Skip to main content

Blog number 992. ತಾಳಗುಪ್ಪದ ರಾ.ಹೆ. 69 ಕ್ಕೆ ಅತಿ ಸಮೀಪದ ಶರಾವತಿ ನದಿ ಮುಳುಗಡೆಯ ಜನವಸತಿ ಕೇಂದ್ರ ಬೆಳ್ಳೆಣ್ಣೆ ಮತ್ತು ಅಲ್ಲಿನ ಪ್ರಾಚೀನ ಕಾಲದ ಭಕ್ತಿ-ಶಕ್ತಿಯ ಶಂಭೂಲಿಂಗೇಶ್ವರ ದೇವಾಲಯ.

#ಬೆಳ್ಳೆಣ್ಣೆಯ_ಪುರಾತನ_ಶ೦ಭು_ಲಿಂಗೇಶ್ವರ 

#ಪ್ರಾಚೀನ_ಪುಣ್ಯಕ್ಷೇತ್ರ.

#ಶರಾವತಿ_ಮುಳುಗಡೆಯಿಂದ_ವಿರಳ_ಜನವಸತಿ.

#ಖೇಚರಿ_ವಿದ್ಯೆ_ಪಾರಂಗಿತ_ಕಲ್ಸೆ_ಸ್ವಾಮಿಗಳು_ಈ_ದೇವಾಲಯದ_ಹಿಂದಿನ_ಬಂಡೆಯ_ಗುಹೆಯಲ್ಲಿ_ತಪಸ್ಸು_ಮಾಡಿದ್ದರು.

#ಆಕರ್ಷಕ_ಬೃಹತ್_ಲಿಂಗ.

#ತಾಳಗುಪ್ಪದ_ಪೋಲಿಸ್_ಠಾಣೆ_ಪಕ್ಕದಿಂದ_ಕೇವಲ_5ಕಿಮಿ 

#ರಾಷ್ರೀಯ_ಹೆದ್ದಾರಿ_69ಕ್ಕೆ_ಅತಿ_ಸಮೀಪದ_ಶರಾವತಿ_ಮುಳುಗಡೆ_ಪ್ರದೇಶ_ದರ್ಶನ.

https://youtube.com/shorts/ujNYu34w6-4?feature=share

     ಪ್ರಖ್ಯಾತ ಜೋಗ ಜಲಪಾತಕ್ಕೆ ನೀವು ಮುಂದಿನ ಬಾರಿ ವೀಕ್ಷಣೆಗೆ ಹೋಗುವಾಗ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ ದಾಟಿ ತಾಳಗುಪ್ಪ ಎಂಬ ಹೋಬಳಿ ಕೇಂದ್ರ (ಕೊನೆಯ ರೈಲು ನಿಲ್ದಾಣದ ಊರು)ದ ಪೋಲಿಸ್ ಠಾಣೆಯ ಎಡಕ್ಕೆ ತಿರುಗಿ ಸುಮಾರು 3 ಕಿಮಿ ಸಾಗಿದರೆ ಬೆಳ್ಳೆಣ್ಣೆ ಎಂಬ ಊರು ಪ್ರಾರಂಭದ ಬೋರ್ಡ್ ನೋಡುತ್ತೀರಿ ಅಲ್ಲಿಂದ ಮುಂದೆ ಹೊದರೆ ಪ್ರಾಚೀನವಾದ ಶಂಭುಲಿಂಗೇಶ್ವರ ದೇವಾಲಯ ಸಿಗುತ್ತದೆ.
   ಈ ದೇವಾಲಯದ ರಚನೆ, ಪೌಳಿಗಳು ಒಂದು ಕಾಲದ ಈ ದೇವಾಲಯದ ಶ್ರೀಮಂತಿಕೆ ಮತ್ತು ಮುಳುಗಡೆಯ ಮೊದಲಿನ ಜನ ವಸತಿ ಕೇಂದ್ರದ ಆರಾಧ್ಯ ಕೇಂದ್ರವಾಗಿದ್ದರ ಕುರುಹು ಆಗಿದೆ.
   ಮುಜರಾಯಿ ಇಲಾಖೆಗೆ ಈ ದೇವಳ ಸೇರಿದೆ, ಇಲ್ಲಿನ ದೇವರ ಬೆಳ್ಳಿ ಕವಚದಲ್ಲಿ ಭಕ್ತರು ದರ್ಶನದಲ್ಲಿ ಒಂದು ರೀತಿಯ ರುದ್ರ ರೂಪ ನೋಡಬಹುದು, ಮಕ್ಕಳಿಗೆ ಭಕ್ತಿಯ ಜೊತೆ ಇಲ್ಲಿ ಭಯ ಉಂಟಾಗದೆ ಇರದು.
    ಈಗ ಈ ಊರಿನ ಮೂಲ ಕುಟುಂಬಗಳು ಯಾರೂ ಇಲ್ಲ ರಾಜ್ಯದ ವಿದ್ಯುತ್ ಗಾಗಿ ಶರಾವತಿ ನದಿಗೆ ಲಿಂಗನಮಕ್ಕಿ ಆಣೆಕಟ್ಟು ಕಟ್ಟಿದ್ದರಿಂದ ಇಡೀ ಬೆಳ್ಳೆಣ್ಣೆ ಊರಿನ ಶ್ರೀಮಂತ ಅಡಿಕೆ ತೋಟದ ರೈತರ ಅಡಿಕೆ ತೋಟವೇ ಮುಳುಗಿದೆ, 20-30 ಅಡಿ ಎತ್ತರದ ಅಡಿಕೆ ಮರದ ಮೇಲೆ ಅಷ್ಟೇ ಎತ್ತರದ ನೀರು ನಿಂತಿದೆ ಅನ್ನುತ್ತಾರೆ.
   ರಾಷ್ಟ್ರೀಯ ಹೆದ್ದಾರಿ 69 ರ ಜೋಗ ಜಲಪಾತದ ಮಾರ್ಗದಲ್ಲಿ ಶರಾವತಿ ನದಿಯಲ್ಲಿ ಮುಳುಗಡೆ ಆದ ಜನವಸತಿ ಪ್ರದೇಶ ಒ0ದನ್ನು ಅತಿ ಸಮೀಪದಲ್ಲಿ ಅತ್ಯುತ್ತಮ ರಸ್ತೆಯ ಮೂಲಕ ತಲುಪಬಹುದಾದ ಏಕೈಕ ತಾಣವಿದು.
   ಸ್ಥಳ ಪುರಾಣ ಜನರ ಬಾಯಲ್ಲಿ ಏನಿದೆ ಅಂದರೆ ಅನಾದಿ ಕಾಲದಲ್ಲಿ #ಕಾಲ_ಜಂಗ ಎಂಬ ಶಿವಭಕ್ತ ರಾಕ್ಷಸ ಈ ಶಂಭುಲಿಂಗೇಶ್ವರ ದೇವಾಲಯ ನಿರ್ಮಿಸಿದ್ದನೆಂದು ನಂಬಿಕೆ ಇದೆ.
   ಶುಂಭುಲಿಂಗೇಶ್ವರ ಲಿಂಗ ಕೂಡ ಎರೆಡೂ ತೋಳಿನಿಂದ ಬಳಸಿದರೂ ಸಿಗದ ದೊಡ್ಡ ಗಾತ್ರದ್ದು, ಅಷ್ಟಬಂಧ ಮಾಡುವಾಗ ಇದರ ಆಳ ದೊರೆಯಲಿಲ್ಲ ಎನ್ನುವುದು ಕೇಳಿದರೆ ಬಹುಶಃ ಮೂಲ ಶಿಲಾ ಬ೦ಡೆಯನ್ನೇ ಕೆತ್ತಿ ಶಿವಲಿಂಗ ಸ್ಥಾಪಿಸಿರ ಬಹುದು.
  ಪ್ರತಿ ವರ್ಷ ರಥೋತ್ಸವ ನಡೆಯುತ್ತದೆ, ಪಕ್ಕದಲ್ಲಿರುವ ಬೃಹತ್ ನಿರೊಟ್ಟೆ ಮರದ ಬುಡದಲ್ಲಿ ಕ್ಷೇತ್ರಪಾಲ ಬೂತ ರಾಜನಿದ್ದಾನೆ ಮತ್ತು ಅಲ್ಲಿ ಅನೇಕ ಹರಕೆ-ಹುಯಿಲುಗಳು ಈಡೇರುತ್ತಿದೆ ಎಂಬ ನಂಬಿಕೆ ಇದೆ.
   ಈ ದೇವಾಲಯಕ್ಕೆ ವಷ೯ ಪೂರ್ತಿ ಶರಾವತಿ ಕಣಿವೆಯ ಗುಡ್ಡದಿಂದ ಹರಿದು ಬರುವ ಅಬ್ಬಿ ನೀರು ನಿತ್ಯ ದೇವಾಲಯದ ರುದ್ರಾಭಿಶೇಖಕ್ಕೆ ಅಚ೯ಕ ಪರಿವಾರಕ್ಕೆ ಬಳಕೆ ಆಗುತ್ತದೆ.
  ವಿಶೇಷ ಅಂದರೆ ಖೇಚರಿ ವಿದ್ಯೆ ಪಾರಂಗಿತರಾಗಿದ್ದ ಕಲಸೆ ಸ್ವಾಮಿಗಳೆಂದೇ ಜನ ಕರೆಯುವ ಶ್ರೀನರಸಿಂಹನಾಂದ ಸ್ವಾಮಿಗಳು ಈ ದೇವಾಲಯದ ಹಿಂಬಾಗದಲ್ಲಿನ ಕಲ್ಲಿನ ಗುಹೆಯಲ್ಲಿ ಅನೇಕ ವರ್ಷ ತಪಸ್ಸು ಮಾಡಿದ್ದರು, ಶರಾವತಿ ನದಿ ಈ ಊರು ಮುಳುಗಡೆ ಆಗಿ ಇಡೀ ಊರು ಸ್ಥಳಾಂತರವಾದ ಮೇಲೂ ಇಲ್ಲೇ ಇದ್ದವರು ನಂತರ ಹಿಮಾಲಯಕ್ಕೆ ತೆರಳಿ ನಂತರ ಸೊಂದ ಸ್ವರ್ಣವಲ್ಲಿ ಮಠದಲ್ಲಿ ನೆಲೆಸಿ ಅಲ್ಲೇ ಸ್ವಗ೯ಸ್ಥರಾದರು ಅವರ ಪುಣ್ಯ ಸಮಾದಿ ಸ್ವರ್ಣವಲ್ಲಿ ಮಠದ ಹಿಂಭಾಗದಲ್ಲಿದೆ.
   ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಅವರು ಆ ಕಾಲದಲ್ಲಿ ಐದು ನೂರು ರೂಪಾಯಿ ದೇಣಿಗೆ ನೀಡಿದ ಬೋರ್ಡ್ ಇದೆ.
   ಇಲ್ಲಿಂದ ಒಳಮಾರ್ಗದಲ್ಲಿ ಹಕ್ಕರೆ ಮುಖಾಂತರ ವರದಳ್ಳಿಗೆ ಹೋಗುವ ರಸ್ತೆ ಕೂಡ ಇದೆ.
   ನಿನ್ನೆ ವರದಳ್ಳಿಯ ದುರ್ಗಾಂಭ ದೇವಾಲಯದಲ್ಲಿ ದುರ್ಗಾಹವನ ಮಾಡಿಸಲು ಸಂಕಲ್ಪ ಮಾಡಿ (ಸಖರಾಯಪಟ್ಟಣದ ಅವದೂತರ ಶಿಷ್ಯ ಡಾಕ್ಟರ್ ಸಂತೋಷರ ಸಲಹೆ ಮೇರೆಗೆ) ಹೋದವನು ವರದಳ್ಳಿ ಶ್ರೀಧರ ಸ್ವಾಮೀಜಿಯವರ ಸಮಾದಿ ಮಂದಿರ ದರ್ಶನ ಮಾಡಿ ಗುರುಗಳ ಬಿಕ್ಷಾವಂದನೆಗೆ ಮತ್ತು ಅನ್ನಸಂತರ್ಪಣೆಗೆ ಕಾಣಿಕೆ ಸಲ್ಲಿಸಿ ಬೆಳ್ಳೆಣ್ಣೆ ತಲುಪಿದಾಗ ಬೆಳಿಗ್ಗೆ ಹನ್ನೊಂದು ಆಗಿತ್ತು, ತಾಳಗುಪ್ಪದ ಪೋಲಿಸ್ ಠಾಣೆಯಿಂದ ಎಡಕ್ಕೆ ಹೊರಳಿ ಊರು ದಾಟಿದ ಮೇಲೆ ಇಡೀ ರಸ್ತೆಯಲ್ಲಿ ಜನಸಂಚಾರವೇ ಇರಲಿಲ್ಲ.
   ಬೆಳ್ಳೆಣ್ಣೆಯ ಶ೦ಭುಲಿಂಗೇಶ್ವರ ದೇವಾಲಯದಲ್ಲಿ ಅಚ೯ಕರ ಹೊರತು ಪಡಿಸಿ ಬೇರಾರು ಇರಲಿಲ್ಲ ವೃದ್ದ ಅರ್ಚಕರಾದ ಸಿರ್ಸಿಯ ಮೂಲದ ಪುರೋಹಿತರಾದ ರಾಮಕೃಷ್ಣರು ಭಕ್ತಿ ಪೂರ್ವಕವಾಗಿ ದೇವರ ರುದ್ರಾಭಿಶೇಕ ಪೂಜೆ ನೋಡುವ ಭಾಗ್ಯ ನಮ್ಮದಾಗಿತ್ತು.
  ಪುರೋಹಿತರು ಅನೇಕ ವರ್ಷ ಗೋವಾದ ದೇವಾಲಯದಲ್ಲಿ ಪುರೋಹಿತರಾಗಿದ್ದರಂತೆ, ಊರಲ್ಲಿ 10 ಗುಂಟೆ ಮಾತ್ರ ಅಡಿಕೆ ತೋಟ ಹೊಂದಿದ್ದಾರೆ ಏಕೈಕ ಮಗಳು ಮದುವೆ ಆಗಿ ಅಳಿಯನ ಮನೆಯಲ್ಲಿದ್ದಾರೆ ಆದ್ದರಿಂದ ಈ ವೃದ್ದ ದಂಪತಿ ಕಳೆದ ಎಂಟು ವರ್ಷದಿಂದ ಇಲ್ಲಿ ನೆಲೆಸಿದ್ದಾರೆ ಪರಿಚಯದ ನಂತರ ತಿಳಿದದ್ದು ನಮ್ಮ ವರಸಿದ್ದಿ ವಿನಾಯಕ ದೇವರ ರಥೋತ್ಸವ ನಡೆಸುವ ಪುರೋಹಿತರಾದ ಸಿರ್ಸಿಯ ತಾರಗೋಡಿನ ರಾಮಚಂದ್ರ ಭಟ್ಟರ ದೊಡ್ಡಪ್ಪನ ಮಗ ಇವರು ಅಂತ.
   ಗುರುವಾರದ ಬೆಳಿಗ್ಗೆ ಶಂಭುಲಿಂಗೇಶ್ವರನಿಗೆ ರುದ್ರಾಭಿಶೇಕ ಸೇವೆ ನಮ್ಮ ಕುಟುಂಬದ ಹೆಸರಲ್ಲಿ ಮಾಡುವ ವ್ಯವಸ್ಥೆ ಮಾಡಿ ಹಿಂದುರುಗಿದೆವು.
   1999 ರಲ್ಲಿ ನಾನು ಪಕ್ಷೇತರನಾಗಿ ವಿದಾನ ಸಭಾ ಚುನಾವಣೆಗೆ ಸ್ಪರ್ದಿಸಿದ್ದಾಗ ರಾತ್ರಿ ಹೊತ್ತಲ್ಲಿ ಈ ದೇವಾಲಯಕ್ಕೆ ಹೋಗಿದ್ದೆ ಅವತ್ತು ಇಲ್ಲಿ ರಥೋತ್ಸವ ಪತ್ರಕರ್ತರಾದ ತಲವಾಟದ ರಾಘವೇಂದ್ರ ಶರ್ಮರ ತಂದೆ ಈ ಕಾರ್ಯಕ್ರಮ ನಡೆಸುತ್ತಿದ್ದರಂತೆ ಅವತ್ತು ನನ್ನ ಮೊದಲಿಗೆ ನೋಡಿದ್ದಾಗಿ ರಾಘವೇಂದ್ರ ಶರ್ಮ ನಮ್ಮಲ್ಲಿಗೆ ಬಂದಾಗ ಹೇಳಿದ್ದರು.
   45 ವರ್ಷದ ನಂತರ ನನ್ನ ಪತ್ನಿ ಈ ದೇವಾಲಯಕ್ಕೆ ಬಂದಿದ್ದು ಅವರ ಕುಟುಂಬ ಈ ಊರಿನ ಮುಳುಗಡೆ ಸಂತ್ರಸ್ಥರು.
   ನಾನು ಒಂದೂವರೆ ವರ್ಷದ ಹಿಂದೆ ನಮ್ಮ ರಾಟ್ ವೀಲರ್ ತಂದಾಗ ಈ ದೇವರ ಪ್ರಾರ್ಥಿಸಿ ಈ ದೇವರ ಹೆಸರನ್ನೆ ಮಗ ನಾಮಕರಣ ಮಾಡಿದ್ದ ಆಗಾಗ್ಗೆ ನಮ್ಮ ಶಂಭೂವಿನ ಆರೋಗ್ಯ ಏರುಪೇರು ಆದರೆ ಇಲ್ಲಿಗೆ ಕಾಣಿಕೆ ಮನಿಯಾರ್ಡರ್ ಮಾಡುವ ಪದ್ಧತಿ ಇದೆ.
   ಈ ಎಲ್ಲಾ ಹಿನ್ನೆಲೆಯ ಕಾರಣಗಳ ಜೊತೆ ಬೆಳ್ಳೆಣ್ಣೆಯ ಪುರಾತನ ಶಂಭೂಲಿಂಗೇಶ್ವರ ದೇವರ ದರ್ಶನ ಪಾರಮಾರ್ಥಿಕ ಸಂತೋಷ ನೆಮ್ಮದಿ ಉಂಟು ಮಾಡಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ