Skip to main content

Blog number 1030. ಪಶ್ಚಿಮ ಘಟ್ಟದ ವಿಶೇಷ ಕಾಮದೇನು ಗೋತಳಿ ಮಲೆನಾಡು ಗಿಡ್ಡ ನಶಿಸುತ್ತಿರುವ ಗೋವಿನ ತಳಿಯಿಂದ ಗೋಮಯ ದೀಪಾವಳಿ ಹಣತೆ ದೀಪದ ತಯಾರಿಯಿಂದ ಮಲೆನಾಡು ಗಿಡ್ದ ಗೋ ತಳಿ ಸಂರಕ್ಷಣೆ ಮತ್ತು ದೀಪಾವಳಿ ಮುಗಿದ ನಂತರ ಈ ಹಣತೆ ಹೂವಿನ ಗಿಡಕ್ಕೆ ಗೊಬ್ಬರ ಆಗುವ ಪರಿಸರದ ಚಕ್ರ.

#ಹಚ್ಚೇವು_ಕನ್ನಡದ_ದೀಪ_ಪ್ರಸಿದ್ಧ_ಹಾಡು

#ಹಚ್ಚೇವು_ಈಸಾರಿ__ಗೋಮಯದ_ಹಣತೆಯ_ದೀಪ

#ಪಶ್ಚಿಮಘಟ್ಟದ_ವಿಶೇಷ_ಗೋಸಂತತಿ_ಮಲೆನಾಡುಗಿಡ್ಡದಿಂದ

#ಪರಿಸರ_ಪ್ರೇಮಿ_ಕೃಷಿವಿಜ್ಞಾನಿ_ನಾಗೇಂದ್ರಸಾಗರ್_ನೀಡಿದ_ದೀಪಾವಳಿ_ಉಡುಗೊರೆ.

#ದೀಪಾವಳಿ_ನಂತರ_ಹೂವಿನಗಿಡಗಳಿಗೆ_ಗೊಬ್ಬರವಾಗುವ_ಗೋಮಯದ_ದೀಪದ_ಹಣತೆಗಳು

#ಇದರಲ್ಲಿ_ಎರೆಡು_ಉದ್ದೇಶದ_ಆಂದೋಲನ_ಅವರದ್ದು

#ಮಲೆನಾಡು_ದೇಸಿ_ಗಿಡ್ಡ_ಸಂತತಿ_ಉಳಿಸುವುದು

#ಪಿಂಗಾಣಿ_ಗಾಜಿನ_ಹಣತೆಯ_ಪರಿಸರ_ಮಾಲಿನ್ಯ_ತಡೆಯುವುದು.

#ಗೋಮಯ_ಹಣತೆ_ದೀಪಾ_ಬೇಕಾದವರು_ಅವರನ್ನು_ಸಂಪರ್ಕಿಸಬಹುದು

#ಅವರ_ಸೆಲ್_ನಂಬರ್_8147299353.

   ನಾನು ನನ್ನ ವೈಯಕ್ತಿಕ ಆಹಾರೋದ್ಯಮದ ಪ್ರಯೋಗದಲ್ಲಿ  ನಾಗೇಂದ್ರ ಸಾಗರ್ ಅವರನ್ನು ಗೋಳುಹೊಯ್ದುಕೊಳ್ಳುವ ಸ್ನೇಹ ಸಲಿಗೆಗೆ 27 ವರ್ಷದ ದೀರ್ಘ ಕಾಲದ ಸಂಬಂದವೂ ಇದೆ.
   ಪ್ರತಿ ದೀಪಾವಳಿ - ಯುಗಾದಿಗೆ ನನ್ನ ಸಿಬ್ಬಂದಿಗಳಿಗೆ ಮತ್ತು ಆತ್ಮೀಯರಿಗೆ ಹೋಳಿಗೆ ತುಪ್ಪ ತಲುಪಿಸುವ ನನ್ನ ಪದ್ಧತಿ ನಿರಂತರವಾಗಿ ನಡೆದಿದೆ ಆದರೆ ಹೋಳಿಗೆ ಮಾಡುವ ಹದ- ಕ್ರಮ ಮತ್ತು ಅದರ ಪ್ಯಾಕಿಂಗ್ ವಿಬಿನ್ನವಾದರೂ ನನಗೆ ತೃಪ್ತಿ ನೀಡುವ ಹೋಳಿಗೆ ತಯಾರಕರು ಅಥವ ಸರಬರಾಜುದಾರರು ಸಿಕ್ಕಿಲ್ಲ ಆದ್ದರಿಂದ ಈ ಸಾರಿ ನಾಗೇಂದ್ರ ಸಾಗರರಿಗೆ ವಿನಂತಿಸಿದ್ದೆ.
    ಅವರು ಅವರಲ್ಲಿ ತರಬೇತಿಪಡೆದ ಒಬ್ಬರಿಗೆ ಜವಾಬ್ದಾರಿ ವಹಿಸಿದ್ದರು ಮತ್ತು ಗುಣಮಟ್ಟ, ಪ್ಯಾಕಿಂಗ್ ಬಗ್ಗೆ ವಿಶೇಷ ತರಬೇತಿ ಕೊಡಿಸಿದ್ದರಿಂದ ಈ ಬಾರಿಯ ಅವರಿಂದ ಖರೀದಿಸಿದ 450 ಹೋಳಿಗೆ ನಂ1 ಆಗಿದೆ ಮತ್ತು ಪ್ರತಿ 5 ಹೋಳಿಗೆಗೆ ಪ್ರತ್ಯೇಕ ಪುಡ್ ಗ್ರೇಡ್ ಪ್ಲಾಸ್ಟಿಕ್ ಕವರಿನಿಂದ ಹೋಳಿಗೆಗೆ ಖದರು ಬ೦ದಿದೆ.
   ಈ ಹೋಳಿಗೆ ನಾಗೇಂದ್ರ ಸಾಗರರು ಶಿವಮೊಗ್ಗದ ಅವರ ಬ್ಯಾಂಕಿನ ಮೀಟಿಂಗ್ ಗೆ ಹೋಗುವಾಗ ಅವರ ವಾಹನದಲ್ಲಿ ತಂದುಕೊಟ್ಟರು ಮತ್ತು ಹೊಸದಾಗಿ ಅವರ ಗೋ ಉತ್ಪನ್ನಗಳ ಕೆಲಸದ ಬಗ್ಗೆ ತಿಳಿಸಿದರು.
   ಈ ದೀಪಾವಳಿ ಹಬ್ಬಕ್ಕಾಗಿಯೇ ಪಶ್ಚಿಮಘಟ್ಟದ ದೇಸಿ ಮಲೆನಾಡು ಗಿಡ್ಡ ಜಾನುವರುಗಳಿಂದ ಗೋಮಯದ ಹಣತೆಗಳನ್ನು ತಯಾರಿಸಿದ್ದಾರೆ ಇದು ಹಬ್ಬ ಮುಗಿದ ನಂತರ ಹೂವಿನ ಗಿಡದ ಬುಡದಲ್ಲಿ ಹಾಕಿದರೆ ಅದು ಕರಗಿ ಹೂವಿನ ಗಿಡಕ್ಕೆ ಗೊಬ್ಬರ ಆಗಲಿದೆ ಇದರಿಂದ ಈ ಪರಿಸರ ಪ್ರೇಮಿ ಹಣತೆ ಗೊಬ್ಬರದ ಲಾಭವೂ ನೀಡುತ್ತದೆ ಮುಂದಿನ ದಿನದಲ್ಲಿ ಈ ಗೋಮಯ ಹಣತೆ,ಶುದ್ದ ಹತ್ತಿಯ ಬತ್ತಿ ಮತ್ತು ಗಾಣದಿಂದ ತೆಗೆದ ಎಳ್ಳು ಎಣ್ಣೆಯ ಜೊತೆ ಆಕರ್ಷಕ ದೀಪಾವಳಿ ಗಿಫ್ಟ್ ಪ್ಯಾಕ್ ಮಾಡಿ ಮಾರಾಟ ಮಾಡಲು ಅನೇಕ ತಂಡಗಳಿಗೆ ತರಬೇತಿ ನೀಡುವ ಉದ್ದೇಶ ಅವರದ್ದು ಇದೊಂದು ಆಂದೋಲನ ಆಗಬೇಕು ಇದರಿಂದ ಮಲೆನಾಡು ಗಿಡ್ದ ಸಂತತಿ ಸಂರಕ್ಷಣೆ ಕೂಡ ಆಗಬೇಕೆನ್ನುವ ಆಶಯ ಅವರದ್ದು.
  ವಿಶೇಷ ಅಂದರೆ ಈ ಗೋಮಯ ದೀಪಾವಳಿಯ ಹಣತೆ ದೀಪಾವಳಿಯ ಉಡುಗೊರೆ ಆಗಿ ಮೊದಲಿಗೆ ನನಗೇ ನೀಡಿದ್ದಾರೆ ಅವರ ಉದ್ಯಮದ ಪವಿತ್ರ ಗೋಮಯ ಹಣತೆ ಪ್ರಥಮ ಬಳಕೆದಾರನಾಗಿ ಸ್ವೀಕರಿಸಿ ಅವರಿಗೆ ಶುಭ ಹಾರೈಸಿದೆ.
   ಈ ವಷ೯ದ ದೀಪಾವಳಿ ನನಗೆ ಮಲೆನಾಡು ಗಿಡ್ದದ ಗೋಮಯ ಹಣತೆಯಿಂದ ವಿಶೇಷವಾಗಿದೆ.
  ನಾಗೇಂದ್ರ ಸಾಗರ್ ಸಂಪರ್ಕ ಸಂಖ್ಯೆ 81472 99353.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ