Skip to main content

Blog number 1760.ಆನಂದಪುರಂ ಇತಿಹಾಸ ಭಾಗ ಒಂದು ಪುಸ್ತಕರೂಪದಲ್ಲಿ ಬರಲಿದೆ.

#ಆನಂದಪುರಂ_ಇತಿಹಾಸ_ಭಾಗ_1.

#ಕನ್ನಡ_ರಾಜ್ಯೋತ್ಸವದಂದು_ಬಿಡುಗಡೆ_ಆಗಲಿದೆ.

#ಅವತ್ತು_ಕರ್ನಾಟಕ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವ.

#ಕರ್ನಾಟಕ_ನಾಮಕರಣ_ಮಾಡಲು_ಮುಖ್ಯಮಂತ್ರಿ_ದೇವರಾಜ_ಅರಸರ_ಜೊತೆ
#ವಿದ್ಯಾಮಂತ್ರಿ_ಬದರಿನಾರಾಯಣ_ಆಯ್ಯಂಗಾರ್_ಮುಖ್ಯ_ಕಾರಣ.

#ಆನಂದಪುರಂ_ಇತಿಹಾಸ_ಭಾಗ_ಒಂದು_ಬದರಿನಾರಾಯಣ_ಅಯ್ಯಂಗಾರರಿಗೆ_ಅರ್ಪಿಸಲಾಗಿದೆ.

#ಈ_ಪುಸ್ತಕ_ಪ್ರಕಟಿಸಲು_ಇಬ್ಬರು_ಮುಖ್ಯಕಾರಣ

#ಚಲನ_ಚಿತ್ರ_ನಟ_ದೊಡ್ಡಣ್ಣ_ಮತ್ತು_News18_ದಕ್ಷಿಣ_ಭಾರತದ_ಮುಖ್ಯಸ್ಥ_ಡಿ_ಪಿ_ಸತೀಶ್

#ಇವರಿಬ್ಬರ_ಮುನ್ನುಡಿ_ಆನಂದಪುರ೦_ಇತಿಹಾಸ_ಪುಸ್ತಕದ_ಭಾಗ_1_ರಲ್ಲಿ_ಇರಲಿದೆ.


   ನಾನು ಈ ಪುಸ್ತಕ ಪ್ರಕಟಿಸುವ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ನನ್ನ ನಿತ್ಯ ಸಾಮಾಜಿಕ ಜಾಲ ತಾಣದ ಬರಹ ಓದುವ ಡಿ.ಪಿ. ಸತೀಶ್ Network 18/News 18 ಮಾಧ್ಯಮ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥರು ಅವರು ಎರೆಡು ವರ್ಷದ ಹಿಂದೆ ನನಗೆ ಆನಂದಪುರಂ ಇತಿಹಾಸದ ಪುಸ್ತಕ ಮುದ್ರಿಸಿ ಎಂದು ಪ್ರೋತ್ಸಾಹಿಸಿದವರು ಆಗ ಅವರಿಗೆ ಹೇಳಿದ್ದೆ ಪುಸ್ತಕ ಮುದ್ರಣ ಅಗುವ ಸಮಯ ಬಂದರೆ ನೀವು ಮುನ್ನುಡಿ ಬರೆಯಬೇಕು ಎಂದಿದ್ದೆ ಆ ಸಮಯ ಬಂತು ಮಾತಿಗೆ ತಪ್ಪದೆ ಪ್ರೀತಿಯಿಂದ ಮುನ್ನುಡಿ ಬರೆದಿದ್ದಾರೆ.
   ಇದೇ ರೀತಿ ನನ್ನ ಎಲ್ಲಾ ಲೇಖನ ಓದಿ ಪ್ರೋತ್ಸಾಹಿಸುತ್ತಾ ನನ್ನ ಲೇಖನಗಳನ್ನು ಅವರ ಗೆಳೆಯರ ಗ್ರೂಪಿಗೆ ಶೇರ್ ಮಾಡುವವರು ಖ್ಯಾತ ಚಲನ ಚಿತ್ರ ನಟ ದೊಡ್ಡಣ್ಣ ಅವರಿಗೆ ಓದುವ ಬರೆಯುವ ಹವ್ಯಾಸ ಜಾಸ್ತಿ ಆಗಾಗ್ಗೆ ಕರೆ ಮಾಡಿ ಸಲಹೆ ಕೂಡ ನೀಡುತ್ತಾರೆ ಅವರೂ ಈ ಪುಸ್ತಕಕ್ಕೆ ಹಾರೈಕೆಯ ನುಡಿ ದಾಖಲಿಸಲಿದ್ದಾರೆ.
  ಆನಂದಪುರ೦ ಇತಿಹಾಸ ನಾನು ದಾಖಲಿಸಿರುವುದು ಸಾವಿರ ಪುಟ ದಾಟಿದೆ, 300 ಪುಟದ ಮೂರು ಪುಸ್ತಕಗಳಾಗಲಿದೆ (ಮೂರು ಭಾಗಗಳಲ್ಲಿ).
  ಪ್ರತಿ ಊರಿಗೂ ಅದರದ್ದೇ ಆದ ಇತಿಹಾಸ ಇದೆ ಆಯಾ ಊರಿನವರು ಅವರ ಊರಿನ ಇತಿಹಾಸ ಬರೆದು ಪ್ರಕಟಿಸಲಿ ಇದರಿಂದ ಆ ಊರಿನ ಇತಿಹಾಸ ಮುಂದಿನ ತಲಾತಲಾಂತರಕ್ಕೆ ಉಳಿಯಲಿ ಎನ್ನುವುದು ನನ್ನ ಆಸೆ.
  ಆನಂದಪುರಂ ಶ್ರೇಯೋಭಿವೃದ್ಧಿಗೆ ಅಭಿವೃದ್ಧಿಗೆ ಕಾರಣರಾದ ಆನಂದಪುರಂನ ಕೊಡುಗೈ ದಾನಿಗಳಾದ ಶ್ರೀ ಎ. ರಾಮಕೃಷ್ಣ ಅಯ್ಯಂಗಾರ್ ಮತ್ತು ಅವರ ಪುತ್ರರಾದ ವೆಂಕಟಾಚಲಯ್ಯಂಗಾರ್, ಜಗನ್ನಾಥ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರ್ ಅವರಿಗೆ ಈ ಪುಸ್ತಕ ಅರ್ಪಿಸಲಾಗಿದೆ.
  ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ದಿನ ಆನಂದಪುರಂ ಇತಿಹಾಸ ( ಭಾಗ - 1) ಬಿಡುಗಡೆ ಆಗಲಿದೆ.
   ಅಮೇಜಾನ್, ಪ್ಲಿಪ್ ಕಾರ್ಟ್ ನಲ್ಲಿ ಪುಸ್ತಕ ಆಸಕ್ತರು ಖರೀದಿಸಬಹುದು ಅಥವ ಕಿಂಡಲ್ ಮೂಲಕ ಓದಬಹುದು.
  #ಡಿ_ಪಿ_ಸತೀಶರು ಪ್ರೀತಿಯಿಂದ ಬರೆದ ಮುನ್ನುಡಿ ಇಲ್ಲಿದೆ ನೋಡಿ...
   In a city, you never get a complete story. People come and go. 

:-Girish Karnad

  ಆದರೆ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳು ಹಾಗಲ್ಲ. ಅಲ್ಲಿ ಎಲ್ಲರೂ ಎಲ್ಲರಿಗೂ ಗೊತ್ತು, ಎಲ್ಲರ ಮನೆ ಸುದ್ದಿಯೂ ಎಲ್ಲರಿಗೂ ಗೊತ್ತು. ಅವು ಪಾರದರ್ಶಕ. ತೆರೆ ಹಿಂದೊಂದು, ಮುಂದೊಂದು ನಡೆಯುವುದು ನಗರಗಳಲ್ಲಿ ಮಾತ್ರ. ಇಲ್ಲಿ ಎರಡೂ ಒಂದೇ. ಇಲ್ಲಿ ಸುಳ್ಳು ಕಡಿಮೆ, ಸತ್ಯ ಹೆಚ್ಚು. 

ಆದರೆ ಮಹಾನಗರಗಳ ಬಗ್ಗೆ ಪುಸ್ತಕ ಬರೆದಂತೆ ನಮ್ಮ ಹಳ್ಳಿಗಳ ಮತ್ತು ಸಣ್ಣ ಪಟ್ಟಣಗಳ ಬಗ್ಗೆ ಯಾರು ಪುಸ್ತಕ ಬರೆಯುತ್ತಾರೆ? ನಮ್ಮಲ್ಲಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅವುಗಳ ಬಗ್ಗೆ ಬರೆಯಲು ಏನಿದೆ?  ಪ್ರಕಾಶನ ಮಾಡುವವರು ಯಾರು? ಹೀಗೆ ಒಂದರಹಿಂದೆ ಒಂದು ಪ್ರಶ್ನೆಗಳ ಸಾಲು. 

ನೂರಾರು, ಕೆಲವೊಮ್ಮೆ ಸಾವಿರಾರು ವರ್ಷಗಳಿಂದ ಈ ಭೂಮಿ ಮೇಲಿರುವ ಇಂತಹ ಸಾವಿರಾರು ಊರುಗಳ  ಇತಿಹಾಸ ಎಲ್ಲೂ ದಾಖಲಾಗಿಲ್ಲ. ಅದನ್ನು ಮಾಡಲೂ ಯಾರೂ ಹುಮ್ಮಸ್ಸು ತೋರಿಸಿಲ್ಲ. ಇವುಗಳ ಬಗ್ಗೆ ಬರೆದರೆ ಯಾರು ಓದುತ್ತಾರೆ, ಇತಿಹಾಸ ದಾಖಲಿಸಲು ಇವೇನು ಮಹಾನಗರಗಳೇ ಎನ್ನುವ ಭಾವನೆ ಕೂಡ ಇದಕ್ಕೆ ಕಾರಣ. 

ನಮ್ಮಲ್ಲಿ ಇತಿಹಾಸ ಪ್ರಜ್ಞೆ ಇಲ್ಲ ಎನ್ನುವುದು ಒಂದು ವಾದ. ನಮ್ಮ ಇತಿಹಾಸವನ್ನು ಪುಸ್ತಕಗಳ, ವಸ್ತು ಸಂಗ್ರಹಾಲಯಗಳ ಮೂಲಕ ದಾಖಲಿಸಲು ಆರಂಭವಾಗಿದ್ದೇ ಪಾಶ್ಚ್ಯಾತ್ಯರು ನಮ್ಮನ್ನು ವಸಾಹತು ಮಾಡಿಕೊಂಡ ನಂತರ. ನಮ್ಮ ಆಧುನಿಕ ಇತಿಹಾಸ ಬ್ರಿಟೀಷರ ಬಳುವಳಿ. ಆದರೆ ನಮ್ಮಲ್ಲಿ ನಮ್ಮ ಇತಿಹಾಸ, ಸ್ಮ್ರಿತಿ ಅಂದರೆ ನೆನಪಿನ ಮೂಲಕ ನೂರಾರು ವರ್ಷಗಳಿಂದ ಬಾಯಿಂದ ಬಾಯಿಗೆ ಹರಿದು, ಉಳಿದುಕೊಂಡು ಬಂದಿದೆ. 

ನಮ್ಮಲ್ಲಿ ಇವತ್ತಿಗೂ ಶೇಕಡಾ 90% ರಷ್ಟು ಜನರಿಗೆ ಅವರ ಅಜ್ಜ, ಅಜ್ಜಿ ನಂತರ ಅವರ ಹಿಂದಿನವರ ಹೆಸರು ಗೊತ್ತಿಲ್ಲ. ಅವರೇನು ಮಾಡುತ್ತಿದ್ದರು ಎನ್ನುವುದು ಇನ್ನು ಹೇಗೆ ಗೊತ್ತಿರಲು ಸಾಧ್ಯ? ಇದು ನಮ್ಮ ಕುಟುಂಬದ ಇತಿಹಾಸದ ಬಗ್ಗೆಯೇ ಇರುವ ನಮ್ಮ ಅಸಹಾಯಕತೆ. 

ನಮ್ಮ ಕೆ ವಿ ಸುಬ್ಬಣ್ಣನವರು ಇದರ ಬಗ್ಗೆ ಮಾತನಾಡುತ್ತ ಮೋಹನ್ ದಾಸ್ ಗಾಂಧಿ ಅವರನ್ನು ಉಲ್ಲೇಖಿಸಿ "ಇತಿಹಾಸವೇ ಇಲ್ಲದ ದೇಶ, ತುಂಬಾ ಸುಂದರ ಆಗಿರುತ್ತೆ" ಎನ್ನುತ್ತಿದ್ದರು. ಅಂದರೆ ಇತಿಹಾಸವೇ ದೊಡ್ಡ ಭಾರ. ಅದಿಲ್ಲದಿದ್ದರೆ ಹಿಂದಾಗಿದ್ದರ ಬಗ್ಗೆ ಈಗ ವ್ಯರ್ಥವಾಗಿ ಹೊಡೆದಾಡುವ ಅಗತ್ಯ ಇಲ್ಲ ಎನ್ನುವುದು ಅವರ ಅನಿಸಿಕೆ.  ಇತಿಹಾಸವನ್ನು ದಾಖಲಿಸಲು, ದಾಖಲಿಸುವ ಬಗ್ಗೆ ಎಷ್ಟೆಲ್ಲಾ ಚರ್ಚೆ ನಡೆದಿದೆ ನೋಡಿ. 

ಇಂತಹ ಹಿನ್ನೆಲೆಯಲ್ಲಿ ತಮ್ಮೂರಿನ ಇತ್ತೀಚಿನ ಇತಿಹಾಸವನ್ನು ವರ್ಷಾನುಗಟ್ಟಲೇ ಸತತವಾಗಿ ಬರೆದು, ಅವುಗಳನ್ನು ಪುಸ್ತಕ ರೂಪದಲ್ಲಿ ತರುತ್ತಿರುವವರು ಅರುಣ್ ಪ್ರಸಾದ್. 

ಆನಂದಪುರಂ ನಲ್ಲಿ ಕುಳಿತು ಇಡೀ ಪ್ರಪಂಚವನ್ನು, ಮುಖ್ಯವಾಗಿ ತಮ್ಮ ಸುತ್ತಲಿನ ಪರಿಸರವನ್ನು ಕುತೂಹಲ, ಬೆರಗು ಮತ್ತು ಚಿಕಿತ್ಸಕ ದೃಷ್ಟಿಯಿಂದ ನೋಡಿ ಅವುಗಳ ಬಗ್ಗೆ ದಿನಾಲೂ ಬರೆಯುವುದು ಸುಲಭವಲ್ಲ. ಆ ಕೆಲಸವನ್ನು ಅರುಣ್ ಪ್ರಸಾದ್ ಮಾಡುತ್ತಾ ಬಂದಿದ್ದಾರೆ. 

ಅವರಿಗೆ ಯಾರೂ ಗಣ್ಯರಲ್ಲ, ಯಾರೂ ನಗಣ್ಯರಲ್ಲ. ಎಲ್ಲರೂ ಒಂದೇ. ಅವರೆಲ್ಲ ನಿಜ ಜೀವನದ ಪಾತ್ರಗಳು. ತಾವು ನೋಡಿದ, ಅನುಭವಿಸಿದ, ತಮ್ಮ ಬದುಕನ್ನು ತಟ್ಟಿದ ಪಾತ್ರಗಳು. 

ಇವುಗಳಿಗೆ ಮತ್ತೆ ಜೀವ ಕೊಟ್ಟು, ಅಕ್ಷರ ರೂಪದಲ್ಲಿ ಹಿಡಿದಿಡುವುದು ಅಸಾಧಾರಣ ಕೆಲಸ. 

ರೈಸ್ ಮಿಲ್ ಸುಬ್ಬಣ್ಣ ನಾಯಕರು, ಸಿನಿಮಾ ಟಾಕೀಸ್ ಗೇಟ್ ಕೀಪರ್, ನ್ಯೂಸ್ಪಪೆರ್ ಹಂಚುವವ, ಸೈಕಲ್ ರಿಪೇರಿ ಮಾಡುವವ, ಕಾಮತ್ ಹೋಟೆಲ್ ಕುಟುಂಬದಿಂದ ಹಿಡಿದು ಬದರೀನಾರಾಯಣ ಅಯ್ಯಂಗಾರ್ ತನಕ ಎಲ್ಲರ ಬಗ್ಗೆಯೂ ಅದೇ ಆಪ್ತತೆಯಿಂದ ಅವರು ಬರೆಯುತ್ತಾರೆ. ಆನಂದಪುರದಲ್ಲಿ ಹುಟ್ಟಿದ ಅಲ್ಲಿನ ಪಟ್ಟಣದ ದೇವರ ಹೆಸರನ್ನೇ ಹೊತ್ತಿರುವ ಪ್ರಪಂಚದ ಶ್ರೇಷ್ಠ ಪುರಾತತ್ವ ಶಾಸ್ತ್ರಜ್ಞರಾಗಿದ್ದ ದಿವಂಗತ ಶಿಕಾರಿಪುರ ರಂಗನಾಥ ರಾವ್ ಅವರ ಬಗ್ಗೆಯೂ ಅರುಣ್ ಪ್ರಸಾದ್ ಹೆಮ್ಮೆಯಿಂದ ಬರೆಯುತ್ತಾರೆ. 

ಯಾರೂ ಗಮನಿಸದ, ಯಾರಿಗೂ ಮುಖ್ಯ ಎಂದು ಅನಿಸದ ನೂರಾರು ವ್ಯಕ್ತಿಗಳು, ಘಟನೆಗಳು ಇಲ್ಲಿ ಎದ್ದು ಬರುತ್ತವೆ. ಓದುಗರು ಸೋಜಿಗ ಆಗುವಂತೆ ಮಾಡುತ್ತವೆ. 

ಅರುಣ್ ಪ್ರಸಾದ್ ಯಾರ ಬಗ್ಗೆಯೂ ತಮ್ಮ ತೀರ್ಪು ಹೇಳಲ್ಲ. ಅವರ ವ್ಯಕ್ತಿತ್ವ ಬಣ್ಣಿಸುವುದಷ್ಟೇ ಅವರ ಕೆಲಸ. ಇದೊಂತರ ಅರುಣ್ ಪ್ರಸಾದ್ ಅವರ ಅರೆ ಬರೆ ಆತ್ಮಕತೆಯೂ ಹೌದು! 

ಆನಂದಪುರದ ಬಗ್ಗೆ ಬರೆದ ಈ ಪುಸ್ತಕ ಅಪರೂಪದ್ದು. ಈ ರೀತಿ ಸಣ್ಣ ಪಟ್ಟಣಗಳ ಬಗ್ಗೆ ಬರೆದ ಕೆಲವು ಆಪ್ತ ಅನುಭವ ನೀಡುವ ಪುಸ್ತಕಗಳನ್ನು ನಾನು ಶ್ರೀಲಂಕಾದಲ್ಲಿ ಓದಿದ್ದೇನೆ. ಹಾಪುತಳೆ, ಕಲುತಾರಾ, ನುಗೆಗೋಡ ಮುಂತಾದವುಗಳ ಬಗ್ಗೆ ಅಲ್ಲಿನವರು ಬರೆದ ಪುಸ್ತಕಗಳು ಚೆನ್ನಾಗಿವೆ. 

ಅರುಣ್ ಪ್ರಸಾದ್ ಮಾಡದ ಉದ್ಯೋಗ ಇಲ್ಲ. ಅವರು ಇಲ್ಲೀತನಕ ಸುಮಾರು 40 ಕ್ಕೂ ಹೆಚ್ಚು ಉದ್ಯೋಗ, ಉದ್ದಿಮೆ ಮಾಡಿದ್ದಾರೆ. ಇನ್ನೂ ಇಪ್ಪತ್ತು ಮಾಡುವ ವಯಸ್ಸು ಮತ್ತು ಹುಮ್ಮಸ್ಸು ಅವರಿಗಿದೆ. ಕಿರಿಯ ವಯಸ್ಸಿನಲ್ಲೇ ರಾಜಕಾರಣಿಯಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ, ನಮ್ಮ ಶಿವಮೊಗ್ಗ ಜಿಲ್ಲಾ ಪರಿಷತ್ ಅಧ್ಯಕ್ಷರಾಗುವ ಅವಕಾಶವನ್ನು ಕೆಲವರ ದ್ರೋಹದಿಂದ ಕಳೆದುಕೊಂಡವರು. ಕಾಗೋಡು ತಿಮ್ಮಪ್ಪ ಅವರನ್ನು ಎದುರುಹಾಕಿಕೊಂಡು ತುಂಬಾ ತೊಂದರೆ ಅನುಭವಿಸಿದವರು. ಈಗ ರಾಜಕೀಯದಿಂದ ತುಂಬಾ ದೂರ. 

ಬೇರೆಯವರ ಉತ್ತಮ ಕೆಲಸ, ಸಾಧನೆ ನೋಡಿ ಸಂಭ್ರಮಿಸುವ, ಅದನ್ನು ಬೇರೆಯವರಿಗೆ ಹೇಳಿ ಬೆನ್ನು ತಟ್ಟುವ ದೊಡ್ಡ ಗುಣ ಅವರದ್ದು. 

ಮೈಸೂರು  - ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ನಾನು ಕುವೆಂಪು ಹೆಸರಿಡಿಸಿದಾಗ ನನ್ನನ್ನು ನನ್ನ ಸಂಕೋಚದ ನಡುವೆಯೂ ಒತ್ತಾಯದಿಂದ ಸನ್ಮಾನಿಸಿದವರು. 

ಅರುಣ್ ಪ್ರಸಾದ್ ಅವರ ಕಚೇರಿಗೂ ಮತ್ತು ಅವರ ಪ್ರಸಿದ್ಧ ಮಲ್ಲಿಕಾ ವೆಜ್ ಹೋಟೆಲ್ ಗೂ ಇರುವ ಅಂತರ ಕೆಲವು ಅಡಿಗಳು ಮಾತ್ರ. ಆದರೆ ಅವರು ಹೋಟೆಲ್ ಒಳಹೊಕ್ಕು ವರ್ಷಗಳೇ ಆಗಿವೆ. ಕುಳಿತಲ್ಲೇ ಇದ್ದು ತಮ್ಮ ಸುತ್ತಲಿನ ಪ್ರಪಂಚವನ್ನು ಗ್ರಹಿಸುವ, ಅದನ್ನು ವರ್ಣಿಸುವ ಸಾಮರ್ಥ್ಯ ಅವರಿಗೆ ಸಿದ್ದಿಸಿದೆ. ಅವರನ್ನು ಹುಡುಕಿಕೊಂಡು ದಿನಾಲು ಹತ್ತಾರು ಜನ ಬರುತ್ತಾರೆ. ಅದು ಅವರು ಪಡೆದಿದ್ದು. 

ಆನಂದಪುರಂ ಇತಿಹಾಸ. 

ಇದು ಸಾಮಾನ್ಯರ ಅಸಾಮಾನ್ಯ ಕತೆ. 

#ಡಿ_ಪಿ_ಸತೀಶ್ 
ಚೌತಿ ಹಬ್ಬದ ದಿನ 
ಬೆಂಗಳೂರು 

(ಲೇಖಕರು ಹಿರಿಯ ಪತ್ರಕರ್ತರು. #Network18/NEWS18 ಮಾಧ್ಯಮ ಸಂಸ್ಥೆಯ ದಕ್ಷಿಣ ಭಾರತ  ಮುಖ್ಯಸ್ಥರು)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ