Skip to main content

4167.ಭಾರತೀಯ_ವಿಳ್ಯದೆಲೆಪೆರುದೇಶದ_ಕೋಕಾ_ಎಲೆಸಸ್ಯ_ಕುಟುಂಬ_ಬೇರೆ_ಆದರೂಬಳಕೆಯಲ್ಲಿ_ಸಾಮ್ಯತೆ_ಇದೆ.


ಭಾರತೀಯ_ವಿಳ್ಯದೆಲೆ
ಪೆರುದೇಶದ_ಕೋಕಾ_ಎಲೆ
ಸಸ್ಯ_ಕುಟುಂಬ_ಬೇರೆ_ಆದರೂ
ಬಳಕೆಯಲ್ಲಿ_ಸಾಮ್ಯತೆ_ಇದೆ.

#ಗಮನಿಸಿ.. ಚಾಕೊಲೇಟ್ ತಯಾರಿಸಲು ಬಳಸುವ ಕೋಕೋ - ಬೀಜಕ್ಕೂ, ಕೊಕೇನ್ ತಯಾರಿಸುವ ಕೋಕಾ ಎಲೆಗೂ ಯಾವುದೇ ಸಂಬಂಧವಿಲ್ಲ ಇವೆರಡೂ ಬೇರೆ ಬೇರೆ ಸಸ್ಯಗಳು.

 ಭಾರತ ವಿಶ್ವದ ಗೋಳದ ಈ ಭಾಗದಲ್ಲಿದೆ ಅದಕ್ಕೆ ಸರಿಯಾಗಿ ಇನ್ನೊಂದು ಭಾಗದಲ್ಲಿ ದಕ್ಷಿಣ ಅಮೇರಿಕಾದ ಪೆರು ದೇಶವಿದೆ

 ಪೆರುವಿನ ಇಂಕಾ ಜನರು ಸುಣ್ಣ ಹಚ್ಚಿ ಜಗಿಯುವ ಕೋಕಾ ಎಲೆ ಮತ್ತು ಭಾರತೀಯ ತಾಂಬೂಲದ ವೀಳ್ಯದೆಲೆಗಳ ಪ್ರಮುಖ ಸಾಮ್ಯತೆ

  ಎರಡೂ ಸಂಸ್ಕೃತಿಗಳಲ್ಲಿ ಈ ಎಲೆಗಳು ಆತಿಥ್ಯ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿ ಇವುಗಳ ನಡುವೆ ಪ್ರಮುಖ ಸಾಮ್ಯತೆ ಇದೆ.

 ದಕ್ಷಿಣ ಅಮೆರಿಕದ ಕೋಕಾ ಎಲೆ ಮತ್ತು ಭಾರತೀಯ ಸಂಸ್ಕೃತಿಯ ವೀಳ್ಯದೆಲೆ  ಸಸ್ಯಶಾಸ್ತ್ರೀಯವಾಗಿ ಬೇರೆ ಬೇರೆ ಕುಟುಂಬಗಳಿಗೆ ಸೇರಿದರೂ, ಅವುಗಳ ಬಳಕೆ, ಸಂಸ್ಕೃತಿ ಮತ್ತು ದೈಹಿಕ ಪರಿಣಾಮಗಳಲ್ಲಿ ಆಶ್ಚರ್ಯಕರವಾದ ಸಾಮ್ಯತೆಗಳಿವೆ.

 ಕೋಕಾ ಎಲೆ (ಅಂಡಿಸ್ ಪರ್ವತ ಪ್ರದೇಶ)ವೀಳ್ಯದೆಲೆ (ಭಾರತ / ದಕ್ಷಿಣ ಏಷ್ಯಾ) ಆಗಿದೆ,
ಸುಣ್ಣದ ಬಳಕೆ ವೀಳ್ಯದ ಎಲೆಗಳನ್ನು ಅಗಿಯುವಾಗ ಮತ್ತು ಕೋಕಾ ಎಲೆ ಜೊತೆ 'ಲಿಪ್ಟಾ' (ಕ್ಯಾಲ್ಸಿಯಂಯುಕ್ತ ಕ್ಷಾರ/ಸುಣ್ಣದ ಪುಡಿ) ಬಳಸುತ್ತಾರೆ.

 ಎಲೆಯ ರಸ ನರಮಂಡಲಕ್ಕೆ ಚೆನ್ನಾಗಿ ಇಳಿಯಲು ಮತ್ತು ಜೀರ್ಣಕ್ರಿಯೆಗೆ ಸುಣ್ಣ ಹಚ್ಚಿಯೇ ಅಗಿಯುತ್ತಾರೆ.

  ಅಗಿಯುವ ಪದ್ಧತಿಎಲೆಗಳನ್ನು ನುಂಗದೆ, ಕೆನ್ನೆಯ ಮೂಲೆಯಲ್ಲಿ ಗಂಟೆಗಟ್ಟಲೆ ಇಟ್ಟುಕೊಂಡು ಲಘುವಾಗಿ ರಸ ಹೀರುತ್ತಾರೆ,ತಾಂಬೂಲವಾಗಿ ಬಾಯಿಯ ಒಂದು ಬದಿಯಲ್ಲಿ ಇಟ್ಟುಕೊಂಡು ಅಗಿಯುತ್ತಾ ರಸ ಹೀರುವ ಪದ್ಧತಿ ಇದೆ.
 
  ಕೋಕಾ ಎಲೆ ಧಾರ್ಮಿಕ ಮತ್ತು ಪವಿತ್ರತೆ ಇಂಕಾ ಸಂಸ್ಕೃತಿಯಲ್ಲಿ ಪೂಜೆಗಳು,ಪಚಮಾಮ (ಭೂಮಿ ತಾಯಿ) ಪ್ರಾರ್ಥನೆಗೆ ಅನಿವಾರ್ಯ ಪವಿತ್ರ ವಸ್ತು.

   ಹಿಂದೂ ಧರ್ಮದಲ್ಲಿ ಪೂಜೆ, ಹವನ, ಶುಭ ಸಮಾರಂಭಗಳಲ್ಲಿ ವೀಳ್ಯದೆಲೆ ತಾಂಬೂಲ ಸಮರ್ಪಣೆ ಅತಿ ಪವಿತ್ರ.

  ಸಾಮಾಜಿಕ ಗೌರವಅತಿಥಿಗಳಿಗೆ, ಹಿರಿಯರಿಗೆ ಅಥವಾ ಸಮುದಾಯದ ಸಭೆಗಳಲ್ಲಿ ಎಲೆ ನೀಡುವುದು ಗೌರವದ ಸಂಕೇತ.

  ಮದುವೆ, ಸತ್ಕಾರ ಮತ್ತು ಹಬ್ಬಗಳಲ್ಲಿ ವೀಳ್ಯದೆಲೆ-ಅಡಿಕೆ (ತಾಂಬೂಲ) ನೀಡಿ ಆತಿಥ್ಯ ನೀಡುವುದು ಶಿಷ್ಟಾಚಾರ.

  ಅಲ್ಟಿಟ್ಯೂಡ್ ಸಿಕ್‌ನೆಸ್ (ಎತ್ತರದ ಪ್ರದೇಶದ ವಾಕರಿಕೆ/ತಲೆನೋವು) ಮತ್ತು ಶೀತ ತಡೆಯಲು ಕೋಕಾ ಎಲೆ ಪರಿಣಾಮಕಾರಿ.

  ಆಯುರ್ವೇದದಲ್ಲಿ ಶೀತ, ಕಫ, ಗಂಟಲು ನೋವು ಮತ್ತು ಬಾಯಿ ವಾಸನೆ ತಡೆಯಲು ವೀಳ್ಯದ ಎಲೆ ಉಪಯುಕ್ತ.

ಎರಡೂ ಸಂಸ್ಕೃತಿಗಳಲ್ಲಿ ಈ ಎಲೆಗಳು ಕೇವಲ ಗಿಡಮೂಲಿಕೆಯಾಗಿ ಉಳಿಯದೆ, ಜನರ ಸಾಮಾಜಿಕ ಬಾಂಧವ್ಯ, ಆತಿಥ್ಯ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿರುವುದು ಇವುಗಳ ನಡುವಿನ ಪ್ರಮುಖ ಸಾಮ್ಯತೆ.

  ವಾಲ್ಮೀಕಿ ರಾಮಾಯಣದಲ್ಲಿ ಇಲ್ಲದಿದ್ದರೂ, ನಂತರದ ಪ್ರಾದೇಶಿಕ ಪುರಾಣಗಳು ಮತ್ತು ಜನಪದ ರಾಮಾಯಣಗಳಲ್ಲಿ ವೀಳ್ಯದೆಲೆಯ ಪ್ರಸಿದ್ಧ ಕಥೆಯಿದೆ.

  ಅಶೋಕ ವನದಲ್ಲಿದ್ದ ಸೀತಾದೇವಿಯನ್ನು ಹನುಮಂತನು ಕಂಡು ಶ್ರೀರಾಮನ ಸಂದೇಶ ನೀಡಿದಾಗ, ಆ ಸಂತೋಷದ ಕ್ಷಣದಲ್ಲಿ ಹನುಮಂತನಿಗೆ ಆಶೀರ್ವಾದ ಮಾಡಲು ಹತ್ತಿರದಲ್ಲಿ ಹೂವುಗಳು ಸಿಗಲಿಲ್ಲ ಆಗ ಸೀತಾದೇವಿ ಅಲ್ಲಿದ್ದ ವೀಳ್ಯದೆಲೆಯ ಬಳ್ಳಿಯಿಂದ ಎಲೆಗಳನ್ನು ಕಿತ್ತು ಹನುಮಂತನ ತಲೆಯ ಮೇಲೆ ಹಾಕಿ ಆಶೀರ್ವದಿಸಿದಳೆಂಬ ನಂಬಿಕೆಯಿದೆ. 

 ಇದರಿಂದಾಗಿಯೇ ಇಂದಿಗೂ ಆಂಜನೇಯನಿಗೆ ವೀಳ್ಯದೆಲೆಯ ಮಾಲೆ ಅರ್ಪಿಸುವ ಸಂಪ್ರದಾಯ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿದೆ.

​ನಂತರದ ರಾಮಾಯಣಗಳು: ತುಳಸಿದಾಸರ 'ರಾಮಚರಿತಮಾನಸ' ಅಥವಾ ಕಂಬ ರಾಮಾಯಣದಂತಹ ನಂತರದ ಅವಧಿಯ ಭಕ್ತಿ ಸಾಹಿತ್ಯದಲ್ಲಿ ತಾಂಬೂಲ (ಪಾನ್) ಸೇವನೆಯ ರೂಪಕಗಳು ಮತ್ತು ಉಲ್ಲೇಖಗಳು ಅಲ್ಲಲ್ಲಿ ಕಂಡುಬರುತ್ತವೆ.

   ಪೆರು  ದೇಶದಲ್ಲಿ ಕೋಕಾ ಎಲೆಗೆ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ.

  ​ಇಂಕಾ ಸಾಮ್ರಾಜ್ಯದ ಸಂಸ್ಕೃತಿಯಲ್ಲಿ ಕೋಕಾ ಎಲೆಯನ್ನು ದೈವಿಕ ಕೊಡುಗೆ ಎಂದು ಪರಿಗಣಿಸಲಾಗುತ್ತಿತ್ತು.

  ಇದನ್ನು ಧಾರ್ಮಿಕ ವಿಧಿವಿಧಾನಗಳಲ್ಲಿ ಮತ್ತು 'ಪಚಮಾಮ' (ಭೂಮಿ ತಾಯಿ) ದೇವತೆಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

​ ಅಂಡಿಸ್ ಪರ್ವತ ಪ್ರದೇಶದ ಸಮುದಾಯಗಳಲ್ಲಿ ಪರಸ್ಪರ ಶುಭಾಶಯ ಕೋರಲು, ಒಪ್ಪಂದಗಳನ್ನು ಗೌರವಿಸಲು ಅಥವಾ ಸಭೆ-ಸಮಾರಂಭಗಳಲ್ಲಿ ಕೋಕಾ ಎಲೆಗಳನ್ನು ಹಂಚಿಕೊಳ್ಳುವುದು ಒಂದು ಗೌರವದ ಸಂಕೇತ ಇದು ಭಾರತೀಯರಲ್ಲಿ ವೀಳ್ಯದೆಲೆಗೆ ಇದೇ ಸ್ಥಾನಮಾನವಿದೆ.

   ಸ್ಥಳೀಯರು ಎಲೆಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಅಗಿಯುತ್ತಾರೆ ಇದು ಹಸಿವು, ಆಯಾಸ ಮತ್ತು ತೀವ್ರ ಬಾಯಾರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

​ ಅಂಡಿಸ್ ಪರ್ವತಗಳ ಅತಿ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆಯಿಂದ ತಲೆನೋವು, ವಾಕರಿಕೆ ಉಂಟಾಗುತ್ತದೆ ಇದನ್ನು ನಿವಾರಿಸಲು ಕೋಕಾ ಎಲೆಗಳಿಂದ ತಯಾರಿಸಿದ 'ಮೇಟ್ ಡಿ ಕೋಕಾ' ಎಂಬ ಗಿಡಮೂಲಿಕೆ ಚಹಾವನ್ನು ಕುಡಿಯುವುದು ಅತ್ಯಂತ ಜನಪ್ರಿಯ.

 ಜೀರ್ಣಕ್ರಿಯೆ ಸುಧಾರಿಸಲು ಮತ್ತು ನೈಸರ್ಗಿಕ ಶಕ್ತಿವರ್ಧಕವಾಗಿ ಇದನ್ನು ಬಳಸಲಾಗುತ್ತದೆ.

  ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳೂ ಇವೆ.

​  ಪೆರುವಿನಲ್ಲಿ ಸಾಂಪ್ರದಾಯಿಕ ರೂಪದಲ್ಲಿ ಕೋಕಾ ಎಲೆಗಳನ್ನು ಬೆಳೆಯುವುದು, ಮಾರಾಟ ಮಾಡುವುದು ಮತ್ತು ಚಹಾ ರೂಪದಲ್ಲಿ ಬಳಸುವುದು ಸಂಪೂರ್ಣವಾಗಿ ಕಾನೂನುಬದ್ಧ.

  ನೈಸರ್ಗಿಕ ಕೋಕಾ ಎಲೆಯು ಅತ್ಯಂತ ಕಡಿಮೆ ಪ್ರಮಾಣದ (ಸುಮಾರು 0.5% ರಿಂದ 1%) ಕೋಕೇನ್ ಆಲ್ಕಲಾಯ್ಡ್‌ಗಳನ್ನು ಹೊಂದಿರುತ್ತದೆ.

  ರಾಸಾಯನಿಕ ಪ್ರಕ್ರಿಯೆಯ ಮೂಲಕ ಸಂಸ್ಕರಿಸಿದಾಗ ಮಾತ್ರ ಅದು ಮಾದಕವಸ್ತು ಕೊಕೇನ್ ಆಗಿ ಪರಿವರ್ತನೆಯಾಗುತ್ತದೆ.

 ಪೆರುವಿನ ಜನರು ನೈಸರ್ಗಿಕ ಕೋಕಾ ಎಲೆಯನ್ನು ಮಾದಕವಸ್ತು ಎಂದು ಪರಿಗಣಿಸದೆ ಪವಿತ್ರ ಗಿಡಮೂಲಿಕೆ ಎಂದೇ ಗೌರವಿಸುತ್ತಾರೆ.

 ಪೆರುವಿನಲ್ಲಿ ಇದು ಕಾನೂನುಬದ್ಧವಾಗಿದ್ದರೂ, ವಿಶ್ವಸಂಸ್ಥೆಯ ನಿಯಮಾವಳಿಗಳ ಪ್ರಕಾರ ಇತರ ಹಲವು ದೇಶಗಳಿಗೆ (ಭಾರತ ಸೇರಿದಂತೆ) ಕೋಕಾ ಎಲೆಗಳನ್ನು ಅಥವಾ ಅದರ ಚಹಾವನ್ನು ಕೊಂಡೊಯ್ಯುವುದು ನಿಷೇಧಿಸಲಾಗಿದೆ.

ಪೆರುವಿನ ಕೋಕಾ ಎಲೆಯ ಗುಣಲಕ್ಷಣಗಳಿಗೆ ಹತ್ತಿರವಿರುವ ಅದೇ ಕುಟುಂಬದ ಸಸ್ಯ ಭಾರತದ ಕೆಂಪು ದೇವದಾರು / ಕಾಡು ಹರಳು ಇದು ಪೆರುವಿನ ಕೋಕಾ ಗಿಡ ಇರುವ ಅದೇ Erythroxylaceae ಕುಟುಂಬಕ್ಕೆ ಸೇರಿದ ಭಾರತೀಯ ಮೂಲದ ಗಿಡ.

 ದಕ್ಷಿಣ ಭಾರತದ (ಕರ್ನಾಟಕ, ಆಂಧ್ರ, ತಮಿಳುನಾಡು) ಶುಷ್ಕ ಅರಣ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

​ ಬರಗಾಲದ ಸಮಯದಲ್ಲಿ ಹಸಿವು ಮತ್ತು ಆಯಾಸವನ್ನು ನಿಯಂತ್ರಿಸಲು ಗ್ರಾಮೀಣ ಜನರು ಇದರ ಎಲೆಗಳನ್ನು ಅಗಿಯುತ್ತಿದ್ದರು.

  ಆದ್ದರಿಂದ ಇದನ್ನು ಬ್ರಿಟಿಷರ ಕಾಲದಲ್ಲಿ "ಬಾಸ್ಟರ್ಡ್ ಕೋಕಾ"  ಎಂದೂ ಕರೆಯಲಾಗುತ್ತಿತ್ತು. ಆದಾಗ್ಯೂ ಇದರಲ್ಲಿ ಪೆರುವಿನ ಕೋಕಾದಲ್ಲಿರುವಂತಹ ಮಾದಕ ಕೊಕೇನ್ ಆಲ್ಕಲಾಯ್ಡ್ ಇರುವುದಿಲ್ಲ.

​ ವೀಳ್ಯದೆಲೆ ​ಬಳಕೆಯ ಸಾಮ್ಯತೆ ಅಂಡಿಸ್ ಪರ್ವತವಾಸಿಗಳು ಸುಣ್ಣದ ಜೊತೆ ಕೋಕಾ ಎಲೆ ಅಗಿಯುವಂತೆಯೇ ಭಾರತದಲ್ಲಿ ಸುಣ್ಣ ಮತ್ತು ಅಡಿಕೆಯೊಂದಿಗೆ ವೀಳ್ಯದೆಲೆಯನ್ನು ತಾಂಬೂಲವಾಗಿ ಅಗಿಯಲಾಗುತ್ತದೆ.

  ಹಾಗೆಯೇ ಅಶ್ವಗಂಧವು ದೇಹದಲ್ಲಿ ತ್ರಾಣ , ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಶಕ್ತಿವರ್ಧಕವಾಗಿ ಆಯುರ್ವೇದದಲ್ಲಿ ಕೆಲಸ ಮಾಡುತ್ತದೆ.

​  ಹಿಮಾಲಯದಲ್ಲಿ ಕಂಡುಬರುವ ಸೋಮಲತೆ  ಸಸ್ಯದಲ್ಲಿ ಎಫೆಡ್ರಿನ್ ಇದ್ದು, ಕೋಕಾದಂತೆಯೇ ತೀವ್ರ ಉಸಿರಾಟ ಸುಲಭಗೊಳಿಸುವ ಮತ್ತು ಹೃದಯ ಬಡಿತ ಹೆಚ್ಚಿಸುವ ಗುಣ ಹೊಂದಿದೆ ಆದರೆ ಇದನ್ನು ವೈದ್ಯಕೀಯ ನಿಯಂತ್ರಣವಿಲ್ಲದೆ ಬಳಸುವುದು ಅಪಾಯಕಾರಿ.

ಕೊಕೇನ್ ಅನ್ನು ಕೋಕಾ ಎಲೆಯಿಂದಲೇ ತಯಾರಿಸುತ್ತಾರೆ
​ಆದರೆ ನೈಸರ್ಗಿಕ ಎಲೆ ಮತ್ತು ಸಂಸ್ಕರಿಸಿದ ಕೊಕೇನ್ ನಡುವೆ ದೊಡ್ಡ ವ್ಯತ್ಯಾಸವಿದೆ.

​ , ಕೊಕೇನ್‌ನ ಮೂಲ ಕಚ್ಚಾ ವಸ್ತು ಕೋಕಾ ಎಲೆಯೇ ಆಗಿದೆ ಆದರೆ ಅದು ಸಂಕೀರ್ಣ ರಾಸಾಯನಿಕ ಪ್ರಕ್ರಿಯೆಗೆ ಒಳಗಾದಾಗ ಮಾತ್ರ ಅಪಾಯಕಾರಿ ಮಾದಕದ್ರವ್ಯವಾಗುತ್ತದೆ.

​  ಉತ್ತರ ಪೆರುವಿನಲ್ಲಿ ಕಂಡುಬರುವ ಕೋಕಾ ಎಲೆಗಳ ಕುರುಹುಗಳು 8,000 ವರ್ಷಗಳ ಹಿಂದಿನಿಂದ ಕೋಕಾವನ್ನು ಸುಣ್ಣದೊಂದಿಗೆ ಸಾಮೂಹಿಕವಾಗಿ ಅಗಿಯುತ್ತಿದ್ದವು ಎಂದು ಹೇಳುತ್ತದೆ.
 
ವೀಳ್ಯದ ಎಲೆಯ ಪ್ರಾಥಮಿಕ ಬಳಕೆಯು ಸುಮಾರು 5,000 ವರ್ಷಗಳ ಹಿಂದೆ ಫಿಲಿಪೈನ್ಸ್‌ನಲ್ಲಿ ಹುಟ್ಟಿಕೊಂಡಿದೆ ಎಂದು ಭಾವಿಸಲಾಗಿದೆ ಅಲ್ಲಿ ಪುಡಿಮಾಡಿದ ಸಮುದ್ರ ಚಿಪ್ಪುಗಳಿಂದ ಅಡಿಕೆ ಬೀಜಗಳು ಮತ್ತು ಕ್ಯಾಲ್ಸಿಯಂನ ಅತ್ಯಂತ ಹಳೆಯ ಅವಶೇಷಗಳು ಡುಯೋಂಗ್ ಗುಹೆ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ಕಂಡುಬಂದಿವೆ.

  ನಮ್ಮ ವೀಳ್ಯದೆಲೆ ಮತ್ತು ಪೆರುವಿನ ಕೋಕಾ ಎಲೆ ಸಾಮ್ಯತೆ ಬಗ್ಗೆ ನಿಮಗೆ ಏನು ಅನ್ನಿಸಿತು ನಿಮ್ಮ ಅನಿಸಿಕೆ ಬರೆಯಿರಿ ಮತ್ತು ಈ ಲೇಖನ ತಾಂಬೂಲ ಪ್ರಿಯರಿಗೆ ಶೇರ್ ಮಾಡಿ ಅವರ ಅಭಿಪ್ರಾಯ ಕೇಳಿ.

#beetal #panmasala #tamboolam  #Coca 
#peru #southamerica #traditional #ವೀಳ್ಯದಎಲೆ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...