Skip to main content

Blog number 1753. ಪುರುಷರು ತಮ್ಮ ದೇಹದ ಸೌಂದರ್ಯ ನಿರ್ಲಕ್ಷಿಸಬಾರದು.

#ಪುರುಷರಿಗೆ_ತಮ್ಮ_ದೇಹ_ಸೌಂದರ್ಯದ_ಬಗ್ಗೆ_ನಿರಾಸಕ್ತಿ_ಏಕೆ?

#ಉಗುರುಗಳನ್ನು_ನಿಯಮಿತವಾಗಿ_ತೆಗೆಯುವುದಿಲ್ಲ.

#ಕಾಲಿನ_ಪಾದಗಳ_ನಿರ್ವಹಣೆ_ನಿರ್ಲಕ್ಷ_ಜಾಸ್ತಿ

#ಮೊಣಕೈ_ಮಣಿಕಟ್ಟಿನಲ್ಲಿ_ಪಾದದ_ಹಿಮ್ಮುಡಿಯಲ್ಲಿ_ಜಡ_ಚರ್ಮಗಳು_ಜಡ್ಡುಗಟ್ಟಿರುತ್ತದೆ

#ಇದು_ಪುರುಷನ_ದೇಹ_ಸೌಂದಯ೯ಕ್ಕೆ_ಕಪ್ಪು_ಚುಕ್ಕೆ.

#ಇದಕ್ಕಾಗಿ_ಸ್ಕೃಬ್ಬರುಗಳು_ಸ್ಕೃಚ್_ಸೋಪುಗಳು_ಅಭ್ಯವಿದೆ

#ಒಮ್ಮೆ_ಕನ್ನಡಿಯಲ್ಲಿ_ನಿಮ್ಮ_ಮೊಣಕೈ_ಮಣಿಕಟ್ಟು_ಪರೀಕ್ಷಿಸಿಕೊಳ್ಳಿ.

 
 ಪುರುಷರು ತಮ್ಮ ಮುಖ ಸೌಂದರ್ಯದ ಭಾಗವಾಗಿ ನಿತ್ಯ ಶೇವಿಂಗ್ ಮಾಡುತ್ತಾರೆ ಮತ್ತು ಬಿಳಿ ಕೂದಲು ಮರೆ ಮಾಚಲು ಹೇರ್ ಡೈ ಮಾಡಿಸುತ್ತಾರೆ ಆದರೆ ಕೈ ಕಾಲಿನ ಉಗರುಗಳು ನಿಯಮಿತವಾಗಿ ತೆಗೆಯಲು ಸೋಮಾರಿತನ.
  ಅಷ್ಟೇ ಅಲ್ಲ ಮೊಣಕೈ ಮಣಿಕಟ್ಟಿನಲ್ಲಿ ಜಡ ಚರ್ಮಗಳು ಶೇಖರಗೊಂಡು ಪುರುಷ ದೇಹದ ಅವಲಕ್ಷಣವಾಗಿ ಗೋಚರಿಸುತ್ತಿರುತ್ತದೆ ಅದೇ ರೀತಿ ಪಾದದ ಮಣಿಕಟ್ಟುಗಳಲ್ಲಿ ಕೂಡ ಚರ್ಮ ಜಡ್ಡು ಕಟ್ಟಿರುತ್ತದೆ.
  ಪುರುಷರ ಪಾದದ ಹಿಮ್ಮಡಿಗಳು ಬಿರಿ ಬಿಟ್ಟು ಕಾಲು ಒಡೆದು ಚರ್ಮದ ಸತ್ತ ಜೀವಕೋಶಗಳು ಅಲ್ಲೇ ಉಳಿದು ನೋಡುವವರಿಗೆ ಅಸಹ್ಯ ಅನ್ನಿಸುವುದು ಸುಳ್ಳಲ್ಲ.
  ಯಾರ ಮಾತು ಕೇಳದ ಪುರುಷನ ಅಹಂನಿಂದ ಈ ರೀತಿ ಪುರುಷ ತನ್ನ ದೇಹ ಸೌಂದಯ೯ ಪಾಲಿಸುವುದಿಲ್ಲ ಆದರೆ ಮಹಿಳೆಯರು ಮಾತ್ರ ತಮ್ಮ ದೇಹ ಸೌಂದಯ೯ವರ್ದನೆಗಾಗಿ ಹೆಚ್ಚು ಕಾಳಜಿ ಮತ್ತು ಶ್ರಮವಹಿಸುತ್ತಾರೆ.
   ಮೊಣಕೈ ಮಣಿಕಟ್ಟು ನೇರವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಅದನ್ನು ನೋಡಬೇಕಾದರೆ ಕನ್ನಡಿಯಲ್ಲೇ ನೋಡ ಬೇಕು ಆದ್ದರಿಂದ ಅಲ್ಲಿ ಶೇಖರವಾಗುವ ಜಡ ಚರ್ಮ (ಸತ್ತ ಚರ್ಮದ ಜೀವಕೋಶಗಳು) ನಮ್ಮ ಗಮನಕ್ಕೆ ಬಾರದೇ ಎದುರಿನವರಿಗೆ ನಮ್ಮ ಅವಲಕ್ಷಣ ಸಲೀಸಾಗಿ ಗೋಚರಿಸುತ್ತದೆ.
  ಇದನ್ನು ಸುಲಭವಾಗಿ ನಿವಾರಿಸಬಹುದು ಇದಕ್ಕೆ ಬೇಕಾದ ಸ್ಕ್ರಬ್ ಗಳು ಮತ್ತು ಸ್ಕೃಬ್ ಸೋಪುಗಳು ಮಾರುಕಟ್ಟೆಯಲ್ಲಿದೆ, ನಿರಂತರ ನಾಕಾರು ದಿನ ಇವುಗಳನ್ನು ಬಳಸಿದರೆ ಜಡ ಚರ್ಮ ನಿವಾರಣೆಯಾಗುತ್ತದೆ.
   ವರ್ಷದಲ್ಲಿ ಒಂದೆರೆಡು ಬಾರಿ ಈ ರೀತಿ ಮೊಣಕೈ ಜಡ ಚರ್ಮ ನಿವಾರಣೆ ಮಾಡಿಕೊಂಡರೆ ಪುರುಷರ ಸೌಂದರ್ಯವರ್ಧನೆ ಸಾಧ್ಯವಿದೆ.
  ಇದು ಮನೆಯಲ್ಲೇ ಪುರುಷರು ಸುಲಭವಾಗಿ ಮಾಡಿಕೊಳ್ಳಬಹುದು, ಅನೇಕ ಪುರುಷರು ಅರ್ದ ತೋಳಿನ ಶರ್ಟ್ ಮತ್ತು ಟೀ ಶರ್ಟು ದರಿಸುತ್ತಾರೆ ಅವರು ಒಮ್ಮೆ ಕನ್ನಡಿಯಲ್ಲಿ ತಮ್ಮ ಮೊಣಕೈ ಪರೀಕ್ಷಿಸಿಕೊಳ್ಳಿ ಅಲ್ಲಿ ಜಡ ಚರ್ಮ ಜಡ್ಡುಗಟ್ಟಿದ್ದರೆ ಮೇಲಿನ ಕ್ರಮ ಅನುಸರಿಸಿ.
  ನಾನು ನನ್ನ ಮೊಣಕೈ ಮಣಿಕಟ್ಟು ಮತ್ತು ಪಾದದ ಮಣಿಕಟ್ಟುಗಳಲ್ಲಿ ಆಗಾಗ್ಗೆ ಸ್ಕೃಬ್ ಸೋಪು  ಬಳಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...