Skip to main content

Posts

Showing posts from September, 2023

Blog number 1770. ಪರಿಶುದ್ಧ ಅರಿಶಿಣದ ಹೆಸರಲ್ಲಿ ವಿಷಕಾರಿ ರಾಸಾಯ ಬಣ್ಣ ಮೆಟಾನಿಲ್ ಯೆಲ್ಲೋ ಸೀಮೆ ಸುಣ್ಣದ ಪುಡಿಯ ಕಲಬೆರಕೆ ಅರಿಶಿಣ ಪುಡಿ ಮಾರಾಟ ಮತ್ತು ಬಳಕೆಯಲ್ಲಿದೆ.

https://youtube.com/shorts/YTpObN0dRcA?feature=shared #ಕಲಬೆರಕೆ_ಅರಿಶಿಣ_ಪರೀಕ್ಷೆಯ_ಸುಲಭ_ವಿಧಾನ_ಇಲ್ಲಿದೆ #ಅರಿಶಿಣಪುಡಿಯಿಂದ_ಆರೋಗ್ಯ_ಆದರೆ #ಮಾರುಕಟ್ಟೆಯಲ್ಲಿರುವುದು_ಕಲಬೆರಕೆ_ಅರಿಶಿಣಪುಡಿ #ಸೀಮೆಸುಣ್ಣದ_ಪುಡಿ_ಮೆಟಾನಿಲ್_ಯಲ್ಲೋ_ಸೇರಿಸಿದ_ಅರಿಶಿಣಪುಡಿ_ಬಳಕೆಯಲ್ಲಿದೆ. #ನಾವು_ನಮ್ಮ_ಮಲ್ಲಿಕಾವೆಜ್_ರೆಸ್ಟೋರೆಂಟನಲ್ಲಿ_ಬಳಸುವುದು_ಪರಿಶುದ್ಧ_ಅರಿಶಿಣಪುಡಿ. #ಅರಿಶಿಣಪುಡಿ_ತುಪ್ಪ_ಬೆಲ್ಲ_ಮಿಶ್ರಿತ_ಗೋಲ್ಡನ್_ವಿಶ್ವವಿಖ್ಯಾತವಾಗಿದೆ.   ಭಾರತೀಯ ಆಹಾರೋದ್ಯಮದಲ್ಲಿ ಕಲಬೆರಕೆ ಸಂಪೂರ್ಣ ನಿಷೇದ ಯಾವ ಕಾಯಿದೆಯಿಂದಲೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಯಾಕೆಂದರೆ ನಾವು ಬೆಳೆಯುವ ಬೆಳೆಯಲ್ಲಿ ಸೇರುವ ಔಷದ ಮತ್ತು ಗೊಬ್ಬರದ ವಿಷ ಒಂದು ಕಡೆ ಆದರೆ ಮಾರಾಟಗಾರರು ಮಾರುವ ಸಿದ್ದಪಡಿಸಿದ ಆಹಾರ ಉತ್ಪನ್ನಗಳಲ್ಲಿ ಮಾಡುವ ಕಲಬೆರಕೆ ಇನ್ನೊಂದು ವಿಷದ್ದು ಇದನ್ನು ಬಳಸುವ ಗ್ರಾಹಕನಿಗೆ ಡಬಲ್ ವಿಷದ ದಮಾಕಾ!!...    ಇವತ್ತು ಹೋಟೆಲ್ ಮಾಲಿಕರುಗಳ ಮೇಲೆ ಗ್ರಾಹಕರು ಕಡಿಮೆ ಬೆಲೆಯಲ್ಲಿ ಆಹಾರ ನೀಡಲಿ ಎಂಬ ಒತ್ತಡ ಮತ್ತು ಹೋಟೆಲ್ ಮಾಲಿಕರುಗಳು ದುರಾಸೆಯಿಂದ ಕಡಿಮೆ ಬೆಲೆಯ  ಎಣ್ಣೆ, ಚಹಾಪುಡಿ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್, ಮಸಾಲೆ ಪುಡಿಯನ್ನು ಬಳಸುತ್ತಾರೆ ಕಡಿಮೆ ಬೆಲೆ ಅಂದರೆ ಅದು ಕಲಬೆರಕೆಯೇ ಆಗಿರುತ್ತದೆ.    ಈಗ ಭಾರತೀಯ ಅಡುಗೆಯಲ್ಲಿ ಅವಿಭಾಜ್ಯ ಅಂಗವಾದ ಅರಿಶಿಣ ಪುಡಿ ಕೂಡ ಕಲಬೆರಕೆ ಅಂತ ಬಹಳ ಜನರಿಗೆ ಅರಿವಿಲ್ಲ.

Blog number 1769. ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ಹತ್ತನೆ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಅವರ ಅಣ್ಣ ತಿಮ್ಮಪ್ಪರ ಮಗ ಅಣ್ಣಪ್ಪರೊಡನೆ .

https://youtu.be/WmPDMvF5NgM?feature=shared #ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರ_ಪುಣ್ಯಸ್ಮರಣೆ. #ಜನನ_3_ಆಗಸ್ಟ್_1924 #ಮರಣ_30_ಸೆಪ್ಟೆಂಬರ್_2014. #ಕೆಂಜಿಗಾಪುರದಿಂದ_ಮು೦ಡುಗೋಡಿಗೆ_ಟಿಬೆಟಿಯನ್_ಕ್ಯಾಂಪ್_ವರ್ಗಾಯಿಸಿದವರು #ಈ_ಸ್ಮರಣಾರ್ಥ_ನಮ್ಮ_ಊರಿನ_ಕೆಂಜಿಗಾಪುರ_ರಸ್ತೆಯ_ಸರ್ಕಾರಿ_ಶಾಲೆಯಲ್ಲಿ_ಗಣಪತಿಯಪ್ಪ_ರಂಗಮಂದಿರ_ಇದೆ. #ಆಗಿನ_ಮುಖ್ಯಮಂತ್ರಿ_ಕಡಿದಾಳರು_ಸ್ವಾತಂತ್ರ್ಯ_ಹೋರಾಟಗಾರರಿಗೆ_ಕೆಂಜಿಗಾಪುರದಲ್ಲಿ_ಜಮೀನು_ನೀಡಿದ್ದರು #ಈ_ಜಮೀನು_ತನ್ನಣ್ಣ_ತಿಮ್ಮಪ್ಪರಿಗೆ_ಬಿಟ್ಟುಕೊಟ್ಟಿದ್ದರು #ಗಣಪತಿಯಪ್ಪರ_ಅಣ್ಣನ_ಮಗ_ಇದನ್ನು_ಸ್ಮರಿಸಿದ್ದಾರೆ.    ಕೆಂಜಿಗಾಪುರದ ಅಣ್ಣಪ್ಪ ನಿನ್ನೆ ನನ್ನ ಆಫೀಸಿಗೆ ಬಂದಿದ್ದರು ಇವತ್ತು ಸಾಗರದ ಒಡ್ನಾಳದಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್. ಗಣಪತಿಯಪ್ಪರ ಹತ್ತನೆ ಪುಣ್ಯ ತಿಥಿ ಆಚರಣೆಯಲ್ಲಿ ಭಾಗವಹಿಸಲು ಹೋಗುವುದಾಗಿ ತಿಳಿಸಿದರು ಇವರು ಗಣಪತಿಯಪ್ಪರ ಅಣ್ಣ ತಿಮ್ಮಪ್ಪರ ಏಕೈಕ ಪುತ್ರ.     ಈ ಸಂದರ್ಭದಲ್ಲಿ ಇವರು ತನ್ನ ಚಿಕ್ಕಪ್ಪ ತಮಗೆ ಮಂಜೂರಾದ ಫಲವತ್ತಾದ ಎರೆಡು ಬೆಳೆ ಬೆಳೆಯುವ ನೀರಾವರಿ ಜಮೀನು ತಮ್ಮ ತಂದೆಗೆ ಬಿಟ್ಟು ಕೊಟ್ಟಿದ್ದೇ ಈಗ ನಮ್ಮ ಆಸ್ತಿ ಮತ್ತು ಜೀವನಾದಾರ ಎಂದು ಸ್ಮರಣೆ ಮಾಡಿದರು ಈಗ ಅಣ್ಣಪ್ಪರ ಇಬ್ಬರು ಮಕ್ಕಳು ಸ್ವಂತ ಶ್ರಮದಿಂದ ಈ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದಾರೆ ಅಣ್ಣಪ್ಪರ ತಂಗಿ ತ್ರಿವೇಣಿ ಅಣ್ಣಪ್ಪರ ಜೊತೆಯೇ ವಾಸವಾಗಿದ್ದಾಳೆ,

Blog number 1768. ಆಗ್ರಾ ಪೇಠಾ ಆನಂದಪುರಂನಲ್ಲಿ

https://youtube.com/shorts/R1kSOjm-2Ck?feature=shared #ಆಗ್ರಾ_ಪೇಠಾ_ಆನಂದಪುರಂನಲ್ಲಿ. #ವಿಶ್ವವಿಖ್ಯಾತ_ತಾಜ್_ಮಹಲು_ನೋಡಲು_ಬರುವವರಿಗಾಗಿ_ಸಿಹಿ_ಮಿಟಾಯಿ #ಆಗ್ರಾದಲ್ಲಿ_ದೊಡ್ಡ_ಪ್ರಮಾಣದಲ್ಲಿ_ಪೇಠಾ_ತಯಾರಾಗುತ್ತೆ #ಮಲೆನಾಡಿನ_ಬೂದುಗುಂಬಳ_ಸಕ್ಕರೆ_ಸೇರಿದ_ಮಿಟಾಯಿಗೆ_ಪೇಠಾ_ಎಂಬ_ಹೆಸರು. #ಇವತ್ತು_ನನ್ನ_ಮಗ_ತಯಾರಿಸಿದ_ಪೇಠಾ_ನೋಡಿ.   1973-74 ರಲ್ಲಿ ನಮ್ಮ ಊರಿನ ಜಗದೀಶಣ್ಣ (ಈಗ ಆನಂದಪುರ೦ನ ಬಸ್ ನಿಲ್ದಾಣದ ಎದುರು ಭಾರತ್ ಕೆಫೆ ಹೋಟೆಲ್ ಮಾಲಿಕರು) ದೈಹಿಕ ಶಿಕ್ಷಕರಾಗಿದ್ದ ಶಿಸ್ತಿನ ಸಿಪಾಯಿ ಎಸ್. ಆರ್.ಕೃಷ್ಣಪ್ಪರ ಶಿಷ್ಯರಾಗಿದ್ದರು,           ಅವರು ಬೆಂಗಳೂರಿನ ಸೇವಾದಳದ ರಾಮರಾವ್ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಶರಣಾಗತರಾಗಿದ್ದ ಚಂಬಲ್ ಕಣಿವೆ ಡಕಾಯಿತರ ಪುನರ್ವಸತಿಗಾಗಿ ಪ್ರಾರಂಬಿಸಿದ್ದ ಗಾಂಧೀ ಆಶ್ರಮದಲ್ಲಿ ಸೇವೆ ಮಾಡಲು ಜಗದೀಶಣ್ಣರನ್ನ ಕಳಿಸಿದ್ದರು.    ಅವರು ರಜೆಗೆ ಊರಿಗೆ ಬಂದಾಗ ಈ ತಿಂಡಿ ತಂದು ನಮ್ಮ ತಾಯಿಗೆ ನೀಡಿದ್ದು ನನಗೆ ನೆನಪಿದೆ.   ಅವತ್ತು ನನ್ನ ತಾಯಿಯ ಗೆಳತಿಯರಾದ ಬೀಬಕ್ಕ,ಗುಲಾಬಿ, ಕ್ರಿಸ್ತಿನಕ್ಕ ಮತ್ತು ಅವರ ಮಗಳು ರೀತಕ್ಕ ಎಲ್ಲಾ ಸೇರಿಕೊಂಡು ಕವಡೆ ಮಣೆ ಆಡುತ್ತಿದ್ದರು, ಎಲ್ಲರೂ ಅದೇ ಮೊದಲ ಬಾರಿ ಈರೀತಿಯ ಸಿಹಿ ತಿಂಡಿ ನೋಡಿದ್ದು ಮತ್ತು ತಿಂದಿದ್ದು.   ಜಗದೀಶಣ್ಣ ಒಂದು ಪ್ರಶ್ನೆ ಕೇಳಿದರು ಇದು ಯಾವುದರಲ್ಲಿ ಮಾಡಿದ್ದು ಹೇಳಿ? ಅಂತ ಅವರ್ಯಾರಿಗೂ ಉತ್ತರ ಹೊಳೆಯಲೇ

Blog number 1767. ಚಳಿಗಾಲದಲ್ಲಿ ಪಾದಗಳ ಸಂರಕ್ಷಣೆ

#ಚಳಿಗಾಲದಲ್ಲಿ_ಪಾದದ_ಹಿಮ್ಮುಡಿ_ಸಂರಕ್ಷಣೆ_ಅತಿ_ಮುಖ್ಯ #ಪಾದದ_ರಕ್ಷಣೆಗೆ_ನಿರ್ಲಕ್ಷ್ಯ_ಮಾಡಿದರೆ_ಹಿಮ್ಮುಡಿ_ಸೀಳಿ_ಹೆಚ್ಚು_ಬಾದಿಸುತ್ತದೆ. #ಚಳಿಗಾಲದ_ಪ್ರಾರಂಬಕ್ಕೆ_ಮೊದಲೇ_ಪಾದಗಳ_ಜಾಗೃತೆ_ಮಾಡಿ. #ಸ್ಕ್ರಬ್ಬರ್_ಬಳಸುವುದು_ಸುರಕ್ಷಿತ. https://youtu.be/ci2fkKg9MJQ?feature=shared  ಪುರುಷರು ತಮ್ಮ ಮೈಕಾಂತಿಯ ಸೌಂದರ್ಯ ಪ್ರಜ್ಞೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಗಮನವಹಿಸುವುದಿಲ್ಲ ಈ ವಿಚಾರದಲ್ಲಿ ಮಹಿಳೆಯರಿಗಿಂತ ಕಡಿಮೆ ಸೌಂದರ್ಯ ಪ್ರಜ್ಞೆ ಪುರುಷರಲ್ಲಿದೆ ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಇದನ್ನು ಮಹಿಳೆಯರು ಪುರುಷರಿಗೆ ವಿವರಿಸುವುದಲ್ಲಿ ಆಸಕ್ತಿ ಇರುವುದಿಲ್ಲ.    ಪುರುಷರ ಅಂಗಾಲ ಹಿಮ್ಮಡಿಯ ತ್ವಚೆ ಚಳಿಗಾಲದಲ್ಲಿ ಒಡೆದು ಬಿರುಕು ಬಿಡುವುದು ಒಂದು ಆದರೆ ಇದನ್ನು ಪುರುಷರು ಚಳಿಗಾಲದ ಮೊದಲೇ ಮುಂಜಾಗೃತೆ ವಹಿಸಿದರೆ ವರ್ಷಪೂರ್ತಿ ಆರೋಗ್ಯವಂತ ಅಂಗಾಲ ಹಿಮ್ಮುಡಿ ತ್ವಚೆ ಒಡೆಯದಂತೆ ನೋಡಿ ಕೊಳ್ಳಬಹುದು.    ಚಳಿಗಾಲ ದೂರವಿದೆ ಈಗಲೇ ಅವಸರ ಏಕೆ? ಅನ್ನುತ್ತಾ ನಿರ್ಲಕ್ಷ್ಯವಹಿಸಿದರೆ ಅಂಗಾಲ ಹಿಮ್ಮಡಿ ಬಿರುಕು ಬಾದಿಸದೇ ಬಿಡದು.    ವರ್ಷದ ಮಳೆಗಾಲ ಮುಕ್ತಾಯ ಮತ್ತು ಚಳಿಗಾಲದ ಮೊದಲೆ ನಮ್ಮ ಪಾದಗಳ ಆರೈಕೆಗೆ ತಯಾರಿ ಮಾಡಬೇಕು, ಪಾದಗಳ ಡೆಡ್ ಸ್ಕಿನ್ ಗಳನ್ನು ಸ್ಕ್ರಬ್ಬರ್ ಗಳನ್ನು ಬಳಸಿ ನಿವಾರಿಸಬೇಕು (ಇದು ಕಾರ್ಪೆಂಟರ್ ಗಳು ಮರದ ಪೀಠೋಪಕರಣಗಳ ಮೇಲ್ಮೈ ನುಣುಪು ಮಾಡಲು ಉಪ್ಪು ಕಾಗದ ಬಳಸುವಂತೆ) ಒಣ ಪಾದಗ

Blog number 1766. ಅವಸಾನದ ಅಂಚಿನಲ್ಲಿದೆ ಮಲೆನಾಡು ಗಿಡ್ಡ ಗೋತಳಿ, ದೇಶಿ ತಳಿ ಜಾನುವಾರು ಸಂರಕ್ಷಣೆ ಯೋಜನೆಯು ಸಾದಿಸಿದ್ದೇನು? ಬ್ಯಾಂಕುಗಳ ಅಸಹಕಾರ ಸರಿಯಾದೀತೆ?

#ಮಲೆನಾಡು_ಗಿಡ್ಡ_ದನದ_ತುಪ್ಪಕ್ಕೆ_ಬಾರೀ_ಬೆಲೆ_ಬಂದಿದೆ #ಮಲೆನಾಡು_ಗಿಡ್ಡ_ದನದ_ಹಾಲಿನ_A2_ಸೋಪಿಗೆ_ಬಾರೀ_ಬೇಡಿಕೆ #ಮಲೆನಾಡು_ಗಿಡ್ಡದ_ಸಗಣಿ_ಮೂತ್ರಕ್ಕೂ_ಬೇಡಿಕೆ #ಮೃತ_ಮಲೆನಾಡು_ಗಿಡ್ದದಿಂದ_ಗೊಬ್ಬರ_ಕೂಡ #ಮಲೆನಾಡು_ಗಿಡ್ದ_ಇದ್ದರೂ_ಸಾವಿರ_ಸತ್ತರೂ_ಸಾವಿರ_ಎಂಬ_ಗಾದೆ_ಮಾತು. #ಹೀಗಿದ್ದೂ #ಮಲೆನಾಡು_ಗಿಡ್ಡ_ತಳಿ_ಉಳಿದೀತೆ? #ಮಲೆನಾಡು_ಗಿಡ್ಡ_ತಳಿ_ಅವಸಾನದ_ಅಂಚನಲ್ಲಿದೆ. #ದೇಶಿತಳಿ_ಜಾನುವಾರು_ಸಂರಕ್ಷಣೆಗೆ_ಸರ್ಕಾರದ_ದೊಡ್ಡ_ದೊಡ್ಡ_ಘೋಷಣೆ #ಆದರೆ_ಬ್ಯಾಂಕುಗಳು_ಮಲೆನಾಡು_ಗಿಡ್ಡಕ್ಕೆ_ಸಾಲ_ನೀಡುವುದಿಲ್ಲ.     ನಮ್ಮ ಬಾಲ್ಯದಲ್ಲಿ ನಮ್ಮ ಕೊಟ್ಟೆಗೆ ತುಂಬಾ ಮಲೆನಾಡು ಗಿಡ್ದ ಜಾನುವಾರುಗಳೇ ತುಂಬಿತ್ತು ಅದರಲ್ಲಿ ಗಿಡ್ಡಿ ಎಂಬ ದನ ತುಂಬಾ ಸಾದು ಅದರ ಎದುರು ಕುಳಿತರೆ ನಮ್ಮ ತಲೆ ನೆಕ್ಕಲು ಪ್ರಾರಂಬಿಸಿ ಕೆಚ್ಚಲಿನಲ್ಲಿ ಹಾಲು ಸುರಿಸುತ್ತಿತ್ತು ಇದರ ಸ್ವಭಾವಕ್ಕೆ ವಿರುದ್ದವಾದ ಬೋಳಿ ಎಂಬ ತುಡುಗಿನ ದನವೂ ಇತ್ತು, ಬೋಳಿ ಅಂತ ಹೆಸರು ಬರಲು ಕಾರಣ ಅದಕ್ಕೆ ಮುರುಟಿಕೊಂಡ ಚಿಕ್ಕ ಕೋಡುಗಳು.   ಆಗೆಲ್ಲ ಈಗಿನ ಕಾಲದಂತ ಬೇಲಿಗಳು ಅಪರೂಪ ರೈತರು ಕಾಡಿನಿಂದ ಮರದ ಗೂಟ, ಬಳ್ಳಿ, ಪರಗಿ ಹಣ್ಣಿನ ಮುಳ್ಳು , ಬಿದಿರು ಮುಳ್ಳು ಸಂಗ್ರಹಿಸಿ ಎತ್ತಿನ ಗಾಡಿಯಲ್ಲಿ ತಂದು ಪ್ರತಿ ವರ್ಷ ಬೇಲಿ ಕಟ್ಟುತ್ತಿದ್ದರು ಅಂತಹ ಬೇಲಿ ಹಾರಿ ನಮ್ಮ ಬೋಳಿ ದನ ಪಸಲು ತಿನ್ನುತ್ತಿತ್ತು, ಏನೇ ಮಾಡಿದರೂ ಅದನ್ನು ಹಿಡಿಯಲು ಸಾಧ್ಯವೇ ಆಗುತ್ತಿರಲಿಲ್ಲ.    ಮನೆಯಲ್ಲೂ ನಮ್ಮ ತಾಯ

Blog number 1765. ಪ್ರಪಂಚದಲ್ಲಿ ಮದ್ಯಪಾನದ ಬಗ್ಗೆ ಇರುವ ಸಾಮಾನ್ಯ ಜ್ಞಾನ ಇಲ್ಲದೆ.

 ಪ್ರಪ೦ಚದಲ್ಲಿ ಮಧ್ಯಪಾನದ ಬಗ್ಗೆ ಇರುವ ಸಾಮಾನ್ಯ ಜ್ಞಾನ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ ಈ ಅತ್ಯುತ್ತಮ ಮಾಹಿತಿ  🥃 *Glenfiddich* is the world's best-selling single malt 🥃 *Johnnie Walker Red* *Label* is the world's best-selling Scotch. 🥃The Famous *Grouse*  is the best-selling whisky in Scotland 🥃 *Glenmorangie* is the best-selling single malt in Scotland. 🥃The world's fastest growing Scotch today is *Black Dog*. India is a major contributor to its sales. 🥃The five most popular single malts globally are  *Glenfiddich,* The *Glenlivet,* *Glenmorangie Original,* *Aberlour* and *Laphroaig* 🥃 *Bruichladdich’s* _The Octomore_ is the most heavily peated whisky in the world (167ppm) 🥃The three oldest single malts currently sold are *Glenturret,* *Oban* and *Glenlivet* 🥃The oldest distillery in Scotland is _Glen turret_ (1775), followed by _Bowmore_ (1779) 🥃With each bottle of *Laphroaig* that you buy, you are entitled to a lifetime lease of one sq foot of the distil

Blog number 1764. ಹೆಂಗಿದ್ದ ಹೆಂಗಾದ ಗೊತ್ತಾ ನಮ್ಮ ಶಂಭೂರಾಮ ಎನ್ನೋ ಚಿನ್ನಾರಿ ಮುತ್ತಾ.

https://youtube.com/shorts/tvT9DfFTKXQ?feature=shared  #ಹೆಂಗಿದ್ದ_ಹೆಂಗಾದ_ಗೊತ್ತಾ #ನಮ್ಮ_ಚಿನ್ನಾರಿ_ಮುತ್ತಾ #ಶಂಭೂರಾಮ    2021ರ ಸೆಪ್ಟೆಂಬರ್ 26 ರಾತ್ರಿ ಬೆಂಗಳೂರಿಂದ ನನ್ನ ಮನೆ ತಲುಪಿದಾಗ ನನ್ನ ಅತ್ಯಾಸೆ ಆಗಿದ್ದ ರಾಟ್ ವೀಲರ್ ಸಾಕುವುದು ಈಡೇರಿತ್ತು,ಇವನಿಗೆ ಒಂದು ತಿಂಗಳು ನಂತರ ಆರು ತಿಂಗಳು ಮಗುವಿನಂತೆ ಆರೈಕೆ ಮಾಡಿದ್ದು ನನ್ನ ಮಗ, ಮದ್ಯ ರಾತ್ರಿ ಕೂಡ ಎದ್ದು ಅವನ ಕೇಜ್ ಕ್ಲೀನ್ ಮಾಡಿ ಒರೆಸಿ ಇವನಿಗೆ ಮಲಗಿಸಬೇಕಿತ್ತು.   ನಂತರದ ದಿನಗಳಲ್ಲಿ ಪ್ರಾಥಮಿಕ ಪಾಠ ಕಲಿಸಲು ತುಂಬಾ ತಾಳ್ಮೆ ಬೇಕು, ಸ್ಲೋ ಪೀಡಿಂಗ್ ತರಬೇತಿ ಆಗಬೇಕು ಹೀಗೆ ಸಾಕು ನಾಯಿಯ ತರಬೇತಿಯ ಮಾರ್ಗದರ್ಶಕವಾದ ವಿಡಿಯೋಗಳು Youtube ನಲ್ಲಿದೆ.    ಪಟ್ಟಣಗಳಲ್ಲಿ ಇದಕ್ಕಾಗಿ ತರಬೇತಿ ನೀಡುವವರೇ ಇದ್ದಾರೆ ಆದರೆ ಹಳ್ಳಿಗಳಲ್ಲಿ ನಾವೇ ತರಬೇತುದಾರರು ಮತ್ತು ನಮಗೆ Youtube ಒಂದೇ ಮಾರ್ಗದರ್ಶಕ.   ಅದರಲ್ಲೂ ರಾಟ್ ವೀಲರ್ ಸಾಕುವ ಬಗ್ಗೆ ಅನೇಕ ರೀತಿಯ ಭಯ ಹುಟ್ಟುವಂತ ಸತ್ಯ ಕಥೆಗಳು ಸಾಮಾಜಿಕ ಜಾಲ ತಾಣದಲ್ಲಿತ್ತು ಅಷ್ಟೇ ಅಲ್ಲ ನಮ್ಮ ಮನೆಗೆ ನಿತ್ಯ ನಂದಿನಿ ಹಾಲು ಹಾಕುವವರು ಅಡಾಪ್ಟ್ ಮಾಡಿಕೊಂಡಿದ್ದ ರಾಟ್ ವೀಲರ್ ಅವರ ಪಕ್ಕದ ಮನೆಯ ಎಮ್ಮೆಕರುವನ್ನೆ ಸಿಗಿದು ಹಾಕಿದ್ದು ಅವರ ಬಾಯಲ್ಲೇ ಕೇಳಿದ್ದೆ.     ರಾಟ್ ವೀಲರ್ ಸಾಕಿದವರ ಮನೆ ಗೆಸ್ಟ್ ಪ್ರೆಂಡ್ಲಿ ಮನೆ ಆಗುವುದಿಲ್ಲ ಎಂಬುದು ಗೊತ್ತಿತ್ತು ಆದರೆ ಯಾರು ಏನಾದರೂ

Blog number 1763. ಬಹುಕಾಲದಿಂದ ಮನೆ ಪರಿಸರದಲ್ಲಿದ್ದ ಕೆರೆ ಹಾವಿನ ಅಂತ್ಯ

#ನಮ್ಮ_ದೀರ್ಘಕಾಲದ_ಗೆಳೆಯನನ್ನ_ಕೊಂದವರ್ಯಾರು #ಕೆರೆ_ಹಾವು_ವಿಷರಹಿತ_ಹಾವು. https://youtu.be/GLvw4bFzizs?feature=shared   ನಮ್ಮ ಸಂಸ್ಥೆಯ ಹಿಂಬಾಗದ ಕಂಪೌಂಡ್ ನ ಹೂ ಗಿಡಗಳ ಮಧ್ಯದಲ್ಲಿ ತನ್ನ ಇಲಿ ಶಿಕಾರಿ ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಕೆರೆ ಹಾವಿನ ವಯಸ್ಸು ಗೊತ್ತಿಲ್ಲ ಆದರೆ ಕಳೆದ ಆರೇಳು ವರ್ಷಗಳಿಂದ ನಮಗೆ ಪರಿಚಿತ.   ಇದು ಜೀವಂತ ಇದ್ದಾಗ ಆರು ಅಡಿಗಿಂತ ಉದ್ದವಾಗಿ ಗಾತ್ರದಲ್ಲಿ ಶಕ್ತಿಯಲ್ಲಿ ಬಲಿಷ್ಟವಾಗಿ ನೋಡುವವರಿಗೆ ಭಯ ಉಂಟು ಮಾಡುವಂತಿತ್ತು.   ಹಾವಿನ ಬಗ್ಗೆ ಮಾಹಿತಿ ಇಲ್ಲದವರು ಇದನ್ನು ನಾಗರ ಹಾವೆಂದೇ ಭಾವಿಸುತ್ತಿದ್ದರು ಆದರೆ ನಮಗೆಲ್ಲ ಇದರ ವೇಗದ ಓಟದಿಂದ ಮತ್ತು ಆರೇಳು ವರ್ಷಗಳ ಪರಿಚಯದಿಂದ ಇದು  ನಿರಪಾಯಕಾರಿ ರೈತ ಸ್ನೇಹಿ ಕೆರೆ (Rat Snake) ಹಾವು ಎಂದು ಗೊತ್ತಿತ್ತು.     ನಿನ್ನೆ ಕಂಪೌಂಡ್ ಹತ್ತಿರ ಇದು ಸತ್ತು ಬಿದ್ದಿದ್ದು ನೋಡಿ ಆಶ್ವರ್ಯವಾಯಿತು ಮತ್ತು ಬೇಸರವಾಯಿತು ಇದರ ತಲೆ ಯಾವುದೊ ಪ್ರಾಣಿಯ ಬಾಯಿಗೆ ಸಿಕ್ಕಿ ಜಕ್ಕಂ ಆಗಿದೆ ಇಡೀ ದೇಹದಲ್ಲಿ ಎಲ್ಲೂ ಗಾಯ ಇಲ್ಲ ನಮ್ಮ ಸಿಬ್ಬಂದಿಗಳ ಪ್ರಕಾರ ಮುಂಗುಸಿ ಕಾರಣ ಅಂತಾರೆ, ಮು೦ಗುಸಿ ಕೆರೆ ಹಾವು ಸಾಯಿಸುತ್ತಾ? ... ಈ ಬಗ್ಗೆ ನನಗೆ ಮಾಹಿತಿ ಇಲ್ಲ.    ಮನಷ್ಯರ ಜೊತೆ ಮಾತು ಸ್ಪರ್ಷ ಸಾಧ್ಯವಿಲ್ಲದ ಈ ಸರಿಸೃಪಗಳು ಅನೇಕ ವರ್ಷ ನಮ್ಮ ಕಣ್ಣ ದೃಷ್ಟಿ ವ್ಯಾಪ್ತಿಯಲ್ಲಿ ನಮ್ಮ ಪರಿಸರದಲ್ಲೇ ಬಾಳಿ ಬದುಕಿ ನಂತರ ಜೀವ ತ್ಯಾಗ ಮಾಡಿ ಅವುಗಳ ಕಳ

Blog number 1762. ಮಲೆನಾಡಿನಲ್ಲಿ ಅನೇಕ ಅಗೋಚರ ಕವಿಗಳಿದ್ದಾರೆ ಅವರಲ್ಲಿ ಪ್ರಬಂದ ಅಂಬುತೀರ್ಥರ ಕಥೆಗಳಿಂದ ನಾನು ಅವರ ಅಭಿಮಾನಿ.

#ಮಲೆನಾಡಿನಲ್ಲಿ_ಅನೇಕ_ಅಗೋಚರ_ಕವಿಗಳಿದ್ದಾರೆ. #ಅವರಲ್ಲಿ_ಪ್ರಬಂದಅಂಬುತೀರ್ಥ_ಒಬ್ಬರು #ಪೇಸ್_ಬುಕ್_ಗೆಳೆಯರು. #ನಾನು_ಇವರ_ಬರವಣಿಗೆ_ಓದಿ_ಇವರ_ಅಭಿಮಾನಿ #ಇವತ್ತಿಗೂ_ಮುಖತಃ_ಬೇಟಿ_ಆಗಲಿಲ್ಲ #ಈಗ_ಸಾಮಾಜಿಕ_ಜಾಲತಾಣದಿಂದ_ದೂರ_ಆಗಿದ್ದಾರೆ. #ದ್ರಾವಣ_ರೂಪದಲ್ಲಿ_ಸಾವಯುವ_ಗೊಬ್ಬರ_ತಯಾರಿಯ_ಸಂಶೋದನೆಯಲ್ಲಿ_ತೊಡಗಿದ್ದಾರೆ.    ಮಲೆನಾಡಿನಲ್ಲಿ ಅನೇಕ ಅಗೋಚರ ಕವಿಗಳಿದ್ದಾರೆ ಅವರಾರು ಪ್ರಚಾರ ಪ್ರಿಯರಲ್ಲ, ಕೀತಿ೯ ಶನಿಯ ಬೆನ್ನು ಬಿದ್ದವರಲ್ಲ, ಸನ್ಮಾನ ಸಭೆಗಳಿಂದ ದೂರ ಆದರೆ ಅವರ ಬರಹಗಳು ರಾಜ್ಯ ಪ್ರಶಸ್ತಿ ನೀಡುವ೦ತ ಯೋಗ್ಯತೆ ಇರುವ ಸಾಹಿತ್ಯ ಆದರೆ ವಸೂಲಿ ಬಾಜಿ ಮಾಡದಿರುವುದರಿಂದ ಪ್ರಕಟವಾಗದ ಸಾಹಿತ್ಯ ಮುಂದಿನ ದಿನದಲ್ಲಿ ಇವರೇ ಕನ್ನಡದ ಮೇರು ಸಾಹಿತಿಗಳಾಗುವ ದಿನ ಬರದೇ ಇರಲಾರದು.    ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ. ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.            ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟ

Blog number 1761.ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಶ್ರೀಕಾಂತ್ ಬಿರುಗಾಳಿ ಆಗಲಿದ್ದಾರೆ.

#ಯಾವುದೇ_ಪಕ್ಷದಲ್ಲಿರಲಿ_ಶ್ರೀಕಾಂತ್_ನನ್ನ_ಸ್ನೇಹಿತರು. #ಜೆಡಿಎಸ್_ತೊರೆದು_ಕಾಂಗ್ರೇಸ್_ಸೇರುತ್ತಿದ್ದಾರೆ. #ದೇವೇಗೌಡರು_ಕುಮಾರಸ್ವಾಮಿಗಳು_ಶ್ರೀಕಾಂತರನ್ನು_ವಿದಾನಪರಿಷತ್_ಸದಸ್ಯರಾಗಿ_ಮಾಡಬಹುದಾಗಿತ್ತು. #ಮಿತಭಾಷಿ_ಸಂಘಟನಾ_ಚತುರ_ಗೆಳೆತನಕ್ಕೆ_ಇನ್ನೊಂದು_ಹೆಸರು_ಶ್ರೀಕಾಂತ್. #ಕಾಂಗ್ರೇಸ್_ಪಕ್ಷ_ಇವರಿಗೆ_ಸೂಕ್ತ_ಸ್ಥಾನ_ಮಾನ_ಕಲ್ಪಿಸಲಿ.   ರಾಜಕಾರಣಿಗಳಲ್ಲಿ ದ್ವಿಮುಖ ವ್ಯಕ್ತಿಗಳನ್ನು ಕಾಣುವುದು ಸಹಜ ಆದರೆ ಶಿವಮೊಗ್ಗ ಜಿಲ್ಲಾ ಜಾತ್ಯಾತೀತ ಜನತಾದಳದ ಜಿಲ್ಲಾ ಅದ್ಯಕ್ಷರಾಗಿದ್ದ ಶ್ರೀಕಾಂತ್ ಮಾತ್ರ ಅವರೆಲ್ಲರಿಗಿಂತ ಬಿನ್ನ ವ್ಯಕ್ತಿತ್ವದವರು.  ಗೆಳೆತನಕ್ಕೆ ನಂಬಿಕೆಗೆ ಶ್ರೀಕಾಂತ್ ಮಾತ್ರ ಅಪರಂಜಿಯಂತವರು ಆದ್ದರಿಂದ ಜಿಲ್ಲೆಯಲ್ಲಿ ಅವರಿಗೆ ಅಪಾರ ಗೆಳೆಯರಿದ್ದಾರೆ.   ಮಿತಭಾಷಿಗಳು ಸಂಘಟನಾ ಚತುರರು ಆದ್ದರಿಂದಲೇ ಶಿವಮೊಗ್ಗ ಜಿಲ್ಲೆಯಲ್ಲಿ ಇವರು ಏಕಾಂಗಿ ಆಗಿ ಜೆಡಿಎಸ್ ಪಕ್ಷ ಸಂಘಟಿಸಿ ಅನೇಕ ಚುನಾವಣೆಯಲ್ಲಿ ಅನೇಕರಿಗೆ ಅಧಿಕಾರ ದೊರೆಯುವಂತೆ ಮಾಡಿದ್ದರು.   ಶಿವಮೊಗ್ಗ ವಿದಾನಸಬಾ ಕ್ಷೇತ್ರದ ಚುನಾವಣೆಯಲ್ಲಿ ಈಶ್ವರಪ್ಪರ ಎದುರು 25 ಸಾವಿರ ಮತಗಳಿಸಿದ್ದು ಇವರ ಜನಪ್ರಿಯತೆಗೆ ಸಾಕ್ಷಿ ನಂತರದ ಚುನಾವಣೆಯಲ್ಲಿ ಇವರಿಗೆ ಅವಕಾಶ ನೀಡದೆ ಬೇರೆಯವರಿಗೆ ಸ್ಪರ್ಧಿಸಲು ಜೆಡಿಎಸ್ ಪಕ್ಷ ಅವಕಾಶ ನೀಡಿದಾಗ ಅವರೆಲ್ಲ  ಐದು ಸಾವಿರ ಮತಗಳಿಸಲು ಮಾತ್ರ ಸಾಧ್ಯವಾಗಿತ್ತು.    ಶ್ರೀಕಾಂತ್ 2013ರಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ

Blog number 1760.ಆನಂದಪುರಂ ಇತಿಹಾಸ ಭಾಗ ಒಂದು ಪುಸ್ತಕರೂಪದಲ್ಲಿ ಬರಲಿದೆ.

#ಆನಂದಪುರಂ_ಇತಿಹಾಸ_ಭಾಗ_1. #ಕನ್ನಡ_ರಾಜ್ಯೋತ್ಸವದಂದು_ಬಿಡುಗಡೆ_ಆಗಲಿದೆ. #ಅವತ್ತು_ಕರ್ನಾಟಕ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವ. #ಕರ್ನಾಟಕ_ನಾಮಕರಣ_ಮಾಡಲು_ಮುಖ್ಯಮಂತ್ರಿ_ದೇವರಾಜ_ಅರಸರ_ಜೊತೆ #ವಿದ್ಯಾಮಂತ್ರಿ_ಬದರಿನಾರಾಯಣ_ಆಯ್ಯಂಗಾರ್_ಮುಖ್ಯ_ಕಾರಣ. #ಆನಂದಪುರಂ_ಇತಿಹಾಸ_ಭಾಗ_ಒಂದು_ಬದರಿನಾರಾಯಣ_ಅಯ್ಯಂಗಾರರಿಗೆ_ಅರ್ಪಿಸಲಾಗಿದೆ. #ಈ_ಪುಸ್ತಕ_ಪ್ರಕಟಿಸಲು_ಇಬ್ಬರು_ಮುಖ್ಯಕಾರಣ #ಚಲನ_ಚಿತ್ರ_ನಟ_ದೊಡ್ಡಣ್ಣ_ಮತ್ತು_News18_ದಕ್ಷಿಣ_ಭಾರತದ_ಮುಖ್ಯಸ್ಥ_ಡಿ_ಪಿ_ಸತೀಶ್ #ಇವರಿಬ್ಬರ_ಮುನ್ನುಡಿ_ಆನಂದಪುರ೦_ಇತಿಹಾಸ_ಪುಸ್ತಕದ_ಭಾಗ_1_ರಲ್ಲಿ_ಇರಲಿದೆ.    ನಾನು ಈ ಪುಸ್ತಕ ಪ್ರಕಟಿಸುವ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ನನ್ನ ನಿತ್ಯ ಸಾಮಾಜಿಕ ಜಾಲ ತಾಣದ ಬರಹ ಓದುವ ಡಿ.ಪಿ. ಸತೀಶ್ Network 18/News 18 ಮಾಧ್ಯಮ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥರು ಅವರು ಎರೆಡು ವರ್ಷದ ಹಿಂದೆ ನನಗೆ ಆನಂದಪುರಂ ಇತಿಹಾಸದ ಪುಸ್ತಕ ಮುದ್ರಿಸಿ ಎಂದು ಪ್ರೋತ್ಸಾಹಿಸಿದವರು ಆಗ ಅವರಿಗೆ ಹೇಳಿದ್ದೆ ಪುಸ್ತಕ ಮುದ್ರಣ ಅಗುವ ಸಮಯ ಬಂದರೆ ನೀವು ಮುನ್ನುಡಿ ಬರೆಯಬೇಕು ಎಂದಿದ್ದೆ ಆ ಸಮಯ ಬಂತು ಮಾತಿಗೆ ತಪ್ಪದೆ ಪ್ರೀತಿಯಿಂದ ಮುನ್ನುಡಿ ಬರೆದಿದ್ದಾರೆ.    ಇದೇ ರೀತಿ ನನ್ನ ಎಲ್ಲಾ ಲೇಖನ ಓದಿ ಪ್ರೋತ್ಸಾಹಿಸುತ್ತಾ ನನ್ನ ಲೇಖನಗಳನ್ನು ಅವರ ಗೆಳೆಯರ ಗ್ರೂಪಿಗೆ ಶೇರ್ ಮಾಡುವವರು ಖ್ಯಾತ ಚಲನ ಚಿತ್ರ ನಟ ದೊಡ್ಡಣ್ಣ ಅವರಿಗೆ ಓದುವ ಬರೆಯುವ ಹವ್ಯಾಸ ಜಾಸ್ತಿ ಆಗಾಗ್ಗ

Blog number 1759. ಈಸೂರು ಸ್ವಾತಂತ್ರ್ಯದ 81 ನೇ ದಿನಾಚರಣೆ 25 -ಸೆಪ್ಟೆಂಬರ್-2023.

#ನಾಳೆ_ಈಸೂರಿನ_ಸ್ವಾತಂತ್ರ್ಯೋತ್ಸವದ_81ನೇ_ದಿನಾಚಾರಣೆ. #ಶಿಕಾರಿಪುರ_ಸಮೀಪದ_ಈಸೂರು #ಇಲ್ಲಿನ_ವೀರಭದ್ರೇಶ್ವರ_ದೇವಾಲಯದಲ್ಲಿ_1942ರಲ್ಲಿ_ಸೆಪ್ಟೆಂಬರ್_25ರಂದು_ದೇಶದ_ದ್ವಜಾರೋಹಣ. #ದೇಶದ_ಮೊದಲ_ಸ್ವಾತಂತ್ರ್ಯ_ಘೋಷಿಸಿದ_ಸರಕಾರ_ಗ್ರಾಮ_ಈಸೂರು  #ಮರುದಿನ_ಈ_ಧ್ವಜ_ತೆಗೆಯಲು_ಬಂದ_ಬ್ರಿಟೀಷ್_ಸರ್ಕಾರದ_ಪೋಲಿಸ್_ಅಧಿಕಾರಿ_ಅಮಾಲ್ದಾರರು_ಜನಾಕ್ರೋಶಕ್ಕೆ_ಬಲಿ #ನಂತರ_ಐದುಸಾವಿರ_ಬ್ರಿಟೀಷ್_ಸೇನಾ_ತುಕಡಿ_ನಡೆಸಿದ್ದು_ಅಕ್ಷರಶಃ_ಹತ್ಯಾಕಾಂಡ #ಐದು_ಜನರಿಗೆ_ಗಲ್ಲು_40_ಜನರಿಗೆ_ಜೀವಾವಾದಿ_ನೂರಾರು_ಸಂಸಾರಗಳು_ಊರು_ತೊರೆದರು. #ಖ್ಯಾತ_ರಂಗಕರ್ಮಿ_ಡಾಕ್ಟರ್_ಸಾಸ್ವೇಹಳ್ಳಿ_ಸತೀಶ್_ನಾಟಕ_ಬರೆದು_ಪ್ರದರ್ಶಿಸಿದ್ದಾರೆ.     ಡಾಕ್ಟರ್ ಸಾಸ್ವೇಹಳ್ಳಿ ಸತೀಶ್ ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲಿ ಅದನ್ನು ರಂಗದ ಮೂಲಕ ಮುಂದಿನ ತಲೆಮಾರಿಗೆ ತಿಳಿಸುವ ಕೆಲಸ ಸಮರ್ಪಕವಾಗಿ ಮಾಡುತ್ತಾ ಬಂದಿದ್ದಾರೆ ಇತ್ತೀಚೆಗೆ ಇವರು ಈಸೂರು ಹೋರಾಟವನ್ನು ರಂಗ ಪ್ರಯೋಗ ಮಾಡಿ ಯಶಸ್ವಿ ಆಗಿದ್ದಾರೆ.   ಈಸೂರು ಹೋರಾಟವಾದ "ಏಸೂರು ಕೊಟ್ಟರೂ.. ಈಸೂರು ಕೊಡೆವು" ನಾಟಕ ಇವರು ಬರೆದು ಪ್ರಕಟಿಸಿದ್ದಾರೆ ಅಷ್ಟೇ ಅಲ್ಲ ಈ ಕಾಯ೯ಕ್ರಮದಲ್ಲಿ ಈಸೂರು ಸ್ವಾತಂತ್ರ್ಯ ಹೋರಾಟದ ನೇತಾರ ಸಾಹುಕಾರ್ ಬಸವಣ್ಯಪ್ಪರ ಮೊಮ್ಮಗಳು ಕವಿತಾ ಮತ್ತು ಚಿಂದಿ ಹುಚ್ರಾಯಪ್ಪರ ಮೊಮ್ಮಗಳು ಕಸ್ತೂರಿ ಅವರನ್ನು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಹ್ವಾನಿಸಿ ಅವರಿಗೆ ನಾಟಕದ ಪ್ರತಿ ನೀಡುವ ಕೆಲಸ