Skip to main content

BLOG ARTICLES 961. ನಿಜವಾದ ಬಡವರ ಗುರುತಿಸುವಲ್ಲಿ ಎಡವಿದ ಸರ್ಕಾರ, ಸೊಸೈಟಿ ಅಕ್ಕಿ ಮಾರಿ ಸೋನಾ ಮಸೂರಿ ಅಕ್ಕಿ ಖರೀದಿಸುವ ಮಂದಿ, ಸೊಸೈಟಿ ಅಕ್ಕಿ ತಿನ್ನುವುದಿಲ್ಲ ಎಂಬ ಹೆಗ್ಗಳಿಕೆಯ ಪಾಲ್ಸ್ ಪ್ರಿಸ್ಟೇಜ್, ಸರ್ಕಾರದಿಂದ ನೂರಾರು ಕೋಟಿ ಅನುದಾನ ಪಡೆಯುವ ಮಠಾದೀಶ ಅನ್ನ ಬಾಗ್ಯದಿಂದ ಸೋಮಾರಿ ವರ್ಗ ಸೃಷ್ಟಿ ಆಗುತ್ತದೆನ್ನುವ ಹೇಳಿಕೆ !

#ವಿಬಿನ್ನ_ಮನಸ್ಥಿತಿಯ_ಅಂತಸ್ಥಿನ_ಸ್ಥಾನಮಾನ

#ಅನ್ನಬಾಗ್ಯ_ಅಕ್ಕಿ_x_ಸೋನಾಮಸೂರಿ

#ರಾಜ್ಯದಲ್ಲಿ_130_ಲಕ್ಷ_ಕುಟುಂಬಗಳಲ್ಲಿ_100_ಲಕ್ಷ_ಬಿಪಿಎಲ್

#ಸೊಸೈಟಿ_ಅಕ್ಕಿ_ತಿನ್ನುವುದಿಲ್ಲ_ಎನ್ನುವುದು_ದೊಡ್ಡಸ್ಥಿಕೆ.

#ಪಾಲ್ಸ್_ಪ್ರಿಸ್ಟೇಜ್_ಸರ್ಕಾರಿ_ಶಾಲಾ_ಶಿಕ್ಷಕರು_ತಮ್ಮ_ಮಕ್ಕಳಿಗೆ_ಕಾನ್ವೆಂಟ್_ಹುಡುಕಿದಂತೆ.

   ನುಚ್ಚಕ್ಕಿ - ನೆಲ್ಲಕ್ಕಿ - ಮುಗ್ಗುಲಕ್ಕಿಗಳಿಗೆಲ್ಲ ಒಂದು ಕಾಲದಲ್ಲಿ ಬೇದವಿರಲಿಲ್ಲ ಅದೆಲ್ಲದರ ಅನ್ನ ತಿಂದೇ ನಾವೆಲ್ಲ ದೊಡ್ಡವರಾಗಿದ್ದು ಮರೆತಿಲ್ಲ ,#ಅನ್ನ_ದೇವರ_ಮುಂದೆ_ಅನ್ಯ_ದೇವರಿಲ್ಲ ಎಂಬ ಸರ್ವಜ್ಞ ವಚನ ಜನ ಮನದಲ್ಲಿತ್ತು.
   ಈಗ ಮೇಲಿನ ಅಕ್ಕಿ ಬಿಡಿ, ಸೊಸೈಟಿ ಅಕ್ಕಿ ಎಂಬ ಅನ್ವರ್ಥ ನಾಮದ ಅನ್ನ ಭಾಗ್ಯದ ಅಕ್ಕಿ ಅಂದರೆ ಮೂಗು ಮುರಿಯುವ ಕಾಲ ಇದಾಗಿದೆ.
   ಅನ್ನಭಾಗ್ಯದಿಂದ ಸೋಮಾರಿಗಳು ಸೃಷ್ಟಿ ಆಗುತ್ತಾರೆ ಅಂತ ಒಬ್ಬ ಮಠದ ಸ್ವಾಮಿಯ ಹೇಳಿಕೆ ನೋಡಿದೆ ಆತ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಪಡೆಯುವ  ಹೈಟೆಕ್ ಬಿಪಿಎಲ್ ಕಾರ್ಡ್ ದಾರ 😀.
  ರಾಜ್ಯದಲ್ಲಿರುವ 1.3 ಕೋಟಿ ಕುಟುಂಬಗಳಲ್ಲಿ ಒಂದು ಕೋಟಿಗೂ ಹೆಚ್ಚಿನ ಕುಟುಂಬ ಬಿಪಿಎಲ್ ಕಾರ್ಡ್ ಹೊಂದಿವೆ ಅಂದರೆ  ಕರ್ನಾಟಕ ರಾಜ್ಯದ ಶೇಕಡ 83% ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಅಂತ ಅರ್ಥ.ಆದರೆ ಇದರಲ್ಲಿ ಸತ್ಯಾಂಶ ಎಷ್ಟು?
  ದಿನಕ್ಕೆ 150 ರೂಪಾಯಿಗಿಂತ ಕಡಿಮೆ ಆದಾಯದವರು ಬಡತನ ರೇಖೆಗಿಂತ ಕೆಳಗಿನವರೆಂಬ ಮಾನದಂಡದಲ್ಲಿ ಭಾರತದಲ್ಲಿ ಶೇಕಡಾ 12.4% ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ !!.
   ಇದರ ಮಧ್ಯ ಬಡವರಿಗೆ ಅಕ್ಕಿ ನೀಡಿದ್ದು ನಮ್ಮ ಪಕ್ಷ ಅಂತೆಲ್ಲ ರಾಜಕೀಯ ಪಕ್ಷಗಳ ಮೇಲಾಟಗಳಿದ್ದರೂ ವಾಸ್ತವವಾಗಿ ಅನ್ನ ಬಾಗ್ಯ ಯೋಜನೆ 15-6-2013ರಲ್ಲಿ ಜಾರಿಗೆ ತಂದಿದ್ದು ಸಿದ್ದರಾಮಯ್ಯನವರು,3 ಕ್ಕಿಂತ ಹೆಚ್ಚಿನ ಸದಸ್ಯರಿರುವ ಬಿಪಿಎಲ್ ಕುಟುಂಬಕ್ಕೆ ಮಾಸಿಕ 30 kg ಅಕ್ಕಿ ವಿತರಣೆ ಅದು ಕೆಜೆಗೆ ಒಂದು ರೂಪಾಯಿಯಂತೆ, ಅದಕ್ಕೂ ಮೊದಲು 4 kg ಅಕ್ಕಿ ಮತ್ತು 1ಕೆಜಿ ಗೋದಿ ವಿತರಣೆ ಆಗುತ್ತಿತ್ತು.
  ನಮ್ಮ ಕೆಲಸದ ಹೆಣ್ಣು ಮಕ್ಕಳು ಪ್ರತಿ ತಿಂಗಳು ಅವರಿಗೆ ಸಿಗುವ ರೇಷನ್ ಅಕ್ಕಿ ಮಾರಾಟ ಮಾಡಿ ಸೋನಾ ಮಸೂರಿ ಸ್ಟೀಮ್ ಅಕ್ಕಿ ಒಯ್ಯುತ್ತಾರೆಂಬ ಸುದ್ದಿ ಮೊನ್ನೆ ಕೇಳಿ ಬೇಸರ ಆಯಿತು, ಅದೂ ಕೇಜಿಗೆ 10 ರೂ ನಂತೆ ಮಾರಾಟ ಮಾಡಿ 40 ರೂ ನ ಸೋನಾ ಮಸ್ಸೂರಿ ಖರೀದಿಸುತ್ತಾರಂತೆ !?. ಸಕಾ೯ರ 30 ರೂ ನಂತೆ ಅಕ್ಕಿ ಖರೀದಿಸಿ ಅದನ್ನು ಈ ಯೋಜನೆಗೆ ಹೆಚ್ಚು ಕಡಿಮೆ ಉಚಿತವಾಗಿ ಸಹಾಯಧನದಿಂದ ನೀಡುವ ಈ ಯೋಜನೆ ದಾರಿ ತಪ್ಪಿತಾ? ಅಥವ ಅಕ್ಕಿ ಗುಣಮಟ್ಟ ಇಲ್ಲವಾ? ಎಂಬ ಪ್ರಶ್ನೆ ಮೂಡುತ್ತದೆ ಆದರೆ ಅದಾವುದು ಅಲ್ಲ, ಎಲ್ಲರಿಗೂ ಈಗ ಅಂತಸ್ಥಿನ ಘನತೆ ಎಂಬ ಭ್ರಮೆಯಲ್ಲಿದ್ದಾರೆ.
   ನಾನು ಈ ಅಕ್ಕಿ ಅವರಿಂದ ತರಿಸಿ ನೋಡಿದೆ ಅಕ್ಕಿ ಸ್ವಚ್ಚವಾಗಿತ್ತು, ಅನ್ನ ಮಾಡಿ ಊಟ ಮಾಡಿದೆ ನಂಬರ್ ಒನ್ - ಸ್ವಲ್ಪ ಗಾತ್ರ ದೊಡ್ಡದು ಅಷ್ಟೆ.
   ಯಾಕೆ ಸೊಸೈಟಿ ಅಕ್ಕಿ ನೀವು ಬಳಸುವುದಿಲ್ಲ . ಕೇಳಿದರೆ "ನಾವು ಸೊಸೈಟಿ ಅಕ್ಕಿ ಇಡ್ಲಿ ದೋಸೆಗೆ ಮಾತ್ರ", "ಹೊಟ್ಟೆ ನೋವು ಬರುತ್ತೆ", "ನನ್ನ ಮಗ ತಿನ್ನುವುದಿಲ್ಲ" ಹೀಗೆ ನೂರಾರು ಕಾರಣಗಳು.
  ಇದು ಪಾಲ್ಸ್ ಪ್ರಿಸ್ಟೇಜ್ ನ ಒಂದು ರೂಪವೇ ಆಗಿದೆ, ಸರ್ಕಾರಿ ಶಾಲಾ ಶಿಕ್ಷಕರುಗಳು ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೆ ಕಾನ್ವೆಂಟ್ ಹುಡುಕಿದಂತೆ.
   ನಿಜವಾಗಿ ಹಸಿದ ಹಸಿವಿನ ಹೊಟ್ಟೆಯ ಬಡತನ ರೇಖೆಯ ಕೆಳಗಿನ ಕುಟುಂಬಕ್ಕೆ ಈ ಯೋಜನೆ ವರದಾನ ಆದರೆ ನಿಜವಾದ ಬಿಪಿಎಲ್ ದಾರನ ಗುರುತಿಸುವಲ್ಲಿ ಸರ್ಕಾರಗಳು ಎಡವಿದೆ.  
  ಈಗಿನ ಸರ್ಕಾರ ಕಾರ್ ಇದ್ದರೂ ಬಿಪಿಎಲ್ ಕಾರ್ಡ್ ದಾರನಿಗೆ ಅನ್ನಭಾಗ್ಯ ನೀಡುತ್ತೇನೆ ಅನ್ನುತ್ತಿರುವುದು ನೋಡಿದರೆ ಇಡೀ ರಾಜ್ಯ ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವರೆಂದೆ ಬಾವಿಸಬೇಕು ಆದರೆ ಇದು ಅತ್ಯುತ್ತಮವಾದ ಯೋಜನೆ ಹಳ್ಳ ಹಿಡಿದಿದೆ ಎಂಬುದು ಸಾಬೀತಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ