#ಬಳ್ಳಿಗಾವೆ #ನಾಟ್ಯರಾಣಿ_ಶಾಂತಲಾದೇವಿ ಸುಮಾರು ಕ್ರಿ.ಶ. 1108 ರಿಂದ 1152 ರವರೆಗೆ ಆಡಳಿತ ನಡೆಸಿದ ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೊರೆ ವಿಷ್ಣುವರ್ಧನರ (ಬಿಟ್ಟಿಗ) ಪಟ್ಟದ ರಾಣಿ. 12ನೇ ಶತಮಾನದ ಪ್ರಸಿದ್ಧ ವಚನಕಾರ, ಶಿವಶರಣ ಮತ್ತು ಅನುಭಾವಿ ಅಲ್ಲಮಪ್ರಭು (ಸುಮಾರು ಕ್ರಿ.ಶ. 1160-1200) ಇವರಿಬ್ಬರ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಎಂಬುದು ವಿಶೇಷ. ಬಳ್ಳಿಗಾವೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ. ದಕ್ಷಿಣದ ಕೇದಾರನಾಥವೆಂದು ಕರೆಯಲ್ಪಡುತ್ತದೆ, ಶಿಕಾರಿಪುರ ಪಟ್ಟಣದಿಂದ ಸುಮಾರು ೨೧ ಕಿ.ಮೀ ದೂರವಿರುವ ಈ ಪುಟ್ಟ ಹಳ್ಳಿ. ಹೊಯ್ಸಳರ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ತವರುಮನೆ. ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ನಾಟ್ಯ ರಾಣಿ ಶಾಂತಲಾ ದೇವಿಯನ್ನು ಶಿಲಾ ಬಾಲಕಿಯಾಗಿ ಈಗಲೂ ನೋಡುತ್ತೇವೆ. ಹೊಯ್ಸಳ ಶೈಲಿಯ ಕೇದಾರೆಶ್ವರ ದೇವಾಲಯದ ನಿರ್ಮಾಣ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು. ಬಳ್ಳಿಗಾವಿ (ಬಳ್ಳಿಗಾಮೆ) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಸುಮಾರು 2000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಪ್ರಾಚೀನ ನಗರ. ಇದು ಶಾತವಾಹನರಿಂದ ಕದಂಬರು, ಚ...