Skip to main content

Posts

Showing posts with the label Esmail Khan I never forgot his full support to my anti-corruption struggle when Parliament member and ex minister against me.

Blog number 904. ಶಿವಮೊಗ್ಗ ಜಿಲ್ಲೆಯ ಇಸ್ಮಾಯಿಲ್ ಖಾನ್ ಸಾಹೇಬರ 37ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಕಾಂಗ್ರೇಸ್ ಪಕ್ಷದ ಜಿಲ್ಲಾ ಸಂಸದ,ಮಾಜಿ ಮಂತ್ರಿಗಳನ್ನೂ ಎದುರು ಹಾಕಿಕೊಂಡು ನನ್ನ ಹೋರಾಟಕ್ಕೆ ಬೆಂಬಲಿಸಿ ಬೃಹತ್ ಆಂದೋಲನ ಹಮ್ಮಿಕೊಂಡಿದ್ದು ನಾನು ಜೀವಮಾನದಲ್ಲಿ ಮರೆಯಲಾರೆ

ಶಿವಮೊಗ್ಗದ_ಕಾಂಗ್ರೇಸ್_ಮುಖಂಡ_ಇಸ್ಮಾಯಿಲ್_ಖಾನ್_ಸಾಹೇಬರ_ನಾನು_ಮರೆಯುವಂತಿಲ್ಲ. #ಭ್ರಷ್ಟಾಚಾರ_ವಿರೋದಿ_ಹೋರಾಟದಲ್ಲಿ_ಜೈಲು_ಸೇರಿದ್ದ_ನನ್ನ_ಪರವಾಗಿ_ಹೋರಾಟ_ರೂಪಿಸಿದವರು #ಇವತ್ತು_ಇವರ_37ನೇ_ವಿವಾಹ_ವಾರ್ಷಿಕೋತ್ಸವ. #ಕಾನೂನು_ಬಿಬಿಎಂ_ಪದವೀರರು #ರಾಜ್ಯ_ಅರಣ್ಯಾಭಿವೃದ್ಧಿ_ಕಾಪೋ೯ರೇಷನ್_ಶಿವಮೊಗ್ಗ_ಭದ್ರಾವತಿ_ನಗರಾಭಿವೃದ್ಧಿ_ಪ್ರಾಧಿಕಾರದ_ಅದ್ಯಕ್ಷರಾಗಿದ್ದರು.   ಶಿವಮೊಗ್ಗ ಜಿಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಖರೀದಿಸಿದ ಔಷದಿ ಕಳಪೆ ಅಂತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಡಿಸ್ಟ್ರಿಕ್ಟ್ ಸರ್ಜನ್ ನೀಡಿದ ಸಣ್ಣ ಸುಳಿವು ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ್ದೆ ಆ ಸಭೆಯಲ್ಲಿ ಈಶ್ವರಪ್ಪ, ಆರಗ ಜ್ಞಾನೇಂದ್ರ, ಹೊಸನಗರ ವಿದಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅಯನೂರು ಮಂಜುನಾಥರೂ ಇದ್ದರು.   ಅದೇ ದಿನ ರಾತ್ರಿ ಔಷದಿ ಗೋದಾಮು ವಿದ್ಯುತ್ ಅವಘಡದಿಂದ ಭಸ್ಮ ಆಯಿತು (ಅಧಿಕಾರಿಗಳೆ ಸುಟ್ಟು ಹಾಕಿದ್ದು) ಅಂತ ಅದರ ಮರುದಿನ ಪತ್ರಿಕೆಯಲ್ಲಿ ಬಂತು ನಾನು ಜಿಲ್ಲಾ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಟಿ ಕರೆದು ಇದು ಕಳಪೆ ಔಷದಿ ಖರೀದಿ ಮಾಡಿದ ಅಧಿಕಾರಿಗಳು ತನಿಖೆ ಆದರೆ ಸಿಕ್ಕಿಬೀಳುವ ಭಯದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮುಚ್ಚಲು ಮಾಡಿದ ನಾಟಕ ಇದು ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸಿದೆ.   ಮುಂದಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿ...