ಶಂಕರಾಚಾಯ೯ರು_ದಲಿತ_ಶೂದ್ರ_ವಿರೋದಿಯೇ?.. ಹಾಗಿದ್ದರೆ ಅವರು ಕಾಶಿಯಲ್ಲಿ ಮನೀಷಾ ಪಂಚಕಂ ಯಾಕೆ ಬರೆಯುತ್ತಾರೆ... ಜ್ಞಾನವು ಯಾರಿಗೆ ಇರುತ್ತದೆಯೋ ಆತನು ಚಂಡಾಲನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ, ಆತನೇ ನನ್ನ ಗುರುಇದು ನನ್ನ ದೃಢವಾದ ನಂಬಿಕೆ ಎಂದು ಮನೀಷಾ ಪಂಚಕಂನಲ್ಲಿ ಬರೆದಿದ್ದಾರೆ ಆದಿ ಶಂಕರಾಚಾರ್ಯರು. ಅವರ ಅನುಯಾಯಿಗಳು ಶಂಕರ ತತ್ವ ತಪ್ಪಾಗಿ ಅರ್ಥೈಸಿಕೊಂಡಿದ್ದರಾ? ... ಮೇಲೂ ಕೀಳು ಎಂಬ ಜಾತಿಗಳ ಆಚರಣೆಗೆ ಕಾರಣವೇನು ಹಾಗಾದರೆ ? ... ಇಂತಹ ಅನುಮಾನ ಶಂಕರಾಚಾರ್ಯರನ್ನ ಆರಾದಿಸುವ ಶೂದ್ರ ದಲಿತ ವರ್ಗದಲ್ಲಿ ಉಳಿದುಬಿಟ್ಟಿದೆ ಈ ಬಗ್ಗೆ ಸರಿಯಾದ ವಿವರಣೆ ನೀಡುವವರು ಇದ್ದರೆ ಮಾಹಿತಿ ನೀಡಿ. ಏನಿದು #ಮನೀಷಾ_ಪಂಚಕಂ?... ಆಸಕ್ತಿ ಇದ್ದರೆ ಕೆಳಗಿನ ಲೇಖನ ಪೂರ್ತಿ ಓದಿ. ಮನೀಷಾ ಪಂಚಕಂ ಎಂಬುದು ಆದಿ ಶಂಕರಾಚಾರ್ಯರು ಸಂಸ್ಕೃತದಲ್ಲಿ ರಚಿಸಿದ ಅತ್ಯಂತ ಪ್ರಸಿದ್ಧವಾದ ಮತ್ತು ಕ್ರಾಂತಿಕಾರಕವಾದ ಐದು ಶ್ಲೋಕಗಳ ಸ್ತೋತ್ರವಾಗಿದೆ. 'ಮನೀಷಾ' ಎಂದರೆ 'ದೃಢವಾದ ನಂಬಿಕೆ' ಅಥವಾ 'ಅಭಿಪ್ರಾಯ' ಎಂದರ್ಥ ಅವರ ದೃಷ್ಟಿಯಲ್ಲಿ ಜಾತಿ, ವರ್ಗಗಳ ಭೇದವಿಲ್ಲ ಎಂಬುದನ್ನು ಸಾರುವ ಅದ್ವೈತ ವೇದಾಂತದ ಸಾರ ಇಲ್ಲಿದೆ. ಐತಿಹಾಸಿಕ ಹಿನ್ನೆಲೆ (ಕಥೆ) ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕಾಶಿಯ ಗಂಗಾನದಿಯಲ್ಲಿ ಸ್ನಾನ ಮುಗಿಸಿ, ವಿಶ್ವನಾಥನ ದರ್ಶನಕ್ಕೆ ಹೊರಟಿದ...