Skip to main content

Blog number 989. ದೂರದ ಬಿಹಾರ ರಾಜ್ಯದ ಭಾಗಲ್ಪುರದ ಜೇನುಕುರುಬರ ರೋನಿ & ರೈಸ್ ತಂಡ ನಮ್ಮ ಲಾಡ್ಜ್ ಕಟ್ಟಡದಲ್ಲಿ ಕಟ್ಟಿದ ಹೆಜ್ಜೇನು ತಟ್ಟಿ ನಡು ಮದ್ಯಾಹ್ನ ಹೊಗೆ ಹಾಕಿ ಕ್ಷಣಾರ್ದದಲ್ಲಿ 17 ಕೇಜಿ ಜೇನು ತುಪ್ಪ ಸಂಪಾದಿಸಿದರು.

#ಹೆಜ್ಜೇನಿನ_ಜೊತೆ_ಸರಸವಾಡುವ_ಬಿಹಾರದ_ಜೇನುಕುರುಬರು

#ಎಂತಹ_ದೊಡ್ಡ_ಕಟ್ಟಡ_ದೊಡ್ಡ_ನೀರಿನ_ಟ್ಯಾಂಕ್_ಆಕಾಶದೆತ್ತರದ_ಮರದಲ್ಲಿನ_ಹೆಜ್ಜೇನು_ಇವರಿಗೆ_ಲೆಕ್ಕಕ್ಕಿಲ್ಲ.

#ಕಟ್ಟಡದ_ಮಾಲಿಕರಿಗೆ_ಒಂದು_ಜೇನು_ತಟ್ಟಿಯಲ್ಲಿ_ಒಂದು_ಕೇಜಿ_ಜೇನುತುಪ್ಪ_ನೀಡಿ_ಉಳಿದದ್ದು_ಅವರಿಗೆ.

#ಇವರ_ಸಾಹಸಮಯ_ಜೀವನದ_ಪ್ರತ್ಯಕ್ಷ_ದರ್ಶನ.

   ನಿನ್ನೆ ಮಧ್ಯಾಹ್ನ ಊಟಕ್ಕೆ ಹೊರಟಿದ್ದೆ ತಲೆಗೆ ಜುಟ್ಟು ಕಟ್ಟಿದ ಯುವಕ ಓರ್ವ ಬಂದು, ನಿಮ್ಮ ಲಾಡ್ಜ್ ಮೇಲಿನ ಅಂತಸ್ತಿನ ಹೊರ ಬಾಗದಲ್ಲಿ ದೊಡ್ಡ ಹೆಜ್ಜೇನು ತಟ್ಟಿಯ ಜೇನು ತೆಗೆಯಲು ಅನುಮತಿ ಕೇಳಿದ ಅವನ ಹೆಸರು ರೈಸ್.
   ನನಗೆ ವರ್ಷದಲ್ಲಿ ಅನೇಕ ಬಾರಿ ಈ ಹೆಜ್ಜೇನು ಗೂಡು ಕಟ್ಟುವುದು, ಅದನ್ನು ನಿವಾರಿಸಲು ಜೇನು ಕೃಷಿ ತಜ್ಞ ನಾಗೇಂದ್ರ ಸಾಗರ್ ತಿಳಿಸಿದಂತೆ ಅಡಿಕೆ ಸಿಪ್ಪೆ ಹೊಗೆ ಹಾಕುವುದು ಅದಕ್ಕೂ ಹೋಗದಿದ್ದರೆ ನನ್ನ ಶಿಷ್ಯ ಗೇರುಬೀಸಿನ ಚೆನ್ನಪ್ಪನ ಕರೆಸಿ ದೊಡ್ಡ ಹೊಗೆ ಹಾಕಿ ಜೇನು ಓಡಿಸುತ್ತೇನೆ ಇದರಿಂದ ಹೆಚ್ಚು ಹಣ, ಸಮಯ ಖರ್ಚಾದರೂ ಇನ್ನೊಂದು ಸಮಸ್ಯೆ ಏನೆಂದರೆ ಈ ಹೊಗೆಯಿಂದ ಬಿಳಿ ಬಣ್ಣದ ಸೀಲಿಂಗ್ ಕಪ್ಪಾಗಿ ಅಸಹ್ಯ ಆಗಿ ಕಾಣುವುದು ಅದನ್ನು ಸರಿಪಡಿಸಲು ಪೈಂಟರ್ ಗಳನ್ನು ಪದೇ ಪದೇ ಕರೆಸಿ ಅವರಿಗೆ ಕೂಲಿ ಮತ್ತು ದುಭಾರಿ ಬಣ್ಣದ ಹೆಚ್ಚುವರಿ ಖಚು೯ ಆಗುತ್ತದೆ.
  ಆದ್ದರಿಂದ ನಡು ಮದ್ಯಾಹ್ನ ಆಪತ್ಬಾಂದವನಂತೆ ಬಂದ ಈ ಬಾಲಕನಿಗೆ ಜೇನು ತೆಗೆಯಲು ಅನುಮತಿ ನೀಡಿಯೇ ಬಿಟ್ಟಿ ಅವನು ಹೊರ ಹೋಗಿ ತನ್ನ ತಂಡದ ನಾಯಕನನ್ನು ಕರೆತಂದ ಅವರ ಹೆಸರು ರೋನಿ ಅಂತ ಆತನನ್ನು ಮಾತಿಗೆಳೆದಾಗ ಇವರೆಲ್ಲ ಬಿಹಾರದ ಬಾಗಲ್ಪುರದ ಜೇನು ಕುರುಬರು ಈಗ ಇವರೆಲ್ಲ ಮತಾಂತರವಾಗಿ ಕ್ರಿಶ್ಚಿಯನ್ ಆಗಿದ್ದರಿಂದ ಇವರ ಹೆಸರೇ ಇವರ ನೂತನ ದಮ೯ ಸೂಚಿಸುತ್ತದೆ.
   ಇವರ ತಂದೆ ತಾಯಿಯಿಂದ ಈ ಹೆಜ್ಜೇನು ಕೀಳುವ ಕಲೆ ಇವರಿಗೆ ಮನೆತನದಿಂದ ಬಂದಿದೆ, ಇವರು ಹಗಲಿನಲ್ಲೇ ಹಸಿ ಎಲೆಗಳನ್ನು ಜೋಡಿಸಿ (ಯಾವುದೇ ಎಲೆಯನ್ನು ಬಳಸಬಹುದು) ಹೊಗೆ ಹಾಕುತ್ತಾರೆ, ಹೊಗೆಯಿಂದ ಹೆಜ್ಜೇನು ಮಂದವಾಗಿ ಹಾರಿ ಹೋಗುತ್ತದೆ, ಹೊಗೆಯ ಪರಿಣಾಮದಿಂದ ಹೆಜ್ಜೇನು ಕೆರಳುವ, ಕುಟುಕುವ ಶಕ್ತಿ ಕಳೆದುಕೊಳ್ಳುತ್ತದಂತೆ.ಆಗ ಕೈಯಲ್ಲಿ ಹಿಡಿದರೂ ಕಚ್ಚುವುದಿಲ್ಲವಂತೆ ಅದೇ ಹೊಗೆ ಇಲ್ಲದೆ ಜೇನು ಗೂಡಿಗೆ ಕೈ ತಾಗಿಸಿದರೆ ಮಾತ್ರ ಜೇನು ವಿಪರೀತ ಕೆರಳಿ ಮನುಷ್ಯನನ್ನ ಹುಡುಕಿ ಹುಡುಕಿ ಕಚ್ಚುತ್ತದಂತೆ.
  ಹೊಗೆ ಹಾಕಿದ ತಕ್ಷಣ ಕ್ಷಣ ಮಾತ್ರದಲ್ಲಿ ಜೇನು ತಟ್ಟಿಗಳನ್ನು ಕತ್ತರಿಸಿ ಬಕೇಟು ಅಥವ ಡಬ್ಬದಲ್ಲಿ ತುಂಬಿ ತಂದು, ತೆಳು ಬಟ್ಟೆಯಿಂದ ಸೋಸಿ ಬಾಟಲಿಯಲ್ಲಿ ತುಂಬಿ ಜೇನು ತಟ್ಟಿ ಕಟ್ಟಿದ ಕಟ್ಟಡದ ಮಾಲಿಕನಾದ ನನಗೆ ಒಂದು ಕೇಜಿ ತಕ್ಕಡಿಯಲ್ಲಿ ತೂಗಿ ನೀಡಿದರು.
    ನಮ್ಮಲ್ಲಿನ ಜೇನು ತಟ್ಟಿಯಲ್ಲಿ ಒಟ್ಟು 17 ಕೇಜಿ ಜೇನು ತುಪ್ಪ ಸಿಕ್ಕಿತವರಿಗೆ, ಸ್ಥಳದಲ್ಲೇ ಇವರ ಸಾಹಸ ನೋಡಲು ನೆರೆದವರು ಅದ೯ -ಒಂದು ಕೇಜಿ ಖರೀದಿಸಿದರು.
     ಕೇಜಿಗೆ 350 ರಂತೆ ಜೀನುತುಪ್ಪ ಮಾರಾಟದಿಂದ ಸುಮಾರು 5000 ರೂಪಾಯಿ ಕೇವಲ ಅದ೯ಗಂಟೆಯಲ್ಲಿ ಗಳಿಸಿದರು.
   ರೋನಿ ಮುಂಬೈ ಶಹರದ ಬಹುಮಹಡಿ ಕಟ್ಟಡಗಳ ಜೇನು ತೆಗೆದ ವಿಡಿಯೋ ತೋರಿಸಿದರು ಆದರೆ ದೊಡ್ಡ ಶಹರದಲ್ಲಿ ಬಹುಮಹಡಿ ಕಟ್ಟಡಗಳ ಜೇನು ತೆಗೆಯಲು ಅವಕಾಶ ನೀಡುವುದಿಲ್ಲ ಕಾರಣ ಕಟ್ಟಡ ಮಾಲಿಕರಿಗೆ ಅಥವ ಸೊಸೈಟಿಯವರಿಗೆ ಭಯ ಅಂದರು.
   ಅರಣ್ಯದಲ್ಲಿ ಜೇನು ತೆಗೆಯಲು ಈಗ ಅವಕಾಶ ನೀಡುವುದಿಲ್ಲ, ಅರಣ್ಯ ಇಲಾಖೆ ಅನುಮತಿ ಇಲ್ಲ ಆದ್ದರಿಂದ ಊರ ಮಧ್ಯದ ಜನವಸತಿ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡ, ನೀರಿನ ಟ್ಯಾಂಕ್ ಗಳ ಹೆಜ್ಜೇನು ಗೂಡುಗಳೆ ಇವರಿಗೆ ಆದಾಯದ ಮೂಲ.
    ಇನ್ನು ಹತ್ತು ದಿನ ಆನಂದಪುರಂನಲ್ಲೇ ಇರುತ್ತಾರಂತೆ ಇವರ ಪೋನ್ ನಂಬರ್  9689978503 ಗೆ ಕರೆ ಮಾಡಿ ನಿಮ್ಮ ಕಟ್ಟಡದ ಎತ್ತರದಲ್ಲಿ ಕಟ್ಟಿದ ಹೆಜ್ಜೇನು ಗೂಡು ತೋರಿಸಿದರೆ,ಇವರು ಹೆಜ್ಜೇನು ಗೂಡು ಹೊಗೆಯಿಂದ ಜೇನು ಹುಳಗಳನ್ನು ಓಡಿಸಿ ಗೂಡು ತೆಗೆದು ಜೇನುತುಪ್ಪ ತೆಗೆದು ಅದರಲ್ಲಿ ಒಂದು ಕೇಜಿ ನಿಮಗೆ ಕೊಟ್ಟು ಉಳಿದದ್ದು ಒಯ್ಯುತ್ತಾರೆ.
   ಹೆಜ್ಜೇನಿನ ಬಗ್ಗೆ ನಮಗೆ ಸರಿಯಾದ ಮಾಹಿತಿಯೇ ಇಲ್ಲ, ಭಯದಿಂದ ಹೆಜ್ಜೇನು ಗೂಡುಗಳನ್ನು ನೋಡುತ್ತಿದ್ದ ನನಗೆ ಬಿಹಾರದ ಬಾಗಲ್ಪುರದ ಜೇನು ಕುರುಬರ ರೋನಿ ಮತ್ತು ರೈಸ್ ತಂಡದಿಂದ ಭಯ ನಿವಾರಣೆ ಆಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ