Skip to main content

Blog number 1727. ಹೊಸಗುಂದದ ಕಂಚಿ ಕಾಳಮ್ಮ ದೇವಸ್ಥಾನದ ಶಿಲಾ ಶಾಸನ

#ಆನಂದಪುರಂ_ಇತಿಹಾಸ_ಸಂಖ್ಯೆ_128.

#ಹೊಸಗುಂದದ_ಕಂಚಿ_ಕಾಳಮ್ಮ_ದೇವಸ್ಥಾನದ_ಶಿಲಾಶಾಸನ

#ಹನ್ನೆರಡನೆ_ಶತಮಾನದಲ್ಲಿ_ಹೊ೦ಬುಜ_ಜೈನ_ಅರಸರ_ಆಳ್ವಿಕೆಯಲ್ಲಿ.

#ಜೈನ_ರಾಜ_ಮನೆತನ_ಇಬ್ಬಾಗವಾಯಿತು.

#ಒಂದು_ಶಾಖೆ_ಕಳಸ_ರಾಜದಾನಿಯಾಗಿ_ಇನ್ನೊಂದು_ಹೊಸಗುಂದ_ರಾಜದಾನಿಯಾಗಿ_ಆಳಿದರು.

#ಕಳಸದ_ಜೈನ_ರಾಜರು_ಕಳಸದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿಮಿ೯ಸಿದರು.

#ಹೊಸಗುಂದದ_ಜೈನರಾಜರು_ಹೊಸಗುಂದದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿರ್ಮಿಸಿದರು.

#ಇಲ್ಲಿನ_ಕಂಚಿ_ಕಾಳಮ್ಮ_ದೇವಾಲಯದ_ಶಿಲಾಶಾಸನದಲ್ಲಿ_ಬರೆದ_ಬರಹ.

 
 ಆನಂದಪುರಂನ ಸಮೀಪದ ಹೊಸಗುಂದ 12 ನೇ ಶತಮಾನದಲ್ಲಿ ಹೊಂಬುಜ ಜೈನ ರಾಜರ ಆಳ್ವಿಕೆಯಲ್ಲಿತ್ತು ನಂತರ ಈ ಜೈನ ರಾಜ ಮನೆತನ ಒಡೆದು ಎರೆಡು ಶಾಖೆಗಳಾಯಿತು.
   ಒ0ದು ಶಾಖೆ ಕಳಸವನ್ನು ರಾಜದಾನಿ ಆಗಿಸಿ ಆಡಳಿತ ನಡೆಸಿತು ಇನ್ನೋಂದು ಶಾಖೆ ಹೊಸಗುಂದ ರಾಜಧಾನಿ ಆಗಿ ಆಡಳಿತ ನಡೆಸಿತು.
   ಒ0ದು ವಿಶೇಷ ಅಂದರೆ ಈ ರಾಜ ಮನೆತನದ ಕುಲ ದೇವರಾದ ಕಲ್ಲಿನಾಥೇಶ್ವರನ ದೇವಾಲಯ ಎರೆಡೂ ಶಾಖೆಯವರೂ ಅವರವರ ರಾಜದಾನಿಯಲ್ಲಿ ನಿರ್ಮಿಸಿದ್ದಾರೆ.
  ಕಳಸ ರಾಜದಾನಿ ಮಾಡಿಕೊಂಡು ಆಳ್ವಿಕೆ ಮಾಡಿದ ಜೈನ ರಾಜರು ಕಳಸದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿಮಿ೯ಸಿದಂತೆ ಹೊಸಗುಂದದ ಜೈನ ರಾಜರು ಹೊಸಗುಂದದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿರ್ಮಿಸಿದರು.
  ಹೊಸಗುಂದದ ಕಲ್ಲಿನಾಥೇಶ್ವರ ದೇವಾಲಯಕ್ಕೆ ಶಿಲಾ ಮುಖಮಂಟಪ ಇದ್ದು ಇದಕ್ಕೆ ಮೂರು ಕಡೆಯಿಂದ ದ್ವಾರವಿದೆ.
   ನವರಂಗ - ಗರ್ಭಗುಡಿ - ಪ್ರದಕ್ಷಿಣಾ ಪಥಗಳನ್ನು ಹೊಂದಿದೆ.
   1999ರವರೆಗೆ ಈ ದೇವಾಲಯದ ಗರ್ಭಗುಡಿಯಲ್ಲಿ ಬೃಹತ್ ಕಲ್ಲಿನಾಥೇಶ್ವರನ ಶಿವಲಿಂಗ ಇತ್ತು ಈಗ ಇದನ್ನು ನವೀಕರಣ ಮಾಡಿ ಸ್ಥಳಿಯರು ಉಮಾಮಹೇಶ್ವರ ಎಂದು ನಾಮಕರಣ ಮಾಡಿದ್ದಾರೆ.
  ಕೆಳದಿ ಅರಸರ ಕಾಲದಲ್ಲಿ ಕೆಲಕಾಲ ಅಧಿಕಾರ ನಡೆಸಿದ ಹೊಸಗುಂದ ಅರಸರು ನಂತರ ಕೆಳದಿ ರಾಜ್ಯದಲ್ಲಿ ವಿಲೀನವಾಗುತ್ತಾರೆ.
   ಹೊಸಗುಂದ ಅರಸರು ದರ್ಮ - ವಾಸ್ತು-ಶಿಲ್ಪಕಲೆ - ಸಾಹಿತ್ಯಗಳಿಗೆ ಉದಾರ ಆಶ್ರಯ ನೀಡಿದ್ದಾರೆಂದು ಇವರ ಕಾಲದಲ್ಲಿ ಹೊಸಗುಂದ ರಾಜ್ಯ ಅತ್ಯಂತ ವೈಭವದಿಂದ ಕೂಡಿತ್ತೆಂದು ತಿಳಿದು ಬಂದಿದೆ.
  1400ರಲ್ಲಿ ಹೊಸಗುಂದ ನಾಶವಾಗಿ ದಟ್ಟ ಅರಣ್ಯವಾಯಿತು 1902ರಲ್ಲಿ ಮೈಸೂರು ರಾಜ್ಯದ ಆರ್ಕಾಲಜಿಕಲ್ ಡಿಪಾರ್ಟಮೆಂಟ್ ನಿಧೇ೯ಶಕರಾಗಿದ್ದ ಬೆಂಜಮಿನ್ ಲೇವಿಸ್ ಪ್ರಕಟಿಸಿದ ಎಪಿಗ್ರಾಫಿಯ ಕರ್ನಾಟಕದಲ್ಲಿ ಈ ಪ್ರದೇಶದಲ್ಲಿ ದೊರಕಿರುವ ಶಾಸನಗಳನ್ನು ಪ್ರಕಟಿಸಿದ್ದಾರೆ.
  ಕ್ರಿಶ 1320 ರಲ್ಲಿ ಹೊಸಗುಂದದ ಕೊನೆ ದೊರೆ ಸೋಮನಾಯಕ.
   ಹೊಸಗುಂದದ ಕಂಚಿ ಕಾಳಮ್ಮನ ದೇವಾಲಯದಲ್ಲಿನ ಶಿಲಾಶಾಸನ ಇಲ್ಲಿ ದಾಖಲಿಸಿದ್ದೇನೆ.
   
  #ಹೊಸಗುಂದದ_ಕಂಚಿ_ಕಾಳಮ್ಮನ_ಬನದ_ಶಿಲಾಶಾಸನ. 

               ಶಿಲಾ ಶಾಸನದ ಅಳತೆ   2.6 "X1.6 "

ಸ್ವಸ್ತಿ ಸಮಸ್ತ ಪ್ರಸಸ್ತಿ ಸಹಿತo ಶಕ ವರುಷದ 1242 ನೇಯ ...... (ಹಳೇಗನ್ನಡದಲ್ಲಿದೆ)
  ಇದನ್ನು ಈಗಿನ ಕನ್ನಡದಲ್ಲಿ ಈ ಕೆಳಕಂಡಂತೆ ಸಂಕ್ಷಿಪ್ತವಾಗಿ ಅರ್ಥ್ಯೆಸಿ ಲಾಗಿದೆ....
  ಕ್ರಿ.ಶ.1320 ರಲ್ಲಿ ಪ್ರತಾಪ ಚಕ್ರವರ್ತಿ ಹೊಯ್ಸನ ವೀರ ಬಲ್ಲಾಲ ದೇವರಸನ ಆದೇಶದಂತೆ ಶ್ರೇಷ್ಟ  ಮಂತ್ರಿ ತೊಯಾ ಸಿಂಗೇಯ ಧನ ನಾಯಕರ ಪುತ್ರ ದೇವಪ್ಪ ಧನ ನಾಯಕ ಹೊಸಗುಂದದ ಕಂಚಿ ಕಾಳಮ್ಮ ದೇವಿಯ ದೀಪ ಅಲಂಕಾರ ಸೇವೆಗಾಗಿ ಹಳ್ಳಿನಾಡಿನ ಗುಡ್ಡೆಯ ಬೀಡನ್ನು ಹೊಸಗುಂದ ಮತ್ತು ಹಳ್ಳಿನಾಡಿನ ಸಮಸ್ತ ಮುಖ್ಯಸ್ಥರ ಸಮಕ್ಷಮದಲ್ಲಿ ದಾನ ನೀಡಿದ ಶಾಸನ.
  ಇದರಲ್ಲಿ ದೇವಪ್ಪ ಧನನಾಯಕರ ಶ್ರೀ ಹರಿಹರ ದೇವ ಎಂಬ ರುಜು ಇದೆ.
    ಪೂಜಾ ಪಾತ್ರೆಗಳನ್ನು ಕಂಚಿ ಕಾಳಮ್ಮ ದೇವರಿಗೆ ಮತ್ತು ಬಾಲನಂದ ದೇವನಿಗೆ ಮತ್ತು ಬಾಲನಂದದೇವನಿಂದ ನೇಮಿಸಲ್ಟಟ್ಟ ಕಂಚಿ ಕಾಳಮ್ಮ ದೇವಿಯ ದೇವಾಲಯದ ವ್ಯವಸ್ಥಾಪಕ ಮತ್ತು ಹಣಕಾಸು ನಿರ್ವಹಣಾಧಿಕಾರಿ ಸೋಮೆಯ ನಾಯಕರಿಗೆ ಜೀವನಾಂಶವಾಗಿ ದೇವಾಲಯದ ಉತ್ಪತ್ತಿಯ ಶೇಕಡಾ 90 % ಬಳಸಿ ಕೊಳ್ಳಲು ಮತ್ತು ಉಳಿದ ಶೇಕಡಾ 10% ದೇವಿಯ ಗರ್ಭಗುಡಿ ಮತ್ತು ದೇವಾಲಯಕ್ಕೆ ಸಂಬಂದ ಪಟ್ಟ ಕಟ್ಟಡ ನಿರ್ಮಾಣಕ್ಕೆ ಬಳಸಲು ನೀಡಿದ ದಾನ ದತ್ತಿಯ ಶಾಸನ ಇದಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ