Skip to main content

Blog number 1030. ಪಶ್ಚಿಮ ಘಟ್ಟದ ವಿಶೇಷ ಕಾಮದೇನು ಗೋತಳಿ ಮಲೆನಾಡು ಗಿಡ್ಡ ನಶಿಸುತ್ತಿರುವ ಗೋವಿನ ತಳಿಯಿಂದ ಗೋಮಯ ದೀಪಾವಳಿ ಹಣತೆ ದೀಪದ ತಯಾರಿಯಿಂದ ಮಲೆನಾಡು ಗಿಡ್ದ ಗೋ ತಳಿ ಸಂರಕ್ಷಣೆ ಮತ್ತು ದೀಪಾವಳಿ ಮುಗಿದ ನಂತರ ಈ ಹಣತೆ ಹೂವಿನ ಗಿಡಕ್ಕೆ ಗೊಬ್ಬರ ಆಗುವ ಪರಿಸರದ ಚಕ್ರ.

#ಹಚ್ಚೇವು_ಕನ್ನಡದ_ದೀಪ_ಪ್ರಸಿದ್ಧ_ಹಾಡು

#ಹಚ್ಚೇವು_ಈಸಾರಿ__ಗೋಮಯದ_ಹಣತೆಯ_ದೀಪ

#ಪಶ್ಚಿಮಘಟ್ಟದ_ವಿಶೇಷ_ಗೋಸಂತತಿ_ಮಲೆನಾಡುಗಿಡ್ಡದಿಂದ

#ಪರಿಸರ_ಪ್ರೇಮಿ_ಕೃಷಿವಿಜ್ಞಾನಿ_ನಾಗೇಂದ್ರಸಾಗರ್_ನೀಡಿದ_ದೀಪಾವಳಿ_ಉಡುಗೊರೆ.

#ದೀಪಾವಳಿ_ನಂತರ_ಹೂವಿನಗಿಡಗಳಿಗೆ_ಗೊಬ್ಬರವಾಗುವ_ಗೋಮಯದ_ದೀಪದ_ಹಣತೆಗಳು

#ಇದರಲ್ಲಿ_ಎರೆಡು_ಉದ್ದೇಶದ_ಆಂದೋಲನ_ಅವರದ್ದು

#ಮಲೆನಾಡು_ದೇಸಿ_ಗಿಡ್ಡ_ಸಂತತಿ_ಉಳಿಸುವುದು

#ಪಿಂಗಾಣಿ_ಗಾಜಿನ_ಹಣತೆಯ_ಪರಿಸರ_ಮಾಲಿನ್ಯ_ತಡೆಯುವುದು.

#ಗೋಮಯ_ಹಣತೆ_ದೀಪಾ_ಬೇಕಾದವರು_ಅವರನ್ನು_ಸಂಪರ್ಕಿಸಬಹುದು

#ಅವರ_ಸೆಲ್_ನಂಬರ್_8147299353.

   ನಾನು ನನ್ನ ವೈಯಕ್ತಿಕ ಆಹಾರೋದ್ಯಮದ ಪ್ರಯೋಗದಲ್ಲಿ  ನಾಗೇಂದ್ರ ಸಾಗರ್ ಅವರನ್ನು ಗೋಳುಹೊಯ್ದುಕೊಳ್ಳುವ ಸ್ನೇಹ ಸಲಿಗೆಗೆ 27 ವರ್ಷದ ದೀರ್ಘ ಕಾಲದ ಸಂಬಂದವೂ ಇದೆ.
   ಪ್ರತಿ ದೀಪಾವಳಿ - ಯುಗಾದಿಗೆ ನನ್ನ ಸಿಬ್ಬಂದಿಗಳಿಗೆ ಮತ್ತು ಆತ್ಮೀಯರಿಗೆ ಹೋಳಿಗೆ ತುಪ್ಪ ತಲುಪಿಸುವ ನನ್ನ ಪದ್ಧತಿ ನಿರಂತರವಾಗಿ ನಡೆದಿದೆ ಆದರೆ ಹೋಳಿಗೆ ಮಾಡುವ ಹದ- ಕ್ರಮ ಮತ್ತು ಅದರ ಪ್ಯಾಕಿಂಗ್ ವಿಬಿನ್ನವಾದರೂ ನನಗೆ ತೃಪ್ತಿ ನೀಡುವ ಹೋಳಿಗೆ ತಯಾರಕರು ಅಥವ ಸರಬರಾಜುದಾರರು ಸಿಕ್ಕಿಲ್ಲ ಆದ್ದರಿಂದ ಈ ಸಾರಿ ನಾಗೇಂದ್ರ ಸಾಗರರಿಗೆ ವಿನಂತಿಸಿದ್ದೆ.
    ಅವರು ಅವರಲ್ಲಿ ತರಬೇತಿಪಡೆದ ಒಬ್ಬರಿಗೆ ಜವಾಬ್ದಾರಿ ವಹಿಸಿದ್ದರು ಮತ್ತು ಗುಣಮಟ್ಟ, ಪ್ಯಾಕಿಂಗ್ ಬಗ್ಗೆ ವಿಶೇಷ ತರಬೇತಿ ಕೊಡಿಸಿದ್ದರಿಂದ ಈ ಬಾರಿಯ ಅವರಿಂದ ಖರೀದಿಸಿದ 450 ಹೋಳಿಗೆ ನಂ1 ಆಗಿದೆ ಮತ್ತು ಪ್ರತಿ 5 ಹೋಳಿಗೆಗೆ ಪ್ರತ್ಯೇಕ ಪುಡ್ ಗ್ರೇಡ್ ಪ್ಲಾಸ್ಟಿಕ್ ಕವರಿನಿಂದ ಹೋಳಿಗೆಗೆ ಖದರು ಬ೦ದಿದೆ.
   ಈ ಹೋಳಿಗೆ ನಾಗೇಂದ್ರ ಸಾಗರರು ಶಿವಮೊಗ್ಗದ ಅವರ ಬ್ಯಾಂಕಿನ ಮೀಟಿಂಗ್ ಗೆ ಹೋಗುವಾಗ ಅವರ ವಾಹನದಲ್ಲಿ ತಂದುಕೊಟ್ಟರು ಮತ್ತು ಹೊಸದಾಗಿ ಅವರ ಗೋ ಉತ್ಪನ್ನಗಳ ಕೆಲಸದ ಬಗ್ಗೆ ತಿಳಿಸಿದರು.
   ಈ ದೀಪಾವಳಿ ಹಬ್ಬಕ್ಕಾಗಿಯೇ ಪಶ್ಚಿಮಘಟ್ಟದ ದೇಸಿ ಮಲೆನಾಡು ಗಿಡ್ಡ ಜಾನುವರುಗಳಿಂದ ಗೋಮಯದ ಹಣತೆಗಳನ್ನು ತಯಾರಿಸಿದ್ದಾರೆ ಇದು ಹಬ್ಬ ಮುಗಿದ ನಂತರ ಹೂವಿನ ಗಿಡದ ಬುಡದಲ್ಲಿ ಹಾಕಿದರೆ ಅದು ಕರಗಿ ಹೂವಿನ ಗಿಡಕ್ಕೆ ಗೊಬ್ಬರ ಆಗಲಿದೆ ಇದರಿಂದ ಈ ಪರಿಸರ ಪ್ರೇಮಿ ಹಣತೆ ಗೊಬ್ಬರದ ಲಾಭವೂ ನೀಡುತ್ತದೆ ಮುಂದಿನ ದಿನದಲ್ಲಿ ಈ ಗೋಮಯ ಹಣತೆ,ಶುದ್ದ ಹತ್ತಿಯ ಬತ್ತಿ ಮತ್ತು ಗಾಣದಿಂದ ತೆಗೆದ ಎಳ್ಳು ಎಣ್ಣೆಯ ಜೊತೆ ಆಕರ್ಷಕ ದೀಪಾವಳಿ ಗಿಫ್ಟ್ ಪ್ಯಾಕ್ ಮಾಡಿ ಮಾರಾಟ ಮಾಡಲು ಅನೇಕ ತಂಡಗಳಿಗೆ ತರಬೇತಿ ನೀಡುವ ಉದ್ದೇಶ ಅವರದ್ದು ಇದೊಂದು ಆಂದೋಲನ ಆಗಬೇಕು ಇದರಿಂದ ಮಲೆನಾಡು ಗಿಡ್ದ ಸಂತತಿ ಸಂರಕ್ಷಣೆ ಕೂಡ ಆಗಬೇಕೆನ್ನುವ ಆಶಯ ಅವರದ್ದು.
  ವಿಶೇಷ ಅಂದರೆ ಈ ಗೋಮಯ ದೀಪಾವಳಿಯ ಹಣತೆ ದೀಪಾವಳಿಯ ಉಡುಗೊರೆ ಆಗಿ ಮೊದಲಿಗೆ ನನಗೇ ನೀಡಿದ್ದಾರೆ ಅವರ ಉದ್ಯಮದ ಪವಿತ್ರ ಗೋಮಯ ಹಣತೆ ಪ್ರಥಮ ಬಳಕೆದಾರನಾಗಿ ಸ್ವೀಕರಿಸಿ ಅವರಿಗೆ ಶುಭ ಹಾರೈಸಿದೆ.
   ಈ ವಷ೯ದ ದೀಪಾವಳಿ ನನಗೆ ಮಲೆನಾಡು ಗಿಡ್ದದ ಗೋಮಯ ಹಣತೆಯಿಂದ ವಿಶೇಷವಾಗಿದೆ.
  ನಾಗೇಂದ್ರ ಸಾಗರ್ ಸಂಪರ್ಕ ಸಂಖ್ಯೆ 81472 99353.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...