇರುವ ಸಾಮಾನ್ಯ ಜ್ಞಾನ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ ಈ ಅತ್ಯುತ್ತಮ ಮಾಹಿತಿ # 🥃 *Glenfiddich* is the world's best-selling single malt 🥃 *Johnnie Walker Red* *Label* is the world's best-selling Scotch. 🥃The Famous *Grouse*  is the best-selling whisky in Scotland 🥃 *Glenmorangie* is the best-selling single malt in Scotland. 🥃The world's fastest growing Scotch today is *Black Dog*. India is a major contributor to its sales. 🥃The five most popular single malts globally are  *Glenfiddich,* The *Glenlivet,* *Glenmorangie Original,* *Aberlour* and *Laphroaig* 🥃 *Bruichladdich’s* _The Octomore_ is the most heavily peated whisky in the world (167ppm) 🥃The three oldest single malts currently sold are *Glenturret,* *Oban* and *Glenlivet* 🥃The oldest distillery in Scotland is _Glen turret_ (1775), followed by _Bowmore_ (1779) 🥃With each bottle of *Laphroaig* that you buy, you are entitled to a lifetime lease of one sq foot of the disti

Blog number 989. ದೂರದ ಬಿಹಾರ ರಾಜ್ಯದ ಭಾಗಲ್ಪುರದ ಜೇನುಕುರುಬರ ರೋನಿ & ರೈಸ್ ತಂಡ ನಮ್ಮ ಲಾಡ್ಜ್ ಕಟ್ಟಡದಲ್ಲಿ ಕಟ್ಟಿದ ಹೆಜ್ಜೇನು ತಟ್ಟಿ ನಡು ಮದ್ಯಾಹ್ನ ಹೊಗೆ ಹಾಕಿ ಕ್ಷಣಾರ್ದದಲ್ಲಿ 17 ಕೇಜಿ ಜೇನು ತುಪ್ಪ ಸಂಪಾದಿಸಿದರು.

#ಹೆಜ್ಜೇನಿನ_ಜೊತೆ_ಸರಸವಾಡುವ_ಬಿಹಾರದ_ಜೇನುಕುರುಬರು #ಎಂತಹ_ದೊಡ್ಡ_ಕಟ್ಟಡ_ದೊಡ್ಡ_ನೀರಿನ_ಟ್ಯಾಂಕ್_ಆಕಾಶದೆತ್ತರದ_ಮರದಲ್ಲಿನ_ಹೆಜ್ಜೇನು_ಇವರಿಗೆ_ಲೆಕ್ಕಕ್ಕಿಲ್ಲ. #ಕಟ್ಟಡದ_ಮಾಲಿಕರಿಗೆ_ಒಂದು_ಜೇನು_ತಟ್ಟಿಯಲ್ಲಿ_ಒಂದು_ಕೇಜಿ_ಜೇನುತುಪ್ಪ_ನೀಡಿ_ಉಳಿದದ್ದು_ಅವರಿಗೆ. #ಇವರ_ಸಾಹಸಮಯ_ಜೀವನದ_ಪ್ರತ್ಯಕ್ಷ_ದರ್ಶನ.    ನಿನ್ನೆ ಮಧ್ಯಾಹ್ನ ಊಟಕ್ಕೆ ಹೊರಟಿದ್ದೆ ತಲೆಗೆ ಜುಟ್ಟು ಕಟ್ಟಿದ ಯುವಕ ಓರ್ವ ಬಂದು, ನಿಮ್ಮ ಲಾಡ್ಜ್ ಮೇಲಿನ ಅಂತಸ್ತಿನ ಹೊರ ಬಾಗದಲ್ಲಿ ದೊಡ್ಡ ಹೆಜ್ಜೇನು ತಟ್ಟಿಯ ಜೇನು ತೆಗೆಯಲು ಅನುಮತಿ ಕೇಳಿದ ಅವನ ಹೆಸರು ರೈಸ್.    ನನಗೆ ವರ್ಷದಲ್ಲಿ ಅನೇಕ ಬಾರಿ ಈ ಹೆಜ್ಜೇನು ಗೂಡು ಕಟ್ಟುವುದು, ಅದನ್ನು ನಿವಾರಿಸಲು ಜೇನು ಕೃಷಿ ತಜ್ಞ ನಾಗೇಂದ್ರ ಸಾಗರ್ ತಿಳಿಸಿದಂತೆ ಅಡಿಕೆ ಸಿಪ್ಪೆ ಹೊಗೆ ಹಾಕುವುದು ಅದಕ್ಕೂ ಹೋಗದಿದ್ದರೆ ನನ್ನ ಶಿಷ್ಯ ಗೇರುಬೀಸಿನ ಚೆನ್ನಪ್ಪನ ಕರೆಸಿ ದೊಡ್ಡ ಹೊಗೆ ಹಾಕಿ ಜೇನು ಓಡಿಸುತ್ತೇನೆ ಇದರಿಂದ ಹೆಚ್ಚು ಹಣ, ಸಮಯ ಖರ್ಚಾದರೂ ಇನ್ನೊಂದು ಸಮಸ್ಯೆ ಏನೆಂದರೆ ಈ ಹೊಗೆಯಿಂದ ಬಿಳಿ ಬಣ್ಣದ ಸೀಲಿಂಗ್ ಕಪ್ಪಾಗಿ ಅಸಹ್ಯ ಆಗಿ ಕಾಣುವುದು ಅದನ್ನು ಸರಿಪಡಿಸಲು ಪೈಂಟರ್ ಗಳನ್ನು ಪದೇ ಪದೇ ಕರೆಸಿ ಅವರಿಗೆ ಕೂಲಿ ಮತ್ತು ದುಭಾರಿ ಬಣ್ಣದ ಹೆಚ್ಚುವರಿ ಖಚು೯ ಆಗುತ್ತದೆ.   ಆದ್ದರಿಂದ ನಡು ಮದ್ಯಾಹ್ನ ಆಪತ್ಬಾಂದವನಂತೆ ಬಂದ ಈ ಬಾಲಕನಿಗೆ ಜೇನು ತೆಗೆಯಲು ಅನುಮತಿ ನೀಡಿಯೇ ಬಿಟ್ಟಿ ಅವನು ಹೊರ ಹೋಗಿ ತನ್ನ ತಂಡ

Blog number 988. ಹಂದಿಗೋಡು ನಿಗೂಡ ಕಾಯಿಲೆ ಪೀಡಿತರ ಧ್ವನಿಯಾಗಿದ್ದ, ಸ್ವತಃ ಹಂದಿಗೋಡು ಕಾಯಿಲೆಯಿಂದ ನರಳುತ್ತಿದ್ದ ದಲಿತ ನಾಯಕ ಗೆಳೆಯ ರಾಜೇಂದ್ರ ಬಂದಗದ್ದೆ ಅವರಿಗೆ ಶ್ರದ್ದಾ೦ಜಲಿಗಳು

#ಸಾಗರ_ತಾಲ್ಲೂಕಿನ_ಹಂದಿಗೋಡಿನ_ಹೋರಾಟಗಾರ_ರಾಜೇಂದ್ರ_ಬಂದಗದ್ದೆ_ಇನ್ನು_ನೆನಪು_ಮಾತ್ರ. #ಹಂದಿಗೋಡು_ಕಾಯಿಲೆಗೆ_ಔಷದಿ_ಕಂಡುಹಿಡಿಯುವುದು_ಯಾವಾಗ? #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿ_ಯಾವಾಗ? #ಹಂದಿಗೋಡು_ನಿಗೂಡ_ಕಾಯಿಲೆಗೆ_ಬಲಿಯಾದ_ದಲಿತ_ಪರ_ಹೋರಾಟಗಾರ #ಹಣ_ಅಧಿಕಾರದಿಂದ_ದೂರವಿದ್ದು_ದಲಿತರ_ಪರ_ಧ್ವನಿಯಾಗಿದ್ದ_ವಿದ್ಯಾವಂತ  #ಸ್ವಾತಂತ್ರ್ಯದ_ಅಮೃತ_ಮಹೋತ್ಸವದಲ್ಲಿ_ಕಪ್ಪು_ಬಾವುಟ_ಪ್ರದರ್ಶಿಸಿದ್ದರು #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ದಯಾಮರಣ_ನೀಡಿ_ಎ೦ಬ_ಬೇಡಿಕೆ_ಸಲ್ಲಿಸಿದ್ದರು. #ಗೆಳೆಯ_ರಾಜೇಂದ್ರಬ೦ದಗದ್ದೆ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗಾಗಿ_ದೇವರಲ್ಲಿ_ಪ್ರಾರ್ಥಿಸುತ್ತೇನೆ.   ರಾಜೇಂದ್ರ ಬಂದಗದ್ದೆ ಪರಿಶಿಷ್ಟ ಜಾತಿಯ ಚೆನ್ನಯ್ಯ ಸಮಾಜ ಸಂಘಟನೆ ಮಾಡಿದ ದಲಿತ ಮುಖಂಡ ಆ ಸಮಾಜದ ರಾಜ್ಯ ಉಪಾದ್ಯಕ್ಷ.   ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಬಿ.ಕೃಷ್ಣಪ್ಪರ ಅಭಿಮಾನಿ ಅವರ ಹೆಸರಿನ ಬಣದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪದಾಧಿಕಾರಿ.    ತನ್ನ ಹುಟ್ಟೂರಾದ ಹಂದಿಗೋಡಿನ ನಿಗೂಡ ಕಾಯಿಲೆಗೆ ಇವರ ವಂಶದವರೆಲ್ಲ ಬಲಿಯಾಗಿದ್ದು ಕಣ್ಣಾರೆ ನೋಡಿದವರು ಈ ರಾಜೇಂದ್ರ ಬಂದಗದ್ದೆ ಅಷ್ಟೇ ಅಲ್ಲ 1975 ರಿಂದ ಹಂದಿಗೋಡು ಕಾಯಿಲೆಯ ತೀವ್ರ ಪರಿಣಾಮ ಅನುಭವಿಸಿದ ನತದೃಷ್ಟ ಜನ ನಾಯಕ.    ಎಸ್.ಎಸ್.ಎಲ್.ಸಿ. ತನಕ ವಿದ್ಯಾಬ್ಯಾಸ ಪಡೆದ ಶ್ರಮಜೀವಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲಿಲ್ಲ, ಚುನಾವಣಾ ರಾಜಕಾರಣ ಮಾಡಲಿಲ್ಲ ಆದರ

Blog number 987. ಶಿವಮೊಗ್ಗ ಸಮೀಪ ಎರೆಡು ಕಾಡಿನ ಗಂಡಾನೆ ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ.ವನ್ಯಜೀವಿ ಸಂರಕ್ಷಣಾ ಅಭಯಾರಣ್ಯದ ಅಂಚಿನಲ್ಲಿ ಬಗರ್ ಹುಕುಂ ಜಮೀನು ಮಾಡಿ ಜೋಳ ಬೆಳೆಯುವ ರೈತರು ಪಸಲು ರಕ್ಷಣೆಗಾಗಿ ಜಮೀನಿನ ಬೇಲಿಗೆ ನೇರವಾಗಿ ವಿದ್ಯುತ್ ಅಕ್ರಮ ಸಂಪರ್ಕ ನೀಡುವುದು ಇಂತಹ ಅನಾಹುತಕ್ಕೆ ಕಾರಣ ಇದು ಮರುಕಳಿಸದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

#ಇದು_ಯಾರ_ತಪ್ಪು? #ಶಿವಮೊಗ್ಗ_ಸಮೀಪದಲ್ಲಿ_ಎರೆಡು_ಕಾಡಾನೆ_ಜೋಳದ_ಬೆಳೆಗೆ_ರೈತ #ಬೇಲಿಗೆ_ಹರಿಸಿದ_ವಿದ್ಯುತ್_ಸ್ಪರ್ಷಿಸಿ_ಸಾವು. #ಬೇಲಿಗೆ_ವಿದ್ಯುತ್_ನೇರ_ಸಂಪರ್ಕ_ಮಾಡುವ_ಬುದ್ದಿಗೇಡಿಗಳು. #ಸ್ಥಳಿಯವಾಗಿ_ಇಂತಹ_ಅಕ್ರಮ_ತಡೆಯ_ಬೇಕು.   ಅಭಯಾರಣ್ಯದ ಅಂಚಿನಲ್ಲಿ ಕಬ್ಬು, ಬಾಳೆ ಮತ್ತು ಜೋಳ ಬೆಳೆದರೆ ಕಾಡು ಪ್ರಾಣಿಗಳು ಅದನ್ನು ತಿನ್ನುವ ಆಸೆಗೆ ಜಮೀನಿಗೆ ನುಗ್ಗಿ ಪಸಲು ನಷ್ಟ ಮಾಡುತ್ತದೆ ಅದನ್ನು ತಪ್ಪಿಸಲು ಮಲೆನಾಡಿನ ರೈತರು ತುಂಬಾ ಕಷ್ಟ ಪಡುತ್ತಾರೆ ಆದರೆ ಈಗ ಕೆಲವರು ಪಸಲಿನ ಭೂಮಿಯ ಸುತ್ತಲೂ ತಂತಿ ಎಳೆದು ನೇರವಾಗಿ ವಿದ್ಯುತ್ ಕಂಬದಿಂದ ಕರೆಂಟು ಕೊಡುವ ಅಯೋಗ್ಯ ಕೆಲಸ ಮಾಡುತ್ತಾರೆ.   ರಾತ್ರಿ 11 ರ ನಂತರ ಈ ರೀತಿ ಅಕ್ರಮ ಸಂಪರ್ಕ ನೀಡಿ ಸೂಯೋ೯ದಯಕ್ಕೆ ಮೊದಲೇ ಸಂಪರ್ಕ ತೆಗೆಯುತ್ತಾರೆ, ರಾತ್ರಿ ಪಸಲು ತಿನ್ನಲು ಬರುವ ಹಂದಿ, ಜಿಂಕೆ ವಿದ್ಯುತ್ ನಿಂದ ಸತ್ತರೆ ಇವರಿಗೆ ಹೆಚ್ಚು ಲಾಭ ಕೆಲವೊಮ್ಮೆ ಮನುಷ್ಯರೂ ಇಂತಹ ವಿದ್ಯುತ್ ಹರಿಸಿದ ಬೇಲಿಗೆ ಬಲಿಯಾಗಿದ್ದಾರೆ.    ಆದರೂ ದುರಾಸೆಯ ಕೆಲ ರೈತರು (ಇವರನ್ನು ರೈತರೆನ್ನ ಬಾರದು) ಇದನ್ನು ಮುಂದುವರಿಸಿದ್ದಾರೆ ಅಕ್ಕ ಪಕ್ಕದವರು ಮಾಹಿತಿ ನೀಡಿದರೆ ಅವರ ಹೆಸರನ್ನು ಗುಪ್ತವಾಗಿಡದೆ ಬಹಿರಂಗ ಮಾಡುವ ಇಲಾಖಾ ಸಿಬ್ಬಂದಿಗಳಿಂದ ರೋಸಿ ಹೋಗಿರುವ ಅನೇಕರು ಮಾಹಿತಿ ನೀಡದೆ ಉಳಿಯುತ್ತಾರೆ.   ಈ ಎರೆಡು ಹತ್ತು ವರ್ಷ ಪ್ರಾಯದ ಗಂಡು ಕಾಡಾನೆ ನಿನ್ನೆ ಕಾಡಂಚಿನ ಬಗರ್ ಹುಕ

Blog number 986. ಗಾಂಧೀಜಿ ಆತ್ಮಕಥೆ ಸತ್ಯಾನ್ವೇಷಣೆ ಬಾಲ್ಯದಲ್ಲಿ ಪ್ರಬಾವ ಬೀರಿತ್ತು ಅವರ ಸ್ವಯಂ ಮಾಡಿಕೊಳ್ಳುತ್ತಿದ್ದ ಕ್ಷೌರದ ಪ್ರಯೋಗ 2020 ರ ಕೊರಾನಾ ಲಾಕ್ ಡೌನ್ ನಿಂದ ನನಗೆ ಅಭ್ಯಾಸವಾಯಿತು ಇದು ಅಷ್ಟು ಸುಲಭವಲ್ಲ.

ಸಲೂನ್_ಕೃಷ್ಣ_ನನ್ನ_ಖಾಯಂ_ಹೇರ್_ಡ್ರೆಸರ್  #ಆದರೆ_ಕೊರಾನ_ಲಾಕ್_ಡೌನ್_ನಂತರ_ಮುಂದುವರಿಯಲಿಲ್ಲ. #ಮಾರ್ಚ್_2020ರ_ಕೃಷ್ಟ_ಮಾಡಿದ_ಕ್ಷೌರವೇ_ಕೊನೆಯಾಯಿತು #ನಾನೆ_ನನ್ನ_ಕ್ಷೌರ_ಮಾಡುತ್ತಾ_ಎರೆಡೂವರೆ_ವರ್ಷಆಯಿತು #ನಾವೇ_ನಮ್ಮ_ಕ್ಷೌರ_ಮಾಡುವ_ಪರಿಣಿತಿ_ಸುಲಭವಲ್ಲ #ಕೇಶ_ವಿನ್ಯಾಸ_ಒಂದು_ಕಲೆ #ನಾಲ್ಕು_ತಲೆಮಾರಿನ_ಕೃಷ್ಣನ_ಕುಟುಂಬದ_ಕ್ಷೌರಿಕ_ಸಂಬಂದದ_ನೆನಪು.     5 ನೇ ತರಗತಿಯಲ್ಲಿಯೇ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ಗಾಂಧೀಜಿ ಆತ್ಮಚರಿತ್ರೆಯಲ್ಲಿ ಹೆಚ್ಚು ನೆನಪು ಉಳಿದಿದ್ದು ಅವರೇ ಅವರ ಕ್ಷೌರ ಮಾಡಿಕೊಳ್ಳುವುದು ಮತ್ತು ತಂದೆಯ ಜೇಬಿನಿಂದ ಹಣ ಕದ್ದ ಘಟನೆ, ಇದಕ್ಕೆ ಕಾರಣ ಬಾಲ್ಯದಲ್ಲಿ ತಂದೆ ಜೇಬಿಗೆ ಕೈಹಾಕಿದ್ದು ತಪ್ಪು ಎಂಬ ಅರಿವು ಮೂಡಿಸಿತ್ತು ಗಾಂಧಿಜೀ ಸತ್ಯಾನ್ವೇಷಣೆ.   ನನಗೆ ನನ್ನ ಬಾಲ್ಯದ ಕೆಟ್ಟ ಅನುಭವ ಕ್ಷೌರಿಕ ರಾಮಣ್ಣ ತಲೆ ಕೂದಲು ತೆಗೆಯಲು ಬಳಸುತ್ತಿದ್ದ ಇಂಗ್ಲೇಂಡ್ ಮೇಡ್ ಕಟಿಂಗ್ ಮೆಷಿನ್ (ಕ್ಲಿಪ್ಪರ್). ನನ್ನ ರೋಲ್ ಮಾಡೆಲ್ ಸಿನಿಮಾ ಟಾಕೀಸಿನ ಗೇಟ್ ಕೀಪರ್ ಆಗಿದ್ದ ಡುಮಿ೦ಗಣ್ಣ ಗಟ್ಟಿಯಾಗಿ ನನ್ನ ತಲೆ ಹಿಡಿದುಕೊಳ್ಳುತ್ತಿದ್ದರು.   ಗಾಂಧೀಜಿ ಆತ್ಮಕಥೆಯಿಂದ ಪ್ರೇರಪಿತನಾಗಿ ಗುಟ್ಟಾಗಿ ತಂದೆಯವರ ಸರ್ಜರಿ ಕತ್ತರಿಯಲ್ಲಿ ಕನ್ನಡಿ ನೋಡುತ್ತಾ ತಲೆ ಕ್ಷೌರ ಮಾಡಿಕೊಂಡಿದ್ದೆ ಪರಿಣಾಮ ಇಡೀ ತಲೆ ಇಲಿ ಕೊದಲು ಕತ್ತರಿಸಿ ತಿಂದಂತೆ ಆಗಿತ್ತು ಅದನ್ನು ಸರಿ ಮಾಡಲು ಪುನಃ ಆನಂದಪುರಂನ ಆ ಕಾಲದ ಮಾ

Blog number 985. ಗಿಳಿ ಶಾಸ್ತ್ರ ಹೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವೃತ್ತಿಪರ ಸುಡುಗಾಡು ಸಿದ್ದರ ಕೊನೆಯ ತಂತು.

#ಗಿಳಿ_ಶಾಸ್ತ್ರ_ಹೇಳುವ_ಉದರ_ನಿಮಿತ್ತಂ_ಉದ್ಯೋಗದ_ಕೊನೆಯ_ತಂತು.    #ಇವರು_ಸುಡುಗಾಡು_ಸಿದ್ದರೆಂಬ_ಪಂಗಡಕ್ಕೆ_ಸೇರಿದವರು  #ಇವರ_ಮಾತೃ_ಭಾಷೆ_ತೆಲಗು.   ಆನಂದಪುರಂನ ಜೇಡಿಸರ ಮತ್ತು ಸಿದ್ದೇಶ್ವರ ಕಾಲೋನಿಯಲ್ಲಿ ನೆಲೆಸಿದ್ದಾರೆ, ಒಂದು ಕಾಲದಲ್ಲಿ ಅಲೆಮಾರಿ ಜೀವನ ನಡೆಸುತ್ತಾ ಇದ್ದವರು, ಜೋತಿಷ್ಯ ಹೇಳುವುದು ಇವರ ಉದ್ಯೋಗವಾಗಿತ್ತು, ಕುರುಕುರು ಮಾಮಾ ಅಂತನೇ ಈ ಜನಾಂಗದ ಪುರುಷರು  ಪ್ರಸಿದ್ದರು.   ಗಿಳಿ ಶಾಸ್ತ್ರ ಕೂಡ ಇವರು ಹೇಳುವ ಜೋತಿಷ್ಯದ ಒಂದು ಭಾಗ, ಇವರು ಆ ಕಾಲದಲ್ಲಿ ತಮ್ಮ ಅಲೆಮಾರಿ ಜೀವನದ ಸಂಚಾರಕ್ಕಾಗಿ ಕುದುರೆ ಸಾಕುತ್ತಿದ್ದರು.  ಈಗ ವಂಶಪಾರಂಪರ್ಯದ ಈ ವೃತ್ತಿ ಬದಲಾಗುತ್ತಿದೆ, ಒಂದೇ ಕಡೆ ನೆಲೆಸುತ್ತಿದ್ದಾರೆ.   ನಿನ್ನೆ ಗಿಳಿ ಶಾಸ್ತ್ರದ ಕೊನೆಯ ತಂತಾದ ಈ ಮಹಿಳೆ ಬಂದಿದ್ದವಳು, ನನ್ನ ಭವಿಷ್ಯವನ್ನ ತಿಳಿಸುವಂತೆ ಪಂಜರದಲ್ಲಿನ ಗಿಳಿ ರಾಮನಿಗೆ ಬಾಗಿಲು ತೆಗೆದು ಹೇಳಿದಾಗ ಗಿಳಿ ರಾಮ ಒಂದು ಕವರನ್ನ ಕಚ್ಚಿ ಬದಿಗೆ ಇಟ್ಟು ಪಂಜರ ಸೇರಿದ ಮೇಲೆ ಗಿಳಿ ತೆಗೆದ ಪೊಟ್ಟಣ ಬಿಚ್ಚಿ ಅದರಲ್ಲಿನ ಚಿತ್ರ ತೋರಿಸುತ್ತಾ ತನ್ನ ವಾಕ್ಚಾತುಯ೯ದಿಂದ ಭವಿಷ್ಯ ಹೇಳಿ ಒತ್ತಾಯದಿಂದ 100 ರೂಪಾಯಿ ಸಂಭಾವನೆ ಪಡೆದು ಹೋದಳು.   ಈ ರೀತಿ ವಷ೯ದಲ್ಲಿ ನಾಕಾರು ಬಾರಿ ಬಂದು ಭವಿಷ್ಯ ಹೇಳುವ ಈಕೆಯ ಕುಟು೦ಬದಲ್ಲಿ ಬೇರಾರು ಈ ವೃತ್ತಿ ಮಾಡುವವರಿಲ್ಲ ಈಗ ಈ ಗಿಳಿ ಭವಿಷ್ಯ ಕೂಡ ಕೇಳುವವರಿಲ್ಲ ಎಲ್ಲಾ ಮಾಡನ್೯ರೈಸ್ ಆಗಿದೆ ಹಾಗಾಗಿ ಈಕೆ ಗಿಳಿ ಶಾಸ್ತ್ರದ ಕೊನ

Blog number 984. ಆನಂದಪುರಂ ಇತಿಹಾಸ ಸಂಖ್ಯೆ 82. ಕೆಳದಿ ಶಿವಪ್ಪನಾಯಕ ಕೃಷಿ- ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ 777 ಎಕರೆಯಲ್ಲಿ ಪ್ರಾರಂಭವಾಗಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ

#ಆನಂದಪುರಂ_ಇತಿಹಾಸ_82. #ಆನಂದಪುರಂ_ಹೋಬಳಿಯ_ಇರುವಕ್ಕಿಯಲ್ಲಿ #ಕೆಳದಿ_ಶಿವಪ್ಪನಾಯಕ_ಕೃಷಿ_ತೋಟಗಾರಿಕಾ_ವಿಜ್ಞಾನ_ವಿಶ್ವವಿದ್ಯಾಲಯ_ಪ್ರಾರಂಭ_ಆಗಿದೆ. #ರಾಷ್ಟ್ರೀಯ_ಹೆದ್ದಾರಿ_69_ಯಡೇಹಳ್ಳಿ_ಅಂಬೇಡ್ಕರ್_ವೃತ್ತದಿಂದ_ಹೊಸನಗರ_ರಸ್ತೆಯಲ್ಲಿ_3_ಕಿಮಿ_ಅಂತರದಲ್ಲಿದೆ #ರಾಷ್ಟ್ರದಲ್ಲಿ_777_ಎಕರೆ_ಅರಣ್ಯದಲ್ಲಿರುವ_ಏಕೈಕ_ಕೃಷಿ_ತೋಟಗಾರಿಕಾ_ವಿಜ್ಞಾನ_ವಿಶ್ವವಿದ್ಯಾಲಯ.    28- ಸೆಪ್ಟೆಂಬರ್ -2022 ರಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ನೂತನ ಅವರಣದಲ್ಲಿ ಮೊದಲ  ಘಟಿಕೋತ್ಸವ ಸಮಾರಂಭ ನಡೆಯಲಿದೆ, ಘನವೆತ್ತ ರಾಜ್ಯಪಾಲರಾದ ಗೆಹ್ಲೋಟ್ ಆಗಮಿಸಲಿದ್ದಾರೆ.   ಸದರಿ ವಿಶ್ವ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವ ಇದು ಮೊದಲಿನ ಆರು ಘಟಿಕೋತ್ಸವ ಇರುವಕ್ಕಿಯ ನೂತನ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣವಾಗದ್ದರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲೇ ನಡೆಸಲಾಗಿತ್ತು.    ಕೃಷಿ ವಿಶ್ವವಿದ್ಯಾಲಯಕ್ಕೆ ಜಿಲ್ಲೆಯಲ್ಲಿನ ಇರುವಕ್ಕಿ ಮತ್ತು ಹಾಯ್ ಹೊಳೆ ಹತ್ತಿರ ಭೂಮಿ ಗುರುತಿಸಲಾಗಿತ್ತು ಮತ್ತು ಹಾಯ್ ಹೊಳೆಯ ಭೂಮಿಯಲ್ಲೇ ಕೃಷಿ ವಿಶ್ವವಿದ್ಯಾಲಯ ಮಾಡಬೇಕೆಂಬ ಒತ್ತಡವಿತ್ತು ಕಾರಣ ಅಲ್ಲಿ ಬೇನಾಮಿ ಹೆಸರಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಭೂಮಿ ಖರೀದಿಸಿದ್ದರು ಅವರ ಭೂಮಿಗೆ ಬಂಗಾರದ ಬೆಲೆ ಬರಬೇಕೆಂದರೆ ಕೃಷಿ ವಿಶ್ವವಿದ್ಯಾಲಯ ಬರಬೇಕು ಎಂಬುದು.   ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ