Skip to main content

Blog number 1758. ಎಲ್ಲಿಂದಾ?...ಯಾರು?...ಯಾಕೆ? ...ಹಳ್ಳಿಗಳಿಗೆ ಕುದುರೆಗಳನ್ನ ತಂದು ಬಿಡುತ್ತಿದ್ದಾರೆ?....

#ಕುದುರೆ_ಸಾಕುವವರಿಲ್ಲ

#ಜಟಕಾಗಾಡಿ_ಟಾಂಗಾ_ಸಾರೋಟು_ಕಾಲ_ಮುಗಿಯಿತು.

#ಅಶ್ವದಳ_ಈಗ_ಪ್ರದರ್ಶನಕ್ಕೆ_ಮಾತ್ರ

#ಕುದುರೆ_ಹೊಟ್ಟೆಗೆ_ಹಾಕಲಾಗದವರು_ಹಳ್ಳಿಗಳಿಗೆ_ಕುದುರೆ_ತಂದು_ಬಿಡುತ್ತಿದ್ದಾರೆ

#ಬಿಡಾಡಿ_ಕುದುರೆ_ಸಾಕುವವರೂ_ಹಳ್ಳಿಗಳಲ್ಲಿ_ಇದ್ದಾರೆ.

#ಕುದುರೆಗಳು_ಆ_ಕಾಲದಲ್ಲಿ_ಬೆಂಜ್_ಕಾರಿದ್ದಂತೆ.

#ಕ್ರಿಸ್ತಪೂರ್ವ_ನಾಲ್ಕು_ಸಾವಿರ_ವಷ೯ದಿಂದ_ಕುದುರೆ_ಬಳಕೆಯಲ್ಲಿತ್ತು.

  ಆನಂದಪುರಂ ಇತಿಹಾಸದಲ್ಲಿ ಬರುವ ಆನಂದಪುರಂನ ಸುಂಕದ ಮನೆತನದ ಚಿರುಡ ಶೆಟ್ಟರು 1916 ರಿಂದ 1932ರವರೆಗೆ ವಕೀಲರಾಗಿದ್ದರು ಅವರೇ ನಮ್ಮ ಊರಿನ ಪ್ರಥಮ ವಕೀಲರು, ಆಗ ಆನಂದಪುರಂನ ಬ್ರಿಟೀಶ್ ಬಂಗ್ಲೆ ತಾಲ್ಲೂಕಿನ ಮೊದಲ ನ್ಯಾಯಾಲಯ ಆಗಿತ್ತು ಆಗ ಚಿರುಡ ಶೆಟ್ಟರು ಬಳಸುತ್ತಿದ್ದ ಕುದುರೆ ಉತ್ಕೃಷ್ಟ ತಳಿಯದಂತೆ.
   ಆ ಕಾಲದಲ್ಲಿ ಸಂಚಾರಕ್ಕೆ ಕುದುರೆ ಬಳಕೆಯಲ್ಲಿದ್ದ ಕಾಲ ಬಹುಶಃ ಈಗಿನ ಇಷಾರಾಮಿ ಕಾರಿನಂತೆ ಶ್ರೀಮಂತರು ಮತ್ತು ದೊಡ್ಡ ಅಧಿಕಾರಿಗಳಿಗೆ ಮಾತ್ರ ಕುದುರೆ ಖರೀದಿಸುವ ಶಕ್ತಿ ಇದ್ದ ಕಾಲ.
   1950ರ ತನಕ ಕುದುರೆ ಸವಾರಿಗೆ ಬಳಸುತ್ತಿದ್ದರಂತೆ ನಂತರ ಸೈಕಲ್ -ಬೈಕ್ -ಕಾರು - ರಿಕ್ಷಾಗಳಿಂದ ಕುದುರೆ ಬಳಕೆ ನಿ೦ತು ಹೋಯಿತು.
  ಜಟಕಾ ಬಂಡಿ, ಟಾಂಗಾ ಎಂಬ ಜನ ಸಾಮಾನ್ಯರ ಸಾರಿಗೆ ಆಗಿದ್ದ ಕುದುರೆ ಗಾಡಿ ಸವಾರಿ ಈಗ ಇಲ್ಲವೇ ಇಲ್ಲ.
  ರಾಜರ ಕಾಲದಲ್ಲಿ ಸೈನ್ಯದಲ್ಲಿ ಅಶ್ವದಳ ಒಂದು ಪ್ರಮುಖ ಸೇನಾ ಶಕ್ತಿಯ ಪಡೆಯಾಗಿತ್ತು ಆದರೆ ಈಗಿನ ರಕ್ಷಣಾ ವ್ಯವಸ್ಥೆಯಲ್ಲಿ ಬದಲಾದ ಯುದ್ಧದ ಮಾದರಿಯಲ್ಲಿ ಅಶ್ವಪಡೆ ಸಾಂಕೇತಿಕ ಪ್ರದರ್ಶನಕ್ಕೆ ಸೀಮಿತವಾಗಿದೆ.
   ಅಲೆಮಾರಿ ಬುಡಕಟ್ಟು ಜನಾಂಗದವರು ಮುಂಗಾರು ಪ್ರಾರಂಭವಾದಾಗ ನಮ್ಮ ಆನಂದಪುರ೦ಗೆ ಬಂದು ಸೇರುತ್ತಿದ್ದರು ಇದು ಕೆಳದಿ ರಾಜರ ಕಾಲದಿಂದ ನಡೆದು ಬಂದ ಪದ್ದತಿ, ಒಂದು ವರ್ಷ ಕಾಲ ವಿವಿಧ ರಾಜ್ಯಗಳಲ್ಲಿ ಸಂಚರಿಸುವ ಈ ಅಲೆಮಾರಿಗಳಾದ ಜೋತಿಷ ಹೇಳುವ ಸುಡುಗಾಡು ಸಿದ್ದರು (ಕುರುಕುರು ಮಾಮಾ) ಹಾವಾಡಿಗರು, ದೊಂಬರಾಟದವರು, ಬುಟ್ಟಿ ಹೆಣೆಯುವವರು, ಯಕ್ಷಿಣಿ ವಿದ್ಯೆಯರು ಮುಂತಾದವರು ಇಲ್ಲಿ ವರ್ಷಕ್ಕೊಮ್ಮೆ ಸೇರಿ ಮಳೆಗಾಲ ಕಳೆಯುವ ತನಕ ರಾಜರಿಂದ ಸಹಾಯ ಸವಲತ್ತು ಪಡೆದು ಪಕ್ಕದ ರಾಜ್ಯಗಳ ಮಾಹಿತಿ ನೀಡುತ್ತಿದ್ದರು.
   ಈ ಪದ್ದತಿ ಇತ್ತೀಚಿಗೆ 2000 ಇಸವಿ ತನಕ ಹಂತ ಹಂತವಾಗಿ ನಶಿಸುತ್ತಾ ಬಂದು ಈಗ ಸಂಪೂರ್ಣ ನಿಂತಿದೆ, ಅವರೆಲ್ಲ ಅಲೆಮಾರಿ ಜೀವನ ತೊರೆದು ಅಲ್ಲಲ್ಲಿ ನೆಲೆ ನಿಂತಿದ್ದಾರೆ.
  1970 ರ ದಶಕದಲ್ಲಿ ನಾವೆಲ್ಲ ಬಾಲ್ಯದಲ್ಲಿ ಇಂತಹ ಸಂದರ್ಭಕ್ಕೆ ಕಾಯುತ್ತಿದ್ದೆವು, ವರ್ಷಕೊಮ್ಮೆ ಬರುವ ಈ ಕುಟುಂಬದ ಕುದುರೆಗಳಿಗೆ ಬಿಳಿಯ ಸರ್ವಿಸ್‌ ಮೈನ್ ತಂತಿಯ (ವೈರ್ )  ಸುತ್ತ ಹುಲ್ಲು ಸೇರಿಸಿ ಕುದುರೆ ಬಾಯಿಗೆ ಹಿಡಿಯುತ್ತಿದ್ದೆವು ಆಗ ಕುದುರೆ ಹುಲ್ಲನ್ನು ತನ್ನ ಬಾಯಿಯಲ್ಲಿ ಕಚ್ಚಿ ತಿನ್ನಲು ಪ್ರಯತ್ನಿಸಿದಾಗ ವೈರ್ ನ್ನು ಕುದುರೆಯ ಬಾಯಿ ಮೂಲಕ ಎರೆಡೂ ಕಿವಿ ಬಳಸಿ ಕುತ್ತಿಗೆ ಹಿಂಬಾಗದಲ್ಲಿ ಸೇರಿಸಿ ಹಿಡಿದರೆ ಅದು ಕುದುರೆ ಲಗಾಮಾಗಿ ನಾವು ಹೇಳಿದಂತೆ ಕೇಳುತ್ತದೆ.
  ನಂತರ ದಿನಾ ಪೂರ್ತಿ ನಮ್ಮದು ಕುದುರೆ ಸವಾರಿ... 
ಕುದುರೆ ಹುಡುಕಿಕೊಂಡು ಅದರ ಮಾಲಿಕ ಬಂದರೆ ನಾವು ಲಗಾಮು ಸಮೇತ ಪರಾರಿ...
  ಈ ರೀತಿ ಕುದುರೆ ಪಳಗಿಸಿ ಸವಾರಿ ಮಾಡುವ ಚಾಕಚಕ್ಯತೆ ನನಗೆ ಬಾಲ್ಯದಲ್ಲಿ ಉಳಿದವರಿಗಿಂತ ಜಾಸ್ತಿ ಇತ್ತು.
  ಆಗೆಲ್ಲ ನನಗೆ ದೊಡ್ಡವನಾದ ಮೇಲೆ ಕುದುರೆ ಸಾಕುವ ಕನಸಿತ್ತು ಆದರೆ ಈಗ ಅದರಲ್ಲಿ ಆಸಕ್ತಿ ಇಲ್ಲ.
  ಇತ್ತೀಚೆಗೆ ಪೇಟೆ ಪ್ರದೇಶದಲ್ಲಿ ಟಾಂಗಾವಾಲಗಳಾಗಿದ್ದ ಕುಟುಂಬಗಳು ಈ ಉದ್ಯೋಗ ಮುಂದುವರಿಸಲಾಗದಿದ್ದರಿಂದ ನೂರಾರು ವರ್ಷದ ಅವರ ತಲೆಮಾರಿನ ಟಾಂಗ ವೃತ್ತಿ ಅನಿವಾರ್ಯವಾಗಿ ಮುಂದುವರಿಸಲಾಗದೆ ಕುದುರೆ ಹೊಟ್ಟೆ ಹೊರೆಯಲು ಸಾಧ್ಯವಾಗದೆ ಅವರ ಕುದುರೆಗಳನ್ನು ಹಳ್ಳಿಗಳಿಗೆ ತಂದು ಬಿಡುತ್ತಿದ್ದಾರೆ, ಕುದುರೆ ಸಾಕುವ ಆಸಕ್ತಿ ಇದ್ದವರು ಕುದುರೆ ಸಾಕುತ್ತಿದ್ದಾರೆ ಹೇಗೋ ಕುದುರೆಗಳು ಹೊಟ್ಟೆ ತುಂಬಿಸಿ ಕೊಳ್ಳುತ್ತಿರುವುದು ಸಮಾದಾನದ ವಿಷಯವಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...