Skip to main content

Blog number 1024. ಕಾಲ ಹಿಮ್ಮಡಿ ಬಿರುಕು ಬಿಡುವ ಕಾಲ, ಈಗಲೇ ಕಾಲಿನ ಅಂಗಾಲಿನ ರಕ್ಷಣೆಗೆ ಮುಂದಾಗಿ, ಹಿಮ್ಮಡಿ ಮೇಲಿನ ಒತ್ತಡ, ದೀರ್ಘಕಾಲ ನಿಲ್ಲುವುದು, ಚಳಿಗಾಲದ ಶುಷ್ಕ ಹವೆ, ಪಾದದಲ್ಲಿ ಕೊಳೆ ಸಂಗ್ರಹಗಳು ಹಿಮ್ಮಡಿ ಬಿರುಕಿಗೆ ಕಾರಣ.

#ಸದ್ಯದಲ್ಲೇ_ಚಳಿಗಾಲ_ಪ್ರಾರಂಭ

#ಕಾಲ_ಹಿಮ್ಮಡಿ_ಒಡೆಯುವ_ಕಾಲ

#ಈಗಲೇ_ಕಾಲಿನ_ಹಿಮ್ಮಡಿ_ಬಗ್ಗೆ_ಜಾಗೃತೆ_ಮಾಡಿ

#ಚಳಿಗಾಲದಲ್ಲಿಯೇ_ಹಿಮ್ಮಡಿ_ಬಿರುಕು_ಏಕೆ?

#ಮುಖದಷ್ಟೆ_ಕಾಳಜಿ_ಕಾಲಿನ_ಪಾದಕ್ಕೂ_ಇರಲಿ.

   ಎಷ್ಟೇ ಜಾಗೃತೆ ಮಾಡಿದರೂ ಕಾಲ ಹಿಮ್ಮಡಿ ಬಿರುಕು ಬೀಳುತ್ತೆ... ಅಯ್ಯೋ ನೋವು..... ರಕ್ತ ಬರುತ್ತದೆ ಅಂತೆಲ್ಲ ಕಾಲಿನ ಪಾದದ ಬಿರುಕು ಉಂಟಾದ ಮೇಲೆ ಪಶ್ಚಾತ್ತಾಪ ಪಡುವವರನ್ನು ನೋಡುತ್ತೇವೆ ಇದರಲ್ಲಿ ಪುರುಷರಿಗಿಂತ ಸ್ತ್ರಿಯರೇ ಹೆಚ್ಚು.
   ಕಾಲ ಹಿಮ್ಮಡಿ ಬಿರುಕು ಸ್ವತಃ ನಾನು ಅನುಭವಿಸಿದ್ದೆ ಕಳೆದ 30 ವರ್ಷದಿಂದ ಮಾತ್ರ ನಾನು ಇದರಿಂದ ಬಾದೆ ಪಡಲಿಲ್ಲ ಕಾರಣ ಪ್ರತಿವಷ೯ ದೀಪಾವಳಿಗೆ ಮೊದಲೇ ನಾನು ನನ್ನ ಪಾದದ ಹಿಮ್ಮಡಿ ಗಮನಿಸಲು ಪ್ರಾರಂಬಿಸುತ್ತೇನೆ ಮುಖದಷ್ಟೆ ಕಾಳಜಿ ಪಾದಗಳ ಬಗ್ಗೆ ಕೂಡ ಕಾಳಜಿ ವಹಿಸಬೇಕು.
   ಬರಿಗಾಲಿನಲ್ಲಿ ನಡೆಯುವುದು, ಚಪ್ಪಲಿ ದರಿಸಿದರೂ ಹಿಮ್ಮಡಿ ಮುಚ್ಚದೇ ಇರುವುದರಿಂದ ಪಾದದಲ್ಲಿ ಮತ್ತು ಹಿಮ್ಮಡಿಯಲ್ಲಿ ಕೊಳೆ ಸಂಗ್ರಹವಾಗುವುದರಿಂದ ಬಿರುಕು ಬಿಡುವ ಸಾಧ್ಯತೆ ಹೆಚ್ಚು.
   ಚಳಿ ಪ್ರಾರಂಭವಾದಾಗ ಪರಿಸರದಲ್ಲಿ ತೇವಾಂಶ ಕಡಿಮೆ ಆದಾಗ ಚರ್ಮ ಒಣಗುತ್ತದೆ, ಹೆಚ್ಚು ಸಮಯ ನಿಂತು ಕೆಲಸ ಮಾಡುವವರಲ್ಲಿ ಹಿಮ್ಮಡಿ ಮೇಲಿನ ಒತ್ತಡ ಜಾಸ್ತಿ ಆಗುವುದರಿಂದ ಚರ್ಮದಲ್ಲಿ ಬಿರುಕು, ಹುಣ್ಣು ಮತ್ತು ರಕ್ತಸ್ರಾವದ ಸಾಧ್ಯತೆ ಜಾಸ್ತಿ.
   ವಯಸ್ಸಾದಂತೆ ಚರ್ಮದ ಸ್ಥಿತಿ ಸ್ಥಾಪಕ ಗುಣ ಕಳೆದುಕೊಳ್ಳುತ್ತದೆ ಇದರಿಂದ ಹೆಚ್ಚು ಒಣಗುವುದು, ಒರಟಾಗುವುದು, ತೈಲಾಂಶ ಉತ್ಪತ್ತಿ ಕಡಿಮೆ ಆಗುವುದು ಮತ್ತು ಮದುಮೇಹ ರೋಗಿಗಳಲ್ಲಿ ನರಗಳಿಗೆ ಹಾನಿ ಆಗುವುದು, ಪಾದಗಳ ಶುಷ್ಕತೆ ಕೂಡ ಬಿರುಕಿಗೆ ಕಾರಣ.
  ವೈದ್ಯಶಾಸ್ತ್ರದಲ್ಲಿ ವಿಟಮಿನ್ C, ವಿಟಮಿನ್ B-3, ವಿಟಮಿನ್ E ಕೊರತೆ, ತೂಕ - ಸ್ಥೂಲಕಾಯ, ಒಣ ಚರ್ಮ, ತೆರೆದ ಚಪ್ಪಲಿ, ಹಿಮ್ಮಡಿ ಸುತ್ತಲೂ ಕಡಿಮೆ ಸಂಖ್ಯೆಯ ಸೆಟಾ ಗ್ರಂಥಿಗಳು ಹೊಂದಿರುವುದರಿಂದ ಚರ್ಮ ಒಣಗಿ ಬಿರುಕಿಗೆ ಕಾರಣ ಅನ್ನುತ್ತದೆ.
  ನಾನು ಕಾಲ ಹಿಮ್ಮಡಿ ಬಿರುಕಿಗೆ ಕಂಡುಕೊಂಡ ಪರಿಹಾರ ಚಳಿಗಾಲದ ಪ್ರತಿ ದಿನ ರಾತ್ರಿ ಪಾದಗಳನ್ನು ಕೊಳೆಯಿಂದ ಸಂಪೂರ್ಣ ತೊಳೆದು ಒಣಗಿಸಿ ವ್ಯಾಸಲೀನ್ ಲೇಪಿಸುತ್ತೇನೆ ಇದರಿಂದ ಕಾಲಿನ ಬಿರುಕು ಆಗುವುದೇ ಇಲ್ಲ.
  ವಾರಕ್ಕೊಮ್ಮೆ ಬಿಸಿ ನೀರಿನ ಬಕೇಟ್ ನಲ್ಲಿ ಪಾದಗಳನ್ನು 10 ನಿಮಿಷ ಅದ್ದಿಟ್ಟು ನಂತರ ಪಾದದ ಹಿಮ್ಮಡಿಯ ಮೃತ ಚರ್ಮ ಕೋಶಗಗಳನ್ನು ನಿವಾರಿಸುತ್ತೇನೆ ಮತ್ತುನಾನು ತೆರೆದ ಚಪ್ಪಲಿಯನ್ನೆ ಧರಿಸುವುದು ಮತ್ರು ಮನೆಯ ಒಳಗೆ ಮೆತ್ತನೆಯ ಹವಾಯಿ ಚಪ್ಪಲಿ ಧರಿಸುತ್ತೇನೆ.
    ಚಳಿಗಾಲದಲ್ಲಿ ಹಿಮ್ಮಡಿ ಮುಚ್ಚುವ ಶೂ ಧರಿಸಿದರೆ ಪಾದದಲ್ಲಿ ಕೊಳೆ ಸೇರುವ ಸಂಭವ ಕಡಿಮೆ.
   ಮಳೆಗಾಲದ ಮುಕ್ತಾಯ ಮತ್ತು ಚಳಿಗಾಲದ ಆರಂಭ ಕಾಲದಲ್ಲೇ ಪಾದಗಳ ಆರೈಕೆ ಪ್ರಾರಂಭ ಮಾಡಿದರೆ ಹಿಮ್ಮಡಿ ಬಿರುಕಿನ ನೋವಿನಿಂದ ಸುಲಭವಾಗಿ ಪಾರಾಗಬಹುದು.
  #ನಮ್ಮ_ಮುಖದಷ್ಟೇ_ಕಾಳಜಿ_ನಮ್ಮ_ಪಾದಕ್ಕೂ_ವಹಿಸಬೇಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...