Skip to main content

Blog number 1035. ಆನಂದಪುರಂ ಇತಿಹಾಸ ಭಾಗ ಸಂಖ್ಯೆ 84. ಕೋಡಿಮಠದ ಕಾಲಜ್ಞಾನ ಭವಿಷ್ಯ ಹೇಳುವ ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ.ಸ್ವಾಮಿಗಳು ಆನಂದಪುರಂಗೆ ಬಂದಿದ್ದರು

#ಆನಂದಪುರಂ_ಇತಿಹಾಸ_ಭಾಗ_ಸಂಖ್ಯೆ_86

#ಕೋಡಿಮಠದ_ಸ್ವಾಮೀಜಿ_ಆನಂದಪುರಂಗೆ_ಬಂದಿದ್ದರು.

#ಹಾಸನಜಿಲ್ಲೆಯ_ಅರಸೀಕೆರೆ_ತಾಲ್ಲೂಕಿನ_ಹಾರನಳ್ಳಿ_ಕೋಡಿಮಠ

#ಶಿವಾನಂದ_ಶಿವಯೋಗಿ_ರಾಜೇಂದ್ರ_ಮಹಾಸ್ವಾಮಿಗಳು_ಹೇಳುವ_ಕಾಲಜ್ಞಾನ_ಭವಿಷ್ಯ.

#ಚುನಾವಣೆ_ಮುಖ್ಯಮಂತ್ರಿ_ಸರ್ಕಾರ_ಯುದ್ಧ_ಭೂಕ೦ಪ_ದಾರ್ಮಿಕ_ಸಂಘರ್ಷ_ಕೊರಾನಾ_ಬಗ್ಗೆ_ಭವಿಷ್ಯ

#ಇವರ_ಮಠದ_ಕಾಲಜ್ಞಾನ_ಭವಿಷ್ಯ_ಕೇಳಲು_ಇಂದಿರಾಗಾಂಧಿ_ಬಂದಿದ್ದರು

#ಏನಿದು_ಕಾಲಜ್ಞಾನ_ತಾಳೆಗರಿ_ಭವಿಷ್ಯ_ಪುಸ್ತಕ?

   ನಮ್ಮ ಊರ ಸಮೀಪದ ಮುರುಘಾ ಮಠದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಅದ್ದೂರಿಯಾಗಿ ನಡೆಯುತ್ತದೆ ಆಗ ಅಧಿಕಾರದಲ್ಲಿರುವ ಜನಪ್ರತಿನಿಧಿಗಳನ್ನು, ಜನಪ್ರಿಯ ವ್ಯಕ್ತಿಗಳನ್ನು ಮತ್ತು ಪ್ರಬಾವಿಗಳನ್ನು ಅತಿಥಿಗಳಾಗಿ ವೇದಿಕೆ ಆಲಂಕರಿಸಲು ಸದರಿ ಮಠದವರು ಆಹ್ವಾನಿಸುವುದು ಕ್ರಮವಾಗಿದೆ.
  1996ರಲ್ಲಿ ನಾನು ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದರಿಂದ ಆ ವಷ೯ದ ಕಾರ್ತಿಕ ದೀಪೋತ್ಸವಕ್ಕೆ ಮುರುಘಾಮಠದ ಶ್ರೀ ಮನ್ಮಹಾ ನಿರಂಜನ ಮಹಾ ಸ್ವಾಮಿಗಳು ನನಗೆ ಆಹ್ವಾನ ನೀಡಿದ್ದರು.
   ವೇದಿಕೆಯಲ್ಲಿ ನನ್ನ ಪಕ್ಕದಲ್ಲಿ ಕುಳಿತ ಸ್ವಾಮೀಜಿಗಳು ನಮ್ಮ ಊರಿಗೆ ಪರಿಚಿತರಲ್ಲ ಆದರೆ ಅವರನ್ನು ಎಲ್ಲೋ ನೋಡಿದ್ದೇನೆ ಅನ್ನಿಸುತ್ತಿತ್ತು ಆದರೆ ನೆನಪಾಗುತ್ತಿರಲಿಲ್ಲ ಹಾಗಂತ ನೀವ್ಯಾರು ಅಂತ ಅವರನ್ನೇ ಕೇಳೋಣ ಅನ್ನಿಸಿದರು ಅದು ಸೌಜನ್ಯವಲ್ಲ ಅಂತ ಮೆದುಳಿನ ನೆನಪಿನ ಕೋಶದಲ್ಲಿ ಸರ್ಚ್ ಮಾಡುತ್ತಾ ಕುಳಿತಾಗ ಪ್ಲಾಶ್ ಆಯಿತು.
   ಆಗ ವಿಶ್ವದಾದ್ಯಂತ ಪ್ರಳಯ ಆಗಲಿದೆ ಎಂಬ ಸುದ್ದಿ ಹಬ್ಬಿತ್ತು!!.. ನಾಸ್ಟ್ರೋಡಾಮನ್ ಭವಿಷ್ಯ ಕೂಡ ಸೇರಿ ಜನರಲ್ಲಿ ಭಯ ಉಂಟು ಮಾಡಿತ್ತು.
   ಆಗ ನ್ಯಾಷನಲ್ ಹೈವೆಗಾಗಿ ದೇಶದಾದ್ಯಂತಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭ ಆಗಿತ್ತು ಆಗ ತರಂಗ ವಾರ ಪತ್ರಿಕೆ ಕೋಡಿಮಠದ ಸ್ವಾಮಿಗಳ ಸಂದರ್ಶನ ಮುಖ ಪುಟದಲ್ಲಿ ಪ್ರಕಟಿಸಿತ್ತು "ಪ್ರಳಯ ಅಂದರೆ ನ್ಯಾಷನಲ್ ಹೈವೇ ಕೂಡ " ಅಂತ ಕೋಡಿಹಳ್ಳಿ ಸ್ವಾಮಿ ಹೇಳಿಕೆ ಅವರ ಪೋಟೊದೊಂದಿಗೆ ಪ್ರಕಟಿಸಿದ್ದು ನೆನಪಾಯಿತು.
  ತಕ್ಷಣ ಮುರುಘ ರಾಜೇ೦ದ್ರ ಮಹಾಸ್ವಾಮಿಗಳಿಗೆ ವಿನ೦ತಿಸಿದೆ ಕೋಡಿಮಠದ ಸ್ವಾಮಿಗಳು ಇವತ್ತಿನ ವಿಶೇಷ ಅತಿಥಿಯಾಗಿದ್ದಾರೆ ಅವರ ಮಾತುಗಳು ನಮಗೆ ಮುಖ್ಯ ಅಂದೆ ಆಗ ಅವರು ಹೇಳಿದ್ದೇನೆಂದರೆ ಕೋಡಿಮಠದ ಸ್ವಾಮಿಗಳು ಯಾವ ಕಾರಣಕ್ಕೂ ಬಾಷಣ ಮಾಡುವುದಿಲ್ಲ ಅಂದಿದ್ದಾರೆ ಅಂದಾಗ ನಾನು ಕೋಡಿಮಠದ ಸ್ವಾಮೀಜಿಯವರಿಗೆ ನೀವು ನಮ್ಮ ಊರಿಗೆ ಬಂದದ್ದೆ ನಮ್ಮ ಸೌಭಾಗ್ಯ ನೀವು ಆಶ್ರೀವಚನ ನೀಡಲೇ ಬೇಕೆಂದೆ ಅವರು ನನ್ನ ಪರಿಚಯ ಕೇಳಿ ತಿಳಿದು ನಂತರ ತಾವು ಯಾವ ಕಾರಣಕ್ಕೂ ಬಾಷಣ ಮಾಡುವುದಿಲ್ಲ ಅಂದರು.
   ಸಾವಿರಾರು ಜನರಿಂದ ತುಂಬಿ ತುಳುಕಿತ್ತಿದ್ದ ಸಭೆಯಲ್ಲಿ ನನ್ನ ಭಾಷಣ ಶುರುವಾಯಿತು ... "ಇವತ್ತಿನ ನಮ್ಮ ಮುರುಘ ರಾಜೇಂದ್ರ ಮಠದ ಕಾರ್ತಿಕ ಮಹೋತ್ಸವಕ್ಕೆ ವಿಶೇಷ ಅತಿಥಿಗಳು ಬಂದಿದ್ದಾರೆ... ಪ್ರದಾನ ಮಂತ್ರಿ ಇಂದಿರಾ ಗಾಂಧಿ ಇವರನ್ನು ಬೇಟಿ ಮಾಡಲು ಬಂದಿದ್ದರು..... ಕೆಲ ವಾರದ ಹಿಂದಿನ ತರಂಗ ಪತ್ರಿಕೆಯಲ್ಲಿ ಪ್ರಳಯ ಆಗುವುದಿಲ್ಲ ಪ್ರಳಯ ಅಂದರೆ ನ್ಯಾಷನಲ್ ಹೈವೆ ಭೂ ಸ್ವಾಧೀನ ಅಂದಿದ್ದ ಪ್ರಖ್ಯಾತ ಸ್ವಾಮಿಗಳು ಈ ವೇದಿಕೆಯಲ್ಲಿರುವುದು ನಮ್ಮ ಆನಂದಪುರದ ಸೌಬಾಗ್ಯ"...ಅಂದಾಗ ಇಡೀ ಸಭೆ ಪಿನ್ ಡ್ರಾಪ್ ಸೈಲೆನ್ಸ್.
   ಅವರು ಭಾಷಣ ಮಾಡುವುದಿಲ್ಲ ಎಂಬ ಹಠದಲ್ಲಿದ್ದಾರೆ ಆದರೆ ನಾನು ನಿಮ್ಮೆಲ್ಲರ ಪರವಾಗಿ ಈ ವೇದಿಕೆಯಲ್ಲಿ ಅವರು ನಮಗೆ ಆಶ್ರೀವಚನ ನೀಡಲೇ ಬೇಕೆಂದಾಗ ಇಡೀ ಸಭೆ ಕರತಾಡನ ಮೂಲಕ ನನ್ನ ಬೇಡಿಕೆಗೆ ಬೆಂಬಲಿಸಿತು.
  ನಂತರ ಕೋಡಿಮಠದ ಸ್ವಾಮಿಗಳು ಸಭಿಕರನ್ನು ಉದ್ದೇಶಿಸಿ ಸುಮಾರು ಮುಕ್ಕಾಲು ಗಂಟೆ  ಮಾತನಾಡಿದರು ಮತ್ತು ಅವರು ಹೇಳಿದ್ದು ನಿಮ್ಮ ಜಿಲ್ಲಾ ಪಂಚಾಯಿತಿ ಸದಸ್ಯರು ನನ್ನನ್ನು ಮಾತಾಡಲೇ ಬೇಕೆಂದು ಕಟ್ಟು ಹಾಕಿದರೆಂದರು.
  ಅವತ್ತು ಅವರ ಜೊತೆ ಬಂದು ವೇದಿಕೆ ಹಂಚಿಕೊಂಡ ಚಿಕ್ಕಮಗಳೂರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಚಂದ್ರೇಗೌಡರು ಮತ್ತು ಕೋಡಿಮಠದ ಸ್ವಾಮೀಜಿಗಳು ಕೋಡಿಮಠಕ್ಕೆ ಬರಲೇ ಬೇಕೆಂದು ಆಹ್ವಾನಿಸಿದ್ದರು ಆದರೆ ಈವರೆಗೆ ನನಗೆ ಸಾಧ್ಯವಾಗಲಿಲ್ಲ ಮತ್ತು ಚಂದ್ರೇಗೌಡರೂ ಈಗ ಇಲ್ಲ.
   ಕೋಡಿಮಠದ ಸ್ಟಾಮಿಗಳು ಹೇಳುವ ಅವರ ಮಠದ ಪೂರ್ವಿಕ ಸ್ವಾಮಿಗಳು ಬರೆದ ತಾಳೆಗರಿಯ ಕಾಲಜ್ಞಾನ ಪುಸ್ತಕದ ಭವಿಷ್ಯವಾಣಿ ಯಾವತ್ತೂ ಸುಳ್ಳಾಗಿಲ್ಲ ಎಂಬ ಅನೇಕ ಘಟನೆಗಳು ನಡೆದಿವೆ.
  1973 ರಲ್ಲಿ ನನ್ನ ತಂದೆ ಮತ್ತು ಅವರ ಗೆಳೆಯರಾದ ಹಿರಿಯರಕದ ಯೋಮಕೇಶಪ್ಪ ಗೌಡರು ಕೋಡಿಮಠದ ಕಾಲಜ್ಞಾನ ಭವಿಷ್ಯ ಕೇಳಲು ಹೋಗಿದ್ದ ಅನುಭವ ಹೇಳಿದ್ದರು.
   ತಾಳೆಗರಿಯ ಕಾಲಜ್ಞಾನ ಪುಸ್ತಕದ ಯಾವುದೇ ಪುಟ ನಾವು ಕಡ್ಡಿಯಿಂದ ಆಯ್ಕೆ ಮಾಡಬೇಕು ಆ ಪುಟದಲ್ಲಿ ಬರೆದದ್ದು ನಮ್ಮ ಬೂತ-ವರ್ತಮಾನ - ಭವಿಷ್ಯ ಕಾಲದ ಕಥೆ ಹೇಳುತ್ತದಂತೆ.
  ಈ ಕಾಲಜ್ಞಾನ ತಾಳೆಗರಿ ಹೊತ್ತಿಗೆ ಬೇರೆಲ್ಲೂ ಒಯ್ಯಬಾರದೆಂಬ ಕೋಡಿಮಠದ ಹಿರಿಯ ಸ್ವಾಮಿಜಿಯವರ ಆದೇಶ ಈಗಿನ ಸ್ವಾಮೀಜಿಗಳು ಪಾಲಿಸುತ್ತಿಲ್ಲ ಎಂಬ ಆರೋಪವೂ ಇದೆ.
  ಇಂತಹ ಅನೇಕ ಕಾಲ ಜ್ಞಾನ ಹೊತ್ತಿಗೆ (ಕೈವಾರ ತಾತಯ್ಯ) ಅನೇಕ ಕಡೆ ಇದೆ ಇದರಲ್ಲಿನ ಜ್ಯೋತಿಷ್ಯ ಕೂಡ ಒಂದು ವಿಜ್ಞಾನ ಅನ್ನುತ್ತಾರೆ.
  ಇತ್ತೀಚೆಗೆ ಕೋಡಿಮಠದ ಸ್ವಾಮಿಗಳು "ಬಯಲು ಸೀಮೆ ಮಲೆನಾಡಾಗುತ್ತೆ" ಅನ್ನುವುದು 2017ರಲ್ಲಿ "ಪ್ರಮುಖ ಪಕ್ಷದ ರಾಜಕೀಯ ನಾಯಕ ಮುಖ್ಯಮಂತ್ರಿ ಆಗುವುದಿಲ್ಲ ಅನಿರಿಕ್ಷಿತ ವ್ಯಕ್ತಿ ರಾಜ್ಯದ ಅರಸನಾಗುತ್ತಾನೆ " ಎನ್ನುವುದೆಲ್ಲ ಸತ್ಯವಾಗಿದೆ.
  ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ಕಾಲ ಜ್ಞಾನ ಭವಿಷ್ಯ ಯಾವತ್ತೂ ಸುಳ್ಳಾಗಿಲ್ಲ ಎಂಬುದು ಮತ್ತು 1996 ರಲ್ಲಿ ಆನಂದಪುರಂಗೆ ಇವರು ಬಂದಿದ್ದು ವಿಶೇಷ.
   ಸಭಾ ಕಾರ್ಯಕ್ರಮದ ನಂತರ  ಇಡೀ ಸಭೆ ಇವರನ್ನು ಗೌರವಿಸಿ ಬೀಳ್ಕೊಟ್ಟಿದ್ದು ಈ ಭಾಗದಲ್ಲಿ ಅನೇಕ ವರ್ಷಗಳ ಕಾಲ ಜನ ನೆನಪಿಸುತ್ತಿದ್ದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ