Skip to main content

Blog number 1013. HOMBUJA RESIDENCY/GARDENIA NOW PET FRIENDLY, ಸಾಕುಪ್ರಾಣಿಗಳ ಜೊತೆ ಪ್ರವಾಸ ಮಾಡುವ ಕುಟುಂಬಗಳಿಗೆ ಸಾಕು ಪ್ರಾಣಿ ಜೊತೆ ತಂಗಲು ಮತ್ತು ಅವುಗಳ ಆಹಾರ ತಯಾರಿಸಿ ಕೊಡುವ ಜಿಲ್ಲೆಯ ಏಕೈಕ ಮತ್ತು ಮೊದಲ ಲಾಡ್ಜ್.

#Shivamoga_District_only_PET_FRIENDLY_LODGE

#Hombuja_Residency_and_Gardenia.

Hombuja Residency
8088857771
https://maps.app.goo.gl/WqT6M9TyzZf6bYfo6

#ಶಿವಮೊಗ್ಗ_ಜೋಗ್_ಪಾಲ್ಸ್_ಮಾರ್ಗ_ಮದ್ಯದ_ನಮ್ಮ_ಲಾಡ್ಜ್_ಪೆಟ್_ಪ್ರೆಂಡ್ಲಿ

#ಸಾಕು_ಪ್ರಾಣಿಯ_ಜೊತೆ_ಪ್ರವಾಸ_ಮಾಡುವ_ಕುಟುಂಬಕ್ಕೆ_ಯಾವುದೇ_ಆತಂಕವಿಲ್ಲದ_ತಂಗುದಾಣ

#ತಂಗುವ_ಪ್ರವಾಸಿಗೆ_ಉಚಿತ_ಕಾಂಪ್ಲಿಮೆಂಟರಿ_ಬ್ರೇಕ್_ಪಾಸ್ಟ್

#ಸಾಕು_ಪ್ರಾಣಿಗೆ_ಉಚಿತ_ಕಾ೦ಪ್ಲಿಮೆಂಟರಿ_ಮೀಲ್ 

#ಸಾಕು_ಪ್ರಾಣಿಗೆ_ಬೇಕಾದ_ಆಹಾರದ_ಮೆನು_ಪ್ರಕಾರ_ತಯಾರಿಸಿ_ಕೊಡುವ_ವ್ಯವಸ್ಥೆ.

#ವೆಟರ್ನರಿ_ಡಾಕ್ಟರ್_24X7_ಸಲಹೆ_ಲಭ್ಯ.

   ಸಾಕು ಪ್ರಾಣಿಯ ಬಗ್ಗೆ ಮನುಷ್ಯನ ಸಂಬಂದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಇತ್ತೀಚೆಗೆ ರಷ್ಯಾ ಯುದ್ಧದಿಂದ ಭಾರತಕ್ಕೆ ಬರಬೇಕಾಗಿದ್ದ ಅನೇಕ ವೈದ್ಯ ವಿದ್ಯಾರ್ಥಿಗಳು ತಮ್ಮ ಸಾಕು ನಾಯಿ - ಬೆಕ್ಕುಗಳನ್ನು ಬಿಟ್ಟು ಬರಲು ಒಪ್ಪಲೇ ಇಲ್ಲ.
  ನನ್ನ ಪರಿಚಿತರ ಮಗಳು ಮತ್ತು ಅಳಿಯ ಆಸ್ಟ್ರೇಲಿಯಾದಲ್ಲಿ ನಾಯಿ ಸಾಕಿದ್ದಾರೆ ಅವರು ಅದನ್ನು ಬಿಟ್ಟು ಬಾರತಕ್ಕೆ ಬರಲು ತಯಾರಿಲ್ಲ ಕಾರಣ ಸಾಕು ಪ್ರಾಣಿ ಆಸ್ಟ್ರೇಲಿಯಾದಿಂದ ತರಲು ವಿಮಾನದಲ್ಲಿ ಅವಕಾಶ ಇಲ್ಲ ಬೇಕಾದರೆ ವಿಶೇಷ ವಿಮಾನ ತರಿಸಿ ಕರೆದೊಯ್ಯಬಹುದು.
  ನಿಷ್ಕಲ್ಮಷ ಸಾಕು ಪ್ರಾಣಿಗಳೂ ತಮ್ಮ ಜೀವವನ್ನೇ ತನ್ನ ಅನ್ನದಾತರಿಗೆ ಮುಡುಪಾಗಿಡುತ್ತದೆ.
    ಪ್ರಪಂಚದ ಎಲ್ಲಾ ತಳಿಯ ನಾಯಿ - ಬೆಕ್ಕುಗಳನ್ನು ತಂದು ಮಾರಾಟ ಮಾಡುವ ಬ್ರೀಡರ್ ಗಳು, ಕೆನಲ್ ಪಾರಂಗಳು ಈಗ ಎಲ್ಲಾ ಕಡೆ ಶುರುವಾಗಿದೆ ಇದರ ಬೆಲೆಯೂ ಕಡಿಮೆ ಏನಲ್ಲ ಮೊನ್ನೆ ಶಿವಮೊಗ್ಗದ ಶ್ವಾನ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿರುವ ವಿಶ್ವ ಪ್ರಸಿದ್ದ ಬ್ರೀಡರ್ ತಂದ ಟಿಬೆಟಿಯನ್ ಮಿಸ್ಟಿಪ್ ಬೆಲೆ ಹತ್ತು ಕೋಟಿ!!!.
  ಪೆಟ್ ಅನಿಮಲ್ ಆಹಾರ - ಔಷದಿ - ಆಟದ ಸಾಮಾನು- ಅದರ ಪರಿಕರ ತಯಾರಿ ಮತ್ತು ಮಾರಾಟದ ಗಾತ್ರ ಮತ್ತು ಹಣದ ಚಲಾವಣೆ ವಿಶ್ವದಾದ್ಯಂತ ಲಕ್ಷ - ಲಕ್ಷ ಕೋಟಿ ಮೀರಿದೆ.
   ದೊಡ್ಡ ದೊಡ್ಡ ಶಹರದಲ್ಲಿ ಪೆಟ್ ಅನಿಮಲ್ ಜೊತೆ ಲಾಡ್ಜ್ ಗಳಲ್ಲಿ ಉಳಿಯಲು ಪ್ರತ್ಯೇಕ ವ್ಯವಸ್ಥೆ ಇರುತ್ತದೆ, ಜೊತೆಗೆ ಅದಕ್ಕೆ ಬೇಕಾದ ಆಹಾರ ತಯಾರಿಸಿ ಕೊಡುವ ಮತ್ತು ತಜ್ಞ ವೆಟನರಿ ವೈದ್ಯರು ಲಭ್ಯವಿರುತ್ತಾರೆ.
   ಮತ್ತು ಪೆಟ್ ಅನಿಮಲ್ ಫ್ರೆಂಡ್ಲಿ ಲಾಡ್ಜ್ ಆಗಲು ಅನೇಕ ಮಾನದಂಡಗಳಿದೆ ಅದಕ್ಕೆ ಬೇಕಾದ ಪರಿಕರಗಳಿದೆ ಇದಕ್ಕಾಗಿ ಲಕ್ಷಾಂತರ ಹಣ ವಿನಿಯೋಗ ಕೂಡ ಮಾಡಬೇಕು.
  ಇದಕ್ಕಾಗಿ ವಿಶೇಷವಾದ ಸ್ವಚ್ಚತೆಯ ಜವಾಬ್ದಾರಿ ಅದಕ್ಕೆ ಬೇಕಾದ ಪ್ರತ್ಯೇಕ ಪಾಗಿಂಗ್ ಇತ್ಯಾದಿ ಪರಿಕರ ಮತ್ತು ಇದಕಾಗಿಯೇ ತರಬೇತಿ ಹೊಂದಿದ ಸಿಬ್ಬಂದಿ ಮತ್ತು ಅವುಗಳಿಗೆ ಬೇಕಾದ ಆಹಾರ ಹೈಜೀನ್ ಆಗಿ ತಯಾರಿಸು ಜವಾಬ್ದಾರಿ ಮತ್ತು ತರಬೇತಿ ಲಾಡ್ಜ್ ಮಾಲಿಕರು ಮತ್ತು ಆಡಳಿತ ಮಂಡಳಿ ಹೊಂದಿರಬೇಕು.
  ಅಷ್ಟೇ ಅಲ್ಲ ಪೆಟ್ ಅನಿಮಲ್ ಮಾಲಿಕರು ಅವುಗಳಿಗೆ ವ್ಯಾಕ್ಸಿನೇಷನ್ ಮಾಡಿಸಿದ ದಾಖಲೆ ಲಾಡ್ಜ್ ಗೆ ಹಾಜರು ಪಡಿಸಬೇಕು, ಕುತ್ತಿಗೆಗೆ ಲಾಷ್ ಬಳಸಬೇಕು, ಲಾಡ್ಜ್ ಹೊರ ಅವರಣದಲ್ಲಿ ಕಾರಿಡಾರ್ ನಲ್ಲಿ ಒಯ್ಯುವ ಸಂದಭ೯ದಲ್ಲಿ ಮಜಲ್ಸ್ (ಮುಖಗವಸು ) ಕಡ್ಡಾಯವಾಗಿ ಹಾಕಿರಬೇಕು, ಜೊತೆಗೆ ಅದರ ಪಾಲಕರು ಇರಲೇಬೇಕು.
   ಅವರ ಪೆಟ್ ಗಳ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ನಮ್ಮಲಾಡ್ಜ್ ನಲ್ಲಿ ಪೆಟ್ ಗಳಿಗೆ ಬೇಕಾದ ಆಹಾರದ ಮೆನು
1. ಚಿಕನ್ & ರೈಸ್ (ಜ್ಯೂಸಿ ಆಫ್ ಚಿಕನ್ & ಸ್ಟಾಕ್ ವಿತ್ ರೈಸ್ ಜೊತೆಗೆ ಪರಿಶುದ್ಧ ದೇಸಿ ಅರಿಶಿಣ ಪುಡಿ ಸೇರಿಸಿದ ಆಹಾರ.
2. ಪಿಶ್&ರೈಸ್ ( ಸೀಸನಲ್ ).
3. ಗುಡ್ ಒಲ್ಡ್ ಕಿಚಡಿ (soothing meal of rice and dhal).
4. ಚಿಕನ್ ಬ್ರೋತ್. 
ಗ್ರಾಹಕರ ಆಯ್ಕೆ ಮೇಲೆ ತಯಾರಿಸಿ ಕೊಡುವ ವ್ಯವಸ್ಥೆ ಮಾಡಿದ್ದೇವೆ.
  ನಮ್ಮಲ್ಲಿ  ಇಂತಹ ಇಬ್ಬರು ತಂಗುವ  ಪ್ರತ್ಯೇಕ AC ರೂಂ ಮತ್ತು ಕಾಂಪ್ಲಿಮೆ೦ಟರಿ ಬ್ರೇಕ್ ಪಾಸ್ಟ್ ಮತ್ತು ಅವರ ಸಾಕು ಪ್ರಾಣಿಗೆ ಒಂದು ಕಾಂಪ್ಲಿಮೆಂಟರಿ ಚಿಕನ್‌ ಮೀಲ್ ವ್ಯವಸ್ಥೆಯ ಜೊತೆ ಇಡೀ ಕುಟುಂಬ ಕಂಪರ್ಟ್ಬಲ್ ಆಗಿ ತಂಗಿ ಪ್ರವಾಸ ಮಾಡುವ ಅವಕಾಶ ಕಲ್ಪಿಸಲಾಗಿದೆ.
  ಬಹುಶಃ ಇಂತಹ ವ್ಯವಸ್ಥೆ ಕಲ್ಪಿಸಿದ ಜಿಲ್ಲೆಯ ಮೊದಲ ಲಾಡ್ಜ್ ನಮ್ಮದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ