Skip to main content

BLOG ARTICLES 956. ಆನಂದಪುರಂ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನಲ್ಲಿ ಪ್ರಾಚೀನ ಭಾರತೀಯ ಆಯುರ್ವೇದ ಚಿಕಿತ್ಸೆ ಶಿರೋದಾರ ಚಿಕಿತ್ಸೆ ದಿನಾಂಕ 10- ಸೆಪ್ಟೆಂಬರ್ -2022 ಶನಿವಾರದಿಂದ ದನ್ವಂತರಿ ಹೋಮದೊಂದಿಗೆ ಪ್ರಾರಂಭವಾಗಲಿದೆ.

#ನಿಮ್ಮೆಲ್ಲರ_ಶುಭ_ಹಾರೈಕೆಗಳು_ಇರಲಿ.

#ದಿನಾಂಕ_10_ಸೆಪ್ಟೆಂಬರ್_2022_ಶನಿವಾರ__ನಮ್ಮ_ಶಿರೋದಾರ_ಕೇಂದ್ರ_ಉದ್ಘಾಟನೆ.

#ಭಾರತೀಯ_ಪ್ರಾಚೀನ_ಆಯುರ್ವೇದ_ಚಿಕಿತ್ಸೆ.

 ಶಿರೋದಾರ ಅಂದರೆ ಮನುಷ್ಯನ ಹಣೆಗೆ (ಮೂರನೆ ಕಣ್ಣು) ಕ್ಷೀರಾಬಲ ತೈಲದ ದಾರಣೆ (ನಿರ್ದಿಷ್ಟ ಪ್ರಮಾಣದಲ್ಲಿ ತೈಲ ಬಿಡುತ್ತಾರೆ) ಮಾಡುವುದು.
  ಇದು ಭಾರತೀಯ ಪ್ರಾಚೀನ ಆಯುರ್ವೇದ ಗ್ರಂಥ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.
  ಇದಕ್ಕೆ ನಿರ್ದಿಷ್ಟ ಅಳತೆ - ಆಕೃತಿಯ ಮತ್ತು ನಿರ್ದಿಷ್ಟ ಜಾತಿಯ ಮರದ ಟೇಬಲ್ (ಅದಕ್ಕೆ ದೋಣಿ ಎಂದು ಹೆಸರು) ಅನೇಕ ಪರಿಕರಗಳು ಬೇಕು.
   ಶಿರೋದಾರಕ್ಕೆ ಬಳಸುವ ತೈಲಗಳು ಲೀಟರ್ ಗೆ ಒಂದು ಸಾವಿರದಿಂದ ಹದಿನೈದು ಸಾವಿರದವರೆಗೆ ವಿಬಿನ್ನ ಆಯ್ಕೆಗಳಿದೆ.
    ಆಯುರ್ವೇದ ವೈದ್ಯರ ಶಿಪಾರಸ್ಸಿನಂತೆ ನಿರ್ದಿಷ್ಟ ಕ್ರಮದಲ್ಲಿ ಆಯುರ್ವೇದ ವೈದ್ಯರು ಶಿರೋದಾರ ಮಾಡುತ್ತಾರೆ.
  ಶಿರೋದಾರ ಏಕೆ ಮಾಡುತ್ತಾರೆಂದರೆ ಇದು ಮೆದುಳಿನ ನರ ಮಂಡಳದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ, ಮನಸ್ಸಿನ ಸ್ಥಿತಿ ನಿಯಂತ್ರಿಸುತ್ತದೆ ಆದ್ದರಿಂದ ಶಿರೋದಾರ ಮನಸ್ಸು ಶಾಂತಗೊಳಿಸಿ ವಿಶ್ರಾಂತ ಸ್ಥಿತಿಗೆ ತಲುಪಿಸಲು ಭಾರತೀಯ ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ.
  ಶಿರೋದಾರ ಮತ್ತು ಇದಕ್ಕೆ ಬಳಸುವ ತೈಲವು ತಲೆ ಕೂದಲು ಮತ್ತು ನೆತ್ತಿಯನ್ನು ಪೋಷಿಸುತ್ತದೆ, ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ, ಆತಂಕ - ಭಯ ಕಡಿಮೆ ಮಾಡುತ್ತದೆ, ಸ್ಮರಣೆಯ ಸಮಸ್ಯೆಗೆ ಕೂಡ ಇದು ಅತ್ಯುತ್ತಮ ಚಿಕಿತ್ಸೆ.
   ಇವತ್ತಿನ ಪೈಪೋಟಿಯ ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರತಿಯೊಬ್ಬರು ನಿದ್ರಾಹೀನತೆ - ಟೆನ್ಷನ್- ಆತಂಕಗಳಲ್ಲಿರುವುದು ಸಹಜ, ಇದೇ ರೀತಿ ಗೃಹಿಣಿಯರು ಅನೇಕ ಹಾರ್ಮೋನ್ ವ್ಯತ್ಯಾಸಗಳಿಂದ ಮತ್ತು ವಿದ್ಯಾರ್ಥಿಗಳು ಪರೀಕ್ಷೆಗಳ ಆತಂಕ ಗಳಿಂದ ಇಂತಹದ್ದೇ ಸಮಸ್ಯೆಯಲ್ಲಿ ಬಳಲುತ್ತಾರೆ.
   ದುರ್ಬಲ ಮನಸ್ಥಿತಿಯಲ್ಲಿ ಕೆಲವರು ಆತ್ಮಹತ್ಯೆಯಂತ ಪ್ರಯತ್ನಕ್ಕೂ ದುಮುಕುತ್ತಾರೆ ಅವರಿಗೆಲ್ಲ ಈ ಚಿಕಿತ್ಸೆಯಿಂದ ಪರಿಣಾಮಕಾರಿ ಪರಿಹಾರ ಇದೆ.
  ಇವತ್ತಿನ ಪ್ರವಾಸೋದ್ಯಮ ಉದ್ಯಮದಲ್ಲಿ ಭಾರತೀಯ ಆಯುರ್ವೇದದ ಶಿರೋದಾರ ಕೇಂದ್ರಗಳು ಒಂದು ಅವಿಬಾಜ್ಯ ಅಂಗವೇ ಆಗಿದೆ ಆದ್ದರಿಂದ ನನ್ನ ಲಾಡ್ಜ್ & ರೆಸ್ಟೋರೆಂಟ್ ಪ್ರಾಜೆಕ್ಟ್ ಲ್ಲಿ ಈ ಶಿರೋದಾರ ಚಿಕಿತ್ಸೆ ಸೇರಿದೆ.
  ದಿನಾಂಕ 10- ಸೆಪ್ಟೆಂಬರ್ -2022ರ ಶನಿವಾರ ಬೆಳಿಗ್ಗೆ #ದನ್ವಂತರಿ_ಹೋಮದೊಂದಿಗೆ ಶಿರೋದಾರ ಕೇಂದ್ರ ಪ್ರಾರಂಭ ಆಗಲಿದೆ, ಮೊದಲ ಶಿರೋದಾರ ಶಿವಮೊಗ್ಗದ ನಮ್ಮ ಆತ್ಮೀಯರಾದ ಹಿರಿಯರಾದ ಸಮಾಜವಾದಿ ಪ್ರಕೃತಿ ಮುದ್ರಣಾಲಯದ ಪಿ. ಪುಟ್ಟಯ್ಯನವರಿಗೆ ಪ್ರಸಿದ್ದ ಸಿದ್ಧಾಪುರದ ಆಯುವೇ೯ದ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಪ್ರಖ್ಯಾತ ಆಯುವೇ೯ದ ತಜ್ಞ ವೈದ್ಯರಾದ ಡಾಕ್ಟರ್ ಪ್ರಸಾದ್ ಜನ್ನೆ ಶಿರೋದಾರ ಚಿಕಿತ್ಸೆ ನೀಡಲಿದ್ದಾರೆ ಜೊತೆಗೆ ಇನ್ನೊಬ್ಬ ಪ್ರಖ್ಯಾತ ಆಯುವೇ೯ದ ವೈದ್ಯರಾದ ಡಾಕ್ಟರ್ ಸಂತೋಷ್ ಕೂಡ ಜೊತೆ ಸೇರಲಿದ್ದಾರೆ.
 ಶಿರೋದಾರ ಚಿಕಿತ್ಸೆಯ ಮಹತ್ವದ ಬಗ್ಗೆ ವೈದ್ಯರು ವಿವರಣೆ ನೀಡಲಿದ್ದಾರೆ ಆತ್ಮೀಯ ಗೆಳೆಯರನ್ನು ಆಹ್ವಾನಿಸಿದ್ದೇನೆ.
  ನಮ್ಮ ಲಾಡ್ಜ್ ನ ಹವಾನಿಯಂತ್ರಿತ ರೂಂನಲ್ಲಿ ತಂಗಿ ಇಲ್ಲಿನ ಊಟ ಉಪಚಾರದ (ಎರೆಡು ಹಗಲು ಮತ್ತು ಒಂದು ರಾತ್ರಿ) ಜೊತೆ ಶಿರೋದಾರ ಚಿಕಿತ್ಸೆ ಸೇರಿದ ಪ್ಯಾಕೇಜ್ ಘೋಷಣೆ ಮಾಡಲಿದ್ದೇವೆ.
   ಸ್ಥಳಿಯರು ಮತ್ತು ಸಮೀಪದವರಿಗೆ ಯಾವುದೇ ಲಾಭ-ನಷ್ಟವಿಲ್ಲದೆ ಶಿರೋದಾರ ಚಿಕಿತ್ಸೆ ನೀಡುವ ಯೋಜನೆಯೂ ನಮ್ಮದಿದೆ ಹಾಗೆಯೆ ಮು೦ದಿನ ದಿನದಲ್ಲಿ ಅಭ್ಯಂಗ - ಪಂಚಕರ್ಮ- ತೂಕ ಇಳಿಸುವ - ವಿವಿದ ಆರೋಗ್ಯ ಚಿಕಿತ್ಸಾ ಶಿಬಿರಗಳನ್ನೂ ಆಯೋಜನೆ ಮಾಡಲಿದ್ದೇವೆ.
   ಈ ನಮ್ಮ ನೂತನ ಆಯುವೇ೯ದ ಚಿಕಿತ್ಸೆಯ #ಶಿರೋದಾರ_ಕೇಂದ್ರದ ಶುಭಾರಂಬಕ್ಕೆ ಮತ್ತು ಯಶಸ್ವಿಗೆ ನಿಮ್ಮೆಲ್ಲರ ಪ್ರೀತಿಯ ಬೆಂಬಲ - ಸಹಕಾರ - ಶುಭ ಹಾರೈಕೆಗಳು ಸದಾ ಇರಲಿ ಎಂದು ಆಶಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...