Skip to main content

Blog number 997.ಗೇರುಬೀಸು ಕೃಷ್ಣಪ್ಪ ತನ್ನ ಹಳ್ಳಿಯನ್ನು ಅಭಿವೃದ್ಧಿ ಮಾಡಿಸಿ ಇಡೀ ಊರಿನ ಆರ್ಥಿಕ ಮಟ್ಟ ಸುಧಾರಣೆಗೆ ಕಾರಣನಾದ ವ್ಯಕ್ತಿ, ಆದರೆ ಆ ಊರಲ್ಲಿನ ಜಾತಿ ವ್ಯವಸ್ಥೆ ಮಾತ್ರ ಬದಲಿಸಲು ಸಾಧ್ಯವಾಗಲಿಲ್ಲ.

#ಸ್ವಾತಂತ್ರ್ಯ_ಬಂದು_75_ವರ್ಷವಾಗಿದ್ದರೂ ....

#ಎಲ್ಲರೂ_ಅಕ್ಷರಸ್ಥರಾಗಿದ್ದರೂ .....

#ಜಾತಿ_ವ್ಯವಸ್ಥೆ_ಮಾತ್ರ_ಅಳಿಸಲಾಗಲಿಲ್ಲ

#ಬಿದ್ದ_ದೇವರ_ಉತ್ಸವದ_ಪಲ್ಲಕ್ಕಿ_ಗುಜ್ಜುಕೋಲು_ಎತ್ತಿ_ಕೊಟ್ಟಿದ್ದೇ_ಅಪರಾದ

#ದೇವರ_ಸ್ಪರ್ಷಿಸಿದ್ದಕ್ಕೆ_ಪೆಟ್ಟು_ದಂಡ.

#ಹಾಗಾದರೆ_ದೇವರು_ಯಾರಿಗೆ?

  ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್ ಎಂಬ ಊರಿನಲ್ಲಿ ಬೂತಮ್ಮ ದೇವರ ಮೂರ್ತಿಗಳ ಉತ್ಸವ ನಡೆಯುವಾಗ ಉತ್ಸವದ ಪಲ್ಲಕ್ಕಿಯ ಗುಜ್ಜು ಕೋಲು ಬಿದ್ದಾಗ ಈ ಉತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದ ದಲಿತ ಬಾಲಕ ಬಿದ್ದ ಗುಜ್ಜು ಕೋಲು ಎತ್ತಿ ಕೊಟ್ಟಿದ್ದೇ ಅಪರಾದವಾಗಿ ಬಾಲಕನನ್ನು ಥಳಿಸಿದ್ದಾರೆ ಮತ್ತು 60 ಸಾವಿರ ದಂಡ ವಿದಿಸಿದ ಸುದ್ದಿ ಪತ್ರಿಕೆಯಲ್ಲಿ ಟೀವಿಯಲ್ಲಿ ಬಾರಿ ಸುದ್ದಿ ಮಾಡುತ್ತಿದೆ.
  ಇದು ಅಲ್ಲೊಂದೇ ನಡೆದದ್ದು ಅನ್ನುವುದಕ್ಕಿಂತ ಪ್ರತಿ ಊರಲ್ಲೂ ನಿತ್ಯ ನಡೆಯುತ್ತಿದೆ ದಲಿತ - ಶೂದ್ರರು  ಅನೇಕ ಕಾರಣದಿಂದ ದಾರ್ಮಿಕ ಆಚರಣೆಗಳಲ್ಲಿ, ದೇವಾಲಯದ ಸಾಮೂಹಿಕ ಬೋಜನದಲ್ಲಿ ದೂರ ಇಡುವ ಮೇಲ್ಜಾತಿ ವರ್ಗಗಳ ಸಾಮಾಜಿಕ ಶೋಷಣೆ ನಿರಾತಂಕವಾಗಿ ನಡೆದುಕೊಂಡು ಬಂದಿದೆ ಅಲ್ಲೆಲ್ಲ ಈಗ ಅಧಿಕಾರಿಗಳಿಗೆ, ರಾಜಕೀಯ ಪಕ್ಷಗಳ ದುರೀಣರಿಗೆ ಮತ್ತು ಪತ್ರಕರ್ತರಿಗೆ ರಿಯಾಯಿತಿ ದಯಪಾಲಿಸಿದ್ದರಿಂದ ಅದೆಲ್ಲ ಸುದ್ದಿ ಆಗುವುದಿಲ್ಲ.
  ಆದರೆ ಕೋಲಾರದ ಈ ಘಟನೆಗೆ ದಲಿತ ಯುವಕನ ಹಲ್ಲೆ ಮಾಡಿ ದಂಡ ಹಾಕಿದವರು ಬ್ರಾಹ್ಮಣರಲ್ಲ ಆದ್ದರಿಂದ ದಲಿತರನ್ನು ಶೂದ್ರ ವರ್ಗವೂ ಶೋಷಣೆ ಮಾಡುತ್ತಾರಾ? ಎಂಬ ಪ್ರಶ್ನೆ ಇದೆ.
   ಶೂದ್ರ ಜನರು, ಬ್ರಾಹ್ಮಣರು ಜಾತಿಯತೆ ಮತ್ತು ಪಂಕ್ತಿಬೇದ ಮಾಡಿದಾಗ ವಿರೋದಿಸುತ್ತಾರೆ ಆದರೆ ಅದೇ ಶೂದ್ರವಗ೯ದವರು ದಲಿತರಿಗೆ ಮತ್ತು ತಮಗಿಂತ ಕೆಳಗಿನವರಿಗೆ  ಪಂಕ್ತಿಬೇದ, ಅಸ್ಪಶ್ಯತೆ ಮಾಡುವುದು ಮಾತ್ರ ನಿಲ್ಲಿಸಿಲ್ಲ, ಪ್ರತಿ ಜಾತಿಯವರೂ ತಮಗಿಂತ ಕೆಳಗಿನ ಜಾತಿಯನ್ನು ಶೋಷಿಸುವುದು ಮಾತ್ರ ನಿರಾತಂಕವಾಗಿ ಮುಂದುವರಿದಿದೆ.
   '
   ನಮ್ಮ ಊರಿನ ಸಮೀಪದ ಗೇರುಬೀಸು ಎಂಬ ಕುಗ್ರಾಮ ನನ್ನ ಅನೇಕ ರಾಜಕೀಯ ಸಾಮಾಜಿಕ ಕಾರ್ಯಗಳ ಪ್ರಯೋಗ ಶಾಲೆ, ಈ ಊರಲ್ಲಿ ಒಂದೆರೆಡು ಜನರಿಗೆ ಮಾತ್ರ ಖಾತೆ ಭೂಮಿ ಇತ್ತು, ಆದರೆ ಇಡೀ ಊರಿನ ಜನರು ಬಗರ್ ಹುಕುಂ ಜಮೀನು ಮಾಡಿಕೊಂಡು ಬತ್ತ - ರಾಗಿ ಬೆಳೆಯುತ್ತಿದ್ದರು,ಪ್ರತಿ ವರ್ಷ ಮಳೆಗಾಲದಲ್ಲಿ ಬಡತನದಿಂದ ಹಸಿವಿನಿಂದ ಬದಕಲು ನಮ್ಮ ಊರಿನ ಭೂಮಾಲಿಕರಾದ ಶಾಂತಬೈಲು ಅಯ್ಯನೋರ ಮನೆಯಿಂದ ಹುಲಿ ಬತ್ತ ( 2 ಕಾಳಿಗೆ ಒಂದು ಕಾಳು ಬಡ್ಡಿ) ಒಯ್ಯುತ್ತಿದ್ದರು.
  ಈ ಗೇರುಬೀಸು ಊರಿನ ಯಜಮಾನ ಗೇರುಬೀಸು ಕೃಷ್ಣಪ್ಪರ ಹೆಂಡತಿಗೆ ಆಪರೇಷನ್ ಮಾಡುವಾಗ ರಕ್ತ ಬೇಕಾಗಿದ್ದಾಗ, ಇಡೀ ಊರಿನಲ್ಲಿ ಯಾರೂ ರಕ್ತ ಕೊಡುವ ಅರ್ಹತೆ ಹೊಂದಿದವರು ಇರಲಿಲ್ಲ, ಎಲ್ಲರೂ 40 kg ಗಿಂತ ಕಡಿಮೆ ತೂಕದವರು ಆದ್ದರಿಂದ ನಾನು ಮತ್ತು ಗೆಳೆಯನೋವ೯ ರಕ್ತದಾನ ಮಾಡಬೇಕಾಯಿತು.
  1975ರಲ್ಲಿ ನಮ್ಮ ತಂದೆ ವಿಲೇಜ್ ಪಂಚಾಯತ್ ಸದಸ್ಯರಾಗಿದ್ದಾಗ ಶಾಸಕರಾಗಿದ್ದವರು #ಎಲ್_ಟಿ_ತಿಮ್ಮಪ್ಪ_ಹೆಗ್ಗಡೆಯವರಿಂದ ಈ ಊರಿಗೆ ಪ್ರಾಥಮಿಕ ಶಾಲೆ ಮತ್ತು ಒಂದು ಸೇತುವೆ ಮಾಡಿಸಿದ್ದರು.
  ಎತ್ತರದ ಗುಡ್ಡ ಪ್ರದೇಶದ ಈ ಊರಿನ ಸುತ್ತ ಹರಿಯುವ ಹಳ್ಳ ಮಳೆಗಾಲದಲ್ಲಿ ಅಬ್ಬರಿಸುತ್ತಾ ಸೇತುವೆ ಮುಳುಗಿಸಿ ಶರಾವತಿ ನದಿಗೆ ಸೇರುತ್ತದೆ.
  ಈ ಹೊಳೆಯ ಮಧ್ಯದಲ್ಲಿನ ಬಂಡೆ ಕಲ್ಲಿನ ಗೋಡೆ ಮೇಲೆ ಯಾವ ಕಾಲದಲ್ಲೋ ಈಶ್ವರನ ಲಿಂಗ ಕತ್ತಿದ್ದಾರೆ, ಅಲ್ಲಿ ಪ್ರತಿ ವರ್ಷ ಎಳ್ಳಮಾವಸ್ಯೆಯಂದು ಜಾತ್ರೆ ನಡೆಸುವ ತೀರ್ಮಾನ ಮಾಡಿದ ಕೃಷ್ಣಪ್ಪ ಕಳೆದ ಸುಮಾರು 30 ವರ್ಷದಿಂದ ಊರವರ ಸಹಕಾರದಿಂದ ಹೊಳೆ ಮಲ್ಲೇಶ್ವರ ಜಾತ್ರೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಈಗ ಊರವರು ಮುಂದುವರಿಸಿದ್ದಾರೆ.
  ಈ ಹಳ್ಳಿಗೆ ವಿದ್ಯುತ್, ರಸ್ತೆ, ಬಾವಿ, ಹೊಳೆಗೆ ಪಿಕ್ ಅಪ್ ಮತ್ತು ಅಂಗನವಾಡಿ ಜೊತೆಗೆ ರಾಜ್ಯದ ಮೊದಲ ಬಗರ್ ಹುಕುಂ ಹಕ್ಕು ಪತ್ರ ಕೊಡಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಎಂಬ ಗೌರವ ನನಗೆ ಈ ಊರಲ್ಲಿ ಇದೆ.
   ಈ ಊರಿನ ಸವೋ೯ತ್ತೋಮುಖ ಅಭಿವೃದ್ದಿಗೆ ಕಾರಣರಾದ ಗೇರುಬೀಸು ಕೃಷ್ಣಪ್ಪ ಈಗ ಇಲ್ಲ, ರಾಜಕೀಯ ಪಕ್ಷಗಳಿಂದ ಈ ಊರಲ್ಲಿ ಹಲವು ಗುಂಪುಗಳಾಗಿದೆ, ಪ್ರತಿ ಕುಟುಂಬವೂ ಅಡಿಕೆ ತೋಟ ಹೊಂದಿದೆ, ಪ್ರತಿ ಮನೆಯಲ್ಲಿ ಬೋರ್ ವೆಲ್, ಬೈಕ್ ಮತ್ತು ಕಾರುಗಳಿದೆ 1990 ರಲ್ಲಿ ಈ ಊರು ಹೇಗಿತ್ತು?... ಈಗ ಹೀಗಾಗಿದೆ ಅಂದರೆ ಆಶ್ಚರ್ಯವೇ ಹೌದು.
   ಒಂದು ಮದ್ಯಾಹ್ನ ಮಲಗಿದ್ದೆ, ಈ ಊರಿನ ರವಿ ಎಂಬ ದೀವರ ( ಈಡಿಗರ ) ಹುಡುಗ ನಮ್ಮ ಲಾಡ್ಜ್ ನಲ್ಲಿ ಕೆಲಸ ಮಾಡುವವನು ತುಂಬಾ ಗಡಿಬಿಡಿ ಮತ್ತು ಭಯದಿಂದ ಎಬ್ಬಿಸಿದ ವಿಚಾರ ಏನೆಂದರೆ ಅವರ ಹಳ್ಳಿಯ ಪಂಚಾಯಿತಿ ಸದಸ್ಯ ಮತ್ತು  ಹೊಳೆ ಮಲ್ಲೇಶ್ವರ ದೇವರ ಪೂಜೆ ಮಾಡುವ ಗೌಡರು ಪೋನು ಮಾಡಿ ಗಲಾಟೆ ಮಾಡುತ್ತಿದ್ದಾರೆ ಅರ್ಜೆ೦ಟ್ ಬರಬೇಕಂತೆ ಊರಲ್ಲಿ ಪಂಚಾಯಿತಿ ಇದೆ ಅಂತ ತಿಳಿಸಿದ.
  ಕಾರಣ ಏನೆಂದರೆ ಅವತ್ತು ಬೆಳಿಗ್ಗೆ ರವಿ ಮತ್ತು ಶಿವಮೊಗ್ಗಕ್ಕೆ ಮದುವೆ ಮಾಡಿ ಕೊಟ್ಟಿದ್ದ ಅವನ ತಂಗಿ ಕುಟುಂಬ ಅವರ ಜಮೀನಿನ ಕೆಳಗಿನ ಹರಿಯುವ ಹೊಳೆ ಮದ್ಯದ ಬಂಡೆಯ ಮೇಲಿನ ಹೊಳೆ ಮಲ್ಲೇಶ್ವರ ದೇವರಿಗೆ ( ಅಲ್ಲಿ ಗುಡಿ ಇಲ್ಲ) ಹೂವು ಹಾಕಿ ಕೈ ಮುಗಿದದ್ದು ಅಪರಾದ !? ಆಗಿದೆ....ಈ ಅಪಚಾರ ಬಗೆಹರಿಸದಿದ್ದರೆ  ಗೌಡರು ನಾಳೆಯಿ೦ದ ನಿತ್ಯ ಪೂಜೆ ಮಾಡುವುದಿಲ್ಲ ಮತ್ತು ಈ ವಷ೯ದ ಜಾತ್ರೆಗೆ ಸಹಕರಿಸುವುದಿಲ್ಲ ಅಂತ ಬಿಗಿ ಪಟ್ಟು ಹಾಕಿದ್ದಾರೆ ಹಾಗೂ ಅವರು ಹಾಲಿ ಗ್ರಾಮ ಪಂಚಾಯತ್ ಸದಸ್ಯರಾದ್ದರಿಂದ ಗ್ರಾಮದವರಿಗೆ ಈ ವಿಚಾರ ಕಷ್ಟ ಆಗಿದೆ.
  ರವಿಗೆ ಕೇಳಿದೆ ಅಲ್ಲಿ ಬೇರೆ ಜಾತಿಯವರು ಪೂಜೆ ಮಾಡಬಾರದೆಂದು ನಿಯಮ ಇದಿಯಾ? ಅಂತ ಅವನು ಹೇಳಿದ್ದು ನಿತ್ಯ ಹರಿಯೋ ಹಳ್ಳದ ನೀರಲ್ಲಿ ಮೀನು ಕಪ್ಪೆ ಹಾವು ಎಲ್ಲಾ ಈ ದೇವರ ಕಲ್ಲಿನ ಮೇಲೆ ಹರಿದಾಡುತ್ತದೆ, ಅಲ್ಲಿ ನಿತ್ಯ ಮಕ್ಕಳು ಈಜಾಡುತ್ತಾರೆ, ಮೀನು ಶಿಕಾರಿಗೆ ಬಲೆ - ಗಾಣ ಹಾಕುತ್ತಾರೆ, ಎಲ್ಲರೂ ಈ ದೇವರನ್ನು ಸ್ಪರ್ಷಿಸುತ್ತಾರೆ ಆದರೆ ಇವತ್ತು ನಾನು ನನ್ನ ತಂಗಿ ಕುಟುಂಬ ಭಕ್ತಿಯಿಂದ ಹೂವು ಹಾಕಿ ಹೊಳೆಯ ದೇವರ ಚಿತ್ರಕ್ಕೆ ಕೈ ಮುಗಿದದ್ದು ಅಪರಾದ ಆಗಿದೆ ಅಂದ.
  ಸರಿ ಅಂತ ಅವನ ಪೋನಿನಿಂದನೇ ಸದರಿ ಗೌಡರಿಗೆ ಪೋನು ಮಾಡಿದೆ, ತುಂಬಾ ಜೋಷ್ ನಲ್ಲಿದ್ದ ಅವರು ದೊಡ್ಡ ಅಚಾತುಯ೯ ನಿಮ್ಮ ಕೆಲಸದ ರವಿ ಮಾಡಿದ್ದಾನೆ ಎಂದು ಆರೋಪಿಸಿದರು, ಇದಕ್ಕೆ ಪರಿಹಾರ ಏನು ಎಂದೆ? ಅದಕ್ಕೆ ಅವರು ಹೇಳಿದ್ದು ಊರವರು ತೀಮಾ೯ನ ಮಾಡಲಿ ನಂತರ ಕೋಣಂದೂರಿನ ಮಠದ ಸ್ವಾಮಿಗಳಲ್ಲಿ ಪರಿಹಾರ ಕೇಳಿ ರುದ್ರಾಭಿಷೇಕ ಆಗಿ ಶುದ್ದಿ ಆಗಬೇಕು.... ಅಂತೆಲ್ಲ ದೊಡ್ಡ ಖರ್ಚಿನ ದಂಡ ಬಡ ರವಿಗೆ ಹಾಕುವ ಪೂವ೯ತಯಾರಿ ಹೇಳಿದರು.
  ನಾನು ದೇವರ ಕಲ್ಪನೆ, ಬೇಡರ ಕಣ್ಣಪ್ಪನ ಭಕ್ತಿ ಮತ್ತು ಹೊಳೆಯ ಹರಿಯುವ ನೀರಲ್ಲಿನ ಬಂಡೆ ಮೇಲಿನ ಈ ದೇವರ ಚಿತ್ರಗಳಿಗೆ ದೇವಸ್ಥಾನ ಅಥವ ಗರ್ಭಗುಡಿ (ಅದು ನಿರ್ಮಿಸಲು ಅಸಾಧ್ಯ ಕೂಡ) ಇಲ್ಲದ್ದರಿಂದ ಜನ, ಜಾನುವಾರು ಸಹಜವಾಗಿ ಮುಟ್ಟುತ್ತಾರೆ ಅಂತೆಲ್ಲ ಸಮಜಾಯಿಸಿ ನೀಡಿದೆ ಆದರೆ ಅವರು ಅದೆಲ್ಲ ಒಪ್ಪಲು ಸಾಧ್ಯವಿಲ್ಲ, ಇದು ಬೇರೆ ಜಾತಿಯವನು ದೇವರನ್ನು ಮುಟ್ಟಿದ್ದು ಅಪಚಾರವೇ ಆಗಿದೆ ಅಂದರು.
   ಈ ಊರು ಕಟ್ಟಿದ, ಜಾತ್ರೆ ಪ್ರಾರಂಬಿಸಿದ್ದ ಕೃಷ್ಣಪ್ಪ ಈಗ ಬದುಕಿಲ್ಲ ಮತ್ತು ಒಂದು ಕಾಲದಲ್ಲಿ ಅತ್ಯಂತ ಬಡತನದ ಈ ಹಳ್ಳಿ ಈಗ ಶ್ರೀಮಂತಿಕೆಗೆ ಬದಲಾಗಿದ್ದ ಕಾಲವಾದ್ದರಿಂದ ಹಾಗೂ ನಾನು ರಾಜಕೀಯ ತ್ಯಜಿಸಿದ್ದರಿಂದ ನನ್ನ ಮಾತಿಗೆ ಆ ಊರಿನ ಈಗಿನ ನಾಯಕರಿಂದ ಪುರಸ್ಕಾರ ಸಿಗಲಿಲ್ಲ.
  ರವಿಗೆ ಊರಿಗೆ ಹೋಗು ..ಅವರ ಪಂಚಾಯತಿಯಲ್ಲಿ ದೈಯ೯ದಿಂದ ಹೇಳು ಭಕ್ತಿಯಿಂದ ಹೂವು ಹಾಕಿ ದೇವರ ಶಿಲ್ಪ ಮುಟ್ಟಿ ನಮಸ್ಕಾರ ಮಾಡಿದ್ದೆ ಅಂತ,ಅದಕ್ಕೆ ಏನು ತೀಮಾ೯ನ ಮಾಡುತ್ತಾರೆ ಮಾಡಲಿ ಬಂದು ಹೇಳು ಏನೇ ಆದರೂ ನಾನು ನೋಡಿಕೊಳ್ಳುತ್ತೇನೆ ಅಂತ ದೈಯ೯ ನೀಡಿದೆ.
   ಸಂಜೆ ವಾಪಾಸು ಬಂದ ರವಿ ನೀವು ಹೇಳಿದಂತೆ ಹೇಳಿದೆ, ಊರವರೆಲ್ಲ ನನ್ನ ಹಾಗೆ ದೇವರ ಕಲ್ಲಿನ ಬಂಡೆ ಮೇಲೆ ಕುಳಿತು ಮೀನು ಶಿಕಾರಿ ಮಾಡಿದವರೇ ಆದ್ದರಿಂದ ಅವರೆಲ್ಲ ಅಂತ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಆದರೆ ಈ ಗೌಡರು ಮಾತ್ರ ದೊಡ್ಡ ಅಪಚಾರ ಅಂತೆಲ್ಲ ಕೂಗಾಡಿದರು ನಂತರ ಕೋಣಂದೂರಿನ ಮಠಕ್ಕೆ ನಾಳೆನೆ ಎಲ್ಲರೂ ಹೋಗಿ ಪರಿಹಾರ ಕೇಳಿ ಅದರಂತೆ ನಡೆಯುವುದು ಅಂತ ತೀರ್ಮಾನ ಮಾಡಿದರು ಮತ್ತು ಅದರ ಎಲ್ಲಾ ಖಚು೯ ವೆಚ್ಚ ರವೀನೇ ಭರಿಸುವ ದಂಡ ಹಾಕಿದರಂತೆ, ಅವನು ನಮ್ಮಲ್ಲಿ ಕೆಲಸ ಮಾಡುತ್ತಿರುವುದರಿಂದ ಅವನಿಗೆ ಹೊಡೆತ ಮಾತ್ರ ಬೀಳಲಿಲ್ಲ ಅಂದ.
  ಮರುದಿನ ಊರ ಮುಖಂಡರು, ರವಿಯ ಹಣದಲ್ಲಿ ಬಾಡಿಗೆ ವಾಹನದಲ್ಲಿ ಕೋಣಂದೂರಿನ ಮಠಕ್ಕೆ ಹೋಗಿದ್ದರು, ಆ ಮಠದ ಸ್ವಾಮಿಗಳು ಎಲ್ಲಾ ವಿಚಾರ ತಿಳಿದು ಅಂತಿಮವಾಗಿ ನೀಡಿದ ತೀರ್ಪು "ರವಿ ಭಕ್ತಿಯಿಂದ ಪೂಜಿಸಿದ್ದರಿಂದ ಅದು ಅಪಚಾರವಲ್ಲ" ಇದಕ್ಕೆ ಯಾವುದೇ ಪ್ರಾಯಶ್ಚಿತ ಪರಿಹಾರ ಬೇಡ ಅಂದಾಗ ಗೌಡರು ಪೆಚ್ಚಾದರಂತೆ.
   ಆದರೆ ಊರವರು ಗೌಡರು ಸೋತರೆಂದು ಆಗುವುದು ಬೇಡ ಅಂದು ಸ್ವಾಮಿಗಳಿಂದ ರುದ್ರಾಭಿಷೇಕ ವ್ಯವಸ್ಥೆ ಮಾಡಿಸಿದರಂತೆ ಈ ಮೂಲಕ ಕೆಲವು ಸಾವಿರ ರವಿಗೆ ದಂಡ ದಯಪಾಲಿಸಿದರು.
   ಹೀಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಯೊಂದು ಜಾತಿಯವರು ತಮಗಿಂತ ಕೆಳಗಿನ ಜಾತಿಯವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುವುದು ನಿತ್ಯ ನಡೆಯುತ್ತಿದೆ.
  ಸ್ವಾತಂತ್ರ್ಯ ಬಂದು 75 ವರ್ಷ ಆಯಿತು, ಎಲ್ಲರೂ ಅಕ್ಷರಸ್ಥರಾದರೂ ಇನ್ನೂ ಜಾತಿ ವ್ಯವಸ್ಥೆ ಮಾತ್ರ ಹೋಗಿಲ್ಲ ಎಲ್ಲರೂ ದೇವರ ಹೆಸರಲ್ಲೇ ಜಾತಿ ವ್ಯವಸ್ಥೆ ಉಳಿಸಿಕೊಂಡಿದ್ದಾರೆ.
    ದೇವರು ಯಾರಿಗಾಗಿ?.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ