Skip to main content

Blog number 989. ದೂರದ ಬಿಹಾರ ರಾಜ್ಯದ ಭಾಗಲ್ಪುರದ ಜೇನುಕುರುಬರ ರೋನಿ & ರೈಸ್ ತಂಡ ನಮ್ಮ ಲಾಡ್ಜ್ ಕಟ್ಟಡದಲ್ಲಿ ಕಟ್ಟಿದ ಹೆಜ್ಜೇನು ತಟ್ಟಿ ನಡು ಮದ್ಯಾಹ್ನ ಹೊಗೆ ಹಾಕಿ ಕ್ಷಣಾರ್ದದಲ್ಲಿ 17 ಕೇಜಿ ಜೇನು ತುಪ್ಪ ಸಂಪಾದಿಸಿದರು.

#ಹೆಜ್ಜೇನಿನ_ಜೊತೆ_ಸರಸವಾಡುವ_ಬಿಹಾರದ_ಜೇನುಕುರುಬರು

#ಎಂತಹ_ದೊಡ್ಡ_ಕಟ್ಟಡ_ದೊಡ್ಡ_ನೀರಿನ_ಟ್ಯಾಂಕ್_ಆಕಾಶದೆತ್ತರದ_ಮರದಲ್ಲಿನ_ಹೆಜ್ಜೇನು_ಇವರಿಗೆ_ಲೆಕ್ಕಕ್ಕಿಲ್ಲ.

#ಕಟ್ಟಡದ_ಮಾಲಿಕರಿಗೆ_ಒಂದು_ಜೇನು_ತಟ್ಟಿಯಲ್ಲಿ_ಒಂದು_ಕೇಜಿ_ಜೇನುತುಪ್ಪ_ನೀಡಿ_ಉಳಿದದ್ದು_ಅವರಿಗೆ.

#ಇವರ_ಸಾಹಸಮಯ_ಜೀವನದ_ಪ್ರತ್ಯಕ್ಷ_ದರ್ಶನ.

   ನಿನ್ನೆ ಮಧ್ಯಾಹ್ನ ಊಟಕ್ಕೆ ಹೊರಟಿದ್ದೆ ತಲೆಗೆ ಜುಟ್ಟು ಕಟ್ಟಿದ ಯುವಕ ಓರ್ವ ಬಂದು, ನಿಮ್ಮ ಲಾಡ್ಜ್ ಮೇಲಿನ ಅಂತಸ್ತಿನ ಹೊರ ಬಾಗದಲ್ಲಿ ದೊಡ್ಡ ಹೆಜ್ಜೇನು ತಟ್ಟಿಯ ಜೇನು ತೆಗೆಯಲು ಅನುಮತಿ ಕೇಳಿದ ಅವನ ಹೆಸರು ರೈಸ್.
   ನನಗೆ ವರ್ಷದಲ್ಲಿ ಅನೇಕ ಬಾರಿ ಈ ಹೆಜ್ಜೇನು ಗೂಡು ಕಟ್ಟುವುದು, ಅದನ್ನು ನಿವಾರಿಸಲು ಜೇನು ಕೃಷಿ ತಜ್ಞ ನಾಗೇಂದ್ರ ಸಾಗರ್ ತಿಳಿಸಿದಂತೆ ಅಡಿಕೆ ಸಿಪ್ಪೆ ಹೊಗೆ ಹಾಕುವುದು ಅದಕ್ಕೂ ಹೋಗದಿದ್ದರೆ ನನ್ನ ಶಿಷ್ಯ ಗೇರುಬೀಸಿನ ಚೆನ್ನಪ್ಪನ ಕರೆಸಿ ದೊಡ್ಡ ಹೊಗೆ ಹಾಕಿ ಜೇನು ಓಡಿಸುತ್ತೇನೆ ಇದರಿಂದ ಹೆಚ್ಚು ಹಣ, ಸಮಯ ಖರ್ಚಾದರೂ ಇನ್ನೊಂದು ಸಮಸ್ಯೆ ಏನೆಂದರೆ ಈ ಹೊಗೆಯಿಂದ ಬಿಳಿ ಬಣ್ಣದ ಸೀಲಿಂಗ್ ಕಪ್ಪಾಗಿ ಅಸಹ್ಯ ಆಗಿ ಕಾಣುವುದು ಅದನ್ನು ಸರಿಪಡಿಸಲು ಪೈಂಟರ್ ಗಳನ್ನು ಪದೇ ಪದೇ ಕರೆಸಿ ಅವರಿಗೆ ಕೂಲಿ ಮತ್ತು ದುಭಾರಿ ಬಣ್ಣದ ಹೆಚ್ಚುವರಿ ಖಚು೯ ಆಗುತ್ತದೆ.
  ಆದ್ದರಿಂದ ನಡು ಮದ್ಯಾಹ್ನ ಆಪತ್ಬಾಂದವನಂತೆ ಬಂದ ಈ ಬಾಲಕನಿಗೆ ಜೇನು ತೆಗೆಯಲು ಅನುಮತಿ ನೀಡಿಯೇ ಬಿಟ್ಟಿ ಅವನು ಹೊರ ಹೋಗಿ ತನ್ನ ತಂಡದ ನಾಯಕನನ್ನು ಕರೆತಂದ ಅವರ ಹೆಸರು ರೋನಿ ಅಂತ ಆತನನ್ನು ಮಾತಿಗೆಳೆದಾಗ ಇವರೆಲ್ಲ ಬಿಹಾರದ ಬಾಗಲ್ಪುರದ ಜೇನು ಕುರುಬರು ಈಗ ಇವರೆಲ್ಲ ಮತಾಂತರವಾಗಿ ಕ್ರಿಶ್ಚಿಯನ್ ಆಗಿದ್ದರಿಂದ ಇವರ ಹೆಸರೇ ಇವರ ನೂತನ ದಮ೯ ಸೂಚಿಸುತ್ತದೆ.
   ಇವರ ತಂದೆ ತಾಯಿಯಿಂದ ಈ ಹೆಜ್ಜೇನು ಕೀಳುವ ಕಲೆ ಇವರಿಗೆ ಮನೆತನದಿಂದ ಬಂದಿದೆ, ಇವರು ಹಗಲಿನಲ್ಲೇ ಹಸಿ ಎಲೆಗಳನ್ನು ಜೋಡಿಸಿ (ಯಾವುದೇ ಎಲೆಯನ್ನು ಬಳಸಬಹುದು) ಹೊಗೆ ಹಾಕುತ್ತಾರೆ, ಹೊಗೆಯಿಂದ ಹೆಜ್ಜೇನು ಮಂದವಾಗಿ ಹಾರಿ ಹೋಗುತ್ತದೆ, ಹೊಗೆಯ ಪರಿಣಾಮದಿಂದ ಹೆಜ್ಜೇನು ಕೆರಳುವ, ಕುಟುಕುವ ಶಕ್ತಿ ಕಳೆದುಕೊಳ್ಳುತ್ತದಂತೆ.ಆಗ ಕೈಯಲ್ಲಿ ಹಿಡಿದರೂ ಕಚ್ಚುವುದಿಲ್ಲವಂತೆ ಅದೇ ಹೊಗೆ ಇಲ್ಲದೆ ಜೇನು ಗೂಡಿಗೆ ಕೈ ತಾಗಿಸಿದರೆ ಮಾತ್ರ ಜೇನು ವಿಪರೀತ ಕೆರಳಿ ಮನುಷ್ಯನನ್ನ ಹುಡುಕಿ ಹುಡುಕಿ ಕಚ್ಚುತ್ತದಂತೆ.
  ಹೊಗೆ ಹಾಕಿದ ತಕ್ಷಣ ಕ್ಷಣ ಮಾತ್ರದಲ್ಲಿ ಜೇನು ತಟ್ಟಿಗಳನ್ನು ಕತ್ತರಿಸಿ ಬಕೇಟು ಅಥವ ಡಬ್ಬದಲ್ಲಿ ತುಂಬಿ ತಂದು, ತೆಳು ಬಟ್ಟೆಯಿಂದ ಸೋಸಿ ಬಾಟಲಿಯಲ್ಲಿ ತುಂಬಿ ಜೇನು ತಟ್ಟಿ ಕಟ್ಟಿದ ಕಟ್ಟಡದ ಮಾಲಿಕನಾದ ನನಗೆ ಒಂದು ಕೇಜಿ ತಕ್ಕಡಿಯಲ್ಲಿ ತೂಗಿ ನೀಡಿದರು.
    ನಮ್ಮಲ್ಲಿನ ಜೇನು ತಟ್ಟಿಯಲ್ಲಿ ಒಟ್ಟು 17 ಕೇಜಿ ಜೇನು ತುಪ್ಪ ಸಿಕ್ಕಿತವರಿಗೆ, ಸ್ಥಳದಲ್ಲೇ ಇವರ ಸಾಹಸ ನೋಡಲು ನೆರೆದವರು ಅದ೯ -ಒಂದು ಕೇಜಿ ಖರೀದಿಸಿದರು.
     ಕೇಜಿಗೆ 350 ರಂತೆ ಜೀನುತುಪ್ಪ ಮಾರಾಟದಿಂದ ಸುಮಾರು 5000 ರೂಪಾಯಿ ಕೇವಲ ಅದ೯ಗಂಟೆಯಲ್ಲಿ ಗಳಿಸಿದರು.
   ರೋನಿ ಮುಂಬೈ ಶಹರದ ಬಹುಮಹಡಿ ಕಟ್ಟಡಗಳ ಜೇನು ತೆಗೆದ ವಿಡಿಯೋ ತೋರಿಸಿದರು ಆದರೆ ದೊಡ್ಡ ಶಹರದಲ್ಲಿ ಬಹುಮಹಡಿ ಕಟ್ಟಡಗಳ ಜೇನು ತೆಗೆಯಲು ಅವಕಾಶ ನೀಡುವುದಿಲ್ಲ ಕಾರಣ ಕಟ್ಟಡ ಮಾಲಿಕರಿಗೆ ಅಥವ ಸೊಸೈಟಿಯವರಿಗೆ ಭಯ ಅಂದರು.
   ಅರಣ್ಯದಲ್ಲಿ ಜೇನು ತೆಗೆಯಲು ಈಗ ಅವಕಾಶ ನೀಡುವುದಿಲ್ಲ, ಅರಣ್ಯ ಇಲಾಖೆ ಅನುಮತಿ ಇಲ್ಲ ಆದ್ದರಿಂದ ಊರ ಮಧ್ಯದ ಜನವಸತಿ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡ, ನೀರಿನ ಟ್ಯಾಂಕ್ ಗಳ ಹೆಜ್ಜೇನು ಗೂಡುಗಳೆ ಇವರಿಗೆ ಆದಾಯದ ಮೂಲ.
    ಇನ್ನು ಹತ್ತು ದಿನ ಆನಂದಪುರಂನಲ್ಲೇ ಇರುತ್ತಾರಂತೆ ಇವರ ಪೋನ್ ನಂಬರ್  9689978503 ಗೆ ಕರೆ ಮಾಡಿ ನಿಮ್ಮ ಕಟ್ಟಡದ ಎತ್ತರದಲ್ಲಿ ಕಟ್ಟಿದ ಹೆಜ್ಜೇನು ಗೂಡು ತೋರಿಸಿದರೆ,ಇವರು ಹೆಜ್ಜೇನು ಗೂಡು ಹೊಗೆಯಿಂದ ಜೇನು ಹುಳಗಳನ್ನು ಓಡಿಸಿ ಗೂಡು ತೆಗೆದು ಜೇನುತುಪ್ಪ ತೆಗೆದು ಅದರಲ್ಲಿ ಒಂದು ಕೇಜಿ ನಿಮಗೆ ಕೊಟ್ಟು ಉಳಿದದ್ದು ಒಯ್ಯುತ್ತಾರೆ.
   ಹೆಜ್ಜೇನಿನ ಬಗ್ಗೆ ನಮಗೆ ಸರಿಯಾದ ಮಾಹಿತಿಯೇ ಇಲ್ಲ, ಭಯದಿಂದ ಹೆಜ್ಜೇನು ಗೂಡುಗಳನ್ನು ನೋಡುತ್ತಿದ್ದ ನನಗೆ ಬಿಹಾರದ ಬಾಗಲ್ಪುರದ ಜೇನು ಕುರುಬರ ರೋನಿ ಮತ್ತು ರೈಸ್ ತಂಡದಿಂದ ಭಯ ನಿವಾರಣೆ ಆಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...