Skip to main content

Blog number 1029, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವುದು ಸುಲಭವಲ್ಲ

#ಗ್ರಾಮ_ಪಂಚಾಯಿತಿ_ಚುನಾವಣೆ_ಗೆಲ್ಲುವುದು_ಸುಲಭವೇನಲ್ಲ

  ನನ್ನ ಊರು ಮನೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ, ರಾ.ಹೆ. 206 ಹೊನ್ನಾವರ ಬೆಂಗಳೂರು ಹೆದ್ದಾರಿಯಲ್ಲಿದೆ ಒಂದು ಕಾಲದಲ್ಲಿ ಆನಂದಪುರಂ, ಯಡೇಹಳ್ಳಿ ಮತ್ತು ಆಚಾಪುರ ಸೇರಿ ವಿಲೇಜ್ ಪಂಚಾಯತ್ ಆಗಿತ್ತು ಈ ಮೂರು ಪ್ರತ್ಯೇಕ ಗ್ರಾ.ಪಂ.ಮಾಡಿದ್ದಾರೆ, ಈ ಮೂರು ಗ್ರಾ.ಪಂ. ಸೇರಿಸಿ ಪಟ್ಟಣ ಪಂಚಾಯತ್ ಮಾಡುವ ಅಹ೯ತೆ ಇದ್ದರೂ ಆಳುವವರು ಯಾಕೋ ಮನಸ್ಸು ಮಾಡಿಲ್ಲ.
   ಮೊನ್ನೆ ನನ್ನ ಶಿಷ್ಯ ನಾರೀ ಲೋಕಪ್ಪ ಬಂದಿದ್ದರು ಈ ಬಾರಿ ನಾಲ್ಕನೇ ಬಾರಿ ಗ್ರಾ.ಪಂ. ಆಯ್ಕೆ ಆಗಿದ್ದಾರೆ, ಸಿಹಿ ಕೊಟ್ಟು ಅಭಿನಂದಿಸಿದೆ.
   1995ರಲ್ಲಿ ನಾನು ಜಿ.ಪ.ಸದಸ್ಯನಾಗುವಾಗ ನಾರೀ ಲೋಕಪ್ಪ ಚಿಕ್ಕ ಬಾಲಕ, ಇವರ ತಂದೆ ನಾರಿ ನಾರಾಯಣಪ್ಪ ನನ್ನ ಗೆಳೆಯರು, ಅವರು ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದಾಗ ಇವರ ಈಡಿಗ ಸಮಾಜದ ಆ ಕಾಲದ ವಿದ್ಯಾವಂತ ಕೋವಿ ನಾರಾಯಣಪ್ಪರನ್ನ ಅಧ್ಯಕ್ಷರನ್ನಾಗಿಸದೆ ಬೇರೆಯವರನ್ನ ಆಯ್ಕೆ ಮಾಡುವ ಸಂದಭ೯ದಲ್ಲಿ ಇವರು ನನ್ನ ಸಹಾಯ ಬಯಸಿ ಬಂದಿದ್ದರು, ಬಹುಮತಕ್ಕೆ ಬೇಕಾಗಿದ್ದ 3 ಸದಸ್ಯರು ನನ್ನ ಹತ್ತಿರ ಇದ್ದರು ಆಗ ನಾನು, ಒಂದು ಕಾಲದ ದೀಘ೯ಕಾಲದ ಅಧ್ಯಕ್ಷರಾಗಿದ್ದ ಅಡೂರು ವಿಲೇಜ್ ಪಂಚಾಯತ್ ನ #ಜಮ್ಮಿನ_ಕೇವಿ_ಈರನಾಯ್ಕರು ಮತ್ತು ಒಂದು ಕಾಲದ ಸಾಗರ ತಾಲ್ಲೂಕ್ ಬೋಡ್೯ ಸದಸ್ಯರಾಗಿದ್ದ #ತಾರಸಿಕ್ಕೆ_ಹಿರಿಯಣ್ಣ_ನಾಯಕರು ನಾರೀ ನಾರಾಯಣಪ್ಪರೇ ಅಧ್ಯಕ್ಷರಾಗಬೇಕೆಂದರೂ ನಾರಿ ನಾರಾಯಣಪ್ಪ ಒಪ್ಪಲಿಲ್ಲ  "ಇಲ್ಲ ವಿದ್ಯಾವಂತ ನಮ್ಮ ಸಮಾಜದ ಯುವಕ #ಕೋವಿ_ನಾರಾಯಣಪ್ಪ ರೇ ಆಗಲಿ ಅಂತ ಅಧಿಕಾರ ತ್ಯಾಗ ಮಾಡಿದ ವ್ಯಕ್ತಿ #ನಾರಿ_ನಾರಾಯಣಪ್ಪ.
   ಒಟ್ಟು ಕುಟುಂಬದ ಯಜಮಾನರಾಗಿ ಇವರ ದೊಡ್ಡಪ್ಪ ಚಿಕ್ಕಪ್ಪರ ಕುಟುಂಬಕ್ಕೂ ಸರಿ ಸಮನಾಗಿ ಪಾಲು ಮಾಡಿ ಈಗ ಪ್ರತ್ಯೇಕವಾಗಿ ಮೂವರು ಮಕ್ಕಳನ್ನ ಸಂಸ್ಕಾರವಂತರಾಗಿ ಮಾಡಿದ್ದಾರೆ, ಮಕ್ಕಳೂ ಕೃಷಿ ವ್ಯಾಪಾರ ಮಾಡಿ ಕೊಂಡು ಆಸ್ತಿ ತೋಟ ವೃದ್ದಿ ಮಾಡಿದ್ದಾರೆ ವಾಷಿ೯ಕ 20 ರಿಂದ 25 ಲಕ್ಷ ಆದಾಯ ಕೃಷಿಯಲ್ಲಿ ತರುತ್ತಿದ್ದಾರೆ.
  ನಾರಿ ಲೋಕಪ್ಪ ದೈವ ಭಕ್ತ, ಗುರು ಹಿರಿಯರೆಂದರೆ ಅಷ್ಟೇ ಗೌರವ, ಕೃಷಿಯಲ್ಲಿ ಅನುಭವಿ, ಒಳ್ಳೇ ಶಿಕಾರಿಗಾರ, ಓದು ಬರಹದಲ್ಲಿ, ಕಾನೂನು ತಿಳುವಳಿಕೆಯಲ್ಲಿ ಜ್ಞಾನವಂತ ಹಾಗೆಯೆ ಅವ್ಯವಹಾರ ಲಂಚಗಳಿಂದ ಬಲು ದೂರ ಇರುವ ಸಜ್ಜನ ಈ ಬಾರಿ ಆದರೂ ನಮ್ಮ ಗ್ರಾಮ ಪಂಚಾಯತ್ ಗೆ ಒ0ದು ಅವಧಿಗಾದರೂ ಅದ್ಯಕ್ಷರಾಗಲಿ ಅಂತ ಹಾರೈಸುತ್ತೇನೆ.
   ಪಾಲಿ೯ಮೆಂಟ್ ಅಥವ ಶಾಸನ ಸಭೆಗೆ ಪ್ರತಿ ಮತದಾರನನ್ನ ಕಾಡಿ ಬೇಡಿ ಮತ ಪಡೆಯುವ ಅವಶ್ಯಕತೆ ಇರುವುದಿಲ್ಲ ಹಣ, ಜಾತಿ, ಪಕ್ಷಗಳ ಪ್ರಬಾವ ಇರುತ್ತದೆ ಲಕ್ಷಾಂತರ ಮತಗಳ ನೂರಾರು ಹಳ್ಳಿ ಊರು ಇರುತ್ತದೆ. ಒಂದು ಊರಿನ ಎಲ್ಲಾ ಮತ ಕೊಡದಿದ್ದರೂ ಇನ್ನೊಂದು ಊರಿನಲ್ಲಿ ಪಡೆಯುವ ಸಾಧ್ಯತೆ ಇರುತ್ತದೆ ಆದರೆ ನೂರಿನ್ನೂರು ಮತ ಕ್ಷೇತ್ರದಲ್ಲಿ ಹಾಗಲ್ಲ ತನ್ನ ಜಾತಿ, ಪಕ್ಷಗಳ ವ್ಯಕ್ತಿಗಳೇ ಇವರ ಎದರು ಸ್ಪದಿ೯ಸಿರುತ್ತಾರೆ, ಬೆಳಿಗ್ಗೆ ಭರವಸೆ ನೀಡಿದ ಮತದಾರ ಸಂಜೆ ಬದಲಾಗುತ್ತಾನೆ, ಚುನಾವಣೆ ಪ್ರಾರಂಭದ ದಿನದಿಂದ ಅಜಿ೯ ಹಾಕಲು, ಪ್ರಚಾರ ಮಾಡಲು ಬಂದವ ಚುನಾವಣಾ ಮತ ಕಟ್ಟೆಯಲ್ಲಿ ಮತದಾನದ ದಿನ ಬದಲಾಗಿರುತ್ತಾನೆ, ಪ್ರತಿ ಮತದಾರನ ಮೇಲೂ ಎಲ್ಲಾ ಕಡೆಯಿಂದ ಒತ್ತಡ ತರುತ್ತಾರೆ ಹಾಗಾಗಿ ಗ್ರಾ.ಪಂ.ಚುನಾವಣೆ ಅಷ್ಟು ಸುಲಭವಲ್ಲ ಇದನ್ನು ಒಮ್ಮೆ ಸ್ಪದೆ೯ ಮಾಡಿಯೇ ಅನುಭವ ಪಡೆಯಬೇಕು.
   ರಾಜಕೀಯ ಪಕ್ಷಗಳೂ ಅಷ್ಟೆ ಈ ಚುನಾವಣೆಯಲ್ಲಿ ಯಾರೂ ಅವರ ನಿಯಂತ್ರಣಕ್ಕೆ ಸಿಗುವುದಿಲ್ಲ ಆದ್ದರಿಂದ ಚುನಾವಣಾ ಪಲಿತಾಂಶದ ನಂತರ ಗೆದ್ದವರನ್ನ ಅಭಿನಂದಿಸುವ ಕಾರಣದಿಂದ ಕರೆತಂದು ನಂತರ ನಮ್ಮ ಪಕ್ಷದಿಂದ ಹೆಚ್ಚು ಸದಸ್ಯರು ಆಯ್ಕೆ ಆಗಿದ್ದಾರೆಂದರೂ ಗ್ರಾ.ಪಂ.ಗಳಲ್ಲಿ ಗೆದ್ದವರ ಕೆಮಿಸ್ಟ್ರಿ ಬೇರೆಯೇ ಆಗಿರುತ್ತದೆ ಅದು ಅಧ್ಯಕ್ಷರ ಚುನಾವಣೆ ಮುಗಿಯಬೇಕು.
   ನಾನು ರಾಜಕೀಯದಿಂದ ದೂರ ಇದ್ದರೂ, ಮತ ಹಾಕದಿದ್ದರೂ ನನ್ನ ವಿಚಾರಗಳಿಗೆ ಇಷ್ಟ ಪಟ್ಟ ಅನೇಕ ಶಿಷ್ಯರು ಗೆದ್ದು ಬಂದು ಶುಭ ಸುದ್ದಿ ತಿಳಿಸಿದಾಗ ನನಗೆ ಸಂತೋಷ ಆಗುತ್ತೆ ಅವರಿಗೆ ನಾನು ಹೇಳುವುದೊಂದೇ ಗ್ರಾಮ ಪಂಚಾಯತ್ ಆಕ್ಟ್ ಬುಕ್ ಖರೀದಿಸಿ ಓದಿಕೊಳ್ಳಿ ಅಂತ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...