Skip to main content

Blog number 996. ಗಾಂಧೀಜಿ ಅವರನ್ನು ವಿರೋದಿಸುವ ಗಾಂಧೀ ಹತ್ಯೆ ಮಾಡಿದ ನಾಥುರಾಮ ಗೋಡ್ಸೆ ಸಮರ್ಥಿಸುವವರೆಲ್ಲ ಬಳಸುವುದು ಗಾಂಧಿ ನಮ್ಮ ರಾಷ್ಟ್ರೀಯತೆಗೆ ದಕ್ಕೆ ತಂದರು, ಅವರ ಹೋರಾಟದ ವೇದಿಕೆ ಕಾಂಗ್ರೇಸ್ ಬ್ರಿಟಿಷರ ಪರವಾಗಿತ್ತು ಇತ್ಯಾದಿ ಅದಕ್ಕೆಲ್ಲ ಉತ್ತರ ಇವರ ಲೇಖನದಲ್ಲಿದೆ ಓದಿ.

ಅರವಿಂದ ಚೊಕ್ಕಾಡಿಯವರ ಎಲ್ಲಾ ಲೇಖನ ಈ ವಿಚಾರದಲ್ಲಿ ಸ್ಪಷ್ಟವಾಗಿದೆ ಆದರೆ ಈ ಲೇಖನ ಮಾತ್ರ ಈಗಿನ ತಲೆಮಾರಿನವರಿಗೆ ಇತಿಹಾಸ ತಿರುಚಿ ರಾಷ್ಟ್ರೀಯತೆ ಹೆಸರಲ್ಲಿ ಗಾಂದಿಯವರನ್ನು ಟಾರ್ಗೆಟ್ ಮಾಡಿ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಪ್ರೋತ್ಸಾಹಿಸುವ ಈ ಕಾಲಘಟ್ಟದಲ್ಲಿ ಕಣ್ಣು ತೆರೆಸುವಂತ ಲೇಖನ ಇದು🙏🙏🙏

ಕಿರಣ್ ಕಾಶಿ,

ನಿಮ್ಮ ಒಂದು ಕಮೆಂಟ್ ಅನ್ನು ನಾನು ತೆಗೆದು ಹಾಕಿದ್ದೇನೆ. ಏಕೆಂದರೆ ಅಲ್ಲಿಗದು ಅಪ್ರಸ್ತುತವಾಗಿತ್ತು. ಆದರೆ ಇಲ್ಲಿ ಉತ್ತರಿಸುತ್ತೇನೆ.

ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಬ್ರಿಟಿಷರನ್ನು ಬೆಂಬಲಿಸಲು ಇದ್ದದ್ದು, ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಗಾಂಧಿಯೊಂದಿಗಿದ್ದವರು ಸ್ಥಳೀಯ ಹಿತಾಸಕ್ತಿಯವರು, ರಾಷ್ಟ್ರೀಯತೆಗೆ ವಿರುದ್ಧ ಇದ್ದವರು ಎಂಬ ನಿಮ್ಮ ವಾದವೇ ಹಿಸ್ಟಾರಿಕಲ್ ಮೆಥಡಾಲಜಿಯ ತಳಹದಿಯಲ್ಲಿ ಸ್ವೀಕಾರಾರ್ಹವಲ್ಲ.

ನೀವು ಸ್ವಾತಂತ್ರ್ಯ ಬಂದ ನಂತರ ಗಾಂಧಿ, ನೆಹರೂ ಅವರನ್ನು ಜಾಸ್ತಿ ಹೈಲೈಟ್ ಮಾಡಿದರು ಎಂದರೆ ಪರಿಗಣನೆಗೆ ಅರ್ಹ ವಾದ. ಏಕೆಂದರೆ ಅಧಿಕಾರ ಕಾಂಗ್ರೆಸ್‌ನ ಬಳಿ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಧಿಕಾರ ಬ್ರಿಟಿಷರ ಬಳಿ ಇತ್ತು. ಹಿಂದೂ ಮಹಾ ಸಭಾ ಮತ್ತು ಮುಸ್ಲಿಂ ಲೀಗ್ ಎರಡೂ ಕಾಂಗ್ರೆಸ್‌ಗೆ ವಿರೋಧಿಗಳಾಗಿದ್ದವು.‌ ಗಾಂಧೀಜಿಯ ಪ್ರಬಲ ಟೀಕಾಕಾರರಾದ ಅಂಬೇಡ್ಕರ್, ಸಾವರ್ಕರ್ ಆಗಲಿ, ವಿನ್ಸ್ಟನ್ ಚರ್ಚಿಲ್ ಆಗಲಿ ಗಾಂಧೀಜಿ ಅಥವಾ ಅಂದಿನ ಕಾಂಗ್ರೆಸ್ ಬ್ರಿಟಿಷರ ಪರವಾಗಿ ಕೆಲಸ ಮಾಡುವ ಸಂಸ್ಥೆ ಎಂಬ ಟೀಕೆಯನ್ನು ಮಾಡಿಲ್ಲ. ಗಾಂಧಿಯ ವಿರೋಧಿಗಳಾಗಿದ್ದು ಆ ಕಾಲಮಾನದಲ್ಲಿ ಬದುಕಿದ್ದವರೇ ಎಂದೂ ಮಾಡದ ಟೀಕೆಯನ್ನು ಇವತ್ತು ಯಾರೇ ಮಾಡಿದರೂ ಅದು ಪರಿಗಣನೆಗೇ ಅರ್ಹವಾದ ಟೀಕೆಯಲ್ಲ. ಭಗತ್ ಸಿಂಗ್, ಅಜಾದ್, ಭೋಸ್ ಯಾರೂ ಕೂಡ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧಿಯಾಗಿದೆ ಎಂದು ಟೀಕಿಸಿದ್ದಿಲ್ಲ.‌ ಬ್ರಿಟಿಷರ ಪರ ಇದ್ದ ಸಂಸ್ಥೆಯಾಗಿದ್ದರೆ ಅಷ್ಟೊಂದು ಕಾಂಗ್ರೆಸ್ ನಾಯಕರನ್ನು ಬಂಧಿಸಿದ್ದೇಕೆ? ಬ್ರಿಟಿಷರಿಗೇನು ತಲೆ ಸರಿ ಇರ್ಲಿಲ್ವ? ಸಾವರ್ಕರ್ ಕ್ಲೆಮೆನ್ಸಿ ಪದ್ಧತಿಯ ಪ್ರಕಾರ ಹೊರಬಂದು ಬ್ರಿಟಿಷರಿಂದ ಮಾಸಾಶನ ಪಡೆದ ಮೇಲೆ ಅವರ ಬಗ್ಗೆ ಸರಕಾರ ನಿಗಾ ಇಟ್ಟಿತ್ತೇ ಹೊರತು ಬಂಧಿಸಲಿಲ್ಲ.‌ ತನ್ನ ಪರ ಇರುವವನನ್ನು ಬಂಧಿಸುವುದಿಲ್ಲ.‌ಇದು ಕಾಮನ್ ಸೆನ್ಸ್.‌ ಇದಕ್ಕೆ ಇತಿಹಾಸದ ಜ್ಞಾನ ಬೇಕಿಲ್ಲ.

ಎರಡನೆಯದು ಸ್ಥಳೀಯ ಹಿತಾಸಕ್ತಿ ಹೌದು. ಸ್ಥಳೀಯ ಹಿತಾಸಕ್ತಿಯವರನ್ನೆಲ್ಲ ಒಟ್ಟು ಮಾಡಿ ರಾಷ್ಟ್ರೀಯ ಹಿತಾಸಕ್ತಿಯಾಗಿ ಪರಿವರ್ತಿಸಿದವರು ಗಾಂಧಿ. ನೀವು ಹೇಳುವ ರಾಷ್ಟ್ರ ಯಾವುದು? 680 ರಾಜರುಗಳ ರಾಜ್ಯವೊ? ಬ್ರಿಟಿಷರ ನೇರ ಆಡಳಿತದ ಭಾಗವೊ? ಪೋರ್ಚುಗೀಸರು, ಫ್ರೆಂಚರುಗಳ ಕೈಲಿದ್ದ ಭಾಗವೊ? ಇದೆಲ್ಲವೂ ಒಟ್ಟಾಗಿ ಒಂದು ಫೆಡರಲ್ ರಚನೆಯಾದದ್ದೆ 1935 ರ ಶಾಸನದಲ್ಲಿ( ಫ್ರೆಂಚ್, ಪೋರ್ಚುಗೀಸರ ಹೊರತು). ಗಾಂಧಿಯೊಂದಿಗೆ ಸೇರಿದ ಸ್ಥಳೀಯ ನಾಯಕರು ಅದಕ್ಕೆ ಮೊದಲೆ ಸೇರಿದ್ದಾರೆ. ಸಹಜವಾಗಿ ಸ್ಥಳೀಯ ಹಿತಾಸಕ್ತಿಗಾಗಿ ಸೇರಿರುತ್ತಾರೆ. ರಾಷ್ಟ್ರ ರಚನೆಯಾಗುವ ಮೊದಲೆ ರಾಷ್ಟ್ರಕ್ಕಾಗಿ ಒಗ್ಗೂಡಿರಲಿಲ್ಲ ಎಂದರೆ? ನೀವು ಹೇಳುವ ಭಾರತ ರಾಷ್ಟ್ರದ ಇಂದಿನ ರೂಪ ಬಂದದ್ದು ಗಾಂಧಿ ಹತ್ಯೆಯಾಗಿ 13 ವರ್ಷಗಳ ನಂತರ. ತಾನು ಸತ್ತ ನಂತರ ರಚನೆಯಾದ ರಾಷ್ಟ್ರದ ಸ್ವರೂಪದ ಕಲ್ಪನೆಯನ್ನು ಇರಿಸಿಕೊಂಡು ಸಾಯುವ ಮೊದಲು ಗಾಂಧಿಯಲ್ಲ, ಯಾರಾದರೂ ಹೇಗೆ ಚಿಂತನೆ ಹೊಂದಿರಲು ಸಾಧ್ಯ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...