Skip to main content

Blog number 1043. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ಗೆ ಮಾತ್ರ ಸೀಮಿತವಾಗಬಾರದು, ಕನ್ನಡದ ಬಗ್ಗೆ ರೋಷಾವೇಷದ ಉದ್ದುದ್ದ ಬಾಷಣ ಮಾಡುವ ಕನ್ನಡದ ಹೋರಾಟಗಾರರೆ ನಿಮ್ಮ ಮಕ್ಕಳಿಗೆ ಕನಿಷ್ಟ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣ ಕೊಡಿಸಿದ್ದೀರಾ? ಮಾತಲ್ಲಿ ಕನ್ನಡ ನಡೆಯಲ್ಲಿ ಇಂಗ್ಲೀಷ್ ಹೀಗಾದರೆ ಕನ್ನಡ ಭಾಷೆ ಉಳಿದೀತೆ?, 2022 ರ ಕನ್ನಡ ರಾಜ್ಯೋತ್ಸವ ಸಕಾ೯ರಿ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣದ ಅಭಿಯಾನವಾಗಲಿ.


 

 ನನ್ನ ಬಹಳಷ್ಟು ಗೆಳೆಯರು ಕನ್ನಡ ಅಭಿಮಾನಿಗಳು, ಕನ್ನಡ ಕಡ್ಡಾಯ ಅಂತೆಲ್ಲ ಹೋರಾಟ ಮಾಡುವ ವಿಚಾರವಂತರು, ಸಾಹಿತಿಗಳು, ಪತ್ರಕರ್ತರು, ಲೇಖಕರು, ಕನ್ನಡ ಶಾಲೆ ಶಿಕ್ಷಕರು ಅವರೆಲ್ಲರ ಪ್ರಭಾವದಿಂದ ನನ್ನ ಮಕ್ಕಳನ್ನು ಸರ್ಕಾರಿ ಅಂಗನವಾಡಿಯಿಂದ ಪಿಯು ತನಕ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ಓದಿಸಿದೆ, ಆದರೆ ಕನ್ನಡದ ಹೋರಾಟಗಾರ ಗೆಳೆಯರು ಖಾಸಾಗಿ ಕಾನ್ವೆಂಟ್ ನಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಿದರು... ಅಲ್ಲ ನಿಮ್ಮೆಲ್ಲ ಹೋರಾಟ ಕನ್ನಡದ ಅಭಿಮಾನ ಇದೇನಾ? ಅಂದಿದ್ದಕ್ಕೆ ಕನ್ನಡ ಮಾಧ್ಯಮ - ಸರ್ಕಾರಿ ಶಾಲೆಯಲ್ಲಿ ಎಕ್ಸ್ ಪೋಜರ್ ಸಿಗೋದಿಲ್ಲ ಅಂತಾರೆ.

    ಇದರಿಂದ  ಒಂದು ಅನುಕೂಲ ಆಗಿದೆ ನನ್ನ ಮಕ್ಕಳು ಕನ್ನಡದ ಸಾಹಿತ್ಯ ಎಲ್ಲಾ ಓದುತ್ತಾರೆ ನಾನು ಬರೆದ ಪುಸ್ತಕ ಲೇಖನ ವಿಮರ್ಶೆ ಮಾಡುತ್ತಾರೆ ಆದರೆ ನನ್ನ ಕನ್ನಡ ಅಭಿಮಾನಿ ಇಂಗ್ಲೀಷ್ ಕಾರ್ಯಕಾರಿಣಿ ಮಿತ್ರರ ಮಕ್ಕಳು ಕನ್ನಡ ಸಾಹಿತ್ಯನೂ ಓದುವುದಿಲ್ಲ, ಇಂಗ್ಲೀಷ್ ಸಾಹಿತ್ಯವನ್ನು ಓದುವುದಿಲ್ಲ ಅಷ್ಟೆ ಅಲ್ಲ ಅವರ ಅಪ್ಪಂದಿರ ಪುಸ್ತಕ ಬರಹವೂ ಓದುವುದಿಲ್ಲ!!. 

 ಹೋರಾಟ ಬಾಯಲ್ಲಿ ಮಾತ್ರ ಮಾಡುವ ಆದರೆ ಕೃತಿಯಲ್ಲಿ ಬೇರೆ ಮಾಡುವ ಓರಾಟಗಾರರ ಬಗ್ಗೆ ಬರೆಯಲೇ ಬೇಕು, ನಮ್ಮ ಕನ್ನಡ ಸಕಾ೯ರಿ ಶಾಲೆ ಶಿಕ್ಷಕರು ಕೂಡ ಅವರೇ ಪಾಠ ಮಾಡುವ ಶಾಲೆಯಲ್ಲಿ ಅವರ ಮಕ್ಕಳನ್ನೆ ಸೇರಿಸುವುದಿಲ್ಲ, ಇದೆಲ್ಲದರಿಂದ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚುತ್ತಿದೆ.
    ನಾನು ನನ್ನ ಊರಿನ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷನಾಗಿದ್ದೆ(ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ) ಆಗ ನನ್ನ ಇಬ್ಬರು ಮಕ್ಕಳು ಮತ್ತು ನನ್ನ ಅಣ್ಣನ ಇಬ್ಬರು ಮಕ್ಕಳನ್ನು ಮನೆ ಹತ್ತಿರದ ಈ ಶಾಲೆಗೆ ಸೇರಿಸಿದ್ದೆ, ಶಾಲಾ ಟೀಚರ್ ಗಳು ನನ್ನ ಪತ್ನಿ ಹತ್ತಿರ "ಹೋಗಿ ಹೋಗಿ ನಿಮ್ಮ ಯಜಮಾನರು ಬುದ್ದವಂತ ಮಕ್ಕಳನ್ನು ಇಲ್ಲಿ ಸೇರಿಸಿ ಅವರ ಭವಿಷ್ಯ ಹಾಳು ಮಾಡುತ್ತಿದ್ದಾರಂತ" ಅನುಕಂಪ ವ್ಯಕ್ತಪಡಿಸಿದ್ದರು.
   ಸರ್ಕಾರಿ  ಶಾಲೆಯಲ್ಲಿ ಶಿಕ್ಷಕ ವೃತ್ತಿ ಪಡೆದಿರುವ ಆದರೆ ತಮ್ಮ ಮಕ್ಕಳನ್ನು ಸದರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರೆ ದಡ್ಡರಾಗುತ್ತಾರೆ, ಮಕ್ಕಳ ಭವಿಷ್ಯ ಹಾಳು ಅನ್ನುವ ಅವರಿಗೆ  ನಾನು ಕೇಳುವುದು "ನೀವು ಮಾಡಿದ ಅಡುಗೆ ನಿಮ್ಮ ಮಕ್ಕಳಿಗೆ ಉಣಬಡಿಸಲಾಗದಷ್ಟು ಕಳಪೆಯಾ?..."  ಮನೆ ಹತ್ತಿರದ ಸರ್ಕಾರಿ ಶಾಲೆಗೆ ಸಲೀಸಾಗಿ ಮಕ್ಕಳನ್ನು ಓದಲು ಕಲಿಸದೆ 20-30 ಕಿ.ಮಿ.ದೂರದ ಕಾನ್ವೆಂಟ್ ಗೆ ಮಕ್ಕಳನ್ನು ವ್ಯಾನಿನಲ್ಲಿ ಕುರಿತುಂಬಿದಂತೆ ತುಂಬಿ ಕಳಿಸುವ ನಮ್ಮ ಜನರಿಗೆ ಏನಾಗಿದೆ? ಹೀಗಾದರೆ ಕನ್ನಡ ಭಾಷೆ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎನ್ನುವುದು ಎಲ್ಲಿದೆ?

   ಇಂತಹ ಮಾತೃ ಬಾಷಾ ನಿರಾಸಕ್ತಿ ತಮಿಳು, ಮಲೆಯಾಳ, ತೆಲಗು ಮತ್ತು ಮರಾಠಿ ಬಾಷಾ ಕುಟುಂಬದಲ್ಲಿ ಕಂಡುಬರುವುದಿಲ್ಲ ಅವರು ವಿದೇಶದಲ್ಲಿದ್ದರು ಮಾತೃ ಬಾಷೆಯಲ್ಲಿಯೇ ಅಕ್ಷರಬ್ಯಾಸ ಮಾಡಿಸುತ್ತಾರೆ.
   1997ರಲ್ಲಿ ಸುವರ್ಣ ಸ್ವಾತಂತ್ಯ ಆಚರಣೆಯ ಸ್ಮರಣೆಗೆ ಸರ್ಕಾರ ನಮ್ಮ ಜಿಲ್ಲೆಯಲ್ಲಿ ಪ್ರತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒ0ದು ಸರ್ಕಾರಿ ಶಾಲೆ ಅಂತೆ 27 ಹೊಸ ಶಾಲೆ ಪ್ರಾರಂಬಿಸಲು ಅನುಮತಿ ನೀಡಿತು ಆದರೆ ಬಹಳಷ್ಟು ಸದಸ್ಯರು ನಿರಾಸಕ್ತಿ ತೋರಿದರು ಆದರೆ ನಾನು ಅವರ ಅನುದಾನವೂ ಬಳಸಿ ನನ್ನ ಕ್ಷೇತ್ರದಲ್ಲಿ 10 ಕ್ಕೂ ಹೆಚ್ಚು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಪ್ರಾರಂಬಿಸಿದೆ ಈಗ ಇದರಲ್ಲಿ ಎರೆಡು ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ರದ್ದಾಗಿದೆ ಕಾರಣ ಕಾನ್ವೆಂಟ್ ಮೋಹ.
  ಕನ್ನಡ ಹೋರಾಟಗಾರರು ಈ ರೀತಿ ದ್ವಿಮುಖ ನೀತಿಗಿಂತ ಎಲ್ಲರೂ ಕನ್ನಡ ಬಾಷೆ ಒದುವುದು ಬರೆಯವುದು ಬೇಡ ನಮ್ಮದು ರಾಜಕಾರಣಕ್ಕೆ ಸೀಮಿತ  ಕನ್ನಡದ ಹೋರಾಟ ಅಂತ ಹೇಳಿಕೊಳ್ಳುವುದು ಒಳಿತು.
  ಇಲ್ಲಿ ಕನ್ನಡದ ಬಗ್ಗೆ ಪ್ರತಿಕ್ರಿಯಿಸುವವರು ತಮ್ಮ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸುತ್ತೀರಿ ಎಂಬುದು ತಿಳಿಸಬಹುದಾ?.
  ನಮ್ಮ ಹಳ್ಳಿಯಲ್ಲಿ ಧರ್ಮಸ್ಥಳ ಸಂಘದವರು ಆಗಾಗ್ಗ ಮದ್ಯ ವರ್ಜನ ಶಿಭಿರ ಮಾಡುತ್ತಾರೆ ಕಾಯ೯ಕ್ರಮ ಆಯೋಜಿಸಿದವರು ಮತ್ತು ಫಲಾನುಭವಿಗಳು ನನ್ನ ಶಿಷ್ಯರೇ ಆಗಿರುತ್ತಾರೆ, ಉದ್ಘಾಟನೆ ಮಾಡಿಸುವುದು ಶ್ರೀಮಂತರು ಪ್ರಸಿದ್ದರಾದವರಿ೦ದ (ಅವರೂ ನಿತ್ಯ ಗುಟ್ಟಾಗಿ ಮಧ್ಯಪಾನ ಮಾಡುವವರೆ) ಇದರಿಂದ ನೈತಿಕ ಪಾಠ ಏನು ಕಲಿಯಬಹುದು?.

   ಇದರ ಮದ್ಯದಲ್ಲಿ ಯಾರೋ ಒಬ್ಬರು ಅನ್ಯ ರಾಜ್ಯದ ಬ್ಯಾಂಕ್ ಸಿಬ್ಬಂದಿಗೆ ಕನ್ನಡದಲ್ಲಿ ಚೆಕ್ ಬರೆಯುವುದು ಅದನ್ನೇ ದೊಡ್ಡ ರಾದ್ಧಾಂತ ಮಾಡುವುದು, ಅದನ್ನು ಮಾಧ್ಯಮದವರು ಬೂತ ಕನ್ನಡಿಯಲ್ಲಿ ತೋರಿಸುವುದು ಮಾಡುತ್ತಾರೆ ಅಥವ ಹೊಟ್ಟೆಪಾಡಿಗಾಗಿ ಬೇರೆ ರಾಜ್ಯದಿಂದ ಬಂದ ಕೂಲಿ ಕಾರ್ಮಿಕರಿಗೆ ಕನ್ನಡದಲ್ಲಿ ಮಾತಾಡೆಂದು ದಮಕಿ ಹಾಕುತ್ತಾರೆ.

.

 ಸ೦ಸತ್ ನಲ್ಲಿ ಕನ್ನಡದಲ್ಲಿ ಮೊದಲ ಭಾಷಣ ಮಾಡಿದ ದಾಖಲೆಯ ನಮ್ಮ ಜಿಲ್ಲೆಯ ಸಂಸದರಾಗಿದ್ದ ನಂತರ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು.

   ರಾಷ್ಟ್ರಕವಿ ಕುವೆಂಪು ಎಲ್ಲರೂ ನೆನಪಾಗುತ್ತಾರೆ 

 2022ರ ಕನ್ನಡ ರಾಜ್ಯೋತ್ಸವ ಸಕಾ೯ರಿ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣದ ಅಭಿಯಾನ ಆಗಲಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...