Skip to main content

Blog number 1010. ಸಾಗರದ ವರದಶ್ರೀ ಛಾಯ ಹೋಟೆಲ್ ಬೀಮಣ್ಣರ ಪುತ್ರ, ರಾಜ್ಯ ಜೀವ ವೈವಿದ್ಯ ಮಂಡಳಿಯ ನಿರ್ದೇಶಕ ಮತ್ತು ಶೆಡ್ತಿಕೆರೆ ಗ್ರಾಮೀಣ ವಿಜ್ಞಾನ ಕೇಂದ್ರದ ರೂವಾರಿ ಕವಲುಗೋಡು ವೆಂಕಟೇಶ್ ನನ್ನ ಕಾದಂಬರಿ ಓದಿ ಮತ್ತು ಚಂಪಕ ಸರಸ್ಸು ಸ್ಮಾರಕಕ್ಕೆ ಬೇಟಿ ನೀಡಿ ಬರೆದ ವಿಮರ್ಶೆ

#ಕವಲಗೋಡು_ವೆಂಕಟೇಶ್
ಯಶಸ್ವಿ ಉದ್ದಿಮೆದಾರರು,ಕೃಷಿಕರು, ಅತ್ಯುತ್ತಮ ಓದುಗರು, ಬರಹಗಾರರು, ಪರಿಸರಪ್ರೇಮಿ ಹೀಗೆ ಹಲವಾರು ಜನ ಪರ ಕೆಲಸದಲ್ಲಿ ಎಲೆ ಮರೆಯ ಕಾಯಿಯಂತೆ ಕಾಯ೯ನಿವ೯ಹಿಸುತ್ತಾ ಬಂದಿದ್ದಾರೆ.
 ಗ್ರಾಮೀಣ ಪರಿಸರದ ಇವರದೇ ಗೆಳೆಯರು ಸೇರಿ ಹುಟ್ಟುಹಾಕಿರುವ ಶೆಡ್ತಿಕೆರೆ ಗ್ರಾಮೀಣ ವಿಜ್ಞಾನ ಕೇಂದ್ರ ಅನೇಕ ದಾಖಲೆಯ ಜನೋಪಯೋಗಿ ಕಾಯ೯ಕ್ರಮ ನಡೆಸಿದೆ.
  ಅನೇಕ ಪುಸ್ತಕ, ಪ್ರಖ್ಯಾತರರನ್ನ ಕರೆತಂದು ಅವರಿಂದ ಸರಣಿ ಉಪನ್ಯಾಸ ನಡೆಸುತ್ತಾರೆ ಈಗ ಪದವಿ ಪೂವ೯ ಕಾಲೇಜು ಪ್ರಾರಂಬಿಸಿದ್ದಾರೆ.
  ಇವರ ತಂದೆ ಚಾಯಾ ಹೋಟೆಲ್ ಬೀಮಣ್ಣ ಇಡೀ ಸಾಗರ ತಾಲ್ಲೂಕಿನಲ್ಲೇ ಪ್ರಸಿದ್ಧರು ಅವರ ಸಾದನೆ ಕೂಡ ಅವರ ಪುತ್ರ ಕವಲಗೋಡು ವೆಂಕಟೇಶ್ ಕೂಡ ಅದೇ ದಾರಿಯಲ್ಲಿ ನಡೆದಿದ್ದಾರೆ ಸಾಗರದ ಸುಪ್ರಸಿದ್ಧ ವರದಾ ಶ್ರೀ ಲಾಡ್ಜ್ ಕೂಡ ಇವರದ್ದೆ.
  ಇವತ್ತು ನನ್ನ ಕಾದಂಬರಿ ಓದಿ ಅತ್ಯುತ್ತಮ ವಿಮಶೆ೯ ಮತ್ತು ಸಲಹೆ ದಾಖಲಿಸಿದ್ದಾರೆ ಅವರಿಗೆ ಕೃತಜ್ಞತೆಗಳು ಮತ್ತು ಮುಂದಿನ ದಿನದಲ್ಲಿ ನಮ್ಮ ಊರಿನ ಚಂಪಕ ಸರಸ್ಸು ಅಭಿವೃದ್ದಿಗೆ ಕೈ ಜೋಡಿಸಲು ಇವರನ್ನ ವಿನಂತಿಸುತ್ತೇನೆ

#ಬೆಸ್ತರ_ರಾಣಿ_ಚಂಪಕಾ
ಕೆಳದಿ ರಾಜರ ಇತಹಾಸ ಬೆಳಕು ಚೆಲ್ಲವ ಈ ಕಾದಂಬರಿ ಮಲೆನಾಡನ್ನು ಆಳಿಹೋದ ರಾಜಮನೆತನದ ಒಂದು ಐತಿಹಾಸಿಕ ಘಟನೆಯ ಸುತ್ತ ಗಮನ ಸೆಳೆದಿದೆ. ಈವರೆಗೆ ಇತಿಹಾಸಗಾರರು ಗಮನಿಸದ ವಿಷಯವೊಂದನ್ನು ಕುರಿತು ಮಲೆನಾಡಿನ ಮತ್ತು ಅನಂತಪುರಂ ಸುತ್ತಮುತ್ತ ಇದ್ದ ತಪ್ಪುಗ್ರಹಿಕೆ ಹೋಗಲಾಡಿಸುವ ಪ್ರಯತ್ನ ಇದಾಗಿದೆ. ರಾಜಾ ವೆಂಕಟಪ್ಪ ನಾಯಕ ನಿತ್ಯ ಸೂರ್ಯೋದಯಕ್ಕೂ ಮುಂಚಿತವಾಗಿ ಎದ್ದು ತಮ್ಮ ಪರಿವಾರದ ಮಂತ್ರಿಗಳು, ಸೇನಾಧಿಕಾರಿಗಳೊಂದಿಗೆ ರಾಜಬೀದಿ ಮುಖಾಂತರ ಆನಂದಪುರದ ಕೋಟೆಂದ ಕವಲೇದುರ್ಗಕ್ಕೆ ಹೋಗುವಾಗ ರಾಜಾಶ್ವಗಳ ಪುಟಿದೇಳುವ ಶಬ್ದ, ಸಾಗಿಬರುವ ರಾಜಪರಿವಾರ, ಗಂಗಾಮಠದ ಆವರಣದಲ್ಲಿನ ಗುತ್ಯಮ್ಮ ತಾಯಿಗೆ ಬೆಳಗಿನ ಪ್ರಣಾಮವನ್ನು ರಾಜ ತನ್ನ ಕುದುರೆಯ ಮೇಲೆ ಸಲ್ಲಿಸಿ, ಒಂದು ಕ್ಷಣ ಇಡೀ ರಾಜಪರಿವಾರ ಕ್ಷಣಮಾತ್ರ ನಿಂತು ಹೊರಡುತ್ತಿರುವುದು. ಅಂತಹ ಶಿಸ್ತು ರಾಜನ ಪರಿವಾರದ ಸೈನಿಕರು, ಮಂತ್ರಿಮಹೋದಯರಿಗೆ ಹಿಡಿದು ಆನೆ, ಕುದುರೆಗಳಿಗೆ ಅಂದಿನ ಕಾಲದಲ್ಲಿ ಇತ್ತು.
ವೆಂಕಟಪ್ಪ ನಾಯಕ ತನ್ನ ಬಲಬದಿಯ ಗುತ್ಯಮ್ಮ ತಾಯಿಗೆ ಕೈ ಮುಗಿಯುವಾಗ ಎಡಕ್ಕೆ ಬೆಳ್ಳಂಬೆಳಿಗೆ ಶುಭ ಮಹೂರ್ತಕ್ಕೆ ಸರಿಯಾಗಿ ಮನೆಯೊಂದರ ಎದರು ದೊಡ್ಡದಾದ, ಸುಂದರ ಆಕರ್ಷಕವಾದ ರಂಗೋಲಿ, ರಂಗೋಲಿ ನೋಡಿದರೆ ಮನಸ್ಸಿನ ಎಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗಿ, ಉತ್ಸಾಹ, ಪ್ರೇರಣೆ ಕ್ಷಣಮಾತ್ರ ನೋಡುವುದರಲ್ಲಿ ಪ್ರೇರೇಪಿಸುತ್ತಿತ್ತು.
ಈ ರಂಗೋಲಿಂದ ರಾಜ ವೆಂಕಟಪ್ಪ ನಾಯಕ ಆರ್ಕಷಿಸಿತನಾಗಿದ್ದ. ಚಂಪಕಾಳನ್ನು ಮದುವೆ ಆಗುವ ಬಗ್ಗೆ ಬಯಸಿದ್ದ. ಈ ಮದುವೆಗೆ ಸಖಿ ನೀಲಮ್ಮನ ಸಹಾಯದಿಂದ ಯಶಸ್ವಿಯಾದ. ಇದರಿಂದ ಮಹಾರಾಣಿ ಅಸಮಾಧಾನಗೊಂಡಿದ್ದು ಯಾವುದೇ ಔಷಧಿಗಳು ಕೆಲಸ ಮಾಡದೆ ರಾಣಿ ಮೃತರಾಗಿದ್ದು, ರಾಜ ರಾಜ್ಯಬಿಟ್ಟು ಸನ್ಯಾಸ ಸ್ವೀಕರಿಸಲು ಹೊರಟಿದ್ದು, ಇದರಲ್ಲಿ ಅಡಕವಾಗಿದೆ.
ವೆಂಕಟಪ್ಪ ನಾಯ್ಕರ ದೂರದಷ್ತಿ ಕೋಟೆಗಳ ದುರಸ್ತಿ, ಕಡಲುಗಳ್ಳರು, ಪೋರ್ಚುಗೀಸರು, ಅರಬರು ಸಮುದ್ರದಿಂದ ವಿಜಯನಗರ ಅರಸರಿಗೆ ಕೊಡುತ್ತಿರುವ ದಾಳಿ, ಅದನ್ನು ಹಿಮ್ಮೆಟ್ಟಿಸಿ ವಿಜಯನಗರದ ದೊರೆಗಳಿಗೆ ಪ್ರೀತಿಪಾತ್ರನಾಗಿದ್ದ, ಕೊಲ್ಲೂರು ಮೂಕಾಂಬಿಕೆ ದೇವಿಯ ಭಕ್ತ, ದೇವಸ್ಥಾನಗಳಿಗೆ ನಿತ್ಯ ಪೂಜೆ ಕಾಣಿಕೆ, ಖಾಯಂ ಆಗಿ ನಡೆಯಲು ಕೆಲವು ಗ್ರಾಮಗಳ ಉಂಬಳಿ ನೀಡಿದ್ದ. ಕೆಳದಿ ರಾಜ್ಯದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಚಿತ್ರಣ ಬರವಣಿಗೆಯಲ್ಲಿ ಮೂಡಿ ಬಂದಿದೆ.
ಕೆಳದಿ, ಬಿದನೂರು, ಇಕ್ಕೇರಿ ಬಳಸಿ ಆನಂದಪುರ ತಲುಪುವ ಮಾರ್ಗದಲ್ಲಿ ಇರುವ ಕೋಟೆ ಕೊತ್ತಗಳ ಬಗ್ಗೆ ಈ ನೈಸರ್ಗಿಕ ಸೌಂದರ್ಯ, ಪ್ರಕೃತಿ ಆರಾಧನೆ ಬಗ್ಗೆ ತಿಳಿಸಿದ್ದಾರೆ.
ರಾಮಕ್ಷತ್ರಿಯರ ಹೋರಾಟ, ಪೋರ್ಚುಗೀಸರಿಗೆ ಸೋಲಿನ ರುಚಿ ತೋರಿಸಿದ ಬಗ್ಗೆ ವಿವರಣೆ ನೀಡಲಾಗಿದೆ. ಪಶ್ಚಿಮಘಟ್ಟದಲ್ಲಿ ಕಾಳುಮೆಣಸು ಸಂಗ್ರಹಿಸಿ ದಾಸ್ತಾನು ಮಾಡಿ ಬೆಲೆ ಬಂದಾಗ ಮಾರಾಟ ಮಾಡುವ ಪರಿ, ಜಂಬಿಟ್ಟಿಗೆ ಕಲ್ಲಿನಿಂದ ನಿಮಿಸಲಾಗುವ ಕೋಟೆ, ಮನೆಗಳ ವಿವರಣೆ ಇದರಲ್ಲಿ ಅಡಕವಾಗಿದೆ. ಗಂಗಾಮಠದಲ್ಲಿ ನಡೆಯುವ ಲಕ್ಷದೀಪೋತ್ಸವದ ಬಗ್ಗೆ ವಿವರಣೆ, ರಕ್ಷಣಾ ಕಾರ್ಯಗಳ ಬಗ್ಗೆ ತಿಳಿಸಲಾಗಿದೆ. ಚಂಪಕಾ ಮೊಟ್ಟಮೊದಲು ರಂಗೋಲಿಯಲ್ಲಿ ರಾಜ್ಯಲಾಂಛನ ಗಂಡಬೇರುಂಡ ಬಿಡಿಸಿ ನಂತರ ಅವಮಾನವಾದರೆ ರಾಜದಂಡನೆಗೆ ಹೆದರಿ ಅಳಿಸಿದ್ದು, ಚಂಪಕಾ ಪ್ರಾಣ ಗೆಳತಿ ಕಾಂತಿ ರಹಸ್ಯ ತಿಳಿಸಿದ್ದು, ರಾಜ ವೆಂಕಟಪ್ಪ ನಾಯಕ ಬೊಕ್ಕಸದಲ್ಲಿ ಇರುವ ಸಂಪತ್ತಿನ ಹೆಚ್ಚಿನ ಭಾಗ ರಾಜ್ಯದ ಕಲ್ಯಾಣಕ್ಕೆ ಮಿಸಲಿಟ್ಟಿದ್ದು, ಪ್ರಜೆಗಳಿಗೆ ಸಕಲ ಸೌಲಭ್ಯ ನೀಡಿದ್ದು ಕಂಡು ಬಂದಿದೆ.
ಚಂಪಕಾ ಬೆಸ್ತರ ಮಗಳಾಗಿದ್ದರಿಂದ ರಾಜರುಗಳಿಗೆ ಬೇರೆ ಜಾತಿಯ ಮದುವೆ ಆಗಲಿಕ್ಕೆ ಅಡ್ಡಿಲ್ಲವೆಂಬ ಬಗ್ಗೆ ಶಂತನ ಮತ್ತು ಗಂಗೆ ಮದುವೆ ವಿಚಾರ, ಸತ್ಯವತಿಗೆ ವಿವಾಹ ಪೂರ್ವದಲ್ಲಿ ಪರಾಶಕ ಮುನಿಗಳು ಮೋಹಿಸಿದ ವಿಚಾರಗಳ ಬಗ್ಗೆ ರಾಜನಿಗೆ ತಿಳಿಸಿ ಹೇಳುವ ಬಗ್ಗೆ ಬರಹದಲ್ಲಿ ವ್ಯಕ್ತವಾಗಿದೆ.
ಚಂಪಕಾಳ ಮದುವೆ ತಯಾರಿ, ಸ್ನಾನ ವಗೈರೆಗಳ ಬಗ್ಗೆ ವಿವರಣೆ, ಕೋಟೆಯಲ್ಲಿನ ಆಂಜನೇಯ ದೇವಾಲಯದಲ್ಲಿ ನೆರವೇರಿದ ಮದುವೆ ಸಂಸ್ಕಾರಗಳ ಬಗ್ಗೆ ವಿವರಿಸಲಾಗಿದೆ.
ಚಂಪಕಾ ಕೋಟೆ ಒಳಗಿನ ಅರಮನೆಯ ೩ನೇ ಅಂತಸ್ತಿನ ರಾಜರ ಖಾಸಗೀ ಅಂತಃಪುರದಲ್ಲಿ ಕಾಲ ಕಳೆದ ದಿನಗಳು, ಭದ್ರಮ್ಮಾಜಿಯವರು ತಂದ ಬೇಸರ, ಕಾಯಿಲೆ, ನಂತರ ಮರಣ ಹೊಂದಿದ್ದು, ರಾಜನಿಗೆ ಬೇಸರವಾಗಿದ್ದು, ರಾಜ್ಯದ ಕಡೆ ಆಸಕ್ತಿ ಕಡಿಮೆಯಾಗಿದ್ದು, ಚಂಪಕಾಳ ಮದುವೆಯಾಗಿದ್ದಕ್ಕಾಗಿ ರಾಜ್ಯಕ್ಕೆ ಈ ರೀತಿಯ ಸ್ಥಿತಿ ಬಂದಿದ್ದು ಎಲ್ಲಾ ಪ್ರಜೆಗಳು ಮಾತನಾಡುತ್ತಿರುವುದರ ಬಗ್ಗೆ ಚಂಪಕಾಳಿಗೆ ತಿಳಿದು, ನನ್ನ ವಿವಾಹದ ನಂತರ ಬಂದ ಈ ಸ್ಥಿತಿಗೆ ನಾನು ಕಾರಣಳಾದೆ ಎಂದು ಚಂಪಕ ದಿನ ದಿನವೂ ನೆನೆಸಿ ಸೊರಗಿಹೋಗಿದ್ದು, ರಾಜ ವೆಂಕಟಪ್ಪನಾಯಕನ ಸಾಧನೆಗಳನ್ನು ನೀಲಮ್ಮ ಚಂಪಕಾಳಿಗೆ ಹೇಳಿದ್ದು, ನಾಯಕನ ಶೌರ್‍ಯ, ಸಾಧನೆ, ರಾಜ್ಯ ವಿಸ್ತಾರ, ದೇವರ ಬಗೆಗಿನ ನಂಬಿಕೆ, ಜನರಲ್ಲಿ ಉತ್ಸಾಹ ತುಂಬಿದ ಬಗೆಗಳನ್ನು ತಿಳಿಸುತ್ತಾಳೆ.ಅದನ್ನು ಸಂದರವಾಗಿ ಬರೆಯಲಗಿದೆ.
ಯುವರಾಜನ ಸರಣಿ ಆಘಾತ ರಾಜ ಮೌನಿಯಾದದ್ದುನ್ನು, ಚಂಪಕಾ, ಮೌನಕ್ಕೆ ಅಡ್ಡಿ ಪಡಿಸದೆ ಬೆಂಬಲ ನೀಡಿದ್ದು ರಾಜ್ಯದಲ್ಲಿ ಹರಡಿರುವ ಸುಳ್ಳು ವದಂತಿಗಳಿಗೆ ತಾನೇ ಕೇಂದ್ರಬಿಂದು ಎಂಬುದನ್ನು ಅರಿತಿದ್ದಳು. ಈ ಸುಳ್ಳು ಆಪಾದನೆಗಳಿಗೆ ನನ್ನಿಂದ ಏನಾಗಿದೆ, ನಾನೇನು ರಾಜರನ್ನ ಕಟ್ಟಿಹಾಕಿದ್ದೇನಾ ಎಂಬ ಪ್ರಶ್ನೆ ಸದಾ ಕಡುತ್ತಿರುವ ಬಗ್ಗೆ ತಿಳಿಸಲಾಗಿದೆ. ಒಟ್ಟಾರೆಯಾಗಿ ರಾಜರು, ಚಂಪಕಾ ರಾಜ್ಯದ ಪ್ರಜೆಗಳ ದ್ರಷ್ಟಿ ಯಲ್ಲಿ ಕೆಟ್ಟವರು ಆದ ಬಗ್ಗೆ ತಿಳಿಸಲಾಗಿದೆ. ಚಂಪಕಾ ವಿವಾಹದ ನಂತರ ಸಂತೋಷಕ್ಕಾಗಿ ರಾಜ ಆನಂದಪುರ ಎಂದು ಹೆಸರಿಟ್ಟಿದ್ದು ಉಲ್ಲೇಖಿಸಲಾಗಿದೆ.
ನಾಳೆ ಬಿದನೂರಿನಲ್ಲಿ ವಿಶೇಷ ದರ್ಬಾರು ಇದೆ, ಇಲ್ಲಿ ಕೆಳದಿ ಸಂಸ್ಥಾನದ ಸಮಸ್ತ ಕೋಟೆಗಳ ಉಸ್ತುವಾರಿಗಳು ವಿವೀಧ ಸೈನಿಕ ಮುಖಂಡರುಗಳು, ರಾಜತಾಂತ್ರಿಕರು, ಮಂತ್ರಿಮಂಡಳದವರು, ಪ್ರಮುಖ ದೇವಸ್ಥಾನದ ಮುಖ್ಯಸ್ಥರು, ಮಠಾಧೀಶರುಗಳು, ವಿಜಯನಗರದ ಚಕ್ರವರ್ತಿಗಳ ರಾಯಭಾರಿಗಳು ದೊಡ್ಡ ವ್ಯವಹಾರಸ್ಥರು ಹಾಗೂ ವಿಶೇಷ ಆಮಂತ್ರಣದ ದಾನಿಗಳು, ಕಲಾವಿದರು, ಭಾಗವಹಿಸುತ್ತಾರೆ. ರಾಜಾ ವೆಂಕಟಪ್ಪ ನಾಯಕ ದರ್ಬಾರಿಗೆ ತಲೆ ತಗ್ಗಿಸುವಂತಾದ ಸುದ್ದಿ ಚಮಪಕಾಳಿಗೂ ತಿಳಿದಿದ್ದು, ಅದಕ್ಕೆ ನಾನೇ ಕಾರಣ ಎಂದು ತಿಳಿದು ಹಿಂದಿನ ದಿನ ರಾತ್ರಿ ಹಾಲಿನಲ್ಲಿ ವಜ್ರ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ.
ನಂತರ ಚಂಪಕಳ ನೆನಪಿಗಾಗಿ ಸಮಾದಿ ,ಗೋಪುರ ಗುಡಿಯ ಎದುರು ಎರಡು ಸುಂದರ ಶಿಲಾಮಯ ಆನೆ, ಎದರು ಭಾಗದಲ್ಲಿ ವಿಶಾಲವಾದ ಕೊಳ (ಸರಸ್ಸು) ನಿಮಿ್ಸಿ ಜಂಬಿಟ್ಟಿಗೆ ಕಲ್ಲುಗಳಿಂದ ಸುಂದರವಾಗಿ ಕಟ್ಟಲಾದ ಬಗ್ಗೆ ವಿವರಣೆ, ಮಧ್ಯದಲ್ಲಿ ಚಂಪಕಾಳು ಆರಾಧಿಸುತ್ತಿರುವ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾದ ಕಲ್ಲಿನ ಸಂಕ ನಿರ್ಮಾಣ ಸುತ್ತಲೂ ಕಲ್ಲಿನ ಪಗಾರ ನಿಮಿಸಿ ವಿವೀಧ ಹಣ್ಣುಗಳ ಮರ ನೆಡಿಸಿದ ರಾಜ ವೆಂಕಟಪ್ಪ ನಾಯಕ ಜೀವನೋತ್ಸಾಹದ ಕುರುಹಾಗಿ ಅವನಿಗೆ ಆನಂದ ಉಂಟುಮಾಡಿದ ಚಂಪಕಾಳಿಗಾಗಿ ಆನಂದಪುರವೆಂಬ ಪ್ರಸಿದ್ಧಿ ಪಡೆದಿದ್ದು ಈಗ ಚಂಪಕಾ ಸರಸ್ಸು ಎಂದು ಕರೆಯುತ್ತಾರೆ.
ಈ ಪುಸ್ತಕವನ್ನು ಚೆನ್ನಾಗಿ ಬರೆದ ಕೆ. ಅರುಣ್‌ಪ್ರಸಾದ್‌ರವರು. ಇದು ಕೆಳದಿಯ ಖ್ಯಾತ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾಳ ನಡುವಿನ ದುಂರಂತ ಪ್ರೇಮ ಕಧೆಯಾಗಿದೆ. ೫೮ ಅಧ್ಯಾಯ, ೯೦ ಪುಟಗಳಲ್ಲಿ ರುವ ಕಥೆ ಓದಿಸಿಕೊಂಡು ಹೋಗುತ್ತದೆ. ನಮಗೆ ಈವರೆಗೂ ತಿಳಿಯದ ಈ ಐತಿಹಾಸಿಕ ದರುಂತ ಕಥೆ, ಮನದಲ್ಲಿ ಉಳಿಯುತ್ತದೆ. ಮುಂದಿನ ಜನರಿಗೆ ಉಪಯುಕ್ತ ಐತಿಹಾಸಿಕ ಸ್ಮರಣೆ, ಸಾಕ್ಷಿಯಾಗವುದರಲ್ಲಿ ಸಂದೇಹವಿಲ್ಲ. ಸರಕಾರ, ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಇದರ ಬಗ್ಗೆ ಒಂದು ಪಾಠವನ್ನು ಜೋಡಿಸಿದರೆ ಮಕ್ಕಳಿಗೂ ಗತಕಾಲದ ಬಗ್ಗೆ ತಿಳಿಸಿದಂತೆ ಆಗುತ್ತದೆ. ಇದರ ಬಗ್ಗೆ ಸಂಶೋಧಕರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಶೋಧನೆ ನಡೆಸಿ ದಾಖಲಿಸಿದರೆ ಒಳ್ಳೆಯದು. ನಮ್ಮ ಇತಿಹಾಸ ಪರಂಪರೆ ಉಳಿಸಲು ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ.
ಜಿಲ್ಲಾಡಳಿತ ಪ್ರಸಿದ್ಧ ಕೆಳದಿ, ಇಕ್ಕೇರಿ,ವರದಾಮೂಲ, ಚಂಪಕಾಸರಸ್ಸು ಬಗ್ಗೆ ಹೆಚ್ಚಿನ ಅಭಿವ್ರದ್ಧಿ ಮೂಡಿಸಿ ಸ್ಮರಣೀಯ ಗೊಳಿಸಲು ಮುಂದಾಗಬೇಕಾಗಿದೆ.
ಚಂಪಕ ಸರಸ್ಸುನ್ನ ಚೆಂದಗಾಣಿಸಿ ಒಂದು ಪ್ರವಾಸಿ ತಾಣವಾಗಿ ರೂಪುಗೊಂಡರೆ ನಮಗೂ ಹೆಮ್ಮೆಯಾಗುತ್ತದೆ. ನಾಡಿನ ಉದ್ದ ಅಗಲಕ್ಕೂ ಪ್ರಚಾರವಾಗಿ ಚಂಪಕಳ ತ್ಯಾಗ, ರಾಜನ ಆಡಳಿತದ ಬಗೆ ಜನಸಾಮಾನ್ಯರಲ್ಲಿ ಉಳಿಯುತ್ತದೆ.
ಇದಕ್ಕೆ ಇನ್ನು ಹತ್ತು ಪುಟ ಸೇರಿಸಿ ರಾಜ ವೆಂಕಟಪ್ಪ ನಾಯಕರ ಆಡಳಿತ, ವ್ಯಾಪಾರ, ಕಲೆ, ಸಂಸ್ಕೃತಿ, ಶಿಸ್ತು, ಜನರ ಪಾಲ್ಗೊಳ್ಳುವಿಕೆ ವಿವರಿಸಿ ,ಪೋಟೊ ಸೆರಿಸಿದರೆ ಉತ್ತಮವಾದ ಮರೆಯಲಾಗದ ಪುಸ್ತಕವಾಗಿರುತ್ತಿತ್ತು.
ಪುಸ್ತಕವನ್ನು ಅಂದವಾಗಿ ಮುದ್ರಿಸಲಾಗಿದೆ. ಸಮಾನ್ಯ ಜನರೂ ಓದಿ ಅರ್ಥಮಾಡಿಕೊಳ್ಳಬಹುದು. ಮಕ್ಕಳಿಗೆ ಕಥೆ ಹೇಳಲು ಸಹಕಾರಿ, ಚಂಪಕ, ರಾಜ ವೆಂಕಟಪ್ಪ ನಾಯಕನ ಮದುವೆಯಾದ ರಾಣಿ, ವೇಶ್ಯೆಯಲ್ಲ , ಎಂಬುದೇ ಈ ಕಾದಂಬರಿಂದ ತಿಳಿದು ಬರುತ್ತದೆ.
ಲೇಖನ: ಕವಲಕೋಡು ವೆಂಕಟೇಶ,. ಕೆ. ಸಾಗರ
ಪುಸ್ತಕದ ಹೆಸರು:
ಬೆಸ್ತರ ರಾಣಿ ಚಂಪಕಾ
ಲೇ: ಕೆ. ಅರುಣ್‌ಪ್ರಸಾದ್,
ಆನಂದಪುರಂ ಅಂಚೆ, ಶಿವಮೊಗ್ಗ ಜಿಲ್ಲೆ,
E-Mail ; arunprasadasagara@gmail.com
Phone  9449253788
ಬೆಲೆ: ೧೦೦ ರೂ.
ಪುಟ: ೯೦+೧೦
ಸೈಜ್ : ೧/೮ ಡೆ",
ಪುಸ್ತಕ ತರಿಸಿಕೊಳ್ಳಲು ಈ ಕೆಳಕಂಡ ವಿಳಾಸಕ್ಕೆ ಸಂರ್ಪಗ ಮಾಡಿ.
ಪ್ರಕಾಶಕರು: ಪಶ್ಚಿಮಘಟ್ಟದ ಶಿವಮೊಗ್ಗ
ಓದುಗ- ವಿಮರ್ಶಕ ಬಳಗ,
ಹೊಂಬುಜ ರೆಸಿಡೆನ್ಸಿ, ಎನ್.ಹೆಚ್. ೨೦೬
ಯಡೆಹಳ್ಳಿ, ಆನಂದಪುರಂ ಅಂಚೆ
ಶಿವಮೊಗ್ಗ ಜಿಲ್ಲೆ- ೫೭೭೪೧೨
ಮೊ: ೯೪೪೯೨೫೩೭೮೮
ವಿನ್ಯಾಸ ಮತ್ತು ಮುದ್ರಣ:
ಜನಹೋರಾಟ ಪ್ರಿಂಟರ್‍ಸ್,
೨ನೇ ತಿರುವು, ನೆಹರು ರಸ್ತೆ, ಶಿವಮೊಗ್ಗ,
ದೊ: ೦೮೧೮೨-೨೭೩೭೫೩

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ