Skip to main content

Posts

Showing posts from October, 2022

Blog number 1044. ತೊಂದರೆ ಕೊಡುವವರೂ ಸಮಾಜದಲ್ಲಿರುವಂತೆ ಆಪತ್ಕಾಲದಲ್ಲಿ ಸಹಾಯ ಮಾಡುವ ದೈವ ಸಮಾನರೂ ಇರುತ್ತಾರೆ ಅಂತವರಲ್ಲಿ ಶಿವಮೊಗ್ಗದ ಪ್ರಖ್ಯಾತರಾದ ಮಧು ಲಾಯರ್, ರವಿಬೆಳೆಗೆರೆಯವರ ಪ್ರಾರ್ಥನಾ ಶಾಲೆ ಸಿಇಒ ಉಮೇಶ್ ಹೆಗ್ಗಡೆ, ಅಬ್ಬಲಗೆರೆ ಎಸ್ಸಾರ್ ಪೆಟ್ರೋಲ್ ಪಂಪ್ ಗಂಗಾದರ್ ಹಂದಿಗೋಳ್ ಮತ್ತು ಶಿವಮೊಗ್ಗ ಕೆ.ಎಸ್.ಎಫ್.ಸಿ. ಉದ್ಯೋಗಿ ಶಾಲಾ ಸಹಪಾಠಿ ದಾಸಕೊಪ್ಪ ನಾಗರಾಜ್ ರ ಉಪಕಾರ ಜೀವಮಾನದಲ್ಲಿ ಮರೆಯಲಾರೆ.

#ಶಿವಮೊಗ್ಗದ_ಪ್ರಖ್ಯಾತ_ವಕೀಲರಾದ_ಮದುಲಾಯರ್. #ತೊಂದರೆ_ಕೊಡುವವರೂ_ಸಮಾಜದಲ್ಲಿ_ಇರುವಂತೆ_ಸಹಾಯ_ಮಾಡುವವರೂ_ಇರುತ್ತಾರೆ. #ಜಿಲ್ಲಾಪಂಚಾಯತ್_ಸದಸ್ಯ_ಅವಧಿ_ಮುಗಿಯುವಾಗ_ಅಕ್ಷರಶಃ_ಪಾಪರ್_ಆಗಿದ್ದೆ. #ಉಪಕಾರ_ಮಾಡಿದವರ_ಸ್ಮರಿಸಲೇ_ಬೇಕು #ರವಿಬೆಳೆಗೆರೆಯ_ಪ್ರಾರ್ಥನಾ_ಶಾಲೆ_ಸಿಇಓ_ಉಮೇಶ್_ಹೆಗಡೆ. #ಅಬ್ಬಲಗೆರೆಯ_ಪೆಟ್ರೋಲ್_ಬಂಕ್_ಮಾಲಿಕರಾದ_ಗಂಗಾದರ್_ಹಂದಿಗೋಳ್ #ದಾಸಕೊಪ್ಪ_ನಾಗರಾಜ್_ಕೆ_ಎಸ್_ಎಪ್_ಸಿ_ಶಿವಮೊಗ #ಆಪತ್_ಕಾಲದಲ್ಲಿ_ಆಪತ್ಬಾ೦ದವರ_ನೆನಪಿನ_ಆಪ್ತ_ಲೇಖನ_ಪುನಃ_ಪುನಃ_ಓದುವಂತೆ_ಮಾಡುತ್ತದೆ. #ಸಹಾಯ_ಪಡೆದವರೂ_ಗೆಳೆಯರೂ_ಹಣ_ಅಧಿಕಾರ_ಕಳೆದುಕೊಂಡ_ಮಿತ್ರನಿಂದ_ದೂರವಾಗಿದ್ದ_ಕಾಲ   ಶಿವಮೊಗ್ಗದ ಪ್ರಖ್ಯಾತ  ಮದು ಲಾಯರ್  ಅವರ FBಯಲ್ಲಿ ತಮ್ಮ ಮತ್ತು ತಮ್ಮ ಶ್ರೀಮತಿಯೊಂದಿಗಿನ ಬಾವ ಚಿತ್ರ ಹಾಕಿದ್ದು ನೋಡಿ ನನ್ನ ನೆನಪು 25 ವರ್ಷದ ಹಿಂದಕ್ಕೆ ಓಡಿತು.   ನನ್ನ ಅನೇಕ ಸಂಕಷ್ಟಗಳಿಗೆ ಆಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಕಾರಣ ಆಗಿತ್ತು.   ಬಂಗಾರಪ್ಪನವರು ನನಗೆ ನೀಡಿದ ಪ್ರೋತ್ಸಾಹ ಕಾಗೋಡು ತಿಮ್ಮಪ್ಪರನ್ನ ಕೆರಳಿಸಿತು, ಅವರ ಸುತ್ತಲೂ ಇದ್ದವರು ನನ್ನ ಮೇಲೆ ಮುರುಕೊಂಡು ಬಿದ್ದ ಪರಿ ಇತ್ತಲ್ಲ ಅದನ್ನು ಜೀವಮಾನದಲ್ಲಿ ಮರೆಯಲಾರದ ದಿನಗಳು.    ಮಂತ್ರಿಗಳ ಅಧಿಕಾರದ ಪ್ರಬಾವಲಯದಲ್ಲಿರುವ ಅವರ ಹಿಂಬಾಲಕರು ಅಧಿಕಾರ ಬಳಸಿಕೊಂಡು ದ್ವೇಷ ಸಾಧನೆ ಮಾಡಿದರೆ, ಅದಕ್ಕೆ ಅಧಿಕಾರಿಗಳೂ ಒಲೈಸುತ್ತಾ ಸಾಥ್ ನೀಡಿ  ಮಂತ್ರಿಗಳಿಂದ ಲಾಭ ಪಡೆಯಲು

Blog number 1043. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ಗೆ ಮಾತ್ರ ಸೀಮಿತವಾಗಬಾರದು, ಕನ್ನಡದ ಬಗ್ಗೆ ರೋಷಾವೇಷದ ಉದ್ದುದ್ದ ಬಾಷಣ ಮಾಡುವ ಕನ್ನಡದ ಹೋರಾಟಗಾರರೆ ನಿಮ್ಮ ಮಕ್ಕಳಿಗೆ ಕನಿಷ್ಟ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣ ಕೊಡಿಸಿದ್ದೀರಾ? ಮಾತಲ್ಲಿ ಕನ್ನಡ ನಡೆಯಲ್ಲಿ ಇಂಗ್ಲೀಷ್ ಹೀಗಾದರೆ ಕನ್ನಡ ಭಾಷೆ ಉಳಿದೀತೆ?, 2022 ರ ಕನ್ನಡ ರಾಜ್ಯೋತ್ಸವ ಸಕಾ೯ರಿ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣದ ಅಭಿಯಾನವಾಗಲಿ.

   ನನ್ನ ಬಹಳಷ್ಟು ಗೆಳೆಯರು ಕನ್ನಡ ಅಭಿಮಾನಿಗಳು, ಕನ್ನಡ ಕಡ್ಡಾಯ ಅಂತೆಲ್ಲ ಹೋರಾಟ ಮಾಡುವ ವಿಚಾರವಂತರು, ಸಾಹಿತಿಗಳು, ಪತ್ರಕರ್ತರು, ಲೇಖಕರು, ಕನ್ನಡ ಶಾಲೆ ಶಿಕ್ಷಕರು ಅವರೆಲ್ಲರ ಪ್ರಭಾವದಿಂದ ನನ್ನ ಮಕ್ಕಳನ್ನು ಸರ್ಕಾರಿ ಅಂಗನವಾಡಿಯಿಂದ ಪಿಯು ತನಕ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ಓದಿಸಿದೆ, ಆದರೆ ಕನ್ನಡದ ಹೋರಾಟಗಾರ ಗೆಳೆಯರು ಖಾಸಾಗಿ ಕಾನ್ವೆಂಟ್ ನಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಿದರು... ಅಲ್ಲ ನಿಮ್ಮೆಲ್ಲ ಹೋರಾಟ ಕನ್ನಡದ ಅಭಿಮಾನ ಇದೇನಾ? ಅಂದಿದ್ದಕ್ಕೆ ಕನ್ನಡ ಮಾಧ್ಯಮ - ಸರ್ಕಾರಿ ಶಾಲೆಯಲ್ಲಿ ಎಕ್ಸ್ ಪೋಜರ್ ಸಿಗೋದಿಲ್ಲ ಅಂತಾರೆ.     ಇದರಿಂದ  ಒಂದು ಅನುಕೂಲ ಆಗಿದೆ ನನ್ನ ಮಕ್ಕಳು ಕನ್ನಡದ ಸಾಹಿತ್ಯ ಎಲ್ಲಾ ಓದುತ್ತಾರೆ ನಾನು ಬರೆದ ಪುಸ್ತಕ ಲೇಖನ ವಿಮರ್ಶೆ ಮಾಡುತ್ತಾರೆ ಆದರೆ ನನ್ನ ಕನ್ನಡ ಅಭಿಮಾನಿ ಇಂಗ್ಲೀಷ್ ಕಾರ್ಯಕಾರಿಣಿ ಮಿತ್ರರ ಮಕ್ಕಳು ಕನ್ನಡ ಸಾಹಿತ್ಯನೂ ಓದುವುದಿಲ್ಲ, ಇಂಗ್ಲೀಷ್ ಸಾಹಿತ್ಯವನ್ನು ಓದುವುದಿಲ್ಲ ಅಷ್ಟೆ ಅಲ್ಲ ಅವರ ಅಪ್ಪಂದಿರ ಪುಸ್ತಕ ಬರಹವೂ ಓದುವುದಿಲ್ಲ!!.   ಹೋರಾಟ ಬಾಯಲ್ಲಿ ಮಾತ್ರ ಮಾಡುವ ಆದರೆ ಕೃತಿಯಲ್ಲಿ ಬೇರೆ ಮಾಡುವ ಓರಾಟಗಾರರ ಬಗ್ಗೆ ಬರೆಯಲೇ ಬೇಕು, ನಮ್ಮ ಕನ್ನಡ ಸಕಾ೯ರಿ ಶಾಲೆ ಶಿಕ್ಷಕರು ಕೂಡ ಅವರೇ ಪಾಠ ಮಾಡುವ ಶಾಲೆಯಲ್ಲಿ ಅವರ ಮಕ್ಕಳನ್ನೆ ಸೇರಿಸುವುದಿಲ್ಲ, ಇದೆಲ್ಲದರಿಂದ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚ

Blog number 1042. ಪ್ರೀತಿಗೆ ರಂಗೋಲಿ ಕಾರಣವಾದರೆ.. ಸಾವಿಗೆ ಜಾತಿ ಕಾರಣ.. ಎಂಬ ಶಿಷಿ೯ಕೆ ನೀಡಿ ನನ್ನ ಚೊಚ್ಚಲ ಕಾದಂಬರಿ ಕೆಳದಿ ಸಾಮ್ರಾಜ್ಯ ಮರೆತ ಬೆಸ್ತರ ರಾಣಿ ಚಂಪಕ ಓದಿ ವಿಮರ್ಶೆ ಮಾಡಿದ್ದಾರೆ ಪರಮಾನಂದ. ಇವರು ಖ್ಯಾತ ನಿರ್ದೇಶಕ ನಾಗಭರಣರ ಒಡನಾಡಿಗಳು.. ಒಂದು ಸಣ್ಣ ಪುಸ್ತಕ ಇಷ್ಟೆಲ್ಲ ಪರಿಣಾಮ ಬೀರುತ್ತೆ ಅಂತ ಕನಸಲ್ಲು ಕಂಡಿರಲಿಲ್ಲ.

#ಪರಮಾನಂದ_ಎಂ_ಎಸ್_ನಾಗಾಭರಣ_ನಾಗತಿಹಳ್ಳಿ_ಒಡನಾಟದವರು  ಸಿನಿಮಾ ಕ್ಷೇತ್ರದಂತೆ ರಾಜಕೀಯದಲ್ಲಿ ಬಿಜೆಪಿಯ ಎಸ್.ಸಿ.ಮೋಚ೯ದ ರಾಜ್ಯ  ಕಾಯ೯ದರ್ಶಿ ಮೈಸೂರಿಗರು ಅವರಿಗೆ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ತುಂಬಾ ಮೆಚ್ಚುಗೆ ಆಗಿದೆ ಅಂತ ಹೇಳಿದ್ದಾರೆ ಅವರ ವಿಮಷೆ೯ ಇನ್ನೂ ಬಂದಿಲ್ಲ ಆದರೆ ಅವರ ಮೆಚ್ಚುಗೆಯ ಈ ಮಾತುಗಳನ್ನು ದಾಖಲಿಸಿದ್ದಾರೆ. ನಾನು ಓದಿದ ಪುಸ್ತಕಗಳಲ್ಲಿ ಬಹಳ ಮೆಚ್ಚುಗೆಯ ಪುಸ್ತಕವಿದು...  ಇದು ಕೇವಲ ಕಾಲ್ಪನಿಕ ಕಾದಂಬರಿಯಲ್ಲ...  1) ಇತಿಹಾಸದ ದಾಖಲೆ  2) ಮುಗ್ದ ಸುಂದರಿ ಒಬ್ಬಳ 'ಆತ್ಮ' ಚರಿತ್ರೆ  3) ಹಿಂದುಳಿದ ಸಮುದಾಯ ಒಂದರ ನೋವಿನ ಕಥೆ  4) ಸುಳ್ಳಿಗೆ ಬಲಿಯಾದ ಒಂದು ಅಸಹಾಯಕ ಸತ್ಯಕತೆ  5) ವೀರನೊಬ್ಬನ ನಿಷ್ಕಲ್ಮಶ ಪ್ರೇಮಕಥೆ  6) ಇಂದು ಮಾಧ್ಯಮಗಳಂತೆ ಅಂದು ಮಧ್ಯಸ್ಥಿಕೆ ಜನರ ಸುಳ್ಳಿನ ವಿಷ ಸಾಂಕ್ರಾಮಿಕ ಕಥೆ. 7) ಸುಂದರಿ ಒಬ್ಬಳ ಪ್ರೀತಿಗೆ ರಂಗೋಲಿ ಕಾರಣವಾದರೆ, ಸಾವಿಗೆ ಜಾತಿ ಕಾರಣ.  ನನಗೆ ಈ ಪುಸ್ತಕದಿಂದ ಒಂದು ಒಳ್ಳೆಯ ಕಥೆ ಸಿಕ್ಕರೆ, ಅದರ ಜೊತೆಗೆ ಸರಳ ಸುಂದರ ಬರಹಗಾರರು ಸಿಕ್ಕರು.  ಶ್ರೀ ಅರುಣ್ ಪ್ರಸಾದ್‌ರವರು ತಮ್ಮ ಬರಹಗಳ ಸರಣಿಗಳ ಮೂಲಕ ಸಾಹಿತ್ಯ ಲೋಕದೊಳಗೆ ಬರಬೇಕೆಂಬುದು ನನ್ನ ವೈಯಕ್ತಿಕ ಆಗ್ರಹಪೂರ್ವಕ ಮನವಿ.  'ಇದು ಅಕ್ಷರಗಳಿಂದ ದ್ರಶ್ಯಕ್ಕೆ ಬರಲಿ ಸಾವಿರಾರು ಜನಕ್ಕೆ ಸತ್ಯ ತಿಳಿಯಲಿ' ಎಂಬುದು ನನ್ನ ಆಶಯ.  ಧನ್ಯವಾದಗಳು... 🙏🙏🙏

Blog number 1041. ಆಹಮ್ಮದ್ ಆಲೀ ಖಾನ್ ಸಾಹೇಬರು ಮೂರು ವರ್ಷದ ಹಿಂದೆ ಇದೇ ದಿನ ನಮ್ಮಲ್ಲಿಗೆ ಬಂದಿದ್ದರು ಅವರು ಈಗ ಇಲ್ಲ ಅವರ ನೆನಪು ನಾವು ಮರೆತಿಲ್ಲ

    ನಮ್ಮ ಹೊಸ ಕಚೇರಿಗೆ ಆಗಮಿಸಿದ ನನ್ನ ನೆಚ್ಚಿನ ನಾಯಕರಾದ ಆಹಮದ್ ಆಲೀ ಖಾನ್ ಸಾಹೇಬರ ನೆನಪುಗಳು   28 ಅಕ್ಟೋಬರ್ 2019 ರಂದು ಸಂಜೆ ಖಾನ್ ಸಾಹೇಬರು ಅವರ ಮಗ ಮತ್ತು ನನ್ನ ಕ್ಲಾಸ್ ಮೇಟ್ ಮೋಹಿಸಿನ್ ಆಲೀ ಖಾನ್ ಮತ್ತು ಮೊಹಿಸಿನ್ಅವರ ಮಗನ ಜೊತೆ ಬಂದಿದ್ದರು.    ಸಾಗರದ ಆಹಮದ್ ಆಲೀ ಖಾನ್ ಸಾಹೇಬರ ಜೀವನದ ಬಗ್ಗೆ ಬರೆದರೆ ಒಂದು ಸ್ವಾರಸ್ಯಕರವಾದ ಗ್ರ೦ಥವೇ ಆದೀತು, 1978-79ರಲ್ಲಿ ಸಾಗರದ ನಿಮ೯ಲ ಹೈಸ್ಕೂಲ್ ಎದರು ಜನತಾ ಪಕ್ಷದ ಸಾಗರದ ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪ ಜನತಾ ಪಕ್ಷ ತೊರೆದು ಕಾ೦ಗ್ರೇಸ್ ಸೇರುವ ಸಭೆ ಇದೆ ಅಂತ ಸಾವ೯ಜನಿಕ ಪ್ರಕಟನೆ ಕೇಳಿ ಮುನ್ಸಿಪಲ್ ಹೈಸ್ಕೂಲ್ ನ 8ನೇ ತರಗತಿಗೆ ಚಕ್ಕರ್ ಹೊಡೆದು ಈ ಸಭೆ ನೋಡಲು ಹೋಗಿದ್ದೆ, ಅಲ್ಲಿ ಕಾಗೋಡು ಜನತಾ ಪಕ್ಷದವರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಭಾಷಣ ಮಾಡಿದ್ದು ಮತ್ತು ಖಾನ್ ಸಾಹೇಬರು ಅವರನ್ನ ಕಾಂಗ್ರೇಸ್ ಗೆ ಸೇರಿಸಿಕೊಂಡ ಕ್ಷಣ ಜನರ ಚಪ್ಪಾಳೆ ಅಭೂತ ಪೂವ೯ ಬೆಂಬಲದ ಕ್ಷಣ ಅವತ್ತು 15 ವಷ೯ ಪ್ರಾಯದ ನನ್ನ ಮೆದುಳಲ್ಲಿ ಅಚ್ಚಳಿಯದೆ ಉಳಿದಿದೆ.   ಆಗ ದೇಶದ ಪ್ರದಾನಿ ಇಂದಿರಾ ಗಾಂಧಿ ನನ್ನ ಮೂರನೆ ಮಗ ಎನ್ನುತ್ತಿದ್ದ ಮಡಿಕೆರೆಯ ಎಪ್.ಎಂ.ಖಾನ್ ಮತ್ತು ಸಾಗರದ  ಆಹಮದಾಲಿ ಖಾನ್ ಖಾಸಾ ಖಾಸಾ, ಗುಂಡುರಾವ್ ರನ್ನ ಮುಖ್ಯಮಂತ್ರಿ ಮಾಡಿದ್ದರಿಂದ ಸೊರಬದ ಬಂಗಾರಪ್ಪ ದೂರ ಆಗಿದ್ದರು ಆಗ ಸಾಗರದ ಶಾಸಕರು ಕಾ೦ಗ್ರೇಸ್ ನ ಎಲ್.ಟಿ. ತಿಮ್ಮಪ್ಪ ಹೆಗ

Blog number 1040. ಸಾಗರದ ಜೀವವಿಮಾ ಕ್ಷೇತ್ರದಲ್ಲಿ ದಾಖಲೆ ಮಾಡಿದ್ದ ಗಂಗಾದರ್ ನಾಯಕರಿಗೆ ಅಶ್ರುತರ್ಪಣಗಳು.

#ಸಾಗರದ_ಜೀವವಿಮಾ_ಗಂಗಾಧರ್_ನಾಯಕರಿಗೆ_ಅಶ್ರು_ತರ್ಪಣಗಳು. #ಅವರ_ಕೊನೆಯ_ಆಸೆ_ಈಡೇರಿಸದ_ಅಸಾಹಯಕತೆ_ನನ್ನದು. #ಕುಂದಾಪುರದ_ಬಸ್ರೂರಿನಿಂದ_ಸಾಗರಕ್ಕೆ_ಬಂದು_ಜೀವನ_ಕಟ್ಟಿಕೊಂಡ_ಶ್ರಮಿಕರು. #ಪೇಸ್_ಬುಕ್_ಮೂಲಕ_ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರಾಗಿದ್ದರು.       ಕರಾವಳಿಯಿಂದ ಘಟ್ಟ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯವಹಾರದಿಂದ ಸ್ಥಳಿಯರೇ ಆದ ಸಾವಿರಾರು ಜನರಿದ್ದಾರೆ.     ಇದರಲ್ಲಿ  LIC ಗ೦ಗಾಧರ್ ನಾಯಕ್ ಅಂದರೆ ಸಾಗರ ಪೇಟೆ ಮತ್ತು ಸಾಗರ ಗ್ರಾಮಾಂತರದಲ್ಲಿ ಪ್ರಸಿದ್ಧರು, ಗ್ರಾಮೀಣ ಪ್ರದೇಶದ ದೊಡ್ಡ ದೊಡ್ಡ ಅಡಿಕೆ ಬೆಳೆಗಾರರಿಗೆ ಗಂಗಾದರ್ ನಾಯಕ್ ರು ಜೀವ ವಿಮಾ ಯೋಜನೆಗಳಿಂದ ಚಿರಪರಿಚಿತರು, LIC ಚೇರ್ಮನ್ ಕ್ಲಬ್ ಸದಸ್ಯರು.   ಯಕ್ಷಗಾನ - ಕೃಷಿ- ಉಳಿತಾಯದ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಗಂಗಾದರ್ ನಾಯಕ್ ರು ಕನ್ನಡ ಸಾಹಿತ್ಯಾಸಕ್ತರು ಇವರಿಗೆ ಓದುವ ಹವ್ಯಾಸ ಜಾಸ್ತಿ, ಸಾಮಾಜಿಕ ಜಾಲ ತಾಣದಲ್ಲಿ ತರ್ಕಬದ್ದ ಚರ್ಚೆಯಲ್ಲಿ ಯಾವತ್ತೂ ಮುಂದಿದ್ದರು.   ಎರೆಡು ಬಾರಿ ನನ್ನ ಕಛೇರಿಗೆ ದಂಪತಿ ಸಮೇತ ಬಂದು ಕುಶಲೋಪರಿ ಜೊತೆ ಅನೇಕ ವಿಚಾರ ವಿನಿಮಯ ಮಾಡಿದ್ದರು.    ಅವರು ಕುಂದಾಪುರ ಸಮೀಪದ ಬಸ್ರೂರಿನವರು, ತಂದೆ ತಾಯಿಗಳು ನಡೆಸುತ್ತಿದ್ದ ಸಣ್ಣ ಹೋಟೆಲ್, ವಿಧ್ಯಾಬ್ಯಾಸದ ನಂತರ ತಾಯಿ ಒತ್ತಾಯದಿಂದ ಅವರು ನೀಡಿದ ಸ್ವಲ್ಪ ಹಣದಲ್ಲಿ ಸಾಗರ ತಲುಪಿ ತಮ್ಮ

Blog number 1039. ಪಶ್ಚಿಮ ಘಟ್ಟದ ಅಡಿಕೆ ಮರಕ್ಕೆ ಹಬ್ಬಿಸಿರುವ ವೀಳ್ಯದ ಎಲೆ ಬಳ್ಳಿಯಿಂದ ಎಲೆ ಕೊಯಿಲು ಮಾಡಲು ಬಳಸುವ ವಿಶೇಷ ರೀತಿಯ ವೀಳ್ಯದ ಎಲೆ ಕತ್ತಿ

#ವೀಳೆಯದ ಎಲೆ ಕತ್ತಿ,Betel leaves knife#  ಹಲವಾರು ರೀತಿಯ ಕತ್ತಿ ದೈನಂದಿನ ಜೀವನದಲ್ಲಿ ನೋಡಿದ್ದೇನೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆದರೆ ಈ ಕತ್ತಿ ನೋಡಿದ್ದು ಮಾತ್ರ ಇತ್ತೀಚಿಗೆ     ಹೊಸನಗರದ ಬಿಲ್ ಸಾಗರದ ವಿದ್ಯುತ್ ಚಾಲಿತ ಬೋಟು ಚಲಾಯಿಸುವ ಶಂಕರ ಮೊನ್ನೆ ಬಂದಿದ್ದರು ಅವರು ನನಗೆ ಪರಿಚಯ ಆಗಿದ್ದು ಶಿವಮೊಗ್ಗದ ಸಾಹಸಿ ಆ.ನಾ.ವಿಜೇ೦ದ್ರರಿಂದ ನಮ್ಮ ಊರ ಕೆರೆ ಸ್ವಚ್ಚತೆಗೆ ಇವರು ಮತ್ತು ಇವರ ಡಿಸೇಲ್ ಬೋಟ್ ತಂದಿದ್ದ ಪರಿ ಚಯ.     ಮೊನ್ನೆ ನನ್ನ ಆಪೀಸಿಗೆ ಬಂದು ನನ್ನ ಪರಿಚಯ ಇದೆಯಾ ಅಂದರು, ಅರೆ ಬಿಲ್ ಸಾಗರದ ಶಂಕರ್ ರವರೆ ನಿಮ್ಮನ್ನ ಮರೆಯಲು ಹೇಗೆ ಸಾಧ್ಯ ಅಂತ ಒಳ ಕರೆದು ಕೂರಿಸಿ ಚಹಾ ಆತಿಥ್ಯ ನೀಡಿ ದೂರ ಹೋಗಿದ್ದಿರಿ ಅಂದೆ, ಹೌದು ಬೆಳಿಗ್ಗೆನೆ ಹೊನ್ನಾಳಿಗೆ ಹೋಗಿದ್ದೆ ವೀಳೆಯದೆಲೆ ಕತ್ತಿ ತರಲು ಅಂದರು, ಹಾಗೇ ಅದು ಇದು ಬೇರೆ ವಿಚಾರ ಮಾತಾಡಿ ಹೊರಟರು ಅವಾಗ ಕೇಳಿದೆ ನಿಮ್ಮ ಊರಲ್ಲಿ ಕತ್ತಿ ಮಾಡೋರು ಇಲ್ಲವಾ? ಅಷ್ಟು ದೂರ ಹೋಗಿದ್ದಿರಲ್ಲ ಅಂದಾಗ ಈ ಕತ್ತಿ ರಹಸ್ಯ ಹೊರಬಂತು.     ಇದು ಇಲ್ಲೆಲ್ಲೂ ಸಿಗುವುದಿಲ್ಲ, ಇದಿಲ್ಲದಿದ್ದರೆ ಎಲೆ ಕಟಾವು ಸಾಧ್ಯವಿಲ್ಲ ಅಂದರು. ಅದು ಯಾವ ರೀತಿ ಕತ್ತಿರಿ ಅಂದೆ, ತಡೆಯಿರಿ ತಂದು ತೋರಿಸುತ್ತೇನೆ ಅಂತ ಅವರ ಬೈಕಿನ ಹತ್ತಿರ ಹೋಗಿ ತಂದರು, ನಾನು ನಿತ್ಯ ಬಳಕೆಯ ಬೇರೆ ವಿನ್ಯಾಸದ ಕತ್ತಿ ಅಂತ ಮಾಡಿದ್ದೆ ಆದರೆ ಈ ಕತ್ತಿ ನೋಡಿ ಆಶ್ಚಯ೯ ಆಯಿತು.  

Blog number 1038. ಪ್ರವಾಸಿ ಕಂಡ ಇಂಡಿಯಾ ಪುಸ್ತಕದಲ್ಲಿನ ವೃತ್ತಾಂತ

#ಪ್ರವಾಸಿ ಕಂಡ ಇಂಡಿಯಾ ಪುಸ್ತಕದಲ್ಲಿ ಬುದ್ಧಿವಂತ ಬ್ರಾಹ್ಮಣ ಪುರೋಹಿತರ ಒಂದು ವೃತ್ತಾಂತವನ್ನ ಪ್ರವಾಸಿ ಎಬಿ ಡೂಬಾ ಬರೆದಿದ್ದಾರೆ ಓದಿ# https://www.bookbrahma.com/book/pravasi-kanda-india-8-pustakagalu-seri      18 ಅಥವಾ 19 ನೇ ಶತಮಾನದಲ್ಲಿ ಒಂದು ಊರಿನಲ್ಲಿ 11 ಜನ ಪುರೋಹಿತರು ಬರಗಾಲದ ಕಾರಣ ಉದ್ಯೋಗ ಅರಸಿಕೊಂಡು ಬೇರೆ ಊರಿಗೆ ಹೋಗುತ್ತಾರೆ, ಮಾಗ೯ದಲ್ಲಿ ಊಟ ಉಪಚಾರಕ್ಕಾಗಿ ಬೇಕಾದ ಆಹಾರ ಧಾನ್ಯಗಳನ್ನ ಕಟ್ಟಿಕೊಂಡು ತೆಗೆದು ಕೊಂಡು ಹೋಗುತ್ತಾರೆ.   ಮುಂದಿನ ಊರು ತಲುಪಿ, ಒಲೆ ಹೂಡಿ, ಅಡುಗೆ ಮಾಡಲು ಹೊಸ ಮಡಿಕೆ ತರಲು ಊರ ಒಳಗೆ ಹೋಗುತ್ತಾರೆ. ಆದರೆ ಅವರ ದುರಾದೃಷ್ಟ ಇಡೀ ಊರೇ ಬರಗಾಲದಿಂದ ಗುಳೆ ಹೋಗಿರುತ್ತೆ, ಹೇಗೋ ಏನೋ ಒಬ್ಬ ಅಗಸ ಉಳಿದಿರುತ್ತಾನೆ ಅವನ ಹತ್ತಿರ ಇವರ ಅಡುಗೆಗೆ ಬೇಕಾದ ಹೊಸ ಮಡಿಕೆ ಕೇಳುತ್ತಾರೆ. ಆದರೆ ಅವನ ಹತ್ತಿರ ಹೊಸ ಮಡಕೆಗಳು ಇರುವುದಿಲ್ಲ. ಆದರೆ ಆತ ಬಳಸಿದ ಮಡಕೆಗಳನ್ನ ಇವರು ಕೇಳಿದರೂ ಆತ ಕೊಡುವುದಿಲ್ಲ ಕಾರಣ ಶೂದ್ರ ಬಳಸಿದ ಮಡಿಕೆ ಬ್ರಾಹ್ಮಣ ಬಳಸುವಂತಿಲ್ಲ ಬಳಸಿದರೆ ಅದು ನೀಡಿದವನಿಗೆ ಪಾಪ ಬರುತ್ತೆ ಅಂತ. ಬರಗಾಲದ ಊರಿನಲ್ಲಿ ಇದೆಲ್ಲ ಪಾಲಿಸಲು ಹೋದರೆ ಉಪವಾಸದಿಂದ ಸಾಯಬೇಕೆಂದು ಬಳಸಿದ ಮಡಕೆಯನ್ನ ಒತ್ತಾಯದಿಂದ ತರುತ್ತಾರೆ. ಇವರಲ್ಲಿನ ಒಬ್ಬ ಪುರೋಹಿತ ಇದು ಧಮ೯ ವಿರೋಧ ಅಂತ ಇವರು ತಯಾರಿಸಿದ ಅಡುಗೆ ನಿರಾಕರಿಸಿ ಉಪವಾಸ ಉಳಿಯುತ್ತಾನೆ.  ಮರು ದಿನ ಮುಂದಿನ ಊರಿಗೆ ತಲುಪಿದಾಗ ಅಲ್ಲಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

Blog number 1036. ಕುಟ್ಟಿಚಾತನ್ ಕೇರಳದ ಪ್ರಸಿದ್ಧ ದೈವ,ಸಾಗರ ತಾಲ್ಲೂಕಿನ ಇಡುವಾಣಿಯಲ್ಲಿ ಸಾರ್ವಜನಿಕರ ಎದುರೇ ನಡೆದ ಕುಟ್ಟಿಚಾತನ್ ಕೈ ಚಳಕ, 1984 ರಲ್ಲಿ ಭಾರತದ ಮೊದಲ 3D ಸಿನಿಮಾ ಮಲೆಯಾಳಂನ ಮೈ ಡಿಯರ್ ಕುಟ್ಟಿಚಾತನ್ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು.

#ಮೈ_ಡಿಯರ್_ಕುಟ್ಟಿಚಾತನ್_1984ರ_ಬ್ಲಾಕ್_ಬಸ್ಟರ್_ಸಿನಿಮಾ #ಭಾರತದ_ಮೊದಲ_3D_ಸಿನಿಮಾ #ಸಾಗರ_ತಾಲ್ಲೂಕಿನ_ಇಡುವಾಣಿಯಲ್ಲಿ_ನಡೆದ_ಸತ್ಯ_ಘಟನೆ #ಕುಟ್ಟಿ_ಚಾತನ್_ಆರಾದಕರಾದ_ಇಡುವಾಣಿ_ಪಂಡಿತರು #ಈ_ಘಟನೆಯಿಂದ_ಪ್ರಸಿದ್ದರಾದ_ಇಡುವಾಣಿ_ಪಂಡಿತರು #ಅರಣ್ಯ_ಇಲಾಖೆ_ರೇಂಜರ್_ಅನುಭವ_ಸಾಕ್ಷಿ_ಆದ_ಸಿಬ್ಬಂದಿ_ಗ್ರಾಮಸ್ಥರು.   ಕಾಂತಾರ ಸಿನಿಮಾದ ಯಶಸ್ಸಿನಿಂದ ಕರಾವಳಿಯ ದೈವಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ ಇದು ಸಂಪ್ರದಾಯಿಕ ದೈವ ಆರಾದಕರಿಗೆ ಹೆಮ್ಮೆ ಅನ್ನಿಸಿದೆ.    ಕಾಂತಾರ ಹೊಗಳುವ ಭರದಲ್ಲಿ ಇದು ದೈವಗಳ ಬಗ್ಗೆ ಭಾರತೀಯ ಮೊದಲ ಚಲನಚಿತ್ರ ಅನ್ನುತ್ತಿದ್ದಾರೆ ಆದರೆ 1984 ರಲ್ಲಿ ಭಾರತೀಯ ಮೊದಲ 3D ಸಿನೆಮಾ ಮಲೆಯಾಳಂನಲ್ಲಿ #ಮೈ_ಡಿಯರ್_ಕುಟ್ಟಿಚಾತನ್ ನಿರ್ದೇಶಕ ಜಿಜೋ ಪುನ್ನಾಸ್ ಆ ಕಾಲದಲ್ಲಿ 45 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಹಲವು ಕೋಟಿಗಳಿಸಿದ ಕೇರಳದ ದೈವ ಕುಟ್ಟಿಚಾತನ್ ಮೇಲೆ ನಿರ್ಮಿಸಿದ ಸಿನಿಮಾ ಆಗಿತ್ತು.   97 ನಿಮಿಷದ ಈ ಸಿನೆಮಾ ನೋಡುವವರಿಗೆ ವಿಶೇಷ ಕನ್ನಡಕ ನೀಡುತ್ತಿದ್ದರು ಇದನ್ನು ಹಾಕಿಕೊಂಡರೆ ಮಾತ್ರ 3D ಅನುಭವ ಗೊತ್ತಾಗುತ್ತಿತ್ತು ನಂತರ 1997 ರಲ್ಲಿ ಹಿಂದಿಯಲ್ಲಿ ಚೋಟಾ ಚೇತನ್ ಅಂತ, 2010 ರಲ್ಲಿ ತಮಿಳಿನಲ್ಲಿ ಚುಟ್ಟಿ ಚಾಚನ್ ಅಂತ ಈ ಸಿನಿಮಾ ಬಾಕ್ಸ್ ಆಫೀಸ್ ದೂಳಿ ಪಟ ಮಾಡಿತ್ತು. 1984ರಲ್ಲಿ ಹೈದ್ರಾಬಾದ್ ನಲ್ಲಿ NTR ನಿರ್ಮಿಸಿದ್ದ ಅವರ ಪ್ರಸಿದ್ದ ಸಿನಿಮಾ ಮಂದಿರದಲ್ಲಿ ಈ ಸಿನೆಮಾ ನೋಡಿದ್ದೆ.   ಆಗ ಇಡೀ

Blog number 1035. ಆನಂದಪುರಂ ಇತಿಹಾಸ ಭಾಗ ಸಂಖ್ಯೆ 84. ಕೋಡಿಮಠದ ಕಾಲಜ್ಞಾನ ಭವಿಷ್ಯ ಹೇಳುವ ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ.ಸ್ವಾಮಿಗಳು ಆನಂದಪುರಂಗೆ ಬಂದಿದ್ದರು

#ಆನಂದಪುರಂ_ಇತಿಹಾಸ_ಭಾಗ_ಸಂಖ್ಯೆ_86 #ಕೋಡಿಮಠದ_ಸ್ವಾಮೀಜಿ_ಆನಂದಪುರಂಗೆ_ಬಂದಿದ್ದರು. #ಹಾಸನಜಿಲ್ಲೆಯ_ಅರಸೀಕೆರೆ_ತಾಲ್ಲೂಕಿನ_ಹಾರನಳ್ಳಿ_ಕೋಡಿಮಠ #ಶಿವಾನಂದ_ಶಿವಯೋಗಿ_ರಾಜೇಂದ್ರ_ಮಹಾಸ್ವಾಮಿಗಳು_ಹೇಳುವ_ಕಾಲಜ್ಞಾನ_ಭವಿಷ್ಯ. #ಚುನಾವಣೆ_ಮುಖ್ಯಮಂತ್ರಿ_ಸರ್ಕಾರ_ಯುದ್ಧ_ಭೂಕ೦ಪ_ದಾರ್ಮಿಕ_ಸಂಘರ್ಷ_ಕೊರಾನಾ_ಬಗ್ಗೆ_ಭವಿಷ್ಯ #ಇವರ_ಮಠದ_ಕಾಲಜ್ಞಾನ_ಭವಿಷ್ಯ_ಕೇಳಲು_ಇಂದಿರಾಗಾಂಧಿ_ಬಂದಿದ್ದರು #ಏನಿದು_ಕಾಲಜ್ಞಾನ_ತಾಳೆಗರಿ_ಭವಿಷ್ಯ_ಪುಸ್ತಕ?    ನಮ್ಮ ಊರ ಸಮೀಪದ ಮುರುಘಾ ಮಠದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಅದ್ದೂರಿಯಾಗಿ ನಡೆಯುತ್ತದೆ ಆಗ ಅಧಿಕಾರದಲ್ಲಿರುವ ಜನಪ್ರತಿನಿಧಿಗಳನ್ನು, ಜನಪ್ರಿಯ ವ್ಯಕ್ತಿಗಳನ್ನು ಮತ್ತು ಪ್ರಬಾವಿಗಳನ್ನು ಅತಿಥಿಗಳಾಗಿ ವೇದಿಕೆ ಆಲಂಕರಿಸಲು ಸದರಿ ಮಠದವರು ಆಹ್ವಾನಿಸುವುದು ಕ್ರಮವಾಗಿದೆ.   1996ರಲ್ಲಿ ನಾನು ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದರಿಂದ ಆ ವಷ೯ದ ಕಾರ್ತಿಕ ದೀಪೋತ್ಸವಕ್ಕೆ ಮುರುಘಾಮಠದ ಶ್ರೀ ಮನ್ಮಹಾ ನಿರಂಜನ ಮಹಾ ಸ್ವಾಮಿಗಳು ನನಗೆ ಆಹ್ವಾನ ನೀಡಿದ್ದರು.    ವೇದಿಕೆಯಲ್ಲಿ ನನ್ನ ಪಕ್ಕದಲ್ಲಿ ಕುಳಿತ ಸ್ವಾಮೀಜಿಗಳು ನಮ್ಮ ಊರಿಗೆ ಪರಿಚಿತರಲ್ಲ ಆದರೆ ಅವರನ್ನು ಎಲ್ಲೋ ನೋಡಿದ್ದೇನೆ ಅನ್ನಿಸುತ್ತಿತ್ತು ಆದರೆ ನೆನಪಾಗುತ್ತಿರಲಿಲ್ಲ ಹಾಗಂತ ನೀವ್ಯಾರು ಅಂತ ಅವರನ್ನೇ ಕೇಳೋಣ ಅನ್ನಿಸಿದರು ಅದು ಸೌಜನ್ಯವಲ್ಲ ಅಂತ ಮೆದುಳಿನ ನೆನಪಿನ ಕೋಶದಲ್ಲಿ ಸರ್ಚ್ ಮಾಡುತ್ತಾ

Blog number 1034. ದಸರಾ ಆಯುದ ಪೂಜೆ ಸಂಭ್ರಮದ ಹೊಸ ಮಜಲು... ಐವತ್ತು ವರ್ಷದ ಹಿಂದಿನ ದಸರಾ ಹೇಗಿತ್ತು?

#50_ವಷ೯ದ_ಹಿಂದಿನ_ದಸರಾ_ನೆನಪು    ಈಗೆಲ್ಲ ಹಳ್ಳಿಯ ಪ್ರತಿ ಮನೆಯಲ್ಲೂ ಎರೆಡೆರೆಡು ಬೈಕ್, ಕಾರ್, ಟ್ರಾಕ್ಟರ್ ಇತ್ಯಾದಿ ಇದ್ದೇ ಇದೆ ಅದರದ್ದೇ ಆಯುದ ಪೂಜೆಯ ಸಡಗರ ಆದರೆ ಭಾಗವಹಿಸುವ ಸಾವ೯ಜನಿಕರು ತುಂಬಾ ಕಡಿಮೆ.   ಸುಮಾರು 50 ವರ್ಷದ ಹಿಂದೆ ದಸರಾ ಆಯುದ ಪೂಜೆ ಬೇರೆ ರೀತಿ ಇತ್ತು.   ರೈಲುಗಳು ನಮ್ಮ ಊರಿನಲ್ಲಿ ಇದ್ದಿದ್ದರಿ೦ದ ರೈಲ್ವೆ ಗೇಟ್ ಮನ್ ಗಳು ಗೇಟ್ ಗೆ ಹೂವು ಮಾವಿನ ತಳಿರು ತೋರಣದಿಂದ ಸಿಂಗರಿಸಿ ಕುರಿ ತಂದು ಇರಿಸಿ ಪ್ರತಿ ದಿನಕ್ಕಿಂತ ತಡವಾಗಿ ಬರುವ ರೈಲಿಗೆ ಕಾಯುತ್ತಿದ್ದರು ಉಗಿ ಬಂಡಿ ಗೇಟ್ ಸ್ಥಳಕ್ಕೆ ಬಂದು ನಿಂತಾಗ ರೈಲಿಗೆ ಪೂಜೆ ಮಾಡಿ ಕುರಿ ಬಲಿ ನೀಡುತ್ತಿದ್ದರು ರೈಲ್ವೆ ಸಿಬ್ಬಂದಿಗೆ ಅವತ್ತು ಬೋನಸ್ ಬೇರೆ ಸಿಗುತ್ತದೆ ಅಂತ ಸುದ್ದಿ ಇತ್ತು.   ನಮ್ಮ ಊರು ಆನಂದಪುರಂ ಹೋಬಳಿ ಕೇಂದ್ರವಾದ್ದರಿಂದ ವಿದ್ಯುತ್ ಇಲಾಖೆಯಲ್ಲಿ ಮತ್ತು ಪೋಲಿಸ್ ಹೊರ ಠಾಣೆಯಲ್ಲೂ ಸಡಗರ ಇರುತ್ತಿತ್ತು.    ಇದನ್ನು ಬಿಟ್ಟರೆ ನಮಗೆಲ್ಲ ಹೆಚ್ಚು ನಂಟಿದ್ದ ನಮ್ಮ ಊರ ಅಕ್ಕಿ ಗಿರಣಿ ಆಯುದ ಪೂಜೆನೆ ವಿಶೇಷ, ಯಾಕೆಂದರೆ ಆಗೆಲ್ಲ ಭತ್ತದ ಹೊಟ್ಟಿಗೆ ಬೆಲೆ ಇರಲಿಲ್ಲ ಅಕ್ಕಿ ಗಿರಣಿ ಹಿಂದೆ ಅಕ್ಕಿ ಗಿರಣಿ ಕಟ್ಟಡಕ್ಕಿಂತ ದೊಡ್ಡದಾದ ಹೊಟ್ಟಿನ (ಉಮ್ಮಿ) ರಾಶಿ ಬಿದ್ದಿರುತ್ತಿತ್ತು ಅದು ಊರಿನ ಆ ಕಾಲದ ಎಳೆಯರಿಗೆ ದೊಡ್ಡ ಆಕಷ೯ಣೀಯ ಕೇಂದ್ರ, ಹೇಗೆ ಬಿದ್ದರೂ ಉರುಳಿದರೂ ದೊಡ್ಡ ಸ್ಪಾ೦ಜ್ ಬೆಡ್ ಅದಾಗಿರುತ್ತಿತ್ತು ಹಾಗಾಗಿ ಆ ಅಕ್ಕಿ ಗಿರಣ

Blog number 1033. ನಮ್ಮ ಆಸ್ಥಾನ ಜೋತಿಷಿ ಕೆರೆಹಿತ್ತಲು ಕಲ್ಮಕ್ಕಿ ಬೂದ್ಯಪ್ಪ ಗೌಡರು ನಮ್ಮ ಮಲ್ಲಿಕಾ ವೆಜ್ ಪ್ರಾರಂಭದ ಪೂಜೆ ಮಾಡಿದವರು ಮತ್ತು ಪ್ರತಿವರ್ಷ ಲಕ್ಷ್ಮೀ ಪೂಜೆ ಮಾಡುವವರು ಇವರು ಹೇಳಿದ ನನ್ನ ಭವಿಷ್ಯಗಳು ಯಾವುದೂ ಸುಳ್ಳಾಗಿಲ್ಲ

#ನಮ್ಮ_ಆಸ್ಥಾನ_ಜೋತಿಷಿ_ಕಲ್ಮಕ್ಕಿ_ಬೂದ್ಯಪ್ಪಗೌಡರು . #ಮಲ್ಲಿಕಾ_ವೆಜ್_ಹತ್ತನೇ_ವರ್ಷದ_ಲಕ್ಷ್ಮೀಪೂಜೆ #ನಮ್ಮ_ಬೂದ್ಯಪ್ಪ_ಗೌಡರ_ಸಂಬಂದಕ್ಕೆ_ಮೂವತ್ತು_ವರ್ಷ #ಇವರು_ನನಗೆ_ಹೇಳಿದ_ಭವಿಷ್ಯಗಳೆಲ್ಲ_ಸತ್ಯವಾಗಿದೆ. #ಇವತ್ತಿನ_ಲಕ್ಷ್ಮೀ_ಪೂಜೆ_ಅವರಿಂದ    ಪ್ರಖ್ಯಾತ ಜೋತಿಷಿಗಳಾದ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು(ದೇವೇಗೌಡರು ಪ್ರದಾನಿ ಆಗುತ್ತಾರೆಂದು ಜೋತಿಷ್ಯ ಹೇಳಿದವರು)ನನ್ನ ಮಾರ್ಗದರ್ಶಕರು, ನಮ್ಮ ಊರಿನ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ ನಿರ್ಮಿಸುವ ಬಾಗ್ಯ ನನ್ನ ಪೂರ್ವಿಕರ ಪುಣ್ಯದಿಂದ ನನಗೆ ಲಭಿಸಿದಾಗ ಅದರ ನಿರ್ಮಾಣ ಮತ್ತು ಪ್ರತಿಷ್ಟಾಪನೆಯ ನೇತೃತ್ವ ವಹಿಸಿದವರು ಅವರು ಆನಂದಪುರಂ ಹೋಬಳಿ ತ್ಯಾಗತಿ೯ಯ ಇನಾಂದಾರರ ಅಳಿಯ, ನನ್ನ ತಂದೆ ತಾಯಿ ಹೆಸರಲ್ಲಿ 23-ಡಿಸೆಂಬರ್ - 2007 ರಲ್ಲಿ ಕಲ್ಯಾಣ ಮಂಟಪ ಇವರ ವಾಸ್ತು ಪ್ರಕಾರವೇ ನಿರ್ಮಿಸಿದೆ, ನಮ್ಮ ತಂದೆ ಕೃಷ್ಣಪ್ಪ ಮತ್ತು ನಮ್ಮ ತಾಯಿ ಸರಸಮ್ಮರ ಹೆಸರು ಸೇರಿಸಿ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಎಂದು ನಾಮಕರಣ ಮಾಡಿದವರು ಶಾಸ್ತ್ರೀಗಳು.  ಇವರ ಪ್ರೇರಣೆಯಿಂದಲೇ  2012 ಜನವರಿ 26 ರಂದು ನಮ್ಮ ಮೊದಲಿನ ಲಾಡ್ಜ್ ಹೊಂಬುಜ ರೆಸಿಡೆನ್ಸಿ ಪ್ರಾರಂಬಿಸಿದ ನಂತರ ನಮಗೆ ದೊಡ್ಡ ಸವಾಲು ಅತಿಥಿಗಳಿಗೆ ಊಟ-ಉಪಹಾರ ಸರಬರಾಜು.     ಈ ಸಂದರ್ಭದಲ್ಲಿ ಅನಿವಾರ್ಯವಾಗಿ ವೆಜ್ ರೆಸ್ಟೋರೆಂಟ್ ನಾವೇ ಪ್ರಾರಂಬಿಸಬೇಕಾಯಿತು ಹೀಗೆ 28- ಸೆಪ್ಟೆಂಬರ್ -2012 ರಲ್ಲಿ ನಮ್ಮ ಕಲ್ಮಕ್