Skip to main content

Blog number 1754. ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಸಾಗರ ತಾಲೂಕಿನ ಆವಿನಳ್ಳಿಯಲ್ಲಿದೆ ಮತ್ತು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ ಹೆನ್ನೆ ಎ೦ಬ ಗ್ರಾಮದಲ್ಲಿ ರಾಣಿ ವಂಶಸ್ಥರು ಇದ್ದಾರೆ.

#ಗೇರುಸೊಪ್ಪೆಯ_ಜೈನರಾಣಿ_ವಂಶಸ್ಥರ_ಮತ್ತು_ರಾಣಿಚೆನ್ನಾಭೈರಾದೇವಿ_ಸಮಾದಿ_ಸ್ಥಳ_ಸಾರುವ_ಪ್ರಥಮ_ಲೇಖನ_ಇದು.

#ಕಾಳುಮೆಣಸಿನ_ರಪ್ತಿನಿಂದ_ಯೂರೋಪ್_ದೇಶದಲ್ಲೂ_ಪ್ರಸಿದ್ಧಿ_ಆಗಿದ್ದ.

#ಕಾನೂರು_ಕೋಟೆಯ_ಗೇರುಸೊಪ್ಪೆಯ_ಜೈನರ_ರಾಣಿ

#ಅವ್ವರಸಿ_ಎಂದು_ಪೂಜಿಸಲ್ಪಡುವ_ರಾಣಿ_ಚೆನ್ನಾಭೈರಾದೇವಿ.

#ಅವರ_ವಂಶಸ್ಥರು_ಸಾಗರ_ತಾಲ್ಲೂಕಿನಲ್ಲಿ_ಇದ್ದಾರೆ.

#ಅವರನ್ನು_ಗುರುತಿಸುವ_ಕೆಲಸ_ಆಗಬೇಕು.

#ಕೆಳದಿ_ರಾಜ_ವೆಂಕಟಪ್ಪನಾಯಕ_ಇಕ್ಕೇರಿ_ಕೋಟೆಯಲ್ಲಿ_ಬಂದನದಲ್ಲಿಟ್ಟ_ರಾಣಿ.

#ರಾಣಿ_ಚೆನ್ನಾಭೈರಾದೇವಿ_ಸಮಾದಿ_ಸಾಗರ_ತಾಲ್ಲೂಕಿನ_ಅವಿನಹಳ್ಳಿಯಲ್ಲಿದೆ.

#ಇದನ್ನು_ಸಂರಕ್ಷಿಸಬೇಕಾದ_ಪುರಾತತ್ವ_ಇಲಾಖೆ_ಮತ್ತು_ಹುಂಚಾದ_ಜೈನ_ಮಠಗಳಿಗೆ_ನಿರಾಸಕ್ತಿ_ಏಕೆ?

    ಪಶ್ಚಿಮ ಘಟ್ಟಗಳ ಕಾಳು ಮೆಣಸು ಸಂಗ್ರಹಿಸಿ ಸಂಸ್ಕರಿಸಿ ಯೂರೋಪು ಖಂಡಗಳಿಗೆ ರಪ್ತು ಮಾಡುತ್ತಿದ್ದ ಜೈನ ಕುಲದ ರಾಣಿ ಚೆನ್ನಾ ಬೈರಾದೇವಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಗಳು ಆಗ ಬೇಕು ಮತ್ತು ರಾಣಿಯ ಬಗ್ಗೆ ಹೆಚ್ಚು ಮಾಹಿತಿಗಳು ಪ್ರಕಟವಾಗಬೇಕು.
  ಸಾಗರ ತಾಲೂಕಿನ ಜೋಗ್ ಜಲಪಾತದ ಪಕ್ಕದಲ್ಲಿನ ದಟ್ಟ ಅರಣ್ಯದಲ್ಲಿ  ಕಾನೂರಿನ ಕೋಟೆ ಇದೆ ಇದು ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಇನ್ನೂ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
  ಜೋಗ ಜಲಪಾತದಿಂದ ರಭಸದಿಂದ ದುಮುಕಿದ ಶರಾವತಿ ನದಿ ಶಾಂತವಾಗಿ ಹರಿಯುವ ಗೇರುಸೊಪ್ಪೆ ರಾಣಿ ಚೆನ್ನಾ ಬೈರಾದೇವಿಯ ರಾಜ್ಯದ ಕೇಂದ್ರ ಸ್ಥಳ 400 ವರ್ಷದ ಹಿಂದೆ ದೇಶ ವಿದೇಶಗಳ ಹಡಗು ಹೊನ್ನಾವರದ ಅರಬ್ಬಿ ಸಮುದ್ರದಿಂದ ಗೇರುಸೊಪ್ಪೆಗೆ ಬಂದು ಕಾಳು ಮೆಣಸು ತುಂಬಿಸಿ ಕೊಂಡು ಯೂರೋಪಿಗೆ ಹೋಗುತ್ತಿತ್ತು.
   ಈ ಬಗ್ಗೆ ಇತ್ತೀಚಿಗೆ ಖ್ಯಾತ ಪಿಕ್ಷನ್ ಕಾದಂಬರಿಕಾರ ಗಣೇಶಯ್ಯ ಇಲ್ಲಿನ ಸ್ಥಳಿಯ ಇತಿಹಾಸಕಾರರು ಅಂತಾರಾಷ್ಟ್ರೀಯ ಮಾಫಿಯಾದ ನಿದಿ ಜೋರರಿಗೆ ಮಾಹಿತಿ ನೀಡಿ ಗೇರುಸೊಪ್ರೆಯ ಕಾಳು ಮೆಣಸಿನ ರಾಣಿಯ ಈವರೆಗೂ ಸಿಗದ ಗುಪ್ತ ನಿದಿ ಅಪಹರಣದ ವಿಫಲ ಯೋಜನೆಯ ಸತ್ಯ ಕಥೆಯ ಎಳೆಯ ಮೇಲೆ ಬರೆದ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಮತ್ತು ನಮ್ಮ ತಾಲ್ಲೂಕಿನವರೇ ಆದ ಗಜಾನನ ಶರ್ಮರು ಬರೆದ ಬೃಹತ್ ಕಾದಂಬರಿಗಳು ರಾಣಿ ಚೆನ್ನಾ ಬೈರಾದೇವಿಯ ಹೆಸರು ಇತಿಹಾಸದ ಮೇಲೆ ಹೊಸ ಹೊಳಪು ನೀಡಿದೆ ಮತ್ತು ಚಚೆ೯ಯ ಮನ್ನಲೆಗೆ ಗೇರುಸೊಪ್ಪೆ ರಾಣಿ ವಿಚಾರಗಳು ಬಂದಿದೆ.
  ಮಹಾಯುದ್ಧದ ಸಮಯದಲ್ಲಿ ಗೇರುಸೊಪ್ಪೆ ಹೆಸರಿನ ಸಂಪೂರ್ಣ ಬೆಳ್ಳಿ ತುಂಬಿದ ಹಡಗು ಹಿಂದೂ ಮಹಾಸಾಗರದಲ್ಲಿ ಮುಳುಗಿದೆ ಆ ಹಡಗಿನಲ್ಲಿ ತುಂಬಿದ ಬೆಳ್ಳಿ ರಾಣಿ ಚೆನ್ನಾ ಬೈರಾದೇವಿಗೆ ಸೇರಿದ ಭಂಡಾರದ ನಿಧಿ ಎಂಬ ಸುದ್ದಿ ಇದೆ.
   ಇಂತಹ ಪ್ರಖ್ಯಾತ ಶ್ರೀಮಂತ ರಾಣಿಯನ್ನು ಸೋಲಿಸಿ  ಅವಳ ರಾಜ್ಯ ವಶ ಪಡೆದು ರಾಣಿಯನ್ನು ಇಕ್ಕೇರಿಯ ಕೋಟೆಯಲ್ಲಿ ಜೀವನ ಪೂರ್ತಿ ಸೆರೆಮನೆಯಲ್ಲಿ ಬಂದಿಸಿಟ್ಟಿದ್ದು ಕೆಳದಿ ರಾಜ ವೆಂಕಟಪ್ಪ ನಾಯಕ.
   ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಆವಿನಹಳ್ಳಿಯಲ್ಲಿದೆ, ಈ ಸಮಾದಿಯನ್ನ ಸ್ಥಳಿಯರು ದೇವಾಲಯ ಮಾಡಿಕೊಂಡಿದ್ದಾರೆ ಇದು ಇತಿಹಾಸಕ್ಕೆ ಸಂಬಂಧಪಟ್ಟ ಅಪೂರ್ವ ದಾಖಲೆ ಆಗಿದ್ದು ಇದನ್ನು ಶಿವಮೊಗ್ಗ ಜಿಲ್ಲಾಡಳಿತ, ಪುರಾತತ್ವ ಇಲಾಖೆ ಸಂರಕ್ಷಿಸಬೇಕಾಗಿದೆ.
  ಜೈನ ಧರ್ಮದ ಹುಂಚಾದ ಮಠ ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ರಾಣಿ ಚೆನ್ನಾಭೈರಾದೇವಿ ಸುಮಾದಿ ಸಂರಕ್ಷಣೆಗೆ ಮತ್ತು ಅರಣ್ಯ ಇಲಾಖೆಯಲ್ಲಿರುವ ಕಾನೂರು ಕೋಟೆ ಪುರಾತತ್ವ ಇಲಾಖೆಗೆ ವರ್ಗಾಯಿಸಲು ಪ್ರಯತ್ನಿಸಬೇಕಾಗಿದೆ.
    ಜೈನರ ರಾಣಿ ಚೆನ್ನಾಭೈರಾದೇವಿಯ ವಂಶಸ್ಥರು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ (AB site) ಹೆನ್ನೆ ಗ್ರಾಮದಲ್ಲಿ ಈಗಲೂ ಇದ್ದಾರೆ ಅವರಲ್ಲಿ ಲೋಕರಾಜ ಜೈನ್ ಸಾಳ್ವಕುಲಜ ನಗಿರೆಸುತರು ತುಮರಿಯ ಬ್ಯಾಕೋಡು ಪ್ರೌಢಶಾಲೆಯಲ್ಲಿ ಉಪನ್ಯಾಸಕರಾಗಿದ್ದಾರೆ.
   ಇವರು ರಾಣಿ ಚೆನ್ನಾ ಬೈರಾದೇವಿಯ ಬಗ್ಗೆ ಅನೇಕ ಅಪ್ರಕಟಿತ ದಾಖಲೆಗಳ ಸಂಗ್ರಹಿಸಿದ್ದಾರೆ ಅವುಗಳನ್ನು ಪುಸ್ತಕ ಮಾಡಿ ಪ್ರಕಟಿಸುವ ಆಸಕ್ತಿ ಅವರಿಗಿದೆ ರಾಣಿಯ ಅನೇಕ ವಿಚಾರಗಳು ಇವರ ಅನೇಕ ತಲೆಮಾರುಗಳಿಂದ ಇವರಿಗೆ ಹರಿದು ಬಂದಿದೆ.
  ಮೊನ್ನೆ ಹೆನ್ನೆ ಸಮೀಪದ ವಡೇನ ಬೈಲಿನ ಪಂಚಕಲ್ಯಾಣದ ಆಹ್ವಾನ ಪತ್ರಿಕೆಯೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸಿಂಹಗದ್ದೆಯ ಜೈನ ಮಠಕ್ಕೆ ಆಹ್ವಾನ ನೀಡಲು ಹೋಗಿದ್ದರಂತೆ ಅಲ್ಲಿ ಲಕ್ಷ್ಮೀ ಸೇನಾ ಭಟ್ಟಾರಕರ ಪ್ರವಚನ ಮಂದಿರದ ಗೋಡೆಯ ಮೇಲೆ ಕೀರ್ತಿವಂತ  ಜೈನ ಮಹಾರಸಿಯರ ಚಿತ್ರಗಳು ತೂಗು ಹಾಕಲಾಗಿದ್ದು ಅದರಲ್ಲಿ ಗೇರುಸೊಪ್ಪೆಯ ರಾಣಿ ಚೆನ್ನಾ ಬೈರಾದೇವಿಯ ತೈಲ ಚಿತ್ರ ಇವರಿಗೆ ಸಹಜವಾಗಿ ಹೆಚ್ಚು ಆಕರ್ಷಿಸಿದ ಬಗ್ಗೆ ಪೇಸ್ ಬುಕ್ ನಲ್ಲಿ ಚಿತ್ರ ಸಹಿತ ಇವತ್ತು ಪೋಸ್ಟ್ ಮಾಡಿದ್ದಾರೆ.
  ಈ ಲಿಂಕ್ ಕ್ಲಿಕ್ ಮಾಡಿ ಅವರ ಪೋಸ್ಟ್ ಓದಬಹುದು
https://m.facebook.com/story.php?story_fbid=3771555789731971&id=100006327601567&mibextid=Nif5oz

    ಇತಿಹಾಸದ ಕುರಿತು ಹೆಚ್ಚು ಆಸಕ್ತಿ ಇರುವ ಉಪನ್ಯಾಸಕರೂ ಆಗಿರುವ ರಾಣಿ ಚೆನ್ನಾಭೈರಾದೇವಿಯ ವಂಶಸ್ಥರೂ ಆಗಿರುವ ಲೋಕರಾಜ ಜೈನ್ ಸಾಳ್ವ ಕುಲಜ ನಗರಿಸುತರಿಗೆ ಸ್ಥಳಿಯ ಜೈನ ಸಮಾಜ ಮತ್ತು ಹುಂಚದ ಜೈನ ಮಠದವರು ಹೆಚ್ಚಿನ ಸಹಾಯ ಸಹಕಾರ ನೀಡುವ ಮೂಲಕ ಜೈನ ರಾಣಿ ಚೆನ್ನಾ ಬೈರಾದೇವಿ ಇತಿಹಾಸ ಪ್ರಕಟನೆಗೆ ಸಂರಕ್ಷಣೆಗೆ ಮುಂದಾಗ ಬೇಕು.
   ಜೈನ ರಾಣಿ ಚೆನ್ನಾ ಬೈರಾದೇವಿಯ ಸಮಾದಿ ಸಂರಕ್ಷಣೆಗೆ ಮುಂದಾಗಬೇಕು.
     ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಕೇಂದ್ರವಾಗಿರುವ ರಾಣಿಯ ಸಮಾದಿ ಪ್ರವಾಸೋದ್ಯಮ ದೃಷ್ಟಿಯಲ್ಲೂ ಮಹತ್ವದ್ದಾಗಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ