Skip to main content

4155.ಸರ್_ಹರ್ಬರ್ಟ್_ಹೋಪ್_ರಿಸ್ಲೆ Sir_Herbert_Hope_Risley, (1851–1911)ಭಾರತೀಯ_ಜನಗಣತಿ_1901


ಸರ್_ಹರ್ಬರ್ಟ್_ಹೋಪ್_ರಿಸ್ಲೆ 
Sir_Herbert_Hope_Risley, (1851–1911)
ಭಾರತೀಯ_ಜನಗಣತಿ_1901

   ಜಾತಿಗಳನ್ನು ವರ್ಗೀಕರಿಸಲು ಇವರು ದೈಹಿಕ ಮಾನದಂಡಗಳನ್ನು ವಿಶೇಷವಾಗಿ #ಮೂಗಿನ_ಅಳತೆ  ಮತ್ತು ತಲೆಬುರುಡೆಯ ಆಕಾರ ಬಳಸಿದರು.

 ಆರ್ಯ ಮತ್ತು ದ್ರಾವಿಡ ಜನಾಂಗಗಳ ಮಿಶ್ರಣವೇ ಜಾತಿ ವ್ಯವಸ್ಥೆಯ ಆಧಾರ ಎಂದು ವಾದಿಸಿದರು.

  ಇದು ಆಕ್ಷೇಪಣೆಗೆ ಕಾರಣ ಆಗಿತ್ತು ಈಗಿನ ಆಧುನಿಕ ವಿಜ್ಞಾನ ಇದನ್ನು ತಪ್ಪು ಎಂದು ಇವರ ವಾದ ನಿರಾಕರಿಸಿದೆ ಇದೊಂದು ವಿಚಿತ್ರವಾದ ಜನಗಣತಿ ನಮ್ಮ ದೇಶದಲ್ಲಿ ಬ್ರಿಟೀಷ್ ಸರ್ಕಾರ ನಡೆಸಿತ್ತು ಈಗ ಯೋಚಿಸಿದರೆ ಹೀಗೂ ಉಂಟಾ ... ಅನ್ನಿಸದೇ ಇರಲಾರದು.

   ಭಾರತೀಯರೆಲ್ಲ ಸರ್ ಹರ್ಬರ್ಟ್ ಹೋಪ್ ರಿಸ್ಲೆ ಅವರ 1901ರ ಜನಗಣತಿ ಬಗ್ಗೆ ತಿಳಿಯಲೇ ಬೇಕು ಅವರು ಈ ಜನಗಣತಿಯಲ್ಲಿ ಜಾತಿಗಳ ಸಾಮಾಜಿಕ ಶ್ರೇಣೀಕರಣವನ್ನು ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಜಾರಿಗೆ ತಂದರು.

   ಇದು ಅನೇಕ ವಿರೋದಕ್ಕೆ ಕಾರಣವಾಯಿತು ಆಧುನಿಕ ತಳಿಶಾಸ್ತ್ರ ವಿಜ್ಞಾನ ಇವರ ವಾದ ತಿರಸ್ಕರಿಸಿದೆ.
 
  ಇವರು ಬ್ರಿಟಿಷ್ ಆಡಳಿತಾವಧಿಯ ಪ್ರಮುಖ ಮಾನವಶಾಸ್ತ್ರಜ್ಞ ಮತ್ತು ಭಾರತೀಯ ನಾಗರಿಕ ಸೇವೆ  ಅಧಿಕಾರಿಯಾಗಿದ್ದರು.

  ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಜನಾಂಗೀಯ ವರ್ಗೀಕರಣವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಪ್ರಯತ್ನಿಸಿದವರಲ್ಲಿ ಇವರು ಪ್ರಮುಖರು.

​  ರಿಸ್ಲೆ 1901 ರ ಭಾರತೀಯ ಜನಗಣತಿಯ ಆಯುಕ್ತರಾಗಿ  ಕಾರ್ಯನಿರ್ವಹಿಸಿದರು. 

  ಈ ಜನಗಣತಿಯಲ್ಲಿ ಜಾತಿಗಳ ಸಾಮಾಜಿಕ ಶ್ರೇಣೀಕರಣವನ್ನು ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಇವರು ಜಾರಿಗೆ ತಂದವರು.

  ಜಾತಿಗಳನ್ನು ವರ್ಗೀಕರಿಸಲು ಇವರು ದೈಹಿಕ ಮಾನದಂಡಗಳನ್ನು ವಿಶೇಷವಾಗಿ ಮೂಗಿನ ಅಳತೆ  ಮತ್ತು ತಲೆಬುರುಡೆಯ ಆಕಾರ ಬಳಸಿದರು.

   ಆರ್ಯ ಮತ್ತು ದ್ರಾವಿಡ ಜನಾಂಗಗಳ ಮಿಶ್ರಣವೇ ಜಾತಿ ವ್ಯವಸ್ಥೆಯ ಆಧಾರ ಎಂದು ವಾದಿಸಿದರು.

   ಇವರ ​ಪ್ರಮುಖ ಕೃತಿಗಳು...
​The Tribes and Castes of Bengal (1891).
  The People of India (1908).
  ಹರ್ಬರ್ಟ್ ರಿಸ್ಲೆಯವರ ಪ್ರಕಾರ ಭಾರತೀಯ ಸಮಾಜವು ಮುಖ್ಯವಾಗಿ ಆರ್ಯ ಮತ್ತು ದ್ರಾವಿಡ ಎಂಬ ಎರಡು ಮೂಲ ಜನಾಂಗಗಳ ಪರಸ್ಪರ ಸಂಪರ್ಕ ಹಾಗೂ ಮಿಶ್ರಣದಿಂದ ರೂಪುಗೊಂಡಿದೆ. 

#ಆರ್ಯರು: 
ಉದ್ದ, ಕಿರಿದಾದ ಮತ್ತು ಚೂಪಾದ ಮೂಗು ಇವರನ್ನು ಶ್ರೇಣೀಕರಣದ ಉನ್ನತ ಸ್ಥಾನದಲ್ಲಿಟ್ಟರು.

#ದ್ರಾವಿಡರು: 
 ಅಗಲವಾದ ಮತ್ತು ಚಪ್ಪಟೆಯಾದ ಮೂಗು ಇವರನ್ನು ಸಮಾಜದ ಕೆಳಸ್ತರದಲ್ಲಿ ವರ್ಗೀಕರಿಸಿದರು.

#ಭಾರತದ_ಮೂಲ_ನಿವಾಸಿಗಳು_ಯಾರು?
 ರಿಸ್ಲೆಯವರ ಪ್ರಕಾರ ದ್ರಾವಿಡರೇ ಭಾರತದ ಅಸಲಿ ಮೂಲ ನಿವಾಸಿಗಳು ಇವರು ಕಪ್ಪು ಮೈಬಣ್ಣ, ಗಿಡ್ಡ ನಿಲುವು ಮತ್ತು ದಪ್ಪ ಮೂಗು ಹೊಂದಿದವರು ಎಂದು ಚಿತ್ರಿಸಿದರು.

  ​ಆರ್ಯರು ಹೊರಗಿನಿಂದ ವಾಯುವ್ಯ ಗಡಿಯಿಂದ ವಲಸೆ ಬಂದು ಭಾರತವನ್ನು ಪ್ರವೇಶಿಸಿದ ಬಿಳಿ ಮೈಬಣ್ಣದ, ಎತ್ತರದ ಜನಾಂಗ ಎಂದು ವಾದಿಸಿದರು.

  ​ಆರ್ಯರು ಭಾರತಕ್ಕೆ ಬಂದಾಗ ಸ್ಥಳೀಯ ದ್ರಾವಿಡ ಮಹಿಳೆಯರನ್ನು ವಿವಾಹವಾದರು ಆದರೆ ತಮ್ಮ ಜನಾಂಗೀಯ 'ಶುದ್ಧತೆ'ಯನ್ನು ಕಾಪಾಡಿಕೊಳ್ಳಲು ಅವರು ದ್ರಾವಿಡ ಪುರುಷರಿಗೆ ಆರ್ಯ ಮಹಿಳೆಯರನ್ನು ಮದುವೆಯಾಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದರು.

  ​ಈ ಅಂತರ್ಜಾತಿ ವಿವಾಹ ನಿಷೇಧ ಮತ್ತು ಜನಾಂಗೀಯ ಶುದ್ಧತೆಯ ಪ್ರಯತ್ನವೇ ಭಾರತದಲ್ಲಿ ಜಾತಿ ವ್ಯವಸ್ಥೆಯ ಜನನಕ್ಕೆ ಕಾರಣ ಎಂದು ರಿಸ್ಲೆ ಪ್ರತಿಪಾದಿಸಿದರು.

#ಇವರು_ಏಳು_ಜನಾಂಗೀಯ_ವರ್ಗೀಕರಣಗಳನ್ನ ಮಾಡಿದರು
 ರಿಸ್ಲೆ ಭಾರತೀಯರನ್ನು ಆರ್ಯ-ದ್ರಾವಿಡರ ಮಿಶ್ರಣದ ಆಧಾರದ ಮೇಲೆ 7 ಗುಂಪುಗಳಾಗಿ ವಿಂಗಡಿಸಿದರು.

#ಇಂಡೋ_ಆರ್ಯನ್: ಪಂಜಾಬ್, ರಾಜಸ್ಥಾನ ಮತ್ತು ಕಾಶ್ಮೀರದ ಜನ (ಕನಿಷ್ಠ ಮಿಶ್ರಣ).

#ದ್ರಾವಿಡಿಯನ್: 
ದಕ್ಷಿಣ ಭಾರತ ಮತ್ತು ಮಧ್ಯ ಭಾರತದ ಮೂಲ ಬುಡಕಟ್ಟುಗಳು.

#ಆರ್ಯೋ_ದ್ರಾವಿಡಿಯನ್: ಗಂಗಾ ಬಯಲು (ಉತ್ತರ ಪ್ರದೇಶ, ಬಿಹಾರ) ಭಾಗದ ಮಿಶ್ರ ಸಮುದಾಯಗಳು.

#ಸಿಥೋ_ದ್ರಾವಿಡಿಯನ್: ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದ ಪಶ್ಚಿಮ ಭಾಗ.

#ಮಂಗೋಲೋ_ದ್ರಾವಿಡಿಯನ್: ಬಂಗಾಳ ಮತ್ತು ಒಡಿಶಾದ ಸಮುದಾಯಗಳು.

#ಮಂಗೋಲಾಯ್ಡ್:
 ಈಶಾನ್ಯ ಭಾರತ ಮತ್ತು ಹಿಮಾಲಯ ಭಾಗ.

#ಟರ್ಕೋ_ಇರಾನಿಯನ್: ಅಫ್ಘಾನಿಸ್ತಾನ ಮತ್ತು ಬಲೂಚಿಸ್ತಾನ ಗಡಿ ಪ್ರದೇಶ.

 ಆದರೆ ಆಧುನಿಕ ತಳಿಶಾಸ್ತ್ರ,ಜೈವಿಕ ಮಾನವಶಾಸ್ತ್ರ ಮತ್ತು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಹರ್ಬರ್ಟ್ ರಿಸ್ಲೆಯವರ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿವೆ.

​ ಜೈವಿಕ ಜನಾಂಗ' ಎಂಬ ಕಲ್ಪನೆಯೇ ತಿರಸ್ಕೃತ,
​ಮಾನವ ಜೀನೋಮ್ ಯೋಜನೆಯ ಪ್ರಕಾರ ಜಗತ್ತಿನ ಎಲ್ಲಾ ಮಾನವರ ಡಿಎನ್‌ಎ (DNA) ಶೇ. 99.9 ರಷ್ಟು ಒಂದೇ ಆಗಿದೆ.

 ​ವಿಜ್ಞಾನದಲ್ಲಿ "ಶುದ್ಧ ಜನಾಂಗ" ಎಂಬ ಪರಿಕಲ್ಪನೆಗೆ ಯಾವುದೇ ಜೈವಿಕ ಅಸ್ತಿತ್ವವಿಲ್ಲ. 

  ಆದ್ದರಿಂದ ರಿಸ್ಲೆಯವರ "ಶುದ್ಧ ಆರ್ಯ" ಅಥವಾ "ಶುದ್ಧ ದ್ರಾವಿಡ" ಜನಾಂಗೀಯ ಪರಿಕಲ್ಪನೆಗಳು ಮಿಥ್ಯೆ ಎಂದು ಸಾಬೀತಾಗಿದೆ.

 ​ರಿಸ್ಲೆಯು ಮೂಗಿನ ಆಕಾರವು ಜಾತಿ ಮತ್ತು ಜನಾಂಗೀಯ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ ಎಂದು ವಾದಿಸಿದ್ದರು ​ಆದರೆ ಆಧುನಿಕ ಜೀವಶಾಸ್ತ್ರದ ಪ್ರಕಾರ, ಮೂಗಿನ ಆಕಾರವು ವ್ಯಕ್ತಿಯ ವಾಸಸ್ಥಳದ ಹವಾಮಾನ ಮತ್ತು ತೇವಾಂಶಕ್ಕೆ ಹೊಂದಿಕೊಳ್ಳುವ  ನೈಸರ್ಗಿಕ ಪ್ರಕ್ರಿಯೆಯೇ ಹೊರತು ಯಾವುದೇ ಸಾಮಾಜಿಕ ಸ್ಥಾನಮಾನ ಅಥವಾ ಜನಾಂಗೀಯ ಶುದ್ಧತೆಯ ಸಂಕೇತವಲ್ಲ.

 ಖ್ಯಾತ ತಳಿವಿಜ್ಞಾನಿ ಪ್ರೊ. ಡೇವಿಡ್ ರೀಚ್ (ಹಾರ್ವರ್ಡ್ ವಿಶ್ವವಿದ್ಯಾಲಯ) ಮತ್ತು ಭಾರತದ ಸಿಸಿಎಂಬಿ ಹೈದರಾಬಾದ್ ನಡೆಸಿದ ವ್ಯಾಪಕ DNA ಸಂಶೋಧನೆಗಳು ಭಾರತೀಯರ ಮೂಲದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿವೆ.

  ​ANI (Ancestral North Indian) & ASI (Ancestral South Indian) ಎಂಬ ಎರೆಡು ವಂಶವಾಹಿಗಳು ಭಾರತದ ಬಹುತೇಕ ಎಲ್ಲಾ ಜನಸಮುದಾಯಗಳಲ್ಲಿ
ಈ ಎರಡು ಪ್ರಾಚೀನ ವಂಶವಾಹಿಗಳ ಮಿಶ್ರಣದಿಂದ ಕೂಡಿವೆ.

  ​ಭಾರತದಲ್ಲಿ ಜಾತಿ, ಧರ್ಮ, ಭಾಷೆ ಅಥವಾ ಭೌಗೋಳಿಕ ಗಡಿಗಳನ್ನು ಮೀರಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಎರಡೂ ಅಂಶಗಳ ಮಿಶ್ರಣವಿದೆ.

  ​ಯಾವುದೇ ಒಂದು ಜಾತಿಯು ಸಂಪೂರ್ಣ ಪ್ರತ್ಯೇಕ ಅಥವಾ ಜೈವಿಕವಾಗಿ 'ಶ್ರೇಷ್ಠ' ವಂಶವಾಹಿಯನ್ನು ಹೊಂದಿಲ್ಲ.

 ​ರಿಸ್ಲೆಯು 'ಆರ್ಯ' ಮತ್ತು 'ದ್ರಾವಿಡ' ಎಂಬ ಭಾಷಾ ಕುಟುಂಬಗಳನ್ನು ಜೈವಿಕ ಜನಾಂಗಗಳೆಂದು ತಪ್ಪಾಗಿ ಗ್ರಹಿಸಿದ್ದರು.

  ​ಭಾಷೆ ಎಂಬುದು ಕಲಿಯುವ ಸಂಸ್ಕೃತಿಯ ಭಾಗವೇ ಹೊರತು ಅದು ರಕ್ತ ಅಥವಾ ವಂಶವಾಹಿಯ ಮೂಲಕ ನಿರ್ಧಾರವಾಗುವುದಿಲ್ಲ ಎಂಬುದನ್ನು ಆಧುನಿಕ ಭಾಷಾಶಾಸ್ತ್ರ ಮತ್ತು ತಳಿಶಾಸ್ತ್ರ ಸಾಬೀತುಪಡಿಸಿವೆ.

​  ಜಾತಿ ವ್ಯವಸ್ಥೆಯ ಕಾಲಘಟ್ಟ
​DNA ಅಧ್ಯಯನಗಳ ಪ್ರಕಾರ ಭಾರತದಲ್ಲಿ ಸುಮಾರು 4,000 ರಿಂದ 2,000 ವರ್ಷಗಳ ಹಿಂದಿನವರೆಗೆ ವ್ಯಾಪಕ ಅಂತರ್-ಸಮುದಾಯ ಮಿಶ್ರಣ ನಡೆಯುತ್ತಿತ್ತು.

 ​ಸುಮಾರು ಕ್ರಿ.ಪೂ. 100 ರಿಂದ ಕ್ರಿ.ಶ. 100 ರ ಅವಧಿಯಲ್ಲಿ ಮಾತ್ರ ನಿರ್ದಿಷ್ಟ ಗುಂಪುಗಳ ಒಳಗೆಯೇ ಮದುವೆಯಾಗುವ ಪದ್ಧತಿ  ಗಟ್ಟಿಯಾಗಿ ಜಾತಿ ವ್ಯವಸ್ಥೆ ರೂಪುಗೊಂಡಿತೇ ಹೊರತು ರಿಸ್ಲೆ ಹೇಳಿದಂತೆ ಅದು ಕೇವಲ ಆರ್ಯ-ದ್ರಾವಿಡ ದೈಹಿಕ ವ್ಯತ್ಯಾಸಗಳಿಂದ ತಕ್ಷಣಕ್ಕೆ ಹುಟ್ಟಿಕೊಂಡಿದ್ದಲ್ಲ.

​ಹೀಗಾಗಿ ರಿಸ್ಲೆಯವರ ವರ್ಗೀಕರಣವು ವೈಜ್ಞಾನಿಕ ಸತ್ಯಕ್ಕಿಂತ ಹೆಚ್ಚಾಗಿ ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಅನುಕೂಲವಾಗುವಂತೆ ಸೃಷ್ಟಿಸಲಾದ 'ಕೃತಕ ಸಾಮಾಜಿಕ ಮಾದರಿ'  ಎಂದು ಇಂದಿನ ವಿಜ್ಞಾನ ಪರಿಗಣಿಸುತ್ತದೆ.

#Census #IndianPolitics #herbertrisle #peopleofindia #CasteCensus #british 

  .

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...