Skip to main content

Blog number 1017. ಶಿಕಾರಿಪುರದ ಸಮಾಜವಾದಿ, ರೈತ ಮುಖಂಡ ಅಂಗಡಿ ಷಣ್ಮುಖಪ್ಪ 86 ರ ವಯೋಮಾನದಲ್ಲಿ ಬರೆದ ಪುಸ್ತಕದಲ್ಲಿ ಶಿವಮೊಗ್ಗ ಜಿಲ್ಲೆಯ 1960 ರ ದಶಕದ ನಂತರದ ಅನೇಕ ಹೋರಾಟಗಳ ಮಾಹಿತಿ ಅಡಗಿದೆ

#ನಮ್ಮ_ಜಿಲ್ಲೆಯ_ರೈತ_ಮುಂದಾಳು_ಶಿಕಾರಿಪುರದ_ಷಣ್ಮುಖಪ್ಪರ_ಪುಸ್ತಕ

#ಮೌನಿ_ಸಮಾಜವಾದಿಯ_ಅಂತರಾಳ

#ಜಿಲ್ಲೆಯ_ಅನೇಕ_ಹೋರಾಟ_ಚಳವಳಿಯಲ್ಲಿ_ಭಾಗವಹಿಸಿದ_ಷಣ್ಮುಖಪ್ಪರ_ಜೀವನ_ಚರಿತ್ರೆ.

#ಶಿಕಾರಿಪುರದಲ್ಲಿ_ಪ್ರಥಮ_ಗ್ರಂಥಾಲಯ_ತೆರೆದವರು.

#ಜಿಲ್ಲೆಯ_ಹೋರಾಟದ_ಅನೇಕ_ಮಾಹಿತಿಗಳು_ಈ_ಪುಸ್ತಕದಲ್ಲಿದೆ.

  ಸಾಗರದ ರೈತ ಮುಖಂಡರಾದ ವಸಂತ ಕುಮಾರರ ಸಲಹೆಯಂತೆ ಶಿಕಾರಿಪುರದ ರೈತ ಮುಖಂಡರಾದ A.ಷಣ್ಮುಖಪ್ಪ ನವರು ಇತ್ತೀಚೆಗೆ ಪ್ರಕಟಿಸಿರುವ ಡಾ.ರಾಮಮನೋಹರ ಲೋಹಿಯ ಚಿಂತನೆಯ #ಮೌನಿ_ಸಮಾಜವಾದಿಯ_ಅಂತರಾಳ ಪುಸ್ತಕ ಕಳಿಸಿದ್ದರು ಅದರಲ್ಲಿ ಪೂರ್ತಿ ಓದಿ ಪ್ರತಿಕ್ರಿಯೆ ನೀಡಿ ಎಂಬ ಠಸ್ಸೆ ಕೂಡ ಒತ್ತಿದ್ದಾರೆ.
    ಹಿಂಬುಟದಲ್ಲಿ ತಮ್ಮ 86ನೆ ವಯಸ್ಸಲ್ಲಿ ಅವರಿಗೆ ಅವರ ಜೀವನದ ನಿಸ್ವಾರ್ಥ ಸಾಮಾಜಿಕ ಸೇವೆ ಬರೆಯುವ ತವಕ ಉಂಟಾಯಿತಂತೆ ಆದ್ದರಿಂದ ಈ ಪುಸ್ತಕ ಬರೆದು ಪ್ರಕಟಿಸಿದ್ದಾರೆ.
   ಅವರ ಬಲಗಣ್ಣು ಆಪರೇಷನ್ ಆಗಿದ್ದು ಮತ್ತು ಅವರ ಸಮಕಾಲಿನವರು ಯಾರೂ ಬದುಕಿಲ್ಲ, ಪ್ರಯಾಣ ಮಾಡುವಂತಿಲ್ಲ ಆದ್ದರಿಂದ ಆದಷ್ಟು ಮಟ್ಟಿಗೆ ಬರೆದಿದ್ದೇನೆ ಎಂದಿದ್ದು ನೋಡಿ ಅವರ ಪುಸ್ತಕ ಓದಲು ಹೆಚ್ಚು ಆಸಕ್ತಿ ಉಂಟಾಯಿತು.
  ಓದುತ್ತಾ ಇವರು ಸಾಮಾನ್ಯರಲ್ಲ ಅನ್ನುವುದು ಗೊತ್ತಾಯಿತು.
   ಆ ಕಾಲದಲ್ಲಿ ಅವರ ಸುತ್ತಮುತ್ತ ಬಡ್ಡಿ ವ್ಯಾಪರಸ್ಥರೆ ತುಂಬಿದ್ದರು ಆದರೆ ಇವರಿಗೆ ಅದರ ಬಗ್ಗೆ ಆಸಕ್ತಿ ಉಂಟಾಗದೇ ಜ್ಞಾನ ಪ್ರಸರಣದ ಉದ್ದೇಶದಿಂದ ಗೆಳೆಯರ ಬಳಗ ಹೆಸರಲ್ಲಿ ಶಿಕಾರಿಪುರದಲ್ಲಿ ಪ್ರಥಮ ಗ್ರಂಥಾಲಯ ಸ್ಥಾಪಿಸುತ್ತಾರೆ.
  ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ರಚಿಸಿದ ತಿರುಕ ನಾಟಕ ಮಾಡಿಸಿದ್ದು, ಹೆಸರಾಂತ ಸಾಹಿತಿ ಬೀಚಿ, ರಾಮ ಮನೋಹರ ಲೋಹಿಯಾ ಮುಂತಾದವರನ್ನ ಕರೆಸಿ ಶಿಕಾರಿಪುರದಲ್ಲಿ ಸನ್ಮಾನ ಕಾಯ೯ಕ್ರಮ ನಡೆಸಿದ ವಿವರಣೆ ನೀಡಿದ್ದಾರೆ.
 1962 ರಲ್ಲ ಸಮಾಜವಾದಿ ಪಕ್ಷದಿಂದ ಜಿ.ಬಸವಣ್ಯಪ್ಪರನ್ನು ಶಿಕಾರಿಪುರ ವಿದಾನ ಸಭಾ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ ಸಂದರ್ಭ ಆಗ ಪ್ರಚಾರಕ್ಕೆ ಶಾಂತವೇರಿ ಗೋಪಾಲಗೌಡ, ಜೆ.ಹೆಚ್.ಪಟೇಲರು, ಸಾಗರದಿಂದ ಎಸ್.ಎಸ್. ಕುಮಟಾ, ಕೋಣಂದೂರು ಲಿಂಗಪ್ಪರನ್ನು ಕರೆಯಿಸಿ ಚುನಾವಣಾ ಪ್ರಚಾರ ನಡೆಸಿದ ಘಟನೆಗಳ ವಿವರವಿದೆ.
  1960 ರಲ್ಲಿ ಶಿಕಾರಿಪುರದಲ್ಲಿ ನಡೆದ ಡಾ.ರಾಮಮನೋಹರ ಲೋಹಿಯಾ ಸಿದ್ಧಾಂತದ ಬಗರ್ ಹುಕುಂ ಚಳವಳಿ ಬಹುಶಃ ರಾಜ್ಯದ ಮೊದಲ ಬಗರ್ ಹುಕುಂ ಚಳವಳಿ.
  ಆ ಕಾಲದ ಶಿಕಾರಿಪುರದ ಸಮಾಜವಾದಿಗಳ ವಿವರ ಈ ಪುಸ್ತಕದಲ್ಲಿರುವುದು ಒಂದು ಮಹತ್ವದ ದಾಖಲೆ ಆಗಿದೆ.
  ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರ ಅನುಯಾಯಿ ಆಗಿ  ಜೈಲ್ ಭರೋ , ರೈತ ಸಮಾವೇಶ, ಅಧ್ಯಯನ ಶಿಭಿರ ಮತ್ತು ಯುರೋಪು ಪ್ರವಾಸ ಮಾಡಿ ಜಿನಿವಾದ ಶೃಂಗ ಸಭೆಯ ಸ್ಥಳದಲ್ಲಿ ಪ್ರತಿಭಟನೆ ನಡೆಸಿದವರು ಈ ಅಂಗಡಿ ಷಣ್ಮುಖಪ್ಪರೆಂದರೆ ಇವರ ರೈತ ಪರ ಕಾಳಜಿ ಅಥ೯ವಾಗುತ್ತದೆ.
  ಸ್ವತಃ ಕೃಷಿಯಲ್ಲಿ ಇವರ ಪ್ರಯೋಗ ಅದರಲ್ಲಿ ಯಶಸ್ಸು ಪಡೆದ, ಸಾವಯವ ಕೃಷಿಯ ಬಗ್ಗೆ ಇವರ ಒಲವು ಇದರಲ್ಲಿ ನೆನಪಿಸಿದ್ದಾರೆ.
  ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಹೋರಾಟದ ಬಗ್ಗೆ, ಬೆತ್ತಲೆ ಸೇವೆ ನಿಷೇದದ ಬಗ್ಗೆ, ದೆವ್ವ ಬಿಡಿಸುವ ಮೂಡನಂಬಿಕೆ, ಆ ಕಾಲದ ಮೋಡಿ ಆಟದ ಸ್ಪರ್ದೆ, ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ, ಕನಾ೯ಟಕ ರಾಜ್ಯ ರೈತ ಸಂಘದ ಶಿಕಾರಿಪುರ ತಾಲ್ಲೂಕು ಶಾಖೆ ಸಂಘಟನೆ ಬಗ್ಗೆ, ವಿದ್ಯುತ್ ಚಳವಳಿ, ದಾರವಾಡದ ಉಪ ಚುನಾವಣೆಯಲ್ಲಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರ ಪರ ಪ್ರಚಾರ. ರೈತರ ಆಸ್ತಿ ಜಪ್ತಿ ನಿಷೇದ ಕಾನೂನು ಜಾರಿ, ಕೆಲವು ಲೇಖನಗಳನ್ನು ಅನುವಾದಿಸಿ ಕೂಡ ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.
   ಜೊತೆಗೆ ರೈತ ಸಂಘದ ಶಿಕಾರಿಪುರದ ಸಭೆಗಳ ಚಿತ್ರಗಳೂ ಸೇರಿಸಿದ್ದಾರೆ.
   86ನೆಯ ಇಳಿ ವಯಸ್ಸಿನಲ್ಲಿ ರೈತ ಮುಖಂಡ ಶಿಕಾರಿಪುರದ ಅಂಗಡಿ ಷಣ್ಮುಖಪ್ಪರ ಈ ಸಾಹಸ ಅಭಿನಂದನೀಯ.
     ಈ ಪುಸ್ತಕದಲ್ಲಿ ಕನಾ೯ಟಕ ರಾಜ್ಯ ರೈತ ಸಂಘದ ಹುಟ್ಟಿಗೆ ಕಾರಣವಾದ ಘಟನೆಗಳು ತುಂಬಾ ಮಹತ್ವದ ಮಾಹಿತಿಗಳು ದೊರೆಯುತ್ತದೆ.
   ಈ ಪುಸ್ತಕ ಬೇಕಾದವರು ಲೇಖಕರಾದ ಶಿಕಾರಿಪುರದ ಅಂಗಡಿ ಷಣ್ಮುಖಪ್ಪರ ಪೋನಿನಲ್ಲಿ ಸಂಪರ್ಕಿಸಬಹುದು ಅವರ ಸೆಲ್ ಫೋನ್ ನಂಬರ್ 9845709048.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ