Skip to main content

Blog number 1727. ಹೊಸಗುಂದದ ಕಂಚಿ ಕಾಳಮ್ಮ ದೇವಸ್ಥಾನದ ಶಿಲಾ ಶಾಸನ

#ಆನಂದಪುರಂ_ಇತಿಹಾಸ_ಸಂಖ್ಯೆ_128.

#ಹೊಸಗುಂದದ_ಕಂಚಿ_ಕಾಳಮ್ಮ_ದೇವಸ್ಥಾನದ_ಶಿಲಾಶಾಸನ

#ಹನ್ನೆರಡನೆ_ಶತಮಾನದಲ್ಲಿ_ಹೊ೦ಬುಜ_ಜೈನ_ಅರಸರ_ಆಳ್ವಿಕೆಯಲ್ಲಿ.

#ಜೈನ_ರಾಜ_ಮನೆತನ_ಇಬ್ಬಾಗವಾಯಿತು.

#ಒಂದು_ಶಾಖೆ_ಕಳಸ_ರಾಜದಾನಿಯಾಗಿ_ಇನ್ನೊಂದು_ಹೊಸಗುಂದ_ರಾಜದಾನಿಯಾಗಿ_ಆಳಿದರು.

#ಕಳಸದ_ಜೈನ_ರಾಜರು_ಕಳಸದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿಮಿ೯ಸಿದರು.

#ಹೊಸಗುಂದದ_ಜೈನರಾಜರು_ಹೊಸಗುಂದದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿರ್ಮಿಸಿದರು.

#ಇಲ್ಲಿನ_ಕಂಚಿ_ಕಾಳಮ್ಮ_ದೇವಾಲಯದ_ಶಿಲಾಶಾಸನದಲ್ಲಿ_ಬರೆದ_ಬರಹ.

 
 ಆನಂದಪುರಂನ ಸಮೀಪದ ಹೊಸಗುಂದ 12 ನೇ ಶತಮಾನದಲ್ಲಿ ಹೊಂಬುಜ ಜೈನ ರಾಜರ ಆಳ್ವಿಕೆಯಲ್ಲಿತ್ತು ನಂತರ ಈ ಜೈನ ರಾಜ ಮನೆತನ ಒಡೆದು ಎರೆಡು ಶಾಖೆಗಳಾಯಿತು.
   ಒ0ದು ಶಾಖೆ ಕಳಸವನ್ನು ರಾಜದಾನಿ ಆಗಿಸಿ ಆಡಳಿತ ನಡೆಸಿತು ಇನ್ನೋಂದು ಶಾಖೆ ಹೊಸಗುಂದ ರಾಜಧಾನಿ ಆಗಿ ಆಡಳಿತ ನಡೆಸಿತು.
   ಒ0ದು ವಿಶೇಷ ಅಂದರೆ ಈ ರಾಜ ಮನೆತನದ ಕುಲ ದೇವರಾದ ಕಲ್ಲಿನಾಥೇಶ್ವರನ ದೇವಾಲಯ ಎರೆಡೂ ಶಾಖೆಯವರೂ ಅವರವರ ರಾಜದಾನಿಯಲ್ಲಿ ನಿರ್ಮಿಸಿದ್ದಾರೆ.
  ಕಳಸ ರಾಜದಾನಿ ಮಾಡಿಕೊಂಡು ಆಳ್ವಿಕೆ ಮಾಡಿದ ಜೈನ ರಾಜರು ಕಳಸದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿಮಿ೯ಸಿದಂತೆ ಹೊಸಗುಂದದ ಜೈನ ರಾಜರು ಹೊಸಗುಂದದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿರ್ಮಿಸಿದರು.
  ಹೊಸಗುಂದದ ಕಲ್ಲಿನಾಥೇಶ್ವರ ದೇವಾಲಯಕ್ಕೆ ಶಿಲಾ ಮುಖಮಂಟಪ ಇದ್ದು ಇದಕ್ಕೆ ಮೂರು ಕಡೆಯಿಂದ ದ್ವಾರವಿದೆ.
   ನವರಂಗ - ಗರ್ಭಗುಡಿ - ಪ್ರದಕ್ಷಿಣಾ ಪಥಗಳನ್ನು ಹೊಂದಿದೆ.
   1999ರವರೆಗೆ ಈ ದೇವಾಲಯದ ಗರ್ಭಗುಡಿಯಲ್ಲಿ ಬೃಹತ್ ಕಲ್ಲಿನಾಥೇಶ್ವರನ ಶಿವಲಿಂಗ ಇತ್ತು ಈಗ ಇದನ್ನು ನವೀಕರಣ ಮಾಡಿ ಸ್ಥಳಿಯರು ಉಮಾಮಹೇಶ್ವರ ಎಂದು ನಾಮಕರಣ ಮಾಡಿದ್ದಾರೆ.
  ಕೆಳದಿ ಅರಸರ ಕಾಲದಲ್ಲಿ ಕೆಲಕಾಲ ಅಧಿಕಾರ ನಡೆಸಿದ ಹೊಸಗುಂದ ಅರಸರು ನಂತರ ಕೆಳದಿ ರಾಜ್ಯದಲ್ಲಿ ವಿಲೀನವಾಗುತ್ತಾರೆ.
   ಹೊಸಗುಂದ ಅರಸರು ದರ್ಮ - ವಾಸ್ತು-ಶಿಲ್ಪಕಲೆ - ಸಾಹಿತ್ಯಗಳಿಗೆ ಉದಾರ ಆಶ್ರಯ ನೀಡಿದ್ದಾರೆಂದು ಇವರ ಕಾಲದಲ್ಲಿ ಹೊಸಗುಂದ ರಾಜ್ಯ ಅತ್ಯಂತ ವೈಭವದಿಂದ ಕೂಡಿತ್ತೆಂದು ತಿಳಿದು ಬಂದಿದೆ.
  1400ರಲ್ಲಿ ಹೊಸಗುಂದ ನಾಶವಾಗಿ ದಟ್ಟ ಅರಣ್ಯವಾಯಿತು 1902ರಲ್ಲಿ ಮೈಸೂರು ರಾಜ್ಯದ ಆರ್ಕಾಲಜಿಕಲ್ ಡಿಪಾರ್ಟಮೆಂಟ್ ನಿಧೇ೯ಶಕರಾಗಿದ್ದ ಬೆಂಜಮಿನ್ ಲೇವಿಸ್ ಪ್ರಕಟಿಸಿದ ಎಪಿಗ್ರಾಫಿಯ ಕರ್ನಾಟಕದಲ್ಲಿ ಈ ಪ್ರದೇಶದಲ್ಲಿ ದೊರಕಿರುವ ಶಾಸನಗಳನ್ನು ಪ್ರಕಟಿಸಿದ್ದಾರೆ.
  ಕ್ರಿಶ 1320 ರಲ್ಲಿ ಹೊಸಗುಂದದ ಕೊನೆ ದೊರೆ ಸೋಮನಾಯಕ.
   ಹೊಸಗುಂದದ ಕಂಚಿ ಕಾಳಮ್ಮನ ದೇವಾಲಯದಲ್ಲಿನ ಶಿಲಾಶಾಸನ ಇಲ್ಲಿ ದಾಖಲಿಸಿದ್ದೇನೆ.
   
  #ಹೊಸಗುಂದದ_ಕಂಚಿ_ಕಾಳಮ್ಮನ_ಬನದ_ಶಿಲಾಶಾಸನ. 

               ಶಿಲಾ ಶಾಸನದ ಅಳತೆ   2.6 "X1.6 "

ಸ್ವಸ್ತಿ ಸಮಸ್ತ ಪ್ರಸಸ್ತಿ ಸಹಿತo ಶಕ ವರುಷದ 1242 ನೇಯ ...... (ಹಳೇಗನ್ನಡದಲ್ಲಿದೆ)
  ಇದನ್ನು ಈಗಿನ ಕನ್ನಡದಲ್ಲಿ ಈ ಕೆಳಕಂಡಂತೆ ಸಂಕ್ಷಿಪ್ತವಾಗಿ ಅರ್ಥ್ಯೆಸಿ ಲಾಗಿದೆ....
  ಕ್ರಿ.ಶ.1320 ರಲ್ಲಿ ಪ್ರತಾಪ ಚಕ್ರವರ್ತಿ ಹೊಯ್ಸನ ವೀರ ಬಲ್ಲಾಲ ದೇವರಸನ ಆದೇಶದಂತೆ ಶ್ರೇಷ್ಟ  ಮಂತ್ರಿ ತೊಯಾ ಸಿಂಗೇಯ ಧನ ನಾಯಕರ ಪುತ್ರ ದೇವಪ್ಪ ಧನ ನಾಯಕ ಹೊಸಗುಂದದ ಕಂಚಿ ಕಾಳಮ್ಮ ದೇವಿಯ ದೀಪ ಅಲಂಕಾರ ಸೇವೆಗಾಗಿ ಹಳ್ಳಿನಾಡಿನ ಗುಡ್ಡೆಯ ಬೀಡನ್ನು ಹೊಸಗುಂದ ಮತ್ತು ಹಳ್ಳಿನಾಡಿನ ಸಮಸ್ತ ಮುಖ್ಯಸ್ಥರ ಸಮಕ್ಷಮದಲ್ಲಿ ದಾನ ನೀಡಿದ ಶಾಸನ.
  ಇದರಲ್ಲಿ ದೇವಪ್ಪ ಧನನಾಯಕರ ಶ್ರೀ ಹರಿಹರ ದೇವ ಎಂಬ ರುಜು ಇದೆ.
    ಪೂಜಾ ಪಾತ್ರೆಗಳನ್ನು ಕಂಚಿ ಕಾಳಮ್ಮ ದೇವರಿಗೆ ಮತ್ತು ಬಾಲನಂದ ದೇವನಿಗೆ ಮತ್ತು ಬಾಲನಂದದೇವನಿಂದ ನೇಮಿಸಲ್ಟಟ್ಟ ಕಂಚಿ ಕಾಳಮ್ಮ ದೇವಿಯ ದೇವಾಲಯದ ವ್ಯವಸ್ಥಾಪಕ ಮತ್ತು ಹಣಕಾಸು ನಿರ್ವಹಣಾಧಿಕಾರಿ ಸೋಮೆಯ ನಾಯಕರಿಗೆ ಜೀವನಾಂಶವಾಗಿ ದೇವಾಲಯದ ಉತ್ಪತ್ತಿಯ ಶೇಕಡಾ 90 % ಬಳಸಿ ಕೊಳ್ಳಲು ಮತ್ತು ಉಳಿದ ಶೇಕಡಾ 10% ದೇವಿಯ ಗರ್ಭಗುಡಿ ಮತ್ತು ದೇವಾಲಯಕ್ಕೆ ಸಂಬಂದ ಪಟ್ಟ ಕಟ್ಟಡ ನಿರ್ಮಾಣಕ್ಕೆ ಬಳಸಲು ನೀಡಿದ ದಾನ ದತ್ತಿಯ ಶಾಸನ ಇದಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...